Monday, August 3, 2009

ಮತ್ತೊಂದು ಆಹ್ವಾನ

Z : ಮತ್ತೊಂದು ಆಹ್ವಾನ ?

ನಾನು : ಹು.

Z : ಏನ್ ವಿಶೇಷ ?

ನಾನು : ಪ್ರಣತಿ ಗೊತ್ತಲ್ಲ ?

Z : ಹು.

ನಾನು : ಗಮಕ ಸುಧಾ ಧಾರೆ ಕಾರ್ಯಕ್ರಮದ ನಂತರ ಪ್ರಣತಿ ಮತ್ತೊಂದು ಕಾರ್ಯಕ್ರಮಕ್ಕೆ ರೆಡಿಯಾಗಿದೆ.

Z : ರೆಡಿ...ಸ್ಟೆಡಿ...ಗೋ !!

ನಾನು : ಹಾಂ ಅದೇ ನೆ. ಎರಡು ಪುಸ್ತಕಗಳ ಬಿಡುಗಡೆ ಇದೆ.

Z : ಯಾವ್ ಯಾವ್ದು ?

ನಾನು : ನಮ್ಮ silent ಸುಶ್ರುತ ...

Z : ಹಾಂ ? ಸುಶ್ರುತ ಸೈಲೆಂಟಾ ?

ನಾನು : ಅಲ್ಲ, ಆದ್ರೆ ಹಂಗಂದುಕೋಬೇಕ್ ನಾವು. ಯಾಕಂದ್ರೆ ಅವರ ಬ್ಲಾಗ್ ಹೆಸರೇ ಮೌನಗಾಳ ಅಂತ. ಸೈಲೆಂಟಾಗಿ ಗಾಳ ಹಾಕಿ ಹಾಕಿ ಸಿಕ್ಕ ರುಚಿ ರುಚಿಯಾದ ಮೀನುಗಳನ್ನೆಲ್ಲ " ಹೊಳೆಬಾಗಿಲು" ಕೃತಿಯಲ್ಲಿ ನಮಗೆ introduce ಮಾಡಿಕೊಡುತ್ತಿದ್ದಾರೆ.

Z : I see. ಇನ್ನೊಂದು ಪುಸ್ತಕ ?

ನಾನು : ನಮ್ಮ lazy ಶ್ರೀನಿಧಿ...

Z : lazy ಅನ್ನೋ ಗುಣವಾಚಕ ಇಟ್ಕೊಂಡು ಪುಸ್ತಕ ಎಲ್ಲ ಬರ್ದ್ರೆ ನಾವ್ ಏನ್ ಅಂದುಕೋಬೇಕು ?

ನಾನು : lazy ಅನ್ನೋದು ಅವರನ್ನ ವರ್ಣಿಸಲು ಬಳಸಿರೋ ತಪ್ಪು ಗುಣವಾಚಕ ಅಂತ.

Z : ಒಹ್ಹೋ...

ನಾನು : ಆಹ್ಹಾ. ಮೀಡಿಯಾದಲ್ಲಿರೋರು ಯಾವತ್ತಾದ್ರು, ಯಾವಾಗ್ಲಾದ್ರು lazy ಆಗಿರಕ್ಕಾಗತ್ತಾ ಹೇಳು ?

Z : correct correct.

ನಾನು : ಶ್ರೀನಿಧಿ ಕವನಗಳನ್ನ ಬರೆದು ಒಂದು ಸಂಕಲನವನ್ನ ನಮಗೆ ನೀಡುತ್ತಿದ್ದಾರೆ.ಮೀಡಿಯಾದಲ್ಲಿ ಸಖತ್ ಬ್ಯುಸಿ ಆಗಿರೋ ಅವರು, ಅವರಿಗೆ ಸಿಕ್ಕ free time ಗೆ ಅನುಗುಣವಾಗಿ ಕವನದ ವಿಷಯ, ಸಾಂದ್ರತೆ, ಉದ್ದ, ಅಗಲ ಇದಿಯಾ ಅಂತ ಕಂಡುಹಿಡಿಯಕ್ಕೆ ಹೋಗ್ತಿದಿನಿ ನಾನು.

Z : ಇಲ್ಲೂ ರಿಸರ್ಚಾ ? !

ನಾನು : ಇನ್ನೇನ್ ಮತ್ತೆ ? ನನ್ನ ಕೈಗೆ ಮೈಕ್ ಸಿಕ್ಕರೆ....

Z : ಸಭೆಯ ಗ್ರಹಚಾರ ಕೆಟ್ಟಿದ್ದರೆ ಇದು ಸಾಧ್ಯ.

ನಾನು : ಶ್ಹ್ಹ್ಹ್ !!! ನನ್ನ ಕೈಗೆ ಮೈಕ್ ಸಿಕ್ಕರೆ, ಅದು ಯಾವ ಮಾಯೆಯಲ್ಲಿ ನೀವು ಕವನ ಬರೆದಿರಿ ಶ್ರೀನಿಧಿ ಅಂತ ಶ್ರೀನಿಧಿಯನ್ನ, ಮತ್ತು ನಿಮ್ಮ ಗಾಳಕ್ಕೆ ಯಾವ ಎರೆಹುಳು ಹಾಕಿದ್ದೀರಿ ಸುಶ್ರುತ ಅಂತ ಸುಶ್ರುತನ್ನ ಕೇಳಿಯೇ ಬಿಡುತ್ತೇನೆ.

Z : ಇಂಟರ್ ವ್ಯೂ ಥರ.

ನಾನು : ಹೂಂ.

Z : media person ಗೆ interview ಮಾಡಿದ್ರೆ ಸೂರ್ಯಂಗೆ ಟಾರ್ಚ್ ಬಿಟ್ಟಂಗೆ ಆಗತ್ತೆ.

ನಾನು : ಹೌದು, ಆದರೆ ವಿಧಿಯಿಲ್ಲ.

Z : ನಿನಗೊಬ್ಬಳಿಗೇನಾ ತಲೆ ಇರೋದು ? ಅವ್ರಿಗೂ ತಲೆ ಇದೆ. ಅವರು ಇಂಥಾ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡಕ್ಕೆ ಮೊದಲೇ ರೆಡಿಯಾಗಿರ್ತಾರೆ. ಇಲ್ಲಾಂದ್ರೆ ಒಂದು eternal answer ಕೊಡ್ತಾರೆ- "ಹೇಳುವುದಕ್ಕೂ ಕೇಳುವುದಕ್ಕೂ ಸಮಯವಲ್ಲ ! " ಅಂತ !!!

ನಾನು : ಹೌದಾ ? ಇದೇ ಮಾತಾ ?

Z : bets ತಗೊ.

ನಾನು : ಸರಿ ಬಾ ಅವತ್ತು ಮತ್ತೆ. ಇಬ್ಬರೂ ನೋಡಿಯೇ ಬಿಡೋಣ.

Z : ಯಾವತ್ತು ?

ನಾನು : ಆಗಸ್ಟ್ ಒಂಭತ್ತು, ಬೆಳಿಗ್ಗೆ ಹತ್ತು ಮೂವತ್ತಕ್ಕೆ ಸುಚಿತ್ರ ಫಿಲಂ ಸೊಸೈಟಿಯಲ್ಲಿ. ಇಲ್ಲಿದೆ ಡಿಟೈಲ್ಸು, ನೋಡು.



Z : ಓಹ್ ! ನಾಗತಿಹಳ್ಳಿ ಚಂದ್ರಶೇಖರ್ ಸರ್, ಎಚ್. ಎಸ್. ವಿ ಸರ್ ಮತ್ತು ಜೋಗಿ ಸರ್ ಎಲ್ಲಾ ಬರ್ತಿದಾರೆ !

ನಾನು : ಹೂಂ ಮತ್ತೆ !

Z :ನಾನು ಬರ್ತಿನಿ.

ನಾನು : ಬರದೇ ಇರೋ ಹಾಗೇ ಇಲ್ಲ ! ಗೊತ್ತಲ್ಲ ?

No comments:

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...