Monday, November 23, 2009

ಮುಂದಿನ ಜನ್ಮಗಳ reservation !

ನಾನು : ಅಂತರಂಗ ಬ್ಲಾಗ್ ನ ಸತೀಶ್ ಅವರು ಬರೆದ ಈ ಲೇಖನವನ್ನು ಓದಿದ ಮೇಲೆ ನನಗೆ ಈ ಐಡಿಯಾ ಬಂದಿದೆ.

Z : ಯಾವ ಲೇಖನ ಮತ್ತು ಎಂಥಾ ಐಡಿಯಾ ?

ನಾನು : ಅವರು ಈ ಜನ್ಮದಲ್ಲಿ ಮಾಡಲಾಗದ ಕೆಲಸಗಳ ಬಗ್ಗೆ ಬರೆದಿದ್ದಾರೆ. ಇದನ್ನ ಮುಂದಿನ ಜನ್ಮದಲ್ಲಿ ಮಾಡುವ ಹಾಗಿದ್ದರೆ ಹೇಗಿರತ್ತೆ ಅಂತಲೂ loud thinking ಮಾಡಿದ್ದಾರೆ.

Z : ಅದಕ್ಕೆ ?

ನಾನು : ನಾನು ನನ್ನ ಮುಂದಿನ ಜನ್ಮಗಳಲ್ಲಿ ಏನೇನು ಮಾಡಬೇಕು ಅನ್ನೋದನ್ನ ಪ್ಲಾನ್ ಮಾಡಿದಿನಿ.

Z : ಆಹ...ಮೊದಲು ಈ ಜನ್ಮದಲ್ಲಿ, ಈ ವಾರದಲ್ಲಿ ಆಗಬೇಕಿರುವ ಕೆಲಸಗಳನ್ನ ನೆಟ್ಟಗೆ ಪ್ಲಾನ್ ಮಾಡುವುದನ್ನು ಕಲಿ.

ನಾನು : ಕಲಿತಿದ್ದೂ ಆಗಿದೆ. ಮಾಡಿದ್ದೂ ಆಗಿದೆ. ಮುಂದಿನ ಆರು ತಿಂಗಳಿಗೆ ನನ್ನ ಪ್ರತಿದಿನದ ಶೆಡ್ಯೂಲ್ ರೆಡಿ ಇದೆ.

Z : ಏನಮ್ಮ ಅದು ?

ನಾನು : ಕಾಲೇಜು, ಪುಸ್ತಕ, ಪಾಠ, ಎಮ್.ಫಿಲ್ಲು, ಲೈಬ್ರರಿ, ಮನೆ !

Z : ಆಹಾ !

ನಾನು : ಹೂಂ ! ಏನ್ ತಿಳ್ಕೊಂಡಿದ್ಯಾ ನನ್ನ ನೀನು ?

Z : ಏನಂತಲೂ ತಿಳ್ಕೊಳಕ್ಕಾಗಲ್ಲ ನಿನ್ನ.

ನಾನು : good realization.

Z : ಈಗ ಅದು ಏನನ್ನ ಪ್ಲಾನ್ ಮಾಡಿ ಕಡೆದು ಕಟ್ಟೆ ಹಾಕಿದಿಯಾ ಅಂತ ಹೇಳು.

ನಾನು : ಹು. ಕೇಳಿಸಿಕೋ.

ನನ್ನ ಇಮ್ಮೀಡಿಯೆಟ್ ಮುಂದಿನ ಜನ್ಮದಲ್ಲಿ ನಾನು ಪುರಾತನ ವಸ್ತು ಸಂಶೋಧಕಿ ಆಗ್ಬೇಕು.

Z : ಯಾಕ್ ಬಂತು ನಿನಗೆ ಇಂಥಾ ಇಡಿಯಾ ?

ನಾನು : ಕೆ. ಎನ್. ಗಣೇಶಯ್ಯ ಅವರ ಕಾದಂಬರಿಗಳ ಪ್ರಭಾವ.

Z : ಆಹಾ !

ನಾನು : ಬೇಲೂರು, ಹಳೇಬೀಡು, ಸೋಮನಾಥಪುರ, ಇವೇ ಮುಂತಾದ ಎಲ್ಲ ದೇವಸ್ಥಾನಗಳನ್ನು, ಗುಹೆಗಳನ್ನು, ಕಾಡು ಮೇಡುಗಳನ್ನು ಅಲೆದು, ಸುತ್ತಿ,ಪ್ರಪಂಚ ಹಿಂದೆಂದೂ ಕಂಡರಿಯದ ಸಂಶೋಧನೆಗಳನ್ನ ಮಾಡಬೇಕು. ಟ್ರೆಕ್ಕಿಂಗು, ರಾಕ್ ಕ್ಲೈಂಬಿಗು, ಎಲ್ಲಾ ಮಾಡ್ಬೇಕು.

Z : ಅಷ್ಟೇ ನಾ ?

ನಾನು : ಆ ಜನ್ಮಕ್ಕೆ ಅಷ್ಟೇ.

Z : ಆಮೇಲೆ ?

ನಾನು : ಅದಾದ ಮೇಲಿನ ಮುಂದಿನ ಜನ್ಮದಲ್ಲಿ ನಾನು dancer ಆಗ್ಬೇಕು.

Z : ಈಗಲೇ ಕುಣಿದಿದ್ದು ಸಾಲದಾ ?

ನಾನು : ಈಗ ನಾನೆಲ್ಲಿ ಕುಣಿತಿದಿನಿ, ಎಲ್ಲರನ್ನು ಕುಣಿಸುತ್ತಿದ್ದೀನಿ.ಆದರೆ ಆ ಜನ್ಮದಲ್ಲಿ ಬರಿ ಕುಣಿಯೋದೆ. ನಾಟ್ಯ ರಾಣಿ ಶಾಂತಲೆ ಮೇಲೆ ಆಣೆ, ಅವಳಂತೆಯೇ ಕುಣಿಬೇಕು ನಾನು.

Z : ಸರಿ. ಆಮೇಲೆ ?

ನಾನು : ಅದರ ಮುಂದಿನ ಜನ್ಮದಲ್ಲಿ ನಾನು photographer ಆಗ್ಬೇಕು. ನನ್ನ ಕ್ಯಾಮೆರಾದ ಚಿತ್ರಗಳು ಅಂದ್ರೆ ಜನ ಮುಗಿಬೀಳಬೇಕು ನೋಡಕ್ಕೆ. ಅಷ್ಟರ ಮಟ್ಟಿಗೆ ಸಾಧನೆ ಮಾಡ್ಬೇಕು.

Z : ಯಬ್ಬಾ !!!ಮುಂದೆ ?

ನಾನು : ಫೋಟೋಗ್ರಫರ್ ಜನ್ಮ ಆದ ಮೇಲೆ ನಾನು ಮನಃ ಶಾಸ್ತ್ರಜ್ಞೆ ಆಗ್ಬೇಕು.

Z : ಇದೊಂದು ಬಾಕಿ ಇತ್ತು ನೋಡು.

ನಾನು : ಹು. ಅದನ್ನು ನೆರವೇರಿಸಿಬಿಡೋಣಾ ಅಂತ. ಮಿದುಳಿನ ಸಮಸ್ತವನ್ನೂ ಅರಿತುಕೊಳ್ಳುವ ವರೆಗೂ ನಾನು ಸುಮ್ಮನಿರೋದಿಲ್ಲ.

Z : ಕರ್ಮಕಾಂಡ. ಮುಂದೆ ?

ನಾನು : ಅದಾದ ಮುಂದಿನ ಜನ್ಮದಲ್ಲಿ ನಾನು ಡಾಕ್ಯುಮೆಂಟರಿಗಳನ್ನು ಡೈರೆಕ್ಟ್ ಮಾಡಬೇಕು.

Z : ಎಂಥವು ?

ನಾನು : ಡಿಸ್ಕವರಿ ಚಾನೆಲ್ ನಲ್ಲಿ ಬರತ್ವಲ್ಲ...ಅಂಥವು.

Z : ಉದ್ಧಾರ. ಮುಂದೆ ?

ನಾನು : ಅದಾದ ಮುಂದಿನ ಜನ್ಮದಲ್ಲಿ ನಾನು ನ್ಯೂಸ್ ರಿಪೋರ್ಟರ್ ಆಗ್ಬೇಕು.

Z : This is lakshmi from ....

ನಾನು : ಹಾಂ.... ಹಂಗೇನೆ.

Z : ಸರಿ. ಮುಂದೆ ?

ನಾನು : ಟೋಟಲ್ ಅನಾಥೆಯಾಗಿ, ಅಲೆಮಾರಿಯಾಗಿ ಅಲೆಯೋದು ನನ್ನ ಲಾಸ್ಟ್ ಬಟ್ ಒನ್ ಜನ್ಮ.ಒಂದು ಕಡೆ ನಿಲ್ಲಬಾರದು, ಹಾಗೆ ಸುಮ್ನೆ ಸುತ್ತುತ್ತಾ, ಇಡೀ ಪ್ರಪಂಚದ ಪರ್ಯಟನೆ ಮಾಡ್ಬೇಕು.

Z : ಯಾಕಪ್ಪ ಇಂಥಾ ಆಸೆ ?

ನಾನು : ಏನೋ ಗೊತ್ತಿಲ್ಲ, ಹಂಗನಿಸಿದೆ ನಂಗೆ.

Z : ನೀನೋ...ನಿನ್ನ ಆಸೆಗಳೋ...ನೀನು ಏರೋಪ್ಲೇನ್ ಆಗೋದು ಒಳ್ಳೇದು ಆ ಜನ್ಮದಲ್ಲಿ.

ನಾನು : ಹೇ...ಇಲ್ಲ ಇಲ್ಲ...ಎಲ್ಲಾ ಜನ್ಮದಲ್ಲೂ ನಾನು ಮನುಷ್ಯಳೇ ಆಗ್ತಿನಿ.

Z : ಹೆಹೆ...ಡೌಟು.

ನಾನು : ಉಹು. ನೋಡ್ಕೋ ಬೇಕಾದ್ರೆ. ನಾನು ಮನುಷ್ಯಳಾಗೆ ಹುಟ್ಟೋದು.

Z : ಸರಿ ನೋಡೇ ಬಿಡೋಣ. ಲಾಸ್ಟ್ ಜನ್ಮ ಏನು ?

ನಾನು : Home maker. ಬೆಳಿಗ್ಗೆ ಏಳು, ಕಾಫಿ ಮಾಡು, ತಿಂಡಿ ಮಾಡು, ಗಂಡ ಮನೆ ಮಕ್ಕಳನ್ನ ನೋಡಿಕೋ, ಸಂಜೆ ದೇವಸ್ಥಾನ ಭಜನೆ ಅಂತ ಹಾಯಾಗಿರು, ರಾತ್ರಿ ಊಟ ಮಾಡಿ ತಾಚ್ಕೊ. ವಾರಕ್ಕೊಂದು ಸಿನಿಮಾ, ತಿಂಗಳಿಗೆ ಒಂದಷ್ಟು ಶಾಪಿಂಗು. ಹೆಂಗೆ ?

Z : ಅದನ್ನ ಎಲ್ಲಾ ಜನ್ಮಗಳಲ್ಲೂ ಮಾಡಬಹುದು.

ನಾನು :ಕರೆಕ್ಟೂ...ಆದರೆ this janma is exclusively for home.No need of striking balance between work and home. ಮಿಕ್ಕಿದ್ದೆಲ್ಲಾ ಜನ್ಮಗಳಲ್ಲೂ ತಲೆಗೆ ಹೆಚ್ಚು ಕೆಲಸ ಕೊಟ್ಟಿರ್ತಿನಿ. ಈ ಜನ್ಮದಲ್ಲಿ ತಲೆಗೆ ಕೆಲಸ ಕಡಿಮೆ ಇರತ್ತೆ.

Z : ಹಂಗೆ.

ನಾನು : ಹು.

Z : ಮುಗಿತಾ ಪ್ಲಾನು ?

ನಾನು : ಸಧ್ಯಕ್ಕೆ ಮುಗ್ದಿದೆ. ಇನ್ನು extend ಆದರೂ ಆಗಬಹುದು.

Z : ಮೊದಲೇ ರಿಸರ್ವ್ ಮಾಡಿಡೋದು ಒಳ್ಳೇದು.

ನಾನು : ಒಳ್ಳೇ ಐಡಿಯಾ. ಇರು, ನನ್ನದು, ನಿನ್ನದು, ಸದ್ಯೋಜಾತನದ್ದು ಒಂದು conference call ಕರಿತಿನಿ.

Hi sadyOjaata ! I hope you are doing fine. ನೋಡಪ್ಪಾ...ನನಗೆ ಇಂಥಿಂಥಾ ಜನ್ಮಗಳನ್ನ ಇದೇ ಆರ್ಡರಿನಲ್ಲಿ ಕರುಣಿಸಿಬಿಡು, ಪ್ಲೀಸ್. ಇಲ್ಲಾ, ಆಗಲ್ಲ, ನೋಡ್ತಿನಿ, ವಿಧಿ ಅಂತೆಲ್ಲಾ ರಾಗ ಎಳಿಬೇಡ, ಟಿಪಿಕಲ್ ದೇವರ ಥರ. Be different. ಸೋ, ಥಟ್ ಅಂತ ಯೆಸ್ ಅಂದುಬಿಡು.

Z : ನೀನ್ ಕೇಳಿದ್ದೆಲ್ಲಾ ಕೊಟ್ಬಿಡ್ತಾನೆ ಅಂತ ಅಂದುಕೊಂಡಿದ್ಯಾ ?

ನಾನು : ಅಲ್ವೆ...ನನ್ನ ಸೈಡ್ ತಗೊಳ್ಳೋದ್ ಬಿಟ್ಟು ಏನೆ ನೀನು ಹಿಂಗಂತ್ಯಾ ? ನನ್ನ ವಕಾಲತ್ತು ವಹಿಸು ನೀನು. Now !

Z : Ok. ನೋಡು ಸದ್ಯೋಜಾತ, For reasons, I support her. I think even you should do the same by granting every wish of hers !

ನಾನು : ಒಳ್ಳೇ ಮಾತಲ್ಲಿ ನನ್ನ ಬೇಡಿಕೆಗೆ ಅಸ್ತು ಅಂದರೆ ಸರಿ...ಇಲ್ಲಾಂದ್ರೆ....

Z : ಇಲ್ಲಾಂದ್ರೆ....

ನಾನು : ಅಮ್ಮಂಗೆ ಹೇಳ್ತಿನಿ !

Wednesday, November 18, 2009

ಪುಸ್ತಕೋತ್ಸವ 2009

Z :ಮತ್ತೆ ಹೋಗಿದ್ಯಾ ?

ನಾನು : what do you mean by ಮತ್ತೆ ಹೋಗಿದ್ಯಾ ?

Z :ಹೋದ ವರ್ಷ ಹೋಗಿದ್ಯಲ್ಲ...

ನಾನು :ವರ್ಷಕ್ಕೆ ಒಂದು ಸರ್ತಿ ಕಾರ್ತೀಕ ಮಾಸದಲ್ಲಿ ನಂಜನಗೂಡಿಗೆ ಹೋಗೋದು ಹೆಂಗೆ compulsory ನೋ, ಹಂಗೆ ವರ್ಷಕ್ಕೊಂದು ಸಲ ನಡೆಯೋ ಪುಸ್ತಕೋತ್ಸವಕ್ಕೆ ಹೋಗೋದು compulsory ನೆ.

Z : ಈ ಸರ್ತಿ ನೂ 150 ರುಪಾಯಿ ತಗೊಂಡು ಹೋಗಿದ್ಯಾ ?

ನಾನು :ಒಂದು ಸಣ್ಣ ಮಿಸ್ಟೇಕ್ ಮಾಡಿದೆ ನೀನು. 150 ಗೆ ಒಂದು ಸೊನ್ನೆ ಸೇರ್ಸು.

Z : !!!!!!!!!!!!!!!!!!!!!!!!!!!!!!!!!!!!!

ನಾನು :ಆದರೆ ಅದಷ್ಟೂ ನನ್ನೊಬ್ಬಳದ್ದೇ ಬಜೆಟ್ ಅಲ್ಲ.

Z :ಅಂದುಕೊಂಡೆ. ಟೆಂಪೋ ಲಾರಿ ಏನು ತಗೊಳ್ಳದೇ ಬರೀ ಬಸ್ಸಲ್ಲಿ ಹೋದಾಗಲೇ ಅನುಮಾನ ಬಂತು ನನಗೆ.

ನಾನು :ಏನಂತ ?

Z : ನೀನು ಒಂದಿಷ್ಟು ಜನರ ಬುಕ್ ಲಿಸ್ಟ್ ಇಟ್ಕೊಂಡೇ ಹೋಗಿದಿಯಾ ಅಂತ. ನಿನ್ನ requirement ಗೆ ಸಾವಿರದ ಐನೂರು ರುಪಾಯಿ ಕಡಿಮೆ. ಏನಿಲ್ಲಾ ಅಂದ್ರೂನೂ ಹತ್ತು ಸಾವಿರದ ಕಡಿಮೆ "ನಿನ್ನ ಸ್ವಂತಾ ಶಾಪಿಂಗ್" ಇರಲ್ಲ. ಪುಸ್ತಕದ ಗಾತ್ರ ದೊಡ್ಡದಾಗಿರತ್ತೆ ಆದ್ದರಿಂದ ಲಾರಿ ಬೇಕು.ಒಂದು ಸಣ್ಣ ಬ್ಯಾಗ್ ತಗೊಂಡು ಬೇರೆ ಹೋದೆ...ನೊ ನೊ...this is so typically not you !

ನಾನು :ಗುಡ್ ಗೆಸ್ಸ್.

Z :ಥ್ಯಾಂಕ್ಸ್.

ನಾನು :You are most welcome.ಕಳೆದ ಬುಧವಾರ ಬೆಳಿಗ್ಗೆ ಹತ್ತು ಹತ್ತಕ್ಕೆ ಮನೆ ಬಿಟ್ಟೆ. ಸ್ವಲ್ಪ ಲೇಟಾಯ್ತು ಅನ್ನೋ ಫೀಲಿಂಗ್ ಬಂತು ನನಗೆ.

Z : ಯಾಕಪ್ಪಾ ?

ನಾನು : ನಾನು ಅಲ್ಲಿಗೆ ಹನ್ನೊಂದಕ್ಕೆ ತಲುಪಿ ಮೂರರ ವರೆಗೂ ಅಲ್ಲೇ ಇರಬೇಕು ಅನ್ನೋ ಪ್ಲಾನ್ ಹಾಕಿದ್ದೆ.ನಾನೆಂಥಾ ದೊಡ್ಡ ಮನುಷ್ಯಳು ಅಂದರೆ, ಹೋಗುವ ಅರ್ಜೆಂಟಲ್ಲಿ ದುಡ್ಡನ್ನು ಡ್ರಾ ಮಾಡುವುದು ಮರೆತಿದ್ದೆ. ಇದು ನೆನಪಾದದ್ದು ಮೆಜೆಸ್ಟಿಕ್ ನಲ್ಲಿ.

Z :ಎಂಥಾ ದೊಡ್ಡ ತಲೆ ಅಂದ್ರೆ ನಿನ್ನದು...

ನಾನು :ಯೆಸ್. ಮೆಜೆಸ್ಟಿಕ್ ತಲುಪಿದ ಕೂಡಲೇ ಅಲ್ಲಿದ್ದ ATM ಗೆ ಧಾವಿಸಿದೆ. ನನ್ನ ಕರ್ಮಕ್ಕೆ, ದುಡ್ಡು ಬಂತು, ಆದರೆ ಕಾರ್ಡು struck ಆಯ್ತು !

Z : Oh my god !

ನಾನು :ಆಮೇಲೆ ನಾನು ಹೊರಗಿರುವವರನ್ನು ಕರೆದು ಹೇಳಿದೆ, ಕಾರ್ಡ್ struck ಆಯ್ತು ಅಂತ. ಅವರು ಪಾಪ ಒಳಬಂದು cancel button press ಮಾಡಿದ ತಕ್ಷಣ ನನ್ನ ಕಾರ್ಡು ಈಚೆ ಬಂತು. ಅವರಿಗೆ ಥ್ಯಾಂಕ್ಸ್ ಹೇಳಿ ಬದುಕಿದೆಯಾ ಬಡಜೀವವೇ ಅಂತ ಅಲ್ಲಿಂದ ಓಡಿದೆ.

Z :Moral of the story is, never use ATMs which take the card inside !

ನಾನು :ಹು. ಅಲ್ಲಿಂದ ಮೇಖ್ರಿ ಸರ್ಕಲ್ಲಿಗೆ ಬಸ್ಸು ಹತ್ತಿದೆ. ನನ್ನ ಪೂರ್ವಜನ್ಮದ ಪುಣ್ಯವಿಶೇಷ, ಅವನು book festival ಹತ್ತಿರ ಇರೋ ಬಸ್ ಸ್ಟಾಪ್ ಬಳಿ ನಿಲ್ಲಿಸಿದ. ಆರ್ಮಿ ಕಮಾಂಡೋ ಹಾಸ್ಪಿಟಲ್ ಇಂದ ನಡೆಯುವ ಕಷ್ಟ ತಪ್ಪಿತು.ಗಂಟೆ ಹನ್ನೊಂದು ವರೆ.

Z : nanograms range ನಲ್ಲಿ ಪುಣ್ಯ ಇಟ್ಟಿದ್ಯಾ ನೀನು.

ನಾನು :yes.ಟಿಕೆಟ್ ತಗೊಂಡು ಒಳ ಬಂದೆ. ಆವತ್ತು ಪ್ರದರ್ಶನದಲ್ಲಿ reverse order ನಲ್ಲಿ entrance. 346th stall ಕನ್ನಡ ಪುಸ್ತಕ ಪ್ರಾಧಿಕಾರದ ಸ್ಟಾಲು. ಅಲ್ಲಿ ಪುಸ್ತಕಗಳನ್ನ ನೋಡುತ್ತಿರಬೇಕಾದರೆ ಹಿಂದೆಯಿಂದ ಯಾರೋ ಬೆನ್ನು ತಟ್ಟಿದರು. ನೋಡಿದರೆ ನನ್ನ ಸೋದರತ್ತೆ ಮಗಳು ಮೀನಾ !ನನಗಿಂತಾ ಸಿಕ್ಕಾಪಟ್ಟೆ ದೊಡ್ಡೋಳು. Naturally, because ಅವಳು ನಮ್ಮ ತಂದೆಯ ದೊಡ್ಡಕ್ಕನ ಮಗಳು. ಅವಳ ಮಕ್ಕಳು ನನ್ನ ತಂಗಿಯ ವಯಸ್ಸು. ಮನೆ, ಕೆಲ್ಸ ಅಂತೆಲ್ಲಾ ಹೊರಗೇ ಕಾಲಿಡದ ಅವಳನ್ನ ನೋಡಿ ನನಗೆ ಒಂದು ನಿಮಿಷ ಆಶ್ಚರ್ಯ ಆಯ್ತು. ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ನನ್ನ ಇನ್ನೊಬ್ಬ ಸೋದರತ್ತೆ , ನಮ್ಮ ತಂದೆಯ ತಂಗಿ ಕೂಡಾ ಬಂದಿದ್ದರು. ನಾನು ಅವರು ಪುಸ್ತಕದ ಹುಳುಗಳು ಅಂತ ಪ್ರಸಿದ್ಧರು. ಅವರಂತೂ ಹಳೇ ಪುಸ್ತಕಗಳನ್ನು ಸಂಗ್ರಹ ಮಾಡುವಲ್ಲಿ ನಿಪುಣರು.ಅವರು ಹಳೆ ಪುಸ್ತಕವೊಂದನ್ನ ನೋಡುತ್ತಾ ನಿಂತಿದ್ದರು. ನಾವು ಮೂವರೂ ಒಟ್ಟಿಗೆ " ಏನಿಲ್ಲಿ?" ಅಂದೆವು.

Z : ಆಹಾ...ಸಿನೆಮಾ ಥಿಯೇಟರಿಗೆ ಬಂದು " ಸಿನೇಮಾ ನೋಡಕ್ಕೆ ಬಂದ್ರಾ " ಅಂದ ಹಾಗಾಯ್ತು.

ನಾನು : ಹು !ಆಮೇಲೆ ಅವರನ್ನ ಮಾತಾಡಿಸಿದೆ. ನಾನು ಅಮೆ ಗತಿಯಲ್ಲಿ ಪುಸ್ತಕ ನೋಡುವವಳೆ. ಆದರೆ ನನ್ನ ಸೋದರತ್ತೆ snail. ಅಮ್ಮ ಮತ್ತೆ ನನ್ನ ಫಿಸಿಕ್ಸ್ ಪ್ರೊಫೆಸರ್ರು ಇಬ್ಬರೂ ನನ್ನ ಹತ್ತಿರ "ಹಳೆ ಪುಸ್ತಕ ಓದಿ, ನಿನಗೆ dust allergy ಆಗಿ, ಆಮೇಲೆ ಒದ್ದಾಡೋದು ನಮಗೆ ನೋಡಕ್ಕೆ ಆಗೊಲ್ಲ. So no buying old books !"ಅಂತ. ನಾನು ಹಳೇ ಪುಸ್ತಕದ ಸ್ಟಾಲಿಗೆಹೋಗಲ್ಲ ಅಂತ ಭೀಷ್ಮ ಪ್ರತಿಜ್ಞೆ ಮಾಡಿದ್ದೆ. ಅದಕ್ಕೆ" ಅತ್ತೆ, ಮೀನಾ, ನೀವು ನೋಡ್ಕೊಳಿ, ನಾನು ಮುಂದೆ ಹೊರಡ್ತಿನಿ, ನೀವು ನಿಧಾನಕ್ಕೆ ನೋಡ್ಕೊಂಡು ಬನ್ನಿ" ಅಂದದ್ದೇ ನಾನು ಮುಂದೆ ನಡೆದೆ. ಈ ಸರ್ತಿ 346 ಸ್ಟಾಲುಗಳಿದ್ದಿದ್ದು ಗೊತ್ತಾ ?

Z : ಮಿನಿಮಮ್ ಹತ್ತು ಪುಸ್ತಕ ತಗೊಂಡ್ಯಾ ಹಾಗಿದ್ರೆ ?

ನಾನು : ಉಹು. ನಾನು ತಗೊಂಡಿದ್ದು ಮೂರು. ಮಿಕ್ಕಿದ್ದು ಮೂರು ತೇಜಕ್ಕನಿಗೆ.

Z : ಕೈಯಲ್ಲಿ ಹೊರೋದಾಗಿದ್ರೆ ಇಷ್ಟು ಸಾಕು.

ನಾನು : ಯೆಸ್. ಕೈಯಲ್ಲೇ ಹೊತ್ಕೊಂಡ್ ಬಂದೆ.

Z : ಹ್ಮ್ಮ್....

ನಾನು : ಸ್ಟಾಲುಗಳಲ್ಲಿ ಹೆಚ್ಚು ಆಧ್ಯಾತ್ಮಿಕ ಪುಸ್ತಕಗಳು ಕಂಡವು.ಕೆಲವನ್ನು ನಾನು ಕೊಂಡಿದ್ದೆ, ಕೆಲವು ನನಗೆ ಗಿಫ್ಟಾಗಿದ್ದವು, ಇನ್ನು ಕೆಲವನ್ನು ಅಣ್ಣ ಶೃಂಗೇರಿಯಿಂದ ತರುತ್ತೇನೆಂದು ಹೇಳಿದ್ದರು.ಹಾಗಾಗಿ ನನಗೆ ಅಲ್ಲಿ ಕೊಳ್ಳಲು ಹೊಸ ಪುಸ್ತಕಗಳು ಕಂಡರೂ, ಹಳೆಯದನ್ನು ಮುಗಿಸದೇ ಹೊಸದಕ್ಕೆ ಹೋಗಲು ಮನಸ್ಸಾಗಲಿಲ್ಲ.

Z :ನೀನು "ಇನ್ನೂ ಸಮಯ ಇದೆ ಇದಕ್ಕೆಲ್ಲಾ" ಅಂತ ಮುಂದಕ್ಕೆ ಬಂದಿರ್ತಿಯಾ.

ನಾನು : ಹು.ಆಮೇಲೆ ಒಂದಷ್ಟು ಜಲೇಬಿ ಭಾಷೆಯ ಪುಸ್ತಕಗಳ ಸ್ಟಾಲುಗಳಿದ್ದವು.

Z : I see !

ನಾನು : ಕನ್ನಡ ಬುಕ್ ಸ್ಟಾಲುಗಳಲ್ಲಿ ಇರೋ ಪುಸ್ತಕಗಳ ಮೇಲೆ ಕಣ್ಣಾಡಿಸಿದೆ. ಇತ್ತೀಚಿನವುಗಳನ್ನ ನಾನು ಆಗಲೇ ಅಂಕಿತದಲ್ಲಿ ಕೊಂಡಿದ್ದೆ.ಹಳೆಯದು ತೇಜಕ್ಕನ ಬಳಿ ಇದ್ದವು. ಮಿಕ್ಕಿದ್ದು ಅಮ್ಮನ ಮತ್ತು ಅಪರ್ಣಳ "individual library"ಯಲ್ಲಿ ಇದ್ದವು. ಆಂಗ್ಲಪುಸ್ತಕಗಳೆಲ್ಲಾ ನನ್ನ DVD pack ನಲ್ಲಿ ಭದ್ರವಾಗಿದ್ದವು.

Z : ಇನ್ನೇನು ತಗೊಂಡೆ ಮತ್ತೆ !?

ನಾನು : ಅದೇ, ನನ್ನ snail ಸೋದರತ್ತೆ ಇದಾರಲ್ಲಾ, ಅವರೂ ನನ್ನಂತೆಯೇ ಫಿಲಾಸಫಿಕಲ್ ಕಾದಂಬರಿ ಫ್ಯಾನು. ಅವರು ನನಗೆ ಡಾ|| ಎಚ್. ತಿಪ್ಪೆರುದ್ರಸ್ವಾಮಿಯವರ "ಪರಿಪೂರ್ಣದೆಡೆಗೆ" ಕಾದಂಬರಿ ಓದಲು ಹೇಳಿದ್ದರು. world culture library ಲಿ, ಜಯನಗರದ ಸಿಟಿ ಸೆಂಟ್ರಲ್ ಲೈಬ್ರರಿಯಲ್ಲಿ ಇದು ನನಗೆ ಸಿಕ್ಕಿರಲಿಲ್ಲ.ಸಾಹಿತ್ಯ ಭಂಡಾರದ ಸ್ಟಾಲಿನವರು "out of print" ಅಂದುಬಿಟ್ಟರು. ಆದರೆ ಅದು ನವಕರ್ನಾಟಕ ಪಬ್ಲಿಕೇಷನ್ಸ್ ಸ್ಟಾಲಿನಲ್ಲಿ ನನ್ನ ಕಣ್ಣಿಗೆ ಬಿತ್ತು.

Z : :)

ನಾನು : ಹಸಿದ ಹುಲಿ ಜಿಂಕೆ ಮೇಲೆ ಎಗರುವ ಹಾಗೆ ನಾನು ಎಗರಿಬಿದ್ದು ಆ ಪುಸ್ತಕ ತಗೊಂಡೆ.

Z : ಈ ಸಾಧನೆಗೆ ಯಾವ ಅವಾರ್ಡ್ ಬೇಕು ನಿನಗೆ ?

ನಾನು :ಯಾವ್ದಾದ್ರು ನಡಿಯತ್ತೆ.

Z : ಸರಿ. ಇರ್ಲಿ ಅಂತ ರಾಜ್ಯೋತ್ಸವ ಪ್ರಶಸ್ತಿ ಕೊಡ್ತಿದಿನಿ.ತಗೊ.

ನಾನು :thanks.ಇನ್ನೊಂದು ತೇಜಸ್ವಿಯವರ ಪುಸ್ತಕ.

Z : Expected.You never come out of any book stall without buying a book by Tejaswi.

ನಾನು : Yes.ಇನ್ನೊಂದು ಪುಸ್ತಕ ಕಾರಂತರ ಆತ್ಮಕಥೆ- ಹುಚ್ಚು ಮನಸ್ಸಿನ ಹತ್ತು ಮುಖಗಳು. ಅಲ್ಲಿಗೆ ಕನ್ನಡ ಪುಸ್ತಕ್ಕಗಳ ಖರೀದಿ ಮುಗಿತು.

Z : ಇನ್ನೇನು ಬಾಕಿ ಇತ್ತು ?

ನಾನು : M.Phil ಗೆ ಪುಸ್ತಕ ಬೇಕಿತ್ತಮ್ಮಾ ! ನಮ್ಮ ಸರ್ರು ಒಂದು ಪುಸ್ತಕ ತೋರಿಸಿ, " Have it with you before next class" ಅಂದರು. ಆ ಪುಸ್ತಕದ ಪ್ರಕಾಶಕರ ಆಫೀಸು ನಮ್ಮ ತಂದೆಯ ಆಫೀಸಿನ ಹಿಂಭಾಗವೇ. ಆದರೂ ನಾನು ಈ ಪುಸ್ತಕನ ಪುಸ್ತಕೋತ್ಸವದಲ್ಲೇ ಕೊಳ್ಳಬೇಕಂತ ಇದ್ದೆ. ಆ ಸ್ಟಾಲಿಗೆ ಹೋಗಿ ಪುಸ್ತಕದ ಹೆಸರು ಹೇಳಿದೆ. ಪುಣ್ಯಕ್ಕೆ ಎರಡೇ ಪುಸ್ತಕಗಳಿದ್ದವು. ನನಗೊಂದು, ನನ್ನ ಸ್ನೇಹಿತೆಗೊಂದು ಖರೀದಿಸಿ, ಇಪ್ಪತ್ತು ಪರ್ಸೆಂಟ್ ಡಿಸ್ಕೌಂಟು ಕೊಡಲೇಬೇಕು ಅಂತ ಗಲಾಟೆ ಮಾಡಿ ಕಡೆಗೆ ಅವನೂ ಒಪ್ಪಿ, ನನ್ನ ಶಾಪಿಂಗ್ ಮುಗಿಸಿ ತೇಜಕ್ಕನ ಪುಸ್ತಕದ ಲಿಸ್ಟಿನ ಕಡೆಗೆ ಗಮನ ಹರಿಸಿದೆ. ಅವರು ಕೇಳಿದ ಪುಸ್ತಕಗಳನ್ನು ಕೊಂಡು, ಮಿಕ್ಕಿದ್ದೆಲ್ಲಾ ಸ್ಟಾಲುಗಳ ಕಡೆ ಪಕ್ಷಿನೋಟ ಬೀರಿದೆ. ತ.ರಾ.ಸು ಬರೆದಿರುವ ಚಿತ್ರದುರ್ಗ ಸಾಮ್ರಾಜ್ಯದ ಕಾದಂಬರಿಯ ಸೀರೀಸ್ ಪುಸ್ತಕಗಳನ್ನೆಲ್ಲಾ ಮುಂದಿನ ಪುಸ್ತಕೋತ್ಸವದಲ್ಲಿ ಕೊಂಡುಕೋತಿನಿ ಅಂತ ನಿಶ್ಚಯಿಸಿದೆ. ನನಗೆ ಕೆಲವು ವಿಶೇಷ ರೀತಿಯ folders ಬೇಕಿದ್ದವು. ಅದನ್ನು ಕೊಂಡು ಹೊರಗೆ ಹೊರಟೇಬಿಟ್ಟಿದ್ದೆ...

Z : ಆಮೇಲೇನಾಯ್ತು ?

ನಾನು : ನಮ್ಮತ್ತೆ ! ಅವರೆಲ್ಲಿದ್ದಾರೆ ಗೊತ್ತಿರಲಿಲ್ಲ, ಹೊರಡುತ್ತಿದ್ದೇನೆ ಅಂತ ಹೇಳಿ ಹೋಗೋಣ ಅಂತ ಮತ್ತೆ ಒಳಗೆ ತಿರುಗಿದೆ. ಇಸ್ಕಾನ್ ಪುಸ್ತಕ ಮಳಿಗೆಯಲ್ಲಿ ನಮ್ಮತ್ತೆ ಸಿಕ್ಕರು. ನಾನು ಎರಡು ಘಂಟೆಗಳಲ್ಲಿ ಇಡೀ ಪುಸ್ತಕೋತ್ಸವದ ೩೪೬ ಸ್ಟಾಲುಗಳನ್ನು ಸುತ್ತಿದ್ದೆ, ಅವರು ಕೇವಲ ಹತ್ತು ಸ್ಟಾಲು ಮುಗಿಸಿದ್ದರು !

Z : !!!!!!!!!!!!!!!!!!!!!!!!!!!!!!!!!!!!!!

ನಾನು : ಹೂಂ!!! ನನ್ನ ಕಸಿನ್ನು "ಇರು, ನಾವು ಹೊರಡುತ್ತೀವಿ" ಅಂದರು. ಅವರು ನಿಧಾನಕ್ಕೆ ಒಂದೊಂದೇ ಮಳಿಗೆಗೆ ಹೋಗಿ ಇಣುಕುತ್ತಿದ್ದರು, ನಾನು ಮುಂದೆ ನಡೆಯುತ್ತಾ ನನ್ನ ಪುಸ್ತಕಪ್ರೇಮಿ ಮಿತ್ರರಿಗೆಲ್ಲಾ ಫೋನಿಸಿ ಹೊಟ್ಟೆ ಉರಿಸುತ್ತಿದ್ದೆ. ಗಂಟೆ ಎರಡಾಯ್ತು,ಎರಡುವರೆಯಾಯ್ತು, ಇವರು ಹೊರಬರುವ ಲಕ್ಷಣ ಕಾಣಿಸಲಿಲ್ಲ. ನನ್ನ ಬ್ಯಾಗಿನಲ್ಲಿನ ಶ್ಯಾವಿಗೆ ಬಾತಿನ ಕಡೆಗೆ ನನ್ನ ಗಮನವನ್ನು ಹರಿಸದೇ ನನ್ನ ಕೈಯಲ್ಲಿ ಇರಲಾಗುತ್ತಿರಲಿಲ್ಲ. ಕಡೆಗೆ ನನ್ನ ಕಸಿನ್ನು, " ಊಟಕ್ಕೆ ಜಾಗ ಇದೆಯಾ ?" ಅಂತ ಕೇಳಿದಳು. ನಾನು - "ಹೂ...ಕ್ಯಾಂಟೀನ್ ಇದೆ" ಅಂದೆ. ಹೊರಗೆ ಬಂದು ಇವರು ಅಲ್ಲೇ ಸಿಕ್ಕ ತಿಂಡಿ ಕೊಂಡರು, ನಾನು ಶ್ಯಾವಿಗೆ ಬಾತನ್ನು ತಿಂದೆ. ಆಗ ಘಂಟೆ ಮೂರುವರೆ.

Z : ಅಬ್ಬಾ !!

ನಾನು : ಇವರಿಬ್ಬರು, "ನಾವು ಮತ್ತೆ ಒಳಗೆ ಹೋಗುತ್ತೇವೆ" ಅಂದರು. ನಾನು ಹೊರಡುತ್ತೇನೆ ಅಂತ ಹೇಳಿ ಅಲ್ಲಿಂದ ಹೊರಬಿದ್ದೆ.ಡೈರೆಕ್ಟ್ ತೇಜಕ್ಕನ ಮನೆಗೆ ಬಂದು, ಅವರಿಗೆ ಪುಸ್ತಕ ಕೊಟ್ಟು, ಹಾಯಾಗಿ ಕೂತು ಪಟ್ಟಾಂಗ ಹೊಡೆದು, ಅಮ್ಮ ವಹಿಸಿದ ಕೆಲವು ಕೆಲಸ ಮುಗಿಸಿಕೊಂಡು, ನಾನು ಮನೆಯಲ್ಲಿ ಸೆಟಲ್ ಆದಾಗ ಘಂಟೆ ಎಂಟು !

Z : ಉಶ್ಶ್ಶಪ್ಪಆಆಆಆಆಆಆಆಆಆಆಆಆಆಆಆಆಆ !

ನಾನು : ಇದನ್ನ ನಾನು ಹೇಳಬೇಕು.

Z :proxy ಹೊಡೆದೆ.

ನಾನು : ಬೇಕಿರಲಿಲ್ಲ.

Z : ಓಕೆ.

ನಾನು : ಮುಂದಿನ ಬುಕ್ ಫೆಸ್ಟಿವಲ್ ಗೆ ಲಿಸ್ಟ್ ರೆಡಿ ಮಾಡ್ಕೊತಿನಿ. ಹೊರ್ಟೇ.

Z : :) :) :)

Sunday, November 8, 2009

journey to ಜಿಲೇಬಿನಾಡು - ಭಾಗ ೮

ನಾನು : ಜನವರಿ ಒಂದರ ಸುಪ್ರಭಾತ ಒಂಥರಾ ವಿಚಿತ್ರ ರೀತಿಯಲ್ಲಿ ಆಯ್ತು. ನಾನು ಮುಸುಕು ಹೊದ್ದು ಮಲಗಿದ್ದೆ. ಅಪರ್ಣ ನನ್ನ ಭುಜದ ಮೇಲೆ ಆರಾಮಾಗಿ ಸೆಟಲ್ ಆಗಿದ್ದಳು. ಬೆಳಗ್ಗಿನ ಜಾವವೋ, ರಾತ್ರಿಯೋ ಗೊತ್ತಿರಲಿಲ್ಲ, ಬಸ್ಸಂತು ಮುಂದಿರುವ ಕತ್ತಲನ್ನು ಭೇದಿಸಿಕೊಂಡು ಸಾಗುತ್ತಿತ್ತು. ನನಗೆ ಅಚಾನಕ್ಕಾಗಿ ಸೀಟೇ ಅಲ್ಲಾಡಿದ ಅನುಭವ ಆಯ್ತು. ನನ್ನ ಪ್ರಾಣ ಹೊರಟೇ ಹೋಯ್ತು ಅನ್ನೋ ಭಯದಲ್ಲಿ ಕಣ್ಬಿಟ್ಟೆ. ಸುತ್ತ ಕಗ್ಗತ್ತಲು.ಆಮೇಲೇ ಗೊತ್ತಾಗಿದ್ದು. ನನ್ನ ಫೋನು ವೈಬ್ರೇಟ್ ಆಗ್ತಿದೆ, ಅದಕ್ಕೆ ಸೀಟ್ ಅಲ್ಲಾಡುತ್ತಿದೆ ಅಂತ. ಮುಸುಕು ತೆಗೆದು, ಹುಡುಕಾಡಿ, ಫೋನ್ ಕಾಲ್ ಗೆ ಉತ್ತರಿಸಿದೆ. ಅಣ್ಣ ಫೋನಿಸಿದ್ದರು.

ಅಣ್ಣ: ಎಲ್ಲಿದಿರಿ ?

ನಾನು : ಗೊತ್ತಿಲ್ಲ.

ಅಣ್ಣ: ಕಾಲಟಿ ಬಂತಾ ?

ನಾನು: ಇಲ್ಲಾ ಅನ್ಸತ್ತೆ.

ಅಣ್ಣ: ಕಣ್ಬಿಟ್ಟು ಸುತ್ತ ಮುತ್ತ ನೋಡು.

ನಾನು: ಉಹು...ಕತ್ತಲು.

ಅಣ್ಣ: ಮುಸುಕನ್ನು ತೆಗಿ !

ನಾನು: ತೆಗ್ದೆ.....ಆದ್ರು ಕತ್ತಲೆ ಇದೆ.

ಅಣ್ಣ: ಕಾಲಟಿ ತಲುಪಿದ ಮೇಲೆ ಫೋನ್ ಮಾಡು. ಇಲ್ಲಿನ ಬೆಳವಣಿಗೆಗಳ ಬಗ್ಗೆ ನಾವು ಆಮೇಲೆ ಹೇಳ್ತಿವಿ.

ನಾನು: ಅಂಕಲ್ ಸ್ಥಿತಿ ಹೇಗಿದೆ ?

ಅಣ್ಣ: out of danger.

ನಾನು: ಸರಿ.

ಫೋನ್ ಇಟ್ಟ ಮೇಲೆ ನನಗೆ ಎಚ್ಚರ ಆಗಿದ್ದು ಕಾಲಟಿ ಅಂತ ಬುಸ್ ನಾಗ ಕಿರುಚಿ ನಮ್ಮನ್ನು ಎಬ್ಬಿಸಿದ ಮೇಲೆ.ಆಗ ಸಮಯ ೭ ಘಂಟೆ. ಅಣ್ಣ ಫೋನ್ ಮಾಡಿದ್ದು ಐದು ವರೆಗೆ !

Z : ಹೆಹೆಹೆ.

ನಾನು : ಅಲ್ಲಿ ನಾವು ನದಿಯಲ್ಲಿ ಸ್ನಾನ ಮಾಡಬೇಕಿತ್ತು. ಆ ನದಿಯ ಹೆಸರು ಪೂರ್ಣಾ ಅಂತ. ಎಂಥಾ ಶಾಂತ ಹರವು ಅಂದರೆ, ಅದರಿಂದ ಹೊರಗೆ ಬರುವ ಮನಸ್ಸೇ ಬರೋದಿಲ್ಲ. ಆದರೆ ನಮ್ಮ ಸಹಪ್ರಯಾಣಿಕರ ದುರ್ವರ್ತನೆ ಮಾತ್ರ ನನಗೆ ತೀವ್ರ ಬೇಜಾರನ್ನು ಉಂಟು ಮಾಡಿತು.

Z :ಏನಾಯ್ತು.

ನಾನು : ನದಿಯಲ್ಲಿ ಸೋಪು ಹಾಕಿ ಸ್ನಾನ ಮಾಡುವುದು ಎಷ್ಟರಮಟ್ಟಿಗೆ ಸರಿ ? ದಿನಾ ಮನೆಯಲ್ಲಿ ಸ್ನಾನವೇ ಮಾಡದಿರುವವರ ತರಹ ಸೋಪು ಕರಗಿ ಮುಗಿದು ಹೋಗುವ ವರೆಗೂ ಅದನ್ನು ಉಜ್ಜಿ ಉಜ್ಜಿ ನೊರೆ ನೋಡಿ ಸಂತೋಷ ಪಡುವುದು ನೋಡಿದರೆ ನನಗೆ ನಿಜವಾಗಲು ಸಿಟ್ಟು ಬರತ್ತೆ.ನದಿಯ ಹರವೇ ನಮ್ಮ ದೇಹದ ಕೊಳೆಯನ್ನು ಹೋಗಲಾಡಿಸಬಹುದಾಗಿರುವಾಗ ಅದಕ್ಕೆ ಸೋಪಿನ ಅವಶ್ಯಕತೆ ಇದೆಯೇ ? ಜನಕ್ಕೆ ಅಷ್ಟೂ ಪ್ರಜ್ಞೆ ಇರಲ್ವಾ ?

Z : ಒಂದ್ ಪ್ರಶ್ನೆ ಬಿಟ್ಟುಬಿಟ್ಟೆ ನೀನು.

ನಾನು : ಯಾವ್ದು ?

Z : ನಾವೇಕೆ ಹೀಗೆ ?

ನಾನು : :)) ನಾನು ಎಲ್ಲರಿಗಿಂತ ಚಿಕ್ಕವಳು, ಮಾತಾಡಿದರೆ ಅಧಿಕಪ್ರಸಂಗಿ ಅನ್ನಿಸಿಕೊಳ್ಳಬೇಕಾಗತ್ತೆ ಅನ್ನೋ ಒಂದೇ ಒಂದು ಕಾರಣಕ್ಕೆ ಸುಮ್ಮನಿದ್ದೆ. ಸೋಪನ್ನು ತಂದಿದ್ದರೂ ಅದನ್ನು ಉಪಯೋಗಿಸದ ನಾನು ಮತ್ತು ಅಪರ್ಣ exactly ಹತ್ತತ್ತು ಚೊಂಬು ತಲೆಯ ಮೇಲೆ ಸುರಿದು ಕೊಂಡೆವು. ಆಮೇಲೆ ರೆಡಿಯಾಗಿ ನಮ್ಮ ಫೋಟೋ ತೆಗೆಯಲು ಯಾರು ಇರದಿದ್ದುದರಿಂದ ನಾವೆ self timer experiment ಮಾಡಿಕೊಂಡೆವು. ಕಛಡವಾಗಿ ಬಂತು.

Z : naturally.

ನಾನು : ಇರ್ಬಹುದು. ಆದರೂ, ಇರಲಿ ದಾಖಲೆಗೆ ಬೇಕಾಗತ್ತೆ ಅಂತ ಅದನ್ನು ಡಿಲೀಟ್ ಮಾಡದೇ ಹಾಗೆ ಬಿಟ್ಟೆವು. ಅಲ್ಲಿಂದ ತಾಯಿ ಶಾರದಾಂಬೆಯ ದೇವಸ್ಥಾನಕ್ಕೆ ಬಂದೆವು.

Z : ಹೇಗಿದೆ ದೇವಸ್ಥಾನ ?

ನಾನು : ವಿಶಿಷ್ಟವಾಗಿದೆ. ಕಾಲಟಿ ಎಲ್ಲರಿಗೂ ಗೊತ್ತಿರುವಂತೆ ಆಚಾರ್ಯ ಶಂಕರರ ಜನ್ಮಸ್ಥಳ. ತಾಯಿಗೆ ನೀರು ಬೇಕಾದಾಗ ನದಿಯವರೆಗೂ ನಡೆಯುವುದು ತಪ್ಪಲಿ ಎಂದು ಪೂರ್ಣಾ ನದಿಯ ಹರಿವನ್ನು ಮನೆಯ ಕಡೆಗೆ ತಿರುಗಿಸಿದ ಮಹಾತ್ಮರ ಜನ್ಮಭೂಮಿ. ಇಲ್ಲಿ ಕಟ್ಟಿರುವ ಶಾರದಾಂಬೆಯ ದೇವಸ್ಥಾನದಲ್ಲಿ ಒಂದು ವಿಶೇಷ ಇದೆ. ದೇವಸ್ಥಾನದ ಹೊರಗೋಡೆಗಳಲ್ಲಿ ಅಲ್ಲಲ್ಲಿ ಗೂಡುಗಳನ್ನು ಮಾಡಿ ನವದುರ್ಗೆಯರಯರ ಮೂರ್ತಿಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಒಂದೊಂದು ಕೋನದಲ್ಲೂ ಒಂದೊಂದು ದೇವಿಯ ವಿಗ್ರಹವಿದ್ದು, ಮಧ್ಯದಲ್ಲಿ ಶಾರದಾಂಬಾ ವಿಗ್ರಹ ಪ್ರತಿಷ್ಟಾಪಿಸಲ್ಪಟ್ಟಿದೆ. ಹೇಗೆ ಗೊತ್ತಾ ?

Z : ಹೇಗೆ ?

ನಾನು : ನಕ್ಷತ್ರಕ್ಕೆ ಐದು ಕೋನಗಳು ಇರತ್ತೆ. ಹೌದು ತಾನೆ ?

Z : ಹು.

ನಾನು : ಕೋನಗಳಲ್ಲಿ ಮತ್ತು ಅದರ ಮಧ್ಯದಲ್ಲಿರುವ ಸ್ಥಳಗಳಲ್ಲಿ front and back ಶೈಲಿಯಲ್ಲಿ ಈ ದೇವಸ್ಥಾನ ಕಟ್ಟಲಾಗಿದೆ.

Z : ನೈಸ್...

ನಾನು : ಹು. ನಾವು ದೇವಸ್ಥಾನವನ್ನು, ಶಂಕರ ಭಗವತ್ಪಾದರ ತಾಯಿ ಅರ್ಯಾಂಬೆಯವರ ಸಮಾಧಿಯನ್ನು, ಪಚ್ಚೆ ಲಿಂಗವನ್ನು ಮತ್ತು ಶಂಕರರ ಕುಲದೇವರಾದ ಕೃಷ್ಣನ ದೇವಸ್ಥಾನವನ್ನು ನೋಡಿಕೊಂಡು ಗುರುವಾಯೂರಿಗೆ ಪಯಣ ಬೆಳೆಸಿದೆವು. ನಾನು ಅಣ್ಣನಿಗೆ ಫೋನ್ ಮಾಡಿದೆ. ಅಣ್ಣ ಸುಧಾ ಆಂಟಿ ಮತ್ತು ಅಂಕಲ್ ನ ಅವರ ಮಗ ಬೆಂಗಳೂರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿರುವುದಾಗಿಯೂ, ಇವರಿಬ್ಬರೂ ಎರ್ನಾಕುಲಂ ನ ಟ್ರೈನ್ ಹತ್ತಿ, ಆಲ್ವೇ ಎಂಬಲ್ಲಿ ಇಳಿದು ಅಲ್ಲಿಂದ ಕಾಲಟಿಗೆ ಆಟೋದಲ್ಲಿ ಬಂದು, ಕಾಲಟಿಯಿಂದ ಗುರುವಾಯೂರಿಗೆ ಬಸ್ಸಿನಲ್ಲಿ ಬರುವುದಾಗಿ ಹೇಳಿದರು. ಒಟ್ಟಿನಲ್ಲಿ ಅವರು ಜನವರಿ ಒಂದರ ರಾತ್ರಿ ಅವರು ನಮ್ಮೊಂದಿಗೆ ಇರುವುದಾಗಿ ಹೇಳಿದರು. ಅಣ್ಣ ಮೊದಲು ನಾನು ಅಪರ್ಣ ಇಬ್ಬರೇ ಬೆಂಗಳೂರು ಸೇರಬೇಕಾಗಬಹುದೆಂದು ಅನುಮಾನ ಪಟ್ಟಿದ್ದರು. ನಾನೂ ನಿರ್ಭಯವಾಗಿ ಆಗಲಿ ಎಂದಿದ್ದೆ. ಅವರು ನಮ್ಮೊಟ್ಟಿಗೆ ಬಂದು ಸೇರುತ್ತೇವೆ ಎಂದಾಗ ಅದೇಕೋ ಒಂಥರಾ ನಿರಾಳ ಅನಿಸಿತು.

Z : ಹ್ಮ್ಮ್ಮ್......ಅದೊಂಥರಾ ಹಾಗೇನೆ. ಮುಂದೆ ?

ನಾನು : ಕಾಲಟಿಯ ಬುಕ್ ಸ್ಟಾಲಿನಲ್ಲಿ ಬ್ರಹ್ಮ ಸೂತ್ರಕ್ಕೆ ಭಗವತ್ಪಾದರ ಭಾಷ್ಯದ ಸಂಸ್ಕೃತ ಪಠ್ಯ ಮತ್ತು ಅದಕ್ಕೆ ಆಂಗ್ಲ ಅನುವಾದ ತೆಗೆದುಕೊಂಡ ಮೇಲೆನೇ ನನಗೆ ಜನವರಿ ಒಂದು ಸಾರ್ಥಕ ಆಯ್ತು ಅನ್ಸಿದ್ದು.

Z : ಅಲ್ವೇ ಮತ್ತೆ ? ಹೋದ ಕಡೆ ಎಲ್ಲ ನಿನ್ನ ಪುಸ್ತಕದ ಅಂಗಡಿಯ ಕಡೆ ಮುಖ ಹಾಕಿಸದೇ ಇರ್ಬೇಕಾದ್ರೆ ನಿನಗೆ ಹೆಂಗನಿಸಿರಬೇಡ.

ನಾನು : ಹೂಂ. ಅಪರ್ಣ ಗೊಣಗಿದಳು -"ದುಡ್ಡಿಟ್ಟುಕೋ" ಅಂತ.

ನಾನಂದೆ - "ಸಾಕಷ್ಟಿದೆ, ಹೆದರಬೇಡ."

ಅವಳು - " ಈ ಜನ್ಮದಲ್ಲಿ ನೀನು ಉದ್ಧಾರ ಆಗಲ್ಲ " ಅನ್ನೋ ಲುಕ್ ಕೊಟ್ಟಳು. ನಾನದನ್ನು ವಾಪಸ್ return ಮಾಡಿದೆ.

Z : :)

ನಾನು : ಗುರುವಾಯೂರಿಗೆ ಹೊರಟಾಗ ದಾರಿಯಲ್ಲಿ ಸಿಕ್ಕ ಚಿನ್ನದ ಅಂಗಡಿಗಳ ಕಡೆ ನಾನು ಅಪರ್ಣ ಬಹಳ ಗಮನ ಹರಿಸಿ ನೋಡಿದೆವು. ಪ್ರತಿಯೊಂದು ಹೋರ್ಡಿಂಗಿನ ಮೇಲಿರುವ ಪ್ರತಿಯೊಂದು ಆಭರಣದ pattern ಗೆ ಧಾರಾಳವಾಗಿ ಕಮೆಂಟ್ಸ್ ಕೊಟ್ಟೆವು.

Z : ರಿಯಾಲಿಟಿ ಶೋ ಜಡ್ಜ್ ಥರ.

ನಾನು : ಹು.ಗುರುವಾಯೂರನ್ನು ತಲುಪಿದ್ದು ಸಾಯಂಕಾಲ. ಲಾಡ್ಜಿನಲ್ಲಿ ನಾನು ಅಪರ್ಣ ಒಂದು ರೂಮಲ್ಲಿದ್ದು, ಅಣ್ಣ ಅಮ್ಮನಿಗೆ ನಮ್ಮ ಪಕ್ಕಕ್ಕೇ ರೂಮೊಂದು ಇರಲಿ ಎಂದು ಕೊಡಿಸಿಕೊಂಡು, ಲಗೇಜೆಲ್ಲಾ ನಮ್ಮ ರೂಮಿನಲ್ಲೇ ಇಟ್ಟು, ಮೊಬೈಲುಗಳನ್ನು ಚಾರ್ಜಿಗೆ ಹಾಕಿ ಸ್ವಲ್ಪ ಹೊತ್ತು ಸುಧಾರಿಸಿಕೊಂಡೆವು. ಅಪರ್ಣಾ ನಿದ್ದೆ ಹೊಡೆದಳು, ನಾನು ಎಸ್. ಎಲ್. ಭೈರಪ್ಪ ಅವರ ಧರ್ಮಶ್ರೀ ಓದಲು ಪ್ರಾರಂಭಿಸಿದ್ದೆ ಬಸ್ಸಿನಲ್ಲಿ, ಅದನ್ನ ಮುಂದುವರೆಸಿದೆ. ಕಾಫಿ ಕುಡಿದು ಎಲ್ಲರೂ ಗುರುವಾಯೂರಪ್ಪನ ದರ್ಶನಕ್ಕೆ ಹೊರಟೆವು. ಸಿಕ್ಕಾಪಟ್ಟೆ ದೊಡ್ಡ ಕ್ಯೂ !!!

Z : ಒಹ್ಹೋ...

ನಾನು : ಎರಡು ಘಂಟೆಕಾಲ ನಿಂತಮೇಲೆ ನಮಗೆ ಕಡೆಗೂ ಗುರುವಾಯೂರಪ್ಪನ ದರ್ಶನವಾಯ್ತು. ಗುರು ಬೃಹಸ್ಪತಿ ಮತ್ತು ವಾಯು ದೇವ ಇಬ್ಬರೂ ಸ್ಥಾಪಿಸಿದ ಈ ಮಹಾವಿಷ್ಣುವಿನ ಮೂರ್ತಿಗೆ ಗುರುವಾಯೂರಪ್ಪ ಎಂದು ಹೆಸರು. ಇದು ದ್ವಾಪರ ಯುಗದಲ್ಲಿ ಸ್ವಯಂ ಶ್ರೀಕೃಷ್ಣನೇ ಪೂಜೆ ಮಾಡಿದ ಮಹಾವಿಷ್ಣುವಿನ ಮೂರ್ತಿಯಂತೆ.

Z : ಹೌದಾ ?

ನಾನು : ಹು. ಕೃಷ್ಣ ಪರಮಾತ್ಮ ತನ್ನ ಪರಮಾಪ್ತ ಶಿಷ್ಯ ಉದ್ಧವನಿಗೆ ಈ ಮೂರ್ತಿಯನ್ನು ಕಾಪಾಡಲು ಹೇಳಿದ್ದನಂತೆ. ದ್ವಾರಕೆ ಮುಳುಗಿದಾಗ ಅದು ನೀರಲ್ಲಿ ತೇಲುತ್ತಿದ್ದು ಇದು ದೇವಗುರು ಬೃಹಸ್ಪತಿಗೆ ಕಂಡು, ಅವರು ಮತ್ತು ಅವರ ಶಿಷ್ಯ ವಾಯುದೇವ ಇದನ್ನು ಕಂಡು, ಭರತ ಖಂಡದಲ್ಲೆಲ್ಲಾ ಸುತ್ತಾಡಿ, ಕಡೆಗೆ ತಾವರೆ ತುಂಬಿದ ಕೆರೆಯಿದ್ದ ಈಗಿನ ಗುರುವಾಯೂರಿನಲ್ಲಿ ಪ್ರತಿಷ್ಟಾಪಿಸಿದರಂತೆ ಮೂರ್ತಿ ನ.

Z : I see.

ನಾನು : ಹು. ಅದಾದ ಮೇಲೆ ಶಾಪಿಂಗ್ ಹೊರಟೆವು.

Z : ಇನ್ನೇನ್ ಕೆಲ್ಸ.

ನಾನು : ಅಲ್ವಾ ಮತ್ತೆ. ನಾನು ಅಮ್ಮಂಗೆ ಅಂತ ತಾಳಗಳನ್ನ ತಗೊಂಡೆ. ಯಾತ್ರೆಗೆ ಹೋದರೆ ಪಾತ್ರೆ ತಗೋಬೇಕು ಅಂತ ಗಾದೆಯಿದೆ ಆದ್ದರಿಂದ ನಾನೊಂದು ರೈಲ್ಚೊಂಬು ನೋಡಿದ್ದೆ. ತಗೊಳ್ಳೋಣ ಅಂತ ನನಗೆ ಅಪರ್ಣಂಗೆ ಇಬ್ಬರಿಗೂ ಆಸೆಯಾಯ್ತು. ಆದರೆ ದುಡ್ಡು ಶಾರ್ಟೇಜ್ ಆಗೋಯ್ತು. ವಾಪಸ್ ಬಂದ್ವಿ

Z : :(

ನಾನು : ಅಲ್ಲಿ ಒಂದು ಕಡೆ ಲಿಂಬೂ ಸೋಡಾ ಕುಡಿದು ವಾಪಸ್ ಬಂದಮೇಲೆ ಅಣ್ಣ ಅಮ್ಮ ಆಟೋ ಲಿ ಬಂದಿಳಿದರು. ಮತ್ತೆ ಅವರ ಜೊತೆ ದೇವಸ್ಥಾನಕ್ಕೆ ಹೋಗೋ ಅಷ್ಟೊತ್ತಿಗೆ ದೇವಸ್ಥಾನ ಬಾಗಿಲು ಹಾಕಿತ್ತು. ರೈಲ್ ಚೊಂಬು ಕೊಡ್ಸಿ ಅಂತ ಕೇಳಿ, ಇವ್ರು ಕೊಡ್ಸಲ್ಲ ಅಂದು, ನಾನು ಸಪ್ಪೆ ಮುಖ ಹಾಕೊಂಡು ವಾಪಸ್ ಲಾಡ್ಜಿಗೆ ಬರೋ ಅಷ್ಟೊತ್ತಿಗೆ ಹತ್ತು ಘಂಟೆ. ನಾನು ಯಥಾ ಪ್ರಕಾರ ನನ್ನ ಮೊಸರನ್ನ ವ್ರತ ಮಾಡಿದೆ. ಮಾರನೆಯ ದಿನ ನಾವಿನ್ನು ಮತ್ತೆ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಬೇಕಿತ್ತು.

Z : ಆಹಾ ! ಇಷ್ಟು ಬೇಗ !

ನಾನು : ಹು ! ಮಾರನೆಯ ದಿನ ನಾವು ನಮ್ಮ ಲಗೇಜುಗಳನ್ನು ಎಣೆಸಿಕೊಳ್ಳುತ್ತಿದ್ದೆವು. ನಮ್ಮದು ಸುಧಾ ಆಂಟಿ ದು ಇಬ್ಬರದ್ದು ಸೇರಿ ಒಟ್ಟು ಮೂವತ್ತು ಬ್ಯಾಗ್ ಗಳು !!

Z : ಯಪ್ಪಾ !!!!!!!!!!!!

ನಾನು : ಹು! ಅಣ್ಣ ಸರಿಯಾಗಿ ಬೈದ್ರು. ಇಡೀ ಸೌತ್ ಇಂಡಿಯಾ ನೇ ಹೊತ್ಕೊಂಡ್ ಬಂದಿದಿರ ಅಂತ.

Z : ಇನ್ನೇನ್ ಮತ್ತೆ !

ನಾನು : :( ಗುರುವಾಯೂರಿಂದ ಹೊರಟು ಕಾಲಿಕಟ್ ಘಾಟ್ ಹತ್ತಿ, ಗುಂಡ್ಲುಪೇಟೆನಲ್ಲಿ ಕನ್ನಡ ಫಲಕ ಓದಿದ ತಕ್ಷಣ ನನಗಾದ ಆನಂದಕ್ಕೆ ಮಿತಿಯೇ ಇರಲಿಲ್ಲ. ಅಪರ್ಣಾ " ಸಮಾಧಾನ ಸಮಾಧಾನ ! " ಅಂದರೂ ಕಿಟಕಿಯಿಂದ ತಲೆ ಹೊರಗೆ ಹಾಕಿ ಯೇ ಅಂತ ಕಿರುಚಿದೆ.

Z : ಆಹ !

ನಾನು : ಹು. ಇಷ್ಟು ದಿನ ಬರೀ ಜಿಲೇಬಿ ನೋಡಿ ನೋಡಿ ಸಾಕಾಗೋಗಿತ್ತು. ಕನ್ನಡ ಕಂಡೇನಾ ಅನ್ಸಿತ್ತು. ನಂಜನಗೂಡು ಮತ್ತು ಶ್ರೀರಂಗಪಟ್ಟಣ ನೋಡಿಕೊಂಡು ಬೆಂಗಳೂರಿಗೆ ಬಂದು ಮನೆಗೆ ತಲುಪಿದಾಗ ರಾತ್ರಿ ಹನ್ನೊಂದು. ಘಾಟ್ ಸೆಕ್ಷನ್ ನಲ್ಲಿ ಧರ್ಮಶ್ರೀ ನಾವೆಲ್ಲು ಓದಿ, ಬೆಂಗಳೂರು ತಲುಪುವ ಮುಂಚೆಯೇ ಮುಗಿಸಿದ್ದಕ್ಕೆ ನನಗೆ " ಗಟ್ಟಿಗಿತ್ತಿ" ಅನ್ನೋ ಬಿರುದು ಬಂತು. ಬಸ್ಸಿನಲ್ಲಿ ನಾವೆಲ್ಲರು ಒಂದೇ ಮನೆಯವರ ತರಹ ಆಗೋಗಿದ್ದೆವು. ಬೀಳ್ಕೊಡುವಾಗ ಎಲ್ಲರ ಕಣ್ಣಂಚಲ್ಲೂ ನೀರು. ಧರ್ಮಶ್ರೀ ಕಾದಂಬರಿ ಓದಲು ಕೊಟ್ಟ ನಾಗಾಭರಣ, ಸದಾ ಜೋಕ್ ಮಾಡುತ್ತಿದ್ದ ಪ್ರಸಾದ್ ಅಂಕಲ್, ಸದಾ ಆಟ ಅಡಿಕೊಂಡಿದ್ದ ಲೋಹಿತ್ ಮತ್ತು ಚಂದನ, ಎಲ್ಲರೂ ಈಗಲೂ ನೆನಪಾಗ್ತಾರೆ.


Left- driver, right-bus naga.

Z : ಅಂತು ಮುಗಿತು ಟ್ರಿಪ್ಪು.

ನಾನು : ಹು ! ಮಾರನೆಯ ದಿನ ಯಾರೂ ಎಬ್ಬಿಸದೇ ಮೂರುವರೆಗೆ ಎದ್ದೆ ನಾನು ! ನೋಡಿದರೆ ಎಲ್ಲರೂ ಸುಸ್ತಾಗಿ ಮಲಗಿದ್ದರು. ಆಮೇಲೇ ನೆನಪಾದದ್ದು ನನಗೆ, ನಾವು ಬೆಂಗಳೂರಿನಲ್ಲಿದ್ದೇವೆ ಅಂತ !

Z : ಎಹೆಹೆಹೆಹೆ !!!

ನಾನು : ನನಗಂತೂ ಈ ಊರುಗಳಿಗೆ ಮತ್ತೊಮ್ಮೆ ಹೋಗಬೇಕು ಅನ್ನಿಸಿದೆ. ತಿರುವಣ್ಣಾಮಲೈ ನ ರಮಣಮಹರ್ಷಿ ಬೆಟ್ಟದ ಹದಿನಾಲ್ಕು ಕಿಲೋಮೀಟರ್ ಪ್ರದಕ್ಷಿಣೆ ಹಾಕಿಲ್ಲ, ಚಿದಂಬರ ರಹಸ್ಯ ಭೇದಿಸಿಲ್ಲ, ಸಾರಂಗಪಾಣಿಯ ತಲೆಯ ಮೇಲಿನ ಆದಿಶೇಷನನ್ನ ಸರಿಯಾಗಿ ನೋಡಿಲ್ಲ, ಆದಿಕುಂಭೇಶ್ವರ ದೇವಸ್ಥಾನದಲ್ಲಿ ಲಿಂಗದ ಮೇಲಿನ ಪಾಟ್ ನ ಇನ್ನೊಂದ್ ಸರ್ತಿ ನೋಡ್ಬೇಕು, ತಿರುನಲ್ಲಾರಿನಲ್ಲಿ ಶನಿ ಮಹಾತ್ಮನ ಹತ್ತಿರ ಸ್ವಲ್ಪ ಕಷ್ಟ ಸುಖ ಮಾತಾಡ್ಬೇಕು, ಶ್ರೀರಂಗನಾಥನನ್ನ detail ಆಗಿ ನೋಡ್ಬೇಕು, ಕಾಲಟಿಯಲ್ಲಿ ಧ್ಯಾನ ಮಾಡಬೇಕು, ಗುರುವಾಯೂರಪ್ಪನನ್ನೂ detail ಆಗಿ ನೋಡ್ಬೇಕು. not to forget, ಸುಂದರೇಶ್ವರನ ಸನ್ನಿಧಿಯಲ್ಲಿ ಕಣ್ಣು ಮಿಟುಕಿಸದೇ ಒಂದೆರಡು ಮೂರು ಘಂಟೆಕಾಲ ಲಿಂಗವನ್ನೇ ನೋಡುತ್ತಿರಬೇಕು !

Z : ಅಷ್ಟೇನ ಅಥ್ವಾ ಇನ್ನು ಇದಿಯಾ ?

ನಾನು :ಇದೆ.

Z : ಮುಂದುವರೆಸು.

ನಾನು : ಕನ್ಯಾಕುಮಾರಿಯಲ್ಲಿ ಸನ್ ರೈಸ್ ನೋಡ್ಬೇಕು.

Z :ಮತ್ತೆ ಟ್ರಿಪ್ಪಾ ಹಾಗಾದ್ರೆ ?

ನಾನು : ಯೆಸ್. ಯಾವಾಗ ಅಂತ ಗೊತ್ತಿಲ್ಲ. ನಾನಂತೂ ಹೇಳ್ಬಿಟ್ಟಿದಿನಿ. ಈ ಸರ್ತಿ ಒಂದು ಬಾಡಿಗೆ ಇನ್ನೋವಾ ಲಿ ಹೊಗೋದು, ನಾವೇ ಡ್ರೈವ್ ಮಾಡ್ಕೊಳ್ಳೋದು, ಅವಲಕ್ಕಿ ಮೊಸರು ತಿನ್ನೋದು, ದೇವರ ದರ್ಶನ ಮತ್ತೆ ಫೋಟೋಗ್ರಫಿಯನ್ನ ಮನಃಪೂರ್ತಿ ಮಾಡೋದು ಅಂತ.

Z : ಅಣ್ಣ ಏನಂದ್ರು ?

ನಾನು :ಗೋಣಲ್ಲಾಡಿಸಿದರು as usual. But he knows, ಅದು ಸುಲಭ ಅಲ್ಲ ಅಂತ ! ನನಗೂ ಗೊತ್ತು. ಆದರೂ, I want to go back to these places again !

Z : :) :) ಇನ್ನು ಬೇಜಾನ್ ಟೈಂ ಇದೆ ಜೀವನದಲ್ಲಿ, ಹೋಗ್ತೀಯಂತೆ.

ನಾನು :ಯೆಸ್. ಹೋಗ್ತಿನಿ ಮತ್ತೆ. ಇದರೊಂದಿಗೆ ನನ್ನ ದೊಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ ಪ್ರವಾಸ ಪುರಾಣ ನ ಮುಗಿಸುತ್ತಿದ್ದೇನೆ.

ಅಥ ಜಲೇಬಿನಾಡು ಪುರಾಣಂ ಸಂಪೂರ್ಣಂ !
*************************************************************

ಕೆಲವು ಮುಖ್ಯವಾದ ಡೈಲಾಗುಗಳು-

"ಲಗೇಜುಗಳು ಮರಿ ಹಾಕ್ತಿವೆ !"-ಪ್ರಸಾದ್ ಅಂಕಲ್

" ಮರ್ನೆ ಕೆ ಟೈಂ ಮೆ ಪಡ್ನೇ ಕೋ ಗಯಾ !"- ಅರ್ಧ ರಾತ್ರಿಲಿ ಲೈಟ್ ಹಾಕಿದ್ದರು, ನಾನು ಪ್ರಸಾದ್ ಅಂಕಲ್ ಗೆ - " ನೋಡಿ ಅಂಕಲ್, ಇದೇ ಸೂರ್ಯ ಅಂದುಕೊಂಡು ಸನ್ ರೈಸ್ ನೋಡ್ಬಿಡೀ ಅಂದಾಗ ಹೇಳಿದ್ದು.

" ಪತ್ರ ಬರೆಯಲಾ ಇಲ್ಲಾ ಪಾತ್ರೆ ತೊಳೆಯಲಾ ಹಾಡು ಇದೆಯಲ್ಲಾ ಸಾರ್...."----ಅಣ್ಣ ಅನಂತ್ ಅಂಕಲ್ ಗೆ ಹೇಳಿದ್ದು- with reference to the current generation songs.(he has combined 3 songs in this ! ನಾನು ಅಪರ್ಣಾ ನಕ್ಕು ನಕ್ಕು ಸುಸ್ತು ! )

ಚಿತ್ರಗಳ ಸ್ಲೈಡ್ ಶೋ.

Sunday, October 4, 2009

journey to ಜಲೇಬಿನಾಡು ಭಾಗ ೭

ನಾನು : ರಾಮೇಶ್ವರಂ ನಲ್ಲಿ ರಾತ್ರಿ ಊಟ ಮಾಡಬೇಕಾದರೆ ನಮ್ಮ ಬುಸ್ ನಾಗ ಮಾರನೆಯ ಬೆಳಿಗ್ಗೆ ಹತ್ತುವರೆ ಘಂಟೆಗೆ ಹೊರಡುವುದಾಗಿ ಹೇಳಿದರು. ಧನುಷ್ಕೋಟಿಗೆ ನಮಗೆ ಹೋಗಲಾಗುವುದಿಲ್ಲ ಎಂದು ಹೇಳಿದರು.

Z : ತಾವು ಇದಕ್ಕೆ ಮುಖ ಊದಿಸಿಕೊಂಡಿರಿ.

ನಾನು : of course ! ಆದರೆ ಅಣ್ಣ, ಅಪರಕರ್ಮ(ಶ್ರಾದ್ಧ) is priority ಅಂದರು. ನಾನು ಓಕೆ ಅಂದೆ.

ನಾನು : ಬುಸ್ ನಾಗ "ಹಾಂ...ಇಪ್ಪತ್ತೆರಡು ಬಾವಿ ನೀರಿನ ಸ್ನಾನಕ್ಕೆ ದುಡ್ಡು ಕೊಡಿ" ಅಂದರು. ನಾವು ಮಠದ ಮೂಲಕ ಹೋಗುವುದಾಗಿ ಹೇಳಿದೆವು. ಅದಕ್ಕೆ ಅವರು ಮುಖ ಊದಿಸಿಕೊಂಡರು.

Z : :)

ನಾನು : ನಾವು ಲಾಡ್ಜಿಗೆ ಬಂದು ಮಲಗಿದೆವು. ಬೆಳಿಗ್ಗೆ ಅಮ್ಮ ಮೂರಕ್ಕೆ ಎಬ್ಬಿಸಿದರು. ತಣ್ಣೀರಿನ ಸ್ನಾನ ಮಾಡಿದೆವು. ಮೂರುವರೆಗೆ ಮಠ ತಲುಪಿದೆವು. ಅಲ್ಲಿನ ಅಧಿಕಾರಿಯೊಬ್ಬರು ನಮ್ಮೊಟ್ಟಿಗೆ ಬಂದು ನಮ್ಮನ್ನು ದೇವಾಲಯಕ್ಕೆ ಕರೆದುಕೊಂಡು ಹೋದರು, ಸ್ಫಟಿಕಲಿಂಗದ ದರ್ಶನಕ್ಕೆ.

Z : what it eez ?

ನಾನು : ನಮ್ಮ ಆಚಾರ್ಯ ಶಂಕರ ಭಗವತ್ಪಾದರು ಇದ್ರಲ್ಲಾ...

Z : ಹೂಂ...

ನಾನು : ಅವರು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ travel ಮಾಡಿದ್ರಂತಲ್ಲಾ...

Z : ಹುಂ...

ನಾನು : ಆವಾಗ ಅವರು ರಾಮೇಶ್ವರಕ್ಕೂ ಬಂದಿದ್ದರಂತೆ.

Z : I see. ಆಮೇಲೆ ?

ನಾನು : ಅಲ್ಲಿ ಅವರು ರಾಮೇಶ್ವರ ಲಿಂಗದ ದರ್ಶನವಾದ ಮೇಲೆ ಅಲ್ಲೊಂದು ಸ್ಫಟಿಕಲಿಂಗವನ್ನು ಪ್ರತಿಷ್ಟಾಪಿಸಿದ್ದಾರೆ. ಅದು ಬೆಳಿಗ್ಗಿನ ಯಾಮ ಸರಿಯಾಗಿ ೪.೩೦ ಕ್ಕೆ ದರ್ಶನಕ್ಕೆ ಇಡಲಾಗುತ್ತದೆ. ಅದಕ್ಕೆ ಅಭಿಷೇಕವಾಗುವುದರ ಜೊತೆಗೇ ರಾಮೇಶ್ವರ ಲಿಂಗಕ್ಕೂ ಅಭಿಷೇಕವಾಗುತ್ತದೆ.ಎಂಥಾ ಶುದ್ಧ ಸ್ಫಟಿಕ ಅಂದರೆ, ಬಿಳುಪು ಅಂದರೆ ಅದು ! ಎಂಥಾ ಲಿಂಗ ಅಂತಿಯಾ ? ಸೂಕ್ಷ್ಮಾತಿ ಸೂಕ್ಷ್ಮ ರೇಖೆ ಕೂಡಾ ಇಲ್ಲದ flawless crystal ಅದು. ಅದರ ಮೇಲೆ ಹಾಲು ಮೊಸರು ಬಿದ್ದರೆ ನಮಗೆ, ನೋಡುಗರಿಗೆ ಎಂಥಾ ರೋಮಾಂಚನವಾಗುತ್ತದೆ ಅಂದರೆ...ಅದನ್ನು ವರ್ಣಿಸಲು ಸಾಧ್ಯವೇ ಇಲ್ಲ !

Z : :)

ನಾನು : ಇನ್ನು ರಾಮೇಶ್ವರದ ಕಥೆ ಎಲ್ಲರಿಗೂ ಗೊತ್ತಿದೆ. ರಾಮ ತಾನು ಲಂಕೆಯಿಂದ ವಿಜಯಿಯಾಗಿ ಸೀತೆಯ ಸಮೇತ ಇಲ್ಲಿಗೆ ಬಂದು, ಬ್ರಹ್ಮಹತ್ಯಾದೋಷವನ್ನು ನಿವಾರಿಸಿಕೊಳ್ಳಲು ಶಿವನ ಪೂಜೆಮಾಡಲು ಇಚ್ಛಿಸಿದನು. ಅದಕ್ಕಾಗಿ ಹನುಮಂತನನ್ನು ಕಾಶಿಗೆ ಕಳಿಸಿ ವಿಶ್ವನಾಥನ ಲಿಂಗವನ್ನು ಇಲ್ಲಿ ತರಬೇಕೆಂದು ಆಜ್ಞಾಪಿಸಿದನು. ಆದರೆ, ಆಕಾಶದಲ್ಲಿ ಟ್ರಾಫಿಕ್ ಜಾಂ ಇತ್ತು ಅಂತ ಕಾಣತ್ತೆ, ಹನುಮಂತ ಬರುವುದು ತಡವಾಯ್ತು. ಅಷ್ಟೊತ್ತಿಗಾಗಲೇ ಸೀತಾದೇವಿ ಮರಳಿನಲ್ಲಿ ಲಿಂಗವನ್ನು ಮಾಡಿದ್ದಳು. ರಾಮ ಅದಕ್ಕೆ ಪೂಜೆ ಸಲ್ಲಿಸಿ ಆದಮೇಲೆ ಹನುಮಂತ ಲಿಂಗದ ಸಮೇತ land ಆದನು. ಅವನಿಗೆ ತಾನು ತಂದ ಲಿಂಗಕ್ಕೆ ಪೂಜೆಯಾಗಲಿಲ್ಲವಲ್ಲ ಅಂತ ಬೇಜಾರು ಆಯ್ತು. ಅವನನ್ನು ಸಮಾಧಾನ ಪಡಿಸಲು ರಾಮ ಹೇಳಿದ, ಎರಡೂ ಲಿಂಗಕ್ಕೆ ಪೂಜೆ ಸಲ್ಲಿಸಬೇಕು ಇಲ್ಲಿಗೆ ಬಂದವರೆಲ್ಲರೂ ಅಂತ. ಅದು ಈಗಲೂ ಚಾಲನೆಯಲ್ಲಿದೆ.

Z : ಹಾಗೆ.

ನಾನು : ಹೂ. ಮತ್ತು, ರಾಮೇಶ್ವರ ಚಾರ್ ಧಾಂ ಗಳಲ್ಲಿ ಒಂದು. ಕಾಶಿಯಿಂದ ಗಂಗೆಯನ್ನು ತಂದು ಇಲ್ಲಿ ರಾಮೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ. ಮತ್ತು ಇಲ್ಲಿಂದ ಮರಳನ್ನು ತೆಗೆದುಕೊಂಡು ಹೋಗಿ ಕಾಶಿ ವಿಶ್ವನಾಥನಿಗೆ ಅರ್ಪಿಸುವುದು ಆಚಾರ. ಮೊದಲು ರಾಮೇಶ್ವರಕ್ಕೆ ಹೋಗಿ, ಮರಳನ್ನು ತೆಗೆದುಕೊಂಡು, ಕಾಶಿಗೆ ಹೋಗಿ, ವಿಶ್ವನಾಥನಿಗೆ ಅರ್ಪಿಸಿ, ಅಲ್ಲಿಂದ ಗಂಗೆಯನ್ನು ತಂದು ಇಲ್ಲಿ ರಾಮೇಶ್ವರನಿಗೆ ಅರ್ಪಿಸಿದರೇನೆ ಯಾತ್ರೆಯ ಪೂರ್ಣ ಫಲ ಸಿಗೋದು.

Z : ಜೀವನಪರ್ಯಂತ ಓಡಾಡ್ತಾನೇ ಇರ್ಬೇಕಾಗತ್ತೆ ಅಷ್ಟೇ !

ನಾನು : ಹಿಂದಿನ ಕಾಲದಲ್ಲಿ ಹಾಗಿದ್ದಿರಬಹುದು. ಈಗ package tours ಇವೆ. ಒಂದು ವರ್ಷದಲ್ಲಿ ಎರಡೂ ಕಡೆ ಹೋಗಿ ಬರಬಹುದು.plan ಮಾಡಬೇಕು ಅಷ್ಟೇ.

Z : ಅದೂ ಸರೀನೆ. ಆಮೇಲೆ ?

ನಾನು : ದೇವರ ದರ್ಶನವಾದ ನಂತರ ಇಪ್ಪತ್ತೆರಡು ಬಾವಿಗಳ ಸ್ನಾನಕ್ಕೆ ಹೊರಟೆವು. ಒಂದೊಂದು ವಿಚಿತ್ರ ತರದ ಬಾವಿಗಳು. ಒಂದು ಬಿಸಿನೀರು, ಒಂದು ತಣ್ಣೀರು, ಒಂದು ಸಿಹಿನೀರು, ಒಂದು ಉಪ್ಪಿನ ನೀರು...ಹೀಗೆ. ದುಬುಕ್ ದುಬುಕ್ ಅಂತ ನೀರು ತಲೆ ಮೇಲೆ ಬಿದ್ದು ಬಿದ್ದು ಕಿವಿ ಹೂತುಹೋಗಿತ್ತು. ಅಪರ್ಣ ನನ್ನ ವೇಲನ್ನ, ನಾನು ಅಮ್ಮನ ಸೆರಗನ್ನ ಹಿಡಿದಿದ್ದೆವು, ಕಳೆದುಹೋಗಬಾರದು ಅಂತ. ಅಣ್ಣ ಮಠದಿಂದ ಬಂದವರನ್ನ ಹಿಂಬಾಲಿಸುತ್ತಿದ್ದರು, ಅಮ್ಮ ಅಣ್ಣನನ್ನು ಮತ್ತು ನಾವು ಅಮ್ಮನನ್ನು ಹಿಂಬಾಲಿಸಿ,ಇಪ್ಪತ್ತೆರಡು ಬಾವಿಗಳ ಸ್ನಾನವನ್ನು ಸಂಪನ್ನವಾಗಿಸಿದೆವು.ಅಲ್ಲಿಂದ,ಮಠಕ್ಕೆ ಶ್ರಾದ್ಧಕ್ಕಾಗಿ ನಡೆದೆವು. ಶಂಕರ ಮಠದವರು ಬಹಳ ಅಚ್ಚುಕಟ್ಟಾಗಿ ಶ್ರಾದ್ಧ ಮಾಡಿಸಿಕೊಟ್ಟರು. ಅಲ್ಲಿಂದ ಲಾಡ್ಜಿಗೆ ಬಂದಾಗ ಗೊತ್ತಾಯ್ತು, ಊಟ ಮುಗಿಸಿಕೊಂಡು ರಾಮೇಶ್ವರವನ್ನು ಬಿಡುತ್ತಿದ್ದೇವೆ ಅಂತ. ನೆಮ್ಮದಿಯಾಗಿ ಒಂದು ಘಂಟೆ ನಿದ್ದೆ ಮಾಡಿ, ಊಟ ಮಾಡಿ ಹೊರಟೆವು.

Z : ತಾವೇನು ತಿಂದಿರಿ ?

ನಾನು : ಮೊಸರನ್ನ. ಅಷ್ಟೇ.

Z : ಕರ್ಮಕಾಂಡ !

ನಾನು : ಅಲ್ಲಿಂದ ಹೊರಟು ಸಾಯಂಕಾಲ ತಿರುಚೆಂದೂರು ತಲುಪಿದೆವು. ಅಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನವಿದೆ. ಇಲ್ಲಿ ದೇವಸ್ಥಾನದ ವಿಶೇಷವೇನೆಂದರೆ, ಸುಬ್ರಹ್ಮಣ್ಯರ ಪತ್ನಿಯಾದ ದೇವಸೇನೆ ಮತ್ತು ವಲ್ಲಿದೇವಿಯರಿಗೆ ಪ್ರತ್ಯೇಕ ದೇವಸ್ಥಾನವಿದೆ. ಸಮುದ್ರ ತೀರದಲ್ಲಿದೆ ಈ ದೇವಸ್ಥಾನ. ಸುಬ್ರಹ್ಮಣ್ಯ ವಿವಾಹಾನಂತರದಲ್ಲಿ ಇಲ್ಲಿ ನೆನೆಸಿದರು ಎಂದು ಸ್ಥಳಪುರಾಣ. ಇಲ್ಲಿ ಸಮುದ್ರದಲೆಗಳು ದೇವಸ್ಥಾನದ ಗೋಡೆಗಳನ್ನು ಅಪ್ಪಳಿಸಿದಾಗ "ಓಂ" ಶಬ್ದ ಕೇಳಿಸುತ್ತದೆ. ನಾನು ಕಿವಿಗೊಟ್ಟು ಕೇಳಿಸಿಕೊಂಡೆ.low frequency om. but very clear. ಇದರ physics ಏನಿರಬಹುದು ಅಂತ ಯೋಚನೆ ಮಾಡುತ್ತಿದ್ದೆ, ಅಷ್ಟರಲ್ಲಿ ನಮ್ಮನ್ನು ಹೊರಡಿಸಲಾಯ್ತು !

Z : ಅಯ್ಯೋ ಪಾಪ !

ನಾನು : :( ಅನಂತ್ ಅಂಕಲ್ ಗೆ ಸ್ವಲ್ಪ ನೆಗಡಿಯಿತ್ತು. ತಲೆಭಾರ ಶುರುವಾಗಿತ್ತು, ಹಾಗಾಗಿ ಅವರು ಬೇಗ ಹೊರಟರು. ನಾವು ತಿರುಚೆಂದೂರಿನ ಬೀಚ್ ನಲ್ಲಿ ಫೋಟೋ ತೆಗೆಸಿಕೊಂಡು ಬಸ್ಸು ಹತ್ತಿದೆವು.ಕನ್ಯಾಕುಮಾರಿಯಲ್ಲಿ ಹಾಲ್ಟು ಅಂದರು.ನಾವು ತಿರುಚೆಂದೂರು ಬಿಟ್ಟಾಗ ಏಳು ಘಂಟೆ. ಈಗ ಬರಬಹುದು, ಆಗ ಬರಬಹುದು ಕನ್ಯಾಕುಮಾರಿ ಅಂದುಕೊಂಡರೆ ನಾವು ತಲುಪಿದಾಗ ಹನ್ನೊಂದುವರೆ ! ನಾನು ಒಂದು ಪ್ಯಾಕೆಟ್ ಬಿಸ್ಕೆಟ್ಟು ತಿಂದಿದ್ದೆ, ಊಟ ಮಾಡೊಲ್ಲ ಅಂತ ಹೇಳಿ ರೂಮಲ್ಲಿ ಮಲಗಿದೆ ಅಷ್ಟೇ. ಬೆಳಿಗ್ಗೆ ಎದ್ದು ಸೂರ್ಯೋದಯ ನೋಡುವುದಿತ್ತು ಬೇರೆ. ಅಪರ್ಣಾ ಕೂಡಾ ಊಟ ಬೇಡವೆಂದು ಮಲಗಿದಳು. ಅಮ್ಮ ಅಣ್ಣ ಊಟ ಮಾಡಿ ಬಂದು ಮಲಗಿದಾಗ ಗಂಟೆ ಒಂದಂತೆ !

Z : :)) ಮುಂದೆ ?

ನಾನು : ಬೆಳಿಗ್ಗೆ ಯಥಾಪ್ರಕಾರ ನಾಲ್ಕಕ್ಕೆ ಎದ್ದು, ರೆಡಿಯಾಗಿ ಸೂರ್ಯೋದಯ ನೋಡಲು ಹೊರಟೆವು. ಆದರೆ ದುರದೃಷ್ಟವಶಾತ್ ನಮಗೆ ಸೂರ್ಯೋದಯ ನೋಡಲಾಗಲಿಲ್ಲ. ಪೂರ್ತಿ ಮೋಡ ಕವಿದಿತ್ತು. ನಮಗೆ ಸಿಕ್ಕಾಪಟ್ಟೆ ನಿರಾಸೆಯಾಯ್ತು. ಕನ್ಯಾಕುಮಾರಿ ದೇವಸ್ಥಾನಕ್ಕೆ ಹೋಗಿ, ಸ್ಪೆಷಲ್ ದರ್ಶನದ ಟಿಕೆಟ್ಟು ಕೊಂಡು ದೇವಿ ಕನ್ಯಾಕುಮಾರಿಯನ್ನು ನೋಡಿ ಧನ್ಯರಾದೆವು. ಎಂಥಾ ಸೌಂದರ್ಯ ! ಎಂಥಾ ಮೂರ್ತಿ ! ಮೂಗುತ್ತಿ ನಿಜವಾಗಲು ಎಷ್ಟು ಪಳ ಪಳ ಹೊಳಿತಿತ್ತು ಗೊತ್ತಾ, ಕಣ್ಣು ಮುಚ್ಚುವಷ್ಟು ಪ್ರಖರತೆಯಿದೆ ! ಕನ್ಯಾಕುಮಾರಿಯ ದರ್ಶನದ ನಂತರ ನಮಗೆ ಟೈಂ ಇತ್ತು.ಆಟೋ ಹಿಡಿದು ಸುಚಿಂದ್ರಂಗೆ ಹೋಗಿ ಬಂದೆವು. ಸುಚಿಂದ್ರಂ ನಲ್ಲಿ ಇಂದ್ರನು ಪಾಪದಿಂದ ಶುಚಿಗೊಂಡನು ಎಂದು ಪ್ರತೀತಿ. ಮಹಾಪತಿವ್ರತೆ ಅನಸೂಯೆ ತ್ರಿಮೂರ್ತಿಗಳನ್ನು ಮಕ್ಕಳಾಗಿಸಿದಳಲ್ಲಾ, ಅದೇ ಸ್ಥಳವೇ ಇದು. ಇಲ್ಲಿನ ಲಿಂಗದ ಆದಿಯಲ್ಲಿ ಬ್ರಹ್ಮ, ಮಧ್ಯದಲ್ಲಿ ವಿಷ್ಣು, ಮೇಲ್ಭಾಗದಲ್ಲಿ ಶಿವ ವಾಸಿಸುತ್ತಾರೆ ಎಂದು ನಂಬಿಕೆ. ದತ್ತಾತ್ರೇಯ ಮೂರ್ತಿ ಮತ್ತು ಬೃಹತ್ ಆಂಜನೇಯ ಮೂರ್ತಿ ಇಲ್ಲಿನ ಆಕರ್ಷಣೆಗಳು. ರಾಮ ಸೀತೆಯರ ದೇವಾಲಯವೂ ಇಲ್ಲಿದೆ, ಮತ್ತು ಈ ದೇವಾಲಯ ತುಂಬಾ ಕಲಾತ್ಮಕವಾಗಿದೆ. ಒಳಗಡೆ ಛಾಯಾಗ್ರಹಣ ನಿಷೇಧ.ಅಲ್ಲಿಂದ ಮತ್ತೆ ಕನ್ಯಾಕುಮಾರಿಗೆ ಹೋಗಿ ವಿವೇಕಾನಂದ ರಾಕ್ ಮೆಮೋರಿಯಲ್ ಗೆ ಹೋದೆವು.

Z : ಆಹ ? ಹೇಗಿದೆ ಜಾಗ ?

ನಾನು : ಸಿಕ್ಕಾಪಟ್ಟೆ ಚೆನ್ನಾಗಿದೆ. ಅಮ್ಮ ಉಪಾಸನೆ ಚಿತ್ರದ ಕಥೆಯನ್ನು ಸಾವಿರ ಸರ್ತಿ ನೆನಪಿಸಿಕೊಂಡರು.

Z : :))

ನಾನು : ಅಲ್ಲಿ ರಾಕ್ ಮೆಮೋರಿಯಲ್ ಹೊರಗೆ ಭಾರತ ಭೂಶಿರ ಹಾಡನ್ನೂ ಹಾಡಿದರು.

Z : :))))

ನಾನು : ಬೋಟ್ ರೈಡ್ ಸಖತ್ತಾಗಿತ್ತು. ವಿವೇಕಾನಂದರ ಮೂರ್ತಿ ಮಾತ್ರ ಎಲ್ಲರಿಗೂ ಸ್ಪೂರ್ತಿದಾಯಕ.ಕಣ್ಣಲ್ಲಿ ಏನು ಕಾಂತಿ, ಎಂಥಾ ಶಾಂತಿ ! ನಾನಂತು ಮೂಕವಿಸ್ಮಿತಳಾಗಿ ನಿಂತಿದ್ದೆ ! ಆಮೇಲೆ ಅಣ್ಣ ಎಚ್ಚರಿಸಿ ನನ್ನನ್ನು ಹೊರಬರಲು ಹೇಳಿದರು. ನನ್ನನ್ನು ಬೇಕಂತಲೇ ಪುಸ್ತಕದ ಅಂಗಡಿಯಿಂದ ದಾರಿತಪ್ಪಿಸಲಾಯ್ತು.

Z : ಎಹೆಹೆಹೆ.

ನಾನು : ಆನಂತರ ನಾವು ಮತ್ತೆ ಬೋಟ್ ನಲ್ಲಿ ವಾಪಸ್ಸು ಬಂದೆವು. ನಮಗೆ ತಿರುವಳ್ಳವರ್ ಮೂರ್ತಿಯ ಬಳಿಹೋಗಲಾಗಲಿಲ್ಲ. ದೂರದಿಂದಲೇ ಫೋಟೋ ತೆಗೆದೆ. ಜೋರಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ನನ್ನ ಟೋಪಿ ಹಾರೋಯ್ತು !

Z : ಪಾಪ. ಆಮೇಲೆ ?

ನಾನು : ಅಲ್ಲಿಂದ ಬಂದು ಕನ್ಯಾಕುಮಾರಿಯಲ್ಲಿ ಸೀರೆ ಚೆನ್ನಾಗಿ ಸಿಗುತ್ತದೆ ಎಂದು ಕೇಳ್ಪಟ್ಟೆವು ಆದ್ದರಿಂದ ಸೀರೆಗಳನ್ನು ಕೊಂಡೆವು. ಸುಧಾ ಆಂಟಿ ರೂಮಲ್ಲೇ ಇದ್ದರು, ಅನಂತ್ ಅಂಕಲ್ ಗೆ ಆರೋಗ್ಯ ಹದಗೆಡುತ್ತಿತ್ತು.

Z : ಪಾಪ.

ನಾನು : ನಾವು ಶಾಪಿಂಗ್ ಮಾಡಿ ರೂಮಿಗೆ ಬಂದು, ತಿಂಡಿ ತಿಂದು, ತಿರುವನಂತಪುರಕ್ಕೆ ಹೊರಟೆವು.ಅಲ್ಲಿನ ದೇವಸ್ಥಾನಕ್ಕೆ ಹೆಂಗಸರು ಸೀರೆಯಲ್ಲೇ ಹೋಗಬೇಕಿತ್ತು ಆದ್ದರಿಂದ ಸೀರೆ ಉಟ್ಟು ಬಸ್ಸು ಹತ್ತಿದೆವು.

Z : ಆಮೇಲೆ ?

ನಾನು : ತಿರುವನಂತಪುರಂ ತಲುಪಿದಾಗ ಸಾಯಂಕಾಲ ಎಂಟು. ದೇವರ ದರ್ಶನ ಸುಲಭವಾಗಿ ಆಯ್ತು.ನಾನು ಅಮ್ಮ ಮೊದಲಿಗರಾಗಿದ್ದರಿಂದ ನಮಗೆ ಬೇಗ ದರ್ಶನವಾಯ್ತು. ಅನಂತ ಪದ್ಮನಾಭ ಎಂಥಾ ದೊಡ್ಡ ಮೂರ್ತಿ ಅಂದರೆ ಮೂರುಬಾಗಿಲಲ್ಲಿ ಅವನ ದರ್ಶನ ಮಾಡಬೇಕು.ನಾಭಿಯಿಂದ ಬ್ರಹ್ಮಉದ್ಭವವಾಗಿರುವುದನ್ನು ನೋಡಬಹುದು.ತುಂಬಾ ದೊಡ್ಡ ದೇವಸ್ಥಾನ. ಚೆನ್ನಾಗಿದೆ.

Z : ದೇವರೊಂದು ಮೂರು ಬಾಗಿಲು ! ಆಮೇಲೆ ?

ನಾನು : ನಾನು ಅಮ್ಮ ಮೊದಲು ದರ್ಶನ ಮುಗಿಸಿ ಬಸ್ ಬಳಿ ಬಂದೆವು. ಅನಂತ್ ಅಂಕಲ್ ಗೆ ತೀರ ಹುಷಾರಿರಲಿಲ್ಲ ಆದ್ದರಿಂದ ಅವರು ಬಸ್ಸಿನಲ್ಲೇ ಇದ್ದರು. ಆದರೆ ನಾವು ಮತ್ತೆ ಬಂದಾಗ ಅವರಿರಲಿಲ್ಲ. ದೇವಸ್ಥಾನಕ್ಕೆ ಹೋಗಿದ್ದಾರ್ರೇನೋ ಅಂದುಕೊಂಡರೆ ಬಸ್ಸಿನ ಕ್ಲೀನರ್ ಬಂದು ಅಂಕಲ್ ಆಸ್ಪತ್ರೆಗೆ ಹೋಗಿರುವುದಾಗಿ ಹೇಳಿದ. ಆಂಟಿ, ಅಣ್ಣ, ಅಪರ್ಣ ಮೂವರು ದೇವಸ್ಥಾನದಲ್ಲಿಯೇ ಇದ್ದರು. ನಮಗೆ ಗಾಬರಿಯಾಯ್ತು. ನಾವು ತಕ್ಷಣ ಆಸ್ಪತ್ರೆಗೆ ಹೋದೆವು.

Z : ಅಯ್ಯಯ್ಯೋ !

ನಾನು : ಅಂಕಲ್ ಗೆ ಪೇಸ್ ಮೇಕರ್ ಅಳವಡಿಸಲಾಗಿತ್ತು. ರಾಮೇಶ್ವರದಲ್ಲಿ ಸ್ನಾನ ಮಾಡಿ ನೀರಿನ ವ್ಯತ್ಯಾಸವಾಗಿ ಉಬ್ಬುಸ ಬಂದು ಉಸಿರಾಡಲು ತೊಂದರೆಯಾಗುತ್ತಿತ್ತು. ನಾನು ಅಮ್ಮನನ್ನು ಅಲ್ಲಿಯೇ ಬಿಟ್ಟು ಮತ್ತೆ ದೇವಸ್ಥಾನಕ್ಕೆ ಓಡಿ ಹೋದೆ. ದಾರಿಯಲ್ಲೇ ಎಲ್ಲರೂ ಸಿಕ್ಕರು. ವಿಷಯ ತಿಳಿಸಿದ ತಕ್ಷಣ ಸುಧಾ ಆಂಟಿ ಮತ್ತು ಅಣ್ಣ ನನ್ನೊಂದಿಗೆ ಆಸ್ಪತ್ರೆಗೆ ಧಾವಿಸಿದರು. ECG ತೆಗೆಸಿ ಯಾವುದಕ್ಕೂ ಅವರನ್ನು ಅಡ್ಮಿಟ್ ಮಾಡುವುದು ಸೂಕ್ತ ಎಂದು ತೀರ್ಮಾನಿಸಲಾಯ್ತು. ಆಂಟಿ ಅಣ್ಣ ಮತ್ತು ಅಮ್ಮ ಅಲ್ಲಿಯೇ ಉಳಿದುಕೊಳ್ಳಲು ಸಾಧ್ಯವೇ ಎಂದು ಕೇಳಿದರು.ಅಣ್ಣ ಬೆಂಗಳೂರಿಗೆ ಫೋನ್ ಮಾಡಿ ಅವರ ಮಗನನ್ನು ವಿಮಾನದಲ್ಲಿ ಬರಲು ಹೇಳಿ, ಇವರಿಬ್ಬರನ್ನು ಮಾರನೆಯ ದಿನ ವಿಮಾನದಲ್ಲಿ ಕಳಿಸಿ ಮತ್ತೆ ನಮ್ಮೊಟ್ಟಿಗೆ ಬಂದು ಸೇರಿಕೊಳ್ಳುವುದಾಗಿ ಹೇಳಿದರು. ಆ ರಾತ್ರಿ ಪೂರ್ತಿ ನಾವು ಪ್ರಯಾಣಿಸಿ ಬೆಳಿಗ್ಗೆ ಕಾಲಟಿ ತಲುಪಬೇಕಿತ್ತು. ಹಾಗಾಗಿ ಬಸ್ಸಿನಲ್ಲಿ ಇತರರು ಇರುವುದರಿಂದ ಭಯವಿಲ್ಲೆಂದು ನಾನು ಇವರಿಬ್ಬರನ್ನು ಧೈರ್ಯವಾಗಿ ಅಲ್ಲೇ ಇರಲು ಹೇಳಿ, ಅಪರ್ಣನೊಟ್ಟಿಗೆ ಬಸ್ಸು ಹತ್ತಿದೆ. ಆವತ್ತು ಡಿಸೆಂಬರ್ ಮೂವತ್ತೊಂದು. 2008 ನೇ ವರ್ಷ ಹೀಗೆ ಕೊನೆಗೊಳ್ಳಬಹುದೆಂದು ಯಾರಿಗೂ ಗೊತ್ತಿರಲಿಲ್ಲ. ಆಂಟಿ ಮತ್ತು ಅಂಕಲ್ ಬಗ್ಗೆ ನಮಗೆ ಫೋನ್ ಮಾಡಿ ತಿಳಿಸಿ ಎಂದು ಅಣ್ಣ ಅಮ್ಮನಿಗೆ ಹೇಳಿ ನಾನು ಅಪರ್ಣ ಪ್ರಯಾಣ ಆರಂಭಸಿದೆವು. ..

Z : !!!!!!!!!!!

ನಾನು : ನಮಗೆ ಭಯವಾಗಬಹುದೆಂದು ಎಲ್ಲರೂ ಹೆದರಿದ್ದರೇ ಹೊರತು ನಮಗಂತೂ ಭಯವಗಾಲಿಲ್ಲ. ಚಿಕ್ಕಂದಿನಿಂದ ಇಬ್ಬರೇ ಇದ್ದು, ಇಬ್ಬರೇ ಓಡಾಡಿ ಅಭ್ಯಾಸವಾಗಿತ್ತು ಆದ್ದರಿಂದ ನಿರ್ಭೀತಿಯಿಂದ ಮುಸುಕು ಹೊದ್ದು ಮಲಗಿದೆವು. ಬಸ್ಸು ತನ್ನಷ್ಟಕ್ಕೆ ಸಾಗುತ್ತಿತ್ತು. ಕನ್ಯಾಕುಮಾರಿಯಲ್ಲಿ ತಗೆದ ಚಿತ್ರಗಳ ಸ್ಲೈಡ್ ಷೋ ನೋಡಿಬಿಡು. ಮಿಕ್ಕಿದ ಕಥೆ ಆಮೇಲೆ.

Sunday, September 13, 2009

ಒಂದು ಹೊಸ ಬ್ಲಾಗಿನ ಲೋಕಾರ್ಪಣೆ

Z :ಎಲ್ಲರೂ ಬ್ಲಾಗ್ ಮುಚ್ಚುತ್ತಿರುವ ಕಾಲದಲ್ಲಿ ನೀನು ಇನ್ನೊಂದು ಹೊಸ ಬ್ಲಾಗ್ ತೆರೆದಿದ್ದೀಯಲ್ಲಾ...ನೀನೇಕೆ ಹೀಗೆ ?

ನಾನು : ನಾನು ಏಕೆ ಹೀಗಪ್ಪಾ ಅಂದ್ರೆ...

Z :ಅಂದ್ರೆ...

ನಾನು : ತೋಚಿದ್ದನ್ನ ಗೀಚುವುದಕ್ಕಷ್ಟೇ ಸೀಮಿತವಾಗಿದ್ದ ಬ್ಲಾಗಿಂಗ್ ಈಗ ತನ್ನ ಸೀಮೆಯನ್ನು ವಿಸ್ತೃತಗೊಳಿಸಿದೆ. ಇಲ್ಲಿ ಈಗ ನೋಡಿದ್ದನ್ನು ಮತ್ತು ಕೇಳಿದ್ದನ್ನೂ ಸಹ ಗೀಚಬಹುದು. ನನಗೆ ಈ ಮಧ್ಯಾಹ್ನ ತೋಚಿದ ಒಂದು ಐಡಿಯಾ ನನ್ನ ಯಾವುದೇ ಬ್ಲಾಗುಗಳಲ್ಲೂ ಫಿಟ್ ಆಗದ ಕಾರಣ ನಾನೊಂದು ಹೊಸ ಬ್ಲಾಗ್ ತೆರೆಯಬೇಕಾಯ್ತು. ಜನ ಯಾವುದೇ ಕಾರಣಕ್ಕೆ ಬ್ಲಾಗ್ ಮುಚ್ಚಿದರೂ ಅದಕ್ಕೂ ನನಗೂ ಸಂಬಂಧ ಇಲ್ಲ.

Z :ಅದು ಏನ್ ಐಡಿಯಾ ಜ್ಞಾನೋದಯ ಆಯ್ತು ನಿನಗೆ ಮನೆಯ ತಾರಸಿ ಕೆಳಗಡೆ ?

ನಾನು : ನನಗಿಷ್ಟವಾದ ಹಾಡುಗಳನ್ನ ಆಡಿಯೋ ವಿಡಿಯೋಗಳನ್ನ ಹಂಚಿಕೊಳ್ಳಲು ಏಕೆ ಒಂದು ಬ್ಲಾಗನ್ನು ತೆರೆಯಬಾರದು ಅಂತ ತೋಚಿತು.

Z :ಅದನ್ನ ಇಲ್ಲೇ ಹಂಚಿಕೊಳ್ಳಬಹುದಿತ್ತು.

ನಾನು : ಉಹು.ಆಗಲ್ಲ.

Z :ಯಾಕೆ ?

ನಾನು : ಇಲ್ಲಿ ಮಾತು ಕತೆ ಇರಬೇಕು ಅಷ್ಟೇ. ಹಾಡಿಗಿಲ್ಲಿ ಅವಕಾಶವಿಲ್ಲ.

Z :ಎಲ್ಲರೂ ಮೊಬೈಲ್ ನಲ್ಲಿ ಸಿಂಗ್ ಟೋನು ರಿಂಗ್ ಟೋನು ಅಂಥಿಂಥದೆಲ್ಲಾ ಸೇರಿಸಿಕೊಂಡಿರುತ್ತಾರೆ. ಅದೇ ಕೆಲಸವನ್ನ ಇಲ್ಲೂ ಮಾಡಬಹುದಿತ್ತು.

ನಾನು : ಆದರೆ ಇದು ಸಾಮಾನ್ಯ ಮೊಬೈಲಲ್ಲವಾದ್ದರಿಂದ, ಇಲ್ಲಿ ಈ ಸೇವೆ ಉಪಲಬ್ಧವಿಲ್ಲ.

Z : X(

ನಾನು : ನೋಡು,ಕೋಪ ಮಾಡಿಕೊಂಡು ಪ್ರಯೋಜನ ಇಲ್ಲ. ಆ ಬ್ಲಾಗನ್ನ ನಾನು ಶುರುಮಾಡದೇ ಇಲ್ಲೇ ಹಂಚಿಕೊಳ್ಳುತ್ತೇನೆ ಅಂತ ಇಟ್ಟುಕೋ. ನಿನಗೆ ಬರೀ ಹೂಂ ಗುಟ್ಟುವ ಕೆಲಸ ಇರತ್ತೆ ಬಿಟ್ಟರೆ ಇನ್ನೇನು ತಾನೇ ಮಾಡೀಯಾ ? ಅಲ್ವಾ ?

Z :ಹುಂ.

ನಾನು : ಜಾಣೆ. ಆದ್ದರಿಂದ,ಬೇರೆ ಬ್ಲಾಗಿನಲ್ಲಿ ಹಾಡನ್ನು ಇನ್ನೂ ಚೆನ್ನಾಗಿ ಎಂಜಾಯ್ ಮಾಡಬಹುದು ಅನ್ನೋ ಏಕಮೇವಾದ್ವಿತೀಯ ಏಕಮಾತ್ರ ಸದುದ್ದೇಶದಿಂದ ಹೊಸ ಬ್ಲಾಗನ್ನು ತೆರೆದೆ ಅಷ್ಟೇ.

Z : ಲಿಂಕ್ ಏನು ?

ನಾನು : ತಗೋ - http://pallavi-anupallavi.blogspot.com

Z : ಜೈ.

ನಾನು : :)

Saturday, August 15, 2009

Journey to ಜಲೇಬಿನಾಡು ಭಾಗ ೬

ನಾನು : ಮಾರನೆಯ ದಿನ ಬೆಳಿಗ್ಗೆ ಅಮ್ಮ ನನ್ನ ಮೂರು ಘಂಟೆಗೆ ಎಬ್ಬಿಸಿ ನಾನು ನನ್ನ ನಿದ್ದೆಯ ಸಕಲ ರೆಕಾರ್ಡುಗಳನ್ನು ಮುರಿಯುವಲ್ಲಿ ಯಶಸ್ವಿಯಾದರು. ನಾಲ್ಕಕ್ಕೆ ಸರಿಯಾಗಿ ಬಸ್ಸು ಹತ್ತಿದ ನಾವು ಏಳಾದರೂ ತಿಂಡಿಗೆ ನಿಲ್ಲಿದೇ ಹಾಗೇ ಮುಂದುವರೆಯುತ್ತಿದ್ದೆವು. ಬಸ್ಸಿನಲ್ಲಿದ್ದ ಎಲ್ಲರು ತಿಂಡಿಗೆ ನಿಲ್ಲಿಸಲೇಬೇಕೆಂದು ಏಳುವರೆಯ ಹೊತ್ತಿಗೆ ಗಲಾಟೆ ಮಾಡಲಾರಂಭಿಸಿದರು. ಶಿವಾನಂದ ಅಂಕಲ್ ಹೋದ ಮೇಲೆ ಬಂದ ಈ ಹೊಸ ಗೈಡ್ ನಾಗರಾಜನಿಗೂ ನಮಗೂ ಯಾಕೋ ಮೊದಲದಿನದಿಂದ ಸರಿಬರುತ್ತಲೇ ಇರಲಿಲ್ಲ. ಬಸ್ಸಿನವರೆಲ್ಲರು ಅವರಿಗೆ "ಬುಸ್ ನಾಗ" ಎಂದೇ ನಾಮಕರಣ ಮಾಡಿದ್ದರು.

Z : ಎಹೆಹೆಹೆ....whatte name madamji !

ನಾನು :ನಾನಲ್ಲ...ಇದು ಎಲ್ಲ ಅಂಕಲ್ ಗಳು ಸೇರಿ ಮಾಡಿದ ಕೆಲಸ !

Z : :) :) :) ರಾಮ ರಾಮ ! ಆಮೇಲೆ ?

ನಾನು : ತಿಂಡಿ ಹೆಸರುಬೇಳೆ ಪೊಂಗಲ್ಲು. ನಾಲ್ಕು ಘಂಟೆಗೆ ಮಾಡಿದ್ದರೂ ಚೆನ್ನಾಗಿ ಇತ್ತು. ಅದನ್ನು ತಿಂದ ತಕ್ಷಣ ನನಗೆ ಹೊಟ್ಟೆ ನೋವು ಶುರುವಾಯ್ತು. ಆದರೆ ಬಸ್ಸು ಹೊರಟುಬಿಟ್ಟಿತ್ತು. ನಾವು ಹೋಗುತ್ತಿದ್ದುದು ಮದುರೈ ಗೆ. ಅರ್ಧ ಘಂಟೆ ಪ್ರಯಾಣ ಅಂದಿದ್ದರು ಆದ್ದರಿಂದ ನಾನು ಈ ವಿಷಯವನ್ನು ಅಮ್ಮ ಅಣ್ಣನಿಗೂ ತಿಳಿಸದೇ ದಕ್ಷಿಣಾ ಮೂರ್ತಿ ಸ್ತೋತ್ರ ಮತ್ತು ಧನ್ವಂತರಿ ಜಪದಿಂದಲೇ ವಾಸಿ ಮಾಡಿಕೊಳ್ಳಲು ನಿರ್ಧರಿಸಿ ಜಪ ಮಾಡತೊಡಗಿದೆ. ಆದರೆ ಹರಿಹರರಿಬ್ಬರೂ ದಯೆ ತೋರಿಸಲು ಮೀನ ಮೇಷ ನೋಡುತ್ತಿದ್ದರು ಆದ್ದರಿಂದ ನನಗೆ ಹೊಟ್ಟೆ ನೋವು ಉಲ್ಬಣಗೊಂಡಿತು. ಆದರೂ ಯಾರೊಬ್ಬರ ಬಳಿಯೂ ಬಾಯ್ಬಿಡದೇ ಒಬ್ಬಳೇ ಅನುಭವಿಸುತ್ತಿದ್ದೆ.ಆದರೆ, ಅಪರ್ಣ ಮಾತ್ರ ನನಗೇನೋ ಆಗಿದೆ ಅಂತ ಛಕ್ಕನೆ ಕಂಡುಹಿಡಿದಳು.

Z : ಹೇಗೆ ?

ನಾನು : ರಮ್ಯ ದೃಶ್ಯಾವಳಿಗಳು ಕಣ್ಣು ಮುಂದೆ ರಾಚುತ್ತಿದ್ದರೂ ಒಂದೂ ಫೋಟೋ ತೆಗೆಯದೇ ಸುಮ್ಮನಿದ್ದಿದ್ದು ಅಪರ್ಣನಿಗೆ ಅನುಮಾನ ಬರಲು ಮೊದಲ ಕಾರಣ. ಅವಳು "ಏನಾಯ್ತು ? " ಅಂದಳು. ನಾನು " ಏನಿಲ್ಲ" ಅಂದೆ. ಅವಳು ನನ್ನ ಧ್ವನಿಯಲ್ಲೇ ನನಗೇನೋ ಆಗಿದೆ ಅಂತ ಕಂಡುಹಿಡಿದುಬಿಟ್ಟಳು. ಒಂದು ಲುಕ್ ಕೊಟ್ಟಿರಬೇಕು, ನಾನು ನೋಡಲಿಲ್ಲ. ಅವಳು ಮತ್ತೆ ನಿದ್ದೆ ಮಾಡಲು ಶುರು ಮಾಡಿದಳು. ನಾನು ಜಪವನ್ನು ಮುಂದುವರೆಸಿದೆ.

Z : ಆಮೇಲೆ ?

ನಾನು : ಅರ್ಧ ಘಂಟೆ ಪ್ರಯಾಣ ಅಂದವರು ಒಂದುವರೆ ಘಂಟೆಯಾದರೂ ಮದುರೈ ಗಡಿಯನ್ನೂ ತಲುಪದಿದ್ದು ನೋಡಿ ನನಗೆ ಆತಂಕ ಹೆಚ್ಚಾಯ್ತು. ಹೊಟ್ಟೆ ನೋವು ಕೂಡಾ ಕಡಿಮೆ ಆಗುವ ಯಾವುದೇ ಕುರುಹನ್ನು ತೋರಿಸುತ್ತಿರಲಿಲ್ಲ. ಎರಡು ಘಂಟೆಯ ಆ ದುಸ್ತರದ ಪ್ರಯಾಣದ ನಂತರ ನಾವು ಮದುರೈ ತಲುಪಿದೆವು. ನಾನು ನೋವು ತಡೆಯಲಾಗದೇ ಕಣ್ಣೀರನ್ನು ಧಾರಾಕಾರವಾಗಿ ಹರಿಸುತ್ತಿದ್ದೆ. ಅಮ್ಮ ಗಾಬರಿಯಾಗಿ ಏನಾಯ್ತು ಅಂದರು. ನಾನು ನನಗೆ ಹೊಟ್ಟೆ ನೋವು ಎಂದು ಅತ್ತೆ. ಬಸ್ಸಿನಲ್ಲಿದ್ದ ಮಮತಾ ಆಂಟಿ ನಿಂಬೆಹಣ್ಣು, ನೀರು ಮತ್ತು ಉಪ್ಪು ಹಾಕಿ ಕುಡಿಸಿದರು. ಐದೇ ಸೆಕೆಂಡಿಗೆ ವಾಂತಿಯಾಯ್ತು. ಆದರೆ ನೋವು ಕಡಿಮೆಯಾಗಲಿಲ್ಲ. ಮಿಕ್ಕವರೆಲ್ಲರನ್ನು ದೇವಸ್ಥಾನಕ್ಕೆ ಕಳಿಸಿದರು. ಅಣ್ಣ ಅಪರ್ಣ ದೇವಸ್ಥಾನಕ್ಕೆ ಹೋಗಬೇಕೆಂದು, ಅಮ್ಮ ನನ್ನೊಡನೆ ಇರಬೇಕೆಂದು ಮಾತಾಯ್ತು. ಅಣ್ಣ ಹೇಳಿದರು, ನೋವು ಕಡಿಮೆಯಾಗದಿದ್ದರೆ ನಾವು ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ಹೊರಟುಬಿಡೋಣ ಅಂತ. ನಾನು ಬಸ್ಸಿನ ಕಡೆಯ ಸೀಟಲ್ಲಿ ಮಲಗಿದೆ.

ಒಂದುವರೆಘಂಟೆಯಾದ ಮೇಲೆ ಎಚ್ಚರವಾದಾಗಲೂ ನನಗೆ ನೋವು ಕಡಿಮೆಯಾಗದಿದ್ದುದನ್ನು ನೋಡಿ ಅಮ್ಮ ನಾವು ಬೆಂಗಳೂರಿಗೆ ಹೊರಡುವುದೇ ಗಟ್ಟಿ ಎಂದು ಭಾವಿಸಿದರು.ಅಲೋಪತಿಯ ಯಾವುದೇ ಮಾತ್ರೆಯೂ ನನಗೆ ಅಲರ್ಜಿ ಆದ್ದರಿಂದ ಬೆಂಗಳೂರಿಗೆ ಹೋಗಿ ನಮ್ಮ ವೈದ್ಯರನ್ನು ಸಂಪರ್ಕಿಸದೇ ಗತ್ಯಂತರವಿರಲಿಲ್ಲ. ತಕ್ಷಣ ಅಮ್ಮನಿಗೆ ಅದೇನೋ ನೆನಪಾಗಿ ನಮ್ಮ ಆಯುರ್ವೇದದ ವೈದ್ಯರು ಕೊಟ್ಟ ಔಷಧಿಗಳ ಪೊಟ್ಟಣಗಳನ್ನು ತೆಗೆದು ಮಾತ್ರೆಯೊಂದನ್ನು ಬಾಯಲ್ಲಿ ಇಟ್ಟು "ಇದನ್ನ ಜಗಿದು ತಿನ್ನು" ಅಂತ ಅಂದರು. ನಾನು ತಿಂದೆ.

Z : ಆಮೇಲೆ ?

ನಾನು : ಹತ್ತೇ ಸೆಕೆಂಡಿಗೆ ನನಗೆ ಮತ್ತೆ ವಾಂತಿಯಾಯ್ತು. ಆಮೇಲೆ ಹೊಟ್ಟೆ ನೋವು ಮಾಯ ! ಏನೋ ಒಂಥರಾ ಹಗುರವಾದ ಅನುಭವ. ಮುಖದಲ್ಲಿ ನೆಮ್ಮದಿಯ ಕಳೆ ಬಂದಿದ್ದು ನೋಡಿ ಅಮ್ಮಂಗೆ ಅರ್ಧ ನೆಮ್ಮದಿ.

Z : ಹೆಹೆ...ಹಾಗಾದ್ರೆ ಅಜೀರ್ಣ ಆಗಿತ್ತೂ ಅನ್ನು.

ನಾನು : ಹೂಂ.ಅಮ್ಮಂಗೆ ಮದುರೈ ಮೀನಾಕ್ಷಿಯನ್ನು ಜೀವನದಲ್ಲಿ ಒಂದು ಸರ್ತಿ ನೋಡಬೇಕೆಂದು ಮಹದಾಸೆ ಇತ್ತು. ನನಗೂ ! ನಾನಂದೆ, " ಅಮ್ಮ, ನಾನು ಹುಶಾರಾಗಿದ್ದೀನಿ,ನಡಿ ದೇವಸ್ಥಾನಕ್ಕೆ ಹೋಗೋಣ."
ಅಮ್ಮ:" ಆಗತ್ತಾ ? ನಿಜ್ವಾಗ್ಲು ?"

ನಾನು :"ಹೂಂ"

Z : ಆಹಾ ! ಏನು ಭಂಡ ಧೈರ್ಯ !

ನಾನು : ನಮಗಿದ್ದ ಆಸೆಯನ್ನು ಪೂರೈಸಿಕೊಳ್ಳಲು ನಮಗೆ ಇನ್ನು ಅವಕಾಶ ಸಿಕ್ಕೋದು ಅನುಮಾನ ಆಗಿತ್ತು Z. ಮದುರೈ ನಲ್ಲಿ ಶಾಪಿಂಗಿಗೆ ಟೈಂ ಬೇರೆ ಕೊಟ್ಟಿದ್ದರು. ನಾವು ದೇವಸ್ಥಾನ ನೋಡಿ ಬರುವಷ್ಟೊತ್ತಿಗೆ ಇವರು ದೇವಸ್ಥಾನ ನೋಡಿ ಶಾಪಿಂಗ್ ಸಹಿತ ಮುಗಿಸಿರುತ್ತಾರೆ ಅಂತ ಲೆಕ್ಕಾಚಾರ ಹಾಕಿದೆ. ನಾನು ಬಸ್ಸಿನಿಂದ ಕೆಳಗಿಳಿದ್ದನ್ನು ನೊಡಿ ಡ್ರೈವರ್ರು " ಏನ್ ಮೇಡಮ್...ಮಲಗಿದ್ದವರು ಎದ್ದು ಈಗ ಜಿಂಕೆ ಮರಿ ಥರ ಓಡುತ್ತಿದ್ದೀರಲ್ಲ ? " ಅಂದ. ಅದಕ್ಕೆ ನಾನು " ಹುಶಾರಾದೆ. ಮೀನಾಕ್ಷಿನ ನೋಡಕ್ಕೆ ಹೋಗಲೇಬೇಕು. ಹೊರಟೆವು" ಅಂದದ್ದೇ ಅಲ್ಲೆಲ್ಲಾದರೂ ಪೋಲೀಸಿನವರು ಕಾಣಿಸುತ್ತಾರ ಅಂತ ಹುಡುಕಿದೆ.

Z : ಪೋಲೀಸಿನವರನ್ನ ಯಾಕೆ ಹುಡುಕಿದೆ ?

ನಾನು : ಯಾಕಂದರೆ ಅವರಿಗೆ ಮಾತ್ರ ತಕ್ಕ ಮಟ್ಟಿಗೆ ಆಂಗ್ಲ ಬರೋದು. ಮಿಕ್ಕವರೆಲ್ಲರೂ ಜಲೇಬಿಪ್ರಿಯರು. ಪುಣ್ಯಕ್ಕೆ ಅಲ್ಲೊಬ್ಬಳ ಲೆಡಿಸ್ ಕಾನ್ ಸ್ಟೇಬಲ್ ಕಂಡಳು. ನಾನು ಹೋಗಿ "We need to go to meenakshi temple. how do we go ? " ಅಂದೆ.
ಅಮ್ಮ ನನ್ನ ಹಿಂದೆ ನಿಧಾನವಾಗಿ ಬಂದರು. ಕಾನ್ ಸ್ಟೇಬಲ್ "you can walk. its just 1.5 kms." ಅಂದಳು. ನಾನು " tell us the way" ಅಂದೆ. ಆದರೆ ಅಮ್ಮ, " we cant walk" ಅಂದರು. ನಾನು " ನಡಿಯಮ್ಮ ಏನ್ ಮಹಾ ದೂರ " ಅಂದೆ. ಅದಕ್ಕೆ ಅಮ್ಮ " ಈಗ ತಾನೆ ಎದ್ದಿದಿಯ. ಈ ಬಿಸಿಲಲ್ಲಿ ನಡೆದು ತಲೆ ಸುತ್ತಿ ಬೀಳು. ಅದನ್ನೂ ನೋಡ್ತಿನಿ ನಾನು. ಸುಮ್ನಿರ್ತ್ಯೋ ಇಲ್ವೋ " ಅಂತ ರೇಗಿಬಿಟ್ಟರು.

Z : ಸರಿಯಾಗಿ ಮಾಡಿದಾರೆ.

ನಾನು : ಅಷ್ಟೊತ್ತಿಗೆ ಆ ಕಾನ್ ಸ್ಟೆಬಲ್ "then take an auto or cycle rickshaw"ಅಂದಳು.
ನಾನು ಬುದ್ಧಿ ಓಡಿಸಿ " how much does it cost ?" ಅಂದೆ.
ಅವಳು " 20 rupees. Dont pay more. " ಅಂದಳು.
"thank you so much " ಅಂದದ್ದೇ ನಾವು ಸಿಕ್ಕ ಆಟೋವನ್ನು ಹತ್ತಿ ದೇವಸ್ಥಾನ ತಲುಪಿದೆವು. ದೇವಸ್ಥಾನದ ಪೂರ್ವದಿಕ್ಕಿನ ಮುಂಬಾಗಿಲಲ್ಲಿ ಮಧ್ಯಾಹ್ನ ಹನ್ನೆರಡಕ್ಕೆ ಸರಿಯಾಗಿ ಪಾದಾರ್ಪಣೆ ಮಾಡಿದೆವು. ಚಪ್ಪಲಿ ಬಿಟ್ಟು ಒಳಗೆ ಬಂದು ನೋಡಿದರೆ ಹೊರಪ್ರಾಕಾರದಿಂದ ಐದು ಸುತ್ತು ಸುತ್ತಿ ಒಳಪ್ರಾಕಾರದ ಪ್ರವೇಶದ್ವಾರಕ್ಕೆ ಕ್ಯೂ !

Z : ಸದ್ಯೋಜಾತ !

ನಾನು : ನಾವು ಅನ್ಯಾಯ ಆಯ್ತಲ್ಲಾ ಅಂತ ಉದ್ಗರಿಸಿ ಅತ್ತಿತ್ತ ನೊಡಿದೆವು.ಪಕ್ಕದಲ್ಲೊಂದು ಮೇಜಿನ ಮೇಲೆ "special darshan- 100 Rs" ಅಂತ ಬೋರ್ಡು ಹಾಕಿ ಒಬ್ಬರು ರಸೀತಿ ಪುಸ್ತಕ ಇಟ್ಟುಕೊಂಡು ಕುಳಿತಿದ್ದರು. ನಾವು ಸ್ಲೋ ಮೋಷನ್ನಲ್ಲಿ ಸ್ಪೀಡಾಗಿ ಓಡಿ ಅಲ್ಲಿ ಹೋಗಿ ಈ ದರ್ಶನದ ಟಿಕೆಟ್ ಕೊಂಡರೆ ಎಷ್ಟೊತ್ತಿಗೆ ದರ್ಶನ ಅಂತ ಹರಕು ಮುರುಕು ಜಲೇಬಿ ಭಾಷಾಜ್ಞಾನ ಬಳಸಿ ಕೇಳಿದೆವು. ಅವರು ಹತ್ತು ನಿಮಿಷ ಅಂತ ಅಂದಿದ್ದನ್ನ ಅರ್ಥ ಮಾಡಿಕೊಳ್ಳಲು ನಮಗೆ ಹತ್ತು ನಿಮಿಷ ಬೇಕಾಯ್ತು. ನಾನು ಅಮ್ಮ ಇಬ್ಬರು ಒಂದೊಂದು ಟಿಕೆಟ್ ಪಡೆದೆವು. ನಾವು ಅವರಿಗೆ ಆಂಗ್ಲದಲ್ಲಿ ಹೀಗೆ ಕೇಳಿಕೊಂಡೆವು ," We are tourists. Got separated from our group. Please let us have the darshan fast so that we can search for them in bus stand" ಅಂದೆವು. ಅದಕ್ಕೆ ಅವರು " ವಾಂಗೋ ವಾಂಗೋ" ಅಂದದ್ದೇ ಆ ಅದು ಸುತ್ತಿನ ಕ್ಯೂ ಇತ್ತಲ್ಲ, ಅದರ ಮಧ್ಯದಿಂದ ನಮ್ಮನ್ನು ನುಸುಳಿಸಿ ಹತ್ತೇ ನಿಮಿಷದಲ್ಲಿ ಪ್ರವೇಶದ್ವಾರದ ಕ್ಯೂವನ್ನೂ ಹಿಂದಕ್ಕೆ ಹಾಕಿ special darshan ಕ್ಯೂ ಬಳಿ ತಂದು ಪ್ರತಿಷ್ಟಾಪಿಸಿದರು.

Z : ಉತ್ಸವ ಮೂರ್ತಿ ಥರ.

ನಾನು : ಹೂಂ. ನಾವು ಕ್ಯೂ ನಲ್ಲಿ ನಿಂತೆವು. ಅಷ್ಟೊತ್ತಿಗೆ ಸರಿಯಾಗಿ ಅಣ್ಣ ಫೋನ್ ಮಾಡಿದರು. ಪುಣ್ಯಕ್ಕೆ ಸೈಲೆಂಟ್ ಮೋಡ್ ನಲ್ಲಿ ಇತ್ತು ಫೋನು. ಇಲ್ಲಾಂದಿದ್ದ್ರೆ ಅರ್ಚಕರು ಗುರಾಯಿಸಿರೋರು.

ಅಣ್ಣ: ಎಲ್ಲಿದಿಯ ?

ನಾನು : ಗರ್ಭಗುಡಿ ಹತ್ರ.

ಅಣ್ಣ: ಯಾಕೆ ? ಹೇಗಿದ್ಯಾ? ಒಬ್ಬಳೇ ಬಂದ್ಯಾ ? ಅಮ್ಮ ಎಲ್ಲಿ ?

ನಾನು : ದೇವರನ್ನ ನೊಡೋಕೆ ಬಂದ್ವಿ. ನಾನು ಹುಶಾರಾಗಿದಿನಿ. ಅಮ್ಮ ಇಲ್ಲೇ ಇದಾರೆ. ಅವರ ಜೊತೆಗೆ ಬಂದೆ.

ಅಣ್ಣ: ದೇವಸ್ಥಾನ ಬಸ್ ಸ್ಟ್ಯಾಂಡ್ ನಿಂದ ದೂರ ಇದೆ. ಹೇಗೆ ಬಂದ್ರಿ ?

ನಾನು: ಆಟೋ.

ಅಣ್ಣ: ನಿಜ್ವಾಗ್ಲು ಹುಷಾರಾದ್ಯಾ ಅಥ್ವಾ ಹಂಗೆ ಬಂದ್ಯೊ ?

ನಾನು : ಇಲ್ಲಾ ಅಣ್ಣ, ಆಯುರ್ವೇದದ ಒಂದು ಮಾತ್ರೆ ಇತ್ತು. ತಗೊಂಡ ತಕ್ಷಣ ಸರಿಯಾದೆ. ಮಿಕ್ಕಿದ ಕಥೆ ಎಲ್ಲಾ ಆಮೇಲೆ ಹೇಳ್ತಿವಿ. ನೀವೆಲ್ಲ ಎಲ್ಲಿದಿರ ?

ಅಣ್ಣ: ನಾವು west entrance ಇಂದ ಹೊರಗೆ ಬಂದ್ವಿ ಈಗ ತಾನೆ. ಇಲ್ಲಿ ಶಾಪಿಂಗ್ ಮಾಡ್ತಿದಿವಿ. ನಿಮ್ಮ ದರ್ಶನ ಪುಣ್ಯವಶಾತ್ ಏನಾದ್ರೂ ಬೇಗ ಆದರೆ, ಸೀದಾ west entrance ಇಂದ ಹೊರಬಂದು ಬಲಕ್ಕೆ ತಿರುಗಿ. ನಾವು ಅಲ್ಲೆ krishna silks ನಲ್ಲದಿವಿ.

ನಾನು: ಸರಿ. ಇಡ್ತಿನಿ.

ಆ ಸಮಯಕ್ಕೆ ಸರಿಯಾಗಿ ನಮ್ಮನ್ನು ದರ್ಶನಕ್ಕೆ ಒಳಕರೆಯಲಾಯ್ತು. ಮೀನಾಕ್ಷಿ ದೇವಿ ಮಾತ್ರ ಏನ್ ಸೂಪರ್ರಾಗಿದಾರೆ ಅಂದ್ರೆ....

Z : ಅಂದ್ರೆ....

ನಾನು : ನೋಡಕ್ಕೆ ಎರಡು ಕಣ್ಣು ಸಾಲದು.

Z : ಕಥೆ ಪ್ಲೀಸ್...

ನಾನು : ಮೀನಾಕ್ಷಿ ಪಾಂಡ್ಯ ರಾಜ ಸುಮಲಯಜನ ಮಗಳು. ಪಾರ್ವತಿಯ ಅವತಾರ. ಮಹಾಸುಂದರಿ. ಮಹಾ ವೀರಳು ಕೂಡ. ದೇವತೆಗಳಿಗೆಲ್ಲಾ ಯುದ್ಧದಲ್ಲಿ help ಎಲ್ಲಾ ಮಾಡ್ತಿದ್ಲಂತೆ.

Z : wow !

ನಾನು : Asusual, ಪಾಂಡ್ಯರಾಜ "ಮದುವೆ ಮಾಡಿಕೋ ಮಗಳೇ" ಅಂದರು. ಇವಳು "not now pappa..." ಅಂದಳು. ಅದಕ್ಕೆ ಪಾಂಡ್ಯರಾಜ "ನಾವು search engineಗಳು, matrimonial sitesಗಳ ಮೂಲಕ ಹುಡುಕ್ತಿರ್ತಿವಿ, ಸಿಕ್ಕಿದರೆ ನಾವು ನಿನಗೆ ಹೇಳ್ತಿವಿ, ನೀನು ಡಿಸೈಡ್ ಮಾಡು. ಇಲ್ಲಾಂದ್ರೆ ನೀನೆ ಗೂಗಲ್ ಮಾಡ್ಕೋ"ಅಂದ್ರಂತೆ. ಇವಳು ಓಕೆ ಅಂದು globe trottingu, space walkingu, star warsu ಎಲ್ಲಾ ಮಾಡ್ತಿದ್ಲಂತೆ.

Z : ಆಮೇಲೆ ?

ನಾನು : ಒಂದು ದಿನ Mr. Indra ಒಂದು SOS ಮೆಸೇಜು ಕಳ್ಸಿದ್ನಂತೆ. ಯುದ್ಧಕ್ಕೆ ಮೀನಾಕ್ಷೀ ಮೇಡಮ್ಮು ಹೆಲ್ಪಿಗೆ ಬೇಕು ಅಂತ. ಮೇಡಮ್ಮು zuyk ಅಂತ ಇಂದ್ರಲೋಕಕ್ಕೆ ಬಂದ್ರಂತೆ. At the same time, Mr. Sundareshwara (Ome of the forms of eeshwara) ಯುದ್ಧಕ್ಕೆ ಹೆಲ್ಪ್ ಮಾಡೋಣ ಅಂತ ಇಂದ್ರಲೋಕಕ್ಕೆ ಬಲಗಾಲಿಟ್ಟರು. ಮೇಡಮ್ಮು ಇವರನ್ನ ನೋಡಿದ್ದೇ clean bowled ಆಗೋದ್ರಂತೆ.

Z : ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ....

ನಾನು : ನಿನ್ನನ್ನ play back singing ಮಾಡು ಅಂತ ಹೇಳಿದ್ನಾ ನಾನು ?

Z : ಇಲ್ಲ...situation ಗೆ correct ಆಗಿ song ಹಾಡಿದೆ.

ನಾನು : ಅದೆಲ್ಲಾ ಮಾಡಕ್ಕೆ ಇಂದ್ರಲೋಕದಲ್ಲಿ ಸಿಕ್ಕಾಪಟ್ಟೆ ಜನ ಇದಾರೆ. ನೀನು ರೆಸ್ಟ್ ತಗೋ.

Z : ತಾವು ಕಥೆ ಮುಂದುವರೆಸಿ.

ನಾನು : clean bowled ಆದ Ms. ಮೀನಾಕ್ಷಿಯನ್ನು Mr. ಸುಂದರೇಶ್ವರ with great pomp and grandeur ಮದುರೈ ನಲ್ಲಿ ಮದುವೆಯಾದರಂತೆ.

Z : ಸುಮುಹುರ್ತೋಸ್ತು.

ನಾನು : ಆಮೇಲೆ ಪಾಂಡ್ಯರಾಜ ನೀವಿಬ್ರು ಸುಖವಾಗಿರಿ ಅಂತ ದೇವಸ್ಥಾನ ಕಟ್ಟಿಸಿದರಂತೆ.

Z : ಹ್ಮ್ಮ್....

ನಾನು : ಮೀನಾಕ್ಷಿ ದೇವಿಯು ಕೈಯಲ್ಲಿ ಗಿಣಿ ಹಿಡಿದಿದ್ದಾರೆ. ವಜ್ರಖಚಿತ ಕಿರೀಟ, ಪಚ್ಚೆಯ ಹಾರ, ವಜ್ರದ ಮೂಗುತಿ ಸಹಿತ ದೇವಿಯು ಸರ್ವಾಲಂಕಾರ ಭುಷಿತ ತ್ರಿಪುರಸುಂದರಿ, ಜಗಜ್ಜನನಿ. ನಾನಂತೂ ಒಂದು ಹತ್ತು ನಿಮಿಷ ಕಣ್ಣು ಮಿಟುಕಿಸದೆಯೇ ನೋಡುತ್ತಲೇ ಇದ್ದೆ. ಆಮೇಲೆ ನಮಸ್ಕಾರ ಮಾಡಿದ್ದು ನಾನು.

Z : ಆಹಾ...ಏನ್ ತಲೆ !

ನಾನು : ಇನ್ನೇನ್ ಮತ್ತೆ ! ಏನ್ ಲುಕ್ ಗೊತ್ತಾ ? I am the most powerful, but very kind and considerate ಅನ್ನೋ ಲುಕ್ಕಿದೆ ಮೀನಾಕ್ಷಿಗೆ.

Z : ಹೌದಾ ?

ನಾನು : ಹೂಂ ! ಭಯ ಭಕ್ತಿ ಆಶ್ಚರ್ಯ ಮೂರು ಆಗತ್ತೆ ಗೊತ್ತಾ ಮೀನಾಕ್ಷಿ ನ ನೋಡಿದ್ರೆ?

Z : I see.

ನಾನು :yeah. ಅಲ್ಲಿಂದ ನಾವು ಸೀದಾ ಸುಂದರೇಶ್ವರರ ಸನ್ನಿಧಿಗೆ ಹೋದ್ವಿ. ಅಲ್ಲಿ ನಾನು ಕ್ಲೀನ್ ಬೋಲ್ಡ್ ಆದೆ.

Z : ಆಹಾ....

ನಾನು : ಸುಂದರೇಶ್ವರ ಲಿಂಗದ ಸೌಂದರ್ಯದ ಮುಂದೆ hollywood, bollywood, sandalwood, kollywood ಮತ್ತು tollywood ಹೀರೋಗಳೆಲ್ಲಾ ನಗಣ್ಯರು ನನ್ನ ಪ್ರಕಾರ.

Z : ಹೌದಾ ?

ನಾನು : ಹೂಂ...ಏನ್ ಅಪೀಲಿಂಗ್ ಲುಕ್ ಗೊತ್ತಾ....ಎಂಥವರೂ fida ಆಗೋಗ್ತಾರೆ.....extremely handsome ದೇವರು.

Z : ಅದಕ್ಕೆ ಸುಂದರೇಶ್ವರ ಅಂತ ಹೆಸರಿರೋದು.

ನಾನು : ಕರೆಕ್ಟೂ...ನಾವು ದೇವಾಲಯದ ಒಳಗೆ ಬಂದೊಡನೆ ಅಮ್ಮ ಮಹಾಮೃತ್ಯುಂಜಯ ಮಂತ್ರ ಜಪಿಸುತ್ತಿದ್ದರೆ, ನಾನು "how handsome !" ಅಂತ ಉದ್ಗರಿಸಿದೆ. ಅಮ್ಮ ಮೊಟಕಿ " ಮಂತ್ರ ಹೇಳ್ಕೊಳೇ ! ಇಡೀ ಸೌತ್ ಇಂಡಿಯಾ ಟೂರಲ್ಲಿ ಇನ್ನೆಲ್ಲೂ ಹುಷಾರು ತಪ್ಪದೇ ಇರೋಹಾಗಾಗಲಿ ಅಂತ ಕೇಳ್ಕೊ." ಅಂದ್ರು. ನಾನು ಹೂಗುಟ್ಟಿದೆನಾದರೂ ಮಂತ್ರಗಳೇ ನೆನಪಾಗಲಿಲ್ಲ ಸ್ವಲ್ಪ ಹೊತ್ತು. ಆ ದೇವರ appearance, radiance and manifestation ಗೆ ಮನಸೋತು ಎಲ್ಲೋ ಕಳೆದುಹೋಗಿದ್ದೆ. ಒಂದೈದು ನಿಮಿಷ ಆದಮೇಲೇನೆ ನನಗೆ "ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋ ನಮಃ" ನೆನಪಾದದ್ದು !

Z : hopeless fellow ! ಮೊದಲು ಭಕ್ತಿ ಮುಖ್ಯ, ಆಮೇಲೆ ಲುಕ್ಕೆಲ್ಲ. ಮಂತ್ರನ ಬಾಯ್ಬಿಟ್ಟು ಹೇಳೋಬದಲು ದೇವರನ್ನ ಬಾಯ್ಬಿಟ್ಟುಕೊಂಡು ನೋಡ್ತಿದ್ಯಲ್ಲಾ....ಏನನ್ನೋಣ ಇದಕ್ಕೆ ?

ನಾನು : ಏನು ಅನ್ನಬೇಡ. ನನಗೆ ಅಲ್ಲಿ ಕಾಡಿದ್ದು ಒಂದೇ ವಿಚಾರ. ಅರುಣಾಚಲೇಶ್ವರನ ಲಿಂಗ firm, invincible and adamant ಅಂತ ಅನ್ನಿಸಿದರೆ ಚಿದಂಬರದಲ್ಲಿ ಲಿಂಗ creative and intelligent. ಒಂಥರಾ research scientist look ಇದೆ.ಶ್ರೀರಂಗದಲ್ಲಿ calm and composed ಈಶ್ವರ ತಂಜಾವೂರಿನಲ್ಲಿ magnificent and majestic. ಒಬ್ಬನೇ ಈಶ್ವರ ಅವನು, ಆದರೆ ಒಂದು ಕಡೆ ಇದ್ದ ಹಾಗೆ ಇನ್ನೊಂದು ಕಡೆ ಇಲ್ಲ.Above all, Sundareshwara is the best and most beautiful of all lingas. As a material scientist, I wonder if it is the property of the stone or is it by the power of vibration of that place that we feel so.

Z : ನಿಮ್ಮಂಥೋರೆಲ್ಲಾ ದೇವಸ್ಥಾನಕ್ಕೆ ಹೋಗಲೇಬಾರದು.

ನಾನು : ಯಾಕಮ್ಮ ?

Z : ಲೋಕದ ಆರೋಗ್ಯಕ್ಕೆ ಒಳ್ಳೇದಲ್ಲ.

ನಾನು : shut up ok ? ನಾನು ಏನಂದೆ ಅಂಥದ್ದು ಅಂತ ?

Z : ನಿಮ್ಮಂಥೋರನ್ನೆಲ್ಲಾ ಬಿಟ್ಟರೆ, "ಇಲ್ಲಿ metallurgical microscope ಇಡಕ್ಕೆ ಸ್ವಲ್ಪ ಜಾಗ ಮಾಡ್ಕೊಡಿ, ನಾವು ಲಿಂಗನ ಏನು ಮಾಡಲ್ಲ, ಬರಿ grain boundary determine ಮಾಡಿ crystal structure determine ಮಾಡಿ speciality ಕಂಡುಹಿಡಿತಿವಿ ಅಷ್ಟೇ " ಅಂತಿರಾ !

ನಾನು :ಹಂಗೆಲ್ಲಾ ಅನ್ನಲ್ಲ...ನೀ ಏನೇ ಅನ್ನು, every linga is special.

Z : ಹ್ಮ್ಮ್...ಏನೋ ಪಾ.ಮುಂದೆ ?


ನಾನು :ಅಮ್ಮ ಕೈಹಿಡಿದು ಎಳಕೊಂಡು ಬರದೇ ಹೋಗಿದ್ದಿದ್ದರೆ ನಾನು ಖಂಡಿತಾ ದೇವಸ್ಥಾನದಿಂದ ಹೊರಬರುವ ಮೂಡ್ ನಲ್ಲೇ ಇರಲ್ಲಿಲ್ಲ. ನೀಟಾಗಿ west entrance ಇಂದ ಹೊರಬಂದ ಮೇಲೆ ನಮಗೆ ಜ್ಞಾನೋದಯವಾಯ್ತು, ನಾವು ಚಪ್ಪಲಿಯನ್ನ east entrance ನಲ್ಲಿ ಬಿಟ್ಟಿದ್ದೇವೆ ಅಂತ.

Z : ಭೇಷ್.

ನಾನು :ಮತ್ತೆ ವಾಪಸ್ಸು ಸುತ್ತುಹೊಡೆದೆವು. ಅಣ್ಣ ಅಷ್ಟೊತ್ತಿಗೆ ಫೋನ್ ಮಾಡಿ "ಎಲ್ಲಿ ಕಳೆದುಹೋಗಿದಿರಾ ?" ಅಂದ್ರು.ನಾವು ಚಪ್ಪಲಿ ಮರ್ತಿದಿವಿ, ಹಾಕೊಂಡ್ ಬರ್ತಿವಿ ಅಂದು, ಮತ್ತೆ ರೌಂಡ್ ಹೊಡೆದು, ಅಣ್ಣ ಇರೋ ಜಾಗಕ್ಕೆ ತಲುಪಿದೆವು. ಮದುರೈ ಗೆ ಹೋದ ಸವಿ(!) ನೆನಪಿಗಾಗಿ ಒಂದು ಡ್ರೆಸ್ ಮಟೀರಿಯಲ್ಲನ್ನು ಖರೀದಿಸಿದೆವು. ಅಮ್ಮ ಒಂದು ಸೀರೆ ತಗೊಂಡರು. ಅಲ್ಲಿಂದ ಬಸ್ ಸ್ಟ್ಯಾಂಡ್ ಗೆ ಆಟೋರಿಕ್ಷಾ ಲಿ ಬಂದೆವು. ಮಜವಾಗಿತ್ತು. ಅಲ್ಲಿಂದ ಬಂದು ಬಸ್ಸಲ್ಲಿ ಕೂತ ಮೇಲೆ ಶುರುವಾಯ್ತು ನೊಡಿ ನನಗೆ installment ನಲ್ಲಿ ಗೀತೋಪದೇಶ....

Z: ಎಹೆಹೆ...ಏನಂತ ?

ನಾನು : "ಚೆನ್ನಾಗ್ ತಿನ್ನಬೇಕು ನೀನು, ಏನ್ ಕೋಳಿ ಕಾಳು ಕೆದಕಿದ ಹಾಗೆ ಊಟ ಕೆದಕುತ್ತೀಯಾ ? nanotechnology ನಲ್ಲಿ research ಮಾಡ್ತ್ಯಾ ಅಂದ ಮಾತ್ರಕ್ಕೆ nanograms ನಲ್ಲಿ ಊಟ ಮಾಡಬಾರದಮ್ಮ...." ಅಂತ ಒಂದಿಷ್ಟು ಜನ ಅಂಕಲ್ಗಳು..
"ನಾವು ದೇವರನ್ನ ಬೇಡ್ಕೊಂಡ್ವಿ, ಸದಾ ಕಾಲ ಬುಕ್ ಓದ್ತಿರತ್ತೆ ಮಗು, ಯಾವಾಗ್ ಯಾವಗ್ಲೋ ಎಲ್ಲೆಲ್ಲೋ ಫೋಟೋ ತೆಗಿತಿರತ್ತೆ, ಚಿನಕುರುಳಿ ಅಂಥಾ ಮಗುನ ಹಿಂಗೆ ಮಲ್ಕೊಂಡಿರೋದನ್ನ ನೋಡಕ್ಕಾಗದಿಲ್ಲ, ಹುಷಾರು ಮಾಡಮ್ಮ... ಅಂತ ನಾವು ಕೇಳ್ಕೊಂಡ್ವಿ, ಮೀನಾಕ್ಷಮ್ಮ ದಯೆ ತೋರ್ಸ್ಬಿಟ್ಲು, ಸಿಕ್ಕಾಪಟ್ಟೆ ಮಹಿಮೆ ಇದೆ ಸ್ಥಳಕ್ಕೆ " ಅಂತ ಆಂಟಿಗಳು..ಮಧ್ಯ ನಾನು ಬಡಪಾಯಿ !

Z : ಎಹೆಹೆಹೆ...ಅವರಿಗೇನು ಗೊತ್ತು ಪಾಪ. ನೀನು ಚಪಾತಿ, ಅವಲಕ್ಕಿ, ಸಾರನ್ನ ಮತ್ತು ಮೊಸರನ್ನ ಪ್ರಿಯೆ ಅಂತ.

ನಾನು :ನನಗೆ ಎಲ್ಲದಕ್ಕಿಂತ ಮೊಸರನ್ನ ನೇ ಹೆಚ್ಚು ಇಷ್ಟ. ಅದಕ್ಕೆ ನಿಂಬೆಕಾಯೋ ಮಾವಿನಕಾಯೋ ಉಪ್ಪಿನಕಾಯಿ ಇದ್ದುಬಿಟ್ಟರೆ, ಅಷ್ಟು ಸಾಕು ನನಗೆ. ಅದಕ್ಕೆ ಆವತ್ತೆ ಪ್ರತಿಜ್ಞೆ ಮಾಡಿದೆ, "ಎಲ್ಲೇ ಹೋಗಲಿ, ಏನೇ ಮಾಡಲಿ, ನಾನು ಮೊಸರನ್ನಾ ನೇ ತಿನ್ನೋದು" ಅಂತ.

Z : ಗುಡುಗು, ಸಿಡಿಲು, ಮಿಂಚೇನಾದ್ರು ಬಂತಾ ಈ ಪ್ರತಿಜ್ಞೆಗೆ ?

ನಾನು :ಉಹು.

Z : ಪರ್ವಾಗಿಲ್ಲ. ಆಮೇಲೆ ?

ನಾನು :ಊಟದ ಸಮಯದಲ್ಲಿ ನಾನು ಬರೀ ಮೊಸರನ್ನ ತಿಂದೆ. ಅಲ್ಲಿಂದ ಸೀದಾ ರಾಮೇಶ್ವರಕ್ಕೆ ಹೊರಟೆವು.ದಾರಿಯಲ್ಲಿ ಸಮುದ್ರದ ಫೋಟೋನ ಸಮೃದ್ಧವಾಗಿ ತೆಗೆದೆ. ಅಲ್ಲಿಂದ ದೇವಾಲಯಕ್ಕೆ ಹೋಗುವ ಮುನ್ನ ಒಂದು ಲಾಡ್ಜಲ್ಲಿ ನಮ್ಮನ್ನು ಇಳಿಸಲಾಯ್ತು. ಮೈನ್ ಲ್ಯಾಂಡ್ ನಲ್ಲಿ ಬಸ್ಸಿತ್ತು. ನಾವು ಆಟೋ ಹಿಡಿದು, ಸೇತುವೆ ಮೂಲಕ ರಾಮೇಶ್ವರ ತಲುಪಿದೆವು.

Z :ರಾಮ ಕಟ್ಟಿಸಿದ್ದಾ ?

ನಾನು : ಅದು ಸಮುದ್ರದ ಕೆಳಗಿದೆ ಕಣೇ...ಇದು ಸಮುದ್ರದ ಮೇಲಿದೆ.ಅಲ್ಲಿ ಹೋಗಿ, ರೆಸ್ಟ್ ತಗೊಂಡು ದೇವಾಲಯಕ್ಕೆ ಹೋದೆವು. ದರ್ಶನ ಸೂಪರ್ ಫಾಸ್ಟಾಗಿ ಆಯ್ತು. ಅಲ್ಲಿಂದ ಸೀದಾ ಶೃಂಗೇರಿ ಶಂಕರ ಮಠದ ಶಾಖೆಗೆ ಬಂದು, ನಮ್ಮ ತಂದೆ ಮತ್ತು ಅನಂತ್ ಅಂಕಲ್ ಮಾಡಬೇಕಿದ್ದ ಅಪರಕರ್ಮವಿಧಿಗಳ ಬಗ್ಗೆ ವಿಚಾರಿಸಿಕೊಂಡೆವು. ಅವರೇ ಅದೆಲ್ಲಾ ಮಾಡಿಸುವುದಾಗಿ ಹೇಳಿ, ಮಾರನೆಯದಿನದ ಮುಂಜಾವಿನ ಸ್ಫಟಿಕಲಿಂಗದ ದರ್ಶನ ಮತ್ತು ಇಪ್ಪತ್ತೆರಡು ಬಾವಿ ಸ್ನಾನಕ್ಕೆ ಕೂಡ ವ್ಯವಸ್ಥೆ ಮಾಡುತ್ತೇವೆಂದರು. ನಾವು ತಲೆಯಲ್ಲಾಡಿಸಿ ಬೆಳಿಗ್ಗೆ ಎಷ್ಟೊತ್ತಿಗೆ ಮಠಕ್ಕೆ ಬರಬೇಕು ಎಂದು ಕೇಳಿದೆವು. ಅವರು "ಮೂರುವರೆ" ಅಂದರು.

Z :ಉಹಹಹಹಾ.....

ನಾನು :ನಗಬೇಡ. ನನಗಾಗಲೇ ಅಭ್ಯಾಸ ಆಗೋಗಿತ್ತು ಮೂರುಘಂಟೆಗೆ ಏಳೋದು. ಸರಿ ಅಂತ ಗೋಣಲ್ಲಾಡಿಸಿ, ಮತ್ತೆ ಲಾಡ್ಜಿಗೆ ಬಂದು ಊಟ ಮಾಡಿ ಮಲಗಿದೆವು.ಫೋಟೋಸ್ ನೋಡು, ಮಿಕ್ಕ ಕಥೆ ಆಮೇಲೆ.

Monday, August 3, 2009

ಮತ್ತೊಂದು ಆಹ್ವಾನ

Z : ಮತ್ತೊಂದು ಆಹ್ವಾನ ?

ನಾನು : ಹು.

Z : ಏನ್ ವಿಶೇಷ ?

ನಾನು : ಪ್ರಣತಿ ಗೊತ್ತಲ್ಲ ?

Z : ಹು.

ನಾನು : ಗಮಕ ಸುಧಾ ಧಾರೆ ಕಾರ್ಯಕ್ರಮದ ನಂತರ ಪ್ರಣತಿ ಮತ್ತೊಂದು ಕಾರ್ಯಕ್ರಮಕ್ಕೆ ರೆಡಿಯಾಗಿದೆ.

Z : ರೆಡಿ...ಸ್ಟೆಡಿ...ಗೋ !!

ನಾನು : ಹಾಂ ಅದೇ ನೆ. ಎರಡು ಪುಸ್ತಕಗಳ ಬಿಡುಗಡೆ ಇದೆ.

Z : ಯಾವ್ ಯಾವ್ದು ?

ನಾನು : ನಮ್ಮ silent ಸುಶ್ರುತ ...

Z : ಹಾಂ ? ಸುಶ್ರುತ ಸೈಲೆಂಟಾ ?

ನಾನು : ಅಲ್ಲ, ಆದ್ರೆ ಹಂಗಂದುಕೋಬೇಕ್ ನಾವು. ಯಾಕಂದ್ರೆ ಅವರ ಬ್ಲಾಗ್ ಹೆಸರೇ ಮೌನಗಾಳ ಅಂತ. ಸೈಲೆಂಟಾಗಿ ಗಾಳ ಹಾಕಿ ಹಾಕಿ ಸಿಕ್ಕ ರುಚಿ ರುಚಿಯಾದ ಮೀನುಗಳನ್ನೆಲ್ಲ " ಹೊಳೆಬಾಗಿಲು" ಕೃತಿಯಲ್ಲಿ ನಮಗೆ introduce ಮಾಡಿಕೊಡುತ್ತಿದ್ದಾರೆ.

Z : I see. ಇನ್ನೊಂದು ಪುಸ್ತಕ ?

ನಾನು : ನಮ್ಮ lazy ಶ್ರೀನಿಧಿ...

Z : lazy ಅನ್ನೋ ಗುಣವಾಚಕ ಇಟ್ಕೊಂಡು ಪುಸ್ತಕ ಎಲ್ಲ ಬರ್ದ್ರೆ ನಾವ್ ಏನ್ ಅಂದುಕೋಬೇಕು ?

ನಾನು : lazy ಅನ್ನೋದು ಅವರನ್ನ ವರ್ಣಿಸಲು ಬಳಸಿರೋ ತಪ್ಪು ಗುಣವಾಚಕ ಅಂತ.

Z : ಒಹ್ಹೋ...

ನಾನು : ಆಹ್ಹಾ. ಮೀಡಿಯಾದಲ್ಲಿರೋರು ಯಾವತ್ತಾದ್ರು, ಯಾವಾಗ್ಲಾದ್ರು lazy ಆಗಿರಕ್ಕಾಗತ್ತಾ ಹೇಳು ?

Z : correct correct.

ನಾನು : ಶ್ರೀನಿಧಿ ಕವನಗಳನ್ನ ಬರೆದು ಒಂದು ಸಂಕಲನವನ್ನ ನಮಗೆ ನೀಡುತ್ತಿದ್ದಾರೆ.ಮೀಡಿಯಾದಲ್ಲಿ ಸಖತ್ ಬ್ಯುಸಿ ಆಗಿರೋ ಅವರು, ಅವರಿಗೆ ಸಿಕ್ಕ free time ಗೆ ಅನುಗುಣವಾಗಿ ಕವನದ ವಿಷಯ, ಸಾಂದ್ರತೆ, ಉದ್ದ, ಅಗಲ ಇದಿಯಾ ಅಂತ ಕಂಡುಹಿಡಿಯಕ್ಕೆ ಹೋಗ್ತಿದಿನಿ ನಾನು.

Z : ಇಲ್ಲೂ ರಿಸರ್ಚಾ ? !

ನಾನು : ಇನ್ನೇನ್ ಮತ್ತೆ ? ನನ್ನ ಕೈಗೆ ಮೈಕ್ ಸಿಕ್ಕರೆ....

Z : ಸಭೆಯ ಗ್ರಹಚಾರ ಕೆಟ್ಟಿದ್ದರೆ ಇದು ಸಾಧ್ಯ.

ನಾನು : ಶ್ಹ್ಹ್ಹ್ !!! ನನ್ನ ಕೈಗೆ ಮೈಕ್ ಸಿಕ್ಕರೆ, ಅದು ಯಾವ ಮಾಯೆಯಲ್ಲಿ ನೀವು ಕವನ ಬರೆದಿರಿ ಶ್ರೀನಿಧಿ ಅಂತ ಶ್ರೀನಿಧಿಯನ್ನ, ಮತ್ತು ನಿಮ್ಮ ಗಾಳಕ್ಕೆ ಯಾವ ಎರೆಹುಳು ಹಾಕಿದ್ದೀರಿ ಸುಶ್ರುತ ಅಂತ ಸುಶ್ರುತನ್ನ ಕೇಳಿಯೇ ಬಿಡುತ್ತೇನೆ.

Z : ಇಂಟರ್ ವ್ಯೂ ಥರ.

ನಾನು : ಹೂಂ.

Z : media person ಗೆ interview ಮಾಡಿದ್ರೆ ಸೂರ್ಯಂಗೆ ಟಾರ್ಚ್ ಬಿಟ್ಟಂಗೆ ಆಗತ್ತೆ.

ನಾನು : ಹೌದು, ಆದರೆ ವಿಧಿಯಿಲ್ಲ.

Z : ನಿನಗೊಬ್ಬಳಿಗೇನಾ ತಲೆ ಇರೋದು ? ಅವ್ರಿಗೂ ತಲೆ ಇದೆ. ಅವರು ಇಂಥಾ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡಕ್ಕೆ ಮೊದಲೇ ರೆಡಿಯಾಗಿರ್ತಾರೆ. ಇಲ್ಲಾಂದ್ರೆ ಒಂದು eternal answer ಕೊಡ್ತಾರೆ- "ಹೇಳುವುದಕ್ಕೂ ಕೇಳುವುದಕ್ಕೂ ಸಮಯವಲ್ಲ ! " ಅಂತ !!!

ನಾನು : ಹೌದಾ ? ಇದೇ ಮಾತಾ ?

Z : bets ತಗೊ.

ನಾನು : ಸರಿ ಬಾ ಅವತ್ತು ಮತ್ತೆ. ಇಬ್ಬರೂ ನೋಡಿಯೇ ಬಿಡೋಣ.

Z : ಯಾವತ್ತು ?

ನಾನು : ಆಗಸ್ಟ್ ಒಂಭತ್ತು, ಬೆಳಿಗ್ಗೆ ಹತ್ತು ಮೂವತ್ತಕ್ಕೆ ಸುಚಿತ್ರ ಫಿಲಂ ಸೊಸೈಟಿಯಲ್ಲಿ. ಇಲ್ಲಿದೆ ಡಿಟೈಲ್ಸು, ನೋಡು.



Z : ಓಹ್ ! ನಾಗತಿಹಳ್ಳಿ ಚಂದ್ರಶೇಖರ್ ಸರ್, ಎಚ್. ಎಸ್. ವಿ ಸರ್ ಮತ್ತು ಜೋಗಿ ಸರ್ ಎಲ್ಲಾ ಬರ್ತಿದಾರೆ !

ನಾನು : ಹೂಂ ಮತ್ತೆ !

Z :ನಾನು ಬರ್ತಿನಿ.

ನಾನು : ಬರದೇ ಇರೋ ಹಾಗೇ ಇಲ್ಲ ! ಗೊತ್ತಲ್ಲ ?

Monday, July 13, 2009

ಗಮಕ ಸುಧಾ ಧಾರೆ



ನಾನು + Z : ಖಂಡಿತಾ ಬನ್ನಿ. ಪ್ರಣತಿ ಸಂಸ್ಥೆಯು ಹಮ್ಮಿಕೊಂಡಿರುವ ಈ ವಿನೂತನ ಕಾರ್ಯಕ್ರಮಕ್ಕೆ ತಪ್ಪದೆ ಬಂದು ನಮ್ಮನ್ನೆಲ್ಲ ಪ್ರೋತ್ಸಾಹಿಸಿ !

Sunday, June 28, 2009

Journey to ಜಲೇಬಿನಾಡು ಭಾಗ ೫

ನಾನು : ಬೆಳಿಗ್ಗೆ ಅಲಾರಂ ಹೊಡೆಯುವ ಮುಂಚೆನೆ ಅಮ್ಮ ಬಾಗಿಲು ಬಡಿದು ಎಬ್ಬಿಸಿದರು.

Z : ಅಲಾರಂ ಇಟ್ಟಿದ್ದು ವೇಸ್ಟ್ ಆಯ್ತು ಅಂತ ನೀನು ಗೊಣಗಿರ್ತೀಯಾ.

ನಾನು : ಯೆಸ್. ಗೊಣಗಿದೆ. ನೋಡಿದ್ರೆ ಮೂರುಕಾಲಿಗೇ ಎಬ್ಬಿಸಿದ್ದಾರೆ !

Z : ಹೆಹೆಹೆಹೆ...

ನಾನು : ತೀರಾ ಕೋಪ ಬಂತು ನಂಗೆ. ಮತ್ತೆ ಮಲಗಲು ಹೊರಟೆ. ಅಮ್ಮ - " ಮೊದಲು ಜಂಭುಕೇಶ್ವರನನ್ನ ನೋಡಿಕೊಂಡು ರಂಗನಾಥ ದೇವಸ್ಥಾನದಲ್ಲಿ ಕ್ಯೂ ನಿಲ್ಲಬೇಕು. ಆಮೇಲೆ ಬಸ್ಸಿನಲ್ಲಿ ಹೋಗುವಾಗ ನಿದ್ದೆ ಮಾಡು." ಅಂದರು.

ನಾನು "ಫೋಟೋ ?" ಅಂತ ನಿದ್ದೆಗಣ್ಣಲ್ಲೇ ಕೇಳಿದೆ.

"Not allowed inside the temple. ಅಂತ ಶಿವಾನಂದ್ ಅವರು ಹೇಳಿ ನೆನ್ನೆಯೇ ಹೊರಟುಬಿಟ್ಟರು. ಈಗಿನಿಂದ ನಾಗರಾಜ್ ಅವರು ಗೈಡು."ಅಂದರು ಅಮ್ಮ.

ಹಿಂದಿನ ದಿನದ ರಶ್ಶು ನೋಡಿಯೇ ನನಗೆ ಕ್ಯಾಮೆರಾ ತಗೊಂಡು ಹೋಗೋದು ಸೇಫ್ ಅಲ್ಲ ಅನ್ನಿಸಿತ್ತು. ಮತ್ತೂ, ಕ್ಯಾಮೆರಾ ಒಳಗೆ ತೆಗೆದುಕೊಂಡು ಹೋಗಲು ಐವತ್ತು ರುಪಾಯಿ ಶುಲ್ಕ ವಿಧಿಸಿದ್ದರು. ಹಿಂದಿನ ದಿನ ಆ ಶುಲ್ಕ ಪಾವತಿಸಿಯೇ ಒಳ ನಡೆದಿದ್ದಾಯ್ತು. ಹಾಗಾಗಿಯೇ ಶ್ರೀರಂಗದ ಕೆಲವು ಫೋಟೋಗಳನ್ನು ಮಾತ್ರ ತೆಗೆಯಲು ಸಾಧ್ಯವಾಗಿದ್ದು. ಐದನೆಯ ಪ್ರಾಕಾರದಿಂದ ಛಾಯಾಗ್ರಹಣ ನಿಷೇಧ. ಕ್ಯಾಮೆರಾ ಗೂ ಸುಸ್ತಾಗಿತ್ತು. ಅದನ್ನ ಹಾಗೆಯೆ ಹೋಟೆಲ್ಲಲ್ಲಿ ಇಟ್ಟು , ಥಣ್ಣನೆ ಕಾವೇರಿ ನೀರಲ್ಲಿ ಸ್ನಾನ ಮಾಡಿ ನನ್ನ ಬ್ಯಾಗ್ ಪ್ಯಾಕ್ ಮಾತ್ರ ಹೊತ್ತುಕೊಂಡು ಬಸ್ ಹತ್ತಿದೆ. ನಾಲ್ಕು ಕಾಲು ಬೆಳಿಗ್ಗೆ ಆಗ. ಹತ್ತು ಹದಿನೈದು ನಿಮಿಷಕ್ಕೆಲ್ಲಾ ನಾವು ಜಂಬುಕೇಶ್ವರನ ದೇವಸ್ಥಾನ ತಲುಪಿದೆವು.

Z : ಹೇಗಿದೆ ದೇವಸ್ಥಾನ ?

ನಾನು : just superb. ಈ ದೇವಸ್ಥಾನಕ್ಕೆ ಐದು ಪ್ರಾಕಾರಗಳಿವೆ, concentric circles ಥರ.

Z : ಹೌದಾ ?

ನಾನು : ಹೂಂ. ನಾಲ್ಕನೆಯ ಪ್ರಾಕಾರದಲ್ಲಿ Mrs. jambukeshwara ಇದ್ದಾರೆ in the name of ಅಖಿಲಾಂಡೇಶ್ವರಿ. ಏನ್ powerful look ಇದೆ ಗೊತ್ತಾ ? ನೋಡಿದ್ರೆ ಗಡ ಗಡ ನಡುಕ ಬರತ್ತೆ.

Z : ಆಹಾ ?

ನಾನು : ಇನ್ನೇನ್ ಮತ್ತೆ ? ಅಖಿಲಾಂಡೇಶ್ವರಿ ಅಂದ್ರೆ ಸುಮ್ಮನೆ ನಾ ?

Z : ಅದು ಸರಿ ಅನ್ನು. ಆಮೇಲೆ ಮುಂದೆ ?

ನಾನು : ಮುಂದೆ ಇರೋದು Mr. jambukeshwara.

Z :Story of this place please...

ನಾನು : yeah sure. ಕೀರ್ತನಾರಂಭ ಕಾಲದಲ್ಲಿ, ಜಲೇಬಿನಾಡಿನ ಪುರಾಣಗಳಲ್ಲಿ, ನಾನು ಪಂಚಭೂತ ಲಿಂಗಗಳ ಬಗ್ಗೆ ಮಾತಾಡಿದ್ದೆ. ನೆನಪಿದೆಯಾ ?

Z :ಇಲ್ಲ.

ನಾನು : ನೆನಪಿಟ್ಕೋಬೇಕು ! ನೆನಪಿಲ್ಲ ಅಂದ್ರೆ ಕಾಲ್ ಹಿಸ್ಟರಿ ತೆಗ್ದು ನೋಡು. ತಿರುವಣ್ಣಾಮಲೈ ನಲ್ಲಿ ಅಗ್ನಿ, ಚಿದಂಬರದಲ್ಲಿ ಆಕಾಶರೂಪದಲ್ಲಿ Mr. sadyojaata ಇದ್ದಾರೆ ಅಂತ ಹೇಳಿರ್ಲಿಲ್ವಾ ?

Z :ಯೆಸ್ ಯೆಸ್. ನೆನಪಾಯ್ತು . ಮುಂದೆ ?

ನಾನು : ಈ ದೇವಸ್ಥಾನದಲ್ಲಿ ಪರಮೇಶ್ವರ ನೀರಿನ ರೂಪದಲ್ಲಿದ್ದಾನೆ. ಅದಕ್ಕೆ ಈ ಲಿಂಗಕ್ಕೆ ಅಪ್ ಲಿಂಗ ಅಂತಾರೆ.

Z : up ?

ನಾನು : English up ಅಲ್ವೆ...ಸಂಸ್ಕೃತ ಅಪ್. ಅಪ್ ಅಂದ್ರೆ ನೀರು ಸಂಸ್ಕೃತದಲ್ಲಿ !

Z : ok ok...continue.

ನಾನು : ಇಲ್ಲಿ ಲಿಂಗದ ಹಿಂದೆಗಡೆ ಒಂದು ನೇರಳೆ ಹಣ್ಣಿನ ಮರ ಇದೆ. ಅದು ದಿನಕ್ಕೆ ಒಂದೊಂದು ಹಣ್ಣನ್ನು ಈಶ್ವರನಿಗೆ ಸಮರ್ಪಿಸತ್ತೆ. ಅದಕ್ಕೆ ಈ ದೇವರನ್ನ ಜಂಭುಕೇಶ್ವರ ಅಂತ ಕರಿತಾರೆ.

Z : very interesting.

ನಾನು : yeah yeah...Gravity you see...Its very interesting !

Z : :)

ನಾನು : ನಾವು ಬೆಳಿಗ್ಗೆ ಬೆಳಿಗ್ಗೆ ಹೋಗಿದ್ದೆವಲ್ಲ...ನಮಗೆ ದೇವರೇ ಕಾಣಲಿಲ್ಲ. ಗರ್ಭಗುಡಿ ಸ್ವಲ್ಪ ಕತ್ತಲು ಕತ್ತಲಾಗಿತ್ತು. ಅದಕ್ಕೆ ನಾನು ಏನು ಮಾಡಿದೆ ಗೊತ್ತಾ ?

Z : ಏನ್ ಮಾಡಿದೆ ?

ನಾನು : ಟಾರ್ಚ್ ಆನ್ ಮಾಡಿ ಲಿಂಗದ ಮೇಲೆ ಬೆಳಕು ಬೀರಿ ದೇವರ ದರ್ಶನ ಮಾಡಿದೆ.

Z : what ? ಸಹಸ್ರ ಕೋಟಿ ಸೂರ್ಯ ಪ್ರಭ ದೇವರ ಮೇಲೆ ಟಾರ್ಚ್ ಬಿಟ್ಟೆಯಾ ?

ನಾನು : ಹೂಂ...

Z :ಕರ್ಮ ಕರ್ಮ !

ನಾನು : ಇನ್ನೇನ್ ಮಾಡಲಿ ? ನಿಜ್ವಾಗ್ಲು ಮೂರ್ತಿ ಕಾಣಿಸ್ತಿರ್ಲಿಲ್ಲ. ಅರ್ಚಕರು ಸುತ್ತ ಮುತ್ತ ಇರ್ಲಿಲ್ಲ. ಅದಕ್ಕೆ ಧೈರ್ಯವಾಗಿ ಬ್ಯಾಗ್ ಪ್ಯಾಕ್ ಇಂದ ಟಾರ್ಚ್ ತೆಗೆದು, ಆನ್ ಮಾಡಿ, ದೇವರನ್ನ ನೋಡಿದೆ. Very calm and composed posture.

Z : !!!!!!!!!!!!!!!!!!!!!!!!!!!

ನಾನು : ಹೂಂ....ದೇವಸ್ಥಾನದ ಪ್ರಾಕಾರ ಎಲ್ಲ ತುಂಬಾ ಚೆನ್ನಾಗಿದೆ. ಅನ್ಯಾಯ ಕ್ಯಾಮೆರ ತಗೊಂಡು ಹೋಗಿರಲಿಲ್ಲ...ಬಹಳ ಬೇಜಾರ್ ಆಯ್ತು ನನಗೆ.

Z : ಪಾಪ ಪಾಪ.

ನಾನು : ವಿಪರೀತ ಪಾಪ ! ಸರಿ ಅಲ್ಲಿಂದ ವಾಪಸ್ಸು ಬಂದು ಶ್ರೀ ರಂಗಂ ನ ಶ್ರೀರಂಗನಾಥ ದೇವಸ್ಥಾನಕ್ಕೆ ಹೋದೆವು. ಅಲ್ಲಿ ನಾವೆಂದೂ ಮರೆಯಲಾಗದಂತಹಾ ಒಂದಿಷ್ಟು ಘಟನೆಗಳು ನಡೆದವು.

ನಾವು ಅಲ್ಲಿಗೆ ಹೋಗುವಾಗ ಕ್ಯೂ ಐದನೆಯ ಪ್ರಾಕಾರದಲ್ಲಿತ್ತು. ಶರಣಂ ಅಯ್ಯಪ್ಪ ಭಕ್ತರು ಸಹಸ್ರ ಸಹಸ್ರ ಸಂಖ್ಯೆಗಳಲ್ಲಿ ನೆರೆದಿದ್ದರು. ಗೇಟಿನ ಬಾಗಿಲು ತೆಗೆದಿದ್ದೆ ಕ್ಯೂ ಸಿಸ್ಟಮ್ ನೂ ಮೀರಿ ಎಲ್ಲರೂ ಒಂದೇ ಏಟಿಗೆ ನುಗ್ಗಿದರು. ನಮ್ಮ ಗ್ರೂಪಿನಲ್ಲಿ ಬಂದಿದ್ದ ದಂಪತಿಗಳ ಹೆಣ್ಣು ಮಗು ಆ ರಶ್ಶಿನಲ್ಲಿ ಸಿಕ್ಕುಹಾಕಿಕೊಂಡುಬಿಟ್ಟಿತು. ಹಿಂದೆ ಇದ್ದವರು ಅಮ್ಮ. ನಾನು ಅಪರ್ಣಾ ಅಣ್ಣ ಅಮ್ಮ ಎಲ್ಲರೂ ಈ ಗಲಭೆಯಲ್ಲಿ ಬೇರಾಗಿಬಿಟ್ಟೆವು. ಅಮ್ಮ ಬಹಳ ಕಷ್ಟ ಪಟ್ಟು, ಅವರ ಮಧ್ಯೆ ನುಗ್ಗಿ ಆ ಹೆಣ್ಣು ಮಗುವನ್ನ ಬಿಡಿಸಿದರು. ನಾನು ಆ ಗಲಭೆಯಲ್ಲಿ ಅಣ್ಣನನ್ನು ಹುಡುಕಿ ಅವರ ಹಿಂದೆ ಹೋದೆ. ಅಪರ್ಣಾ ನನ್ನನ್ನು ಹುಡುಕುತ್ತಾ ಬಂದಳು. ಮತ್ತೆ ನಮ್ಮ ಗ್ರೂಪಿನವರು ಸೇರಿ ಆ ಅಯ್ಯಪ್ಪನ ಭಕ್ತ ವೃಂದವರಿಗೆ ದಬಾಯಿಸಿದೆವು. ಅವರು ಮಾತು ಕೇಳಲೇ ಇಲ್ಲ. ನಾವು ಪೋಲೀಸರ ಮೊರೆ ಹೋದೆವು. ಆಗಲೂ ಏನೂ ಪ್ರಯೋಜನವಾಗಲಿಲ್ಲ. ಗರ್ಭಗುಡಿಗೆ ಬಂದಾಗ ನಮಗೆ ಉತ್ಸವ ಮೂರ್ತಿಯ ದರ್ಶನ ಮಾತ್ರ ಆಯ್ತು. ಮೂಲ ದೇವರು ಕಡೆಗೂ ಕಾಣಿಸಲೇ ಇಲ್ಲ. ಗರ್ಭಗುಡಿಯಲ್ಲಿ ಎಷ್ಟು ಅವ್ಯವಸ್ಥೆ ಆಯ್ತೆಂದರೆ, ಅಮ್ಮ ಉಸಿರುಗಟ್ಟಿಸಿಕೊಂಡಿದ್ದರು.ಎಲ್ಲದಕ್ಕೂ ಕಾರಣ ಅಯ್ಯಪ್ಪ ಭಕ್ತರ ಹುಚ್ಚು ಭಕ್ತಿ. ನಮ್ಮ ಜೊತೆಯಲ್ಲಿ ಬಂದ ಅನಂತ್ ಅಂಕಲ್ ಹಾಗೂ ಸುಧಾ ಆಂಟಿ ಕೂಡಾ ಒದ್ದಾಡಿದರು. ಅಲ್ಲಿನ ಪೋಲೀಸ್ ಒಂದು ನಿಮಿಷವೂ ಕೂಡಾ ಯಾತ್ರಿಕರ ಗೋಳಾಟಕ್ಕೆ ಕಿವಿಗೊಡದಿದ್ದುದು ನಮಗೆ ಜಿಗುಪ್ಸೆ ತರಿಸಿತು. ಶ್ರೀ ರಂಗ, ಎಲ್ಲ ನಿನ್ನ ಲೀಲೆ ಎಂದುಕೊಂಡು ನಾವು ಹೊರಬಂದೆವು. ಹೊರಬಂದಾಗ ನಮ್ಮ ಗ್ರೂಪಿನ ಒಬ್ಬರು ಗರ್ಭಗುಡಿಯ ಗಲಭೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಹೊರಬಾರದಿದ್ದುದು ಗೊತ್ತಾಯ್ತು. ನಾವಾಗಲೆ ಬಸ್ಸು ಹತ್ತಿದ್ದೆವು. ಏನೂ ಮಾಡಲು ತೋಚದಂತಾಗಿ, ಗೈಡ್ ನ ಅಲ್ಲಿರಲು ಹೇಳಿ ನಾವು ಹೋಟೆಲ್ ಗೆ ಬಂದು ಬಟ್ಟೆ ಪ್ಯಾಕ್ ಮಾಡತೊಡಗಿದೆವು. ಎರಡು ಘಂಟೆಯಾದ ಮೇಲೆ ಅವರು ಹೋಟೆಲ್ ಗೆ ಬಂದರು.

Z : ಹುಶಾರಾಗಿದ್ದರಾ ?

ನಾನು : ಹೂಂ.. ಸುಸ್ತಾಗಿದ್ದರು.

Z : ಆಮೇಲೆ ?

ನಾನು : ಅಲ್ಲಿಂದ ನಾವು ಪಳನಿ ಬೆಟ್ಟದ ಕಡೆಗೆ ಪಯಣ ಬೆಳೆಸಿದೆವು. ನನಗೆ ಸುಸ್ತಾಗಿತ್ತು. ನಾನು ಬಸ್ಸಿನಲ್ಲಿ ನಿದ್ದೆ ಮಾಡಿದೆ. ಅಪರ್ಣ ಒಂದಿಷ್ಟು ಫೋಟೋ ತೆಗೆದಿದ್ದಳು. ನಾವು ಪಳನಿ ತಲುಪಿದಾಗ ಸಾಯಂಕಾಲ ಐದು ಘಂಟೆ.

Z : ಉಫ್ ! ಆಮೇಲೆ ?

ನಾನು : ಐದನೆಯ ಫ್ಲೋರಲ್ಲಿ ರೂಮು. ಲಿಫ್ಟ್ ಇತ್ತು. ಬರೀ ಲಗೇಜಿಗೆ ಮಾತ್ರ. ಅಲ್ಲಿ ಹೋಗಿ, ಫ್ರೆಶ್ ಆಗಿ ನಾವು ಪಳನಿ ಬೆಟ್ಟಕ್ಕೆ ಹೋಗಿ ಕ್ಯೂ ನಲ್ಲಿ ನಿಂತೆವು. ನಾವು ಕೇಬಲ್ ಕಾರಿನಲ್ಲಿ ಬೆಟ್ಟ ಹತ್ತಿದೆವು. ನಾನು ಕೇಬಲ್ ಕಾರಿಂದ ಬೆಟ್ಟ ಹೇಗೆ ಕಾಣತ್ತೆ ಅಂತ ವಿಡಿಯೋ ತೆಗೆದೆ. ಫೈಲ್ ಸೈಜ್ ಜಾಸ್ತಿ ಇದೆ. ಅದಕ್ಕೆ ಹಾಕ್ತಿಲ್ಲ.

Z :ಓಕೆ.

ನಾನು : ದೇವಸ್ಥಾನ ತುಂಬಾ organised ಆಗಿ, ತುಂಬಾ well maintained ಆಗಿದೆ. ಏನ್ ಶುದ್ಧ, ಏನ್ ಸ್ವಚ್ಛ ! ತುಂಬಾ ಸಂತೋಷವಾಯ್ತು.ಅಲ್ಲಿ ಹೋದಾಗ ಅಲ್ಲಿ ಅಯ್ಯಪನ ಭಕ್ತರ ಗ್ಯಾಂಗು ಉತ್ಸವ ಹೊರಟಿತ್ತು. ಅಲ್ಲಿ ಒಬ್ಬ ಮುದುಕಿ ಭಾವ ಪರವಶಳಾಗಿ ನವಿಲುಗರಿ ಇಟ್ಟುಕೊಂಡು ನರ್ತಿಸುತ್ತಿದ್ದಳು. ಅದರ ವಿಡಿಯೋ ನೋಡು.





Z ::) :) :)


ನಾನು : ನಾವು ಕ್ಯೂ ನಲ್ಲಿ ನಿಲ್ಲೋ ಅವಶ್ಯಕತೆ ಇರಲಿಲ್ಲ. ಬಹಳ ಬೇಗ ನಮಗೆ Master Subrahmanya ಅವರ ದರ್ಶನ ಕೂಡಾ ಆಯ್ತು.

Z : ಈ ಸ್ಥಳದ ಮಹಿಮೆ ಏನು ?

ನಾನು : ಅದೇ ಗಣೇಶ v/s ಸುಬ್ರಹ್ಮಣ್ಯ... ವೇದವ್ಯಾಸರು ಬಂದದ್ದು...ಯಾರು ಇಡೀ ಭೂಮಿಯನ್ನ ಮೂರುಸಲ ಸುತ್ತುತ್ತಾರೋ ಅವರಿಗೆ ಮಾವಿನ ಹಣ್ಣು ಕೊಡ್ತಿನಿ ಅಂದಿದ್ದು, ಸುಬ್ರಹ್ಮಣ್ಯ ಭೂಮಿ ಸುತ್ತಿದರೆ ಗಣೇಶ ತಂದೆ ತಾಯಿಯರನ್ನೇ ಸುತ್ತಿದ್ದು, ಮಾವಿನ ಹಣ್ಣನ್ನು ಪಡೆದಿದ್ದಲ್ಲದೇ ವ್ಯಾಸರಿಗೆ stenographer ಆಗಿದ್ದು...ಆ ಕಥೆ ಗೊತ್ತಲ್ಲ ?

Z : ಗೊತ್ತು.

ನಾನು : ಗಣೇಶ ಗೆದ್ದ ಅಂತ ಸುಬ್ಬು ಗೆ ಕೋಪ ಬಂದು ನವಿಲನ್ನ kick start ಮಾಡಿಕೊಂಡು ಪಳನಿಗೆ ಬಂದು, ನವಿಲಿಗೆ ಆಕಾಶದಲ್ಲೇ sleeping stand ಹಾಕಿ ನಿಲ್ಲಿಸಿ ಅವನು ಬೆಟ್ಟದ ಮೇಲೆ ನಿಂತುಕೊಂಡ , ಕೋಪಿಷ್ಟನಾಗಿ, ಗಡಿಗೆ ಗಾತ್ರದ ಮುಖ ಮಾಡಿಕೊಂಡು.

Z : Naturally. ಎಂಥವರಿಗೂ ಬೇಜಾರಾಗಿರತ್ತೆ ಆ ಸಮಯದಲ್ಲಿ. Moreover, subbu was a kid.

ನಾನು : Exactly. ಮಗು ಗೆ ಬೇಜಾರಾಯ್ತಲ್ಲ ಅಂತ ಪಾರ್ವತಮ್ಮಂಗೆ ಬೇಜಾರಾಗಿ ಅವರು ಇಳಿದರು ಭೂಮಿಗೆ. Then, eshwara followed. ಅವ್ರಿಬ್ರೂ ಸುಬ್ಬುಗೆ ಸಮಾಧಾನ ಮಾಡಿ, ನೀನೇ ಬುದ್ಧಿವಂತ ಪುಟಾಣಿ...ನಾವೆಲ್ಲ ದಡ್ಡರು, ಗಣು has won the fruit, But we will give you the fruit of wisdom ಅಂತೆಲ್ಲಾ ಪೂಸಿ ಹೊಡೆದು, ಅವನನ್ನ ಸಮಾಧಾನ ಪಡಿಸಿದರು.

Z : I see. ಹೇಗಿದೆ ದೇವರು ?

ನಾನು : Cute and lovely. ನೋಡಕ್ಕೆ ನಗುಮುಖ ಇದ್ದರೂ " ನನ್ನನ್ನ ಕೆಣಕಿದರೆ ಸರಿ ಇರಲ್ಲ" ಅನ್ನೋ ಲುಕ್ಕಿದೆ ಕಣ್ಣಲ್ಲಿ.

Z : ಹೌದಾ ?

ನಾನು : ಹೂಂ. Top to bottom ಚಿನ್ನ ಹಾಕಿದ್ದರು ದೇವರಿಗೆ. ಗೋಪುರ ನೂ ಚಿನ್ನನೇ !

Z :ಹೌದಾ ?

ನಾನು : ಜಲೇಬಿನಾಡಲ್ಲಿ ಚಿನ್ನದ ಗೋಪುರ common. ಎಲ್ಲಾ ನೋಡಿಕೊಂಡು ಮತ್ತೆ ಕೇಬಲ್ ಕಾರಲ್ಲಿ ಬೆಟ್ಟ ಇಳಿದು, ಸ್ವಲ್ಪ ಶಾಪಿಂಗ್ ಮಾಡಿದೆವು.

Z :ಏನ್ ಶಾಪಿಂಗು ?

ನಾನು : ಬಳೆ, ಸರ..ಇತ್ಯಾದಿ ಇತ್ಯಾದಿ.

Z : :) :)

ನಾನು : ಅಲ್ಲಿ ನಮಗೆ ಒಂದು ತಮಾಷೆ ಕಂಡಿತು. ನೋಡಿದನ್ನ.



Z : ಹೆಹೆ...


ನಾನು : ಇದನ್ನ ತಿನ್ನಲು ನನಗೆ ಆರು ದಿನ ಬೇಕು !

Z : :) :)

ನಾನು : ಇದನ್ನೆಲ್ಲಾ ನೋಡಿಕೊಂಡು ವಾಪಸ್ ಹೋಟೆಲ್ಲಿಗೆ ಬಂದ ತಕ್ಷಣ ನಮಗೆ ಒಬ್ಬಟ್ಟು ಸಹಿತ ಬಾಳೆ ಎಲೆ ಊಟ ಕಾದಿತ್ತು. ಗಡದ್ದಾಗಿ ತಿಂದು ನಿದ್ರಿಸಿದೆವು. ಮಾರನೆಯ ದಿನ ಬೆಳಿಗ್ಗೆ ನಾವು ಮಧುರೈ ಗೆ ಹೊರಡಲಿದ್ದೆವು. ನಾಲ್ಕಕ್ಕೆ ರೆಡಿಯಿರಬೇಕು ಎಂದರು. ನಾನು ಗೂಬೆಗಳಿಗೆ ಸ್ಪರ್ಧೆಯೊಡ್ಡಬೇಕಿತ್ತು ಎಂದು ಅರಿವಾಯ್ತು.

Z :ಪಾಪ.

ನಾನು : ಫೋಟೋಸ್ ನೋಡು. ಮುಂದಿನ ಕಥೆ ಆಮೇಲೆ ಹೇಳುವೆ.

Thursday, May 28, 2009

ಆಸೆ ಪೂರೈಸಿಕೊಂಡೆ !

ನಾನು : :) :) :) :) :) :) :) :) :)

Z : ಹಲ್ಲು ಕಿರಿದಿದ್ದು ಮುಗಿದಿದ್ದರೆ ಅದು ಯಾವ ಆಸೆಯನ್ನು ಪೂರೈಸಿಕೊಂಡಿರಿ ಅಂತ ಪೇಳುವವರಾಗಿ.

ನಾನು : :D :D :D :D :D :D :D

Z : ಸಾಕು !!!!!

ನಾನು : ಹಾಂ...ಆಯ್ತು ನಕ್ಕಿದ್ದು. ಈಗ ಕಥೆ ಹೇಳ್ತಿನಿ ಕೇಳ್ಸ್ಕೊ.

Z : ಹು.

ನಾನು : ವಿಕಾಸ್ ಹೆಗಡೆ ಇದ್ದಾರಲ್ಲ...

Z : ಇದ್ದಾರೆ.

ನಾನು : ಅವರು ಸರ್. ಎಮ್ . ವಿಶ್ವೇಶ್ವರಯ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತುಸಂಗ್ರಹಾಲಯಕ್ಕೆ ಭೇಟಿ ಕೊಟ್ಟಿದ್ದರ ಬಗ್ಗೆ ಬ್ಲಾಗ್ ಪೋಸ್ಟ್ ಒಂದನ್ನು ಬರೆದಿದ್ದರು. ನಾನು ಬಹಳಾ ಹಿಂದೆ ಆ ಮ್ಯೂಸಿಯಂ ಗೆ ಭೇಟಿ ಕೊಟ್ಟಿದ್ದೆನಾದರೂ, ಈ ಪ್ರಯೋಗಗಳನ್ನು ನೋಡಿದ ನೆನಪಿರಲಿಲ್ಲ. ಇವರು ಪೋಸ್ಟ್ ಹಾಕಿದ ದಿನದಿಂದ ನನಗೆ ಮತ್ತೆ ಅಲ್ಲಿಗೆ ಹೋಗಬೇಕೆಂಬ ಆಸೆ ಹುಟ್ಟಿತು.ಆದರೆ...

Z : ರೆ ?

ನಾನು : ನನಗೆ ಯಾರ ಜೊತೆಯಲ್ಲಿಯೂ ಹೋಗಲು ಇಷ್ಟ ಇರಲಿಲ್ಲ. ನಾನೊಬ್ಬಳೇ ಹೋಗಿ, ಪ್ರತಿಯೊಂದು ಪ್ರಯೋಗವನ್ನು ಅರ್ಥೈಸಿಕೊಂಡು, notes ಮಾಡಿಕೊಂಡು ಬರಬೇಕು ಅಂತ ಆಸೆ ಇತ್ತು. ಮನೆಯಲ್ಲಿ ಒಬ್ಬಳೇ ಹೋಗ್ತಿಯಾ ಅಂತ ಹುಬ್ಬೇರಿಸುತ್ತಾರೆಂದು ಗೊತ್ತಿತ್ತು. ಅಪರ್ಣಂಗೆ ಬರೋ ಆಸೆ ಇತ್ತು. ಆದರೆ Thanks to 2nd PUC tuitions, ಅವಳಿಗೆ ಒಂದು ನಿಮಿಷ ಬಿಡುವಿಲ್ಲ.

Z : sad.

ನಾನು : ಇದಕ್ಕಿಂತಾ ಹೆಚ್ಚಾಗಿ ನನಗೆ ಅಲ್ಲಿ ಹೋಗಲು ಇನ್ನೊಂದು ದೊಡ್ಡ ಕಾರಣ ಇತ್ತು. ನಾನು ಮುಂದೆ ಎಲ್ಲಾದರೂ ಅಧ್ಯಾಪಕಿಯಾದರೆ ಭೌತಶಾಸ್ತ್ರದ ನಿಯಮಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಪ್ರಯೋಗಗಳು, ಸಿದ್ಧಾಂತಗಳ ಸುಲಭ ನಿದರ್ಶನ ಹಾಗು ವಿವರಣೆಗಳನ್ನು ನೀಡಬೇಕು. ಹಾಗೂ, ಅದನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕು. ದೈನಂದಿನ ಕೆಲಸಗಳಲ್ಲಿ ಅಡಗಿರುವ ಭೌತಶಾಸ್ತ್ರದ ಸೂತ್ರಗಳನ್ನು ತಿಳಿದುಕೊಳ್ಳಲು ನಾನು ಸುಲಭದ ಪ್ರಯೋಗಗಳ ಬಗ್ಗೆ ಎಲ್ಲಿಂದಲಾದರೂ ಮಾಹಿತಿ ಪಡೆಯುವುದು ಅನಿವಾರ್ಯವಾಗಿತ್ತು. ಮತ್ತು ಹೊಸ ಆವಿಷ್ಕಾರಗಳ ಬಗ್ಗೆ ನಾನು update ಆಗದೇ ಇದ್ದರೆ ಮಕ್ಕಳನ್ನು educate ಮಾಡುವುದು ಹೇಗೆ ? ಈಗಿನ ಮಕ್ಕಳು ಹುಟ್ಟುವಾಗಲೇ ಗೂಗಲ್ ಮಂತ್ರವನ್ನು ಜಪಿಸುತ್ತಿರುತ್ತಾರಾದರೂ ಭಾರತದಲ್ಲಿ ಎಲ್ಲರಿಗೂ ಕಂಪ್ಯೂಟರ್ ಲಭ್ಯವಿದೆ ಎಂದು ಹೇಳಲಾಗುವುದಿಲ್ಲ. ಹಾಗಾಗಿ, ಇಂತಹಾ ವಸ್ತು ಸಂಗ್ರಹಾಲಯಗಳ ಅವಶ್ಯಕತೆ ಇದೆ. ಮಕ್ಕಳಿಗೆ ದುಬಾರಿ ವಸ್ತುಗಳ ಉಪಯೋಗ ಮಾಡದೇ ಸುಲಭಕ್ಕೆ ಸಿಕ್ಕುವ ವಸ್ತುಗಳಲ್ಲಿ ಪ್ರಯೋಗ ಮಾಡಿಸುವುದು ನಮ್ಮ ಜಾಣತನದ ಪರೀಕ್ಷೆಯಾಗುತ್ತದೆ. ಆದ್ದರಿಂದ ನನ್ನ ಮೇಲೆ ಸಿಕ್ಕಾಪಟ್ಟೆ ದೊಡ್ಡ ಜವಾಬ್ದಾರಿ ಇದೆ ಅಂತ ವಿಕಾಸ್ ಹೆಗಡೆ ಅವರ ಬ್ಲಾಗ್ ಪೋಸ್ಟ್ ನೋಡಿದಾಗಲೇ ನನಗೆ ಅನ್ನಿಸಿತ್ತು. ಅಧ್ಯಾಪಕಿಯ ಕೆಲಸಕ್ಕೆ ಸೇರುವ ಸಮಯ ಹತ್ತಿರವಾಗುತ್ತಿದ್ದಂತೆ ನನಗೆ ಈ ಬ್ಲಾಗ್ ಪೋಸ್ಟ್ ನೆನಪಾಯಿತು. ನೋಡೋಣ ಅಂತ ಸುಮ್ಮನಿದ್ದೆ, ಆದರೆ ಕಳೆದ ಸೋಮವಾರ ರಾತ್ರಿ ನನಗೆ ಒಂದು ಕನಸು ಬಿತ್ತು.

Z : ???

ನಾನು : ಕಾಲೇಜಲ್ಲಿ ಮಕ್ಕಳು ಸಿಕ್ಕಾಪಟ್ಟೆ ಪ್ರಶ್ನೆ ಕೇಳಿ, ನಾನು ಅವುಗಳಿಗೆ ಸಮರ್ಪಕವಾದ ಉತ್ತರ ನೀಡಲಾಗದೇ, HOD ಮುಂದೆ ತಲೆತಗ್ಗಿಸುವ ಕನಸು ಬಿತ್ತು. ಮಧ್ಯರಾತ್ರಿ ಮೂರು ಘಂಟೆಗೆ ಧಡ್ ಅಂತ ಎದ್ದು ಕೂತೆ. ನಾನು ಓದುತ್ತಿರಬೇಕಾದರೆ ನಮ್ಮ ಲೆಕ್ಚರರ್ ಗಳಿಗೆ ಪ್ರಶ್ನೆ ಕೇಳಿ ಕೇಳಿ ಅವರನ್ನು ಸುಸ್ತಾಗಿಸುತ್ತಿದ್ದ ನಾನು ಈಗ ಅವರ ಜಾಗದಲ್ಲಿ ನಿಲ್ಲಬೇಕಾದರೆ, ಪ್ರಶ್ನೆಗಳನ್ನು ಉತ್ತರಿಸುವಷ್ಟು ಜ್ಞಾನದ ಅವಶ್ಯಕತೆ ಬಹಳ ಇತ್ತು, ಸೂಕ್ತ ತಯಾರಿ ಇಲ್ಲದೇ ಅಧ್ಯಾಪಕ ವೃತ್ತಿಗೆ ಹೋದರೆ, ವೃತ್ತಿಗೆ ಮೋಸವಾಗತ್ತೆ ಅನ್ನೋ moral fear ಬೇರೆ. ಜೊತೆಗೆ, ತ. ರಾ.ಸು ಅವರ ಬೆಳಕು ತಂದ ಬಾಲಕ ಅನ್ನೋ ಕೇನೋಪನಿಷತ್ ಆಧಾರಿತ ಕಾದಂಬರಿ ಓದುತ್ತಿದ್ದೆನಾ, ಅದರಲ್ಲಿ ಕಥಾನಾಯಕ ನಚಿಕೇತ ಬರೀ ಪ್ರಶ್ನೆಗಳನ್ನೇ ಕೇಳುತ್ತಿರುತ್ತಾನೆ. ನನಗೆ ಸಿಕ್ಕುವ ಮಕ್ಕಳೆಲ್ಲ ನಚಿಕೇತನ ತರಹಾ ನೇ ಕಾಣಿಸುತ್ತಿದ್ದರು ಕನಸಲ್ಲಿ ! ತ. ರಾ. ಸು ಬೇರೆ ಸತ್ಯದ ಉಪಾಸನೆಯೇ ಪರಬ್ರಹ್ಮಜ್ಞಾನ ಪಡೆಯಲು ದಾರಿ ಅಂತ ಬರೆದುಬಿಟ್ಟಿದ್ದಾರೆ. ಮಕ್ಕಳಿಗೆ ಸತ್ಯದ ದರ್ಶನ ಮಾಡಿಸದಿದ್ದರೆ ನಾವು ಸುಳ್ಳು ಹೇಳಿದ ಹಾಗಾಗುತ್ತದೆ. ಹೀಗೆಲ್ಲಾ ಯೋಚನೆಗಳು ಒಟ್ಟೊಟ್ಟಿಗೆ ಬಂದು ನನಗೆ ಆ ರಾತ್ರಿ ನಿದ್ದೆಯೇ ಬರಲಿಲ್ಲ ! ಮ್ಯೂಸಿಯಂ ಗೆ ಹೋಗಲೇಬೆಕೆಂಬ ನನ್ನ ಆಸೆ ತೀವ್ರವಾಯ್ತು.

Z : ಕರ್ಮಕಾಂಡ !!


ನಾನು : ಮಂಗಳವಾರ ಮತ್ತು ಬುಧವಾರ ನನಗೆ ಬೇರೆ ಕಡೆ ಕೆಲಸಗಳಿದ್ದವು. ಮಂಗಳವಾರ ಬೆಳಿಗ್ಗೆ " ನಾನು ಗುರುವಾರ ಮ್ಯೂಸಿಯಂ ಗೆ ಹೋಗಿ ಬರುತ್ತೇನೆ" ಅಂತ ಘೋಷಣೆ ಮಾಡಿದೆ. ಹೋಗಲಾ ? ಯಾರಾದರೂ ಬರ್ತೀರಾ ಅಂತ ಕಾಟಾಚಾರಕ್ಕೂ ಕೇಳಲಿಲ್ಲ.

Z : :) :)

ನಾನು : ಮನೆಯವರದ್ದು expected reaction. ಹುಬ್ಬೇರಿಸಿದರು. ನಾನು- "museum ನ renovate ಮಾಡಿದ್ದಾರೆ ಅಂತ ಬ್ಲಾಗ್ ಒಂದರಲ್ಲಿ ಗೊತ್ತಾಯ್ತು. As a physicist ನಾನು ಅಲ್ಲಿಗೆ ಹೋಗದಿದ್ದರೆ ಅದು ನನಗೆ ಅವಮಾನ. ಆಮೇಲೆ ಪಕ್ಕದ ವೆಂಕಟಪ್ಪ ಆರ್ಟ್ ಗ್ಯಾಲೆರಿಯಲ್ಲಿ ಕನ್ನಡ ಸಾಹಿತ್ಯದ ಪ್ರಪ್ರಥಮ ಶಾಸನವಾದ ಹಲ್ಮಿಡಿ ಶಾಸನ ಇಟ್ಟಿದ್ದಾರೆ. ಬಿ.ಎಸ್ಸಿ ಮಾಡೋವಾಗ ನಮ್ಮ ಇಂಗ್ಲಿಷ್ ಅಧ್ಯಾಪಕರು "If you have not seen halmidi shasana in venkatappa art gallery, then you are not eligible to call yourself a kannadiga " ಅಂತ ಇಂಗ್ಲೀಷಿನಲ್ಲಿ ಬೈದಿದ್ದರು. ಇಷ್ಟೆಲ್ಲಾ ಬ್ಲಾಗ್ ಬರೆದು, ಸಾಹಿತ್ಯ ಅಲ್ಪ ಸ್ವಲ್ಪ ಓದಿ ಹಲ್ಮಿಡಿ ಶಾಸನ ನೋಡದೇ ಇದ್ದರೆ ಏನ್ ಪ್ರಯೋಜ್ನ ! " ಅಂದೆ. " ಸಾಹಿತ್ಯ" ಅನ್ನೋ ಪದ ಕೇಳಿದ ಮೇಲೆ ಅಮ್ಮ ಸ್ವಲ್ಪ ಮೆತ್ತಗಾದರು, ಅಣ್ಣನಿಂದ no reaction. ಅಪರ್ಣಂಗೆ ಹೊಟ್ಟೆ ಉರಿಯುತ್ತಿತ್ತೆಂದು ಅವಳ ನೋಟವೇ ಹೇಳುತ್ತಿತ್ತು. ನನ್ನ ಕೆಲಸ ಆಗಿತ್ತು. ನಾನು ಹೊರಡಬಹುದೆಂದು ಆಗಿತ್ತು. ಆದರೆ ಕ್ಯಾಮೆರಾ ತಗೊಂಡು ಹೋಗ್ತಿನಿ ಅಂತ ಮಾತ್ರ ಬಾಯ್ಬಿಡಲಿಲ್ಲ.

Z : ಯಪ್ಪ !!!!!! ಸಧ್ಯ. ಆಮೇಲೆ ?

ನಾನು : ಗುರುವಾರ ಬೆಳಿಗ್ಗೆ ನಾನು ಹತ್ತುಘಂಟೆಗೆ ಬಿಟ್ಟು ಮನೆಗೆ ಸಾಯಂಕಾಲ ಎಂಟಕ್ಕೇ ಕಾಲಿಡಬೇಕೆಂದು ಪ್ಲಾನ್ ಮಾಡಿದ್ದೆ. ಮ್ಯೂಸಿಯಮ್ಮು, ಗ್ಯಾಲೆರಿ, ಎಲ್ಲಾ ನೋಡಿದ ಮೇಲೆ, ಕಸ್ತೂರ್ಬಾ ರಸ್ತೆಯಲ್ಲಿ ನಡೆದು ಕಾರ್ಪೋರೇಷನ್ ತಲುಪಬೇಕು ಅಂತ ನನಗೆ ಮಹದಾಸೆ ಇತ್ತು. ಆದರೆ, ಮನೆಯಲ್ಲಿ ಸ್ವಲ್ಪ ಕೆಲ್ಸ ಇತ್ತು. ಅದೆಲ್ಲಾ ಮಾಡೋ ಅಷ್ಟೊತ್ತಿಗೆ ಒಂಭತ್ತುವರೆ. ಅಮ್ಮ ಮೇಲೆ ಏನೋ ಕೆಲಸ ಮಾಡುತ್ತಿದ್ದರು. ನಾನು ರೆಡಿಯಾಗಿ, ಸಮಯ ನೋಡಿ ಕ್ಯಾಮೆರಾ ಹೆಗಲೇರಿಸಿಕೊಂಡು ಮನೆ ಬಿಟ್ಟಾಗ ಗಂಟೆ ಹನ್ನೊಂದು.

Z : ಉಫ್ಹ್ಹ್ಹ್ಹ್ !!!

ನಾನು : ನನ್ನ ಕರ್ಮಕ್ಕೆ, ಕಾರ್ಪೋರೇಷನ್ ಗೆ ಡೈರೆಕ್ಟು ಬಸ್ಸು ಸಿಗಲಿಲ್ಲ. ಎರಡು ಬಸ್ಸು ಚೇಂಜ್ ಮಾಡಿ, ಕಾರ್ಪೋರೇಷನ್ ತಲುಪಿ ಅಲ್ಲಿಂದ ಒಂದು ಆಟೋ ಹಿಡಿದೆ. ಅವನು "೨೦ ರುಪೀಸ್" ಅಂದ. ನಾನು " ಓಕೆ" ಅಂದೆ.

Z : ನೀನು....ನೀನು ಜಗಳ ಆಡದೇ, ಬಾರ್ಗೈನ್ ಮಾಡದೇ, ಒಂದೇ ಸರ್ತಿಗೆ ಆಟೋ ಹತ್ತಿದೆಯಾ ?

ನಾನು : ಹು.

Z : ನೀನು ?

ನಾನು : ಹು...ಸ್ವತಃ ಸ್ವಯಂ ಸಾಕ್ಷಾತ್ ನಾನೆ !

Z : ಪವಾಡ !! ಪವಾಡ !!

ನಾನು : ಏನಿಲ್ಲ. ನನಗೆ ಜಗಳ ಆಡಲು ಟೈಂ ಇರಲಿಲ್ಲ. ಅದಕ್ಕೆ ಆಡಲಿಲ್ಲ.

Z : ಹಂಗನ್ನು. ಆಮೇಲೆ ?

ನಾನು : ಮ್ಯೂಸಿಯಂ ತಲುಪಿದ ತಕ್ಷಣ ನನ್ನ ಕೈ involuntary ಆಗಿ ಕ್ಯಾಮೆರಾ ಕಡೆ ಹೋಯ್ತು. ಟಿಕೆಟ್ ತೆಗೆದುಕೊಳ್ಳುವಾಗ ಫೋಟೋಗ್ರಫಿ allowed ತಾನೆ ? ಅಂತ ಕೇಳಿದೆ. ಅವರು "ಖಂಡಿತಾ" ಅಂದರು . ನಾನು "ದೇವರು ಚೆನ್ನಾಗಿಟ್ಟಿರುತ್ತಾನೆ ನಿಮ್ಮನ್ನ" ಅಂತ ಬಾಯ್ಬಿಟ್ಟು ಹಾರೈಸಲಿಲ್ಲ...ಹಾಗೆ ಯೋಚನೆ ಮಾಡಿದೆ. ಫೋಟೋಸ್ ತೆಗೆಯುತ್ತಲೇ ಒಳನಡೆದೆ.

Z : :) ಮುಂದೆ ?

ನಾನು : ಕೆಳಗಡೆ ಫ್ಲೋರ್ ನಲ್ಲಿ ಸರ್. ಎಮ್. ವಿಶ್ವೇಶ್ವರಯ್ಯ ಅವರ ಕೆಲವು ಸ್ಮಾರಕಗಳು, ಅವರ ಫೋಟೊ ಎಲ್ಲ ಇತ್ತು. ನನಗೆ ಒಂದು ಮುಖ್ಯವಾದ ಜ್ಞಾನೋದಯ ಆಯ್ತು ಅಲ್ಲಿ.

Z : ಏನದು ?

ನಾನು : ಇವರ ಕಣ್ಣು ನೋಡು.


ನಾನು : Flood light ಥರ ಎಷ್ಟು ಹೊಳಿತಿದೆ ! You can see the light of knowledge in his eyes ! ನನ್ನ ಕಣ್ಣು ಒಳ್ಳೆ zero candle bulb ಥರ ಇದ್ಯಲ್ಲಾ ಅಂತ ಬಹಳಾ ಬೇಜಾರಾಯ್ತು ನಂಗೆ ! :( :( :(


Z : ಬೇಜಾರ್ ಮಾಡ್ಕೋಬೇಡ. ಅವರ ಕಣ್ಣು ಹಾಗಿರೋದಕ್ಕೆ ಅವರು ಅಷ್ಟು ದೊಡ್ಡ ಮನುಷ್ಯರಾದರು. ನೀನು ಓದಿ, ಅರ್ಥೈಸ್ಕೊಂಡು, ಕಣ್ಣಲ್ಲಿ ಈ ಕಾಂತಿ ಬರ್ಸ್ಕೊಳ್ಳಕ್ಕೆ ಟ್ರೈ ಮಾಡು. ಆದರೆ ಸರಿ. ಇಲ್ಲಾಂದ್ರೆ ಪರ್ವಾಗಿಲ್ಲ. ಮುಂದ್ವರ್ಸು ಕಥೆ ನಾ...

ನಾನು : ಇಂಜಿನ್ ಹಾಲ್ ಮತ್ತು ಡೈನೋಸಾರ್ ಕೂಡಾ ಇತ್ತು. ಇನ್ನೊಂದು ಸೆಕ್ಷನ್ ಗೆ ಪ್ರವೇಶ ಇರಲಿಲ್ಲ. ಕೆಲಸ ನಡಿತಿತ್ತು ಅನ್ನಿಸತ್ತೆ. ಇಂಜಿನ್ ಹಾಲ್ ನನಗೆ ತುಂಬಾ ಇಷ್ಟ ಆಯ್ತು. ಎಷ್ಟು ತರಹ ಇಂಜಿನ್ ಗಳಿಟ್ಟಿದ್ದಾರೆ ಗೊತ್ತಾ !!! ಸಿಕ್ಕಾಪಟ್ಟೆ ಚೆನ್ನಾಗಿದೆ ಒಂದೊಂದು. ಸಿಂಪಲ್ ಮೆಷೀನ್ ಸೆಕ್ಷನ್ ಕೂಡಾ ತುಂಬಾ educative ಆಗಿದೆ. ಎಲ್ಲ ವರ್ಕಿಂಗ್ ಮಾಡೆಲ್ ಗಳ ವಿಡಿಯೋ ಷೂಟ್ ಮಾಡಿಕೊಂಡೆ.

Z : ಒಹ್ಹೋ...

ನಾನು : ಇದನ್ನ ನೋಡು.



Z : ಏನಿದು ?

ನಾನು : ಇದನ್ನ ಓದು.



Z : ಒಹ್ಹೋ... ತಮ್ಮ ಫೇವರೆಟ್ ಕಾರ್ ಕಂಪನಿಯ ಇಂಜಿನ್ನು...

ನಾನು : :) :) :) :)ಇದನ್ನೆಲ್ಲಾ ನೋಡುತ್ತಾ , ನೋಟ್ಸ್ ಮಾಡುತ್ತಾ ಮೊದಲನೆಯ ಮಹಡಿಗೆ ಬಂದೆ. ಅಲ್ಲೊಂದು 3D ಥಿಯೇಟರ್ ಇದೆ. ನಾನು ಹೋಗುವ ಸಮಯಕ್ಕೆ ಸರಿಯಾಗಿ ಅಲ್ಲಿ ಒಂದು ಶೋಗೆ ಟಿಕೆಟ್ ಕೊಡುತ್ತಿದ್ದರು. ಟಿಕೆಟ್ ಪಡೆದು ಹೋದೆ.

Z : ಹೇಗಿದೆ ?

ನಾನು : ಹೇಳಿದರೆ ಪ್ರಯೋಜನ ಇಲ್ಲ. ಅದನ್ನ ನೊಡಬೇಕು. It is a very nice attempt to educate people through entertainment. ಒಂಥರಾ edutainment.

Z : ಹಂಗೆ.

ನಾನು : ಹೂ. ಹೊರಗೆ ಬರುವ ಹೊತ್ತಿಗೆ ಕರೆಂಟು ಹೋಗಿತ್ತು. ಮೊದಲನೆಯ ಮಹಡಿಯ ಪ್ರಯೋಗ ಶಾಲೆಯನ್ನು ಆಮೇಲೆ ನೋಡಿರಾಯ್ತು ಅಂತ ಎರಡನೆಯ ಮಹಡಿಗೆ ಹೋದೆ. ಅಲ್ಲಿ ಜೈವಿಕ ತಂತ್ರಜ್ಞಾನದ ಸೆಕ್ಷನ್ ಇತ್ತು. ನನಗೆ ಬಯಾಲಜಿ ಓದಿದ್ದೆಲ್ಲಾ ಮರ್ತೋಗಿತ್ತು. ತಕ್ಕ ಮಟ್ಟಿಗೆ ನೆನಪಾಯ್ತಾದರೂ ಹೆಚ್ಚು ಅರ್ಥವಾಗಲಿಲ್ಲ. ಅಪರ್ಣಂಗೆ ಫೋಟೋ ನೋಡಿ ಹೊಟ್ಟೆ ಉರಿಯುವುದು ಖಚಿತ ಅಂತ ಅನಿಸಿತು. ಅದಕ್ಕೆ ಫೋಟೋ ತೆಗೆಯಲಿಲ್ಲ. ಅದನ್ನ ನೋಡಿಕೊಂಡು ಬಾಹ್ಯಾಕಾಶ ಸೆಕ್ಷನ್ ಗೆ ಬಂದೆ. ತುಂಬಾ ಚೆನ್ನಾಗಿದೆ ಈ ಸೆಕ್ಷನ್ನು. ಉಪಗ್ರಹ ಉಡಾವಣೆ ಎಂದರೆ ಏನು, ಹೇಗೆ ನಡೆಯುತ್ತೆ, ಎಂಥೆಂಥಾ ಉಪಗ್ರಹಗಳಿವೆ ಎನ್ನುವುದರ ಬಗ್ಗೆ ಮಾಹಿತಿ ಇದೆಯಲ್ಲದೇ, ನಾವೇ ಕೆಲವು ಪ್ರಯೋಗಗಳನ್ನೂ ಸಹ ಮಾಡಬಹುದು.

Z : ಪ್ರಯೋಗ ಅಂದರೆ ?

ನಾನು : Monitoring of a satellite from ground station. prototype ಇದು.

Z : ಒಹ್ಹೋ...

ನಾನು : ಹಾಂ...ಚೆನ್ನಾಗಿತ್ತು. ಇಲ್ಲೊಂದಿಷ್ಟು ಫೋಟೋ ಮತ್ತು ವಿಡಿಯೋ ಆದಮೇಲೆ ಮೂರನೆಯ ಫ್ಲೋರ್ ಗೆ ಹೋದೆ. ಅಲ್ಲಿ ಭಾರತೀಯ ಎಲೆಕ್ಟ್ರಾನಿಕ್ಸ್ ಸಂಸ್ಥೆ ತನ್ನದೇ ಒಂದು ಸೆಕ್ಷನ್ ನಿರ್ಮಿಸಿದೆ. Semiconductor electronics ಬಗ್ಗೆ, ಮತ್ತು ಅದರ ಉಪಯೋಗದ ಬಗ್ಗೆ ತುಂಬಾ ಒಳ್ಳೊಳ್ಳೆ ಮಾಹಿತಿ ಮತ್ತು ಮಾಡೆಲ್ ಗಳಿವೆ. Manufacture of a silicon chip from sand section ನನಗೆ ತುಂಬಾ ಇಷ್ಟ ಆಯ್ತು. ಎಷ್ಟೋ ಡೌಟುಗಳು clarify ಆದವು. Optic fibres, communication, GPS, internet ಇವೆಲ್ಲದರ ಬಗ್ಗೆಯೂ ಮಾಹಿತಿ ಸಿಕ್ಕಾಪಟ್ಟೆ ಇತ್ತು. ಫೋಟೋಗಳನ್ನು ಕ್ಲಿಕ್ಕಿಸಿದ ಮೇಲೆ ನಾಲ್ಕನೆಯ ಫ್ಲೋರಿನ ಕೆಫೆಟೇರಿಯಾ ಗೆ ಹೋದೆ.

Z : ಹೊರಗೆ , that too in places like this, usually ಏನು ತಿನ್ನಲ್ಲ ಅಲ್ವಾ ನೀನು...ಮತ್ತೆ ಅವಲಕ್ಕಿ ತೆಗೆದುಕೊಂಡು ಹೋಗಿದ್ಯಲ್ಲ, ಅಲ್ಯಾಕೆ ಹೋದೆ ?

ನಾನು : ಸುಮ್ಮನೆ.

Z : ನಿಜ ಹೇಳು.

ನಾನು : :) ಸರಿ. ನಾನು ಯಾಕೆ ಹೋದೆ ಅಂದರೆ,

೧. ಅವಲಕ್ಕಿ ತಿನ್ನಕ್ಕೆ.

೨. ಈ ಫೋಟೋ ತೆಗೆಯಕ್ಕೆ.






Z : ನನಗೆ ಗೊತ್ತಿಲ್ವಾ ನಮ್ಮ ದೇವರ ಸತ್ಯ ! ಆಮೇಲೆ ?

ನಾನು : ಕೆಫೆಟೇರಿಯಾ ಗೆ ಹೋಗಿದ್ದಕ್ಕೆ ಕಾಫಿ ಕುಡಿದೆ.

Z : ಉದ್ಧಾರ. ಮುಂದೆ ?

ನಾನು : ಸೀದಾ ಮೊದಲನೆಯ ಫ್ಲೋರಿಗೆ ಬಂದೆ. ಅಲ್ಲಿ ನೋಡಿದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಧರ್ಮದರ್ಶನದ ಕ್ಯೂ ಥರ ಕ್ಯೂ ಇತ್ತು ಪ್ರತಿಯೊಂದು ಪ್ರಯೋಗಕ್ಕು.

Z : :))

ನಾನು : ಹೂಂ...fun science section ಅದು, and everybody was having fun. This is the best and the most educative section of the museum. They have explained the fundamentals of physics and mathematics in a very simple and effective way. ನಾನಂತೂ ಎಲ್ಲದರ ಫೋಟೋ ತೆಗೆಯಲು ಹೊರಟಿದ್ದೆ, ಆದರೆ ಜನರ ನೂಕುನುಗ್ಗಲಿತ್ತಾದ್ದರಿಂದ ತೆಗೆಯಲು ಆಗಲಿಲ್ಲ. ವಿಜ್ಞಾದ ಸೂತ್ರಗಳ ಫೋಟೋ ಮಾತ್ರ ತೆಗೆದು ನಾನೇ ಯಾವಾಗಲಾದರೂ ಮಾಡೆಲ್ ಗಳನ್ನು ಮಾಡೋಣ ಅಂತ ವಾಪಸ್ ಬಂದೆ. ಸಖತ್ತಾಗಿತ್ತು ಈ ಫ್ಲೋರು. I really had fun and revised my physics too !

Z : :) ಆಮೇಲೆ ?

ನಾನು : ಹನ್ನೆರಡು ವರೆಗೆ ಮ್ಯೂಸಿಯಂ ಗೆ ಹೋದವಳು ಮೂರುವರೆಗೆ ಹೊರಬಂದು ಆರ್ಟ್ ಗ್ಯಾಲೆರಿ ಗೆ ಹೋದೆ. ಮೂರು ಘಂಟೆಗಳಲ್ಲಿ ನಾನು ಮ್ಯೂಸಿಯಂ ನೋಡಿ ಮುಗಿಸಿದೆ ಅಂತ ನನಗೇ ನಂಬಲಾಗಲಿಲ್ಲ. ಆದರೆ ನಾನು ಯಾವುದನ್ನು ನೋಡುವುದು ಬಿಟ್ಟಿರಲಿಲ್ಲ. ಗ್ಯಾಲೆರಿಗೆ ಹೋದರೆ ಅಲ್ಲಿ ಫೋಟೋ ತೆಗೆಯುವ ಹಾಗಿಲ್ಲ ಅಂದರು. ಹಲ್ಮಿಡೀ ಶಾಸನದಲ್ಲಿ ಕನ್ನಡವೇ ಕಾಣದೇ ನನಗೆ ಬಹಳಾ ನಿರಾಸೆಯಾಯ್ತು !

Z : ಪಾಪ ! ಯಾವ್ ಥರ ಇತ್ತು ಲಿಪಿ ?

ನಾನು : ಕಣ್ಣಿಗೆ ಕಂಡರೆ ತಾನೆ ? I had not taken a magnifying glass with me.

Z : ಛೆ ಛೆ ಛೆ !

ನಾನು : ತೈಲವರ್ಣ ಚಿತ್ರಗಳು ಎಲ್ಲಾ ಒಂದಕ್ಕಿಂತ ಒಂದು ಮಸ್ತ್, ಜಬರ್ದಸ್ತ್. ಎಲ್ಲ ಶೈಲಿಗಳ (ಮೈಸೂರು, ತಂಜಾವೂರು, ಡೆಕ್ಕನ್, ಕಾಂಗ್ರಾ, ಅರೇಬಿಯಾ, ಪರ್ಷಿಯಾ, ಹೈದರಾಬಾದಿ, ಮರಾಠಿ, ಇತ್ಯಾದಿ) ತೈಲವರ್ಣ ಚಿತ್ರಗಳು ಮನಸೆಳೆಯುತ್ತವೆ. ಮೊಹೆನ್ ಜೊದಾರೋ, ಹರಪ್ಪ ನಾಗರಿಕತೆಯ ಕೆಲವು excavations ನ ಇಲ್ಲಿ ಸಂಗ್ರಹಿಸಲಾಗಿದೆ. ಕರ್ನಾಟಕ ಹಾಗೂ ಭಾರತದ ಹಲವಾರು ಸ್ಥಳದಲ್ಲಿ ಆದಿಮಾನವನ ಕಾಲದಲ್ಲಿ ಉಪಯೋಗಿಸುತ್ತಿದ್ದ ಮಡಿಕೆ, ಕುಡಿಕೆ, ಆಯುಧಗಳು ಸಹಾ ಇಲ್ಲಿವೆ. ಚರಿತ್ರೆಯ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ಮಾಹಿತಿ ಸಿಕ್ಕತ್ತೆ ಇಲ್ಲಿ.

Z : I see.

ನಾನು : ಇಲ್ಲಿಂದ ಹೊರಬಂದಾಗ ಘಂಟೆ ನಾಲ್ಕುವರೆ. ಆಮೇಲೆ ಬರೋದು ಬಂದಿದಿನಿ, ಬ್ರಿಟಿಷ್ ಲೈಬ್ರರಿಯನ್ನೊಮ್ಮೆ ನೋಡಿಬಿಡೋಣ ಅಂತ ನಡೆಯಲು ಶುರು ಮಾಡಿದೆ.

Z : ಅದು ಅರ್ಧ ನಿಜ. Audi, Benz, Chevrolet ಕಾರ್ ಗಳ ಫೋಟೋ ತೆಗೆಯಕ್ಕೆ ತಾನೆ ನೀನು ಹೋಗಿದ್ದು ?

ನಾನು : :)) ಬೇಗ ಅರ್ಥ ಮಾಡ್ಕೋತ್ಯಾ ನೀನು. ಗುಡ್. ಅದೇ ಆಸೆಯಿಂದ ಹೋದೆ, ಆದರೆ ಆ ಕಾರುಗಳಲ್ಲಿ ಡ್ರೈವರ್ ಗಳು ಇದ್ದರು ಆದ್ದರಿಂದ ಫೋಟೋ ತೆಗೆಯಲಾಗಲಿಲ್ಲ.

Z : ಆಗ್ಬೇಕು ನಿನಗೆ.

ನಾನು : Silence !!

Z : ಸಾರಿ. ಆಮೇಲೆ ?

ನಾನು : St. Mark's road ನ F&B restaurant ನಲ್ಲಿ ಸಹ ಬ್ಲಾಗಿಗ murugan ಅವರ which main what cross photo exhibition ಮೂವತ್ತೊಂದನೆಯ ತಾರೀಖಿನ ವರೆಗೂ ಇದೆ ಅಂತ ನನಗೆ suddenly ನೆನಪಾಯ್ತು. ಅಲ್ಲಿಗೆ ಹೋದರೆ ಆ restaurant close ಆಗಿತ್ತು. ಸೀದಾ ವಾಪಸ್ ಬಂದು ಕಸ್ತೂರ್ಬಾ ರೋಡ್ ನಲ್ಲಿ ನಡೆಯುವ ಹೊತ್ತಿಗೆ ಶಿವಾಜಿನಗರದಿಂದ ನಮ್ಮ ಮನೆಗೆ ಬರುವ ಡೈರೆಕ್ಟ್ ಬಸ್ಸು ಕಾಣಿಸಿತು. ಕಸ್ತೂರ್ಬಾ ರೋಡಲ್ಲಿ ನಡೆಯುವ ಆಸೆಯನ್ನು ಬಿಟ್ಟು, ಬಸ್ಸು ಹತ್ತಿ, ಸೀಟು ಗಿಟ್ಟಿಸಿ , ಪ್ರಯಾಣ ಮಾಡಿ ಮನೆಗೆ ಬಂದಾಗ ಆರು ಮುಕ್ಕಾಲು !

Z : ಅಂತು ಒಬ್ಬಳೇ ಹೋಗಿ ಬಂದೆ ನೋಡು.

ನಾನು : ಯೆಸ್. Not everything in this world necessarily needs a company :)

Z : :) ಫೋಟೋಸ್ ? ವಿಡಿಯೋಸ್ ?


ನಾನು : ಫೋಟೋಸ್ ಹಾಕ್ತಿದಿನಿ. ವಿಡಿಯೋ ಹಾಕ್ಬಿಟ್ರೆ ಯಾರೂ ಮ್ಯೂಸಿಯಂ ಗೆ ಹೋಗಲ್ಲ ಆದ್ದರಿಂದ ಹಾಕ್ತಿಲ್ಲ. Its definitely worth a visit. ಹೋಗಿ ಬನ್ನಿ ಎಲ್ಲರೂ ಒಮ್ಮೆ, ಒಬ್ಬರೇ ಹೋಗುತ್ತೀರೋ, ಸಕುಟುಂಬ ಸಪರಿವಾರ ಸಮೇತರಾಗಿ ಹೋಗ್ತಿರೋ ...ಹೇಗೆ ಹೋದರೂ ಅದು ಖಂಡಿತಾ worthwhile !


Thursday, May 14, 2009

ಒಮ್ಮೊಮ್ಮೆ ಹೀಗೂ ಆಗುವುದು...

Z : ಈಗ ಏನ್ ಮಹಾ ಆಗೋಯ್ತು ಅಂತ ನೀನ್ ಈಥರ ತಲೆ ಕೆಡಿಸಿಕೊಂಡಿದ್ಯಾ ?

ನಾನು : ಏನ್ ಆಗಿಲ್ಲ ಅಂತ ಕೇಳು.

Z : ಏನ್ ಆಗಿಲ್ಲ ?

ನಾನು : ನನ್ನ ತಲೆ ಢಂ ಅಂತ ಒಡೆದು ಚೂರೊಂದು ಆಗಿಲ್ಲ ನೋಡು...

Z : ಓಕೆ....

ನಾನು : ಥುತ್ ! ಈ ಸಮಯದಲ್ಲಿ ಓಕೆ ಪ್ರಯೋಗ ಮಾಡ್ತ್ಯಲ್ಲಾ...ಮನುಷ್ಯಳಾ ನೀನು ?

Z : Have no doubts.

ನಾನು : Have no doubt that you are definitely not human ?

Z : ನಾನು ಮನುಷ್ಯಳೇ...

ನಾನು : I have my own doubts !

Z : Good, you at least own doubts !

ನಾನು : ನೋಡು...ಮೊದ್ಲೆ ನನ್ನ ಮೂಡ್ ಸರಿ ಇಲ್ಲ...

Z : ಯಾಕೆ ಸರಿ ಇಲ್ಲ ಅಂತ ಗೊತ್ತಾದ್ರೆ ತಾನೆ ನಾವ್ ಏನಾದ್ರು ಹೇಳಕ್ಕೆ ಆಗೋದು ?

ನಾನು : ನನಗೆ ಒಂದು ಪ್ರಶ್ನೆ ಸಿಕ್ಕಪಟ್ಟೆ ಕಾಡ್ತಿದೆ.

Z : ನೀನು ಯಾವಾಗ ಉದ್ಧಾರ ಆಗ್ತ್ಯಾ ಅನ್ನೋ ಪ್ರಶ್ನೆ ನ ? ನಾನು ಈಗ್ಲೆ ಉತ್ತರ ಕೊಡ್ತಿನಿ ತಗೊ...ನೀನು ಉದ್ಧಾರ ಆಗಕ್ಕೆ ಮಿನಿಮಮ್ 20 x 10^6 ಜನ್ಮ ಆಗತ್ತೆ.

ನಾನು : x-( x-( x-(

Z : ಬುಸುಗುಡು...ಹಾವಿನ ಥರ ! ಈಗ ಏನಾಯ್ತು ಅಂತ ಹೇಳು.

ನಾನು : ಜೀವನದಲ್ಲಿ ಏನು ಮುಖ್ಯ ?

Z : ನೆಮ್ಮದಿ.

ನಾನು : food, clothing and shelter ಅಲ್ವಾ ?

Z : ಅದು ದೇಹಕ್ಕೆ. ಆತ್ಮಕ್ಕೆ ಆನಂದ ಮುಖ್ಯ.

ನಾನು : ನೀನು ಇದೇ ಟೈಮಲ್ಲಿ ಫಿಲಾಸಫಿ ಪಾಠ ಮಾಡ್ಬೇಕಾ ನಂಗೆ ?

Z : ಅರೆರೆ...ನಿಂಗೆ ಹೆಂಗೆ ಗೊತ್ತಯ್ತು ? moreover, I just started with introduction..

ನಾನು : ಅಲ್ಲಿಗೆ full stop ಇಡು. ನನಗೆ ಟೈಮಿಲ್ಲ !

Z : ಓಕೆ. ಜೀವನಕ್ಕೆ ಮುಖ್ಯ The above mentioned and not to forget, money.

ನಾನು : ???

Z : :-) :-) :-) ನಾನು ಮಾತಾಡಲ್ಲ...ನಾನು ಬಾಯಿ ತೆಗೆದ್ರೆ ನೀನು " no gyan please !" ಅಂತ್ಯಾ !

ಇರ್ಲಿ. ಏನಾಯ್ತು ಈಗ ?

ನಾನು : ಈಗ ನಾನು ರಿಸರ್ಚಿಗೆ ಹೋಗಲೋ...ಕೆಲಸಕ್ಕೆ ಸೇರಲೋ ಅನ್ನೋದೆ ದೊಡ್ಡ ಪ್ರಶ್ನೆ ಆಗೋಗಿದೆ. ಜೀವನದಲ್ಲಿ the above four ಜೊತೆಗೆ choose ಮಾಡೋದು ability ಕೂಡಾ ಮುಖ್ಯ. ಏನಂತೀಯಾ ?

Z : ಹೂಂ....

ನಾನು : ಈಗ ನನಗೆ ನನ್ನ ನಿರ್ಧಾರವನ್ನ ಖಡಾಖಂಡಿತವಾಗಿ ತೆಗೆದುಕೊಳ್ಳುವ ಸಮಯ ಬಂದಿದೆ. ಎಕ್ಸಾಮುಗಳ ರಿಸಲ್ಟು ಬರದೇ, ಒಂದಾದ ಮೇಲೊಂದು ಬರುತ್ತಿರುವ ಕೆಲಸದ appointment orders ನನ್ನ ಆತಂಕ ಹೆಚ್ಚಿಸುತ್ತಿವೆ. ಒಂದು ವಾರಕ್ಕಿಂತ ಹೆಚ್ಚಿಗೆ ಟೈಮಿಲ್ಲ ! ರಿಸರ್ಚಿನ ರಿಸಲ್ಟಿಗೆ ಕಾದರೆ ಕೆಲಸ ಇಲ್ಲ. ಕೆಲ್ಸಕ್ಕೆ ಹೋದರೆ ರಿಸರ್ಚಿಗೆ ಬರಲಾಗುವುದಿಲ್ಲ !

Z : tough.

ನಾನು : ಇನ್ನೇನ್ ಮತ್ತೆ ! ನಾನು ಯೋಚನೆ ಮಾಡಿ ಮಾಡಿ ಒಂದು ನಿರ್ಧಾರಕ್ಕೆ ಬಂದಿದಿನಿ...

Z : ಬಾ...

ನಾನು : ಏನಪ್ಪಾ ಅಂದ್ರೆ - ರಿಸರ್ಚಿಲ್ಲದೇ ಬರಿ ಹಣಕ್ಕೋಸ್ಕರ ದುಡಿಯೋಕಿಂತ, ರಿಸರ್ಚಿಗೆ ಪ್ರೋತ್ಸಾಹ ಕೊಡುವ ಕೆಲಸಕ್ಕೆ ಸೇರ್ಕೊಳ್ಳೋದು ವಾಸಿ ಅಂತ.

Z : ಭೇಷ್...ಕೆಟ್ಟಿರೋ ತಲೆ ಕೂಡಾ ಒಳ್ಳೆ decisions ತೆಗೆದುಕೊಳ್ಳಬಹುದು ಅಂತ ಇವತ್ತು ಗೊತ್ತಾಯ್ತು ನೋಡು !

ನಾನು : ಸುಮ್ನಿದ್ರೆ ಸರಿ ನೀನು !

Z : ಹೆಹೆ...just joking ! ನೋಡು, at the end of everything, you should not regret what you did.

ನಾನು : I dont think I will regret anything. Decision making is a tough task, but not impossible.

Z : ಹೌದು. ಈಗ, ಸುಮ್ನೆ ಇದ್ಬಿಡು. ಮತ್ತೆ ಇದೇ ವಿಷ್ಯ ನ ಯೋಚನೆ ಮಾಡಿ, ಆಮೇಲೆ "ಹಿಂಗ್ ಮಾಡಿದ್ರೆ ಹೆಂಗೆ ?" ಅಂತ ನನ್ನ ಬಂದು ಕೇಳಬೇಡ !

ನಾನು : ಗ್ರ್ರ್ರ್ರ್ರ್ರ್ರ್ರ್ರ್ !!!

Z : ನೀನು ಎಷ್ಟೇ ಕೂಗಿದರೂ, ತಿಪ್ಪರ್ಲಾಗ ಹಾಕಿದರೂ, ಇದಕ್ಕಿಂತಾ suitable and feasible solution ಸಿಕ್ಕಲ್ಲ, ತಿಳ್ಕೋ !

ನಾನು :ಹಂಗಂತಿಯಾ ?

Z : ಯೆಸ್.

ನಾನು : ಓಕೆ.ಇಷ್ಟರ ಮಧ್ಯದಲ್ಲಿ ಒಂದು ವಿಷಯ ಹೇಳೋದೇ ಮರ್ತೋಗಿತ್ತು. ಇದು ನಮ್ಮಿಬ್ಬರ 75th phone call-u.I dont know whether we should celebrate or not.

Z : Recession period ಈಗ. ಆದ್ದರಿಂದ, ಸುಮ್ನೆ ಇದ್ದುಬಿಡೋಣ. ಅಪ್ಪಿ ತಪ್ಪಿ ಏನಾದ್ರೂ century ಆದರೆ, ಆಗ ಯೋಚನೆ ಮಾಡೋಣ.

ನಾನು : Done !

Friday, May 1, 2009

ಎಲ್ಲರ ಜೀವನನೂ ಇಷ್ಟೇ ಅಲ್ವಾ ?

Z : ಏನಿದು ಸಡನ್ ವೈರಾಗ್ಯ ? !

ನಾನು : ಗೊತ್ತಿಲ್ಲ...

Z :ಯಾಕೆ ಹಿಂಗಾಗೋಗಿದ್ಯಾ...

ನಾನು : ಯಾಕೋ ಹಿಂಗೆ ಅನ್ಸಕ್ಕೆ ಶುರುವಾಗೋಗಿದೆ.

Z :ಅದೆ ಯಾಕೆ ಅಂತ.

ನಾನು : ಇವತ್ತ್ ಏನಾಯ್ತಪ್ಪ ಅಂದ್ರೆ...ಸಾಯಂಕಾಲ ನಾನು ನನ್ನ ರೂಮಲ್ಲಿ "ನಾಯಿ ನೆರಳು" ಪುಸ್ತಕ ಓದೋಣ ಅಂತ ಒಳಗೆ ಬಂದೆ. ಸಿಕ್ಕಾಪಟ್ಟೆ ಸೆಖೆ ಅಂತ ಕಿಟಕಿ ತೆಗೆದೆ.

Z : ಸರಿ. ಮುಂದೆ ?

ನಾನು : ಮನೆಯ ಹಿಂದಿನ ರಸ್ತೆಯಲ್ಲಿ ಒಂದು ತೆಂಗಿನ ಮರ ಇದೆ. ಇತ್ತೀಚೆಗೆ ಅಲ್ಲಿ ಹದ್ದುಗಳ ವಾಸ ಶುರುವಾಗಿದೆ.

Z : ತೆಂಗಿನಮರದ ಮೇಲೆ ಹದ್ದುಗಳಾ ?

ನಾನು : yes. strange, but true. ಪ್ರತಿದಿನ ಸಾಯಂಕಾಲ ಮೂರು ಹದ್ದುಗಳು ಬರತ್ವೆ...around 6 pm.

Z : ಅದಕ್ಕೆ ?

ನಾನು : ಸರಿ ಇವುಗಳ ಫೋಟೋ ತೆಗೆಯಬೇಕು ಅಂತ ನನಗೆ ಬಹಳ ದಿನಗಳಿಂದ ಆಸೆ ಇತ್ತು. ಇವತ್ತು ಅದನ್ನ ಪೂರೈಸಿಕೊಳ್ಳೋ ಆಸೆ ಆಗಿ ಪುಸ್ತಕ ಮುಚ್ಹಿಟ್ಟು ಕ್ಯಾಮೆರಾ ತಗೊಂಡು ಸೀದಾ ಟೆರೇಸಿಗೆ ಓಡಿದೆ.

Z : ಹ್ಮ್ಮ್ಮ್...

ನಾನು : ಅಷ್ಟೊತ್ತಿಗೆ ಎರಡು ಹದ್ದುಗಳು ಪರಾರಿ.

Z : sad.

ನಾನು : ಸಾಯಂಕಾಲ ಬೇರೆ.ಲೈಟಿಂಗ್ ಕೈ ಕೊಡ್ತಿತ್ತು...ಪೂರ್ತಿ zoom ಮಾಡಿದರು ಚಿತ್ರ ನೆಟ್ಟಗೆ ಬರುವುದು ಡೌಟಾಯ್ತು. ಆದರೂ ಸಿಂಗಲ್ ಹದ್ದುವಿನ ಚಿತ್ರ ತೆಗೆದೆ. ಆದರೆ ಕಾಗೆಗೂ ಅದಕ್ಕೂ ವ್ಯತ್ಯಾಸವೇ ಕಾಣಲಿಲ್ಲ.

Z : ಹೆಹೆ !

ನಾನು : ನಗಬೇಡ. ಅನ್ಯಾಯ ಆಯ್ತಲ್ಲ ಅಂತ ವಾಪಸ್ ಹೊರಡಲು ರೆಡಿಯಾದೆ. ಅಷ್ಟೊತ್ತಿಗೆ ನನಗೆ ಒಂದು ದೃಶ್ಯ ಕಣ್ಣಿಗೆ ಕಂಡಿತು. ಪೇಪರ್ ಆಯುವ ಹೆಂಗಸೊಬ್ಬಳು ಬಂದು ತನ್ನ ಮಗುವನ್ನ ಕೆಳಗಿಳಿಸಿ ಬಿದ್ದಿದ್ದ cartons ನ ತೆಗೆದುಕೊಳ್ಳಲು ಶುರು ಮಾಡಿದಳು. ನಾನು ಅವಳನ್ನು ಹಾಗೇ ನೊಡುತ್ತಾ ನಿಂತೆ. ಯಾರಾದರು ಬೇರೊಬ್ಬರು ಬಂದು ಅದನ್ನ ತೆಗೆದುಕೊಳ್ಳಬಹುದು, ಇವಳು ಮಗುವನ್ನ ಕರೆದುಕೊಂಡು ಹೋಗಬಹುದು ಎಂದು ಅತ್ತಿತ್ತ ನೋಡಿದೆ. ಉಹೂ...ಯಾರೂ ಇಲ್ಲ.

Z : interesting...ಆಮೇಲೆ ?

ನಾನು : ಅವಳು ತನ್ನ ತಲೆಯ ಮೇಲೆ ಎಲ್ಲ ಪೇರಿಸಿಕೊಂಡು ಮಗುವನ್ನು ಎತ್ತಿಕೊಳ್ಳುವ ಹೊತ್ತಿಗೆ ಅವೆಲ್ಲ ಅವಳ ತಲೆಯಿಂದ ಬಿದ್ದುಹೋಯ್ತು.

Z :ಪಾಪ.

ನಾನು : ಮಗು ಅಳಲು ಶುರುಮಾಡಿತು. ಇವಳು ಅದಕ್ಕೆ ಸಮಾಧಾನ ಮಾಡಿದಳು. ನನಗೆ ಇವಳು ಇಷ್ಟೆಲ್ಲಾ ಸಾಮಾನನ್ನ ಹೇಗೆ ಹೊರುತ್ತಾಳೆ ನೊಡಬೇಕೆಂಬ ಆಸೆ ಆಯ್ತು. Involuntarily, ನನ್ನ ಕೈ ನನ್ನ ಕ್ಯಾಮೆರಾವನ್ನು video mode ನಲ್ಲಿ ಇಟ್ಟು ವಿಡಿಯೋ ತೆಗೆಯಲು ಪ್ರಾರಂಭಿಸಿತು.

Z : ನಿನ್ನ ಕೈಗೆ ಕ್ಯಾಮೆರಾ ಬಂದಿದ್ದೇ ದೊಡ್ಡ ತಪ್ಪು.ಅದು ಬಂದ ಮೇಲೆ ನನ್ನ ಬಗ್ಗೆ ಒಂದು ಚೂರು attention ಕೊಡಲ್ಲ ನೀನು !

ನಾನು : ಹೊಟ್ಟೆ ಉರ್ಕೊಳ್ಳೋದು ಬಿಟ್ಟು ಮೊದಲು ವಿಡಿಯೋ ನೋಡು.








Z : ಹ್ಮ್ಮ್....

ನಾನು : ನನಗೆ ಒಂದು ಕ್ಷಣ ಎಲ್ಲರ ಜೀವನಾನೂ balancing act ಅಲ್ಲದೇ ಮತ್ತಿನ್ನೇನು ಅನ್ನಿಸಿಬಿಡ್ತು.

Z : ತ್ಚು ತ್ಚು ತ್ಚು....

ನಾನು : ಆಯ್ತ ಲೊಚಗುಟ್ಟಿದ್ದು ?

Z : ಹೂಂ...continue.

ನಾನು : ಅವಳು ಡಬ್ಬಗಳನ್ನ balance ಮಾಡ್ತಿದ್ಲು..ನಾವು ಜೀವನದಲ್ಲಿ ನಮ್ಮ priorities, requirements and commitments ನ balance ಮಾಡ್ತಿದಿವಿ ಅಲ್ವಾ ?

Z : ಒಹ್ಹೋ....ಇದು ನೀನು ಈ ರೂಟ್ ನಲ್ಲಿ ಬರ್ತಿದ್ಯಾ ?

ನಾನು : ಹೂಂ...

Z : ನಿಜ. life is all about maintaining balance...including bank balance !

ನಾನು : ಹೆಹೆಹೆ ! ನಾನು ಹೇಳಿದ್ದು ಹಂಗಲ್ಲ...

Z : ಗೊತ್ತು...ನಾನು ಸುಮ್ಮನೆ ಹೇಳ್ದೆ ಅಷ್ಟೆ. ನೀನು ಮುಂದುವರೆಸು.

ನಾನು : ನಾನು ಹಂಗೇ ಯೋಚನೆ ಮಾಡತೊಡಗಿದೆ. ಮುಂದೆ ನಾನು ಏನೇನೆಲ್ಲಾ balance ಮಾಡ್ಬೇಕಾಗತ್ತೆ..ಮನೆ, ಕೆಲಸ, ರಿಸರ್ಚು, ಬ್ಲಾಗು..ಯೋಚನೆ ಮಾಡ್ತಾ ಮಾಡ್ತಾ mild ಆಗಿ ಭಯ ಆಯ್ತು.

Z : ಎಷ್ಟಿತ್ತು Richter scale ನಲ್ಲಿ ?

ನಾನು : ನಾನು ಭೂಕಂಪ ಆಯ್ತು ಅಂದೆನಾ ? Richter scale ಅಂತೆ !

Z : ಭಯ ಆದ್ರೆ ಜನ ನಡುಗುತ್ತಾರೆ. ಭೂಮಿ ನಡುಗುವುದನ್ನ ಅಳೆಯುವುದಕ್ಕೆ ಮಾಪಕ ಇದೆ ಅಂತ ಆದ್ರೆ, ಮನುಷ್ಯರ ಭಯ ಅಳೆಯಲು ಅದನ್ನೇ ಬಳಸಬಾರದೇಕೆ ?

ನಾನು : ತಾಯಿ ಜಗಜ್ಜನನಿ ದುರ್ಗಾಪರಮೇಶ್ವರಿ !!!!!!!!!! Z..ದಯವಿಟ್ಟು ನಿನ್ನ ಅದ್ವಿತೀಯ ತಲೆ ನ ಉಪಯೋಗಿಸುವುದನ್ನ ನಿಲ್ಲಿಸುತ್ತೀಯಾ ?

Z : ಯಾಕೆ ?

ನಾನು : ಲೋಕದ ಆರೋಗ್ಯಕ್ಕೆ ಒಳ್ಳೆದಲ್ಲ.

Z : ಓಹ್...ಹೋಗ್ಲಿ ಬಿಡು..ಏನೋ ಪಾಪ ನೀನು ಕೇಳ್ತಿದ್ದೀಯಾ ಅಂತ ನಾನು ತಲೆ ಉಪಯೋಗಿಸೊಲ್ಲ.

ನಾನು : ಧನ್ಯೋಸ್ಮಿ. ಒಟ್ಟಿನಲ್ಲಿ ಮುಂದಿನ balancing act ನೆನಸಿಕೊಂಡು ಈಗಲೆ ತಲೆ ಭಾರವಾಗಿದೆ.

Z : Physics ಓದಿದ್ಯಲ್ಲಾ..ಉಪಯೋಗಿಸು ಅದನ್ನ. ಕಲಿ balance ಮಾಡೋದನ್ನ...ಅಷ್ಟೇ !

ನಾನು : ಕಷ್ಟ !

Z :ಅಸಾಧ್ಯ ಅಲ್ವಲ್ಲ...ನಿಧಾನಕ್ಕೆ ಎಲ್ಲಾ ಸಿದ್ಧಿಸತ್ತೆ. ನೀನು impatience ನ ಸ್ವಲ್ಪ ಕಡಿಮೆ ಮಾಡಿಕೊಂಡರೆ ಆಯ್ತು.

ನಾನು : :-(

Z :ಹ್ಯಾಪ್ ಮೋರೆ ಹಾಕೊಂಡ್ರೆ ಏನೂ ಪ್ರಯೋಜನ ಇಲ್ಲ.

ನಾನು : ಹಂಗಂತಿಯಾ ?

Z :ಹೂಂ..

ನಾನು : ಓಕೆ. balance ಮಾಡೋಕೆ, ಖುಷಿಯಾಗಿ ಇರೋಕೆ ಪ್ರಯತ್ನ ಪಡ್ತಿನಿ.

Z : :-)

Saturday, April 11, 2009

Journey to ಜಲೇಬಿನಾಡು ಭಾಗ ೪

ನಾನು :ಕುಂಭಕೋಣಂ ಬಿಟ್ಟು ನಾವು ಮುಂದಕ್ಕೆ ಬಂದ ಸ್ಥಳದ ಹೆಸರು ಸ್ವಾಮಿ ಮಲೈ ಅಂತ.

Z : ಓಹ್ ! ಬೆಟ್ಟ !

ನಾನು : ಇಲ್ಲ. ಇದು ನಿಜವಾದ ಬೆಟ್ಟ ಅಲ್ಲ.

Z : ಮತ್ತೆ ?

ನಾನು : ಅರವತ್ತು ಮೆಟ್ಟಿಲುಗಳಿಂದ ಮಾಡಲ್ಪಟ್ಟಿರುವ ಕೃತಕ ಬೆಟ್ಟ ಅದು.

Z : ಕಾಲೇಜಿನ ಮೆಟ್ಟಿಲಿನ ಥರ ಅನ್ನು.

ನಾನು : ಹಾಗೇ...ಆದ್ರೆ ಸ್ವಲ್ಪ steep.

Z : ಏನ್ ಕಥೆ ದೇವಸ್ಥಾನದ್ದು ?

ನಾನು : ಕಥೆ ಒಂಥರಾ ಮಜವಾಗಿದೆ. ಎರಡೆರಡು ವರ್ಶನ್ ಬೇರೆ ಇದೆ ಇದಕ್ಕೆ ! But both are nice. Master Subramanya ಅವರ ದೇವಸ್ಥಾನ ಇದು. I think ಮೂರ್ತಿ 8 ಅಡಿ ಇದೆ. What a handsome ದೇವರು ಅಂತಿಯಾ .... smile-u... look-u, radiance-u.........ನಾನಂತೂ ಪೂರ್ತಿ impress ಆಗೋದೆ.

Z : ಸಾಕು ಹಾರಿದ್ದು..ಕೆಳಗೆ ಬಂದು ಕಥೆ ಮುಂದುವರ್ಸು !

ನಾನು : ಹಾಂ...ಕೈಲಾಸದಲ್ಲಿ ಒಮ್ಮೆ general body meeting ಇತ್ತಂತೆ. Lord brahma and Lord Subramanya were first talking informally about the meaning of the word Om.

Z : ಆಮೇಲೆ ?

ನಾನು : ವಿಷಯ ಸೀರಿಯಸ್ಸಾಯ್ತು. ಬ್ರಹ್ಮ ಗೆ ಏನು ಗೊತ್ತಿರ್ಲಿಲ್ಲ ...Master ಸುಬ್ರಮಣ್ಯ ನೆ ಎಲ್ಲ ವಿವರಿಸಿದರು.

Z : ಅಯ್ಯೋ !!! ಆಮೇಲೆ ?

ನಾನು : Master ಸುಬ್ರಮಣ್ಯ ಅವರು ಎಷ್ಟು ಬುದ್ಧಿವಂತರೋ ಅಷ್ಟೆ playful ಕೂಡ. ಅವ್ರು ಏನ್ ಮಾಡಿದರಂತೆ ಗೊತ್ತಾ ?

Z : ಏನು ?

ನಾನು : ಬ್ರಹ್ಮ ಅಂಥಾ ಬ್ರಹ್ಮಂಗೆ ಓಂ ಶಬ್ದದ ಅರ್ಥ ಗೊತ್ತಿಲ್ಲ ಅಂತ ಕೈಲಾಸದ ಪರ್ವತದ ಗುಹೆಯೊಂದರಲ್ಲಿ Mr. Brahma ಕೂಡಿ ಹಾಕಿಬಿಟ್ಟರಂತೆ.

Z : Oh my God !!

ನಾನು : ಎಲ್ಲಾ ದೇವತೆಗಳು ಹೀಗೆ ಕಿರ್ಚಿದ್ದು in front of Mr. Sadyojaata.

Z : ಏನ್ ಮಾಡಿದ್ರು ಈಶ್ವರ ಆಮೇಲೆ ?

ನಾನು : Master ಸುಬ್ರಮಣ್ಯ ಹತ್ತಿರ ಹೋಗಿ ಕೇಳಿದರಂತೆ , " ನೀನು ದೊಡ್ಡ ಮನುಷ್ಯನ ಥರ ಬ್ರಹ್ಮನ್ನ ಕೂಡಿಹಾಕಿಬಿಟ್ಟೆಯಲ್ಲ , ಓಂ ಪದದ ಅರ್ಥ ಗೊತ್ತಿಲ್ಲ ಅಂತ , ನಿನಗೆ ಗೊತ್ತ ನೆಟ್ಟಗೆ ? "

ನಾನು : ಅದಕ್ಕೆ Master ಸುಬ್ರಮಣ್ಯ " ನನಗೆ ಗೊತ್ತು ಓಂ ಶಬ್ದದ ಅರ್ಥ. ನೀನು ಅರ್ಥ ತಿಳ್ಕೊಬೇಕು ಅಂದ್ರೆ ನನ್ನ ಶಿಷ್ಯನಾಗು " ಅಂತ ಸಾಕ್ಷಾತ್ ಸದ್ಯೋಜಾತಂಗೆ ಹೇಳಿಬಿಟ್ಟರಂತೆ !

Z : ಓಹ್ಹೋ...ಸೂರ್ಯಂಗೇ ಟಾರ್ಚು !

ನಾನು : exactly. ಆದ್ರೆ ಸದ್ಯೋಜಾತ ಬೇಜಾರೇ ಮಾಡಿಕೊಳ್ಳಲಿಲ್ಲ . ಬಹಳ ಸಿಂಪಲ್ ಆಗಿ ಓಕೆ ಅಂದುಬಿಟ್ಟರು .

Z : ಹಾನ್ ? ಈಶ್ವರ ಸುಬ್ರಹ್ಮಣ್ಯನಿಗೆ ಶಿಷ್ಯ ಆದರಾ ?

ನಾನು : yes. ಜಗತ್ತಿಗೆ ಸ್ವಾಮಿಯಾದ ಸದ್ಯೋಜಾತಂಗೆ ಇವನು ಗುರುವಾದನು ಆದ್ದರಿಂದ ಅವನಿಗೆ ಇಲ್ಲಿ ಸ್ವಾಮಿನಾಥನ್ ಅಂತ ಹೆಸರು ಬಂತು.

Z : ಹಂಗೆ !

ನಾನು : ಹೂ...ಇದು ಮೊದಲನೆ ವರ್ಷನ್ನು.
ಎರಡನೇ ವರ್ಶನ್ ಕೂಡ ಚೆನ್ನಾಗಿದೆ. ಭೃಗು ಮುನಿ ಗೊತ್ತಲ್ಲ ? ಅವ್ರು ಒಮ್ಮೆ ತಪಸ್ಸು ಮಾಡಲು ಕುಳಿತರಂತೆ. ಆದ್ರೆ ಋಷಿಗಳು ತಪಸ್ಸು ಮಾಡುವಾಗಲೆಲ್ಲ ರಾಕ್ಷಸರು ಸಿಕ್ಕಾಪಟ್ಟೆ ತೊಂದರೆ ಕೊಡೋದು routine. exam time ನಲ್ಲೆ ಕರೆಂಟ್ ಹೋಗತ್ತಲ್ಲ, ಹಾಗೆ. ಅದಕ್ಕೆ ಭೃಗು ಮಹರ್ಷಿಗಳು ಹೇಳಿದರಂತೆ , ಯಾರಾದ್ರು(ದೇವತೆ+ರಾಕ್ಷಸ) ನನ್ನ ಹತ್ತಿರ ಬಂದ್ರೆ, ಅವರ ಬುದ್ಧಿ ಎಲ್ಲ hard disk format ಆಗೋದಂಗೆ ಎಲ್ಲ erase ಆಗೋಗತ್ತೆ ...ಎಷ್ಟೇ ತಿಪ್ಪರಲಾಗ ಹೊಡೆದರು ಖಂಡಿತಾ ನೆನಪಾಗಲ್ಲ ಅಂತ.

Z : ಯಪ್ಪಾ... dangerous !

ನಾನು : ಹ್ಞೂ ! ಇವರು ಎಷ್ಟು intensive ಆಗಿ ತಪಸ್ಸು ಮಾಡುತ್ತಿದ್ದರಪ್ಪ ಅಂದ್ರೆ, ಅವರ ತಲೆಯಿಂದ ಬೆಂಕಿ ಹೊರಗೆ ಬಂದು ಇಡಿ ಜಗತ್ತೆಲ್ಲ ವ್ಯಾಪಿಸತೊಡಗಿತು. ಎಲ್ಲರು ಈಶ್ವರನ ಹತ್ತಿರ ಹೋದರು. F1 !! f1 !! ಅಂದರು . ಅದಕ್ಕೆ ಈಶ್ವರ ಆ ಬೆಂಕಿ ತಡಿಯಲು ಭೃಗು ಮಹರ್ಷಿಗಳ ತಲೆಯ ಮೇಲೆ ಕೈ ಇಟ್ಟರು . ತಕ್ಷಣ ಈಶ್ವರನ hard disk format ಆಗೋಯ್ತು !

Z : ಅಯ್ಯಯ್ಯೋ !

ನಾನು : ಹ್ಞೂ ! Madam ಪಾರ್ವತಿ ಈಶ್ವರನಿಗೆ ಅವರು ಯಾರು, ಏನು, ಎತ್ತ ಅನ್ನೋದೆಲ್ಲಾ ನೆನಪಿಗೆ ತಂದುಕೊಟ್ಟರು...ಆದ್ರೆ ಈಶ್ವರನಿಗೆ ಓಂ ಶಬ್ದದ ಅರ್ಥ ನೆ ಮರ್ತೋಗಿತ್ತು. ಆಗ Master ಸುಬ್ರಮಣ್ಯ ಈಶ್ವರನಿಗೆ ಗುರುವಾಗಿ ಅರ್ಥ ತಿಳಿಸಿಕೊಟ್ಟರು ಅನ್ನೋದು ಕಥೆ.

Z : ಮೊದಲನೆಯದು ಸೂರ್ಯನಿಗೆ ಟಾರ್ಚ್ ಆದರೆ, ಎರಡನೆಯದು ಮೀನಿಗೆ ಫಿನ್ ಇರೋದೇ ಮರ್ತ್ಹೋಗಿ tube ಹಾಕೊಂಡು ಈಜುತ್ತಿರುವಾಗ ಅದಕ್ಕೆ ಫಿನ್ ಇದೆ ಅಂತ ನೆನಪಿಸಿ ಈಜನ್ನು ನೆನಪಿಗೆ ತಂದುಕೊಟ್ಟಹಾಗಾಯ್ತು !!

ನಾನು : ಗುಡ್...ಸೀರಿಯಲ್ ಗಳನ್ನ ನೋಡಿದ್ದಕ್ಕೂ ಸಾರ್ಥಕ ಆಯ್ತು ನೋಡು !

Z : ಯಾ ಯಾ...

ನಾನು : ನೀನು ಏನೇ ಹೇಳು...swami nathan is just so handsome !!

Z : ನಿಜವಾಗಲು ?

ನಾನು : ಹ್ಞೂ ! ನನಗಂತೂ ಹೊರಗೆ ಬರಕ್ಕೇ ಮನಸ್ಸಿರಲಿಲ್ಲ. ಅಮ್ಮ...ಬರ್ತ್ಯೋ ಇಲ್ವೋ ಅಂತ ಗದರಿದರು, ಹೊರಗೆ ಬಂದೆ ಅಷ್ಟೆ !

ಅಲ್ಲಿಂದ ನಾವು ಹೊರಟಿದ್ದು ತಂಜಾವೂರಿಗೆ .

Z : ಒಹ್ ! ಬೃಹದೇಶ್ವರ ದೇವಾಲಯಕ್ಕಾ ?

ನಾನು : yes. I was longing to see that temple ! ಹೆಸರಿಗೆ ತಕ್ಕ ಹಾಗೆ ಇದೆ ದೇವಸ್ಥಾನ. see anything and it is ಬೃಹತ್ !

Z :ಹೌದಾ ?

ನಾನು : ಹ್ಞೂ ! ನಾವು ಹೋದ ತಕ್ಷಣ ಅಲ್ಲಿ ಪವರ್ ಕಟ್ ಆಯ್ತು. ಎಲ್ಲರು ಬಂದು ದೇವರನ್ನೇ ನೋಡಕ್ಕೆ ಆಗಲಿಲ್ಲವಲ್ಲ ಅಂತ ಹಲುಬುತ್ತಾ ಹೊರನಡೆದರು. ನಾನು ಅಪರ್ಣ ಇಬ್ಬರು ಸ್ವಲ್ಪ ಹೊತ್ತು ಕಾದು ನೋಡೋಣ ಅಂತ ಅಂದುಕೊಂಡೆವು . ನಮ್ಮ ಕಾಯುವಿಕೆಗೆ ಬೆಲೆ ಇತ್ತು. generator on ಆಯ್ತು . ನಾನು ಮತ್ತು ಅಪರ್ಣ ಇಬ್ಬರು ಮೊದಲು ಬೃಹದೇಶ್ವರನ್ನ ನೋಡಿ ದಾಖಲೆ ಮಾಡಿದೆವು.

Z : ಶಭಾಷ್ !

ನಾನು : ನಮಗೆ ಅಷ್ಟಕ್ಕೆ ತೃಪ್ತಿ ಆಗ್ಲಿಲ್ಲ. ಸಿಕ್ಕಾಪಟ್ಟೆ ದೊಡ್ಡ queue ಇತ್ತು ಆದ್ದರಿಂದ ನಾವು ಬೇರೆ ಕಡೆಯಿಂದ ನುಗ್ಗಿದೆವು.

Z : typical Indians.

ನಾನು : Yes. ಲಿಂಗ ಎಷ್ಟು ದೊಡ್ಡದಾಗಿತ್ತು ಅಂದರೆ, ನನಗಂತೂ ಪಾಣಿಪೀಠವೇ ಕಾಣಿಸಲಿಲ್ಲ . ಅಷ್ಟರಲ್ಲಿ ನಾವು ಬೇರೆ ಕಡೆಯಿಂ ನುಗ್ಗಿದ್ದೆವು ಆದ್ದರಿಂದ ನಮ್ಮನ್ನು ಗದರಿಸಲು ದೇವಸ್ಥಾನದ ಸಿಬ್ಬಂದಿಯೊಬ್ಬರು ಬಂದರು. ನಾವು ಅವರಿಗೆ ವಿವರಿಸಿದೆವು, "ಇಲ್ಲ, ಕರೆಂಟು ಹೋಗಿತ್ತಾದ್ದರಿಂದ ನಮಗೆ ಏನೂ ಕಾಣಿಸುತ್ತಿರಲಿಲ್ಲ...ಇಲ್ಲೆಲ್ಲಾ ನೂಕುನುಗ್ಗಲು ಇತ್ತು, ಅದಕ್ಕೆ ಈಕಡೆ ಬಂದೆವು ಅಂತ, ಇವಿಷ್ಟನ್ನು ಆಂಗ್ಲದಲ್ಲಿ ಹೇಳಿದ್ದಕ್ಕೆ ಅವ " ಪೋಂಗೋ" ಅಂದ !

Z : ಹಹಹಹಹ !!!!!!!!

ನಾನು : ನಾವಿಬ್ಬರೂ automatic ಆಗಿ "ಬಿಂಗೋ" ಅಂದ್ವಿ !

Z : ಹೆಹ್ಹೆ !

ನಾನು : ನಾವು ವಾಪಸ್ ಹೊರಟೆವು...ಆದರೆ ಆಗಬೇಕಿದ್ದ ಕೆಲಸ ಆಗಿತ್ತು. ನಾವು Mr. ಬೃಹದೇಶ್ವರ ಅವರನ್ನು ನೋಡಿದ್ದಾಗಿತ್ತು. ನಾನು ಹೋಗುವಾಗ ಹಿಂದೆ ತಿರುಗಿ ನೋಡಿದೆ..ನನ್ನನ್ನು ಗದರಿದವ ಬೇರೆಕಡೆ ಎಲ್ಲೊ ನೋಡುತ್ತಿದ್ದ. ನಾನು ಇದೇ ಸರಿಯಾದ ಸಮಯ ಅಂತ camera on ಮಾಡಿದೆ, flash off ಮಾಡಿ, telescopic zoom ಹಾಕಿ, ಬೃಹದೇಶ್ವರನ photo ತೆಗೆದೇಬಿಟ್ಟೆ !

Z : Oh my god !

ನಾನು : ಹ್ಞೂ ಮತ್ತೆ...

Z : ಸರಿ. ಮಜಾ ಮಾಡು. ಮುಂದೆ ?

ನಾನು :ಹೊರ್ಗಡೆ ಬಂದು ನನ್ನ ಸಾಧನೆ ನ ವರ್ಣಿಸಿದೆ. ಅಣ್ಣ, " ಮಂಗನ ಕೈಲಿ ಮಾಣಿಕ್ಯದಂತೆ ಇಪ್ಪತ್ ಸಾವ್ರ invest ಮಾಡಿದ್ನಲ್ಲಾ ಅಂದುಕೊಂಡೆ...ಸದ್ಯ...ಕ್ಯಾಮೆರಾ ಕೊಡ್ಸಿದ್ದಕ್ಕೂ ಸಾರ್ಥಕ ಆಯ್ತು ! " ಅಂದ್ರು.

Z : :-) :-) :-)

ನಾನು :ಎಲ್ಲರು ಅವರವರ ಇಮೈಲ್ ಗೆ ಬೃಹದೇಶ್ವರನ್ನ ಬರಮಾಡಿಕೊಳ್ಳಲು ಕ್ಯೂ ನಿಂತರು. ನಾನು ಹಿರಣ್ಮಯಿ ಇಮೈಲ್ ಐಡಿ ಗಳನ್ನ ಸೇವ್ ಮಾಡಿಕೊಳ್ಳುವಲ್ಲಿ ಬ್ಯುಸಿ ಆದೆವು.

Z : ಹೆಹೆ...

ನಾನು :ಹಾನ್...ಒಂದು ವಿಷಯ. Mrs. ಬೃಹದೇಶ್ವರ ಅವರ ಹೆಸರು ಬೃಹನ್ನಾಯಕಿ ಅಂತ. ಎಂಥಾ ಪರ್ಫೆಕ್ಟ್ ವರಸಾಮ್ಯ ಅಂತ್ಯಾ .....marvellous...ಅಷ್ಟು ಎತ್ತರದ ಸ್ತ್ರೀ ದೇವತೆಯ ಮೂರ್ತಿ ನಾನು ನೋಡಿಯೇ ಇರ್ಲಿಲ್ಲ !!

Z : hmmm....

ನಾನು : ಒಂಭತ್ತು ಟೈಪ್ ಗೆಜ್ಜೆ ಹಾಕಿದ್ದ್ರು..ಎಲ್ಲಾ patterns ಸೂಪರ್ರಾಗಿತ್ತು...ಬರ್ಕೊಳಣಾ...ಬೆಂಗಳೂರಲ್ಲಿ ಹುಡ್ಕೋಣ ಅಂದುಕೊಂಡೆ...ಬರ್ಕೊಳ್ಳಕ್ಕೆ ಟೈಮೇ ಸಿಗ್ಲಿಲ್ಲ !

Z : ಪಾಪ ಪಾಪ !!!

ನಾನು : serious ಪಾಪ ! ಸರಿ ಹೋಕೊಳ್ಳಿ ಅಂತ ಅಲ್ಲಿಂದ ಹೊರಟು, ಊಟ ಮುಗಿಸಿ ಶ್ರೀರಂಗಮ್ ಕಡೆ ಪ್ರಯಾಣ ಬೆಳೆಸಿದೆವು. ಅವತ್ತು ಶ್ರೀರಂಗಮ್ ನಲ್ಲೇ ಹಾಲ್ಟು. ರೂಮಲ್ಲಿ ಲಗೇಜಿಟ್ಟು ರಂಗನಾಥಸ್ವಾಮಿಯ ದೇವಸ್ಥಾನಕ್ಕೆ ಹೊರಟೆವು. ಅಲ್ಲಿ ಕಾದು ಕಾದೂ ಒಳಗೆ ಹೋದರೆ ದೇವರ ದರ್ಶನವೇ ಇಲ್ಲ ಅಂದುಬಿಟ್ಟರು. ಸರಿ ನಾವು ಮಾರನೆಯ ದಿನ ಬೆಳಿಗ್ಗೆ ಬೇಗ ಎದ್ದು ಕ್ಯೂ ನಿಲ್ಲುವುದಾಗಿ ನಿರ್ಧರಿಸಿ ಅಲ್ಲಿನ ಪ್ರಸಿದ್ಧ ಜಂಬುಕೇಶ್ವರ ದೇವಾಲಯಕ್ಕೆ ಹೋಗುವುದಕ್ಕೂ ಅವರು ಬಾಗಿಲು ಹಾಕುವುದಕ್ಕೂ ಸರಿಯಾಯ್ತು. ಸರಿ ಎರಡೂ ದೇವಸ್ಥಾಕ್ಕೆ ಬೆಳಿಗ್ಗೆಯೇ ಬೇಗ ಹೋಗುವ ಪರಿಸ್ಥಿತಿ ಉದ್ಭವವಾಯ್ತು. As usual, no hot water. ಮೂರುವರೆಗೆ ಏಳಬೇಕ್ಕಿತ್ತು...

Z :ಗೂಬೆಗಳು ಕಾಫಿ ಕುಡ್ಯೋ ಟೈಮ್...

ನಾನು : ಹೂಂ...... ಬಂದದ್ದೇ ಮೊಬೈಲು ಮತ್ತು ಕ್ಯಾಮೆರಾ ಚಾರ್ಜಿಗೆ ಹಾಕಿ, ಅಲಾರಂ ಇಟ್ಟು ಮಲಗಿದ್ದಷ್ಟೇ ಗೊತ್ತು...

Z : ಫೋಟೋಸ್...

ನಾನು :ಕೆಳಗಿದೆ slide show.



ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...