Wednesday, January 30, 2008

ದುಷ್ಯಂತ- ವೈದೇಹಿ-ಶಾಕುಂತಲ !!

Z : day two and three...lakshmi confused !!! galaxies round her head !!OR are they question marks ???

ನಾನು : ಸಾಕು !! ನಿನಗೇನು ಗೊತ್ತು ನಾನ್ ಯಾವ್ ಯೋಚನೇಲಿ ಇದಿನಿ ಅಂತ !!

Z : ಯಾವ್ ಯೋಚನೇಲಿ ಬೇಕಾದ್ರು ಇರು head ruled -ಊ!! but ಏನ್ ಯೋಚನೆ ಮಾಡ್ತಿದ್ಯಾ ಅಂತ ಹೇಳು !!

ನಾನು : ಪಾಠಗಳ ಬಗ್ಗೆ ofcourse !!! ನೆನ್ನೆ ಏನ್ ಆಯ್ತು ಗೊತ್ತ ? ನಮ್ಮ HOD ಬಂದು, "I hope you remember whatever we did in last semester" ಅಂದ್ರು. ನಾವೆಲ್ಲ ಪಿಳಿ ಪಿಳಿ ಕಣ್ಣ್ ಬಿಟ್ವಿ !! first question was...
" what is a metal ? "

Z : ಪುಂಖಾನುಪುಂಖವಾಗಿ answer ಮಾಡಿದ್ರೋ ಇಲ್ವೊ ?

ನಾನು : nothing !!! ಹತ್ತು ನಿಮಿಷ ನೀರವ ಮೌನ !!! ನಮ್ಮ ಸರ್ ಗೆ ಕೋಪ ಬಂತು. ಅದನ್ನ ಹೇಗೆ ತಡೆದುಕೊಂಡ್ರೋ ನನಗಂತೂ ಗೊತ್ತಿಲ್ಲ...great person ಅವ್ರು !! ಸರಿ ಆಮೇಲೆ ಅವರೇ..." tell me what you know !! "ಅಂದ್ರು. ಆಗ್ಲೂ silence. ಸರಿ ಆಮೇಲೆ ಅವರೇ metal characteristics ಎಲ್ಲಾ ಬರೆದರು !! ಆವಾಗ ಸ್ವಲ್ಪ ನೆನಪಾಯ್ತು...faint ಆಗಿ.

Z : ಕರ್ಮಕಾಂಡ !!! faint ಅಂತೆ faint !! ರಜದಲ್ಲಿ ಹೀಗಾ ಎಲ್ಲಾನೂ ಮರ್ಥೋಗದು ? ಮರೆವಿಗೂ ಒಂದು ಇತಿ ಮಿತಿ ಇರ್ಬೇಕು !!ನಿನ್ನದಂತು ಎಂಥಾ special case ಅಂದ್ರೆ...sudden ಆಗಿ ಯಾರಾದರು " ನಿನ್ನ ಹೆಸರೇನು ? "ಅಂತ ಕೇಳಿದರೆ, your answer will be " I don't know !!" ದೊಡ್ಡ ದುಷ್ಯಂತ ಮಹಾರಾಜರ ವಂಶಸ್ಥೆ !! sir board ಮೇಲೆ ಬರೆದಾಗ ಅದು ನಿನಗೆ ಶಕುಂತಲೆಗೆ ಕೊಟ್ಟ ಉಂಗುರದಂತೆ ಕಾಣಿಸಿ ಆಗ ನೀನು ದುಷ್ಯಂತನಂತೆ ಎಲ್ಲಾ ಜ್ಞಾಪಿಸಿಕೊಂಡೆಯಾ ?? ಆಗ "ಶಾಕುಂತಲಾ...ಶಾಕುಂತಲಾ..." ಅಂತ ಮಹಾರಾಜರು ಕೂಗಿಕೊಂಡು ಹೋದರು....ನೀನು "metal...metal.." ಅಂತ ಕೂಗಿದೆಯ ?? ಕೈಗೆ ಏನ್ ಸಿಕ್ತು ? ಚಿನ್ನ?? ಬೆಳ್ಳಿ...ತಗಡು ???

ನಾನು : ಶ್ !!!!!!!!!!!!!!! ಅಷ್ಟೋಂದ್ ಏನು ಮರ್ಥೋಗಿರ್ಲಿಲ್ಲ ನಾನು...Gold is a metal ಅಂತ ಗೊತ್ತಿತ್ತು...chlorine is a non metal ಅಂತ ಗೊತ್ತಿತ್ತು...Helium is inert ಅಂತ ಗೊತ್ತಿತ್ತು...

Z : But what is a metal ಅಂತ ಗೊತ್ತಿರ್ಲಿಲ್ಲ. ಗಣಪತಿ ಮಾಡ್ರೋ ಅಂದ್ರೆ ಅವರಪ್ಪನ್ನ ಮಾಡ್ತೀರಿ ನೀವು !!

ನಾನು : ಏನಿಲ್ಲ !! ಅವರು metal characteristics ಬರೆದ ಮೇಲೆ periodic table ಬಗ್ಗೆ ಪ್ರಶ್ನೆಗಳನ್ನ ಕೇಳಿದಾಗ ನಾನೇ ಎಲ್ಲಾ answer ಮಾಡಿದೆ. incomplete d shells...incomplete f shell....ಎಲ್ಲ !!

Z: Sir, ನನ್ನ brain shells incomplete ಅಂತ ಯಾಕೆ ಹೇಳಲಿಲ್ಲ ?head ruled out ಅಂತ ಹೇಳೋದಪ್ಪ !!!! ಒಂದು ಕಾಲದಲ್ಲಿ ಸಾಕ್ಷಾತ್ Hermione Granger ತರಹ ಎಲ್ಲದಕ್ಕು ಉತ್ತರಗಳನ್ನ ಪಟಾಪಟನೆ ಒದರುತ್ತಿದ್ದ ಲಕ್ಶ್ಮಿ ಶಶಿಧರ್ ಇವತ್ತು ಮೌನ ಗೌರಿ !!

ನಾನು : hey !! engine start ಆದ್ಮೆಲೂ ಅದಕ್ಕೆ ಸಲ್ಪ time stabilise ಆಗೋಕೆ. ಇನ್ನು ನಮ್ಮ ಬ್ರೈನ್ ಪಾಪ !! ಅದಕ್ಕೆ time ಬೆಡ್ವಾ ?

Z : ಬೇಕು ಬೇಕು...6 months ನಲ್ಲಿ 5 and a half months ಸಾಕಾ ? brain stabilise ಆಗೋಕೆ ? ಕರ್ಮ ಕರ್ಮ !! ನಿನಗೆ ಕುಂಟು ನೆಪ ಹೇಳೊಕೆ ಬಿಟ್ಟರೆ ಇನ್ನೇನ್ ಗೊತ್ತಿದೆ ? ಉದ್ಧಾರ ಪದದ spelling ಆದ್ರೂ ಗೊತ್ತ ನಿನಗೆ ? ಇರ್ಲಿ...ನಾನ್ ಕಿರ್ಚಾಡಿ what ಪ್ರಯೋಜನ ? ನಾನು ಒಳಗೆ ಇರೋಳು !! ಹೋಗಲಿ !! sir ನಿಮ್ಮ ದುಷ್ಯಂ(ರಂ)ತ ಸ್ಥಿತಿಗಳನ್ನ ನೋಡಿ ಏನ್ ಅಂದರು ?

ನಾನು : "read your previous semester notes and come for the next class " ಅಂದ್ರು !!

Z : ಓದು ಓದು !! Oh !! I forgot !! exam ಮುಗಿದ josh ನಲ್ಲಿ ಎಲ್ಲಾ notes ನ ಎಲ್ಲೆಲ್ಲೋ ಗಾಳಿಪಟದ ತರಹ ಹಾರಾಡಕ್ಕೆ ಬಿಟ್ಟಿದ್ಯಲ್ಲ !! ಇನ್ನು ನಿನ್ನ ಆ table ? ನಂದಿ ಬೆಟ್ಟದ prototype !! ಎಲ್ಲಿಂದ, ಹೇಗೆ ಹುಡುಕ್ತೀಯಾ ಈಗ ?

ನಾನು :ಎಲ್ಲಿಂದ ಅಂತ ಗೊತ್ತಿಲ್ಲ. ಹಾಡು ಹೇಳ್ಕೊಂಡು ಹುಡುಕುತ್ತೀನಿ... "ವೈದೇಹಿ ಏನಾದಳೋ ?????........" ಅಂತ !!

Z :ಹುಡುಕು ಹುಡುಕು...atleast ಕಿಷ್ಕಿಂಧೆ reach ಆಗು ನಿನ್ನ ಹುಡುಕಾಟದಲ್ಲಿ. ಆಮೇಲೆ ಹಾಗೂ ಹೀಗೂ ರಾಮೇಶ್ವರ ತಲುಪಿ ಒಂದು bridge ಕಟ್ಟು; from one end of the table to another. first register ಮಾಡಿಸಿಕೋ ! ಈಗ ಜನರು ರಾಮೇಶ್ವರದ ಸೇತುವೆಯನ್ನು ರಾಮನೇ ಕಟ್ಟಿದ ಅಂತ ಏನು guarantee ಅಂತ ಕೇಳಿದ ಹಾಗೆ ನಾಳೆ ನಿನ್ನ bridge ಗೆ ಕೇಳಬಾರದು you see !! ಆಮೇಲೆ ನೋಡು...ನಿನ್ನ notes...Oh sorry !! ವೈದೇಹಿ ಸಿಗ್ತಾಳೆ !!

ನಾನು : ಆಹಾ !!! ನಿನ್ನಂಥವರು ಒಬ್ಬರು ಸಾಕು ನೋಡು !! ಡಕೋಟಾ idea ಗಳಿಗೆ !!

Z: ನಮ್ಮಂಥವರು ಒಬ್ಬೊಬ್ಬರೇ ಬೇಕಾಗಿರೋದು ಎಲ್ಲರಲ್ಲೂನು ...every body have only one zindagi in their life ! ಸರಿ ದುಷ್ಯಂತ....All the best in searching ವೈದೇಹಿ !!

ನಾನು : ಲೇ!!!!!!!!!! ಕಥೆ ಕೆಡಿಸಬೇಡ !!! dushyanta went in search of shaakuntala...not sita !!

Z : ಕಥೆ ಕೆಡಿಸಲಿಲ್ಲ...twist ಮಾಡಿದೆ ! see....you are ದುಷ್ಯಂತ . you want your ಶಾಕುಂತಲ (memory). So you are searching your notes (ವೈದೇಹಿ )...So climax ಏನ್ ಆಯ್ತು ? ವೈದೇಹಿ led ದುಷ್ಯಂತ to ಶಾಕುಂತಲ! ! ಹೇಗೆ ?

ನಾನು : ಅಯ್ಯೋ !! ನಿನ್ನ ಮಾತು ಕೇಳಿ ವಾಲ್ಮೀಕಿ ಮತ್ತು ಕಾಳಿದಾಸರ ಆತ್ಮಗಳು ಇಬ್ಬರಲ್ಲಿ ಯಾರು first ಬಾವಿಗೆ ಬಿದ್ದುಆತ್ಮ ಹತ್ಯೆ ಮಾಡಿಕೊಳ್ಳಬೇಕು ಅಂತ ಜಗಳ ಆಡ್ತಿದಾರೆ !!ನಾನು ಹೋಗಿ ಸಮಾಧಾನ ಮಾಡ್ತಿನಿ...line on hold !!

Z: ವೈದೇಹಿಯನ್ನ ಮರೀಬೇಡ ದುಷ್ಯಂತ !!

(ಸಶೇಷ )

Monday, January 28, 2008

ಶುರುವಾದ ಕಾಲೇಜು !!

ನಾನು : ಒಂದುವರೆ ತಿಂಗಳು ನಾನು ಬೆಳಗ್ಗೆ ೬.೩೦ ರ ಸೂರ್ಯನಿಗೆ hi ಹೇಳಿಯೇ ಇರಲಿಲ್ಲ !! ಇವತ್ತು ಬೆಳಗ್ಗೆ ಆರು ವರೆಗೆ ಎದ್ದು ಕಾಲೇಜಿಗೆ ಹೋಗಬೇಕಾಗಿ ಬಂತು !!

Z: finally,ಕಾಲೇಜು ಶುರುವಾಯಿತು.

ನಾನು: ಹು...ಏಳಲು ಮನಸ್ಸೇ ಇರದೆ...ಕಾಗೆ ಸ್ನಾನ ಮಾಡಿ...ತಿಂದಿದ್ದು ಏನು ಅಂತ ಗೊತ್ತಾಗದೆ...ಹೇಗೋ ಒಂದು ಆಟೋ ಹಿಡಿದು ಕಾಲೇಜಿಗೆ ಸರಿಯಾಗಿ ೮.೩೦ ಕ್ಕೆ ಕಾಲಿಟ್ಟೆ.ನೋಡಿದರೆ ೯.೩೦ ತನಕ ಪಾಠಗಳೇ ಇರಲಿಲ್ಲ !!ಬಸ್ಸಿನಲ್ಲೇ ಬರಬಹುದಿತ್ತು !!ಅನ್ಯಾಯ ಮೂವತ್ತು ರೂಪಾಯಿ ಆಟೋನವನಿಗೆ ಸುರಿದೆನಲ್ಲಾ ಅನ್ನಿಸಿತು !!

z: cant help. ಏನಿತ್ತು ?

ನಾನು : Astrophysics !! ನನಗೆ ಸ್ವಲ್ಪ ಭಯ ಹುಟ್ಟಿಸುವ subject ಇದು ! but thanks to shailaja maa'm...she made the subject so imaginative and simple...I began to love it !!

Z: planetarium ನಲ್ಲಿ ಇದಾರಲ್ಲ ...ಅವರಾ ?

ನಾನು : ಹು...ಅವರು ಎರಡು derivation ಗಳನ್ನು ಮಾಡಿದರು ಅಂತ ಅವರೇ ನಮಗೆ ಹೇಳುವವರೆಗೂ ಗೊತ್ತಾಗಲೇ ಇಲ್ಲ !! ನಮ್ಮನ್ನು ಅಂತರಿಕ್ಷದಲ್ಲಿ ಸ್ವೇಚ್ಛೆ ಇಂದ ಓಡಾಡಲು ಬಿಟ್ಟರು !! ಸಾಮಾನ್ಯವಾಗಿ ಈ subject ಗೆ imagination ಬೇಕು. everything is 3 dimensional here. ನಮ್ಮ ಕಲ್ಪನಾ ಸಾಮರ್ಥ್ಯವನ್ನು ಹೆಚ್ಚಿಸಿದರಲ್ಲದೇ, ನಾವು ಎಲ್ಲಿದ್ದೇವೆ...ಬೇರೆಯವರಿಗೆ ನಾವು ನೋಡುವ ಆಕಾಶಕಾಯಗಳನ್ನು describe ಮಾಡುವುದು ಹೇಗೆ ಎಂದು ಅತಿ ಮನೋಜ್ಞವಾಗಿ...ಮನೋಹರವಾಗಿ ಪಾಠ ಮಾಡಿದರು !! ನಿಜವಾಗಿಯೂ ನಾನು ಈ subject ಬಗ್ಗೆ ಹೆದರಿದ್ದೆ..but now, I am not at all worried !!

Z: good...ನಾಳೆ ?

ನಾನು : ಗೊತ್ತಿಲ್ಲ...But I eagerly await astrophysics ಈಗ !!

Z: ಕಲಿಯುವ ವರೆಗೂ ಬ್ರಹ್ಮವಿದ್ಯೆ...

ನಾನು : ಕಲಿತಾದ ಮೇಲೆ exam ವಿದ್ಯೆ !!

(ಸಶೇಷ)

Friday, January 25, 2008

ವಾಹ್ !! ಮಂಗಳೂರು !! ಭಾಗ ೨

ನಾನು : ಪ್ರಯಾಣದ ಸುಸ್ತೋ ಅಥವಾ ಮಾತಾಡಿ ಮಾತಾಡಿ ಸುಸ್ತಾಗಿತ್ತೋ ಏನೋ ನನ್ನ ಸ್ನೇಹಿತೆಯ ತಂದೆ ಬಂದು ಎಬ್ಬಿಸುವ ವರೆಗೂ ನಾವು ಯಾವ ಲೋಕದಲ್ಲಿ ತೇಲಾಡುತ್ತಿದ್ದೇವೆಂದು ನಮಗೇ ತಿಳಿದಿರಲಿಲ್ಲ...ಅಂತಹ ಗಾಢ ನಿದ್ದೆಯಲ್ಲಿದ್ದೆವು. ಐದಕ್ಕೆ ಏಳಬೇಕಾಗಿದ್ದವರು ಆರಕ್ಕೆ ಕಣ್ಣು ಬಿಟ್ಟೆವು. ಮುಖ ತೊಳೆದ ತಕ್ಷಣ ಅಂಕಲ್ ಬಿಸಿ ಬಿಸಿ ಕಾಫಿ ತಂದು ಕೊಟ್ಟರು. ಎಂತಹ ಅದ್ಭುತ ಕಾಫಿ ಎಂದರೆ ಅದು....ವಾಹ್ !! ನೆನ್ನೆಯ ಆ ಕಾಫಿಯ "ಖುಷಿ" ಅನುಭವವಾದ ಮೇಲೆ ನನ್ನ ನಾಲಿಗೆ ಕಾಫಿಯ ರುಚಿಯನ್ನೇ ಮರೆತಿತ್ತೇನೋ !!ಆಗಿದ್ದ ಆ ನಷ್ಟವನ್ನು ತುಂಬಿಸಿ ಕೊಡಲು ಈ ಕಾಫಿಯು ಎಲ್ಲ ವಿಧದಲ್ಲೂ ಸಮರ್ಥವಾಗಿತ್ತು. ಘಮ ಘಮಸುತ್ತಿದ್ದ ಆ ಕಾಫಿಯ ಘಮವನ್ನೇ ಎರಡು ನಿಮಿಷ ಆಘ್ರಾಣಿಸಿದೆ...ಅಪ್ಯಾಯಮಾನವಾದ ಅನುಭವ !!ಅಂಕಲ್ ಗೆ ಹೇಳಿದೆ ಸಹಾ " uncle....excellent coffee !!! " ಅದಕ್ಕೆ ಅವರು ಸಂತೋಷಿಸುತ್ತಾ "ಇದು ನಲವತ್ತು ವರ್ಷಗಳ ಅನುಭವ ! " ಎಂದರು. ನಾನು ಅವರ ಪಾಂಡಿತ್ಯಕ್ಕೆ ತಲೆದೂಗಿ ಮುಕ್ತ ಕಂಠದಿಂದ ಪ್ರಶಂಸಿಸಿದೆ. ಅಂಕಲ್ ವೃತ್ತಿಯಲ್ಲಿ ಪತ್ರಕರ್ತರಾದರೂ ಬಹಳ jovial ಸ್ವಭಾವದವರು. ಅವರ ಹಾಸ್ಯಪ್ರಜ್ಞೆ ಅತ್ಯದ್ಭುತ. his one liners were very witty ! ಆಂಟಿಯೂ ಅಷ್ಟೇ !! ನಾವು ಅವರನ್ನು ಬಹು ಬೇಗ ಹೊಂದಿಕೊಂಡು ಬಿಟ್ಟಿದ್ದೆವು.

Z : hmm....good...ಹೊರಟಿದ್ದು ?

ನಾನು : ಏಳುವರೆಗೆ ಏನಾದ್ರು ಸರಿ ಹೊರಡಲೇಬೇಕೆಂದು ಹಿಂದಿನ ದಿನ ನಿರ್ಧರಿಸಿದ್ದೆವು. ಆದರೆ ಮನೆ ಬಿಟ್ಟಿದ್ದು ಎಂಟುಕಾಲಿಗೆ. ಮೈನ್ ರೋಡ್ ತಲುಪಿ ಆಟೋ ಹಿಡಿದು ಬಂಟ್ಸ್ ಹಾಸ್ಟೆಲಿನ ಬಸ್ ಸ್ಟಾಪಿಗೆ ಬರುವ ಹೊತ್ತಿಗೆ ಉಡುಪಿಗೆ ಹೊರಟಿದ್ದ ಎಕ್ಸ್ ಪ್ರೆಸ್ ಬಸ್ಸೊಂದು ಹೊರಟು ನಿಂತಿತ್ತು. ಅಟೋನವನಿಗೆ ದುಡ್ಡು ಕೊಟ್ಟು ಓಡೋಡಿ ಬಸ್ಸು ಹತ್ತಿದೆವು. ಆದರೆ ನಾವೆಲ್ಲರೂ ಬೇರೆ ಬೇರೆ ಕೂರಬೇಕಾಯಿತು ! ಇಬ್ಬರನ್ನು ಕೇಳಿದೆವು...ಅವರು ಜಾಗ ಬಿಟ್ಟು ಕೊಡಲು ನಿರಾಕರಿಸಿದ್ದು ಬೆಂಗಳೂರಿಗರಾದ ನಮಗೆ ಆಶ್ಚರ್ಯ ತಂದಿತು.

Z :Interesting !! Some people might be conservative ! ಏನೂ ಮಾಡೊಕಾಗಲ್ಲ.

ನಾನು : ನಿಜ.ಬಸ್ಸು ಹೊರಟ ತಕ್ಷಣ ಮಂಗಳೂರಿನ characteristic ಮೀನು ವಾಸನೆ ಬರಲು ಪ್ರಾರಂಭವಾಯಿತು. ನನಗೆ ಸತ್ಯನಾರಾಯಣ ಪೂಜೆಯ ಕ್ಯಾಸೆಟ್ಟಿನಲ್ಲಿ ಶಾಸ್ತ್ರಿಗಳು ಹೇಳಿದ್ದು ನೆನಪಾಯಿತು - "ಮೂಗು ಹಿಡಿದು ಪ್ರಾಣಾಯಾಮ ಮಾಡುವುದು !!"

Z : ಮಾಡಿದೆಯಾ ?

ನಾನು : ಇಲ್ಲ,ಬರೀ ಉಸಿರು ಬಿಗಿ ಹಿಡಿದೆ. ಬಸ್ಸಿನವ ಸ್ಪೀಡಾಗಿ ಓಡಿಸುತ್ತಿದ್ದ ರೀತಿ ಎಗ್ಗಾ ಮುಗ್ಗಾ ಓಡುವ ನಮ್ಮ 201 ಅನ್ನು ನೆನಪಿಸಿತು. ಇವನು accelerator ಮೇಲೆ ಕಾಲಿಟ್ಟವ ತೆಗೆಯಲು ಮನಸ್ಸು ಮಾಡಿದ ಹಾಗೆ ನಮಗೆ ಕಾಣಲಿಲ್ಲ. ನನ್ನ ಮಂಗಳೂರಿನ ಸ್ನೇಹಿತೆ ಸೂರತ್ಕಲ್ಲು ಬರುವವರೆಗೂ ಎದ್ದಿದ್ದು,ನಮಗೆ engineering college ತೋರಿಸಿ, ಇನ್ನೇನು ನೋಡುವಷ್ಟಿಲ್ಲ, ನಿದ್ದೆ ಮಾಡುವವರು ಮಾಡಿ ಎಂಡು ತಾನು ಥಟ್ಟನೆ ನಿದ್ರಿಸಲು ಆರಂಭಿಸಿದಳು.

Z : one small question -ನ್ನು. ಮದುವೆ ಇದ್ದಿದ್ದು ಮಣಿಪಾಲದಲ್ಲಿ. ನೀವು ಮಣಿಪಾಲಕ್ಕೆ ಹೋಗುವುದು ಬಿಟ್ಟು ಉಡುಪಿಗೆ ಯಾಕೆ ಹೋದಿರಿ ?

ನಾನು : lawyer zindagi,ಉಡುಪಿಯ ತನಕ ಹೋಗಿ ಕೃಷ್ಣ ಪರಮಾತ್ಮನಿಗೆ ಒಂದು ನಮಸ್ಕಾರವೂ ಹಾಕದಿದ್ದರೆ ಹೇಗೆ ? moreover, ಉಡುಪಿಯಿಂದ ಮಣಿಪಾಲ just 5 kms. so, ಕಿಟ್ಟಿ ಗೆ Hi ಹೇಳಿ ಹೊರಡುವುದೆಂದು ತೀರ್ಮಾನ ಮಾಡಿದ್ದೆವು.

Z : ಓಹ್ !! ಹಾಗೆ ! continue continue.

ನಾನು : ಅವಳು ನಿದ್ರಿಸಲು ಪ್ರಾರಂಭಿಸಿದಳು. ಹಳ್ಳಕೊಳ್ಳಗಳ ಪರಿವೇ ಇಲ್ಲದೆ, ಬಸ್ಸನ್ನು formula 1 car ಅಂದುಕೊಂಡು, ತಾನೇ ಷೂಮೇಕರ್ ಅಂದು ಭಾವಿಸಿ ಓಡಿಸುತ್ತಿದ್ದ ಆ ಚಾಲಕನ ದೆಸೆಇಂದ ಬೆಂಗಳೂರಿನವರಾದ ನಮಗೆ ನಿದ್ದೆ ಬಾರದೇ ಹೋಯ್ತು. ಎಲ್ಲಾ ಜಾಗಗಳಲ್ಲೂ ಬಿಡದೆ ನಿಲ್ಲಿಸಿ, ಹತ್ತು ಗಂಟೆಗೆ ನಮ್ಮನ್ನು ಉಡುಪಿ ತಲುಪಿಸಿದ. ಸದ್ಯ ಜೀವಂತವಾಗಿ ತಲುಪಿದೆವಲ್ಲಾ ಎಂದು ನಾವು ನಿಟ್ಟುಸಿರು ಬಿಟ್ಟರೆ, ನಮ್ಮ ಮಂಗಳೂರಿನ ಸ್ನೇಹಿತೆ " ಸಖತ್ slow ಆಗಿ drive ಮಾಡಿದ. ನಾವು ಒಂಭತ್ತು ವರೆಗೇ ತಲುಪಬೇಕಿತ್ತು !ಅನ್ಯಾಯ late ಆಯ್ತು !! " ಅಂದಳು. ನಾವಿಬ್ಬರು ಒಟ್ಟಿಗೆ " what ? slow driving a ? " ಎಂದು ಗಾಬರಿ ಸೂಚಿಸಿದೆವು. ನಮ್ಮ ಭಯವನ್ನು ಗ್ರಹಿಸಿದ ಅವಳು, " ರಸ್ತೆ ಕೆಟ್ಟಿದೆ, ಅದಕ್ಕೆ ಈ ಥರ slow ಆಗಿ ಓಡಿಸಿದ...ಇಲ್ಲ ಅಂದ್ರೆ you just cant imagine ..." ಅಂದಳು. ನಾವು imagine ಮಾಡಿಕೊಳ್ಳುವ ತಂಟೆಗೆ ಹೋಗಲೇ ಇಲ್ಲ !! we were soooooo scared !!

Z : ಹೆದರಿದ್ದಕ್ಕೆ make up gone !! touch up ಗೆ ಏನು ಮಾಡಿದಿರಿ ?

ನಾನು :ಅಯ್ಯೋ ಅದೊಂದು ದೊಡ್ಡ ಕಥೆ. ಮುಹೂರ್ತ ಇದ್ದಿದ್ದು ಹತ್ತೂ ವರೆಗೆ. ನಾವು ಉಡುಪಿಯಲ್ಲಿ ದರ್ಶನಕ್ಕೆಂದು ಹೋದರೆ ನಮಗೆ ಮುಹೂರ್ತ miss ಆಗುತ್ತಿತ್ತು.So, ದರ್ಶನವನ್ನು post-pone ಮಾಡಬೇಕಾಯಿತು. Actually, touch up ನಾವು ಉಡುಪಿಯಲ್ಲಿ ಮಾಡಿಕೊಳ್ಳಲು ಯೋಚಿಸಿದ್ದೆವು. plan could not be executed. ಬಂದದ್ದೇ ಮಣಿಪಾಲ ಬಸ್ ಹತ್ತಿದೆವು. ಬೇರೆ ದಾರಿಯಿಲ್ಲದೇ ಬಸ್ಸಿನಲ್ಲೇ touch up ಮಾಡಿಕೊಳ್ಳಬೇಕಾಯಿತು. ಬಸ್ಸಿನವರೆಲ್ಲಾ ನಮ್ಮನ್ನ extra terrestrials ಥರ ನೋಡಿದರು !!! We couldnt help it. ಅಲ್ಲಿನ ಛತ್ರಗಳಲ್ಲಿ room ಗಳು ಇರೋದಿಲ್ಲ. ಮದುವೆ ಅಲ್ಲಿ One day function ಅಂತೆ. ಅದಕ್ಕೆ Bus was our only resort !!

Z : ಹೆ ಹೆ ಹೆ ಹೆ !! ಥರ ಏನ್ ಬಂತು....ನೀವು ET ಗಳೇ !!ಪಾಪ bus people!!

ನಾನು : what ಪಾಪ !! ನಾವು ಪಾಪ !! ಸೆಖೆ ಲಿ ಒದ್ದಾಡುತ್ತಿದ್ದಿವಿ !! ಕೊನೆಗೂ ಛತ್ರ ಮುಟ್ಟಿದೆವು. correct ಮುಹೂರ್ತದ timeಗೆ entry ಕೊಟ್ಟೆವು. ನಮ್ಮನ್ನು ನೋಡಿ ನನ್ನ ಸ್ನೇಹಿತೆ ಮತ್ತು ಅವರ ಮನೆಯವರೆಲ್ಲಾ ಸಖತ್ ಖುಶಿ ಪಟ್ಟರು. ಮದುವೆಯಾಯಿತು...ಊಟವೂ ಆಯಿತು. ಮಂಗಳೂರಿನ ಮುಖ್ಯ ತಿನಿಸುಗಳಾದ ಮೆಣಸು ಕಾಳು, ಗಸಿ, ಸಾಟೆ...ಅವೆಲ್ಲ ಚಪ್ಪರಿಸಿಕೊಂಡು ಸವಿದೆವು.ನನಗೆ ಎಲ್ಲವೂ ರುಚಿಸಿತು..because all of them were made in normal oil...not coconut oil !!


Z : coconut oil ನಲ್ಲಿ banana chips ಆದ್ರೆ ok ನಾ ? ಇನ್ನು ಯಾವುದೂ ok ಅಲ್ವಾ ?

ನಾನು : ಸದ್ಯಕ್ಕೆ not okay ! ಆಮೇಲೆ ಏನಾಗತ್ತೋ ಗೊತ್ತಿಲ್ಲ. ನಾವು ಊಟಕ್ಕೆ ಕೂರುವ ಮುಂಚೆಯೇ ಅಂಕಲ್ phone ಮಾಡಿ ಉಡುಪಿಯಲ್ಲಿ ಪರ್ಯಾಯದ ಪ್ರಯುಕ್ತ ದೇವಸ್ಥಾನ ಬಾಗಿಲು ಹಾಕಿರುವುದಿಲ್ಲವೆಂದೂ, ನಾವು ಮಣಿಪಾಲದಿಂದ ಉಡುಪಿಗೆ ಹೋಗಿ ಬರಬಹುದೆಂದು ಹೇಳಿದರು. ನಾವು ಹಾಗೆಯೇ ಮೂಡುಬಿದಿರೆಗೂ ಹೋಗಿ ಬರಲು ನಿರ್ಧರಿಸಿದೆವು.

Z : ಆಹಾ !! ಕಿಟ್ಟಿಗೆ Hi ಹೇಳುವ ಅವಕಾಶ ಕಡೆಗೂ ಸಿಕ್ಕಿತು !!

ನಾನು : ಹು !! ಉಡುಪಿಗೆ ಬಂದು, ವಜ್ರ ಕವಚ ತೊಟ್ಟು ಪರ್ಯಾಯ ಉತ್ಸವಕ್ಕೆ ತಯಾರಾಗಿದ್ದ handsome young ಕಿಟ್ಟಿಗೆ Hi ಹೇಳಿ, ದರ್ಶನ ಮಾಡಿ ನಂತರ ಉಡುಪಿ ಬಸ್ ಸ್ಟಾಪ್ ತಲುಪಿದೆವು. ಅಲ್ಲಿ ಮೂಡುಬಿದಿರೆ ಗೆ ಹೋಗುವ ಬಸ್ಸು ಯಾವುದೆಂದು ಕೇಳಿದಾಗ ಅವರು ಉಡುಪಿಯಿಂದ ಮೂಡುಬಿದಿರೆ ಗೆ ನೇರ ಬಸ್ಸಿಲ್ಲವೆಂದೂ, ನಾವು ಕಾರ್ಕಳಕ್ಕೆ ಹೋಗಿ ಅಲ್ಲಿಂದ ಇನ್ನೊಂದು ಬಸ್ಸನ್ನು ಹತ್ತಬೇಕೆಂದು ತಪ್ಪು ವಿವರ ನೀಡಿದರು. ಇದರ ಅರಿವು ಇರದ ನಾವು ಅವರು ಹೇಳಿದ್ದನ್ನೇ ಸತ್ಯವೆಂದು ನಂಬಿದೆವು. ಕಾರ್ಕಳದಲ್ಲಿ ಬೃಹತ್ ಬಾಹುಬಲಿ ಮೂರ್ತಿಯೊಂದಿದೆ ಎಂದು ನಮಗೆ ಪವಾಡಸದೃಶ ರೀತಿಯಲ್ಲಿ , for the first time in life, right time ಗೆ ಜ್ಞಾನೋದಯವಾಯಿತು.

Z : ಶಭಾಷ್ !! ಕೊನೆಗೂ ತಲೆಯ bulb on ಆಯಿತಲ್ಲ !!

ನಾನು : yeah right !! pling !! ಬರೋದು ಬಂದಿದ್ದೀವಿ, ಬಾಹುಬಲಿಗೂ ಒಂದು Hi ಹೇಳಿ ನಂತರ ಮೂಡುಬಿದಿರೆ ಗೆ ಪ್ರಯಾಣ ಬೆಳೆಸೋಣವೆಂದು ತೀರ್ಮಾನ ಮಾಡಿದೆವು. ನಮ್ಮ ಅದೃಷ್ಟವೋ ಎಂಬಂತೆ ನಮಗೆ ಮೂಡುಬಿದಿರೆಗೆ ನೇರ ಬಸ್ಸೊಂದು ಸಿಕ್ಕಿತು. ಹಾಗಾಗಿ ನಾವು ಕಾರ್ಕಳಕ್ಕೆ ಹೋಗುವ programme cancel ಮಾಡಿದೆವು. ಆದರೆ ಸ್ತ್ರೀಕುಲ ಪ್ರದೀಪ್ತೆಯರಾದ ನಮಗೆ ಕಾರ್ಕಳ ತಲುಪಿದ ತಕ್ಷಣ ಚಿತ್ತ ಚಾಂಚಲ್ಯವಾಯಿತು. ನಾವು ಈಗ ಬಾಹುಬಲಿಯನ್ನು ನೋಡದೇ ಇದ್ದರೆ ಇನ್ನು ವರ್ಷಗಟ್ಟಲೆ ಕಾಯಬೇಕಾಗುತ್ತದೆಂದು, ನಾವು ಮೂಡುಬಿದಿರೆ ನೋಡಿ ಮತ್ತೆ ಕಾರ್ಕಳಕ್ಕೆ ಬಂದು ನಂತರ ಮಂಗಳೂರಿಗೆ ಹೋಗಲು ಇಚ್ಛಿಸಿದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಆಗುತ್ತದೆಂದು ನಾನು ನನ್ನ ಸ್ನೇಹಿತೆಯರಿಗೆ ಮನದಟ್ಟು ಮಾಡಿಸುವಲ್ಲಿ ಯಶಸ್ವಿಯಾದೆ.ಆದರೆ ನಾವು ಮೂಡುಬಿದಿರೆಯ ವರೆಗೂ ಟಿಕೆಟ್ ಖರೀದಿಸಿದ್ದೆವು. ಡುಡ್ಡು ಹೋದರೆ ಹೋಗಲಿ,ಜಾಗ ಮುಖ್ಯ ಎಂದು ಬಹು ಕಷ್ಟ ಪಟ್ಟು ಗಟ್ಟಿ ಮನಸ್ಸು ಮಾಡಿದೆವು. ಬಸ್ಸಿನವ ಪುಣ್ಯಾತ್ಮ ಆದರೆ conductor ಪಾಪಿ !! ಬಾಹುಬಲಿ ಮೂರ್ತಿಯ ಹತ್ತಿರದಲ್ಲಿರುವ bus stop ಹತ್ತಿರ ನಿಲ್ಲಿಸಿದನು. conductor..waste fellow, idiot fellow, stupid fellow... ನಮ್ಮ ಟಿಕೆಟ್ ವಾಪಸ್ ತಗೋಂಡು ಮತ್ತೆ ಯಾರಿಗೋ ಕೊಟ್ಟು extra ದುಡ್ಡು ಕಮಾಯಿಸಿದ !!

Z : ದುಡ್ಡು ಮಾಡಿಕೊಳ್ಳಲಿ ಬಿಡು ಪಾಪ...ಉದರ ನಿಮಿತ್ತಮ್....

ನಾನು : ಕರ್ಮಕಾಂಡ !! ನನಗೆ ಬಂದ ಕೋಪಕ್ಕೆ...ಮೊದಲೇ ನಾನು ಇಡಿ ಬಸ್ ಪ್ರಯಾಣದಲ್ಲಿ ಎಲ್ಲೂ ನಿದ್ದೆ ಮಾಡಿರಲಿಲ್ಲ ....ಅಷ್ಟರ ಮಧ್ಯೆ ಇದು ಬೇರೆ ! ಸರಿ ಬಾಹುಬಲಿ ದೇವಸ್ಥಾನ ಇರುವ ಗಿರಿಯ ಬಳಿಗೆ ಬಂದು ತಲುಪಿದೆವು. ಹತ್ತುವ ಅಷ್ಟರಲ್ಲಿ ಕಾಲುಗಳು ಪದ ಹೆಳಲು ಪ್ರಾರಂಭಿಸಿದ್ದವು. ಆದರೆ ಅಲ್ಲಿಂದ ಪ್ರಕೃತಿಯು ಬಹಳ ಸುಂದರವಾಗಿ ಕಾಣಿಸುತ್ತಿತ್ತು. ದೃಷ್ಟಿಯ ವಿಸ್ತೀರ್ಣ ಇದ್ದಷ್ಟು ಬೆಟ್ಟದ ಸಾಲುಗಳು, shadow effect... 3D effect, name it and you could see it !!

Z : ನಾವು ಮನುಜರು ಈಗೀಗ ಕಂಡು ಹಿಡಿದು ಖುಶಿ ಪಡುತ್ತಿರುವುದನ್ನೆಲ್ಲಾ ಪ್ರಕೃತಿ ಆಗಲೆ ಕಂಡು ಹಿಡಿದಾಗಿದೆ. ಆದರೆ ನಮಗಿನ್ನೂ ಗೋಚರವಾಗಿಲ್ಲ ಅಷ್ಟೆ !!


ನಾನು : ಬಹಳಾ ನಿಜ ! 42 ಅಡಿ ಬಾಹುಬಲಿಯನ್ನು ದರ್ಶಿಸಿ, ಹಿಂದೆ ಇರುವ 24 ತೀರ್ಥಂಕರರನ್ನು ನೋಡಿ, ಯಜ್ಞಮಂಟಪದ geometry ಯನ್ನು ಪ್ರಷಂಸಿಸಿ,ಅಲ್ಲಿನ ಶಿಲಾ ಶಾಸನಗಳು ಯಾವ ಭಾಷೆಯಲ್ಲಿದೆ ಎಂದು ಜಿಜ್ಞಾಸೆ ಮಾಡಿ, ಅಲ್ಲಿ ಉಪಸ್ಥಿತರಿದ್ದ ಮೂರು ಮತ್ತೊಂದು ಜನರಿಗೆ ನಾವು ಬಹಳ ದೊಡ್ಡ ಸಂಶೋಧಕರೆಂದು build up ಕೊಟ್ಟು, ಅಲ್ಲಿನ ಶಾಂತ ವಾತಾವರಣವನ್ನು ಮನಸಾರ ಅನುಭವಿಸಿ, ಅಲ್ಲಲ್ಲಿ ಕಂಡ ಮನಮೋಹಕ ದೃಶ್ಯಗಳನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಬೆಟ್ಟವನ್ನು ಇಳಿಯುವಾಗ ಮೆಟ್ಟಿಲುಗಳನ್ನು ಉಪಯೋಗಿಸದೇ ಹಾಗೆಯೇ ಬಿಸಿ ಬಿಸಿ ಕಲ್ಲುಗಳ ಮೇಲೆ ಚಪ್ಪಲಿ ಇಲ್ಲದೇ ಇಳಿದೆವು. ಒಂದು ಕೈಲಿ hand bag, ಇನ್ನೊಂದು ಕೈಲಿ designer sandals ಇಟ್ಕೊಂಡು ಇಳಿದೆ !! ಚಾರಣ ಮಾಡಬೇಕೆಂದು ವರ್ಷಗಳಿಂದ ಪರಿತಪಿಸುತ್ತಿದ್ದ ನನಗೆ ಇದೊಂದು ಮರೆಯಲಾಗದ ಮನೋಹರ ಅನುಭವ !!


Z : What ????? !!!!!! ಹುಟ್ಟುವಾಗಲೇ " to be handled with utmost care " ಅನ್ನೋ label ನ ತಲೆ ಮೇಲೆ ಅಂಟಿಸಿಕೊಂಡು ಬಂದ ನೀನು trekking ಮಾಡಿದಿಯ ? ಕೈ ಕಾಲು ನೆಟ್ಟಗಿದ್ದವು ತಾನೆ ? ಈಗ ಏನೂ side effect, after effectಗಳು ಏನು ಇಲ್ಲ ತಾನೇ ? ಯಪ್ಪಾ !!! ಸುಮ್ನೆ ಇರೋದೊಂದನ್ನು ಬಿಟ್ಟು ನೀನು ಏನು ಬೇಕಾದ್ರೂ ಮಾಡ್ತಿಯಾ !!

ನಾನು : relaaaaaaaax !!!!!! Take a chill pill !!! ನಾನು ಚೆನ್ನಾಗಿದ್ದೇನೆ. in fact, rappling ಮಾಡಿದ ಮೇಲೆ ಇನ್ನೂ ಚೆನ್ನಾಗಿದ್ದೀನಿ. ಲಾಲ್ಬಾಗ್ ಬೆಟ್ಟಕಿಂತ ಸಲ್ಪ ಎತ್ತರ, ನಂದಿ ಬೆಟ್ಟಕ್ಕಿಂತ ಬಹಳ ಚಿಕ್ಕದಾಗಿರೋ ಒಂದು ಸಣ್ಣ ಬೆಟ್ಟ ಹತ್ತಿ ಇಳಿದಿದ್ದಕ್ಕೆ ನೀನು mount everst ಹತ್ತಿದ ಹಾಗೆ react ಮಾಡಬೇಡ !!!

Z : whatever !! As I said ಉದ್ಧಾರದ spelling-ಊ ಗೊತ್ತಿಲ್ಲ ನಿಂಗೆ !!

ನಾನು : What ever !!!! ಸರಿ,ಬೆಟ್ಟ ಹತ್ತಿ ಇಳಿಯಲು ಪಟ್ಟ ಪ್ರಯಾಸವನ್ನು ನೀಗಿಸಿಕೊಳ್ಳಲು,ಬೆಟ್ಟದ ತಪ್ಪಲಿನಲ್ಲಿ ದೊರೆತ ಸಪ್ಪೆ ಏಳನೀರನ್ನೇ ಚಪ್ಪರಿಸಿಕೊಂಡು ಸವಿದೆವು. ಸಮಯ ಐದಾಗಿತ್ತು. ಭೇಲ್ ಪುರಿ ಇತ್ತು ಅಲ್ಲಿ. ತಿನ್ನಲು ಮನಸಾಯಿತಾದರೂ ಮೂಡುಬಿದಿರೆ ತಲುಪಲು ತಡವಾಗುತ್ತದೆಂದು ಹಾಗೆಯೆ ಬಸ್ ಸ್ಟಾಪ್ ಬಳಿ ಬಂದೆವು. ಒಂದು ಬಸ್ ಬಂತು.

ನಾವು : "ಮೂಡುಬಿದಿರಿ ? "

ಬಸ್ಸಿನವ : " ಹಿಂದೆ ಬರೋ ಬಸ್ ಹತ್ತಿ ! "

2 ನಿಮಿಷ ಯಾವ ಬಸ್ಸೂ ಇಲ್ಲ. ಆಮೇಲೆ ಮತ್ತೊಂದು ಬಸ್ ಅಗಮನ.

ನಾವು : "ಮೂಡುಬಿದಿರಿ ? "

ಬಸ್ಸಿನವ : " ಹಿಂದೆ ಬರೋ ಬಸ್ ಹತ್ತಿ ! "

ನಾವು surprised. again, for 5 minutes no bus. ಭೆಲ್ ಪುರಿಯ ಕಡೆಗೆ ನಮ್ಮ ಗಮನ. ಇತ್ತ ಹೋಗಲೂ ಆಗದೆ, ತಿನ್ನಲೂ ಆಗದೆ, ತ್ರಿಶಂಕು ಸ್ಥಿತಿ. ಮೂರನೆಯ ಬಸ್ ಆಗಮನ.

ನಾವು : "ಮೂಡುಬಿದಿರಿ ? "

ಬಸ್ಸಿನವ : " ಹಿಂದೆ ಬರೋ ಬಸ್ ಹತ್ತಿ ! "

ನಾವು angry !! ಯಾವ ಘನಂದಾರಿ ಬಸ್ಸಿಗೆ ಈ ಮೂರು ಬಸ್ಸಿನವರು ಪರಾಕು ಹಾಡುತ್ತಿದ್ದಾರೆಂದು ನಮಗೆ ಅನ್ನಿಸಿತು. ಆಗ ನಾಲ್ಕನೆಯ ಬಸ್ಸಿನ ಹಾರ್ನ್ ಶಬ್ದ ಮತ್ತು ವಾಯುವೇಗದಲ್ಲಿ ಆಗಮನ. ನನ್ನ ತಲೆಯಲ್ಲಿ ಹಾಡು..

Z : wait wait .... I will guess which song.. " ಅನಿಸುತಿದೆ ಯಾಕೋ ಇಂದು, ಇದೇನೆ ಆ ಬಸ್ಸು ಎಂದು..."

ನಾನು : correct.

ನಾವು : "ಮೂಡುಬಿದಿರಿ ? "

ಬಸ್ಸಿನವ : "ಹಿಂದೆ ಬರ್ತಿದೆ."

ನಾವು totally disgusted !!!ನನ್ನ ತಲೆಯಲ್ಲಿ ಹಾಡು..." ನಗಲಾರದೇ...ಅಳಲಾರದೇ...ತೊಳಲಾಡಿದೇ ಜೀವ !!!" ಅಷ್ಟರಲ್ಲಿ ಐದನೆಯ ಬಸ್ಸು.

ನಾವು : "ಮೂಡುಬಿದಿರಿ ? "

ಬಸ್ಸಿನವ : " ಹತ್ಕೊಳ್ಳಿ...ಬೇಗ ಬೇಗ !!"

ನಾನು : " koi...mil gaya !!! "

Z : ಹೇಗಿತ್ತು ಬಸ್ಸು ? ನಾಲ್ಕು ಬಸ್ಸುಗಳು ವಂಧಿ ಮಾಗಧರ ತರಹ ಪರಾಕು ಹಾಡಿದ್ವಲ್ಲ !!

ನಾನು : ಇನ್ನೊಂದು ಎಕ್ಸ್ ಪ್ರೆಸ್ಸ್ ಬಸ್ಸು ಅಷ್ಟೇ!! but ಇವನು 201 ಥರ ಓಡಿಸಲಿಲ್ಲ. 45 g ಥರ ಓಡಿಸಿದ. I enjoyed the journey. As usual ನಾವು ಮೂವರೂ ಬೇರೆ ಆಗಿ ಕೂರಬೇಕಾಯಿತು. ಕೊನೆಗೂ ಮೂಡುಬಿದಿರಿ ತಲುಪಿದೆವು. ಸಾವಿರ ಕಂಬಗಳ ಬಸದಿ ನೋಡಬೇಕೆಂದು ಹಾತೊರೆಯುತ್ತಿದ್ದ ನನ್ನ ಜೀವ ಅದನ್ನು ನೋಡಿ ಕುಣಿದಾಡಿತು.ಅದರ ಪುರಾಣ ಹೇಳಲಾ ?

Z : ಈಗಲೇ ಇಷ್ಟೋಂದು ಪಿಟೀಲು ಕುಯ್ಯಿದಿದಿಯಾ...ಅದನ್ನೂ ಕುಯ್ಯಿ...ಏನ್ ಪರ್ವಾಗಿಲ್ಲ...ಕೇಳ್ತಿನಿ !!

ನಾನು : good !! I like the spirit !! ಕಾರ್ಕಳ ಮತ್ತು ಮೂಡುಬಿದಿರಿಯಲ್ಲಿ ತಲಾ ೧೮ ಬಸದಿಗಳಿದ್ದು, ಈ ಮೂವತ್ತಾರು ಬಸದಿಗಳು ಜೈನರಿಗೆ ಬಹು ಮುಖ್ಯವಂತೆ. ಮೈಸೂರಿನ ಒಡೆಯರು ಮೊದಲು ಇಲ್ಲಿ ಒಂದು ಮಂಟಪವನ್ನು ಕಟ್ಟಿಸಿದರು. ಅದಕ್ಕೆ floor tiles ಚೈನಾ ದೇಶದಿಂದ ಆಗಿನ ಕಾಲದಲ್ಲೇ ತರಿಸಿ ಹಾಕಿಸಿದ್ದು, ಅದು ಮೈಸೂರು ಅರಮನೆಯ floor type resemble ಆಗತ್ತೆ. ಮತ್ತೆ ಕೆಲವು ರಾಣಿಯರೂ ಈ ಬಸದಿಯನ್ನು ಕಟ್ಟಲು ಕಾರಣರೆಂದೂ, ಗರ್ಭ ಗುಡಿಯಲ್ಲಿ ೯ ಅಡಿ ಎತ್ತರದ ಪಂಚಲೋಹದ ಚಂದ್ರನಾಥ ತೀರ್ಥಂಕರರ ವಿಗ್ರಹವನ್ನು ಪೂಜಿಸಲಾಗುತ್ತದೆ ಎಂದು, ಮಹಾವೀರ ಜಯಂತಿ ಮತ್ತು ಕಾರ್ಥೀಕ ಮಾಸದಲ್ಲಿ ದೀಪೋತ್ಸವಗಳಾಗುತ್ತದೆಂದು, ಈ ಬಸದಿಯಲ್ಲಿ ಇರುವ ಒಂದು ಕಂಭ ಇನ್ನೊಂದರ ತರಹ ಇಲ್ಲ ಎಂದೂ, ಈ ಕಂಭಗಳಲ್ಲಿರುವ ಸಣ್ಣ ಸಣ್ಣ ಕಂಭಗಳನ್ನು ಒಟ್ಟುಗೂಡಿಸಿದರೆ ಸಾವಿರ ಕಂಭಗಳಾಗುತ್ತವೆಂದು, ಈ ಬಸದಿ ಎಲ್ಲಾ ಬಸದಿಗಳ ತಿಲಕಪ್ರಾಯವೆಂದು,ಇದಕ್ಕೆ ತ್ರಿಭುವನ ತಿಲಕ ಚೂಡಾಮಣಿ ಎಂಬ ಹೆಸರಿದೆ ಎಂದು, ಈ ಬಸದಿಯ ಹೊರಗಿರುವ ಕಂಭವು ೧೫ ನೇ ಶತಮಾನದ್ದು ಎಂದು, ಮೂಡು ಎಂದರೆ ಪೂರ್ವ ದಿಕ್ಕು ಎಂದೂ, ಬಿದಿರೆ ಎಂದರೆ ಇಲ್ಲಿ ಬಿದಿರಿನ ಮರಗಳು ಹೆಚ್ಹೆಂದೂ ಅದಕ್ಕಾಗಿ ಈ ಸ್ಥಳಕ್ಕೆ ಮೂಡುಬಿದಿರೆ ಎಂದು ಹೆಸರು ಬಂತೆಂದು ಆ guide ನಮಗ explain ಮಾಡಿದ. ನಾವು ಅವನ ಕಣ್ಣು ತಪ್ಪಿಸಿ ಒಂದು photo ತೆಗೆಯುವಲ್ಲಿ ಯಶಸ್ವಿಯಾದೆವು. It is a place worth watching. It needs aesthetic sense to admire the splendid architecture which resembles vijayanagar style and hoysala style a bit. Its tranquility is soothing, and environment spiritual !! words fall short !!

Z : ಅಬ್ಬಬ್ಬಾ !!

ನಾನು : ಸಖತ್ ಜಾಗ ಮಾತ್ರ !! ಇದನ್ನ ನೋಡದೇ ಇದ್ದಿದ್ದರೆ ನಾನು ಒಂದು ಒಳ್ಳೆಯ ಜಾಗವನ್ನು miss ಮಾಡ್ಕೋತಿದ್ದೆ !! ಆಮೇಲೆ ಅಲ್ಲಿಂದ ಬಂದು, ಹೋಟೇಲೊಂದರಲ್ಲಿ ಕೊಬ್ಬರಿ ಎಣ್ಣೆಯಲ್ಲಿ ಮಾಡಿದ ಮಸಾಲೆ ದೋಸೆ ತಿಂದೆವು .ಕಾಫಿಯನ್ನು ಯಾವ angle ನಲ್ಲೂ resemble ಆಗದ ಪೇಯವೊಂದನ್ನು ಕುಡಿದೆವು !!

Z : ಈಗ ಒಕೆ ಆಯ್ತ ? ಕೊಬ್ಬರಿ ಎಣ್ಣೆಯ ತಿಂಡಿ ?

ನಾನು : ಹಸಿವಿನಲ್ಲಿ ಬೇರೆ ವಿಧಿಯೇ ಇರಲಿಲ್ಲ !! ಆಮೇಲೆ ಹೋಟೆಲು ಮುಂದೆಯೇ ಮಂಗಳೂರಿಗೆ ಹೋಗುವ ಬಸ್ಸು ಬರುತ್ತದೇ ಎಂದು ತಿಳಿಯದೇ ಸ್ವಲ್ಪ ಅಲೆದು, ಆಮೇಲೆ ಮೂರ್ನಾಲ್ಕು ಜನರನ್ನ ಕೇಳಿ ಅದೇ ಹೋಟೆಲೆದುರಿಗೆ ಬಂದು ನಿಂತೆವು !!

Z : ಹೋದ ಕಡೆಯೆಲ್ಲಾ ಒಂದು ಅವಾಂತರ ಮಾಡದೇ ಇದ್ದರೆ ಮನಶ್ಶಾಂತಿ ಇಲ್ವಾ ನಿಂಗೆ ?

ನಾನು : ನಾನ್ ಏನ್ ಮಾಡ್ಲಿ ? ನಾನೇನ್ ಬೇಕೂ ಅಂತ ಮಾಡಿದ್ನಾ ? ಅದದೇ ಎನೋ ಆಗೋಗತ್ತಪ್ಪ !! Its totally not my fault !!

Z : yeah right !! ನೀನು problemನ ಹುಡುಕಿಕೊಂಡು ಹೋಗಲ್ಲ, problem - ಏ ನಿನ್ನ ಹುಡುಕಿಕೊಂಡು ಬರತ್ತೆ ಅಲ್ವ ???

ನಾನು : precisely !! ಬಸ್ಸಿನಲ್ಲಿ ಮಂಗಳೂರಿನ ಸಖತ್ hot mirchi - 98.3 FM ಅನ್ನು ಕೇಳಿಕೊಂಡು ಎಂಟು ಗಂಟೆಗೆ ಮಂಗಳೂರು ತಲುಪಿದೆವು. ನಂತರ ಪಬ್ಬಾಸ್ ಅನ್ನುವ ಒಂದು famous ice cream parlour ನಲ್ಲಿ ಅಲ್ಲಿನ special ice cream ಗಳನ್ನು ಸವಿದು,ಮೋಹಿತರಾಗಿ ಆ ಅಂಗಡಿಯು ಬೆಂಗಳೂರಿನಲ್ಲಿ outlet ಯಾಕೆ ತೆರೆಯಲಿಲ್ಲವೆಂದು ನನ್ನ ಸ್ನೇಹಿತೆಗೆ ಕೇಳಲು, ಅವಳು " ಈ shop owner ತಾಯಿ ಹತ್ರ ಒಂದು secret ingredient ಇದೆ. ಅವರೇ ದಿನಾ ಬೆಳಗ್ಗೆ ಬಂದು ice cream ಗೆ ಹಾಕಿ ಹೋಗುತ್ತಾರೆಂದು, ಆದ್ದರಿಂದ ಇದಕ್ಕೆ ಈ ವಿಶಿಷ್ಟ ಸ್ವಾದ ಇದೆ ಎಂದು ವಿವರಿಸಿದಳು.ಅವರು ಸಾಯುವಾಗ ಅವರ ಕುಟುಂಬಸ್ಥರಲ್ಲಿ ಒಬ್ಬರಿಗೆ ಮಾತ್ರ ಆ secret ingredient prepare ಮಾಡುವ recipe ವಿವರಿಸುತ್ತಾರೆಂದೂ, ಅಲ್ಲಿಯವರೆಗೂ ಅದು secret ಎಂದಳು. ಬೆಂಗಳೂರಿನಲ್ಲಿ ಈ ಅಂಗಡಿಯನ್ನು ತೆರೆದರೆ ಅಲ್ಲಿಗೆ ದಿನಾಗಲೂ ಅವರು ಬಂದು ಆ secret ingredient add ಮಡೋಕೆ ಆಗೊಲ್ಲ ಎಂದು ಹೇಳಿದಳು. ನಾವು ಚಪ್ಪಿರಿಸಿಕೊಂಡು ತಿಂದು ಒಂಭತ್ತು ವರೆ ರಾತ್ರಿಗೆ ಮನೆ ತಲುಪಿದೆವು. ಬಂದದ್ದೇ ಮಾತಾಡುತ್ತಲೇ ನಾವು ಯಾವಾಗ ನಿದ್ದೆಗೆ ಶರಣಾದೆವೆಂದು ನಮಗೇ ಗೊತ್ತಿಲ್ಲ !!

(ಸಶೇಷ )

Monday, January 21, 2008

ವಾಹ್ !! ಮಂಗಳೂರು !!!! ಭಾಗ ೧

Z: Beat rani ಗೆ ಕಡೆಗೂ ನನ್ನ ನೆನಪಾಯಿತೇ ?

ನಾನು : oye !! ನಿನ್ನನ್ನು ಮರೆತರೆ ನಾನು gone !! ನನ್ನ ಸ್ನೇಹಿತೆಯೊಬ್ಬಳ ಮದುವೆ ಅಂತ ಮಂಗಳೂರಿಗೆ ಹೋಗಿದ್ದೆನಲ್ಲ...ಬಂದ ಮೇಲೆ ಸಖತ್ ಕೆಲ್ಸ !!! ಅದಕ್ಕೆ phone ಮಾಡೋಕೆ ಆಗ್ಲೇ ಇಲ್ಲ !!!

Z: ಬೆಂಗಳೂರಿಗೆ ಬಂದ ಮೇಲೆ road road ಅಲೀತಿದ್ದೀ...shopping shopping ಅಂತ !! ಒಂದಾದರೂ call ಮಾಡಬಾರದೇ ? ಪಾಪ Z, ಕಾಯುತ್ತಿರುತಾಳೆ ಅಂತಾನೂ ಅನ್ನಿಸಲಿಲ್ವಾ ? I dont want reasons, I want report !!

ನಾನು: ಶಾಂತಿ !!!!

Z: ನಾನು zindagi ! ಶಾಂತಿ ಅಲ್ಲ !!

ನಾನು: ಗೊತ್ತಮ್ಮಾ ಮಹರಾಯ್ತಿ !! ನಾನು ಹೇಳಿದ್ದು peace !!!ಅಂತ !! ನಿನಗೆ report ತಾನೆ ಬೇಕು ? ಒಂದು inch-ಉ ಬಿಡದೆ ಕೊಡುತ್ತೀನಿ. ಕಿರ್ಚಾಡ್ಬೇಡ. And dont comment on shopping !!!! ಮನೇಲಿ function ಇಟ್ಕೊಂಡು, ಮನೆ ದೊಡ್ಡ ಮಗಳಾಗಿ ನಾನಲ್ಲದೇ ಇನ್ಯಾರು ಹೋಗ್ತಾರೆ shopping ge ? ಬಂದ್ಬಿಟ್ಟಳು ಮಾತಾಡೋಕೆ !!!

Z: ಶಾಂತಿ !!!!

ನಾನು : : ನಾನು ಲಕ್ಷ್ಮಿ !!

Z : dialogue thief !!!

ನಾನು : Pot calling kettle black !!!ನನ್ನ dialogue ನ first ಕದ್ಬಿಟ್ಟು.....grrrrrrrrrrrrrrrrrr !!!!!!!!!!!!!!!!!ಏನು ? ಈಗ report ಬೇಕೋ, ಅಥವಾ line hold ಮಾಡ್ಲೋ ?

Z::ಬೇಡಾ !!!!!!!!!!!!!! ನೀನು ಬಿಟ್ಟರೆ ಸಿಕ್ಕುವಂಥವಳಲ್ಲ ! ಹೆಸರಿಗೆ ತಕ್ಕವಳು... ಮಹಾ ಚಂಚಲೆ ! ಚಂಚಲೆ -ier than mercury!! ಬೇಗ ಬೇಗ ಶುರು ಮಾಡು !! ಬೇಕಾದ್ ಕಡೆ ನಾನು background music ಕೊಡ್ಲಾ ? effect ಗೆ ?

ನಾನು : ಕುಟ್ಟುತೀನಿ ತಲೆ ಮೇಲೆ ! only comments, no effects !

Z : ok start !

ನಾನು :ಹದಿನೈದನೇ ತಾರೀಖು ಬೆಳಗ್ಗೆ ಅಣ್ಣಂಗೆ meeting ಇತ್ತು. so he dropped me to my friend's place and left. ತಂದೆ ತಾಯಿಗಳು ಮನೆಯಲ್ಲೇ concise ಗೀತೋಪದೇಶ ಮಾಡಿದ್ದರು.

Z : ಜೋಪಾನ ಅಂತ One thousand times-ಉ, time time ಗೆ phone ಮಾಡಿ ಅಂತ 500 times -ಉ, ನಿದ್ದೆ ಮಾಡುವಾಗ ಕತ್ತು ಉಳುಕಿಸ್ಕೋಬೇಡಿ ಅಂತ 100 times-ಉ....ಎಲ್ಲೆಲ್ಲೋ ಎನೆನೋ ತಗೋಬೇಡಿ ಅಂತ 2000 times-ಉ....

ನಾನು : ಹು !!!!!!!! ನನಗೆ ಕತ್ತು ಉಳುಕಿತು...travel ಮಾಡಿ ಅಲ್ಲ....ಅವರು ಹೇಳಿದ್ದಕ್ಕೆಲ್ಲಾ ತಲೆ ಆಡಿಸಿ ಆಡಿಸಿ !!!!

Z : ಹೆ ಹೆ ಹೆ ಹೆ ಹೆ !!!!

ನಾನು : ಅಮ್ಮನಿಗೆ ಸ್ವಲ್ಪ polite aagi ಹೇಳಿದೆ...."ನಾವು ನರ್ಸರಿ ಮಕ್ಕಳಲ್ಲಾ..ನಮ್ಮನ್ನು ನಾವು ನೋಡ್ಕೋತೀವಿ..for safety ಅಂತ ಇಬ್ಬರೂ ಒಂದೊಂದು butcher knife ಇಟ್ಕೋಡಿದಿವಿ...ಯಾರಾದ್ರು ಅನುಮಾನಾಸ್ಪದ ವ್ಯಕ್ತಿ ಹತ್ರ ಬಂದ್ರೆ ಚುಚ್ಚಿಬಿಡ್ತೀವಿ...ನಮ್ಮ national law school of India friends ಹತ್ರ ಆಗ್ಲೇ ಮಾತಾಡಿದೀವಿ...ಅವರು ನಮ್ಮನ್ನು murder case ಇಂದ ಬಚಾವ್ ಮಾಡ್ತಾರೆ" ಅಂತ !!!

Z : ಯಪ್ಪಾ ರಾಮ !!! ಏನಂದ್ರು ಅವರು ಅದಕ್ಕೆ ?

ನಾನು : shocked ಅವರು !!! ಆ ಥರ statement ಗೆ ಇನ್ನು ಹೇಗೆ react ಮಾಡ್ತಾರೆ ? ಇವರು unwanted possibilities ನ ಹೆಚ್ಚು probable ಮಾಡ್ತಿದ್ರು...ನಾವು worst caseಗೂ ready ಇದೀವಿ ಅಂತ ಹೇಳಿದೆ ಅಷ್ಟೇ !!!

Z : ಆಮೇಲೆ ?

ನಾನು :ಅಷ್ಟೇ.ಇನ್ನು ಹೇಳಿ ಪ್ರಯೋಜನ ಇಲ್ಲ ಅಂತ ಅನಿಸಿತು ಅವರಿಗೆ. ಕಳಿಸಿಕೊಟ್ಟರು. ಬೆಳಗ್ಗೆ ಹತ್ತು ಕಾಲುಗಂಟೆಗೆ ಸರಿಯಾಗಿ ಬೆಂಗಳೂರು ನಗರದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ನಾನು ಮತ್ತು ನನ್ನ ಸ್ನೇಹಿತೆ ಬಂದು ತಲುಪಿದೆವು. ಒಂದು family ಬಂತು bus ಒಳಗೆ...ಗಂಡ, ಹೆಂಡತಿ ಮತ್ತು ಒಂದು ಮಗು. Lady was not well. She had a very bad cold. so, daddy dearest was taking care of his very cute daughter. That kid had a loud, clear voice.. ಕಂಚಿನ ಕಂಠ. ಬಂದದ್ದೆ... daddy dont make me sit down... I will stand !! ಅಂತು. daddy dearest ನಿಲ್ಲಿಸಿದರು ಅದನ್ನ. ತಲೆ ಎತ್ತಿ ನೋಡ್ತು ಅದು. Bus upholstery ನಲ್ಲಿ ಒತ್ತು ಶಾವಿಗೆ ತರಹ design ಇತ್ತು. ಅದನ್ನ ನೋಡಿದ್ದೆ...daddy...mummy.....this looks like noodles !!! ಅಂತು. bus was full then. ಇಡಿ bus zindagi...ಇಡೀ bus...ಒಂದೇ ಸಲ ತಲೆ ಎತ್ತಿ ನೋಡ್ತು !!! Nobody had seen the creative part of the upholstery till then. That kid saw all of us staring up and gleamed !!! It felt it was on the top of the world !! We were bowled over by its amazing creativity !! truly zindagi...we lost our creativity thinking about all other useless and complicated things in the world !!!I rememberd a saying by Einstein " you will never get a nobel if you kill the child in you " ಅಂತ !!

Z : ನಿಜ...ಅವರು ಪ್ರಪಂಚವನ್ನು ನೋಡುವ ಕಣ್ಣುಗಳೇ ಬೇರೆ !!! ಆಮೇಲೆ ?

ನಾನು : bus left at 11. ಮನೆಗೆ phone ಮಾಡೋ ಕರ್ತವ್ಯ ಮುಗಿಸಿದದೀವಿ. The bus was going via mysore...so we decided to finish all our sleeping shifts by the time we reach mysore and stay awake to watch the nature for the rest of our journey. That kid had slept. So, no free entertainment.It was a new bus...so no TV also. ಹೆಸರಿಗೆ ವೊಲ್ವೊ !! one techie ( 25 - 26 years may be )was hugging his laptop and reading tinkle and we were eyeing him jealously...so our code for him was tinkle uncle.my friend decided to steal that tinkle, read it and return it to him promptly saying "uncle, thanks for your tinkle ". we were thinking of all possible plans to steal it. we decided to steal it when he got down for lunch. we had anyways brought our lunch,so we were not getting down.the plan was ready. that tinkle uncle hugged his laptop and slept off. He started snoring, and so were others on the bus. ನನಗಂತೂ fork ಇಟ್ಕೋಂಡು frequency determine ಮಾಡೋ ಅಷ್ಟು ಆಸೆ ಆಯ್ತು !! But no tuning fork !! We also slept off....and got up when the bus was reaching hunsur. ಎಲ್ಲೂ ಸಂಕ್ರಾಂತಿಯ ಸಂಭ್ರಮವೇ ಇರದಿದ್ದುದು ನಮಗೆ ಸ್ವಲ್ಪ ಆಶ್ಚರ್ಯ ತಂತು.ಬಣ್ಣವಿರದ ಹಸುಗಳ ಕೊಂಬು, ಫಸಲಿನ ರಾಶಿ ಇರದ ಹೊಲ ಗದ್ದೆಗಳು, ಕಟಾವುಗೊಂಡಿಲ್ಲದ ಕಬ್ಬು ...quite surprising ! we didnt know how to interpret this anomaly. ಸುಮ್ಮನಿದ್ದೆವು. ಮಂಡ್ಯದಲ್ಲಿ ಹೇರಳವಾಗಿ ಕಾಣಿಸುತ್ತಿದ್ದ black soil and sugarcane slowly started disappearing and we started seeing vanilla, pepper and coffee estates. ಕುಶಾಲನಗರದ bus stop ನಲ್ಲಿ ಊಟಕ್ಕೆ ನಿಲ್ಲಿಸಲಾಯಿತು. we decided to execute the plan. My friend was about to take it, when she suddenly decided not to. we came back to our places, and that tinkle uncle came back to the bus suddenly !!! we were thanking our luck !!

Z : Serves you people right !! ಹಂಗೇ ಆಗ್ಬೇಕು !!

ನಾನು : yeah right !! ಕದಿಯಲಿಲ್ಲವಲ್ಲಾ...ಅಷ್ಟಕ್ಕೆ ತೃಪ್ತಿ ಪಡು ! Bus moved on further and again that tinkle uncle and others slept off !! ನನಗಂತು ಅವರೆಲ್ಲ waste people ಅನ್ನಿಸಿತು. nature ನ enjoy ಮಾಡ್ಬೇಕು ಅನ್ನೋ ಅಷ್ಟು aesthetic sense ಇಲ್ಲದೇ ಇರೋರು ಅನ್ನಿಸಿತು !! we were reaching ಮಡಿಕೇರಿ...there were a lot of small rivulets... ಮಡಿಕೇರಿ ಅನ್ನೊ ಷೋಡಷಿಗೆ ಕಾಲ್ಗೆಜ್ಜೆ ಹಾಕಿದಂಗೆ ಘಲ್ ಘಲ್ ಅಂತ ಶಬ್ದ ! My god !! that was a treat to our eyes !!ಮಡಿಕೇರಿ- ಸೂಳ್ಯ road had a lot of N- bends and we were enjoying every turn...aaga 4.30 p.m. surya was starting his return journey while we were descending ghats. My goodness zindagi !! what all shades of green did we see in every single mountain !! we wondered how many shades of green did God have on his palette when he painted earth !! He is the best artist !! ಅತ್ಯದ್ಭುತ ಕಲಾವಿದ !! ಇಂತಹ ಚಿತ್ತಾರವನ್ನೆಲ್ಲ ನೋಡದೇ ನಿದ್ದೆ ಮಾಡುವವರನ್ನು ನೋಡಿ ನನಗೆ ಅವರ ಮೇಲೆ ನೀರು ಸುರಿಯುವಷ್ಟು ಕೋಪ ಬಂತು!!

Z : volvo ನಲ್ಲಿ ನೀರು ಇರತ್ತಲ್ಲಾ...ಅವರವರ bottle ತಗೊಂಡು ಅವರ ಮುಖಕ್ಕೇ ಸುರಿಯೋದಪ್ಪ !!

ನಾನು : Brilliant idea !! ನಿನ್ನ ತಲೆ !! ಹಾಗೆ ಮಾಡಿದ್ರೆ ನಾನು nature ನ enjoy ಮಾಡೋದು miss ಆಗೋಗಲ್ವ ? ಅವರಿಗೆ ಇಂತಹ ನೋಟ miss ಆದದ್ದೇ ಅತೀ ದೊಡ್ಡ ಶಿಕ್ಷೆ !

Z : ಸರಿ.this seems to be a better punishment. ಆಮೇಲೆ ?

ನಾನು : ಕಾವು ಅನ್ನೋ ಜಾಗದಲ್ಲಿ coffee ಗೆ ನಿಲ್ಲಿಸಿದರು. hotel khushi ಅಂತ ಅದರ ಹೆಸರು. ನಾವು coffee order ಮಾಡಿ, ಸ್ವಲ್ಪ strong ಇರಲಿ ಅಂತ ಹೇಳಿದೆವು. ಅವನು ಐದು ನಿಮಿಷ ಬಿಟ್ಟು ಕಾಫಿ ತಂದಿಟ್ಟ. ಅದರಲ್ಲಿ ಹಾಲಿರಲಿಲ್ಲ, decoction ಅಂತು ಇರಲೇ ಇಲ್ಲ, ಸಕ್ಕರೆಯ spelling-ಉ ಇದಕ್ಕೆ ಗೊತ್ತಿದ್ದ ಹಾಗೆ ಕಾಣಲಿಲ್ಲ..ನೀರಿನ ತರಹನೂ ಇರಲಿಲ್ಲ.ಕಾಫಿಯ ಕಟ್ಟಾ ಅಭಿಮಾನಿ ಮತ್ತು ಆರಾಧಕರಾದ ನಮಗೆ ಇದು ಏನು ಅಂತ ನಾವು da vinci code ತರಹ decipher ಮಾಡ್ಬೇಕಿತ್ತು. but time ಇರ್ಲಿಲ್ಲ. ಕಲ್ಗಚ್ಚು ಇದ್ದಿದ್ದರೆ ಅದನ್ನೇ ಚಪ್ಪರಿಸಿಕೊಂಡು ಕುಡಿಯಬಹುದಿತ್ತು. but this was worse than that !!! ಜಠರಾಗ್ನಿಯ ಗಲಾಟೆಯುಕ್ತ ನಿರಾಕರಣೆಯನ್ನು ಹೇಗೋ ಸಮಾಧಾನ ಪಡಿಸಿ,ದುಡ್ಡು ಕೊಟ್ಟ ತಪ್ಪಿಗೆ ಇದನ್ನು ಹೇಗೋ ಒಳಗೆ ನೂಕಿದೆವು. ನಮ್ಮ ಹಿಂದೆಯೇ ಇನ್ನೊಬ್ಬರು ಬಂದು ಕಾಫಿ ಹೇಳಿದರು. ಸಕ್ಕರೆ ಕಮ್ಮಿ ಇರಲಿ ಎಂದರು. ನಮಗೆ ಇದನು ಕೇಳಿಯೇ ನಗು ಬಂತು !! ನಾವು ನಕ್ಕಿದ್ದನ್ನು ಅಪಾರ್ಥ ಮಾಡಿಕೊಂಡ ಅವರು ನಮ್ಮನ್ನು ದುರುದುರು ನೋಡಿದರು.ನಾವು ಅವರಿಗೆ ಒಂದು ಸಹಾನುಭೂತಿಯ ನೋಟ ಬೀರಿದೆವು. ಅದು ಅವರಿಗೆ ಮತ್ತಷ್ಟು ಕೋಪ ತರಿಸಿತು. we couldnt help it !!ನನಗೆ ಮಹಲಿಂಗ ರಂಗರ ಅನುಭವಾಮೃತದ ಒಂದು ವಚನ ನೆನಪಾಯಿತು -

ಹರಕೆಗೆಂದೇ ತಂದ ಕುರಿ ತಾ
ನರಿಯದಕಟಾ ಕೊಲುವರೆಂಬುದ
ಹಿರಿದು ಹಸಿವಿಗೆ ತಳಿರ ಮೆಲುವುದು ತೋರಣಕೆ ತಂದ ||
ನರಕುರಿಗಳದರಂತೆ ತಮಗಹ
ಮರಣವನು ತಾವರಿಯದೀ ಸಂ
ಸರಣ ದುಃಖದಿ ಮಗ್ನರಾಗಿಯೆ ಮೃತ್ಯುವಶರಹರು ||

ಹೀಗೆಂದುಕೊಂಡು ಬಸ್ಸು ಹತ್ತಿದೆ.khushi ಹೋಟೆಲಿನ ಈ ನೆನಪು ...ಖುಷಿ!!

Z : ಬಕ್ರಾ...ಬಕ್ರಾ...ಅ ಅ ಅ ಅ ಅ ಅ !!!ಹೆ ಹೆ ಹೆ ಹೆ ಹೆ ಹೆ ...ನನಗಂತು ನಗು ತಡಿಯಕ್ಕೇ ಆಗ್ತಿಲ್ಲ..

ನಾನು : ನಮಗೂ ಅಷ್ಟೆ !!! ನಾವು ಪುತ್ತೂರು ಮುಟ್ಟುವ ತನಕ ನಕ್ಕಿದ್ದೇ ನಕ್ಕಿದ್ದು. ಪುತ್ತೂರಿನ ತನಕ ನಮಗೆ network ಸಿಗುತ್ತಿರಲಿಲ್ಲ. ಪುತ್ತೂರಿನಲ್ಲಿ ನನ್ನ ಮಂಗಳೂರಿನ ಸ್ನೇಹಿತೆ phone ಮಾಡಿದಳು.ಅವಳಿಗೆ ನಾವು ಪುತ್ತೂರಿನಲ್ಲಿದ್ದೇವೆ ಎಂದೆವು. ಆಗ ಅವಳು ಇನ್ನೊಂದು ಗಂಟೆಯಲ್ಲಿ ನಾವು ಮಂಗಳೂರು ತಲುಪುತ್ತೇವೆ ಎಂದು ಹೇಳಿ ಅವಳು bus stand ನಲ್ಲಿ ಕಾಯುವುದಾಗಿ ಹೇಳಿದಳು. ಮಂಗಳೂರು ತಲುಪುವ ಮುಂಚೆ b.c. road ಎನ್ನುವ ರಸ್ತೆ ಬಂತು. ನಾವು ಅದರ abbreviation expand ಮಾಡಲು ಇಚ್ಛಿಸಿದೆವು. b for bangalore. c for ? cochin ಅಂತ ನಾನು...chennai ಅಂತ ನನ್ನ ಸ್ನೇಹಿತೆ. ಹೀಗೆ ಮಂಗಳೂರಿನ ತನಕ cochin- chennai, cochin -chennai ನಡಿತನೇ ಇತ್ತು. ನನ್ನ ಮಂಗಳೂರಿನ ಸ್ನೇಹಿತೆಯ ತಂದೆ journalist. ಅವರಿಗೆ ಗೊತ್ತೇ ಇರತ್ತೆ..ಹೋದ ತಕ್ಷಣ ಕೇಳೋಣ ಅಂತ decide ಆಯ್ತು. ನಮಗೆ ಸ್ವಲ್ಪನಾದ್ರು ಬುದ್ಧಿ ಬೇಡ್ವಾ ?If this road led to mangalore...it should have read mangalore cochin or mangalore coimbatore ತಾನೆ ? we had forgotten every bit of geography ಅನ್ನೋದು prove ಆಯ್ತು !!

Z : ನಿಮಗೆ ಬುದ್ಧಿ ಇಲ್ಲದೇ ಇರೋದು ಗೊತ್ತಿರೋ ವಿಷಯ ! but it is a very late realisation for you !!

ನಾನು : silence !!!!!!!!!!!!!!!!! Dont under estimate us like this !

Z : ಹೆ ಹೆ ಹೆ ಹೆ ಹೆ !!!ok continue !

ನಾನು : ಮಂಗಳೂರು ತಲುಪಿದಾಗ ರಾತ್ರಿ ಎಂಟು ಗಂಟೆ . ನಮ್ಮ ಸ್ನೇಹಿತೆ ಅಲ್ಲೇ ಕಾದಿದ್ದಳು. auto ಹತ್ತಿ ಬಾರೆಬಯಲಿನಲ್ಲಿರುವ ಅವಳ ಮನೆಗೆ ಹೋದೆವು. ನಮ್ಮ ಮಾತು ಕತೆ, ಪರಿಚಯ ಎಲ್ಲ ಆಯಿತು.ಮಂಥನ ನೋಡಿದೆವು .ಅದಾದ ತಕ್ಷಣ ನಾನು ತಕ್ಷಣ million dollar question ಕೇಳಿದೆ. B.C. road nalli B.C ಅಂದರೆ ಏನು ಅಂತ .bangalore cochin or bangalore chennai ?

ಅದಕ್ಕೆ ನನ್ನ ನೇಹಿತೆಯ ತಂದೆಯವರು ..." B.C road ಅಂದರೆ ಬಂಟ್ವಾಳ cross road ಅಂತ !! " ಅಂದರು !!!

Z : ROFL !!!!!!!!!!!!!!!!!

ನಾನು : stop it !!!!!!!!!!!!!!!!!!! ನಮಗೆಷ್ಟು ಬೇಜಾರು ಆಯ್ತು ಗೊತ್ತ ? ನೀನು ನಕ್ಕು ನಕ್ಕು ನನ್ನ ಪ್ರಾಣ ತೆಗಿಬೇಡಾ !!!

Z : Can't help !! ನೀವುಗಳು ಮಾಡಿಕೊಂಡಿರೋ ಅವಾಂತರಕ್ಕೆ ಅಳಕ್ಕಂತೂ ಆಗಲ್ಲ...let me laugh !!

ನಾನು : ಶ್ !!!!!!!!!!!!! ನಿಶ್ಶಬ್ದ !!! ಮುಂದೆ ಏನಾಯ್ತು ಅಂತ ಕೇಳೊಲ್ವಾ ?

Z : ಆಮೇಲೆ ಏನಾಯ್ತು ?

ನಾನು : ಊಟ ಆಯಿತು. ನಮ್ಮ ಮಾತುಕತೆ start ಆಯ್ತು. ನಮ್ಮ ಮತ್ತು ಅವರ university ಗಳ first hand gossip ಮಾತಾಡುವ ಹೊತ್ತಿಗೆ ಹನ್ನೆರಡಾಯಿತು. ನಾನು ಹನ್ನೆರಡು ಮುಕ್ಕಾಲಿಗೆ ಮಾತಾಡುತ್ತಲೇ ನಿದ್ದೆಗೆ ಜಾರಿದೆ. ನನ್ನ ಇನ್ನಿಬ್ಬರು ಸ್ನೇಹಿತರು ಮಲಗಿದಾಗ ಎರಡು ಗಂಟೆಯಂತೆ !!!

ಇದು ಹದಿನೈದನೆಯ ತಾರೀಖಿನ report. ನಾಳೆ ಹದಿನಾರನೇ ತಾರೀಖಿನ report. ok?
line on hold .

(ಸಶೇಷ)

Wednesday, January 9, 2008

Expedition to ಅಡುಗೆ ಮನೆ phase 1 - ಉಪ್ಪಿಟ್ಟು

ನಾನು : One phase complete ಮಾಡಿದೆ expedition ನಲ್ಲಿ.

Z: hmmm....ಏನಾಯ್ತು, ಹೇಗಾಯ್ತು ?

ನಾನು:Well, the experiment consisted of two stages:

stage 1: ಉಪ್ಪಿಟ್ಟು ಮಾಡೋದು ಹೇಗೆ ಅಂತ ಓದೋದು,Which I did yesterday. Physics lab ನಲ್ಲಿ manual ಓದಿನೇ experiment ಮಾಡಿ ಅಭ್ಯಾಸ.So, ಅಮ್ಮನ ಗುರು ವೇದಮ್ಮ ನವರು ಬರೆದ ಅಡುಗೆ ಪುಸ್ತಕವನ್ನು ಓದಿ,ನಾನೂ ಅವರ ಏಕಲವ್ಯ ಶಿಷ್ಯೆಯರಲ್ಲಿ ಒಬ್ಬಳಾದೆ. ರವೆಯನ್ನ ಹೇಗೆ ಹುರಿಬೇಕು,ಎಷ್ಟು ಹುರಿಬೇಕು ಅಂತೆಲ್ಲ ಸಲ್ಪ idea ಬಂತು.ನೆನ್ನೆನೇ ಮಾಡ್ಬೇಕಿತ್ತು,but ಆಗ್ಲಿಲ್ಲ as I was busy with some other work. ರಾತ್ರಿ ಇಡಿ golden brown,golden brown ಅಂತ ಮನನ ಮಾಡ್ಕೋತಿದ್ದೆ. So, ಇವತ್ತು ಮಾಡೇ ಮಾಡ್ಬೇಕು ಅಂತ determine ಮಾಡಿದ್ದೆ.

Stage 2: ಉಪ್ಪಿಟ್ಟು ಮಾಡೋದು : Theoryಗೂ ,practical methods ಗೂ physics ನಲ್ಲಿ ವ್ಯತ್ಯಾಸ ಇದ್ದಿದ್ದು ಗೊತ್ತಿತ್ತು, but ಅಡುಗೆಲೂ ಹಾಗೇ ಅಂತ ಇವತ್ತು ಗೊತ್ತಾಯ್ತು. It took a lot of time for me to distinguish between ಉಪ್ಪಿಟ್ಟಿನ ರವೆ and ಅಕ್ಕಿ ತರಿ !! material ಆಗಿದ್ದಿದ್ರೆ, metallurgical microscope ಕೆಳಗೆ ಇಟ್ಟು ನೋಡಿ ಅದರ ಜಾತಕನೇ ಹೇಳಬಹುದಿತ್ತು. But no microscope here !!! I was staring at both of them for some time...then I realised ಅಕ್ಕಿ ತರಿ is larger and ರವೆ is comparitively smaller ಅಂತ. Also, ರವೆ reminded me of fine sand grains ...By analogy, I made out which one is ರವೆ.

ಆಮೇಲೆ ಅರ್ಧ ಪಾವು ರವೆ ತಗೊಂಡೆ. I thought this was a safe measure. ಇದಕ್ಕಿಂತ small scale ನಲ್ಲಿ ಮಾಡೋದು ಕಷ್ಟ ಅನ್ನಿಸಿತು. ಹುರಿದೆ, ಹುರಿದೆ, ಹುರಿತಾನೇ ಇದ್ದೆ...For 10 minutes almost in sim mode. ನಮ್ಮಮ್ಮ ಅವರ ತ್ಯಾಗರಾಜರ ಕೀರ್ತನೆ revise ಮಾಡುತ್ತಿದ್ದವರು ಆಗಲೇ ಕೆಳಗೆ ಇಳಿಯಬೇಕಿತ್ತೇ ? ಇಳಿದಿದ್ದೇ, " ಏನು ಮಾಡ್ತಿದ್ದೀಯ ? " ಅಂದ್ರು. I was stuck. I didnt want to tell her about my expedition.I feared " ಬರ್ತ್ಯೋ ಇಲ್ವೋ ಹೊರಗೆ ? bore ಆದ್ರೆ ನಿದ್ದೆ ಹೊಡಿ, ನನ್ನ ಅಡಿಗೆಮನೆನೆಲ್ಲ ಧ್ವಂಸ ಮಾಡ್ಬೇಡ !!!" Dialogue. I dont know how to lie and I didnt want to abandon my expedition either. So, technically correct ಆಗಿ, " ರವೆ ಹುರಿಯೋದನ್ನ practice ಮಾಡುತ್ತಿದ್ದೇನೆ" ಅಂದೆ.

Z: ಹ ಹ ಹ ಹ ಹ ಹ.....ಆಮೇಲೆ ?

ನಾನು: ಶ್!!!!!!!!! ನಗಬೇಡ.There is more to come. ಅಮ್ಮ ನನ್ನ ಮಾತನ್ನ ಕೇಳಿದ್ದೆ," ಆ ರವೆನ ನಾನು ಆಗ್ಲೆ ಹುರಿದಿದ್ದೆ ! ಮತ್ತೆ ಯಾಕೆ ಹುರಿತಿದಿಯಾ?" ಅಂದ್ರು !!!!This was a bolt from the blue for me. I mean, this was worse than bhajji's googly ! ಏನೆಲ್ಲ ಮಾಡಿದ್ದೆ ರವೆನ identify ಮಾಡಕ್ಕೆ, and how should I know that it was fried already ? It didnt look golden brown also, if it was fried. I had fried it to golden brown now. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೊ ಹಾಗೆ, I said, " ನೀನು ಸರಿಯಾಗಿ ಹುರಿದಿಲ್ಲ, Golden brown ಇರ್ಲೇ ಇಲ್ಲ ಅದು ? ". She replied," 5 ನಿಮಿಷ high mode ನಲ್ಲಿ ಹುರಿದ್ರೆ ಆಗತ್ತೆ ಅಂತ ಅರ್ಧಂಬರ್ಧ fry ಮಾಡಿದ್ದೆ. ನೀನು ಸೀದಿಸಿದ್ಯ ?" ಅಂತ ಒಳಗೆ ಬಂದು ನೋಡಿದ್ರು.5 minutes in high mode is equal to 10 minutes in sim mode. mathematics had saved my life. She said approvingly, "ಇಷ್ಟು ಸಾಕು .ಎತ್ತಿಡು. ನಾನು ಮಲ್ಕೋತಿನಿ ಸಲ್ಪ ಹೊತ್ತು,ನೀನು ಏನು ಮಾಡ್ಕೋತ್ಯೋ ಮಾಡ್ಕೋ ".She had forgotten to say, " ಅಡುಗೆ ಮನೇಲಿ ಏನು ಮಾಡ್ಬೇಡ !!", which was a blessing for me. In case of any mishap, I could escape saying, " ನೀನೆ ಹೇಳಿದ್ಯಲ್ಲ ಏನ್ ಬೇಕಾದ್ರೂ ಮಾಡ್ಕೋ ಅಂತ, I was just trying to do some thing " ಅಂತ. I was legally safe. Above all, ಜಟ್ಟಿ ಬಿದ್ದೇ ಇರ್ಲಿಲ್ಲ ಮೀಸೆ ಮಣ್ಣಾಗೋಕೆ !! I had succeeded in frying ರವೆ !!

ಅಮ್ಮ ಮೇಲೆ room ಬಾಗಿಲು ಹಾಕಿಕೊಳ್ಳುತ್ತಿದ್ದಂತೆಯೇ ನನ್ನ Activity speed up ಆಯ್ತು. ನೀರನ್ನು ಬಿಸಿಗೆ ಇಟ್ಟೆ. I searched for the smallest tomato and potato in the whole lot of vegetables. ಕಡಲೆ ಬೇಳೆ, ಉದ್ದಿನ ಬೇಳೆ ಎಲ್ಲ ಪಟ ಪಟನೆ ಕಟ್ಟೆ ಮೇಲೆ ಜೋಡಿಸಿದೆ. ಬಾಣಲಿಗೆ ಎಣ್ಣೆ ಹಾಕಿ ಕಾಯಲು ಬಿಟ್ಟೆ. All the processes mentioned before and henceforth are carried out in sim mode.ಒಗ್ಗರಣೆ went well. So far so good ಅಂದುಕೊಂಡೆ. ಹೆಚ್ಚಿದ ತರಕಾರಿ ನ ಹಾಕ್ದೆ. I didnt know how to check whether it was fully cooked or not. 2 minutes might be enough ಅಂತ Speculate ಮಾಡ್ದೆ.Then ರವೆ ಹಾಕ್ದೆ. ನೀರು ಹಾಕಿ 3 minutes cook ಮಾಡ್ದೆ. ಅಲ್ಲೇ ತಪ್ಪಾಗಿದ್ದು. ರವೆ ಜಿಗುಟು ಜಿಗುಟಾಗಿದ್ದಿದ್ದನ್ನು ನೋಡಿ ನನಗೆ ಎಣ್ಣೆ ಕಮ್ಮಿ ಆಗಿದೆ ಅನ್ನೋದು flash ಆಗಲಿಲ್ಲ. ಬೆಂದಿಲ್ಲ ಅಂದುಕೊಂಡು ಮತ್ತಷ್ಟು ನೀರು ಹಾಕಿದೆ. paste ಆಯಿತು. And I was scared.ಪ್ರಯತ್ನ ಎಲ್ಲ ನೀರಲ್ಲಿ ಹೋಮ ಆಯ್ತಲ್ಲಪ್ಪ ಅಂಕೊಂಡೆ, sudden ಆಗಿ system stabilise ಆಯ್ತು. ನೋಡಿದ್ರೆ,I was right, It needed water. Thank god ಅಂತ mentally ಒಂದು salute ಹೊಡ್ದೆ. Now I encountered a big problem. When to add salt ? 8 years of chemistry had taught me that adding salt while cooking vegetables does not cook the vegetables properly. It is one of the colligative properties of sodium chloride. But this was theory. practically ??? I decided to stick to theoretical beliefs. gas off ಮಾಡಿ,ಉಪ್ಪು ಹಾಕಿದೆ. ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣನ್ನು ಹಾಕಿ embellishments and garnishing job complete ಮಾಡ್ದೆ.

Z: ಹೆ ಹೆ ಹೆ ಹೆ ಹೆ....ಸರಿ, ಆಮೇಲೆ ?

: specimen ಏನೋ ready ಆಯ್ತು. But experiment ಮಾಡೋಕೆ ಒಂದು guinea pig ಬೇಕಲ್ಲ ? ಅಮ್ಮ ನಿದ್ದೆ, ತಂಗಿ school-ಉ. No other alternative. Much against international laws to ban self experimentation, ನಾನೇ ಒಂದು plate ನಲ್ಲಿ ಅರ್ಧ ಸೌಟು ಉಪ್ಪಿಟ್ಟನ್ನ ಹಾಕಿಕೊಂಡು,ಒಂದು ಸ್ಪೂನ್ ತಿಂದೆ.

Z:How was it ? ವಾಕರಿಕೆ ಬಂತಾ ?

ನಾನು:ಏನಿಲ್ಲ. It was nice and edible.vegetables 98% ಬೆಂದಿತ್ತು.again,sodium chloride was on lower side. I couldnt help vegetables, but I added a litte salt.ಈ time ನಲ್ಲಿ perfect bakra ಥರಾ, ನನ್ನ ತಂಗಿ ಬಂದ್ಲು school ಇಂದ. ಬಂದೊಡನೇ, "ಹಸಿವು " ಅಂದ್ಲು, ನಾನು, " ನಾನು ಉಪ್ಪಿಟ್ಟು ಮಾಡಿದೀನಿ ತಿನ್ನು " ಅಂದೆ. ಅವಳು ನಿಂತಲ್ಲೆ ಕುಸಿದು, "what ???????? ನೀನು ಅಡುಗೆ ನ ? ಹುಷಾರಾಗಿದೀಯ ? books and computer ಬಿಟ್ಟು ಬೇರೇನು ಗೊತ್ತಿಲ್ಲ ನಿಂಗೆ,ನೀನು ಅಡುಗೆ ಮನೇಲಿ ಇವತ್ತು more than 30 seconds ಇದ್ದೆಯಾ ? ಯಾಕೀ ಹರ ಸಾಹಸ ? " ಅಂತ ಮೂದಲಿಸಿದಳು. I retorted saying, " Shut up you oaf ! This is not ಹರ ಸಾಹಸ. This is enthusiasm ! " ಅಂದೆ. ಅವಳು," ಈಶ್ವರಾ !F1 F1 F1 " ಅಂದಳು. plate ನಲ್ಲಿ specimen ಹಾಕಿ ಅವಳ ಮುಂದಿಟ್ಟೆ. " looks appealing ! " ಅಂದು ಬಾಯಿಗೆ ಹಾಕಿಕೊಂಡು "super ಕಣೇ !!!" ಅಂತ ಉದ್ಗರಿಸಿದಳು. ನಾನು "experiment success !!!! " ಅಂತ ನಿಟ್ಟುಸಿರು ಬಿಟ್ಟೆ.

ಅಮ್ಮ ಎದ್ದು ಕೆಳಗಿಳಿದು ಬಂದು " ಏನ್ happening-ಉ ? " ಅಂದ್ರು.ಇಬ್ಬರು ಮಿಕಿ ಮಿಕಿ ನೋಡ್ದ್ವಿ. ಅಷ್ಟರಲ್ಲೇ ಅಮ್ಮ," ನನಗೆ ಹಸಿವು " ಅಂದರು. ನಾನು ಸಾವರಿಸಿಕೊಂಡು "ಅಮ್ಮಾ, ಉಪ್ಪಿಟ್ಟು ಮಾಡ್ದೆ ನಾನೇ ! " ಅಂದೆ. I was ready to face the music. But ಆದದ್ದೇ ಬೇರೆ. ಅಮ್ಮ " Wow !! Very good. ಬಿಸಿ ಮಾಡು microwave ನಲ್ಲಿ. Let me see ! " ಅಂದ್ರು. I was thrilled. ಬಿಸಿ ಮಾಡಿ ಕೊಟ್ಟೆ." good. ಚೆನ್ನಾಗಿ ಮಾಡಿದ್ದೀಯ, ತರಕಾರಿ 2 % ಬೇಯಬೇಕಿತ್ತು, and ಎಣ್ಣೆ ಸಲ್ಪ ಬೇಕಿತ್ತು ಅಷ್ಟೇ..." ಅಂದ್ರು. I was happy that my error analysis was perfect , and so was the expedition phase 1 !


Z: Good.ಏನೋ ಅಡ್ಡೇಟಿನ ಮೇಲೆ ಗುಡ್ಡೇಟು ಅಂತ hit ಆಗೋಯ್ತು ಅನ್ಸತ್ತೆ.

ನಾನು:ಇರಬಹುದು. ಈಗ ಬಂದ result important-ಉ. ಉಪ್ಪಿಟ್ಟು ಮಾಡೋದು ಹೇಗಂತ ಒಂದು idea ಬಂತಲ್ಲಾ...good beginning.Refinement does takes its time.Perfection cannot be attained in one attempt.
Z: ಮುಂದೆ ? ಏನ್ idea ?

ನಾನು : Nothing planned as of now.ನನ್ನ ತಲೇಲಿ ಈಗ 2 songs back to back:

ಅಂತು ಇಂತು...ಉಪ್ಪಿಟ್ಟ್ ಬಂತು..ಒಂದು Very easy experiment ಅಂತೆ....

Due to error of ಎಣ್ಣೆ and sodium chloride, there is a little दर्द.Otherwise, its disco.
so, दिल मॆ मेरे है दर्द-ए-Disco दर्द-ए-Disco दर्द-ए-Disco......

(ಸಶೇಷ)

Sunday, January 6, 2008

Irreplaceable ಅಮ್ಮ

Z: ಏನಮ್ಮಾ....ಸುಸ್ತ್ look ಇದೆ ? what ಸಮಾಚಾರ ?

ನಾನು : ಕೆಲಸದವಳು ಇಲ್ವಲ್ಲ...ಅಮ್ಮನಿಗೆ ಹೆಲ್ಪ್ ಮಾಡೇ ಈ rate ನಲ್ಲಿ ಸುಸ್ತು ನಾನು ! Just imagine, ನನಗೆ college ಇದ್ದಿದ್ದರೆ ನನ್ನ ಕೆಲಸನೂ ಅಮ್ಮ ನೇ ಮಾಡ್ಬೇಕಿತ್ತು !ಪಾತ್ರೆ, ಬಟ್ಟೆ,ಸಾರ್ಸಿ-ಗುಡಿಸಿ... ಅಮ್ಮಂಗೆ ಎಷ್ಟು ಸುಸ್ತಾಗಿರಬೇಡ ? Its difficult even to imagine the situation zindagi !!!

Z: I understand.

ನಾನು: amma is irreplaceable. ಅವರ ಥರ ಯಾರೂ ಇರೋಕೆ ಸಾಧ್ಯ ವೇ ಇಲ್ಲ. She is multi dextrous and a very efficient parallel processor I tell you. ಬೆಳಗ್ಗೆ ಎಂಟು ಗಂಟೆಗೆ ತಿಂಡಿ ಅಡುಗೆ ಎರಡೂ ಮಾಡಿ ನಮ್ಮನ್ನ ಮನೆಯಿಂದ ಸುಸ್ತಿfied face ನಲ್ಲಿ ಕಳುಹಿಸದೇ ನಗುನಗುತ್ತ ಕಳುಹಿಸಿಕೊಡುವ magician ಅಮ್ಮ ! ಬೆಳಗ್ಗೆ ನಾಕುವರೆ ಗೆ ಎದ್ದು ದೇವರಿಗೂ ಸುಪ್ರಭಾತ ಹಾಕಿ ಎಬ್ಬಿಸಿ, simultaneously ನಮ್ಮನ್ನು ಎಬ್ಬಿಸಲು ಕಿರುಚಾಡಿದರೂ, ದೇವರ ಸ್ತೋತ್ರಗಳನ್ನು ಶ್ರುತಿಬದ್ಧವಾಗಿ, enthusiastic and brilliant ಆಗಿ ಹಾಡುವ ace singer ! ನಾವು ಎಲ್ಲೆಲ್ಲೊ ಬಿಸಾಕುವ ವಸ್ತುಗಳನ್ನು ನಮ್ಮ ನಮ್ಮ ರೂಮಿಗೆ ತಂದಿಟ್ಟು,ಮತ್ತೆ ಬಿಸಾಕಿದಾಗ ಬೈಯ್ಯದೇ ಎಲ್ಲಿ ಬಿಸಾಕಿದ್ದೇವೆ ಎಂದು ನೆನಪಿಸುವ giga bytes ಗಳ memory card !ಸದಾ ಊಟದ ಡಬ್ಬಿಯನ್ನು ಮರೆಯುವ ನನಗೆ bag ನಲ್ಲಿ ತಾನೇ ಊಟ ಇಟ್ಟು, ರಾತ್ರಿ ಮನೆ ತಲುಪುವ ನನಗೆ ಹಸಿವಾದಗಲೆಲ್ಲ ತಿನ್ನಲು ಕುರುಕಲೂ ಸಹ ಕಳಿಸಿಕೊಡುವ My mom greatest!!!!Its very difficult to play the role of ಅಮ್ಮ !

Z : ಮತ್ತೆ ಚಿಕ್ಕ ಮಗು ಆಗಿದ್ದಾಗ "ನಾನು ಅಮ್ಮ ಆಗ್ತಿನಿ...ನಾನು ಅಮ್ಮ ಆಗ್ತಿನಿ " ಅಂತ ಎಲ್ಲರ ಜೊತೆಗೂ ಜಗಳ ಆಡಿ kitchen set ಸೌಟನ್ನ ಹಿಡ್ಕೊಂಡ್ ಮೆರಿತಿದ್ದೆ ?

ನಾನು : Right. ಆಗ ಚಿಕ್ಕ ಮಗು ನಾನು. ಅಡುಗೆ ಮನೆಯ adversities and ಮನೆಯ complexities ಬಗ್ಗೆ ಅನಭಿಜ್ಞಳು. but now I tell you, ph.D ಮಾಡೋದು easy, ಅಮ್ಮನ position ನ ನಿಭಾಯಿಸೋದು ಕಷ್ಟ! ಅಮ್ಮ ಯಾವಾಗ್ಲಾದ್ರು ಕೋಪ ಮಾಡ್ಕೊಂಡು," ನೀವು ಒಂದೂಂದೇ ಕೆಲ್ಸ ಮಾಡಕ್ಕೆ ಇಷ್ಟು ಸುಸ್ತಾಗಿ ಗೊಣಗಾಡುತ್ತಿರ್ತಿರಾ...ಎಲ್ಲ ಕೆಲ್ಸಗಳನ್ನು ನಿಭಾಯಿಸಿಕೊಂಡು ಹೋಗುವ ನಾನೇನು ?" ಅಂದ್ರೆ ನಾನು " you are ಅಮ್ಮ ! " ಅಂತಿದ್ದೆ !But now I realise, My goodness !!! ಅಮ್ಮನ position is just so difficult to handle !!!

ಅಮ್ಮ ನಂಗೆ especially, " ನಿಂದು ಯಾವತ್ತಿದ್ರೂ ಬೀಳೋ wicket. ಅತ್ತೆ ಮನೇಲಿ ಅಡುಗೆ ಚೆನ್ನಾಗಿ ಮಾಡ್ಲಿಲ್ಲ ಅಂದ್ರೆ ticket guarantee ! ಅಡುಗೆ ಕಲಿ !!" ಅಂದಾಗೆಲ್ಲಾ " dont worry mom ! MTR and kadambam ಇಂದ ಒಂದೊಂದು tunnel ಎಳೀತಿನಿ ! " ಅಂತ ಉಡಾಫೆ ಉತ್ತರ ಕೊಡ್ತಿದ್ದೆ...ಈಗ..For the first time, I am scared. Basically ನನಗೆ ಭಯದ spelling ಏ ಗೊತ್ತಿಲ್ಲ.ಆದ್ರೆ ಈಗ probability ಓದಿದ ಮೇಲೆ ಸಲ್ಪ ಭಯ ಶುರುವಾಗಿದೆ.Compatible companion ಸಿಕ್ಕಿದರೆ serious ಅದೃಷ್ಟ ! But what if its otherwise ? ನಾನೋ,ಸಾರು specialist, but still uncertain about ಅನ್ನ. ಹುಳಿ ತಕ್ಕ ಮಟ್ಟಿಗೆ ok ..And ಪಲ್ಯ ಅಂದ್ರೆ beans only. ಬೆಂಡೆಕಾಯಿ ಗೊಜ್ಜನ್ನ favourite ಅಂತ josh ನಲ್ಲಿ ಕಲ್ತೆ , ತಿಂಡಿ knowledge zero !!....and what about other food stuffs ? ಇಷ್ಟನ್ನೇ ಮಾಡ್ತಿದ್ರೆ ಅಲ್ಲಿ ಏನಂತಾರೆ in laws ? I think, ಹೋಗೋ ಮನೇಲಿ ಎಲ್ಲರೂ ನನ್ನ ಪರಿಸ್ಥಿತಿ ಅರ್ಥ ಮಡ್ಕೊಳ್ಳಲಿ ಅಂತ expect ಮಾಡೋದೆ ದೊಡ್ಡ ತಪ್ಪು. ನಾನೇ ಊಟದ ವಿಷಯದಲ್ಲಿ compromise ಮಾಡಿಕೊಳ್ಳಲು ಸಾಧ್ಯವಿಲ್ಲದಿರುವಾಗ , ಅವರನ್ನ compromise ಮಾಡ್ಕೊಳ್ಳಿ ಅಂತ ಹೇಗೆ expect ಮಾಡಕಾಗತ್ತೆ? And the most dissapointing thing is that, post graduate ಸೊಸೆಗೆ ಅಡುಗೆ ಬರಲ್ಲ ಅಂದ್ರೆ ಅವರಿಗಲ್ಲ , ನನಗೇ ಅವಮಾನ ! physics ನಲ್ಲಿ quantum mechanics ಕಬ್ಬಿಣದ ಕಡ್ಲೆ. ಆದನ್ನೆ ಅರಗಿಸಿಕೊಂಡಿದ್ದೀನಿ...But ಅಡುಗೆ ? Its just not happening !!! For the first time in my life, I am in deep trouble !!!!!!

Z: So, ಸೌಟಿನ ಮುಂದೆ ಸೋಲೊಪ್ಪಿಕೊಂಡ್ಯಾ ?

ನಾನು: ME accepting defeat ? NO CHANCE !ಇದೇನು ಬ್ರಹ್ಮವಿದ್ಯೆ ಅಲ್ಲ, for philosophy's sake !!! Its difficult, but not impossible !!! ಏನಾದ್ರು ಸರಿ,ಅಡಿಗೆ ಕಲಿಯೋದೆ. ಅಮ್ಮನ role ಗೆ rehearsal ಮಾಡೋ time ಬಂದಿದೆ. But the problem is, cooking cant be done in micrograms , unlike material synthesis. ಪದಾರ್ಥ waste ಆದ್ರೆ ಮನೇಲಿ ಕೋಲು ತಗೋತಾರೆ. So,ಅದನ್ನ tackle ಮಾಡೋಕೆ ಕಣ್ಣಳತೆ ಕಲೀಬೇಕು and ಸಲ್ಪ dexterity ಬರ್ಬೇಕು. error na analyse ಮಾಡ್ಬೇಕು.error analysis is easy but dexterity needs practice and time, which is slightly difficult.Most importantly, ಆ stupid sodium chloride ಗೆ ಸರೀಗೆ ಪಾಠ ಕಲಿಸಬೇಕು !! ಯಾವಾಗ್ಲು ಕೈ ಕೊಡತ್ತೆ !! thankfully, its always been on the lower side so far. So, ಇವತ್ತು ಶುರುವಾಗತ್ತೆ ನನ್ನ "expedition to ಅಡುಗೆ ಮನೆ". ಅಮ್ಮನ್ನ replace ಮಾಡೋಕಂತು ಆಗೊಲ್ಲ,but ಅವರಿಗೆ ಸುಸ್ತಾದಾಗ complement and supplement ಮಾಡೋಕು ಬರ್ದೇ ಇದ್ರೆ ? ಛೆ...too bad. ಕಲಿತಿನಿ. ಇದಕ್ಕು ಕೈ ಹಾಕೇಬಿಡ್ತಿನಿ. But somewhere in the corner of my mind, I will gladly aprreciate and admire a husband who can cook for me !!

Z : ಅಹಾ ! ಆಸೆ ನೋಡು !! ಆಸೆಯೇ ದುಃಖಕ್ಕೆ ಮೂಲ !

ನಾನು: ನನಗೂ ಗೊತ್ತು !Its not necessary, but sufficient ಅಷ್ಟೆ! Prepare for the best and get ready to face the worst is my principle. ಇನ್ನೂ time ide. It will take minimum 730 days for the process of wicket falling to start. ಅಷ್ಟು ಸಾಕು ಅನ್ಸತ್ತೆ preparation ge.

Z: ಏನೋ ಪಾ! All the best !!!

ನಾನು: Thanks ! ಹೊರ್ಟೆ ಅಡುಗೆ ಮನೆಗೆ ಈಗ.

Z: ಹೌದಾ ? But I hear no trumpets and bugles ?

ನಾನು: For once, stop taunting , will you ?

(ಸಶೇಷ)

Thursday, January 3, 2008

caught you !

Z: caught you ! ಮೊನ್ನೆ ಏನೋ ಜೋರಾಗಿ movies ನೇ ನೋಡೊಲ್ಲ ಅಂತ ಮಹಾ ಮಹಾ ಪ್ರತಿಜ್ಞೆ ಮಾಡ್ತಿದ್ದೀ....but area info prasanna theatre ಅಂತ ಬರ್ತಿತ್ತು ನೆನ್ನೆ ? Head ruled people keep up their promises ಅಲ್ವ ?

ನಾನು: ಸಾಕು.......ಚುಚ್ಚಬೇಡಾ....I was not actually intending to watch the movie ಮಿಲನ, even though YOU wanted to watch it. But,I had promised my friend that I will definitely watch any movie with her, because I had been to taare zameen par without her ! And very obviously, she was all upset !!!So, ಆ promise ನ keep up ಮಾಡಕ್ಕೆ ಈ promise ನ break ಮಾಡ್ದೆ.anyways...ನಿನ್ನ ಆಸೆನೂ ತೀರಿತಲ್ಲ ? ಮತ್ತೇನು ಕೊಂಕು ನಿಂದು ?

Z: Nothing...nothing at all. ಸುಮ್ನೆ general knowledge ಗೆ !

ನಾನು: General knowledge????????? !!!!!!!!! You are impossible sometimes !!!!!

Z: ok ok. I agree I was just taunting you. How was the movie ?

ನಾನು : A well made one, really. ಎಲ್ಲಾ ರಸದ equal ಮಿಶ್ರಣ ಇದೆ. Story common ನು,but narration ಚೆನ್ನಾಗಿದೆ. And puneet rajkumar has done a very good job in acting. Director has taken care not to bore the audience. heroine ಚೆನ್ನಾಗಿದ್ದಾಳೆ. Of course, dress designing and jewellery ಚೆನ್ನಾಗಿದೆ. I had a good time. Above all...ಒಂದೇ face tissue ಖರ್ಚಾಗಿದ್ದು ! CAN YOU BELIEVE IT ?

Z: well, its tough, but I think I can believe it.But neenu theatre ಗೆ ಹೋದ ತಕ್ಷಣ ಅಳೋ concept ಹಿಂದೆ ಇರುವ ನಿಜವಾದ ಉದ್ದೇಶ ಏನು ?

ನಾನು: Oh ! ಅದಾ ? its a profound logic. Let me try if I can explain it to you. See, every day ನಾನು ಸಕ್ಕತ್ strict.practical. Non- emotional.so, lachrymose glands complained to brain one day, saying that their sacs all full and I dont cry to empty them !! ಮನೇಲಂತು ನನ್ನನ್ನ ಯಾರೂ ಅಳಿಸೊಲ್ಲ. And ಹೊರಗಡೆ ನಾನು ಅತ್ತ ಸಂದರ್ಭ ತುಂಬಾ ಕಮ್ಮಿ...and no difficulties in life to ponder upon and cry!!!I was confused. ಹುಡುಕಿದರೂ ಒಂದು strong emotion ಇರ್ಲಿಲ್ಲ.ನನ್ನ ತಲೇಲಿ ಇರೋದು ಎರಡೇ. ಒಂದು common sense,ಇನ್ನೊಂದು ಹೇಳಿದ ಕೆಲಸ ಮಾಡಬೇಕು, ತಂದೆ ತಾಯಿಗೆ ವಿಧೇಯಳಾಗಿರಬೇಕು ಅನ್ನೋ ಕರ್ತವ್ಯ ಪ್ರಜ್ಞೆ. But I had to do something. Lamark's theory of use and disuse ಪ್ರಕಾರ, use ಮಾಡದ organs inactive ಆಗೋದ್ರೆ ಮುಂದಿನ ಗತಿ ? ಆಗಿಂದ ಶುರು ಆಯ್ತು ನೋಡು ನನ್ಗೆ ಭಾವನೆಗಳ ಹುಡುಕಾಟ. I was all the time reading books on physics and philosophy and and had never watched any movies. I shifted to reading kannada novels and some comedy stories.ನಕ್ಕು ನಕ್ಕಾದರೂ ಅಳು ಬರಲಿ ಅಂತ !! After reading S L bairappa's novels.... ಸಕ್ಕತ್ತಾಗಿ ಅತ್ತೆ.ಆಮೇಲೆ I started watching bollywood and sandalwood movies...and I landed up crying moment there was a sober background music !!ಏನು ಅಳಿಸುತ್ತಾರೆ film ನವರು !!! mind blowing !!!! 6 movies nodde 3 months nalli.ಅತ್ತೆ ಅತ್ತೆ ಅತ್ತೆ...ಸಕ್ಕತ್ತಾಗಿ ಅತ್ತೆ.so, no complaints now.

Z: ನನಗೆ ನಗು ಬರ್ತಿದೆ.

ನಾನು: Logic ಅರ್ಥ ಆಗದವರು ನನಗೆ ಹೇಳಿದ್ದೂ ಇದನ್ನೆ !!

Z: hey Dont think I am laughing it off,I understand the logic and I seriously trust you.

ನಾನು: Thanks a ton !!!ಈಗ ಸಕ್ಕತ್ ಕೆಲ್ಸ ಇದೆ ನನಗೆ. Maid servant is hospitalised, so ಅಮ್ಮ ನನಗೆ help ಮಾಡಕ್ಕೆ ಹೇಳಿದಾರೆ. duty...ಹೊರಡುತ್ತೀನಿ.Line on hold.

(ಸಶೇಷ)

Tuesday, January 1, 2008

Finally ! ಶುರುವಾದ ಮಾತುಕತೆ !


Z: ನಾನು जिंदगी . ನಾನು CDMA type. ಹುಟ್ಟಿನಿಂದಲೇ ದೇಹದ ಜೊತೆಗೇ ಇರ್ತಿನಿ. ನಮ್ಮ network ನಲ್ಲಿ tring tring ಇಲ್ಲ. Hello tunes ಕೂಡಾ ಇಲ್ಲ.direct ping to talk ! moreover, ನಾನು ಯಾವಾಗ್ಲೂ available for talking.

ನಾನು: ಗೊತ್ತು ನನಗೆ. ನೀನು ತುಂಬಾ ಸಲ ನನ್ನೊಳಗೇ ಮಾತಾಡಿ ತಪ್ಪು, ಸರಿಗಳ ಅರಿವನ್ನು ನೀಡಿದ್ದೀಯ. Thanks for all the help and guidance !

Z: You are welcome. ಇಂದು ಅಂತರ್ಮುಖಿಯಾದ ಕಾರಣ ?

ನಾನು: ಅಂತರ್ಮುಖಿಗಳಿಗೆ ಬ್ರಹ್ಮಜ್ಞಾನ ಸಿಗುವುದು ಅಂತ ಮಹಾದರ್ಶನದಲ್ಲಿ ಓದಿದೆ. So,I thought,ನಿನ್ನೊಂದಿಗೆ ಮಾತಾಡಿ, ನನ್ನ quest for ultimate truth ನ ಪ್ರಾರಂಭಿಸೋಣ ಅಂತ.

Z: ಓಹ್! good. But I dont think this is the only reason. ಎಲ್ಲೋ ಏನೋ ಆಗಿದೆ. ಬೇರೆ ಏನೂ ಕಾರಣವೇ ಇಲ್ಲವೇ ?

ನಾನು:I admire your sixth sense. ಯಾಕೋ ನನಗೆ ಬೇರೆ ಜನರ ಜೊತೆ ಮಾತಾಡಲು ಮನಸ್ಸೇ ಆಗುತ್ತಿಲ್ಲ. ನನ್ನ mindsetಗೆ ಒಗ್ಗುವ ಜನರು ಸಿಗುವುದು ತುಂಬಾ ಕಮ್ಮಿ. ಬೇರೆಯವರಿಗೆಲ್ಲರಿಗೂ ನಾನು "bookish", "boring" ಅನ್ನಿಸಿರಬಹುದು.ನನಗೇನೋ ನನ್ನ ಮಾತು ಎಲ್ಲರ ತಲೆ ಮೇಲೆ ಹೊಗುತ್ತಿದೆ ಅಂತ ಭಾಸವಾಗಕ್ಕೆ ಶುರುವಾಯ್ತು ! ಯಾರಿಗೂ ತೊಂದರೆ ಕೊಡುವುದು ಸರಿಯಲ್ಲ ಅಲ್ಲವೇ ? ಅದಕ್ಕೆ, ನನ್ನ ದಿನಚರಿಯಲ್ಲಿ ಆಗುವ ಕೆಲವು ಘಟನೆಗಳು,ನನಗೆ ತೋಚಿದ ಕೆಲವು ವಿಷಯಗಳು,ನಾನು ನೋಡಿದ ಚಿತ್ರಗಳು, ಓದಿದ ಪುಸ್ತಕಗಳ ಬಗ್ಗೆ ನಿನಗೆ ಹೇಳೋಣ ಅಂತ.

Z: Yeah I understand. neenu trained physicist...a person with a philosophical mindset. ನಿನ್ನ mindsetಗೆ ಒಗ್ಗುವ ಜನರು ಸಿಗುವುದು ತುಂಬಾ ಕಮ್ಮಿ.neenu ನನ್ನೊಂದಿಗೆ ಚರ್ಚಿಸಿದಷ್ಟು ನಿನ್ನ ದೃಷ್ಟಿಕೋನ ವಿಸ್ತರಿಸುತ್ತಾ ಹೋಗುತ್ತದೆ.

ನಾನು: So, ನಿನ್ನೊಂದಿಗೆ ದಿನಾಗಲೂ ಸಲ್ಪ ಹರಟೆ ಹೊಡಿಯುತ್ತೇನೆ.Lets talk about us---You and me together make life ಅಲ್ವ ?

Z: Its actually...Me in you makes life !!

ನಾನು: Right ! So, lets talk ಜೊತೆ ಜೊತೆ... lets laugh ಮತ್ತೆ ಮತ್ತೆ....

Z: ಓಹ್ ! ಆ ವಿವಾದಿತ remake ಚಿತ್ರದ ಹಾಡಲ್ವ ಇದು ? Apt modification !

ನಾನು: yeah ! Thanks !

Z: ಈಚೀಚೆಗೆ ನಿನಗೆ ಚಿತ್ರಗಳನ್ನು ನೋಡಬೇಕೆಂಬ ಹಂಬಲ ಹೆಚ್ಚಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. You were never like this before. ಈ sudden metamorphosis ಕಾರಣ ?

ನಾನು: ನಿನ್ನಿಂದಲೇ ! M.Sc ಭಯಂಕರ hectic ಅಂತ ಗೋಗರೆದು, ಅತ್ತು, ಹ್ಯಾಪ್ ಮೋರೆ ಹಾಕೊಂಡಿರೋದನ್ನ ನೋಡಲಾರದೆ, ಕೆಲವು ಒಳ್ಳೊಳ್ಳೆ ಚಿತ್ರಗಳನ್ನ ತೋರಿಸಿದೆ ಅಷ್ಟೆ. ನನ್ನಂತಹ thoroughly head ruled , practical, non-emotional girl ಅನ್ನು taare zameen par film ನಲ್ಲಿ ಬಿಕ್ಕಿ ಬಿಕ್ಕಿ ಅಳುವಂತೆ ಮಾಡಿದ್ದೀಯ !!!! One whole face tissue bag ಖಾಲಿ !!! But I must say, It was a movie worth watching.

Z: ನನ್ನ ಮಾತು ಕೇಳಿದೆಯಲ್ಲ, ಅಷ್ಟು ಸಾಕು !

ನಾನು : Now that I have satisfied all your desires, you better train yourself for the coming tough fourth sem. And please, ಆಗ release ಆಗೊ movie ಗಳನ್ನೆಲ್ಲ ನೋಡ್ಬೇಕು ಅಂತ ಗಲಾಟೆ ಮಾಡ್ಬೇಡ. ಮುಗಿಲಿ M.Sc... VCD library ನೇ import maadtini. ok ?

Z: well...ನೋಡೋಣ. For all that I know, you might as well say, " sorry to have ignored your advise zindagi ! Lets go for a movie" ಅಂತ.

ನಾನು: yeah right ! lets see !

ಇವತ್ತಿಗೆ ಇಷ್ಟು ಸಾಕು. Line ನ hold maadtini.

Z: line ತಾನೆ ? hold it !

(ಸಶೇಷ)

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...