Monday, November 23, 2009

ಮುಂದಿನ ಜನ್ಮಗಳ reservation !

ನಾನು : ಅಂತರಂಗ ಬ್ಲಾಗ್ ನ ಸತೀಶ್ ಅವರು ಬರೆದ ಈ ಲೇಖನವನ್ನು ಓದಿದ ಮೇಲೆ ನನಗೆ ಈ ಐಡಿಯಾ ಬಂದಿದೆ.

Z : ಯಾವ ಲೇಖನ ಮತ್ತು ಎಂಥಾ ಐಡಿಯಾ ?

ನಾನು : ಅವರು ಈ ಜನ್ಮದಲ್ಲಿ ಮಾಡಲಾಗದ ಕೆಲಸಗಳ ಬಗ್ಗೆ ಬರೆದಿದ್ದಾರೆ. ಇದನ್ನ ಮುಂದಿನ ಜನ್ಮದಲ್ಲಿ ಮಾಡುವ ಹಾಗಿದ್ದರೆ ಹೇಗಿರತ್ತೆ ಅಂತಲೂ loud thinking ಮಾಡಿದ್ದಾರೆ.

Z : ಅದಕ್ಕೆ ?

ನಾನು : ನಾನು ನನ್ನ ಮುಂದಿನ ಜನ್ಮಗಳಲ್ಲಿ ಏನೇನು ಮಾಡಬೇಕು ಅನ್ನೋದನ್ನ ಪ್ಲಾನ್ ಮಾಡಿದಿನಿ.

Z : ಆಹ...ಮೊದಲು ಈ ಜನ್ಮದಲ್ಲಿ, ಈ ವಾರದಲ್ಲಿ ಆಗಬೇಕಿರುವ ಕೆಲಸಗಳನ್ನ ನೆಟ್ಟಗೆ ಪ್ಲಾನ್ ಮಾಡುವುದನ್ನು ಕಲಿ.

ನಾನು : ಕಲಿತಿದ್ದೂ ಆಗಿದೆ. ಮಾಡಿದ್ದೂ ಆಗಿದೆ. ಮುಂದಿನ ಆರು ತಿಂಗಳಿಗೆ ನನ್ನ ಪ್ರತಿದಿನದ ಶೆಡ್ಯೂಲ್ ರೆಡಿ ಇದೆ.

Z : ಏನಮ್ಮ ಅದು ?

ನಾನು : ಕಾಲೇಜು, ಪುಸ್ತಕ, ಪಾಠ, ಎಮ್.ಫಿಲ್ಲು, ಲೈಬ್ರರಿ, ಮನೆ !

Z : ಆಹಾ !

ನಾನು : ಹೂಂ ! ಏನ್ ತಿಳ್ಕೊಂಡಿದ್ಯಾ ನನ್ನ ನೀನು ?

Z : ಏನಂತಲೂ ತಿಳ್ಕೊಳಕ್ಕಾಗಲ್ಲ ನಿನ್ನ.

ನಾನು : good realization.

Z : ಈಗ ಅದು ಏನನ್ನ ಪ್ಲಾನ್ ಮಾಡಿ ಕಡೆದು ಕಟ್ಟೆ ಹಾಕಿದಿಯಾ ಅಂತ ಹೇಳು.

ನಾನು : ಹು. ಕೇಳಿಸಿಕೋ.

ನನ್ನ ಇಮ್ಮೀಡಿಯೆಟ್ ಮುಂದಿನ ಜನ್ಮದಲ್ಲಿ ನಾನು ಪುರಾತನ ವಸ್ತು ಸಂಶೋಧಕಿ ಆಗ್ಬೇಕು.

Z : ಯಾಕ್ ಬಂತು ನಿನಗೆ ಇಂಥಾ ಇಡಿಯಾ ?

ನಾನು : ಕೆ. ಎನ್. ಗಣೇಶಯ್ಯ ಅವರ ಕಾದಂಬರಿಗಳ ಪ್ರಭಾವ.

Z : ಆಹಾ !

ನಾನು : ಬೇಲೂರು, ಹಳೇಬೀಡು, ಸೋಮನಾಥಪುರ, ಇವೇ ಮುಂತಾದ ಎಲ್ಲ ದೇವಸ್ಥಾನಗಳನ್ನು, ಗುಹೆಗಳನ್ನು, ಕಾಡು ಮೇಡುಗಳನ್ನು ಅಲೆದು, ಸುತ್ತಿ,ಪ್ರಪಂಚ ಹಿಂದೆಂದೂ ಕಂಡರಿಯದ ಸಂಶೋಧನೆಗಳನ್ನ ಮಾಡಬೇಕು. ಟ್ರೆಕ್ಕಿಂಗು, ರಾಕ್ ಕ್ಲೈಂಬಿಗು, ಎಲ್ಲಾ ಮಾಡ್ಬೇಕು.

Z : ಅಷ್ಟೇ ನಾ ?

ನಾನು : ಆ ಜನ್ಮಕ್ಕೆ ಅಷ್ಟೇ.

Z : ಆಮೇಲೆ ?

ನಾನು : ಅದಾದ ಮೇಲಿನ ಮುಂದಿನ ಜನ್ಮದಲ್ಲಿ ನಾನು dancer ಆಗ್ಬೇಕು.

Z : ಈಗಲೇ ಕುಣಿದಿದ್ದು ಸಾಲದಾ ?

ನಾನು : ಈಗ ನಾನೆಲ್ಲಿ ಕುಣಿತಿದಿನಿ, ಎಲ್ಲರನ್ನು ಕುಣಿಸುತ್ತಿದ್ದೀನಿ.ಆದರೆ ಆ ಜನ್ಮದಲ್ಲಿ ಬರಿ ಕುಣಿಯೋದೆ. ನಾಟ್ಯ ರಾಣಿ ಶಾಂತಲೆ ಮೇಲೆ ಆಣೆ, ಅವಳಂತೆಯೇ ಕುಣಿಬೇಕು ನಾನು.

Z : ಸರಿ. ಆಮೇಲೆ ?

ನಾನು : ಅದರ ಮುಂದಿನ ಜನ್ಮದಲ್ಲಿ ನಾನು photographer ಆಗ್ಬೇಕು. ನನ್ನ ಕ್ಯಾಮೆರಾದ ಚಿತ್ರಗಳು ಅಂದ್ರೆ ಜನ ಮುಗಿಬೀಳಬೇಕು ನೋಡಕ್ಕೆ. ಅಷ್ಟರ ಮಟ್ಟಿಗೆ ಸಾಧನೆ ಮಾಡ್ಬೇಕು.

Z : ಯಬ್ಬಾ !!!ಮುಂದೆ ?

ನಾನು : ಫೋಟೋಗ್ರಫರ್ ಜನ್ಮ ಆದ ಮೇಲೆ ನಾನು ಮನಃ ಶಾಸ್ತ್ರಜ್ಞೆ ಆಗ್ಬೇಕು.

Z : ಇದೊಂದು ಬಾಕಿ ಇತ್ತು ನೋಡು.

ನಾನು : ಹು. ಅದನ್ನು ನೆರವೇರಿಸಿಬಿಡೋಣಾ ಅಂತ. ಮಿದುಳಿನ ಸಮಸ್ತವನ್ನೂ ಅರಿತುಕೊಳ್ಳುವ ವರೆಗೂ ನಾನು ಸುಮ್ಮನಿರೋದಿಲ್ಲ.

Z : ಕರ್ಮಕಾಂಡ. ಮುಂದೆ ?

ನಾನು : ಅದಾದ ಮುಂದಿನ ಜನ್ಮದಲ್ಲಿ ನಾನು ಡಾಕ್ಯುಮೆಂಟರಿಗಳನ್ನು ಡೈರೆಕ್ಟ್ ಮಾಡಬೇಕು.

Z : ಎಂಥವು ?

ನಾನು : ಡಿಸ್ಕವರಿ ಚಾನೆಲ್ ನಲ್ಲಿ ಬರತ್ವಲ್ಲ...ಅಂಥವು.

Z : ಉದ್ಧಾರ. ಮುಂದೆ ?

ನಾನು : ಅದಾದ ಮುಂದಿನ ಜನ್ಮದಲ್ಲಿ ನಾನು ನ್ಯೂಸ್ ರಿಪೋರ್ಟರ್ ಆಗ್ಬೇಕು.

Z : This is lakshmi from ....

ನಾನು : ಹಾಂ.... ಹಂಗೇನೆ.

Z : ಸರಿ. ಮುಂದೆ ?

ನಾನು : ಟೋಟಲ್ ಅನಾಥೆಯಾಗಿ, ಅಲೆಮಾರಿಯಾಗಿ ಅಲೆಯೋದು ನನ್ನ ಲಾಸ್ಟ್ ಬಟ್ ಒನ್ ಜನ್ಮ.ಒಂದು ಕಡೆ ನಿಲ್ಲಬಾರದು, ಹಾಗೆ ಸುಮ್ನೆ ಸುತ್ತುತ್ತಾ, ಇಡೀ ಪ್ರಪಂಚದ ಪರ್ಯಟನೆ ಮಾಡ್ಬೇಕು.

Z : ಯಾಕಪ್ಪ ಇಂಥಾ ಆಸೆ ?

ನಾನು : ಏನೋ ಗೊತ್ತಿಲ್ಲ, ಹಂಗನಿಸಿದೆ ನಂಗೆ.

Z : ನೀನೋ...ನಿನ್ನ ಆಸೆಗಳೋ...ನೀನು ಏರೋಪ್ಲೇನ್ ಆಗೋದು ಒಳ್ಳೇದು ಆ ಜನ್ಮದಲ್ಲಿ.

ನಾನು : ಹೇ...ಇಲ್ಲ ಇಲ್ಲ...ಎಲ್ಲಾ ಜನ್ಮದಲ್ಲೂ ನಾನು ಮನುಷ್ಯಳೇ ಆಗ್ತಿನಿ.

Z : ಹೆಹೆ...ಡೌಟು.

ನಾನು : ಉಹು. ನೋಡ್ಕೋ ಬೇಕಾದ್ರೆ. ನಾನು ಮನುಷ್ಯಳಾಗೆ ಹುಟ್ಟೋದು.

Z : ಸರಿ ನೋಡೇ ಬಿಡೋಣ. ಲಾಸ್ಟ್ ಜನ್ಮ ಏನು ?

ನಾನು : Home maker. ಬೆಳಿಗ್ಗೆ ಏಳು, ಕಾಫಿ ಮಾಡು, ತಿಂಡಿ ಮಾಡು, ಗಂಡ ಮನೆ ಮಕ್ಕಳನ್ನ ನೋಡಿಕೋ, ಸಂಜೆ ದೇವಸ್ಥಾನ ಭಜನೆ ಅಂತ ಹಾಯಾಗಿರು, ರಾತ್ರಿ ಊಟ ಮಾಡಿ ತಾಚ್ಕೊ. ವಾರಕ್ಕೊಂದು ಸಿನಿಮಾ, ತಿಂಗಳಿಗೆ ಒಂದಷ್ಟು ಶಾಪಿಂಗು. ಹೆಂಗೆ ?

Z : ಅದನ್ನ ಎಲ್ಲಾ ಜನ್ಮಗಳಲ್ಲೂ ಮಾಡಬಹುದು.

ನಾನು :ಕರೆಕ್ಟೂ...ಆದರೆ this janma is exclusively for home.No need of striking balance between work and home. ಮಿಕ್ಕಿದ್ದೆಲ್ಲಾ ಜನ್ಮಗಳಲ್ಲೂ ತಲೆಗೆ ಹೆಚ್ಚು ಕೆಲಸ ಕೊಟ್ಟಿರ್ತಿನಿ. ಈ ಜನ್ಮದಲ್ಲಿ ತಲೆಗೆ ಕೆಲಸ ಕಡಿಮೆ ಇರತ್ತೆ.

Z : ಹಂಗೆ.

ನಾನು : ಹು.

Z : ಮುಗಿತಾ ಪ್ಲಾನು ?

ನಾನು : ಸಧ್ಯಕ್ಕೆ ಮುಗ್ದಿದೆ. ಇನ್ನು extend ಆದರೂ ಆಗಬಹುದು.

Z : ಮೊದಲೇ ರಿಸರ್ವ್ ಮಾಡಿಡೋದು ಒಳ್ಳೇದು.

ನಾನು : ಒಳ್ಳೇ ಐಡಿಯಾ. ಇರು, ನನ್ನದು, ನಿನ್ನದು, ಸದ್ಯೋಜಾತನದ್ದು ಒಂದು conference call ಕರಿತಿನಿ.

Hi sadyOjaata ! I hope you are doing fine. ನೋಡಪ್ಪಾ...ನನಗೆ ಇಂಥಿಂಥಾ ಜನ್ಮಗಳನ್ನ ಇದೇ ಆರ್ಡರಿನಲ್ಲಿ ಕರುಣಿಸಿಬಿಡು, ಪ್ಲೀಸ್. ಇಲ್ಲಾ, ಆಗಲ್ಲ, ನೋಡ್ತಿನಿ, ವಿಧಿ ಅಂತೆಲ್ಲಾ ರಾಗ ಎಳಿಬೇಡ, ಟಿಪಿಕಲ್ ದೇವರ ಥರ. Be different. ಸೋ, ಥಟ್ ಅಂತ ಯೆಸ್ ಅಂದುಬಿಡು.

Z : ನೀನ್ ಕೇಳಿದ್ದೆಲ್ಲಾ ಕೊಟ್ಬಿಡ್ತಾನೆ ಅಂತ ಅಂದುಕೊಂಡಿದ್ಯಾ ?

ನಾನು : ಅಲ್ವೆ...ನನ್ನ ಸೈಡ್ ತಗೊಳ್ಳೋದ್ ಬಿಟ್ಟು ಏನೆ ನೀನು ಹಿಂಗಂತ್ಯಾ ? ನನ್ನ ವಕಾಲತ್ತು ವಹಿಸು ನೀನು. Now !

Z : Ok. ನೋಡು ಸದ್ಯೋಜಾತ, For reasons, I support her. I think even you should do the same by granting every wish of hers !

ನಾನು : ಒಳ್ಳೇ ಮಾತಲ್ಲಿ ನನ್ನ ಬೇಡಿಕೆಗೆ ಅಸ್ತು ಅಂದರೆ ಸರಿ...ಇಲ್ಲಾಂದ್ರೆ....

Z : ಇಲ್ಲಾಂದ್ರೆ....

ನಾನು : ಅಮ್ಮಂಗೆ ಹೇಳ್ತಿನಿ !

Wednesday, November 18, 2009

ಪುಸ್ತಕೋತ್ಸವ 2009

Z :ಮತ್ತೆ ಹೋಗಿದ್ಯಾ ?

ನಾನು : what do you mean by ಮತ್ತೆ ಹೋಗಿದ್ಯಾ ?

Z :ಹೋದ ವರ್ಷ ಹೋಗಿದ್ಯಲ್ಲ...

ನಾನು :ವರ್ಷಕ್ಕೆ ಒಂದು ಸರ್ತಿ ಕಾರ್ತೀಕ ಮಾಸದಲ್ಲಿ ನಂಜನಗೂಡಿಗೆ ಹೋಗೋದು ಹೆಂಗೆ compulsory ನೋ, ಹಂಗೆ ವರ್ಷಕ್ಕೊಂದು ಸಲ ನಡೆಯೋ ಪುಸ್ತಕೋತ್ಸವಕ್ಕೆ ಹೋಗೋದು compulsory ನೆ.

Z : ಈ ಸರ್ತಿ ನೂ 150 ರುಪಾಯಿ ತಗೊಂಡು ಹೋಗಿದ್ಯಾ ?

ನಾನು :ಒಂದು ಸಣ್ಣ ಮಿಸ್ಟೇಕ್ ಮಾಡಿದೆ ನೀನು. 150 ಗೆ ಒಂದು ಸೊನ್ನೆ ಸೇರ್ಸು.

Z : !!!!!!!!!!!!!!!!!!!!!!!!!!!!!!!!!!!!!

ನಾನು :ಆದರೆ ಅದಷ್ಟೂ ನನ್ನೊಬ್ಬಳದ್ದೇ ಬಜೆಟ್ ಅಲ್ಲ.

Z :ಅಂದುಕೊಂಡೆ. ಟೆಂಪೋ ಲಾರಿ ಏನು ತಗೊಳ್ಳದೇ ಬರೀ ಬಸ್ಸಲ್ಲಿ ಹೋದಾಗಲೇ ಅನುಮಾನ ಬಂತು ನನಗೆ.

ನಾನು :ಏನಂತ ?

Z : ನೀನು ಒಂದಿಷ್ಟು ಜನರ ಬುಕ್ ಲಿಸ್ಟ್ ಇಟ್ಕೊಂಡೇ ಹೋಗಿದಿಯಾ ಅಂತ. ನಿನ್ನ requirement ಗೆ ಸಾವಿರದ ಐನೂರು ರುಪಾಯಿ ಕಡಿಮೆ. ಏನಿಲ್ಲಾ ಅಂದ್ರೂನೂ ಹತ್ತು ಸಾವಿರದ ಕಡಿಮೆ "ನಿನ್ನ ಸ್ವಂತಾ ಶಾಪಿಂಗ್" ಇರಲ್ಲ. ಪುಸ್ತಕದ ಗಾತ್ರ ದೊಡ್ಡದಾಗಿರತ್ತೆ ಆದ್ದರಿಂದ ಲಾರಿ ಬೇಕು.ಒಂದು ಸಣ್ಣ ಬ್ಯಾಗ್ ತಗೊಂಡು ಬೇರೆ ಹೋದೆ...ನೊ ನೊ...this is so typically not you !

ನಾನು :ಗುಡ್ ಗೆಸ್ಸ್.

Z :ಥ್ಯಾಂಕ್ಸ್.

ನಾನು :You are most welcome.ಕಳೆದ ಬುಧವಾರ ಬೆಳಿಗ್ಗೆ ಹತ್ತು ಹತ್ತಕ್ಕೆ ಮನೆ ಬಿಟ್ಟೆ. ಸ್ವಲ್ಪ ಲೇಟಾಯ್ತು ಅನ್ನೋ ಫೀಲಿಂಗ್ ಬಂತು ನನಗೆ.

Z : ಯಾಕಪ್ಪಾ ?

ನಾನು : ನಾನು ಅಲ್ಲಿಗೆ ಹನ್ನೊಂದಕ್ಕೆ ತಲುಪಿ ಮೂರರ ವರೆಗೂ ಅಲ್ಲೇ ಇರಬೇಕು ಅನ್ನೋ ಪ್ಲಾನ್ ಹಾಕಿದ್ದೆ.ನಾನೆಂಥಾ ದೊಡ್ಡ ಮನುಷ್ಯಳು ಅಂದರೆ, ಹೋಗುವ ಅರ್ಜೆಂಟಲ್ಲಿ ದುಡ್ಡನ್ನು ಡ್ರಾ ಮಾಡುವುದು ಮರೆತಿದ್ದೆ. ಇದು ನೆನಪಾದದ್ದು ಮೆಜೆಸ್ಟಿಕ್ ನಲ್ಲಿ.

Z :ಎಂಥಾ ದೊಡ್ಡ ತಲೆ ಅಂದ್ರೆ ನಿನ್ನದು...

ನಾನು :ಯೆಸ್. ಮೆಜೆಸ್ಟಿಕ್ ತಲುಪಿದ ಕೂಡಲೇ ಅಲ್ಲಿದ್ದ ATM ಗೆ ಧಾವಿಸಿದೆ. ನನ್ನ ಕರ್ಮಕ್ಕೆ, ದುಡ್ಡು ಬಂತು, ಆದರೆ ಕಾರ್ಡು struck ಆಯ್ತು !

Z : Oh my god !

ನಾನು :ಆಮೇಲೆ ನಾನು ಹೊರಗಿರುವವರನ್ನು ಕರೆದು ಹೇಳಿದೆ, ಕಾರ್ಡ್ struck ಆಯ್ತು ಅಂತ. ಅವರು ಪಾಪ ಒಳಬಂದು cancel button press ಮಾಡಿದ ತಕ್ಷಣ ನನ್ನ ಕಾರ್ಡು ಈಚೆ ಬಂತು. ಅವರಿಗೆ ಥ್ಯಾಂಕ್ಸ್ ಹೇಳಿ ಬದುಕಿದೆಯಾ ಬಡಜೀವವೇ ಅಂತ ಅಲ್ಲಿಂದ ಓಡಿದೆ.

Z :Moral of the story is, never use ATMs which take the card inside !

ನಾನು :ಹು. ಅಲ್ಲಿಂದ ಮೇಖ್ರಿ ಸರ್ಕಲ್ಲಿಗೆ ಬಸ್ಸು ಹತ್ತಿದೆ. ನನ್ನ ಪೂರ್ವಜನ್ಮದ ಪುಣ್ಯವಿಶೇಷ, ಅವನು book festival ಹತ್ತಿರ ಇರೋ ಬಸ್ ಸ್ಟಾಪ್ ಬಳಿ ನಿಲ್ಲಿಸಿದ. ಆರ್ಮಿ ಕಮಾಂಡೋ ಹಾಸ್ಪಿಟಲ್ ಇಂದ ನಡೆಯುವ ಕಷ್ಟ ತಪ್ಪಿತು.ಗಂಟೆ ಹನ್ನೊಂದು ವರೆ.

Z : nanograms range ನಲ್ಲಿ ಪುಣ್ಯ ಇಟ್ಟಿದ್ಯಾ ನೀನು.

ನಾನು :yes.ಟಿಕೆಟ್ ತಗೊಂಡು ಒಳ ಬಂದೆ. ಆವತ್ತು ಪ್ರದರ್ಶನದಲ್ಲಿ reverse order ನಲ್ಲಿ entrance. 346th stall ಕನ್ನಡ ಪುಸ್ತಕ ಪ್ರಾಧಿಕಾರದ ಸ್ಟಾಲು. ಅಲ್ಲಿ ಪುಸ್ತಕಗಳನ್ನ ನೋಡುತ್ತಿರಬೇಕಾದರೆ ಹಿಂದೆಯಿಂದ ಯಾರೋ ಬೆನ್ನು ತಟ್ಟಿದರು. ನೋಡಿದರೆ ನನ್ನ ಸೋದರತ್ತೆ ಮಗಳು ಮೀನಾ !ನನಗಿಂತಾ ಸಿಕ್ಕಾಪಟ್ಟೆ ದೊಡ್ಡೋಳು. Naturally, because ಅವಳು ನಮ್ಮ ತಂದೆಯ ದೊಡ್ಡಕ್ಕನ ಮಗಳು. ಅವಳ ಮಕ್ಕಳು ನನ್ನ ತಂಗಿಯ ವಯಸ್ಸು. ಮನೆ, ಕೆಲ್ಸ ಅಂತೆಲ್ಲಾ ಹೊರಗೇ ಕಾಲಿಡದ ಅವಳನ್ನ ನೋಡಿ ನನಗೆ ಒಂದು ನಿಮಿಷ ಆಶ್ಚರ್ಯ ಆಯ್ತು. ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ನನ್ನ ಇನ್ನೊಬ್ಬ ಸೋದರತ್ತೆ , ನಮ್ಮ ತಂದೆಯ ತಂಗಿ ಕೂಡಾ ಬಂದಿದ್ದರು. ನಾನು ಅವರು ಪುಸ್ತಕದ ಹುಳುಗಳು ಅಂತ ಪ್ರಸಿದ್ಧರು. ಅವರಂತೂ ಹಳೇ ಪುಸ್ತಕಗಳನ್ನು ಸಂಗ್ರಹ ಮಾಡುವಲ್ಲಿ ನಿಪುಣರು.ಅವರು ಹಳೆ ಪುಸ್ತಕವೊಂದನ್ನ ನೋಡುತ್ತಾ ನಿಂತಿದ್ದರು. ನಾವು ಮೂವರೂ ಒಟ್ಟಿಗೆ " ಏನಿಲ್ಲಿ?" ಅಂದೆವು.

Z : ಆಹಾ...ಸಿನೆಮಾ ಥಿಯೇಟರಿಗೆ ಬಂದು " ಸಿನೇಮಾ ನೋಡಕ್ಕೆ ಬಂದ್ರಾ " ಅಂದ ಹಾಗಾಯ್ತು.

ನಾನು : ಹು !ಆಮೇಲೆ ಅವರನ್ನ ಮಾತಾಡಿಸಿದೆ. ನಾನು ಅಮೆ ಗತಿಯಲ್ಲಿ ಪುಸ್ತಕ ನೋಡುವವಳೆ. ಆದರೆ ನನ್ನ ಸೋದರತ್ತೆ snail. ಅಮ್ಮ ಮತ್ತೆ ನನ್ನ ಫಿಸಿಕ್ಸ್ ಪ್ರೊಫೆಸರ್ರು ಇಬ್ಬರೂ ನನ್ನ ಹತ್ತಿರ "ಹಳೆ ಪುಸ್ತಕ ಓದಿ, ನಿನಗೆ dust allergy ಆಗಿ, ಆಮೇಲೆ ಒದ್ದಾಡೋದು ನಮಗೆ ನೋಡಕ್ಕೆ ಆಗೊಲ್ಲ. So no buying old books !"ಅಂತ. ನಾನು ಹಳೇ ಪುಸ್ತಕದ ಸ್ಟಾಲಿಗೆಹೋಗಲ್ಲ ಅಂತ ಭೀಷ್ಮ ಪ್ರತಿಜ್ಞೆ ಮಾಡಿದ್ದೆ. ಅದಕ್ಕೆ" ಅತ್ತೆ, ಮೀನಾ, ನೀವು ನೋಡ್ಕೊಳಿ, ನಾನು ಮುಂದೆ ಹೊರಡ್ತಿನಿ, ನೀವು ನಿಧಾನಕ್ಕೆ ನೋಡ್ಕೊಂಡು ಬನ್ನಿ" ಅಂದದ್ದೇ ನಾನು ಮುಂದೆ ನಡೆದೆ. ಈ ಸರ್ತಿ 346 ಸ್ಟಾಲುಗಳಿದ್ದಿದ್ದು ಗೊತ್ತಾ ?

Z : ಮಿನಿಮಮ್ ಹತ್ತು ಪುಸ್ತಕ ತಗೊಂಡ್ಯಾ ಹಾಗಿದ್ರೆ ?

ನಾನು : ಉಹು. ನಾನು ತಗೊಂಡಿದ್ದು ಮೂರು. ಮಿಕ್ಕಿದ್ದು ಮೂರು ತೇಜಕ್ಕನಿಗೆ.

Z : ಕೈಯಲ್ಲಿ ಹೊರೋದಾಗಿದ್ರೆ ಇಷ್ಟು ಸಾಕು.

ನಾನು : ಯೆಸ್. ಕೈಯಲ್ಲೇ ಹೊತ್ಕೊಂಡ್ ಬಂದೆ.

Z : ಹ್ಮ್ಮ್....

ನಾನು : ಸ್ಟಾಲುಗಳಲ್ಲಿ ಹೆಚ್ಚು ಆಧ್ಯಾತ್ಮಿಕ ಪುಸ್ತಕಗಳು ಕಂಡವು.ಕೆಲವನ್ನು ನಾನು ಕೊಂಡಿದ್ದೆ, ಕೆಲವು ನನಗೆ ಗಿಫ್ಟಾಗಿದ್ದವು, ಇನ್ನು ಕೆಲವನ್ನು ಅಣ್ಣ ಶೃಂಗೇರಿಯಿಂದ ತರುತ್ತೇನೆಂದು ಹೇಳಿದ್ದರು.ಹಾಗಾಗಿ ನನಗೆ ಅಲ್ಲಿ ಕೊಳ್ಳಲು ಹೊಸ ಪುಸ್ತಕಗಳು ಕಂಡರೂ, ಹಳೆಯದನ್ನು ಮುಗಿಸದೇ ಹೊಸದಕ್ಕೆ ಹೋಗಲು ಮನಸ್ಸಾಗಲಿಲ್ಲ.

Z :ನೀನು "ಇನ್ನೂ ಸಮಯ ಇದೆ ಇದಕ್ಕೆಲ್ಲಾ" ಅಂತ ಮುಂದಕ್ಕೆ ಬಂದಿರ್ತಿಯಾ.

ನಾನು : ಹು.ಆಮೇಲೆ ಒಂದಷ್ಟು ಜಲೇಬಿ ಭಾಷೆಯ ಪುಸ್ತಕಗಳ ಸ್ಟಾಲುಗಳಿದ್ದವು.

Z : I see !

ನಾನು : ಕನ್ನಡ ಬುಕ್ ಸ್ಟಾಲುಗಳಲ್ಲಿ ಇರೋ ಪುಸ್ತಕಗಳ ಮೇಲೆ ಕಣ್ಣಾಡಿಸಿದೆ. ಇತ್ತೀಚಿನವುಗಳನ್ನ ನಾನು ಆಗಲೇ ಅಂಕಿತದಲ್ಲಿ ಕೊಂಡಿದ್ದೆ.ಹಳೆಯದು ತೇಜಕ್ಕನ ಬಳಿ ಇದ್ದವು. ಮಿಕ್ಕಿದ್ದು ಅಮ್ಮನ ಮತ್ತು ಅಪರ್ಣಳ "individual library"ಯಲ್ಲಿ ಇದ್ದವು. ಆಂಗ್ಲಪುಸ್ತಕಗಳೆಲ್ಲಾ ನನ್ನ DVD pack ನಲ್ಲಿ ಭದ್ರವಾಗಿದ್ದವು.

Z : ಇನ್ನೇನು ತಗೊಂಡೆ ಮತ್ತೆ !?

ನಾನು : ಅದೇ, ನನ್ನ snail ಸೋದರತ್ತೆ ಇದಾರಲ್ಲಾ, ಅವರೂ ನನ್ನಂತೆಯೇ ಫಿಲಾಸಫಿಕಲ್ ಕಾದಂಬರಿ ಫ್ಯಾನು. ಅವರು ನನಗೆ ಡಾ|| ಎಚ್. ತಿಪ್ಪೆರುದ್ರಸ್ವಾಮಿಯವರ "ಪರಿಪೂರ್ಣದೆಡೆಗೆ" ಕಾದಂಬರಿ ಓದಲು ಹೇಳಿದ್ದರು. world culture library ಲಿ, ಜಯನಗರದ ಸಿಟಿ ಸೆಂಟ್ರಲ್ ಲೈಬ್ರರಿಯಲ್ಲಿ ಇದು ನನಗೆ ಸಿಕ್ಕಿರಲಿಲ್ಲ.ಸಾಹಿತ್ಯ ಭಂಡಾರದ ಸ್ಟಾಲಿನವರು "out of print" ಅಂದುಬಿಟ್ಟರು. ಆದರೆ ಅದು ನವಕರ್ನಾಟಕ ಪಬ್ಲಿಕೇಷನ್ಸ್ ಸ್ಟಾಲಿನಲ್ಲಿ ನನ್ನ ಕಣ್ಣಿಗೆ ಬಿತ್ತು.

Z : :)

ನಾನು : ಹಸಿದ ಹುಲಿ ಜಿಂಕೆ ಮೇಲೆ ಎಗರುವ ಹಾಗೆ ನಾನು ಎಗರಿಬಿದ್ದು ಆ ಪುಸ್ತಕ ತಗೊಂಡೆ.

Z : ಈ ಸಾಧನೆಗೆ ಯಾವ ಅವಾರ್ಡ್ ಬೇಕು ನಿನಗೆ ?

ನಾನು :ಯಾವ್ದಾದ್ರು ನಡಿಯತ್ತೆ.

Z : ಸರಿ. ಇರ್ಲಿ ಅಂತ ರಾಜ್ಯೋತ್ಸವ ಪ್ರಶಸ್ತಿ ಕೊಡ್ತಿದಿನಿ.ತಗೊ.

ನಾನು :thanks.ಇನ್ನೊಂದು ತೇಜಸ್ವಿಯವರ ಪುಸ್ತಕ.

Z : Expected.You never come out of any book stall without buying a book by Tejaswi.

ನಾನು : Yes.ಇನ್ನೊಂದು ಪುಸ್ತಕ ಕಾರಂತರ ಆತ್ಮಕಥೆ- ಹುಚ್ಚು ಮನಸ್ಸಿನ ಹತ್ತು ಮುಖಗಳು. ಅಲ್ಲಿಗೆ ಕನ್ನಡ ಪುಸ್ತಕ್ಕಗಳ ಖರೀದಿ ಮುಗಿತು.

Z : ಇನ್ನೇನು ಬಾಕಿ ಇತ್ತು ?

ನಾನು : M.Phil ಗೆ ಪುಸ್ತಕ ಬೇಕಿತ್ತಮ್ಮಾ ! ನಮ್ಮ ಸರ್ರು ಒಂದು ಪುಸ್ತಕ ತೋರಿಸಿ, " Have it with you before next class" ಅಂದರು. ಆ ಪುಸ್ತಕದ ಪ್ರಕಾಶಕರ ಆಫೀಸು ನಮ್ಮ ತಂದೆಯ ಆಫೀಸಿನ ಹಿಂಭಾಗವೇ. ಆದರೂ ನಾನು ಈ ಪುಸ್ತಕನ ಪುಸ್ತಕೋತ್ಸವದಲ್ಲೇ ಕೊಳ್ಳಬೇಕಂತ ಇದ್ದೆ. ಆ ಸ್ಟಾಲಿಗೆ ಹೋಗಿ ಪುಸ್ತಕದ ಹೆಸರು ಹೇಳಿದೆ. ಪುಣ್ಯಕ್ಕೆ ಎರಡೇ ಪುಸ್ತಕಗಳಿದ್ದವು. ನನಗೊಂದು, ನನ್ನ ಸ್ನೇಹಿತೆಗೊಂದು ಖರೀದಿಸಿ, ಇಪ್ಪತ್ತು ಪರ್ಸೆಂಟ್ ಡಿಸ್ಕೌಂಟು ಕೊಡಲೇಬೇಕು ಅಂತ ಗಲಾಟೆ ಮಾಡಿ ಕಡೆಗೆ ಅವನೂ ಒಪ್ಪಿ, ನನ್ನ ಶಾಪಿಂಗ್ ಮುಗಿಸಿ ತೇಜಕ್ಕನ ಪುಸ್ತಕದ ಲಿಸ್ಟಿನ ಕಡೆಗೆ ಗಮನ ಹರಿಸಿದೆ. ಅವರು ಕೇಳಿದ ಪುಸ್ತಕಗಳನ್ನು ಕೊಂಡು, ಮಿಕ್ಕಿದ್ದೆಲ್ಲಾ ಸ್ಟಾಲುಗಳ ಕಡೆ ಪಕ್ಷಿನೋಟ ಬೀರಿದೆ. ತ.ರಾ.ಸು ಬರೆದಿರುವ ಚಿತ್ರದುರ್ಗ ಸಾಮ್ರಾಜ್ಯದ ಕಾದಂಬರಿಯ ಸೀರೀಸ್ ಪುಸ್ತಕಗಳನ್ನೆಲ್ಲಾ ಮುಂದಿನ ಪುಸ್ತಕೋತ್ಸವದಲ್ಲಿ ಕೊಂಡುಕೋತಿನಿ ಅಂತ ನಿಶ್ಚಯಿಸಿದೆ. ನನಗೆ ಕೆಲವು ವಿಶೇಷ ರೀತಿಯ folders ಬೇಕಿದ್ದವು. ಅದನ್ನು ಕೊಂಡು ಹೊರಗೆ ಹೊರಟೇಬಿಟ್ಟಿದ್ದೆ...

Z : ಆಮೇಲೇನಾಯ್ತು ?

ನಾನು : ನಮ್ಮತ್ತೆ ! ಅವರೆಲ್ಲಿದ್ದಾರೆ ಗೊತ್ತಿರಲಿಲ್ಲ, ಹೊರಡುತ್ತಿದ್ದೇನೆ ಅಂತ ಹೇಳಿ ಹೋಗೋಣ ಅಂತ ಮತ್ತೆ ಒಳಗೆ ತಿರುಗಿದೆ. ಇಸ್ಕಾನ್ ಪುಸ್ತಕ ಮಳಿಗೆಯಲ್ಲಿ ನಮ್ಮತ್ತೆ ಸಿಕ್ಕರು. ನಾನು ಎರಡು ಘಂಟೆಗಳಲ್ಲಿ ಇಡೀ ಪುಸ್ತಕೋತ್ಸವದ ೩೪೬ ಸ್ಟಾಲುಗಳನ್ನು ಸುತ್ತಿದ್ದೆ, ಅವರು ಕೇವಲ ಹತ್ತು ಸ್ಟಾಲು ಮುಗಿಸಿದ್ದರು !

Z : !!!!!!!!!!!!!!!!!!!!!!!!!!!!!!!!!!!!!!

ನಾನು : ಹೂಂ!!! ನನ್ನ ಕಸಿನ್ನು "ಇರು, ನಾವು ಹೊರಡುತ್ತೀವಿ" ಅಂದರು. ಅವರು ನಿಧಾನಕ್ಕೆ ಒಂದೊಂದೇ ಮಳಿಗೆಗೆ ಹೋಗಿ ಇಣುಕುತ್ತಿದ್ದರು, ನಾನು ಮುಂದೆ ನಡೆಯುತ್ತಾ ನನ್ನ ಪುಸ್ತಕಪ್ರೇಮಿ ಮಿತ್ರರಿಗೆಲ್ಲಾ ಫೋನಿಸಿ ಹೊಟ್ಟೆ ಉರಿಸುತ್ತಿದ್ದೆ. ಗಂಟೆ ಎರಡಾಯ್ತು,ಎರಡುವರೆಯಾಯ್ತು, ಇವರು ಹೊರಬರುವ ಲಕ್ಷಣ ಕಾಣಿಸಲಿಲ್ಲ. ನನ್ನ ಬ್ಯಾಗಿನಲ್ಲಿನ ಶ್ಯಾವಿಗೆ ಬಾತಿನ ಕಡೆಗೆ ನನ್ನ ಗಮನವನ್ನು ಹರಿಸದೇ ನನ್ನ ಕೈಯಲ್ಲಿ ಇರಲಾಗುತ್ತಿರಲಿಲ್ಲ. ಕಡೆಗೆ ನನ್ನ ಕಸಿನ್ನು, " ಊಟಕ್ಕೆ ಜಾಗ ಇದೆಯಾ ?" ಅಂತ ಕೇಳಿದಳು. ನಾನು - "ಹೂ...ಕ್ಯಾಂಟೀನ್ ಇದೆ" ಅಂದೆ. ಹೊರಗೆ ಬಂದು ಇವರು ಅಲ್ಲೇ ಸಿಕ್ಕ ತಿಂಡಿ ಕೊಂಡರು, ನಾನು ಶ್ಯಾವಿಗೆ ಬಾತನ್ನು ತಿಂದೆ. ಆಗ ಘಂಟೆ ಮೂರುವರೆ.

Z : ಅಬ್ಬಾ !!

ನಾನು : ಇವರಿಬ್ಬರು, "ನಾವು ಮತ್ತೆ ಒಳಗೆ ಹೋಗುತ್ತೇವೆ" ಅಂದರು. ನಾನು ಹೊರಡುತ್ತೇನೆ ಅಂತ ಹೇಳಿ ಅಲ್ಲಿಂದ ಹೊರಬಿದ್ದೆ.ಡೈರೆಕ್ಟ್ ತೇಜಕ್ಕನ ಮನೆಗೆ ಬಂದು, ಅವರಿಗೆ ಪುಸ್ತಕ ಕೊಟ್ಟು, ಹಾಯಾಗಿ ಕೂತು ಪಟ್ಟಾಂಗ ಹೊಡೆದು, ಅಮ್ಮ ವಹಿಸಿದ ಕೆಲವು ಕೆಲಸ ಮುಗಿಸಿಕೊಂಡು, ನಾನು ಮನೆಯಲ್ಲಿ ಸೆಟಲ್ ಆದಾಗ ಘಂಟೆ ಎಂಟು !

Z : ಉಶ್ಶ್ಶಪ್ಪಆಆಆಆಆಆಆಆಆಆಆಆಆಆಆಆಆಆ !

ನಾನು : ಇದನ್ನ ನಾನು ಹೇಳಬೇಕು.

Z :proxy ಹೊಡೆದೆ.

ನಾನು : ಬೇಕಿರಲಿಲ್ಲ.

Z : ಓಕೆ.

ನಾನು : ಮುಂದಿನ ಬುಕ್ ಫೆಸ್ಟಿವಲ್ ಗೆ ಲಿಸ್ಟ್ ರೆಡಿ ಮಾಡ್ಕೊತಿನಿ. ಹೊರ್ಟೇ.

Z : :) :) :)

Sunday, November 8, 2009

journey to ಜಿಲೇಬಿನಾಡು - ಭಾಗ ೮

ನಾನು : ಜನವರಿ ಒಂದರ ಸುಪ್ರಭಾತ ಒಂಥರಾ ವಿಚಿತ್ರ ರೀತಿಯಲ್ಲಿ ಆಯ್ತು. ನಾನು ಮುಸುಕು ಹೊದ್ದು ಮಲಗಿದ್ದೆ. ಅಪರ್ಣ ನನ್ನ ಭುಜದ ಮೇಲೆ ಆರಾಮಾಗಿ ಸೆಟಲ್ ಆಗಿದ್ದಳು. ಬೆಳಗ್ಗಿನ ಜಾವವೋ, ರಾತ್ರಿಯೋ ಗೊತ್ತಿರಲಿಲ್ಲ, ಬಸ್ಸಂತು ಮುಂದಿರುವ ಕತ್ತಲನ್ನು ಭೇದಿಸಿಕೊಂಡು ಸಾಗುತ್ತಿತ್ತು. ನನಗೆ ಅಚಾನಕ್ಕಾಗಿ ಸೀಟೇ ಅಲ್ಲಾಡಿದ ಅನುಭವ ಆಯ್ತು. ನನ್ನ ಪ್ರಾಣ ಹೊರಟೇ ಹೋಯ್ತು ಅನ್ನೋ ಭಯದಲ್ಲಿ ಕಣ್ಬಿಟ್ಟೆ. ಸುತ್ತ ಕಗ್ಗತ್ತಲು.ಆಮೇಲೇ ಗೊತ್ತಾಗಿದ್ದು. ನನ್ನ ಫೋನು ವೈಬ್ರೇಟ್ ಆಗ್ತಿದೆ, ಅದಕ್ಕೆ ಸೀಟ್ ಅಲ್ಲಾಡುತ್ತಿದೆ ಅಂತ. ಮುಸುಕು ತೆಗೆದು, ಹುಡುಕಾಡಿ, ಫೋನ್ ಕಾಲ್ ಗೆ ಉತ್ತರಿಸಿದೆ. ಅಣ್ಣ ಫೋನಿಸಿದ್ದರು.

ಅಣ್ಣ: ಎಲ್ಲಿದಿರಿ ?

ನಾನು : ಗೊತ್ತಿಲ್ಲ.

ಅಣ್ಣ: ಕಾಲಟಿ ಬಂತಾ ?

ನಾನು: ಇಲ್ಲಾ ಅನ್ಸತ್ತೆ.

ಅಣ್ಣ: ಕಣ್ಬಿಟ್ಟು ಸುತ್ತ ಮುತ್ತ ನೋಡು.

ನಾನು: ಉಹು...ಕತ್ತಲು.

ಅಣ್ಣ: ಮುಸುಕನ್ನು ತೆಗಿ !

ನಾನು: ತೆಗ್ದೆ.....ಆದ್ರು ಕತ್ತಲೆ ಇದೆ.

ಅಣ್ಣ: ಕಾಲಟಿ ತಲುಪಿದ ಮೇಲೆ ಫೋನ್ ಮಾಡು. ಇಲ್ಲಿನ ಬೆಳವಣಿಗೆಗಳ ಬಗ್ಗೆ ನಾವು ಆಮೇಲೆ ಹೇಳ್ತಿವಿ.

ನಾನು: ಅಂಕಲ್ ಸ್ಥಿತಿ ಹೇಗಿದೆ ?

ಅಣ್ಣ: out of danger.

ನಾನು: ಸರಿ.

ಫೋನ್ ಇಟ್ಟ ಮೇಲೆ ನನಗೆ ಎಚ್ಚರ ಆಗಿದ್ದು ಕಾಲಟಿ ಅಂತ ಬುಸ್ ನಾಗ ಕಿರುಚಿ ನಮ್ಮನ್ನು ಎಬ್ಬಿಸಿದ ಮೇಲೆ.ಆಗ ಸಮಯ ೭ ಘಂಟೆ. ಅಣ್ಣ ಫೋನ್ ಮಾಡಿದ್ದು ಐದು ವರೆಗೆ !

Z : ಹೆಹೆಹೆ.

ನಾನು : ಅಲ್ಲಿ ನಾವು ನದಿಯಲ್ಲಿ ಸ್ನಾನ ಮಾಡಬೇಕಿತ್ತು. ಆ ನದಿಯ ಹೆಸರು ಪೂರ್ಣಾ ಅಂತ. ಎಂಥಾ ಶಾಂತ ಹರವು ಅಂದರೆ, ಅದರಿಂದ ಹೊರಗೆ ಬರುವ ಮನಸ್ಸೇ ಬರೋದಿಲ್ಲ. ಆದರೆ ನಮ್ಮ ಸಹಪ್ರಯಾಣಿಕರ ದುರ್ವರ್ತನೆ ಮಾತ್ರ ನನಗೆ ತೀವ್ರ ಬೇಜಾರನ್ನು ಉಂಟು ಮಾಡಿತು.

Z :ಏನಾಯ್ತು.

ನಾನು : ನದಿಯಲ್ಲಿ ಸೋಪು ಹಾಕಿ ಸ್ನಾನ ಮಾಡುವುದು ಎಷ್ಟರಮಟ್ಟಿಗೆ ಸರಿ ? ದಿನಾ ಮನೆಯಲ್ಲಿ ಸ್ನಾನವೇ ಮಾಡದಿರುವವರ ತರಹ ಸೋಪು ಕರಗಿ ಮುಗಿದು ಹೋಗುವ ವರೆಗೂ ಅದನ್ನು ಉಜ್ಜಿ ಉಜ್ಜಿ ನೊರೆ ನೋಡಿ ಸಂತೋಷ ಪಡುವುದು ನೋಡಿದರೆ ನನಗೆ ನಿಜವಾಗಲು ಸಿಟ್ಟು ಬರತ್ತೆ.ನದಿಯ ಹರವೇ ನಮ್ಮ ದೇಹದ ಕೊಳೆಯನ್ನು ಹೋಗಲಾಡಿಸಬಹುದಾಗಿರುವಾಗ ಅದಕ್ಕೆ ಸೋಪಿನ ಅವಶ್ಯಕತೆ ಇದೆಯೇ ? ಜನಕ್ಕೆ ಅಷ್ಟೂ ಪ್ರಜ್ಞೆ ಇರಲ್ವಾ ?

Z : ಒಂದ್ ಪ್ರಶ್ನೆ ಬಿಟ್ಟುಬಿಟ್ಟೆ ನೀನು.

ನಾನು : ಯಾವ್ದು ?

Z : ನಾವೇಕೆ ಹೀಗೆ ?

ನಾನು : :)) ನಾನು ಎಲ್ಲರಿಗಿಂತ ಚಿಕ್ಕವಳು, ಮಾತಾಡಿದರೆ ಅಧಿಕಪ್ರಸಂಗಿ ಅನ್ನಿಸಿಕೊಳ್ಳಬೇಕಾಗತ್ತೆ ಅನ್ನೋ ಒಂದೇ ಒಂದು ಕಾರಣಕ್ಕೆ ಸುಮ್ಮನಿದ್ದೆ. ಸೋಪನ್ನು ತಂದಿದ್ದರೂ ಅದನ್ನು ಉಪಯೋಗಿಸದ ನಾನು ಮತ್ತು ಅಪರ್ಣ exactly ಹತ್ತತ್ತು ಚೊಂಬು ತಲೆಯ ಮೇಲೆ ಸುರಿದು ಕೊಂಡೆವು. ಆಮೇಲೆ ರೆಡಿಯಾಗಿ ನಮ್ಮ ಫೋಟೋ ತೆಗೆಯಲು ಯಾರು ಇರದಿದ್ದುದರಿಂದ ನಾವೆ self timer experiment ಮಾಡಿಕೊಂಡೆವು. ಕಛಡವಾಗಿ ಬಂತು.

Z : naturally.

ನಾನು : ಇರ್ಬಹುದು. ಆದರೂ, ಇರಲಿ ದಾಖಲೆಗೆ ಬೇಕಾಗತ್ತೆ ಅಂತ ಅದನ್ನು ಡಿಲೀಟ್ ಮಾಡದೇ ಹಾಗೆ ಬಿಟ್ಟೆವು. ಅಲ್ಲಿಂದ ತಾಯಿ ಶಾರದಾಂಬೆಯ ದೇವಸ್ಥಾನಕ್ಕೆ ಬಂದೆವು.

Z : ಹೇಗಿದೆ ದೇವಸ್ಥಾನ ?

ನಾನು : ವಿಶಿಷ್ಟವಾಗಿದೆ. ಕಾಲಟಿ ಎಲ್ಲರಿಗೂ ಗೊತ್ತಿರುವಂತೆ ಆಚಾರ್ಯ ಶಂಕರರ ಜನ್ಮಸ್ಥಳ. ತಾಯಿಗೆ ನೀರು ಬೇಕಾದಾಗ ನದಿಯವರೆಗೂ ನಡೆಯುವುದು ತಪ್ಪಲಿ ಎಂದು ಪೂರ್ಣಾ ನದಿಯ ಹರಿವನ್ನು ಮನೆಯ ಕಡೆಗೆ ತಿರುಗಿಸಿದ ಮಹಾತ್ಮರ ಜನ್ಮಭೂಮಿ. ಇಲ್ಲಿ ಕಟ್ಟಿರುವ ಶಾರದಾಂಬೆಯ ದೇವಸ್ಥಾನದಲ್ಲಿ ಒಂದು ವಿಶೇಷ ಇದೆ. ದೇವಸ್ಥಾನದ ಹೊರಗೋಡೆಗಳಲ್ಲಿ ಅಲ್ಲಲ್ಲಿ ಗೂಡುಗಳನ್ನು ಮಾಡಿ ನವದುರ್ಗೆಯರಯರ ಮೂರ್ತಿಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಒಂದೊಂದು ಕೋನದಲ್ಲೂ ಒಂದೊಂದು ದೇವಿಯ ವಿಗ್ರಹವಿದ್ದು, ಮಧ್ಯದಲ್ಲಿ ಶಾರದಾಂಬಾ ವಿಗ್ರಹ ಪ್ರತಿಷ್ಟಾಪಿಸಲ್ಪಟ್ಟಿದೆ. ಹೇಗೆ ಗೊತ್ತಾ ?

Z : ಹೇಗೆ ?

ನಾನು : ನಕ್ಷತ್ರಕ್ಕೆ ಐದು ಕೋನಗಳು ಇರತ್ತೆ. ಹೌದು ತಾನೆ ?

Z : ಹು.

ನಾನು : ಕೋನಗಳಲ್ಲಿ ಮತ್ತು ಅದರ ಮಧ್ಯದಲ್ಲಿರುವ ಸ್ಥಳಗಳಲ್ಲಿ front and back ಶೈಲಿಯಲ್ಲಿ ಈ ದೇವಸ್ಥಾನ ಕಟ್ಟಲಾಗಿದೆ.

Z : ನೈಸ್...

ನಾನು : ಹು. ನಾವು ದೇವಸ್ಥಾನವನ್ನು, ಶಂಕರ ಭಗವತ್ಪಾದರ ತಾಯಿ ಅರ್ಯಾಂಬೆಯವರ ಸಮಾಧಿಯನ್ನು, ಪಚ್ಚೆ ಲಿಂಗವನ್ನು ಮತ್ತು ಶಂಕರರ ಕುಲದೇವರಾದ ಕೃಷ್ಣನ ದೇವಸ್ಥಾನವನ್ನು ನೋಡಿಕೊಂಡು ಗುರುವಾಯೂರಿಗೆ ಪಯಣ ಬೆಳೆಸಿದೆವು. ನಾನು ಅಣ್ಣನಿಗೆ ಫೋನ್ ಮಾಡಿದೆ. ಅಣ್ಣ ಸುಧಾ ಆಂಟಿ ಮತ್ತು ಅಂಕಲ್ ನ ಅವರ ಮಗ ಬೆಂಗಳೂರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿರುವುದಾಗಿಯೂ, ಇವರಿಬ್ಬರೂ ಎರ್ನಾಕುಲಂ ನ ಟ್ರೈನ್ ಹತ್ತಿ, ಆಲ್ವೇ ಎಂಬಲ್ಲಿ ಇಳಿದು ಅಲ್ಲಿಂದ ಕಾಲಟಿಗೆ ಆಟೋದಲ್ಲಿ ಬಂದು, ಕಾಲಟಿಯಿಂದ ಗುರುವಾಯೂರಿಗೆ ಬಸ್ಸಿನಲ್ಲಿ ಬರುವುದಾಗಿ ಹೇಳಿದರು. ಒಟ್ಟಿನಲ್ಲಿ ಅವರು ಜನವರಿ ಒಂದರ ರಾತ್ರಿ ಅವರು ನಮ್ಮೊಂದಿಗೆ ಇರುವುದಾಗಿ ಹೇಳಿದರು. ಅಣ್ಣ ಮೊದಲು ನಾನು ಅಪರ್ಣ ಇಬ್ಬರೇ ಬೆಂಗಳೂರು ಸೇರಬೇಕಾಗಬಹುದೆಂದು ಅನುಮಾನ ಪಟ್ಟಿದ್ದರು. ನಾನೂ ನಿರ್ಭಯವಾಗಿ ಆಗಲಿ ಎಂದಿದ್ದೆ. ಅವರು ನಮ್ಮೊಟ್ಟಿಗೆ ಬಂದು ಸೇರುತ್ತೇವೆ ಎಂದಾಗ ಅದೇಕೋ ಒಂಥರಾ ನಿರಾಳ ಅನಿಸಿತು.

Z : ಹ್ಮ್ಮ್ಮ್......ಅದೊಂಥರಾ ಹಾಗೇನೆ. ಮುಂದೆ ?

ನಾನು : ಕಾಲಟಿಯ ಬುಕ್ ಸ್ಟಾಲಿನಲ್ಲಿ ಬ್ರಹ್ಮ ಸೂತ್ರಕ್ಕೆ ಭಗವತ್ಪಾದರ ಭಾಷ್ಯದ ಸಂಸ್ಕೃತ ಪಠ್ಯ ಮತ್ತು ಅದಕ್ಕೆ ಆಂಗ್ಲ ಅನುವಾದ ತೆಗೆದುಕೊಂಡ ಮೇಲೆನೇ ನನಗೆ ಜನವರಿ ಒಂದು ಸಾರ್ಥಕ ಆಯ್ತು ಅನ್ಸಿದ್ದು.

Z : ಅಲ್ವೇ ಮತ್ತೆ ? ಹೋದ ಕಡೆ ಎಲ್ಲ ನಿನ್ನ ಪುಸ್ತಕದ ಅಂಗಡಿಯ ಕಡೆ ಮುಖ ಹಾಕಿಸದೇ ಇರ್ಬೇಕಾದ್ರೆ ನಿನಗೆ ಹೆಂಗನಿಸಿರಬೇಡ.

ನಾನು : ಹೂಂ. ಅಪರ್ಣ ಗೊಣಗಿದಳು -"ದುಡ್ಡಿಟ್ಟುಕೋ" ಅಂತ.

ನಾನಂದೆ - "ಸಾಕಷ್ಟಿದೆ, ಹೆದರಬೇಡ."

ಅವಳು - " ಈ ಜನ್ಮದಲ್ಲಿ ನೀನು ಉದ್ಧಾರ ಆಗಲ್ಲ " ಅನ್ನೋ ಲುಕ್ ಕೊಟ್ಟಳು. ನಾನದನ್ನು ವಾಪಸ್ return ಮಾಡಿದೆ.

Z : :)

ನಾನು : ಗುರುವಾಯೂರಿಗೆ ಹೊರಟಾಗ ದಾರಿಯಲ್ಲಿ ಸಿಕ್ಕ ಚಿನ್ನದ ಅಂಗಡಿಗಳ ಕಡೆ ನಾನು ಅಪರ್ಣ ಬಹಳ ಗಮನ ಹರಿಸಿ ನೋಡಿದೆವು. ಪ್ರತಿಯೊಂದು ಹೋರ್ಡಿಂಗಿನ ಮೇಲಿರುವ ಪ್ರತಿಯೊಂದು ಆಭರಣದ pattern ಗೆ ಧಾರಾಳವಾಗಿ ಕಮೆಂಟ್ಸ್ ಕೊಟ್ಟೆವು.

Z : ರಿಯಾಲಿಟಿ ಶೋ ಜಡ್ಜ್ ಥರ.

ನಾನು : ಹು.ಗುರುವಾಯೂರನ್ನು ತಲುಪಿದ್ದು ಸಾಯಂಕಾಲ. ಲಾಡ್ಜಿನಲ್ಲಿ ನಾನು ಅಪರ್ಣ ಒಂದು ರೂಮಲ್ಲಿದ್ದು, ಅಣ್ಣ ಅಮ್ಮನಿಗೆ ನಮ್ಮ ಪಕ್ಕಕ್ಕೇ ರೂಮೊಂದು ಇರಲಿ ಎಂದು ಕೊಡಿಸಿಕೊಂಡು, ಲಗೇಜೆಲ್ಲಾ ನಮ್ಮ ರೂಮಿನಲ್ಲೇ ಇಟ್ಟು, ಮೊಬೈಲುಗಳನ್ನು ಚಾರ್ಜಿಗೆ ಹಾಕಿ ಸ್ವಲ್ಪ ಹೊತ್ತು ಸುಧಾರಿಸಿಕೊಂಡೆವು. ಅಪರ್ಣಾ ನಿದ್ದೆ ಹೊಡೆದಳು, ನಾನು ಎಸ್. ಎಲ್. ಭೈರಪ್ಪ ಅವರ ಧರ್ಮಶ್ರೀ ಓದಲು ಪ್ರಾರಂಭಿಸಿದ್ದೆ ಬಸ್ಸಿನಲ್ಲಿ, ಅದನ್ನ ಮುಂದುವರೆಸಿದೆ. ಕಾಫಿ ಕುಡಿದು ಎಲ್ಲರೂ ಗುರುವಾಯೂರಪ್ಪನ ದರ್ಶನಕ್ಕೆ ಹೊರಟೆವು. ಸಿಕ್ಕಾಪಟ್ಟೆ ದೊಡ್ಡ ಕ್ಯೂ !!!

Z : ಒಹ್ಹೋ...

ನಾನು : ಎರಡು ಘಂಟೆಕಾಲ ನಿಂತಮೇಲೆ ನಮಗೆ ಕಡೆಗೂ ಗುರುವಾಯೂರಪ್ಪನ ದರ್ಶನವಾಯ್ತು. ಗುರು ಬೃಹಸ್ಪತಿ ಮತ್ತು ವಾಯು ದೇವ ಇಬ್ಬರೂ ಸ್ಥಾಪಿಸಿದ ಈ ಮಹಾವಿಷ್ಣುವಿನ ಮೂರ್ತಿಗೆ ಗುರುವಾಯೂರಪ್ಪ ಎಂದು ಹೆಸರು. ಇದು ದ್ವಾಪರ ಯುಗದಲ್ಲಿ ಸ್ವಯಂ ಶ್ರೀಕೃಷ್ಣನೇ ಪೂಜೆ ಮಾಡಿದ ಮಹಾವಿಷ್ಣುವಿನ ಮೂರ್ತಿಯಂತೆ.

Z : ಹೌದಾ ?

ನಾನು : ಹು. ಕೃಷ್ಣ ಪರಮಾತ್ಮ ತನ್ನ ಪರಮಾಪ್ತ ಶಿಷ್ಯ ಉದ್ಧವನಿಗೆ ಈ ಮೂರ್ತಿಯನ್ನು ಕಾಪಾಡಲು ಹೇಳಿದ್ದನಂತೆ. ದ್ವಾರಕೆ ಮುಳುಗಿದಾಗ ಅದು ನೀರಲ್ಲಿ ತೇಲುತ್ತಿದ್ದು ಇದು ದೇವಗುರು ಬೃಹಸ್ಪತಿಗೆ ಕಂಡು, ಅವರು ಮತ್ತು ಅವರ ಶಿಷ್ಯ ವಾಯುದೇವ ಇದನ್ನು ಕಂಡು, ಭರತ ಖಂಡದಲ್ಲೆಲ್ಲಾ ಸುತ್ತಾಡಿ, ಕಡೆಗೆ ತಾವರೆ ತುಂಬಿದ ಕೆರೆಯಿದ್ದ ಈಗಿನ ಗುರುವಾಯೂರಿನಲ್ಲಿ ಪ್ರತಿಷ್ಟಾಪಿಸಿದರಂತೆ ಮೂರ್ತಿ ನ.

Z : I see.

ನಾನು : ಹು. ಅದಾದ ಮೇಲೆ ಶಾಪಿಂಗ್ ಹೊರಟೆವು.

Z : ಇನ್ನೇನ್ ಕೆಲ್ಸ.

ನಾನು : ಅಲ್ವಾ ಮತ್ತೆ. ನಾನು ಅಮ್ಮಂಗೆ ಅಂತ ತಾಳಗಳನ್ನ ತಗೊಂಡೆ. ಯಾತ್ರೆಗೆ ಹೋದರೆ ಪಾತ್ರೆ ತಗೋಬೇಕು ಅಂತ ಗಾದೆಯಿದೆ ಆದ್ದರಿಂದ ನಾನೊಂದು ರೈಲ್ಚೊಂಬು ನೋಡಿದ್ದೆ. ತಗೊಳ್ಳೋಣ ಅಂತ ನನಗೆ ಅಪರ್ಣಂಗೆ ಇಬ್ಬರಿಗೂ ಆಸೆಯಾಯ್ತು. ಆದರೆ ದುಡ್ಡು ಶಾರ್ಟೇಜ್ ಆಗೋಯ್ತು. ವಾಪಸ್ ಬಂದ್ವಿ

Z : :(

ನಾನು : ಅಲ್ಲಿ ಒಂದು ಕಡೆ ಲಿಂಬೂ ಸೋಡಾ ಕುಡಿದು ವಾಪಸ್ ಬಂದಮೇಲೆ ಅಣ್ಣ ಅಮ್ಮ ಆಟೋ ಲಿ ಬಂದಿಳಿದರು. ಮತ್ತೆ ಅವರ ಜೊತೆ ದೇವಸ್ಥಾನಕ್ಕೆ ಹೋಗೋ ಅಷ್ಟೊತ್ತಿಗೆ ದೇವಸ್ಥಾನ ಬಾಗಿಲು ಹಾಕಿತ್ತು. ರೈಲ್ ಚೊಂಬು ಕೊಡ್ಸಿ ಅಂತ ಕೇಳಿ, ಇವ್ರು ಕೊಡ್ಸಲ್ಲ ಅಂದು, ನಾನು ಸಪ್ಪೆ ಮುಖ ಹಾಕೊಂಡು ವಾಪಸ್ ಲಾಡ್ಜಿಗೆ ಬರೋ ಅಷ್ಟೊತ್ತಿಗೆ ಹತ್ತು ಘಂಟೆ. ನಾನು ಯಥಾ ಪ್ರಕಾರ ನನ್ನ ಮೊಸರನ್ನ ವ್ರತ ಮಾಡಿದೆ. ಮಾರನೆಯ ದಿನ ನಾವಿನ್ನು ಮತ್ತೆ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಬೇಕಿತ್ತು.

Z : ಆಹಾ ! ಇಷ್ಟು ಬೇಗ !

ನಾನು : ಹು ! ಮಾರನೆಯ ದಿನ ನಾವು ನಮ್ಮ ಲಗೇಜುಗಳನ್ನು ಎಣೆಸಿಕೊಳ್ಳುತ್ತಿದ್ದೆವು. ನಮ್ಮದು ಸುಧಾ ಆಂಟಿ ದು ಇಬ್ಬರದ್ದು ಸೇರಿ ಒಟ್ಟು ಮೂವತ್ತು ಬ್ಯಾಗ್ ಗಳು !!

Z : ಯಪ್ಪಾ !!!!!!!!!!!!

ನಾನು : ಹು! ಅಣ್ಣ ಸರಿಯಾಗಿ ಬೈದ್ರು. ಇಡೀ ಸೌತ್ ಇಂಡಿಯಾ ನೇ ಹೊತ್ಕೊಂಡ್ ಬಂದಿದಿರ ಅಂತ.

Z : ಇನ್ನೇನ್ ಮತ್ತೆ !

ನಾನು : :( ಗುರುವಾಯೂರಿಂದ ಹೊರಟು ಕಾಲಿಕಟ್ ಘಾಟ್ ಹತ್ತಿ, ಗುಂಡ್ಲುಪೇಟೆನಲ್ಲಿ ಕನ್ನಡ ಫಲಕ ಓದಿದ ತಕ್ಷಣ ನನಗಾದ ಆನಂದಕ್ಕೆ ಮಿತಿಯೇ ಇರಲಿಲ್ಲ. ಅಪರ್ಣಾ " ಸಮಾಧಾನ ಸಮಾಧಾನ ! " ಅಂದರೂ ಕಿಟಕಿಯಿಂದ ತಲೆ ಹೊರಗೆ ಹಾಕಿ ಯೇ ಅಂತ ಕಿರುಚಿದೆ.

Z : ಆಹ !

ನಾನು : ಹು. ಇಷ್ಟು ದಿನ ಬರೀ ಜಿಲೇಬಿ ನೋಡಿ ನೋಡಿ ಸಾಕಾಗೋಗಿತ್ತು. ಕನ್ನಡ ಕಂಡೇನಾ ಅನ್ಸಿತ್ತು. ನಂಜನಗೂಡು ಮತ್ತು ಶ್ರೀರಂಗಪಟ್ಟಣ ನೋಡಿಕೊಂಡು ಬೆಂಗಳೂರಿಗೆ ಬಂದು ಮನೆಗೆ ತಲುಪಿದಾಗ ರಾತ್ರಿ ಹನ್ನೊಂದು. ಘಾಟ್ ಸೆಕ್ಷನ್ ನಲ್ಲಿ ಧರ್ಮಶ್ರೀ ನಾವೆಲ್ಲು ಓದಿ, ಬೆಂಗಳೂರು ತಲುಪುವ ಮುಂಚೆಯೇ ಮುಗಿಸಿದ್ದಕ್ಕೆ ನನಗೆ " ಗಟ್ಟಿಗಿತ್ತಿ" ಅನ್ನೋ ಬಿರುದು ಬಂತು. ಬಸ್ಸಿನಲ್ಲಿ ನಾವೆಲ್ಲರು ಒಂದೇ ಮನೆಯವರ ತರಹ ಆಗೋಗಿದ್ದೆವು. ಬೀಳ್ಕೊಡುವಾಗ ಎಲ್ಲರ ಕಣ್ಣಂಚಲ್ಲೂ ನೀರು. ಧರ್ಮಶ್ರೀ ಕಾದಂಬರಿ ಓದಲು ಕೊಟ್ಟ ನಾಗಾಭರಣ, ಸದಾ ಜೋಕ್ ಮಾಡುತ್ತಿದ್ದ ಪ್ರಸಾದ್ ಅಂಕಲ್, ಸದಾ ಆಟ ಅಡಿಕೊಂಡಿದ್ದ ಲೋಹಿತ್ ಮತ್ತು ಚಂದನ, ಎಲ್ಲರೂ ಈಗಲೂ ನೆನಪಾಗ್ತಾರೆ.


Left- driver, right-bus naga.

Z : ಅಂತು ಮುಗಿತು ಟ್ರಿಪ್ಪು.

ನಾನು : ಹು ! ಮಾರನೆಯ ದಿನ ಯಾರೂ ಎಬ್ಬಿಸದೇ ಮೂರುವರೆಗೆ ಎದ್ದೆ ನಾನು ! ನೋಡಿದರೆ ಎಲ್ಲರೂ ಸುಸ್ತಾಗಿ ಮಲಗಿದ್ದರು. ಆಮೇಲೇ ನೆನಪಾದದ್ದು ನನಗೆ, ನಾವು ಬೆಂಗಳೂರಿನಲ್ಲಿದ್ದೇವೆ ಅಂತ !

Z : ಎಹೆಹೆಹೆಹೆ !!!

ನಾನು : ನನಗಂತೂ ಈ ಊರುಗಳಿಗೆ ಮತ್ತೊಮ್ಮೆ ಹೋಗಬೇಕು ಅನ್ನಿಸಿದೆ. ತಿರುವಣ್ಣಾಮಲೈ ನ ರಮಣಮಹರ್ಷಿ ಬೆಟ್ಟದ ಹದಿನಾಲ್ಕು ಕಿಲೋಮೀಟರ್ ಪ್ರದಕ್ಷಿಣೆ ಹಾಕಿಲ್ಲ, ಚಿದಂಬರ ರಹಸ್ಯ ಭೇದಿಸಿಲ್ಲ, ಸಾರಂಗಪಾಣಿಯ ತಲೆಯ ಮೇಲಿನ ಆದಿಶೇಷನನ್ನ ಸರಿಯಾಗಿ ನೋಡಿಲ್ಲ, ಆದಿಕುಂಭೇಶ್ವರ ದೇವಸ್ಥಾನದಲ್ಲಿ ಲಿಂಗದ ಮೇಲಿನ ಪಾಟ್ ನ ಇನ್ನೊಂದ್ ಸರ್ತಿ ನೋಡ್ಬೇಕು, ತಿರುನಲ್ಲಾರಿನಲ್ಲಿ ಶನಿ ಮಹಾತ್ಮನ ಹತ್ತಿರ ಸ್ವಲ್ಪ ಕಷ್ಟ ಸುಖ ಮಾತಾಡ್ಬೇಕು, ಶ್ರೀರಂಗನಾಥನನ್ನ detail ಆಗಿ ನೋಡ್ಬೇಕು, ಕಾಲಟಿಯಲ್ಲಿ ಧ್ಯಾನ ಮಾಡಬೇಕು, ಗುರುವಾಯೂರಪ್ಪನನ್ನೂ detail ಆಗಿ ನೋಡ್ಬೇಕು. not to forget, ಸುಂದರೇಶ್ವರನ ಸನ್ನಿಧಿಯಲ್ಲಿ ಕಣ್ಣು ಮಿಟುಕಿಸದೇ ಒಂದೆರಡು ಮೂರು ಘಂಟೆಕಾಲ ಲಿಂಗವನ್ನೇ ನೋಡುತ್ತಿರಬೇಕು !

Z : ಅಷ್ಟೇನ ಅಥ್ವಾ ಇನ್ನು ಇದಿಯಾ ?

ನಾನು :ಇದೆ.

Z : ಮುಂದುವರೆಸು.

ನಾನು : ಕನ್ಯಾಕುಮಾರಿಯಲ್ಲಿ ಸನ್ ರೈಸ್ ನೋಡ್ಬೇಕು.

Z :ಮತ್ತೆ ಟ್ರಿಪ್ಪಾ ಹಾಗಾದ್ರೆ ?

ನಾನು : ಯೆಸ್. ಯಾವಾಗ ಅಂತ ಗೊತ್ತಿಲ್ಲ. ನಾನಂತೂ ಹೇಳ್ಬಿಟ್ಟಿದಿನಿ. ಈ ಸರ್ತಿ ಒಂದು ಬಾಡಿಗೆ ಇನ್ನೋವಾ ಲಿ ಹೊಗೋದು, ನಾವೇ ಡ್ರೈವ್ ಮಾಡ್ಕೊಳ್ಳೋದು, ಅವಲಕ್ಕಿ ಮೊಸರು ತಿನ್ನೋದು, ದೇವರ ದರ್ಶನ ಮತ್ತೆ ಫೋಟೋಗ್ರಫಿಯನ್ನ ಮನಃಪೂರ್ತಿ ಮಾಡೋದು ಅಂತ.

Z : ಅಣ್ಣ ಏನಂದ್ರು ?

ನಾನು :ಗೋಣಲ್ಲಾಡಿಸಿದರು as usual. But he knows, ಅದು ಸುಲಭ ಅಲ್ಲ ಅಂತ ! ನನಗೂ ಗೊತ್ತು. ಆದರೂ, I want to go back to these places again !

Z : :) :) ಇನ್ನು ಬೇಜಾನ್ ಟೈಂ ಇದೆ ಜೀವನದಲ್ಲಿ, ಹೋಗ್ತೀಯಂತೆ.

ನಾನು :ಯೆಸ್. ಹೋಗ್ತಿನಿ ಮತ್ತೆ. ಇದರೊಂದಿಗೆ ನನ್ನ ದೊಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ ಪ್ರವಾಸ ಪುರಾಣ ನ ಮುಗಿಸುತ್ತಿದ್ದೇನೆ.

ಅಥ ಜಲೇಬಿನಾಡು ಪುರಾಣಂ ಸಂಪೂರ್ಣಂ !
*************************************************************

ಕೆಲವು ಮುಖ್ಯವಾದ ಡೈಲಾಗುಗಳು-

"ಲಗೇಜುಗಳು ಮರಿ ಹಾಕ್ತಿವೆ !"-ಪ್ರಸಾದ್ ಅಂಕಲ್

" ಮರ್ನೆ ಕೆ ಟೈಂ ಮೆ ಪಡ್ನೇ ಕೋ ಗಯಾ !"- ಅರ್ಧ ರಾತ್ರಿಲಿ ಲೈಟ್ ಹಾಕಿದ್ದರು, ನಾನು ಪ್ರಸಾದ್ ಅಂಕಲ್ ಗೆ - " ನೋಡಿ ಅಂಕಲ್, ಇದೇ ಸೂರ್ಯ ಅಂದುಕೊಂಡು ಸನ್ ರೈಸ್ ನೋಡ್ಬಿಡೀ ಅಂದಾಗ ಹೇಳಿದ್ದು.

" ಪತ್ರ ಬರೆಯಲಾ ಇಲ್ಲಾ ಪಾತ್ರೆ ತೊಳೆಯಲಾ ಹಾಡು ಇದೆಯಲ್ಲಾ ಸಾರ್...."----ಅಣ್ಣ ಅನಂತ್ ಅಂಕಲ್ ಗೆ ಹೇಳಿದ್ದು- with reference to the current generation songs.(he has combined 3 songs in this ! ನಾನು ಅಪರ್ಣಾ ನಕ್ಕು ನಕ್ಕು ಸುಸ್ತು ! )

ಚಿತ್ರಗಳ ಸ್ಲೈಡ್ ಶೋ.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...