Monday, January 26, 2009

ಯೆಸ್ ! ಯೆಸ್ ! ಯೆಸ್ !! ಸೂರ್ಯಗ್ರಹಣ ನೋಡಿದೆ !

Z : ಆಹಾ ? ನೋಡೇಬಿಟ್ಯಾ ?

ನಾನು : ಯೆಸ್. ಕಡೆಗೂ ನೋಡೇಬಿಟ್ಟೆ.

Z :congratulations !

ನಾನು :thank you thank you.

Z : ಅಮ್ಮ ಅಣ್ಣ ಏನೂ ಅನ್ನಲಿಲ್ವಾ ?

ನಾನು :ಹೆಹೆ...ಅವ್ರೂ ಬಂದು ನೋಡಿದ್ರು.

Z : what ?

ನಾನು :ಹೂಂ...ನನ್ನ ನಂಬು !

Z : ಏನ್ ಈ ಸರ್ತಿ ಬಂದು ನೋಡೇಬಿಟ್ಟರಲ್ಲಾ?

ನಾನು :ಈ ಸರ್ತಿ ನಮ್ಮ ಯಾವ ರಾಶಿಗೂ ಗ್ರಹಣ ಹಿಡಿದಿರಲಿಲ್ಲ :) :):)

Z : ಹೆಹೆಹೀ....

ನಾನು : ಅಣ್ಣ ಕಡೇಲಿ ಬಂದ್ರು...ಅಮ್ಮ ಮಧ್ಯದಲ್ಲಿ ಬಂದು ನೋಡಿ..."ವಾಆಆಆಅಹ್ !! " ಅಂದ್ರು , ಅಪರ್ಣ ಗ್ರಹಣದ ಎಲ್ಲಾ ಸ್ಟೇಜುಗಳ ವೀಕ್ಷಣೆಗೆ ನಾನು ಕರೆದಾಗ ಉಪಸ್ಥಿತಳಾಗುತ್ತಿದ್ದಳು.ಯಾಕಂದ್ರೆ ಅವಳು ಡಾಕ್ಯುಮೆಂಟರಿ ಚಿತ್ರವೊಂದನ್ನು ನೋಡುತ್ತಿದ್ದಳು.

ನಾನಂತೂ ಹಠ ಹಿಡಿದಿದ್ದೆ. ಈ ಸರ್ತಿ ಏನಾದ್ರೂ ಸರಿ, ನಾನು ಪ್ಲಾನೆಟೇರಿಯಂ ಗೆ ಹೋಗಿ ಗ್ರಹಣ ನೋಡೋದೇ ಅಂತ. ಅಮ್ಮ ಮಾತ್ರ "ರಷ್ ಸಿಕ್ಕಾಪಟ್ಟೆ ಇರತ್ತೆ...ಇವತ್ತು ಮೋಡ ಇಲ್ಲ,ಇಲ್ಲೇ ನೋಡು, ಬೇಡಾ ಅನ್ನಲ್ಲ" ಅಂದರು. ಅದೂ ಸರಿ ಅನ್ನಿಸಿ ನಾನೂ ಹೂ ಅಂದು, ಕ್ಯಾಮೆರಾ ರೆಡಿ ಮಾಡಿಕೊಂಡೆ.

Z : ಹೋ...ತಾರಾಲಯದ ಕಡೆ ಸವಾರಿ ಮಾಡ್ಬೇಕೂ ಅಂತ ಇದ್ರಾ ತಾವು ?

ನಾನು : ಯೆಸ್.ಆಮೇಲೆ destination ಮನೆ ಅಂತಾ ನೇ ಡಿಸೈಡ್ ಮಾಡಿದೆ.

Z : ಗ್ರಹಣ ಶುರುವಾದಾಗ ಹೇಗಿತ್ತು ವಾತಾವರಣ ?

ನಾನು : Roadನಲ್ಲಿ ನನ್ನ ಬಿಟ್ಟು ಇನ್ಯಾವ ನರಪಿಳ್ಳೆ ನೂ ಇರಲಿಲ್ಲ. ಗ್ರಹಣ ಶುರುವಾದ ಎರಡು ನಿಮಿಷಕ್ಕೆ ಎರಡು ಬೈಕುಗಳಲ್ಲಿ ಇಬ್ಬರು ಹುಡುಗರು ನಮ್ಮ ರೋಡು ಗಸ್ತು ಹೊಡೆದರು. ನನಗೆ ಯಾಕೋ "ಚಿದಂಬರ ರಹಸ್ಯ" ಕಾದಂಬರಿಯ ಕ್ರಾಂತಿಕಾರಿ ಹುಡುಗರು ನೆನಪಾದರು.ಪ್ರಾಣಿ ಪಕ್ಷಿಗಗಳ behaviour ಸೂಕ್ಷ್ಮವಾಗಿ ಗಮನಿಸಿದೆ...looked normal.ಮನುಷ್ಯರು ಬಾಗಿಲು ಬಡಚಿಕೊಂಡು ಕೂತಿದ್ದರು ಬಿಟ್ಟರೆ, nature was just as normal as any afternoon.

Z :ಆಮೇಲೆ ?

ನಾನು : ನಾನು ಗ್ರಹಣದ ಪ್ರತಿಕ್ಷಣವನ್ನು ಆಸ್ವಾದಿಸುತ್ತಾ, ಫೋಟೋ ತೆಗೆಯಲು ಸೂಕ್ತ ಘಟ್ಟಗಳನ್ನು ಕಾಯುತ್ತಾಯಿದ್ದೆ..ನನಗೆ ಗ್ರಹಣ ಎಷ್ಟು ರೋಚಕ ಅನ್ನಿಸ್ತಪ್ಪಾ ಅಂದ್ರೆ...ಕಣ್ಣ ಮೇಲೆ X-ray film ಇಟ್ಟವಳು ಕೆಳಗಿಳಿಸಲೇ ಇಲ್ಲ !

Z : ಮತ್ತೆ ಫೋಟೋ ಹೇಗೆ ತೆಗೆದೆ ?

ನಾನು : ಫಿಲ್ಮ್ ಎಡಗೈಲಿ, ಬಲಗೈಲಿ ಕ್ಯಾಮೆರಾ...ಫಿಲ್ಮ್ ನಲ್ಲಿ ಕಾಣುತ್ತಿರುವ ಸೂರ್ಯನ ಲೆನ್ಸ್ ನಲ್ಲಿ ನೋಡಿ ಕ್ಲಿಕ್ಕಿಸುತ್ತಾ ಹೋದೆ. ಕೆಲವು shake ಆಗೋದ್ವು :( ಚೆನ್ನಾಗಿ ಬಂದಿದ್ದನ್ನ ಮಾತ್ರ upload ಮಾಡಿದಿನಿ. ನನಗೆ ವರ್ಷಾನುಗಟ್ಟಲೆಯಿಂದ ಆಸೆ ಇತ್ತು...ಸೂರ್ಯಗ್ರಹಣ ನೊಡ್ಬೇಕು, ಮತ್ತದರ ಫೊಟೊ ತೆಗೆಬೇಕು ಅಂತ..ನೆರವೇರ್ತು ಅದು ಇವತ್ತು. ಎಲ್ಲಿಲ್ಲದಷ್ಟು ಸಂತೋಷ ಆಗ್ತಿದೆ ನನಗೆ !

Z :ಪಡು...ಎಷ್ಟ್ ಸಂತೋಷ ಪಡ್ತಿಯೋ ಪಡು.

ನಾನು : thanks. ಕಳೆದ ವರ್ಷ ಆಗಸ್ಟ್ ಒಂದರಂದು ನಡೆದ ಸೂರ್ಯ ಗ್ರಹಣದಲ್ಲಿ ಆದ ಅವಾಂತರವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಆಮೇಲೆ, ಗ್ರಹಣ ನೋಡಲು ಮಿಸ್ಸ್ ಮಾಡಿಕೊಂಡವರು ಬೇಜಾರ್ ಮಾಡ್ಕೋಬೇಡಿ...ಇಲ್ಲಿದೆ ಫೋಟೋಸ್..ನೋಡ್ಬಿಡಿ :-)

Friday, January 23, 2009

Team work by Chaaya and shaarvari

Z :ನೀನು ರಾಜಕಾರಿಣಿ ಆಗೋದೆ ಅಂತ ಅಂದುಕೊಂಡುಬಿಟ್ಟಿದ್ದೆ ನಾನು...

ನಾನು : ಇಲ್ಲ...ನಾನು ಹೇಳಲಿಲ್ಲವಾ ? ನಾನು ಮಹಾನ್ ಸತ್ಯವಂತೆ ಮತ್ತು ಸಕತ್ ಒಳ್ಳೆಯವಳು.Most importantly, ಮಾತಿಗೆ ತಪ್ಪದವಳು.

Z : I see.

ನಾನು : ನೋಡು. ಛಾಯ ತೆಗೆದ ಫೋಟೋಸ್ ನ ಮತ್ತು ನಮ್ಮನೆ ಎದುರುಮನೆಯ ಶ್ರೀಮತಿ ನಂದಿನಿ ಪ್ರದೀಪ್ ಅವರು ತೆಗೆದ ಫೋಟೋಸ್ , ಒಟ್ಟು (139+126) ಫೋಟೋಸ್ ನ ನಿನಗೆ ತೋರ್ಸಕ್ಕೆ ಪಾಪ ಶಾರ್ವರಿ ರಾತ್ರಿ ಹಗಲೆನ್ನದೇ ಕಷ್ಟ ಪಟ್ಟು ನೀಟಾಗಿ upload ಮಾಡಿದ್ದಾಳೆ. ನೋಡು...ನಾನ್ ಹೇಳಿದ್ನಲ್ಲ...ಇನ್ನೆರಡು ದಿನ ಅಂತ...ಹಾಕ್ತಿದಿನಿ ಸ್ಲೈಡ್ ಷೋ...ನೋಡ್ಬಿಡು.

Z : ಓಕೆ.

ಓದುಗರೇ...ನೀವೂ ನೋಡ್ಬಿಡಿ.

ಈ ಅಲ್ಬಮ್ ನಲ್ಲಿ ನಾನು ತೆಗೆದ ಫೋಟೋಸ್:





ಮತ್ತೆ ಈ ಅಲ್ಬಮ್ ನಲ್ಲಿ ನಂದಿನಿ ಅವರು ತೆಗೆದ ಫೋಟೋಸ್:


Thursday, January 22, 2009

ಹೀಗೊಂದು ಅರ್ಥಪೂರ್ಣ ಸಂಜೆ

Z : ಅರ್ಥ ಯಾರು and ಪೂರ್ಣ ಎಲ್ಲಿದೆ?

ನಾನು :ಅಯ್ಯೋ...ಅದು ಒಂದೇ ಪದ ಕಣೇ...meaningful ಅಂತ ಅರ್ಥ.

Z : ಓಹ್ ಹಾಗೆ... ಸಂಜೆಗೂ ಅರ್ಥ ಇರತ್ತಾ ? " ಈ ಸಂಜೆ ಯಾಕಾಗಿದೆ ?" ಅಂತ ಬರೀ ಪ್ರಶ್ನೆಗಳನ್ನೇ ಕೇಳ್ಕೋಂಡ್ ಬಂದಿದಿನಿ ಇಷ್ಟ್ ವರ್ಷ.

ನಾನು :ಅರ್ಥ of ಸಂಜೆ depends on the mindset and temperament of the person.

Z : ಹ್ಹ್ಮ್ಮ್ಮ್......ತಮಗೆ ಯಾವ್ ರೀತಿಯಲ್ಲಿ ಅರ್ಥಪೂರ್ಣ ಅನ್ನಿಸಿತು ?

ನಾನು : ಜನವರಿ ೧೨ ನೇ ತಾರೀಖು "ಯುವ ದಿನ". ಆವತ್ತಿನ ಸಂಜೆ ಅರ್ಥಪೂರ್ಣ ಅನ್ನಿಸಿತು.

Z : ಹೋದ ಸೋಮವಾರ ನಡೆದಿದ್ದರ ಬಗ್ಗೆ ಇವತ್ತು ಹೇಳ್ತಿದ್ದೀಯಾ ?

ನಾನು : ಇವತ್ತಾದ್ರೂ ಹೇಳ್ತಿದಿನಲ್ಲ...ಅದಕ್ಕೆ ಖುಷಿ ಪಡು.

Z : ಕರ್ಮಕಾಂಡ ! ಹೋಗ್ಲಿ ಕಥೆ ಶುರು ಮಾಡು.

ನಾನು : ಹಿಂದಿನ ದಿನ ನಮ್ಮನೆಲಿ ನಡೆದ ಬನಶಂಕರಿ ಹಬ್ಬದ ಸುಸ್ತು ಇನ್ನೂ ಪರಿಹಾರ ನೂ ಆಗಿರ್ಲಿಲ್ಲ...ಅಪರ್ಣನಿಗೆ ಸಿಕ್ಕಾಪಟ್ಟೆ ಜ್ವರ ಬಂದು ಬೆಳಿಗ್ಗೆ ಎದ್ದವಳೇ ಡಾಕ್ಟರ್ ಹತ್ರ ಕರ್ಕೊಂಡ್ ಓಡಿ ಹೋದೆ. ಆಮೇಲೆ ಅವಳನ್ನ ಮನೆಗೆ ಕರ್ಕೊಂಡ್ ಬಂದು ಔಷಧಿ ಕೊಟ್ಟು ಬ್ಲಾಗನ್ನು ಕುಟ್ಟಲು ಕೂತೆ...ಶಾರದ ಅತ್ತೆ [ನನ್ನ ಸೋದರತ್ತೆ] ಇಂದ ಮೆಸೇಜು..."I have brought Aurobindo ghosh's book savitri for you. Are you free this evening ?" ಅಂತ. ಅಮ್ಮ ಹೊರಗೆ ಹೋಗಿದ್ದರು. ಅವರು ಬರುವವರೆಗೂ ನಾನು ಬ್ಯುಸಿ.ನಾನು "ಇಲ್ಲ" ಅಂತ ಟೈಪ್ ಮಾಡೋ ಟೈಂ ಗೆ ಸರಿಯಾಗಿ ಅಮ್ಮ ಬಲಗಾಲಿಟ್ಟರು. "ಇಲ್ಲ" ನ "ಹೌದು" ಮಾಡಿ ಕಳಿಸಿದೆ. ಠಕ್ ಅಂತ ಆಕಡೆ ಇಂದ "There is a lecture on Life and works of Aurobindo Ghosh in Gokhale Institute today. Come there at 6.15. Dont miss it ! "ಅಂತ ಮೆಸೇಜು. ನಾನು ಮನೆ ಪರಿಸ್ಥಿತಿ ಹತೋಟಿಗೆ ಬಂದ ಮೇಲೆ "ಓಕೆ" ಅಂದೆ. ಆರುಕಾಲಿಗೆ ಕರೆಕ್ಟಾಗಿ ಅತ್ತೆ ಮನೆಗೆ ಪಾದಾರ್ಪಣೆ ಮಾಡಿದೆ. ಅಲ್ಲಿಂದ ಗೋಖಲೆ ಸಂಸ್ಥೆಗೆ ಒಂದೇ ನಿಮಿಷದ ನಡಿಗೆ. ಆರೂ ಹದಿನಾರಕ್ಕೆ ನಾವು ಅಲ್ಲಿದ್ದೆವು.

Z : ಹೇಗಿದೆ ಸಭಾಂಗಣ ? It was under renovation ಅಲ್ವಾ ?

ನಾನು : ಹೂಂ...It has been very beautifully and thoughtfully renovated. Acoustically better than many auditoria [but cant excel IISc :)] ಮೈಕು ಕುಯ್ಯ್ಯ್ಯ್ಯ್ಯ್ಯ್ಯ್....ಅನ್ನಲ್ಲ. ಹೊರಗಿನ ಶಬ್ದ ಕೇಳ್ಸಲ್ಲ. Echo ಕಮ್ಮಿ ಮಾಡೋಕೆ ಒಳ್ಳೇ measures ತಗೊಂಡಿದಾರೆ. As a physicist, I found the auditorium nice and proper.

Z : From the point of view of ದೇಶಭಕ್ತಿ ?

ನಾನು : ಅಯ್ಯೋ...ಸೂಪರ್ರಾಗಿದೆ. ಎಷ್ಟೋ ಜನರ ಬಗ್ಗೆ ನಮಗೆ ಗೊತ್ತೇ ಇರಲ್ಲ Z....ಅವರ ಫೋಟೋ ನೋಡಿದಾಗ ನಾವೆಲ್ಲ ಏನೂ ಇಲ್ಲ ಅವರ ಮುಂದೆ ಅನ್ಸತ್ತೆ. ಅವರ ಕಣ್ಣುಗಳು ಒಳ್ಳೆ chinnaswamy stadium flood light ಥರ ಝಗಮಗ ಮಿನುಗ್ತಿರತ್ವೆ. ನಮ್ ಕಣ್ಣು....

Z : match stick ಅಂತಿಯಾ ?

ನಾನು : ಹೂಂ....

Z : ಆಮೇಲೆ ?

ನಾನು : ನಾವು ಅಲ್ಲಿ ಹೋಗಿ ಸ್ಥಾಪಿತರಾಗಿ, ಆಸೀನರಾಗೋ ಹೊತ್ತಿಗೆ ಆರು ಇಪ್ಪತ್ತು. ಭಾಷಣ ಇದ್ದಿದ್ದು ಆರು ವರೆಗೆ. ಅತ್ತೆ ಬೇಕಂತ್ಲೆ ನನ್ನನ್ನ ಕಾಲು ಘಂಟೆ ಮುಂಚೆ ಬರಹೇಳಿದ್ದರು. ನಾವು ಅಲ್ಲಿ ಸೆಟಲ್ ಆಗಕ್ಕೆ ಸರಿ ಹೋಗತ್ತೆ ಅಂತ. ಸರಿಯಾಗಿ ಆರುವರೆಗೆ ಅತಿಥಿಗಳು ಬಂದರು. ಸ್ವಾಗತ ಮಾಡಕ್ಕೆ ಬಂದವರು ಅಮೇರಿಕದ MIT ಲಿ Professor.

Z : ಹಾ ?

ನಾನು : ಹೂಂ...ಏನ್ ಸಿಂಪಲ್ ಮನುಷ್ಯ ಅಂದ್ರೆ... ಯಾರಿಗೂ ನಂಬಕ್ಕೆ ಆಗಲ್ಲ. ಅವರ ತಂದೆಯವರ ಸ್ಮರಣಾರ್ಥ ಈ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಅವರ ತಂದೆ Chief justice. ಒಂದಿಷ್ಟ್ ಹೇಳಿದ್ರು ಅವರ ಬಗ್ಗೆ. ನನಗೆ ತಲೆ ತಿರುಗಿ ಬಂತು. ಕಲೆ, ಸಾಹಿತ್ಯ, ಸಂಸ್ಕೃತಿ, ನ್ಯಾಯ, ನೀತಿ,ಧರ್ಮ, ಅಧ್ಯಾತ್ಮ...ಇವೆಲ್ಲದರ ಸಮ್ಮಿಶ್ರಣ ನೇ ಆ Chief justice.

Z : fruit salad ಅನ್ನು.

ನಾನು : ಹೂಂ...with ice cream-u.

Z : ಆಮೇಲೆ ?

ನಾನು : ಅತಿಥಿಯ ಹೆಸರು Ms. Aditi Vasist.ಅವರು Sri Aurobindo School ನ Principal. ಅವರಿಗೆ ಮೂರು ವರ್ಷ ವಯಸ್ಸಾಗಿದ್ದಾಗ ಅವರ ತಂದೆ ತಾಯಿ ಇವರನ ಅರಬಿಂದೋ ಆಶ್ರಮ, ಪುದುಚೇರಿಗೆ ಕರೆದುಕೊಂಡು ಹೋಗಿದ್ದರಂತೆ. ಅರಬಿಂದೋ ಅವರನ್ನು ನೋಡಿದ ನೆನಪು ಇವರಿಗೆ ಅಷ್ಟು ಇಲ್ಲದಿದ್ದರೂ ನಂತರ ಅವರು ಆಶ್ರಮದ ಕಾರ್ಯಕ್ರಮಗಳಲ್ಲಿ ಭಾಗವಹಿಸತೊಡಗಿದರು. ಈಗ ಈ ಶಾಲೆಯನ್ನು ನಡೆಸುತ್ತಿದ್ದಾರೆ. ಅವರು ಅರಬಿಂದೋ ಅವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಬಿಚ್ಚಿಡುತ್ತಾ ಹೋದರು...ನನಗೆ ನಾನು ಎಂಥಾ ನಿಷ್ಪ್ರಯೋಜಕಿ ಅನ್ನೋದು ಜ್ಞಾನೋದಯ ಆಯ್ತು.

Z : ಸದ್ಯ ಈಗ್ಲಾದ್ರೂ ಆಯ್ತಲ್ಲ...

ನಾನು : Better late than never. ಅರಬಿಂದೋ ಅವರ ತಂದೆ ಆಂಗ್ಲ ಸಂಕೃತಿಪ್ರಿಯ. ಮಕ್ಕಳಿಗೆ ಭಾರತದ ವಾಸನೆಯೂ ತಾಗಕೂಡದೆಂದು ಅರಬಿಂದೋ ಎಂಟು ವರ್ಷದವರಾಗಿದ್ದಾಗಲೇ, ಅವರನ್ನ ಮತ್ತು ಅವರ ಅಣ್ಣ ತಮ್ಮಂದಿರನ್ನೆಲ್ಲರನ್ನೂ ಲಂಡನ್ನಿಗೆ ಹಡಗಿನಲ್ಲಿ ಕಳಿಸಿ, ಅಲ್ಲಿನ ವಿದ್ಯಾಭ್ಯಾಸ ಕೊಡಿಸಿ ಅವರನ್ನು ಆಂಗ್ಲದವರಾಗಿಯೇ ಮಾಡಲು ಅವರು ಬಯಸಿದ್ದರು. ಇಲ್ಲಿ ಇಂಗ್ಲೆಂಡಿನಲ್ಲಿ ಅವರಿಗೆ ಆಶ್ರಯ ಕೊಟ್ಟ ಮನೆಯ ಮುಖ್ಯಸ್ಥ ತೀರಿಹೋದ ನಂತರ ಇವರು ಹೋಟೆಲೊಂದರಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಾ, ಜೊತೆಯಲ್ಲಿಯೇ ಓದುತ್ತಾ, ಕಾಲೇಜಿಗೇ ಮೊದಲಿಗರಾಗಿ, ವಿದ್ಯಾರ್ಥಿವೇತನಗಳನ್ನು ಪಡೆದು ತಮ್ಮ ಜೀವನ ಸಾಗಿಸಿದರು. ಇವರು ICS ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಿದ್ದರೆ ಭಾರತದಲ್ಲಿ ಇವರಿಗೆ ಒಂದು ಉತ್ತಮ ಹುದ್ದೆ ದೊರಕುತ್ತಿತ್ತು. ಇಂಗ್ಲೆಂಡಿನ ಭಾರತೀಯರು ಇಂಗ್ಲೇಂಡ್ ನಲ್ಲೇ ಗುಪ್ತ ಸಂಘಗಳನ್ನು ಮಾಡಿಕೊಂಡು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಅರಬಿಂದೋ ಕೂಡಾ ಈ ಸಂಘಕ್ಕೆ ಸೇರಿ, ಪ್ರಾಣ ಹೋದರೂ ಆಗ್ಲರ ಕೈ ಕೆಳಗೆ ದುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿ, ICS ಪರೀಕ್ಷೆಯ ಕುದುರೆ ಸವಾರಿ ಪರೀಕ್ಷೆಯಲ್ಲಿ ಬೇಕಂತಲೇ ತೇರ್ಗಡೆಯಾಗದೇ ಉಳಿದರು. ಅವರು ಭಾರತಕ್ಕೆ ಬರುತ್ತಿದ್ದ ಹಡಗು ಮುಳುಗಿತೆಂದು ತಿಳಿದ ಅವರ ತಂದೆ ಭಾರತದಲ್ಲಿ ಆಘಾತ ತಡೆಯಲಾಗದೇ ಪ್ರಾಣ ಬಿಟ್ಟರು. ಆದರೆ ಅರಬಿಂದೋ ಕೊನೆಯ ಕ್ಷಣದಲ್ಲಿ ಹಡಗು ಬದಲಿಸಿದ್ದರು. ಕಡೆಗೂ ಅವರು ಭಾರತ ತಲುಪಿದರು.

Z : ಯಪ್ಪಾ !!!

ನಾನು : ಹೂಂ...ನೋಡು ಎಷ್ಟ್ adventurous ಆಗಿತ್ತು ಇವರ ಜೀವನ ! ನನ್ನದೂ ಒಂದು ಜೀವನಾ ನ ?...ಸ್ಕೂಲ್ ಗೆ ಹೋಗು ಬಾ...ಕಾಲೇಜಿಗೆ ಹೋಗು ಬಾ...ಕಷ್ಟನೇ ಪಡ್ಲಿಲ್ಲ...ಕಾಲೇಜೂ ಟಾಪ್ ಮಾಡ್ಲಿಲ್ಲ.... :( :( :( ಯಾವ್ದಕ್ಕೂ ಹೋರಾಡ್ಲೂ ಇಲ್ಲ...ಗಲಾಟೆ ಅಂತೂ ಮಾಡ್ಲೇ ಇಲ್ಲ...ಕ್ರಾಂತಿಯನ್ನೂ ನಡೆಸ್ಲಿಲ್ಲ :( :( ಛೆ ಛೆ ಛೆ ಛೆ ಛೆ !!!!!!!!!!!!!!!!!!!!

Z : ಶಾಂತಿ ಶಾಂತಿ ಶಾಂತಿ !! ಸಮಾಧಾನ ಮಾಡ್ಕೋ.

ನಾನು : sniff !!!! ಆಮೇಲೆ ಅವರು ಅರಬಿಂದೋ ಅವರ ಸ್ವಾತಂತ್ರ್ಯ ಹೋರಾಟದ ಕಥೆ ಹೇಳಿದ್ರು.ಮೈ ರೋಮಾಂಚನ ಆಗೋಯ್ತು ನಂಗೆ. ಒಂದುವರೆ ಘಂಟೆ ಕಳೆದಿದ್ದೇ ಗೊತ್ತಾಗ್ಲಿಲ್ಲ. ಆಮೇಲೆ ಅರಬಿಂದೋ ರಚಿಸಿದ ಮೇರು ಕೃತಿ "ಸಾವಿತ್ರಿ"ಯ ಬಗ್ಗೆ ಮಾತಾಡಿದರು ಅವರು.

Z : what it eez ?

ನಾನು : Its a poem,a very long poem of 23,813 lines. ಆಂಗ್ಲದಲ್ಲೇ ಬರ್ದಿದಾರೆ ಇದನ್ನ. ಸಾವಿತ್ರಿ..ಅದೇ ಸತ್ಯವಾನನ ಹೆಂಡತಿ...ಯಮನ ಜೊತೆ ಹೋರಾಡಿ ಪತಿಯನ್ನ ಬದುಕಿಸಿಕೊಂಡಳಲ್ಲಾ...ಅವಳ ಕಥೆ. ಅವಳ ಪಾತ್ರದಲ್ಲಿ ಭಾರತೀಯ ಸಂಸ್ಕೃತಿ, ಸನಾತನ ಧರ್ಮ, ಎಲ್ಲವನ್ನು portray ಮಾಡಿದ್ದಾರಂತೆ. ಇದನ್ನೇ ನನ್ನ ಸೋದರತ್ತೆ ನನಗೆ gift ಮಾಡಿದ್ರು,on the occasion of world youth day.

Z : ಆಹಾ !!!

ನಾನು : ಇನ್ನೊಂದ್ ಏನಪ್ಪಾ ಅಂದ್ರೆ, ಅರಬಿಂದೋ ಅವರು ಕೆಲವು ಆಂಗ್ಲಪದಗಳನ್ನ ಸ್ವತಃ coin ಮಾಡಿದ್ದಾರೆ. ಅದಕ್ಕೆ ಅಂತಾ ನೇ ಒಂದು ನಿಘಂಟೂ ಇದೆ. ಸಾವಿತ್ರಿ ಪುಸ್ತಕ ಇದ್ದು ಆ ನಿಘಂಟು ಇರದಿದ್ರೆ no use. ಪಾಪ ನಮ್ಮತ್ತೆ ನನಗೆ ಅದನ್ನೂ ಕೊಟ್ರು.

Z : ಹೊಡುದ್ಲು jackpot ನ.

ನಾನು : ಹೆ ಹೆ....ಹೆಂಗೆ ?

Z : ಸೂಪರ್. ಆಮೇಲೆ ?

ನಾನು : ನಾನು ಅಮ್ಮನ MP3ಪ್ಲೇಯರ್ ನಲ್ಲಿ ಭಾಷಣ ನ ರೆಕಾರ್ಡ್ ಮಾಡ್ಕೊಂಡೆ. ನನ್ನ ಪಕ್ಕದಲ್ಲಿ ಕೂತಿದ್ದವರೂ ಸಹ ಮಾಡ್ಕೋತಿದ್ರು ಅವರ ರೆಕಾರ್ಡರ್ ನಲ್ಲಿ.ನಾನು ಸ್ವಲ್ಪ ನೋಟ್ಸ್ ಕೂಡಾ ಮಾಡ್ಕೋತಿದ್ದೆ. ಭಾಷಣ ಆದ್ಮೇಲೆ ಅವರು ನನ್ನ ನೋಟ್ಸ್ ನೋಡಿ, "which college are you from ? What are you studying ?" ಅಂದ್ರು. ನಾನು " I have done myM.Sc in physics" ಅಂದೆ. ಅವರು ನೋಡಿದರೆ... ISROದಲ್ಲಿ scientist !! ಅವರು "you have a very good handwriting, an impressive way of writing and have developed a very correct method of making notes. I am impressed. Do come to ISRO once.I can show you around. If you want some projects, we can see what we can do "ಅಂದು, ಕಾರ್ಡ್ ಕೊಟ್ಟು, ಕೈ ಕುಲುಕಿ ಹೋದ್ರು..

Z : ಭೂಮಿಮೇಲೆ ಇದ್ದ್ಯೋ ಅಥ್ವಾ ಚಂದ್ರಕ್ಕೆ ಹೋಟೋಗಿದ್ಯೋ ?

ನಾನು : ಇಲ್ಲ..ಭೂಮಿ ಮೇಲೆ ಇದ್ದೆ.

Z : ಗೂಡ್ !!ಆಮೇಲೆ ?

ನಾನು : ಅದಿತಿ ಮೇಡಮ್ ನ ಮಾತಾಡಿಸಿದೆ. ನನ್ನ ಕೈಯಲ್ಲಿ ಸಾವಿತ್ರಿ ಪುಸ್ತಕ ಇದ್ದಿದ್ದನ್ನ ನೋಡಿ ಅವರು ಸಖತ್ ಖುಷಿ ಪಟ್ಟರು. ಅವರು ಹೊರಟ ನಂತರ ನಾವು ರಾಮಕೃಷ್ಣ ಆಶ್ರಮಕ್ಕೆ ಪಾದ ಬೆಳೆಸಿದ್ವಿ.ಆಶ್ರಮ ಸರ್ಕಲ್ ನಲ್ಲಿ ವಿವೇಕಾನಂದರ ಮೂರ್ತಿ ಆವತ್ತು ಬೆಳಿಗ್ಗೆ ಅನಾವರಣ ಆಗಿತ್ತಲ್ಲ, ಅದನ್ನ ನೋಡಕ್ಕೆ. ಅಲ್ಲಿ ಹೋದ ಮೇಲೆ ಅಲ್ಲಿ ನಡೆಯುತ್ತಿದ್ದ ಬುಕ್ ಸೇಲ್ ಗೆ ಹೋಗದೆ ಇರಲು ಪುಸ್ತಕ ಹುಳುಗಳಾದ ನನಗೆ ಮತ್ತು ನಮ್ಮ ಅತ್ತೆಗೆ ಮನಸ್ಸು ಬರಲಿಲ್ಲ. ನಮ್ಮ ಜೊತೆ ನನ್ನ ತಂಗಿಯರಾದ ಗೌರಿ ಮತ್ತು ವಿದ್ಯಾ ಮತ್ತು ನನ್ನ ಮಾವ ಮುರಳಿಧರ್ ಎಲ್ಲಾರು ಇದ್ದರು. ನಾವೆಲ್ಲ ಬುಕ್ ಸೇಲ್ ಗೆ ಹೋದೆವು. ಹೋದ ಸರ್ತಿ ಕೂಡಾ ನಾನು ಈ ಸೇಲ್ ಗೆ ಬಂದಿದ್ದೆ. ಆಗಲೇ ಗುರುಗಳಾದ ಅರುಣ್ ಮತ್ತು ನನ್ನ ಮತ್ತೊಬ್ಬ ಮಿತ್ರರಾದ ಶ್ರೀಕಾಂತ್ ಅವರನ್ನು ನಾನು ಮೊದಲ ಬಾರಿ ಮೀಟ್ ಮಾಡಿದ್ದು. ಆಗ ಗುರುಗಳು "ನಾನು ಯಾರು ?" ಅನ್ನೋ documentary ಮೂವಿಯ ಸಿ ಡಿ ತೋರಿಸಿ, "ಇದನ್ನ ತಗೋ. ಸಕತ್ತಾಗಿದೆ. " ಅಂದಿದ್ದರು. ನಾನು " ಹೂಂ.." ಎಂದು ತಲೆಯಲ್ಲಾಡಿಸಿದ್ದೆ. ಆದರೆ ತಗೊಳ್ಳಕ್ಕೆ ಆಗಿರ್ಲಿಲ್ಲ. ಅದನ್ನ ಈ ವರ್ಷ ತಗೊಂಡೆ .

Z : ಒಂದು ವರ್ಷ ಬಿಟ್ಟು ?

ನಾನು : ಹೂಂ.ಆಮೇಲೆ ಶಂಕರಾಚಾರ್ಯರು ಬರೆದ "ಲಘು ವಾಕ್ಯ ವೃತ್ತಿ" ಅನ್ನೋ ಪುಸ್ತಕದ ಬಗ್ಗೆ ಕೇಳಿದ್ದೆ. ಏನೂ ಅಂತ ತಿಳ್ಕೊಳಕ್ಕೆ ಅದನ್ನ ತಗೊಂಡೆ. For some technical reasons, ನನಗೆ ದಕ್ಷಿಣಾಮೂರ್ತಿ ಸ್ತೋತ್ರ ಬೇಕಿತ್ತು. ಮನೆಯಲ್ಲಿ ಇರಲಿಲ್ಲ ಆ ಪುಸ್ತಕ. ಅದನ್ನೂ ಸೇರಿಸಿಕೊಂಡೆ. ಸಾಕು ಈ ಸರ್ತಿಗೆ, ಇನ್ಯಾವ್ ಪುಸ್ತಕನೂ ತಗೊಳಲ್ಲಾ ಅಂತ ಪ್ರತಿಜ್ಞೆ ಮಾಡಿ ಬಿಲ್ ಕೌಂಟರ್ ಗೆ ಬಂದೆ, ಅಲ್ಲಿ ಸೋಮನಾಥಾನಂದ್ ಜೀ ಅವರು ಬರೆದ "ಉಪನಿಷತ್ ಭಾವಧಾರೆ" ಪುಸ್ತಕ ನನ್ನ ಕಣ್ಣಿಗೆ ಬಿತ್ತು.

Z : As ususal, ಪ್ರತಿಜ್ಞೆ ಗಾಳಿಗೆ ತೂರಿದ್ದಾಯ್ತು.

ನಾನು : ಇಲ್ಲ..ನಾನು ಯೋಚ್ನೆ ಮಾಡಕ್ಕೆ ಶುರು ಮಾಡಿದೆ. ತಗೊಳ್ಳಕ್ಕೆ ದುಡ್ಡಿತ್ತು...ಆದ್ರೆ ಮನೆಗೆ ಬಂದ್ರೆ ಅಮ್ಮ ಅಣ್ಣ ಇಬ್ಬರೂ " ನೀನ್ ಹೋದ್ ಕಡೆ ಎಲ್ಲ ಟೆಂಪೋ ಅರೇಂಜ್ ಮಾಡ್ಬೇಕಾಗತ್ತೆ...ಇಷ್ಟ್ ಇಷ್ಟ್ ಪುಸ್ತಕ ಹೊತ್ಕೊಂಡು ಬರ್ತ್ಯಾ....ನಿಂಗಿಂತಾ ಭಾರ ಇರತ್ತೆ ಅವು. ನಾಲ್ಕು book racks ಭರ್ತಿ ಆದ್ವು...ಎಲ್ಲಿಂದ ಮಾಡ್ಸೋದು ಹೊಸದನ್ನ ?" ಅಂತ ಆಡ್ಕೋತಾರೆ ಅಂತ ಗೊತ್ತಿತ್ತು. ಅವರು ನನ್ನ ಪುಸ್ತಕ ಪ್ರೀತಿಗೆ ಯಾವತ್ತೂ ಅಡ್ಡಿ ಬಂದವರಲ್ಲ. ನಾನ್ ಕೇಳಿದ್ದಕ್ಕೆ ಯಾವತ್ತೂ ಇಲ್ಲಾ ಅಂತ ನೂ ಅಂದಿಲ್ಲ.The problem is, ಮನೆಯಲ್ಲಿ ಈಗ ಹುಡುಕಿದ್ರೂ ಎಲ್ಲೂ ಜಾಗ ಇಲ್ಲ . ಎಲ್ಲಪ್ಪಾ ಇಡೋದು ಇವನ್ನಾ ಅಂತ ಯೋಚನೆ ಶುರುವಾಯ್ತು. ಅಷ್ಟೊತ್ತಿಗೆ ಮಳಿಗೆ ಕ್ಲೋಸ್ ಆಗೋ ಟೈಂ ಬಂದಿತ್ತು. ಅತ್ತೆ ಬಂದು " ಆಯ್ತಾ ಶಾಪಿಂಗ್ ?" ಅಂದ್ರು.ನಾನು ನನ್ ಪರಿಸ್ಥಿತಿ ವಿವರಿಸಿದೆ. ಅವರು " ಅಯ್ಯೋ ಪೆದ್ದಿ, ಹತ್ತರಲ್ಲಿ ಇದೂ ಹನ್ನೊಂದ್ನೇ ದು. ಈಗ ಏನು, ನೀನು ತಗೊಂಡರೆ ಮನೆಲಿ ಜಾಗ ಇಲ್ಲ ಅಂತ comment ಬರತ್ತೆ ತಾನೆ ? ನಾನ್ ಕೊಡ್ಸಿದ್ರೆ ? ಬರಲ್ಲ ತಾನೆ ? ತಗೊ..ಇದೂ ನನ್ನ gift. flat discount ಸಿಕ್ಕೋವಾಗ chance miss ಮಾಡ್ಕೋಬಾರ್ದು" ಅಂದಿದ್ದೇ...ಪುಸ್ತಕ ನ ತಗೊಂಡು ಹೋಗಿ ಬಿಲ್ ಹಾಕ್ಸೇಬಿಟ್ರು.

Z : playwin ಗಿಂತಾ ರೋಮಾಂಚನಕಾರಿಯಾಗಿದೆ ಇದು.

ನಾನು : ಅಲ್ವಾ ? ನೋಡು, ನನ್ನ ಪ್ರತಿಜ್ಞೆ ಮುರಿಲೂ ಇಲ್ಲ, ಪುಸ್ತಕ ನ ತಗೊಳ್ಳದೇ ಇರ್ಲೂ ಇಲ್ಲ. ಹೇಗೆ ?

Z : ಕಿಲಾಡಿ ;-)

ನಾನು : ಆಮೇಲೆ SLV corner ನಲ್ಲಿ ಗಡತ್ತಾಗಿ ನಾರ್ಥ್ ಇಂಡಿಯನ್ ಊಟ ತಿಂದು, ರಾತ್ರಿ ಹತ್ತು ಮುಕ್ಕಾಲು ಸಮಯದಲ್ಲಿ cane-o-la ದಲ್ಲಿ ginger lime sugarcane juice ಕುಡಿದು, ಅತ್ತೆ ಮನೆಯಲ್ಲಿ ರಾತ್ರಿ ಠಿಕಾಣಿ ಹೂಡಿದೆ. ವಿಶ್ವ ಯುವ ದಿನದಂದು ಅರಬಿಂದೋ ಮತ್ತು ಸ್ವಾಮಿ ವಿವೇಕಾನಂದರ ಪುಸ್ತಕ ನನ್ನ ಪಾಲಿಗೆ ಬಂದದ್ದು ಅರ್ಥಪೂರ್ಣ. ಅದನ್ನ ಓದಲು ಶುರು ಮಾಡ್ಬೇಕು. ಅವರ ಆದರ್ಶನ ನಾನೂ atleast in picograms ( one pico= 10^-12) ಮೈಗೂಡಿಸ್ಕೋಬೇಕು. ದೇಶ ಉದ್ಧಾರ ಮಾಡಕ್ಕೆ ಮೊದಲು ನಾನು ಉದ್ಧಾರ ಆಗ್ಬೇಕು ಅಂತೆಲ್ಲಾ ಯೋಚ್ನೆ ಮಾಡಿದ್ದೇನೆ. ಆಗತ್ತಾ ಇಲ್ವಾ ನೋಡ್ಬೇಕು !

Z : ಸಿಕ್ಕಾಪಟ್ಟೆ ಪುಸ್ತಕ ಇದೆ ಓದೋಕೆ ಹಾಗಾದ್ರೆ....

ನಾನು : ಹೂಂ....ನೋಡೋಣ ಯಾವಾಗ ಓದಿ, ಅರಗಿಸಿಕೊಂಡು ಮುಗಿಸುತ್ತೇನೆ ಇವೆಲ್ಲ ಅಂತ !

Tuesday, January 20, 2009

Please welcome ಶಾರ್ವರಿ

Z : ಅಯ್ಯೋ...ಎಷ್ಟ್ ವಸ್ತುಗಳು ಸೇರ್ಕೊಳ್ಳತ್ವಪ್ಪಾ....ಇವಳ gadget list ಗೆ ?

ನಾನು : I think ಇದು (n-m) th.

Z : ಆಹಾ... ಏನು ಈ ಶಾರ್ವರಿ ?

ನಾನು : ನನ್ನ ಹೊಚ್ಚ ಹೊಸ laptop.

Z : ಅಹಾ....ಯಾವಾಗ್ ಬಂತು ?

ನಾನು : ನೆನ್ನೆ.

Z : ಅದನ್ನ ಇವತ್ತ್ ಹೇಳ್ತಿದ್ಯಾ ?

ನಾನು : ಇಲ್ಲಾ ಹಾಗಲ್ಲ...ಎಲ್ಲ settings ಚೆಕ್ ಮಾಡೀ, firefox, baraha ಎಲ್ಲ download ಮಾಡಿ, ಕನ್ನಡ ಸ್ಫುಟವಾಗಿ ಕಾಣತ್ತಾ ನೋಡಿ, laptop ಬಂದ ವಿಷಯ ನ ಲೋಕಕ್ಕೆಲ್ಲಾ ಹೇಳಿ, ಆಮೇಲೆ ಬ್ಲಾಗ್ ಕಡೆ ಪಾದಾರ್ಪಣೆ.

Z : ಇದು ಅನ್ಯಾಯ, ಅಕ್ರಮ, ಮೋಸ, ವಂಚನೆ, ಕ್ರೌರ್ಯ ಮತ್ತು ದೌರ್ಜನ್ಯ.

ನಾನು : ok. ಆಮೇಲೆ ?

Z : ನನಗಿಷ್ಟೇ ಕನ್ನಡ ಬರೋದು.

ನಾನು : ಜಾಸ್ತಿ ಆಯ್ತು actually.

Z : ಅಲ್ಲಾ...ಮೊದ್ಲು ನನಗಲ್ವಾ ಹೇಳ್ಬೇಕಾಗಿರೋದು ?

ನಾನು : computer ನಲ್ಲಿ ಕನ್ನಡ ಬರ್ದೇ ಇದ್ರೆ ಇಲ್ಲಿಗೆ ಬಂದು ನಾನು ಏನ್ ಮಾಡ್ಲಿ ? ಹೇಗೆ ನಿನಗೆ ಹೇಳಲಿ ?

Z : point.

ನಾನು : ಈಗ ಅರ್ಥ ಆಯ್ತಾ ? ಅದಕ್ಕೆ...ನೆನ್ನೆ ರಾತ್ರಿ ಕೂತು ಬಂದ ಈ ಹೊಸ ಅತಿಥಿ ನ ಸರಿಯಾಗಿ ವಿಚಾರ್ಸ್ಕೊಂಡು...

Z : ಪಾಪ...

ನಾನು : ಹೇ...ವಿಚಾರ್ಸ್ಕೊಳ್ಳೋದು ಅಂದ್ರೆ ಹಾಗಲ್ಲ. firefox, ಬರಹ, picasa,ಇತ್ಯಾದಿಗಳನ್ನ ಇಳಿಸಿಕೊಂಡು, ಹಸಿವಾಗಿದ್ದ ಶಾರ್ವರಿಗೆ software ಗಳನ್ನ ಬಡಿಸಿ, ತೃಪ್ತಿ ಪಡ್ಸೋ ಅಷ್ಟ್ರಲ್ಲಿ ಇಷ್ಟೊತ್ತಾಗೋಯ್ತು.

Z : ಓಹೊಹೊಹೊಹೊ.

ನಾನು : ಹೊಸಾ friend ನ welcome ಮಾಡು.

Z : ಕಾಲೇ ಇಲ್ಲ ಇದಕ್ಕೆ...ಬಲಗಾಲಿಡು ಅಂತ ಹೇಗೆ ಹೇಳೋದು ?

ನಾನು : ಅಯ್ಯೋ ರಾಮಾ...ಇದು ಸಣ್ಣ laptop. ಇದಕ್ಕೆ ಕತ್ತು, ಕಿವಿ,ಕೈ ಕಾಲೆಲ್ಲ ಇರಲ್ಲ. ಬರಿ ಮುಖ ಇರತ್ತೆ.

Z : ಚಿಕ್ಕು ಮುಖ ಅಲ್ವಾ ? ಮರ್ತೆ...ಬರ್ಬೇಕು ಬರಬೇಕು ಶಾರ್ವರಿ ಅವರು....

ನಾನು : ಹೂಂ...ಇದು Acer Aspire one series laptop. 9 inches ಅಷ್ಟೇ screen.

Z : ಇದಕ್ಕೂ ಕಿವಿ, ಬಾಯಿ attachment ಎಲ್ಲಾ ಹಾಕೋಬೇಕಾ ?

ನಾನು : ಏನು ಇಲ್ಲ. built in mic, built in webcam.

Z : ಮುಖ ಚೆನ್ನಾಗಿ ಕಾಣತ್ತಾ ?

ನಾನು : ಹೂಂ..ತಾಯಮ್ಮನಿಗೂ ಬೆಳಿಗ್ಗೆ ಅವರ ಮುಖಾ ನ ತೋರ್ಸ್ದೆ webcam ನಲ್ಲಿ...ಕರೆಂಟ್ ಹೊಡೆದ ಕಾಗೆ ಆದರು ಅವರು. ಪುಸ್ತಕದ ಥರಾ ಇದೆ...ಮುಖಾ ಎಲ್ಲಾ ಕಾಣ್ತದೇ...???? ಅಂತ

Z : ಹೆಹೆಹೀ....ಯಾತಕ್ಕೆ ಆಗಮಿಸಿದ್ದು ಶಾರ್ವರಿ ಅವ್ರು ಸಡನ್ನಾಗಿ ?

ನಾನು : ಅದ್ ಏನ್ ಆಯ್ತಪ್ಪಾ ಅಂದ್ರೆ...ನಾನು ಡಿಸೆಂಬರ್ 21st UGC CSIR NET ಪರೀಕ್ಷೆ ತಗೊಂಡಿದ್ದೆ..ಅದರ ರಿಸಲ್ಟು ಸಂಕ್ರಾಂತಿಯ ಹಿಂದಿನ ದಿನ ಬಂತು. ಭೌತಶಾಸ್ತ್ರ ವಿಭಾಗದಲ್ಲಿ ಸಾವ್ರಾರು ಜನ ತಗೊಂಡಿರ್ತಾರೆ ಈ ಪರೀಕ್ಷೆನ ದೇಶದಲ್ಲೆಲ್ಲಾ...ಅದರಲ್ಲಿ ಮೊದಲನೆಯ ಹಂತದಲ್ಲಿ ತೇರ್ಗಡೆಯಾಗಿರೋರು ಒಂದು ಸಾವಿರ ಚಿಲ್ಲರೆ ಜನ. ಆ ತೇರ್ಗಡೆಯಾದವರಲ್ಲಿ ನಾನೂ ಒಬ್ಬಳು.

Z : ಸರಿಯಾಗಿ ನೋಡಿದ್ಯಾ ?

ನಾನು : ಹೂಂ ಕಣೆ...ಬರೋಬ್ಬರಿ ಹನ್ನೆರಡು ಸಲ ನನ್ನ ಅದೇ ರೆಜಿಸ್ಟರ್ ನಂಬರ್ ನ ಟೈಪ್ ಮಾಡಿ ಮಾಡಿ ಚೆಕ್ ಮಾಡಿದೆ.

Z : ಪ್ರತಿಸಲ ಒಂದೇ ಥರ ತೋರ್ಸ್ತಾ ?

ನಾನು : ಹೂಂಂಂಂಂ.....

Z : ಹಾಗಾದ್ರೆ ಸರಿ. ಅದಕ್ಕೂ ಶಾರ್ವರೀ ಗೂ ವ್ಹಾಟ್ ಸಂಬಂಧ ?

ನಾನು : ಎರಡನೆಯ ಪೇಪರ್ ಕ್ಲಿಯರ್ ಮಾಡಿದ್ರೆ ನಾನು ವಿಜ್ಞಾನಿಯೋ ಅಥವಾ ಅಧ್ಯಾಪಕಿಯೋ ಆಗಬಹುದು. ಆಗದಿದ್ರೆ ಈ ಎರಡೂ ಪೇಪರ್ ಮತ್ತೆ ತಗೋಬೇಕು. ಯೆಷ್ಟೋ ಜನ ಮೊದಲನೇ ಪೇಪರ್ ನೇ clear ಮಾಡಿಲ್ಲ. ನಾನು ಮಾಡಿದ್ನಲ್ಲಾ...ಅದಕ್ಕೆ ಅಣ್ಣ (ಅಪ್ಪ) ಶಾರ್ವರಿ ನ gift ಮಾಡಿದ್ರು.

Z : !!!!!!!!!!!!!!!!!!!!!!!!!!!!!!!!!!!!!!!!!!!!!!!!!!!

ನಾನು : ಆಯ್ತಾ ? ಅಥ್ವಾ ಇನ್ನು ಭಾವೋದ್ವೇಗ ಇದ್ಯೋ ?

Z : ಆಯ್ತು ಆಯ್ತು. continue.

ನಾನು : ಅಣ್ಣ ಅಂದ್ರು, "ತಗೋ ಇದನ್ನ...ಮನೆಯಲ್ಲಿ ವಯರ್ಲೆಸ್ ಮೋಡೆಮ್ ಹೇಗೂ ಇದೆ...ಇದಕ್ಕೆ ವಯರ್ಲಿಸ್ಸ್ ಫಿಡೆಲಿಟಿ ಇದೆ. ಮನೆಯಲ್ಲಿ ಎಲ್ಲಿ ಬೇಕಾದ್ರೂ ಕೂತ್ಕೊಂಡು ಕುಟ್ಕೋ ನಿನ್ನ ಬ್ಲಾಗ್ ಗಳನ್ನ...ಟಪ ಟಪ ಅಂತ "

Z : ನೀನೇನಂದೆ ?

ನಾನು : ಧನ್ಯೋಸ್ಮಿ ಅಂದೆ.

Z : ಭೇಷ್.

ನಾನು : thank you thank you.


Z : ಶಾರ್ವರಿ ಬಂದ ಮೇಲೆ ಅವರು ಮಾಡಿದ ಮೊದಲ ಕೆಲಸ ?

ನಾನು :ಲಾಲ್ ಬಾಗ್ ನ ಫಲಪುಷ್ಪ ಪ್ರದರ್ಶನದಲ್ಲಿ ನಲ್ಲಿ ತೆಗೆದ ಫೋಟೋಗಳನ್ನ ತಮ್ಮ ತೆಕ್ಕೆಗೆ ಸೇರಿಸಿಕೊಂಡಿದ್ದು.

Z : ಆಹಾ ?

ನಾನು : ಹಾಂ...ನಾನು ಸುಮಾರು ೧೫೦ ಫೋಟೋ ತೆಗೆದೆ. courtesy chaaya. ನಮ್ಮನೆ ಎದುರು ಮನೆಯವರಾದ ನಂದಿನಿ ತಮ್ಮ ಪ್ರೊಫೆಷನಲ್ slr camera ಇಂದ ಸುಮಾರು ೧೫೦ ಫೋಟೋ ತೆಗೆದ್ರು. ಎಲ್ಲವನ್ನು ಅಪ್ಲೋಡ್ ಮಾಡಕ್ಕೆ ಎರಡು ದಿನ ಬೇಕಾಗತ್ತೆ. ಎರಡು ದಿನ ಆದ್ಮೇಲೆ ನಿನಗೆ ಖಂಡಿತಾ ಫೋಟೋ ತೋರ್ಸ್ತಿನಿ.

Z : ಓಕೆ...

ನಾನು : ಅಲ್ಲಿಯವರೆಗೂ line on hold.

Monday, January 12, 2009

Journey to ಜಲೇಬಿನಾಡು- ಭಾಗ ೨

ನಾನು : ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ರೆಡಿಯಿರಬೇಕೆಂದು ಮ್ಯಾನೇಜರ್ ಶಿವಾನಂದ್ ಅವರು ಹಿಂದಿನ ರಾತ್ರಿಯೇ ಹೇಳಿದ್ದರು.

Z : what ?

ನಾನು : ಹೂಂ...ನಾನು ಮೂರು ಘಂಟೆಗೆ ಅಲಾರಂ ಇಟ್ಟೆ. ಜೀವನದಲ್ಲಿರಲಿ, ಕನಸಲ್ಲೂ ನಾನು ಆ ಟೈಮ್ ನೋಡಿರಲಿಲ್ಲ...ಏಳೋ ಹಾಗೆ ಆಗೋಯ್ತಲ್ಲ ಅಂತ ಕೊರಗ್ತಿದ್ದೆ. To be precise, ಒಂದೇ ಕಣ್ಣಲ್ಲಿ ಅಳುತ್ತಿದ್ದೆ. ಅರುಣಾಚಲೇಶ್ವರ ದೇವಾಲಯದ ೨೪ ಎಕರೆ ಸುತ್ತಿ ಸಾಕಾಗಿತ್ತು ಆದ್ದರಿಂದ ಆ ಭೂತ ಬಂಗಲೆಯಲ್ಲಿ ಬೇಗ ನಿದ್ದೆ ಹತ್ತಿತು. ಬೆಳಿಗ್ಗೆ ಮೂರಕ್ಕೆ ಅಲಾರಂ ಹೊಡಿಯಿತು. ನಾನು " ಅಮ್ಮಾ...ಮೂರು ಘಂಟೆ..."ಅಂತ ಅವರನ್ನ ಎಬ್ಬಿಸಿ, ಅಲಾರಂ ಆಫ್ ಮಾಡಿ ಮತ್ತೆ ಮಲ್ಕೊಂಡೆ.

Z : ಆಹಾ...ಆದರ್ಶ ಮಗಳು. ಥೂ !

ನಾನು : ಏನ್ ಥೂ ಅಂತೀಯಾ ? ಮೂರು ಘಂಟೆಗೆಲ್ಲಾ ಏಳಕ್ಕೆ ಆಗಲ್ಲ ಆದ್ದರಿಂದ ಮೂರುವರೆಗೆ ಕಣ್ಬಿಟ್ಟೆ.

Z : ಯಾಕ್ ಏಳಕ್ಕಾಗಲ್ಲ ?

ನಾನು : ಗೂಬೆಗಳು ಕಾಫಿ ಕುಡಿಯೋ ಹೊತ್ತು ಅದು.ಮನುಷ್ಯರು ಎದ್ದರೆ ಅವಕ್ಕೆ disturb ಆಗಲ್ವಾ ? ಹೆಂಗೆ ಏಳಕ್ಕೆ ಆಗತ್ತೆ ?

Z : ಮೂರುವರೆಗೆ ಗೂಬೆಗಳು ಏನ್ ಮಾಡ್ತಿರತ್ವೆ ?

ನಾನು : ಕಾಫಿ ಕುಡಿದು ಮುಗಿಸಿರುತ್ತವೆ.

Z : ಸರಿಹೋಯ್ತು. ಆಮೇಲೆ ?

ನಾನು :ಬಿಸಿ ನೀರು ಬರುತ್ತಿತ್ತು ಪುಣ್ಯಕ್ಕೆ.ನೀರು actually ನಮ್ಮ ಮನೆ ನೀರಿನ ಥರಾ ನೇ ಇತ್ತು.ಆದ್ರೆ ನಲ್ಲಿಯಲ್ಲಿ ನೀರು ಸಿರಿಂಜ್ ಇಂದ ಇಂಜೆಕ್ಷನ್ trickle ಆಗೋ ಥರ trickle ಆಗ್ತಿತ್ತು.

Z : ಸಿರಿಂಜ್ ಸ್ನಾನ ಅನ್ನು.

ನಾನು : ಹೂಂ. ನಾವು ತಿರುವಣ್ಣಾಮಲೈ ಬಿಟ್ಟಮೇಲೆ ನನಗೊಂದು ವಿಷಯ flash ಆಯ್ತು.

Z : ಏನು ?

ನಾನು :ಜಲೇಬಿನಾಡಲ್ಲೂ ನಮ್ಮ ಕಾವೇರಿ ನೇ ಇರೋದು ಅಂತ :)

Z : ವಾಆಹ್ !! ಬುದ್ಧಂಗೆ ಜ್ಞಾನೋದಯ ಆದ್ಮೇಲೆ ನಿಂಗೆ ನೋಡು ಜ್ಞಾನೋದಯ ಆಗಿದ್ದು. ;-)

ನಾನು :ಓಯ್ !!!

Z : ಸಾರಿ ಸಾರಿ...continue.

ನಾನು :ಹೂಂ... ಲಗೇಜೆಲ್ಲಾ ಮತ್ತೆ ಹೊತ್ತುಕೊಂಡು ಹೊರಟ್ವಿ. ಅಂದು ನಾವು ಚಿದಂಬರಂ ಮತ್ತು ತಿರುನಲ್ಲಾರ್ ನೋಡಿಕೊಂಡು ಕುಂಭಕೋಣಂ ನಲ್ಲಿ ತಂಗಬೇಕಿತ್ತು.

Z : i see. ಆಮೇಲೆ ?

ನಾನು :ಬೆಳಿಗ್ಗೆ ಅಣ್ಣಾ ಮಲೈ ಹೇಗೆ ಕಾಣತ್ತೆ ಅಂತ ನೋಡಲು ಹಪಹಪ ಅಂತಿದ್ದೆ. ಆದ್ರೆ ಸೂರ್ಯ ಹುಟ್ಟೊ ಅಷ್ಟೊತ್ತಿಗೆ ನಾವು ತಿರುವಣ್ಣಾಮಲೈ ಬಿಟ್ಟುಬಿಟ್ಟಿದ್ದೆವು.

Z : :(

ನಾನು : ಹಾಡು ಹಗಲಲ್ಲಿ, ಹುಣಸೆ ಮರದ ಕೆಳಗೆ ಕೂತು ತಿಂಡಿ ತಿಂದೆವು. ಅಮ್ಮಾ ಮತ್ತೆ ಇನ್ನಿತರರು ಹುಣಸೆ ಕಾಯಿ ಆರಿಸಿಕೊಂಡರು ಬೇರೆ.

Z : ರಾಮಾ....ಆಮೇಲೆ ?

ನಾನು : ಚಿದಂಬರಂ ತಲುಪೋ ಹೊತ್ತಿಗೆ ಹನ್ನೊಂದಾಗಿತ್ತು. ಹನ್ನೆರಡಕ್ಕೆ ದೇವಸ್ಥಾನ ಕ್ಲೋಸ್.ನಾವು ನಟರಾಜನ್ನ ನೋಡಿದ್ವಿ. Mr. ನಟರಾಜ ಅವರು ಆನಂದ ತಾಂಡವ pose ನಲ್ಲಿ ಆನಂದವಾಗಿ ನಾಟ್ಯವಾಡುತ್ತಾ ಇದ್ದಾರೆ. ದೊಡ್ಡ ನಟರಾಜ ಮೂರ್ತಿ. ಅದನ್ನ ನೋಡಿದರೆ ನಮಗೂ ಕುಣಿಬೇಕು ಅನ್ನಿಸತ್ತೆ. ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಏಳ್ತಿವಿ...ಬಾಗಿಲು ಮುಚ್ಚಿದ್ದಾರೆ !!!!!ದರ್ಶನ ಆಗಿದ್ದು ನಮ್ಮ ಪುಣ್ಯ. also, 4೦ ಎಕರೆ ದೇವಸ್ಥಾನ ಅದು. ನೋಡಕ್ಕೆ ಅಗ್ಲಿಲ್ಲ :( More than anything, ನಾನು ಚಿದಂಬರ ರಹಸ್ಯದ ಬಗ್ಗೆ ಅಲ್ಲಿನ ಅರ್ಚಕರ ಹತ್ತಿರ discuss ಮಾಡಬೇಕಿತ್ತು. ಏನೂ ಆಗ್ಲಿಲ್ಲ.ಚಿದಂಬರ ರಹಸ್ಯ ರಹಸ್ಯವಾಗಿಯೇ ಉಳಿಯಿತು. [10 bucket ಕಣ್ಣೀರು :( :( :( ] ಅಲ್ಲಿನ ನೃತ್ಯ ಸಭಾ ಅನ್ನೋ ಮಂಟಪ ಅಂತು ಕುಸುರಿ ಕೆತ್ತನೆಗಳಿಂದ ತುಂಬಿ ಹೋಗಿತ್ತು. ಕಣ್ತುಂಬ ನೋಡಕ್ಕೂ ಟೈಂ ಇರಲಿಲ್ಲ. ಆಕಾಶ ಲಿಂಗದ ರುದ್ರಾಭಿಷೇಕ ಮತ್ತು ಮಹಾ ಮಂಗಳಾರತಿ ನೋಡಿದ್ವಿ. Mrs. ನಟರಾಜ ಕೂಡಾ smile ಕೊಟ್ಟುಕೊಂಡು photogenic ಆಗಿದಾರೆ. ಆದ್ರೆ photography prohibited.

Z : :-) ಆಕಾಶ ಲಿಂಗ ಅಂದ್ರೆ ಏನು ?

ನಾನು : ತಿರುವಣ್ಣಾಮಲೈ ಕಥೆ ಹೇಳಿದಾಗ ನಾನು ಪಂಚಭೂತಗಳ ರೂಪದಲ್ಲಿ ಈಶ್ವರ ಜಲೇಬಿನಾಡಲ್ಲಿ ನೆಲೆಸಿದ್ದಾನೆ ಅಂದಿದ್ದೆನಲ್ಲಾ ?

Z : ಹೂಂ....

ನಾನು :ಆಕಾಶ ನೂ ಪಂಚಭೂತಗಳಾಲ್ಲಿ ಒಂದಲ್ವಾ ? ಇಲ್ಲಿರುವ ಲಿಂಗ ಆಕಾಶ ನ ಪ್ರತಿನಿಧಿಸುತ್ತದೆ.

Z : ಓಹ್ ಹೋ...

ನಾನು :ಆಹ್ ಹಾ.....

Z : ಆಮೇಲೆ ?

ನಾನು : ಈ ದೇವಸ್ಥಾನದ ಗರ್ಭಗುಡಿಯ ಮೇಲಿರುವ ಗೋಪುರವನ್ನ ಚಿನ್ನದ ತಟ್ಟೆಗಳಲ್ಲಿ ಮಾಡಲಾಗಿದೆ. ನಟರಾಜನು ಯೋಗ ರಹಸ್ಯಗಳನ್ನು ಪತಂಜಲಿ ಮಹರ್ಷಿ ಮತ್ತಿತರರಿಗೆ ನೃತ್ಯ ಸಭಾ ಅನ್ನೋ ಮಂಟಪದಲ್ಲಿ ನಾಟ್ಯ ಮಾಡುತ್ತಾ ವಿವರಿಸದನಂತೆ. ಈಗಲೂ ನಟರಾಜನಿಗೆ ನೃತ್ಯ ಸೇವೆ ಎಲ್ಲ ಈ ಸಭೆಯಲ್ಲೇ ನಡೆಯುತ್ತದೆ. ಗರ್ಭಗುಡಿಯ ಮಂಟಪವನ್ನ ಚಿತ್ಸಭಾ ಎಂದು ಕರೆಯುತ್ತಾರೆ. ಇನ್ನೂ ಮೂರ್ನಾಲ್ಕು ಮಂಟಪಗಳಿವೆ. ಹೆಸರು ಮರ್ತೋಗಿದೆ. ಆಮೇಲೆ Mr. Ranganatha ಅವರು ಈಶ್ವರನಿಗೆ company ಕೊಡಕ್ಕೆ ಗೋವಿಂದರಾಜ ಅನ್ನೋ ಹೆಸರಲ್ಲಿ ಚಿದಂಬರದಲ್ಲಿ ಬಂದು ನೆಲೆಸಿದ್ದಾರೆ .(actually ಮಲಗಿದ್ದಾರೆ)

Z : ಹ್ಮ್ಮ್..... ಆಮೇಲೆ ?

ನಾನು : ನನಗೆ ಸಖತ್ ಬೇಜಾರಾಗಿದೆ ಅಂತ ಅಣ್ಣನಿಗೆ ಗೊತ್ತಾಯ್ತು. ಅದಕ್ಕೆ ಅಣ್ಣ " ಬೇಜಾರ್ ಮಾಡ್ಕೋಬೇಡಾ...ಚಿದಂಬರಕ್ಕೆ ಮತ್ತೆ ನಾನೇ ಕಾರಲ್ಲಿ ಕರ್ಕೊಂಡ್ ಬರ್ತಿನಿ, ಅರ್ಚಕರನ್ನ mic ಹಿಡಿದು interview ಮಾಡಿ ನೀನೆ ಚಿದಂಬರ ರಹಸ್ಯ ಭೇದಿಸುವಂತೆ. promise" ಅಂದ್ರು.ಆಮೇಲೇ ನಾನು ಹಲ್ಲು ಬಿಟ್ಟು ನಕ್ಕಿದ್ದು. ವಾಪಸ್ ಬಂದು ನಾವೆಲ್ಲಾ ಬಸ್ ಹತ್ತಿದೆವು. ಆದರೆ ನಮ್ಮಲ್ಲಿ ಒಬ್ಬರು ದಾರಿತಪ್ಪಿ ಬೇರೆ ಎಲ್ಲೋ ಹೊರಟು ಹೋಗಿದ್ದರು. ಅವರನ್ನು ಹುಡುಕಿ ಕರೆದಂದು ನಾವು ಹೊರಡುವಷ್ಟರಲ್ಲಿ ಒಂದು ಘಂಟೆ ತಡವಾಯ್ತು.

ತಿರುನಲ್ಲಾರಿನ ದೇವಸ್ಥಾನ ಕೂಡಾ ಹನ್ನೆರಡಕ್ಕೆ ಕ್ಲೋಸ್. ಮತ್ತೆ ತೆರೆಯುವುದು ನಾಲ್ಕು ಘಂಟೆ. ಸರಿ ನಾವು ಪೂಂಪುಹಾರ್ ಅನ್ನುವ ಜಾಗದಲ್ಲಿ, ಬೀಚ್ ಬಳಿ ನಿಲ್ಲಿಸಿ ಊಟ ಮಾಡಿದೆವು.ಇನ್ನು ೩ ಘಂಟೆ ಸಮಯ ಇತ್ತು.

Z : ಬೀಚ್ ಹೇಗಿತ್ತು ?

ನಾನು : ಶಾಂತವಾಗಿತ್ತು. ಆದರೆ ದೊಡ್ಡ ದೊಡ್ಡ, ಚೂಪಾದ ಬಂಡೆಗಳಿದ್ದವು ಆದ್ದರಿಂದ ಬೀಚ್ ಹತ್ತಿರ ಯಾರೂ ಹೋಗಲಾಗಲಿಲ್ಲ.

Z : :(

ನಾನು : ಆದ್ರೆ ಅಲ್ಲೊಂದು art gallery ಇತ್ತು. ಅಲ್ಲಿ ಇಳಾಂಗೊ ಎಂಬ ತಮಿಳು ಕವಿ ರಚಿಸಿದ "ಸಿಲಾಪತ್ತಿಕಂ" ಎಂಬ ಕಾವ್ಯದ ಕಥೆಯನ್ನು ಗೋಡೆಗಳ ಮೇಲೆ ಕೆತ್ತಿದ್ದಾರೆ. ಕಥಾನಾಯಕಿ ಕನ್ನಗಿ, ನಾಯಕ ಕೋವಲನ್. ಇದೊಂದು folk ಕಥೆ. ಎಷ್ಟು ಚೆನ್ನಾಗಿ ಕೆತ್ತಿದ್ದಾರೆ ಅಂದ್ರೆ..........

Z : ಫೋಟೋ ತೆಗ್ದ್ಯಾ ?

ನಾನು : ಹೂಂ. ಆದ್ರೆ ಓದುಗರೆ ದಯವಿಟ್ಟು ಕ್ಷಮಿಸಿ, ನಾನು ಈ ಗ್ಯಾಲೆರಿಯ ಯಾವ ಫೋಟೋವನ್ನು ಇಲ್ಲಿ ಹಾಕಲಾರೆ. ಉದ್ದೇಶ ಇಷ್ಟೇ. ಇದನ್ನ ಇಲ್ಲಿ ಅಂತರ್ಜಾಲದಲ್ಲಿ ನೋಡಿಬಿಟ್ಟರೆ ಯಾರೂ ಆ ಜಾಗಕ್ಕೆ ಹೋಗುವುದೇ ಇಲ್ಲ...ಅಯ್ಯೋ..."ನೋಡಿದ್ದೀವಲ್ಲ" ಅನ್ನಿಸುತ್ತದೆ. ಆದರೆ ನಾವು ಹಾಗೆ ಮಾಡಿದರೆ ಕಲೆಯನ್ನು, ಕಲಾವಿದರನ್ನು ಪ್ರೋತ್ಸಾಹಿಸಿದ ಹಾಗಾಯಿತೇ ? ಮತ್ತು gallery ಯ ಸ್ಥಾಪನೆಯ ಉದ್ದೇಶವೇ ನೆರವೇರುವುದಿಲ್ಲ. ಕಲೆಯನ್ನು patronize ಮಾಡಲು ದೇಶ ಭಾಷೆಗಳ ಹಂಗೇಕೆ ಅಲ್ಲವಾ ? ಆದ್ದರಿಂದ ಅಲ್ಲಿಗೆ ಹೋಗಿ ನಾವು ಆ ಕಲೆಯನ್ನು ನೋಡಿಯೇ ಪ್ರೋತ್ಸಾಹಿಸಬೇಕು. ಪ್ರವಾಸಿಗರು ಮುಂದೊಮ್ಮೆ ಹೋಗುವಾಗ ಈ ಜಾಗಕ್ಕೆ ತಪ್ಪದೇ ಹೋಗಿ. ಶಾಂತ ಜಾಗ ಇದು. ನಿಜವಾಗಲೂ ತುಂಬಾ ಚೆನ್ನಾಗಿದೆ.

Z : ಹೋಗ್ಲಿ...ಕಥೆಯಾದ್ರೂ ಹೇಳು.

ನಾನು : ಓಕೆ. ಕೋವಲನ್ ಪಾಂಡ್ಯ ರಾಜ್ಯದ ಒಬ್ಬ ಸೈನಿಕ. ಕನ್ನಗಿ ಗೂ ಕೋವಲನ್ ಗೂ ಮದುವೆ ಆಗುತ್ತದೆ. ಅದೇ ಸಮಯದಲ್ಲಿ ಮಾಧವಿ ಎಂಬ ನರ್ತಕಿ ರಾಜನ ಆಸ್ಥಾನದಲ್ಲಿ ಆಶ್ರಯ ಸಂಪಾದಿಸುವುದಲ್ಲದೇ, ಕೋವಲನ್ ನ ಹೃದಯ ಸಾಮ್ರಾಜ್ಯವನ್ನೂ ಆಕ್ರಮಿಸಿಕೊಳ್ಳುತ್ತಾಳೆ. ಕನ್ನಗಿಯನ್ನು ಬಿಟ್ಟು ಕೋವಲನ್ ಮಾಧವಿಯ ಮನೆಯಲ್ಲಿ ವಾಸ ಶುರುಮಾಡುತ್ತಾನೆ. ಆನಂತರ ಮಾಧವಿಯ ನಿಜ ಬಣ್ಣ ಬಯಲಾಗಿ ಅವನು ಮಾಧವಿಯನ್ನು ತೊರೆಯುತ್ತಾನೆ. ಕನ್ನಗಿಯ ಬಳಿಬಂದಾಗ ಅವರಿಗೆ ಕಡುಬಡತನ. ಕನ್ನಗಿಯ ಚಿನ್ನದ ಕಾಲಂದುಗೆ ಒಂದನ್ನು ಅಕ್ಕಸಾಲಿಗನಲ್ಲಿ ಕೋವಲನ್ ಅಡ ಇಡುತ್ತಾನೆ. ಅದೇ ಸಮಯದಲ್ಲಿ ರಾಜನ ಮಗಳ ಕಾಲಂದುಗೆ ಅಪಹರಣವಾಗಿರುತ್ತದೆ. ಅದು ಕನ್ನಗಿಯ ಕಾಲಂದುಗೆಯ ಹಾಗೇ ಇರುತ್ತದೆ. ವಿಚಾರಣೆ ಇಲ್ಲದೆಯೇ ಕೋವಲನ್ ಕಳ್ಳನೆಂದು ಭಾವಿಸಿ ಅವನ ಶಿರಚ್ಛೇದ ಮಾಡಲಾಗುತ್ತದೆ. ವಿಷಯ ತಿಳಿದ ಕನ್ನಗಿ ಆಸ್ಥಾನದಲ್ಲಿ ಬಂದು ಗೋಳಾಡಿ ತನ್ನ ಇನ್ನೊಂದು ಕಾಲಂದುಗೆ ತೋರಿಸುತ್ತಾಳೆ. ಅದನ್ನು ಪರೀಕ್ಷಿಸಿ ನೋಡಿದಾಗ ಅದು ರಾಜಕುಮಾರಿಯದ್ದಲ್ಲವೆಂದು, ಕೋವಲನ್ ನಿರಪರಾಧಿ ಎಂದು ಸಾಬೀತಾಗುತ್ತದೆ. ಆದರೆ ಕೋವಲನ್ ಸತ್ತುಹೋಗಿರುತ್ತಾನೆ. ಕನ್ನಗಿ ತನ್ನ ಪಾತಿವ್ರತ್ಯ, ಸ್ವಾಮಿನಿಷ್ಟೆ ಮತ್ತು ಪತಿಭಕ್ತಿಯನ್ನು ಮೆರೆದಿದ್ದಾಳೆ.

Z : ಪಾಪ ಅಲ್ವಾ ? nice story.

ನಾನು : Very touchy too.ಅದಕ್ಕೇ ಹೇಳಿದ್ದು ಎಲ್ಲರೂ ಒಮ್ಮೆ ಹೋಗಿ ನೋಡಿ ಬನ್ನಿ ಅಂತ. ಸಿಕ್ಕಾಪಟ್ಟೆ ಚೆನ್ನಾಗಿದೆ ಜಾಗ.

ಸರಿ ಅಲ್ಲಿಂದ ಹೊರಟು ತಿರುನಲ್ಲಾರ್ ಗೆ ಬಂದೆವು. ಅಲ್ಲಿ Mr. ಶನೈಶ್ಚರ (not ಶನೇಶ್ವರ...ಅದು ತಪ್ಪು ಪದಬಳಕೆ) ಅವರ ದೇವಸ್ಥಾನವಿದೆ. ಜೊತೆಗೆ ದರ್ಭಾರಣ್ಯೇಶ್ವರ ಸ್ವಾಮಿ ದೇವಾಲಯವಿದೆ. ನಳ ಮಹಾರಾಜ ಶನಿಕಾಟ ತಡೆಯಲಾಗದೇ ಈ ಲಿಂಗದ ಹಿಂದುಗಡೆ ಬಚ್ಚಿಟ್ಟುಕೊಂಡನಂತೆ. ಅವನನ್ನು ಅಟ್ಟಿಸಿಕೊಂಡು ಬಂದ ಶನೈಶ್ಚರನಿಗೆ ಇಲ್ಲಿನ ಮಹಿಮೆ ಇಂದ ಈ ದೇವಾಲಯದ ಒಳಗೆ ಪ್ರವೇಶ ನೇ ಮಾಡಕ್ಕೆ ಆಗ್ಲಿಲ್ಲವಂತೆ. ಅದಕ್ಕೆ ಅವನು ಹೊರಪ್ರಾಕಾರದಲ್ಲಿಯೇ strand ಆಗಿಹೋದ.

Z : ಪಾಪ..

ನಾನು : ಯಾರು ?

Z : ನಳ.

ನಾನು :ಹೂಂ. ಈ ಲಿಂಗ ಮತ್ತು ಶನೈಶ್ಚರ ಸಿಕ್ಕಾಪಟ್ಟೆ powerful. ಇದು ನವಗ್ರಹ ದೇವಸ್ಥಾನಗಳಲ್ಲಿ ಒಂದು. ಈ ಲಿಂಗವನ್ನು ಬ್ರಹ್ಮ ಸ್ಥಾಪಿಸಿದ್ದು. ಜೊತೆಗೆ ಇಲ್ಲಿ ಬ್ರಹ್ಮದಂಡತೀರ್ಥ ಇದೆ. ಇದರಲ್ಲಿ ಮಿಂದರೆ ಸಕಲ ರೋಗಗಳೂ ನಿವಾರಣೆ ಆಗುತ್ತದಂತೆ. ಆದರೆ ಒಳಗೆ ಪ್ರವೇಶ ಇಲ್ಲ. ಜೊತೆಗೆ ಮಿಕ್ಕ ದೇವರುಗಳಿಗೆ ಒಂದೊಂದು ತೀರ್ಥವಿದೆ. ನಳಮಹರಾಜ ಕೂಡ ಒಂದು ತೀರ್ಥವನ್ನು ಕಟ್ಟಿಸಿದ್ದಾನೆ. ಅದನ್ನು ನಳ ತೀರ್ಥ ಎಂದು ಕರೆಯುತ್ತಾರೆ. ಇದು ಸಖತ್ ಬ್ಯುಸಿ ದೇವಸ್ಥಾನ. ಚೆನ್ನಾಗಿ ದರ್ಶನ ಆಯ್ತು. ಇಲ್ಲಿನ ದರ್ಭಾರಣ್ಯೇಶ್ವರ ಪಚ್ಚೆಲಿಂಗಕ್ಕೆ ವಿಶೇಷ ಪೂಜೆ ಇರುತ್ತದೆ. ಈ ಲಿಂಗವನ್ನ್ನು ತ್ಯಾಗರಾಜ ದೇವ ಎಂದೂ ಕರೆಯುತ್ತಾರೆ.

Z : i see.... ಆಮೇಲೆ ?

ನಾನು :ಇದನ್ನು ನೋಡಿಕೊಂಡು ನಾವು ಕುಂಭಕೋಣಕ್ಕೆ ಪ್ರಯಾಣ ಮಾಡಿದ್ವಿ. ದಾರಿಯಲ್ಲಿ ಬಸ್ಸಿನ ಲೈಟ್ ತೊಂದರೆ ಕೊಟ್ಟೂ...ಎಲ್ಲರೂ ಇಳಿದು ಪರೀಕ್ಷಿಸಿ, ಒಂದರ್ಧ ಘಂಟೆ ಕಾಲ ಬಸ್ ನಿಂತು ...ಎಲ್ಲಾ ಆಗಿ ಕುಂಭಕೋಣಮ್ ಮುಟ್ಟುವ ಹೊತ್ತಿಗೆ ರಾತ್ರಿ ಒಂಭತ್ತು. ಲಾಡ್ಜ್ ಮತ್ತೊಂದು ಭೂತಬಂಗಲೆ. ಬಿಸಿನೀರೂ ಇರದ, ನಿಜವಾದ ಭೂತ ಬಂಗಲೆ. ಈ ಸರ್ತಿ ನಮ್ಮ ರೂಮಿದ್ದಿದ್ದು ನಾಲ್ಕನೇ ಫ್ಲೋರು. As usual, no lift. no room boys. ಸಾಕುಬೇಕಾಗಿ ಹೋಯ್ತು ಲಗೇಜ್ ಸಾಗಿಸೋ ಅಷ್ಟರಲ್ಲಿ. ಊಟ ಮಾಡಿ ಮಲಗಿದ್ದಷ್ಟೇ ಗೊತ್ತು.

Z : ಫೋಟೋಸ್ ???

ನಾನು : ಸ್ಲೈಡ್ ಶೋ ಇಲ್ಲಿದೆ...ನೋಡಿ ಮಜಾ ಮಾಡಿ.


Monday, January 5, 2009

Journey to ಜಲೇಬಿನಾಡು- ಭಾಗ ೧

Z : what ?

ನಾನು : yes.

Z : ಎಲ್ಲಿದೆ ಜಲೇಬಿ ನಾಡು ?

ನಾನು : ತಮಿಳುನಾಡು ಮತ್ತು ಕೇರಳವನ್ನ ನಮ್ಮ ತಾತ ಮತ್ತು ನಮ್ಮ ಅಣ್ಣ (ಅಪ್ಪ) ಜಲೇಬಿ ನಾಡು ಅಂತ ಕರಿತಾರೆ.

Z : ಯಾಕೆ ?

ನಾನು : ತಮಿಳು ಮತ್ತು ಮಲಯಾಳಂ ಭಾಷೆಗಳ ಅಕ್ಷರ ಜಲೇಬಿ ಥರಾ ಇರತ್ತೆ ಅದಕ್ಕೆ.

Z : ವಾಆಆಆಆಆಆಆಆಆಆಆಆಆಹ್ ವಾಆಆಆಆಆಆಆಆಆಆಆಆಅಹ್ ವಾಆಆಆಆಆಆಅಹ್ !!!

ನಾನು : ಏನ್ ಬುದ್ಧಿ ಅಲ್ವಾ ತಾತನದ್ದು ?

Z : undoubtedly brilliant. :)

ನಾನು : Coming back, ನಾನು ಹಿಂದಿನ ಪೋಸ್ಟ್ ನಲ್ಲಿ ಹೇಳಿದ್ದ ಹಾಗೆ ನಾನು ಮತ್ತು ನಮ್ಮ ಕುಟುಂಬ ಹತ್ತು ದಿನಗಳ ದಕ್ಷಿಣ ಭಾರತದ ಪ್ರವಾಸಕ್ಕೆ (ಜಲೇಬಿ ನಾಡು from now on) ಹೋಗಿದ್ದೆವು. ಅದರ ಅನುಭವ ನ ನಿನಗೆ ಹೇಳಲೋ ಬೇಡವೋ ಅಂತ ಕವಡೆ ಹಾಕ್ಬೇಕು ಅಂತ ಇದ್ದೆ....ಆದ್ರೆ ಹೇಳದಿದ್ರೆ ನೀನು ಸುಮ್ನೆ ಬಿಡಲ್ಲ ಅಂತ ಹೇಳಕ್ಕೆ ಶುರು ಮಾಡ್ತಿನಿ.

Z : ಗುಡ್. ಈ ಥರ ಇರ್ಬೇಕು ನನ್ನ ಬಗ್ಗೆ ಭಯ ಭಕ್ತಿ.

ನಾನು : Shut up ok ? ನಿನ್ನ ಮೇಲೆ ಭಯ ಮೊದ್ಲೆ ಇಲ್ಲ, ಭಕ್ತಿ ಅಂತು ಒಂದು ಚೂರು ಇಲ್ಲ.

Z : ಮತ್ತೆ ?

ನಾನು : ಹಾಗೆ ಸುಮ್ನೆ ಹೇಳ್ತಿನಿ ಅಷ್ಟೆ.

Z : ಒಕೆ.

ನಾನು : ಶುರು ಮಾಡ್ಲಾ ?

Z :ದಯವಿಟ್ಟು.

ನಾನು : ಓಕೆ. ನಾವ್ಯಾಕೆ ಜಲೇಬಿ ನಾಡಿಗೆ ಹೋದೆವು ಅನ್ನೋದಕ್ಕೆ ಮೊದಲು ಕಾರಣ ಕೊಡ್ತಿನಿ.
  1. ಅಣ್ಣ ಅಮ್ಮ ತೀರ್ಥಯಾತ್ರೆ ಮಾಡ್ಬೇಕು ಅಂತ ಹಪಹಪಿಸ್ತಿದ್ರು. ಅಣ್ಣ ಹತ್ತು ದಿನ ನಿಜವಾಗಿಯೂ ತಮ್ಮ ಕೆಲಸ ಕಾರ್ಯ ಮರೆತುಬಿಡ್ತಿನಿ ಅಂತ ಹೇಳೋದನ್ನ ನಾವು ಟೆಸ್ಟ್ ಮಾಡಿ ನೋಡ್ಬೇಕಿತ್ತು. ಯಾಕಂದ್ರೆ, ಕಾರ್ಮಿಕರ ದಿನಾಚರಣೆ ಒಂದು ದಿನ ಬಿಟ್ಟು ಅವರು ಇನ್ಯಾವತ್ತು ಬೆಳಗ್ಗಿಂದ ಸಂಜೆಯವರೆಗೆ ಮನೆಯಲ್ಲಿ ನಮ್ಮ ಜೊತೆ ಇದ್ದವರಲ್ಲ.
  2. ನನಗೆ ಪಿಎಚ್.ಡಿ ಗೆ ಓದಿ ಓದಿ ಸುಸ್ತಾಗಿತ್ತು. ಒಂದು ಬ್ರೇಕ್ ಬೇಕಿತ್ತು.
  3. ಅಪರ್ಣಂಗೆ ಕಾಲೇಜಲ್ಲಿ ಕ್ರಿಸ್ಮಸ್ ಗೆ ರಜ ಸಿಕ್ಕೋ ಚಾನ್ಸಿತ್ತು.
ನಾನು : ಈ ಪ್ರಕಾರವಾಗಿ ನಾವು ಜಲೇಬಿನಾಡಿಗೆ ಹೋಗಬೇಕೆಂದು ನಿರ್ಧರಿಸಿದೆವು. ಒಂದು ತಿಂಗಳಿನ ಮುಂಚೆ Asian Travels ಎಂಬಲ್ಲಿ package tour ಗೆ ವ್ಯವಸ್ಥೆಯಾಯ್ತು. ನಮ್ಮ ಮನೆ ಎದುರು ಮನೆಯ ಸುಧಾ ಆಂಟಿ ಮತ್ತು ಅನಂತ್ ಅಂಕಲ್ ಸಹ ನಮ್ಮೊಂದಿಗೆ ಬರಲಿಚ್ಛಿಸಿ ಅವರೂ ಬುಕ್ ಮಾಡಿಸಿ ಸಿದ್ಧರಾಗತೊಡಗಿದರು.

Z :ಓಹೋ...ಆಮೇಲೆ ?

ನಾನು : ನಾನು ಓದು ಬರಹ ಕಷ್ಟ ಪಟ್ಟು ಮಾಡತೊಡಗಿದ್ದೆ.ಎಲ್ಲರೂ ನನ್ನ entrance exam ಮುಗಿಯುವುದನ್ನೇ ಕಾಯುತ್ತಿದ್ದರು. ಅದು ಇದ್ದದ್ದು December 21st ರಂದು. ನಾವು ಹೊರಡಬೇಕಿದ್ದಿದ್ದು December 25 ರಂದು.

ಅಣ್ಣ ಯಾವಾಗಲೂ " ನಿನ್ನ ಕೈಲಿ ಕ್ಯಾಮೆರಾ ಕೊಟ್ಟರೆ ನೀನು ಕುದುರೆ, ಕೋತಿ, ಕಾಗೆಗಳ ಫೋಟೋ ತೆಗಿತ್ಯಾ... ಫೋಟೋಪ್ರಾಣಿ ... ಕೊಡ್ಸಲ್ಲ ಹೋಗು " ಅಂತ ಹೇಳುತ್ತಲೇ ಇರ್ತಿದ್ರು.

Z : ಕರೆಕ್ಟ್. ನಿನ್ನ ಕೈಲಿ ಕ್ಯಾಮೆರಾ ಸಿಕ್ಕರೆ....

ನಾನು : shut up ok? ನೀನು ಉರ್ಸ್ಬೇಡ. ಅಣ್ಣ ಹೀಗೆ ಹೇಳುತ್ತಿದ್ದರೂ ನಾನು ಹಿರಣ್ಮಯಿ ಯ 2 megapixel camera ಲೇ ನನ್ನ ಎಲ್ಲ ಆಸೆಗಳನ್ನು ತೀರಿಸಿಕೊಳ್ಳುತ್ತಿದ್ದೆ. ನಾನು ಅಲ್ಲಿ ಫೋಟೋಸ್ ತೆಗೆಯಲು ಹಿರಣ್ಮಯಿಗೆ ಒಂದು ಹೊಸ ಮೆಮೋರಿ ಕಾರ್ಡ್ ಕೊಡಿಸಿ 2 GB ದು ಅಂತ ಕೇಳಿದೆ. ಅಣ್ಣ ಬೇಡಾ...ಒಂದು ಸಣ್ಣ ಕ್ಯಾಮೆರ ತಗೊಳ್ಳೋಣ ಅಂದರು. ನಾನಂದೆ ಸಣ್ಣ ಕ್ಯಾಮೆರಾ ಅಂದ್ರೆ ನನ್ನ ಇಂಟೆರೆಸ್ಟಿಗೆ ಸ್ವಲ್ಪ ಕಷ್ಟ ಆಗತ್ತೆ. ತಗೊಳ್ಳೋದು ತಗೋತಿವಿ, ಸ್ವಲ್ಪ ಜಾಸ್ತಿ ಇನ್ವೆಸ್ಟ್ ಮಾಡೋಣ ಅಂದೆ. ಸರಿ ಇಂಟರ್ನೆಟ್ಟಿನಲ್ಲಿ ಕ್ಯಾಮೆರಾಗಳ ಮೇಲೆ ನನ್ನ ರಿಸರ್ಚು ಶುರುವಾಯ್ತು.

Z : ಕರ್ಮಕಾಂಡ. ಆಮೇಲೆ ?

ನಾನು : ಪಿಕ್ಸೆಲ್ ಗಳು ಜಾಸ್ತಿ ಇದ್ದರೆ aperture ಮೇಲೆ ನನಗೆ ಸಮಾಧಾನವಿರಲಿಲ್ಲ, aperture ಗಳು ಚೆನ್ನಾಗಿದ್ದಿದ್ದರೆ ಬ್ಯಾಟೆರಿ ಲೈಫ್ ಕಡಿಮೆ. ಎರಡೂ ಚೆನ್ನಾಗಿದ್ದರೆ out of budget. ಸರಿ ಕಳೆದು ಕೂಡಿ ಗುಣಾಕಾರ ಭಾಗಾಕಾರ ಮಾಡಿ Sony cybershot 13.2 megapixel camera ತಗೊಳ್ಳೋಣ ಅಂತ ನಿರ್ಧರಿಸಿ, ಡಿಸೆಂಬರ್ ಹದಿನೆಂಟು ಸಾಯಂಕಾಲ ಶುಭಮುಹೂರ್ತದಲ್ಲಿ ನಾನು ಅಣ್ಣ ಕ್ಯಾಮೆರಾ ಕೊಳ್ಳಲು ಹೊರಟೇ ಬಿಟ್ಟೆವು. ಅಣ್ಣ ಕ್ಯಾಮೆರ ತಗೊಳ್ಳೋಣ ಅಂದಿದ್ದು ಅಮ್ಮನಿಗೆ ನಂಬಿಕೆಯೇ ಬರಲಿಲ್ಲ. ನಾವು ಹೊರಟಾಗ ಅಮ್ಮ ಮಾರ್ಮಿಕವಾಗಿ ನಕ್ಕರು. ಅಮ್ಮನ ಆ ನಗು ನೋಡಿ ನನಗೆ ಸಿಕ್ಕಾಪಟ್ಟೆ ಕೋಪ ಬಂತು. ಆದರೆ ಅಣ್ಣ ಕ್ಯಾಮೆರ ತಗೊಳ್ಳುವಲ್ಲಿ ಸೀರಿಯಸ್ಸಾಗಿದ್ದಾರೆ ಅಂತ ಗೊತ್ತಾಗಿದ್ದು ನಾವು ಗಾಂಧಿಬಜಾರಿನ GK Vale ಮುಂದೆ ನಿಂತಾಗಲೇ. ನಮಗೆ ಬೇಕಿದ್ದ ಮಾಡೆಲ್ ಸಿಗಲಿಲ್ಲ. ಸರಿ 100 ft ring road, Banashankari ಯಲ್ಲಿರುವ ಸೋನಿ ಶೋರೂಮ್ ಕಡೆಗೆ ಗಾಡಿ ತಿರುಗಿಸಿದೆವು. ಅಲ್ಲಿ ಹೋಗಿದ್ದೇ ನಾವು ನಮಗೇ ಬೇಕಿದ್ದ ಕ್ಯಾಮೆರ ಕೇಳಿದೆವು. ಅಲ್ಲಿಯೂ out of stock ಆಗಿದ್ದು ನನಗಂತೂ ಸಿಕ್ಕಾಪಟ್ಟೆ ಬೇಜಾರು ಆಯ್ತು.

Z :ಪಾಪ.

ನಾನು : ಆದರೆ ಅಲ್ಲಿ ನಮಗೆ Sony cyber shot digital SLR ಕ್ಯಾಮೆರಾ ಕಂಡಿತು. ನಾನು ಅದರ technical details ಎಲ್ಲ ಕೇಳಿದೆ.ಅಲ್ಲಿನ salesman "ಮೇಡಮ್ ನೀವು professional photographer ಆ? ಎಲ್ಲ ಥರದ detail ಗಳನ್ನು ಬಿಡಿಸಿ ಬಿಡಿಸಿ ಕೇಳುತ್ತಿದ್ದೀರಲ್ಲ ? " ಅಂದ. ನಾನು " ಇಲ್ಲ, Its my hobby. ನಾವು tour ಗೆ ಹೋಗ್ತಿದಿವಿ. ಗುಡಿ ಗೋಪುರ, ಅವುಗಳ ಆಕಾರ, ಶಿಲ್ಪ ಎಲ್ಲ zoom ಮಾಡಿ ತೆಗೆಯಬೇಕು. ನನ್ನ ರಿಸರ್ಚಿಗೆ ಅವಶ್ಯಕತೆ ಇದೆ " ಅಂದೆ. ಅವನು " ಇದು outdoor and indoor ಎರಡಕ್ಕೂ ಆಗತ್ತೆ ಮೇಡಮ್. ನಿಮ್ಮ taste ಗೆ ಸರಿಗಿದೆ. ನಾನು ನಿಮಗೆ ಈಗಲೆ ಕ್ಯಾಮೆರಾ ಕೊಡ್ತಿನಿ. ನೀವೆ experiment ಮಾಡಿ" ಅಂದ. ನಾನು ಪ್ರಯೋಗ ಪ್ರಾರಂಭಿಸಿಯೇ ಬಿಟ್ಟೆ. ಒಂದು ಘಂಟೆ experiment ಮಾಡಿ, ಎಲ್ಲಾ ಥರದ ಡೌಟುಗಳನ್ನು ಕೇಳಿ, clarify ಆದಮೇಲೆ camera ನನಗೆ ಒಪ್ಪಿಗೆ ಆಯ್ತು.

Z : ಎಲ್ಲಿ ಬಿಡ್ತ್ಯಾ ನಿನ್ನ ಬುದ್ಧಿ ? ಸರಿ ಆಮೇಲೆ ?

ನಾನು :ಎಲ್ಲಾ ಸರಿಗಿತ್ತು. ಆದರೆ ಬೆಲೆ ಸ್ವಲ್ಪ ಜಾಸ್ತಿ ಆಯ್ತು. ಅದಕ್ಕೆ ನಾನು 10.1 mega pixel ಸಾಕು ಅಂತ ನನಗೆ ನಾನೆ ಸಮಾಧಾನ ಹೇಳಿಕೊಳ್ಳತೊಡಗಿದ್ದೆ. ಅಣ್ಣ "ಇಲ್ಲ...ಇದನ್ನೇ ತಗೊಳ್ಳೋಣ" ಅಂದರು. ನಾನು ಪಿಳಿ ಪಿಳಿ ನೋಡಿದೆ.

Z : :-)


ನಾನು :ಅಣ್ಣ " ಇಲ್ಲ...ಇದಿರ್ಲಿ..ಮಾಡೋವಾಗ ಸರಿಯಾದ investment ಮಾಡಬೇಕು. ನಿನ್ನ ಕುದುರೆ, ಕತ್ತೆ, ಕೋತಿ, ಕಾಗೆ, ನಾಯಿಮರಿಗಳ ಮಧ್ಯ ಗುಡಿ ಗೋಪುರ, ಬೆಟ್ಟ ಗುಡ್ಡ ಮತ್ತು ಸಾಧ್ಯವಾದರೆ ನಮ್ಮನ್ನು ಸೇರಿಸು" ಅಂದರು.

Z : ತಾವೇನಂದಿರಿ ?

ನಾನು : ಓಕೆ ಅಂದೆ. ಗುರುವಾರ "ಛಾಯಾ" ಮನೆಗೆ ಬಂದಳು. Technical details ಗೆ ಇಲ್ಲಿ ಕ್ಲಿಕ್ಕಿಸಿ.

Z : ಎಲ್ಲ ವಸ್ತುಗಳಿಗೂ ಈ ನಾಮಕರಣ ಸಂಪ್ರದಾಯ ಅವಶ್ಯವೇ ಅಥವಾ ಅನಿವಾರ್ಯವೇ ?

ನಾನು : ಎರಡೂ.

Z : ಓಕೆ. ಮುಂದೆ ?

ನಾನು : ಛಾಯಾ ಬಂದಿದ್ದು ಹಿರಣ್ಮಯಿ ಗೆ naturally ಇಷ್ಟ ಆಗ್ಲಿಲ್ಲ. professional jealousy. Hang ಆಗಿ ಪ್ರಾಣ ತಿಂದಳು. ಸರಿ ನಾನು ಛಾಯಾ ನುಗ್ಗಲಾಗದ ಕಡೆ ವಿಶೇಷ ಚಿತ್ರಗಳನ್ನ ಮತ್ತು ವಿಚಿತ್ರ ಫೋಟೋಗಳನ್ನ ಹಿರಣ್ಮಯಿ ತೆಗೆಯಲಿ, ವಿಶೇಷ ಫೋಟೋಗಳನ್ನ ಛಾಯಾ ತೆಗೆಯಲಿ ಅಂತ ತೀರ್ಮಾನ ಮಾಡಿದ ಮೇಲೆ ಇವ್ರಿಬ್ರು ಜಗಳ ಆಡೋದನ್ನ ನಿಲ್ಲಿಸಿದ್ರು.

Z : ರಾಮ ರಾಮಾ....ಆಮೇಲೆ ?

ನಾನು : ಇನ್ನು ಎರಡು ದಿನಗಳಿಗೆ ನನ್ನ ಪರೀಕ್ಷೆ ಇದ್ದಿದ್ದುದರಿಂದ ಹೆಚ್ಚು ಪ್ರಯೋಗಗಳನ್ನ ಮಾಡಲಾಗಲಿಲ್ಲ. ಭಾನುವಾರ ಪರೀಕ್ಷೆ ಮುಗಿಸಿ ಮನೆಗೆ ಬಂದದ್ದೇ ಕೈಯಲ್ಲಿ ಕ್ಯಾಮೆರ ಹಿಡಿದು ಎಲ್ಲ ಮೋಡ್ ಗಳನ್ನು ಪ್ರಯೋಗ ಮಾಡಿದೆ. ಗೈಡ್ ಗಳು ಇರಲಿಲ್ಲವಾದ್ದರಿಂದ ಸ್ಥಳ ಪುರಾಣಗಳನ್ನು ಅಂತರ್ಜಾಲದಲ್ಲಿ ಸಂಗ್ರಹಿಸಿ ಬರೆದಿಟ್ಟುಕೊಂಡೆ. ಪ್ರತಿಯೊಂದು ದೇವಸ್ಥಾನದ ವಿಸ್ತೀರ್ಣ, ಮುಖ್ಯಾಂಶ, ಶಿಲ್ಪ ಕಲೆ, ಮುಖ್ಯ ದೇವರು, ಸ್ಥಳ ಪುರಾಣ, ಇವೆಲ್ಲವನ್ನು ಡೈರಿಯಲ್ಲಿ ನೋಟ್ ಮಾಡಿಕೊಂಡು, ಅಕಸ್ಮಾತ್ ನಾನು ಕಳೆದುಹೋದರೆ ಬೆಂಗಳೂರು ತಲುಪುವುದು ಹೇಗೆಂದು ಗುರುತುಹಾಕಿಕೊಂಡೆ. ಅದಕ್ಕೆ ಸರಿಯಾಗಿ ದಾವಣಗೆರೆಯಿಂದ ಅಜ್ಜಿ ಫೋನ್ ಮಾಡಿ, "ಅಪ್ಪ ಅಮ್ಮನ ಜೊತೆ ಘನವಾಗಿ ಬಿದ್ದಿರು. ಫೋಟೋ ತೆಗಿತಿನಿ ಅಂತ ಎಲ್ಲೆಲ್ಲೋ ಅಲೆದು ಕಳೆದು ಹೋಗ್ಬೇಡ. ನನಗಿರೋದು ನೀನೊಬ್ಬಳೆ ದೊಡ್ಡ ಹೆಣ್ಣು ಮೊಮ್ಮಗಳು. " ಅಂತ ಉಪದೇಶ ಬೇರೆ ಮಾಡಿದ್ರು.

Z : ಅದಕ್ಕೆ ತಾವೇನಂದ್ರಿ ?

ನಾನು : ಕಳೆದು ಹೋಗಿ ನಿನಗೆ tension ಕೊಡ್ಲಿಲ್ಲಾ ಅಂದ್ರೆ ನನ್ನ ಹೆಸರು ಲಕ್ಷ್ಮೀ ನೇ ಅಲ್ಲ ಅಂದೆ. ಅಜ್ಜಿ ಅದಕ್ಕೆ " ಥು ನಿನ್ನ " ಅಂತ ಹರಸಿದರು.

Z : ವಾಹ್ ವಾಹ್ ವಾಹ್ !

ನಾನು : thanks. ಶಾಪಿಂಗ್, ಪ್ಯಾಕಿಂಗ್ ಮತ್ತು ಬ್ಲಾಗಿಂಗ್ ಗಳಲ್ಲಿ ಮಿಕ್ಕ ದಿನಗಳು ಹೇಗೆ ಕಳೆದವೋ ಗೊತ್ತೇ ಆಗಲಿಲ್ಲ. ಅಂತೂ ಡಿಸೆಂಬರ್ ಇಪ್ಪತ್ತೈದನೆಯ ತಾರೀಖು ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ರೆಡಿಯಾಗಿ ಹೊರಟೆವು.

Z : ನಿಜ್ವಾಗ್ಲೂ ನೀನು ನಾಲ್ಕು ಘಂಟೆಗೆ ಎದ್ದೆಯಾ ? ಜೀವನದಲ್ಲಿ ಆ ಟೈಮ್ ನೋಡಿರಲಿಲ್ವಲ್ಲಾ ನೀನು !

ನಾನು : ಏನ್ ಮಾಡೋದು ! ಎದ್ದೆ. ನಿಜ್ವಾಗ್ಲೂ ಎದ್ದೆ.

Z : ಅದ್ಭುತ. ಆಮೇಲೆ ?

ನಾನು : ನಾವು ಹೊರಡುವಾಗ ಸೂರ್ಯ ಆಗ್ತಾನೆ ಹುಟ್ಟುತ್ತಿದ್ದ.ಆಶ್ಚರ್ಯಕರವಾಗಿ, ಆವತ್ತು ಏನೂ ಟ್ರಾಫಿಕ್ಕ್ ಇರಲಿಲ್ಲ. ನಾವು ಮಿನರ್ವಾ ಸರ್ಕಲ್ ನಲ್ಲಿ ಬಸ್ಸು ಹತ್ತಬೇಕಿತ್ತು. ಮಿನರ್ವ ಸರ್ಕಲ್ ಬೆಳಿಗ್ಗೆ ೬ ಘಂಟೆಗೆ ಹೇಗಿತ್ತಪ್ಪಾ ಅಂತ ನೋಡು.



Photo by chaaya.

Z : Oh my God !!!!!!!!!!!!

:-) ನೋಡ್ಬಿಡು.ಸಂತೋಷ ಆಶ್ಚರ್ಯ ಎರಡೂ ಪಟ್ಟುಬಿಡು.

Z : ಓಕೆ. ಮುಂದೆ ?

ನಾನು : ನಾವು ಬಂದು ಇಳಿದವರು ಯಾವ್ದೋ ಒಂದು ಹೈಟೆಕ್ ಬಸ್ ಬರತ್ತೆ ಅಂತ ಅಂದುಕೊಂಡಿದ್ದೆವು . ನೋಡಿದ್ರೆ ಬಂದಿದ್ದು ಕೂರಕ್ಕೆ ನೆಟ್ಟಗೆ ಜಾಗವಿಲ್ಲದ, ಕಾಲು ಚಾಚಿಕೊಳ್ಳಲು ಒದ್ದಾಡಬೇಕಾಗಿದ್ದ ಈ ಬಸ್ಸು.

Photo by chaaya.


ಸದ್ಯೋಜಾತನ ನೆನೆದು ಹೊರಟಾಯ್ತು...ಬೆಳಿಗ್ಗೆ ಏಳು ಗಂಟೆಗೆ.ಹೊಸೂರಲ್ಲಿ ಕನ್ನಡ ಮುಗಿದು ಜಲೇಬಿ ದರ್ಶನ ಶುರುವಾಯ್ತು. ಹೇಗೆ ಅಂದ್ರೆ, arrow, ಜಲೇಬಿ, ಮತ್ೆ ಕಿಲೋಮೀಟರ್ ನುಮ್ಬೆರ್ರು. ಈ ಜಲೇಬಿ ಏನ್ ಹೇಳ್ತಿದೆ ಅಂತನೇ ಗೊತ್ತಾಗ್ತಿರ್ಲಿಲ್ಲ. ಕನ್ನಡ ಇರ್ಲಿ...ಇಂಗ್ಲೀಷ್ ಕೂಡಾ ಕಾಣ್ಲಿಲ್ಲ ! ಡ್ರೈವರ್ ಪ್ರಾಯಶಃ ಅಭ್ಯಾಸ ಬಲದ ಮೇಲೆ ಗಾಡೀ ಓಡಿಸುತ್ತಿದ್ದ ಅನ್ಸತ್ತೆ. ಅಪರ್ಣ ದಾರಿಯಲ್ಲಿ ಕಂಡ ಕಂಡ ಗಿಡ ಮರಗಳ family, genus, species ಗಳನ್ನ guess ಮಾಡತೊಡಗಿದ್ದಳು. ಈಗಷ್ಟೇ ಬಯಾಲಜಿ ಓದ್ತಿದಾಳೆ...ಜೋಷು ಜೋರಾಗಿತ್ತು. ಅದಕ್ಕೆ ನಾನು ಅವಳಿಗೆ "ಗಿಡಮೂಲಿಕೆ" ಅಂತ ನಾಮಕರಣ ಮಾಡಿದೆ. ನಾನು ಕಂಡ ಕಂಡ ಬೆಟ್ಟಗುಡ್ಡಗಳ rock formation and structure ಬಗ್ಗೆ ಯೋಚ್ನೆ ಮಾಡ್ತಿದ್ದೆ. ಅದಕ್ಕೆ ಅವಳು ನನ್ನನ್ನ ಶಿಲಾಬಾಲಿಕೆ ನೀನು ಅಂದಳು.

Z : ನೀನ್ ಯಾವ್ dimension ನಲ್ಲಿ ಶಿಲಾಬಾಲಿಕೆ ನ ಹೋಲುತ್ತೀಯಾ ಅಂತ ?

ನಾನು :ಹೋಲಲ್ಲ ಅಂತ ನೇ ಹೆಸರಿಟ್ಟಳು ಅವಳು.

Z : ಆಮೇಲೆ ?

ನಾನು : ಮಧ್ಯಾಹ್ನ ತಿರುವಣ್ಣಾಮಲೈ ತಲುಪಿದೆವು. ಟ್ರಾವೆಲ್ಸ್ ನವರೇ ಅಡಿಗೆ ಮಾಡುತ್ತಿದ್ದರು. ಆದ್ದರಿಂದ ನಮಗೆ ಊಟದ ತೊಂದರೆ ಆಗ್ಲಿಲ್ಲ. ಮೊದಲ ದಿನದ ಊಟ ಇದು.


Photo by hiranmayi.

Z : yummmmmmm........................

ನಾನು :ಸಾಕು. ಊಟ ಸಕತ್ತಾಗಿತ್ತು. ಚಪ್ಪರಿಸಿಕೊಂಡು ಊಟ ಮಾಡಿದಮೇಲೆ ಲಾಡ್ಜಿಗೆ ಹೋದೆವು. ಶಾಕ್ ಕಾದಿತ್ತು.

Z : ಯಾಕೆ ?

ನಾನು :ಭೂತ ಬಂಗಲೆ ಥರ ಇತ್ತು ಅದು. ಎಲ್ಲಾ ವಸ್ತುಗಳ ಮೇಲೆ ಮಿನಿಮಮ್ ೩ ಇಂಚು ಧೂಳು. ಅಣ್ಣಾ ನೋ...ನಮ್ಮನ್ನು ಬೇರೆ ಊರುಗಳಿಗೆ ಕರೆದುಕೊಂಡು ಹೋದಾಗಲೆಲ್ಲಾ ಒಳ್ಳೊಳ್ಳೇ ಹೋಟೆಲ್ ಗಳಲ್ಲಿ ಇಳಿಸುತ್ತಿದ್ದರು.ನಮಗೆ ಇಂಥಾ ಹೋಟೆಲ್ಲುಗಳ ರೂಪುರೇಷೆಯೇ ಗೊತ್ತಿರಲಿಲ್ಲ. ನಮ್ಮ ರೂಮಿದ್ದಿದ್ದು ಮೂರನೇ ಫ್ಲೋರ್ ನಲ್ಲಿ.ಲಿಫ್ಟ್ ಇಲ್ಲ. ಲಗೇಜ್ ಹೇಗೆ ತಗೆದುಕೊಂಡು ಹೋಗುವುದು ? ರೂಮ್ ಬಾಯ್ ಗಳಿಲ್ಲ...ಅಣ್ಣನಿಗೆ ಬಲಗೈ ನೋವು ಬೇರೆ. ಅನಂತ್ ಅಂಕಲ್ ಗೆ ಮೊದಲೇ ಆಗ್ತಿರ್ಲಿಲ್ಲ. ಇನ್ನು ನಮ್ಮ ಬಗ್ಗೆ ಮಾತಾಡೋದೇ ಬೇಕಿಲ್ಲ. ..ನನಗೆ ಅಪರ್ಣನಿಗೆ ಮಾತೇ ಹೊರಡಲಿಲ್ಲ.

Z : ಕರೆಂಟ್ ಹೊಡೆದ ಕಾಗೆಗಳಾಗೋದ್ರಾ ?

ನಾನು :yes.

Z : good. ಆಮೇಲೆ ?

ನಾನು :Adjust ಮಾಡಿಕೊಳ್ಳದೇ ಬೇರೆ ದಾರಿ ಇರಲಿಲ್ಲ ಆದ್ದರಿಂದ ಅಣ್ಣ ಅಪರ್ಣ ಮತ್ತು ನಾನು ಭಾರದ ಲಗೇಜ್ ಹೊತ್ತೆವು. ಮಿಕ್ಕೋರು ಲೈಟ್ ಲಗೇಜ್ ನೋಡಿಕೊಂಡರು.

Z : ನಿಜ್ವಾಗ್ಲು ಭಾರ suitcase ಗಳನ್ನ ನೀನೆ ಹೊತ್ಕೊಂಡ್ಯಾ ?

ನಾನು :Silence I say. Don’t underestimate me like this !!!!

Z : Ok ok...sorry. ಆಮೇಲೆ ?

ನಾನು : ಬಂದು ಸೆಟಲ್ ಆದೆವು. ತಿರುವಣ್ಣಾಮಲೈ ಮುಖ್ಯ ರಸ್ತೆಯಲ್ಲಿ ಒಂದು ಗಸ್ತು ಹೊಡೆದೆವು. ಆಮೇಲೆ ರಮಣ ಮಹರ್ಷಿ ಆಶ್ರಮಕ್ಕೆ ಹೋದೆವು. ಅವರನ್ನು "sage of arunachala" ಅಂತಲೇ ಕರೆಯುವುದು. ಅರುಣಾಚಲೇಶ್ವರ ದೇವಸ್ಥಾನದಲ್ಲಿ ಪಾತಾಳ ಲಿಂಗೇಶ್ವರನ ಸನ್ನಿಧಿಯಲ್ಲಿ ಅವರಿಗೆ ಜ್ಞಾನೋದಯ ಆಯ್ತಂತೆ. ಆಮೇಲೆ ಅವರು ನೆಲೆಸಿದ ಸ್ಥಳ ಈಗ ಆಶ್ರಮ ಆಗಿದೆ. ಅಲ್ಲಿ ಈಶ್ವರನ ಪೂಜೆ ನಡೆಯುತ್ತೆ. ಏನ್ ಶಾಂತಿ ಏನ್ ಕಥೆ ! ಆಶ್ರಮ ಸಕತ್ತಾಗಿದೆ. ಹದಿನಾಲ್ಕು ಕಿಲೋಮೀಟರ್ ಪ್ರದಕ್ಷಿಣೆ ಬೇರೆ ಇದೆ. ಅದನ್ನ ನಾವು ಮಾಡಲಾಗಲಿಲ್ಲ. ಸ್ಕಂದ ಆಶ್ರಮ ಐದು ಘಂಟೆಗೆ ಮುಚ್ಚುತ್ತೆ. ಅರ್ಧ ಬೆಟ್ಟ ಹತ್ತಿ, ಸೂರ್ಯಾಸ್ತ ನೋಡಿ , "ನಾನು ಯಾರು " ಅನ್ನೋ ಪುಸ್ತಕ ಖರೀದಿಸಿ, ವಾಪಸ್ಸು ಬಂದೆವು. ರಾತ್ರಿ ಅರುಣಾಚಲ ದೇವಸ್ಥಾನಕ್ಕೆ ಹೋಗುವ ಟೈಮ್ ಗೆ ಕರೆಕ್ಟಾಗಿ ಕರೆಂಟ್ ಹೋಯ್ತು. ಅದರ ಭವ್ಯ ಶಿಲ್ಪ ಕಲೆ ನೋಡಲಾಗಲ್ವಲ್ಲಾ ಅಂತ ಎಲ್ಲರು ಲೊಚಗುಟ್ಟಿದರು. ನಾನು ಸೈಲೆಂಟಾಗಿ night shots in infra red mode on ಮಾಡಿದೆ.

Z : ಶಭಾಷ್ ! ಆಮೇಲೆ ?

ನಾನು : ನಾನು ಫೋಟೋ ಕ್ಲಿಕ್ಕಿಸಲು ಶುರು ಮಾಡಿದೆ. ಸದ್ಯೋಜಾತ ನನ್ನ interest ನೋಡಿ ದೇವಸ್ಥಾನದ ಅಧಿಕಾರಿಗಳಿಗೆ ಜನರೇಟರ್ ಆನ್ ಮಾಡುವ ಬುದ್ಧಿ ಕೊಟ್ಟ. ಲೈಟ್ ಆನ್ ಆಯ್ತು. ಬಿಂದಾಸಾಗಿ ಫೋಟೋ ತೆಗೆದೆ. ಗರ್ಭಗುಡಿಯಲ್ಲಿ ಹಿರಣ್ಮಯಿ, ಹೊರಗಡೆ ಛಾಯ ತಮ್ಮ ಚಾತುರ್ಯ ಮೆರೆದರು. ಅರುಣಾಚಲೇಶ್ವರ ದೇವರಂತೂ.....ಸೂಪರ್. ವರ್ಣಿಸಲು ಪದಗಳಿಲ್ಲ. Mrs. ಅರುಣಾಚಲೇಶ್ವರ ಸ್ವಲ್ಪ ಕಾಯ್ಸಿದ್ರು ದರ್ಶನ ಕೊಡಕ್ಕೆ. ಆದ್ರೆ ಅವ್ರು ತುಂಬಾ ಚೆನ್ನಾಗಿದಾರೆ.

Z : ಏನ್ ಕಥೆ ಈ ದೇವಸ್ಥಾನದ್ದು ?

ನಾನು :ದಯವಿಟ್ಟು ಗೂಗಲ್ಲಿಸು. Please google. :)

Z : ಆಹಾ....ಹೇಳೆ ಕಥೆ ನ ...

ನಾನು : ಹೆ ಹೆ...ಸರಿ. ಬಹಳ ಹಿಂದೆ, ಬ್ರಹ್ಮ ಮತ್ತು ವಿಷ್ಣು ಶಿವನ ಆದಿ ಮತ್ತು ಅಂತ್ಯ ಎರಡೂ ತಿಳಿಯಬೇಕೆಂದು ಬ್ರಹ್ಮ ಹಂಸ ರೂಪದಲ್ಲಿ ಶಿವನ ಆದಿಯನ್ನು, ವಿಷ್ಣು ಯಜ್ಞವರಾಹ ರೂಪದಲ್ಲಿ ಶಿವನ ಅಂತ್ಯವನ್ನು ಹುಡುಕಲು ಶುರು ಮಾಡೂತ್ತಾರೆ. ಆಗ ಶಿವನು ಜ್ಯೋತಿಯ ರೂಪ ತಾಳುತ್ತಾನೆ. ಇವರಿಬ್ಬರಿಗೂ confuse ಆಗತ್ತೆ. ಆಮೇಲೆ ಈಶ್ವರನನ್ನು ಅವರು ಮಾಡಿದ ತಪ್ಪಿಗೆ ಸಾರಿ ಕೇಳ್ಕೋತಾರೆ. ಸದ್ಯೋಜಾತ ಜ್ಯೋತಿ ರೂಪ ತಾಳಿದ ಸ್ಥಳವೇ ಅಣ್ಣಾಮಲೈ. ಈಗಲು ಬೆಳಗಿನ ಜಾವ ಸೂರ್ಯನ ಕಿರಣ ಆ ಬೆಟ್ಟದ ಮೇಲೆ ಬಿದ್ದಾಗ ಅದು ಬೆಂಕಿಯ ಥರಾ ನೇ ಕಾಣತ್ತೆ( ಹಾಗಂತ ಹೇಳ್ತಾರೆ). ಶಿವನು ಜಲೇಬಿನಾಡಿನಲ್ಲಿ ಪಂಚಭೂತಗಳ ರೂಪದಲ್ಲಿ ನೆಲೆಸಿದ್ದಾನೆ. ತಿರುವಣ್ಣಾಮಲೈ ನಲ್ಲಿ ಅರುಣಾಚಲೇಶ್ವರ ಅಗ್ನಿಯನ್ನು ಪ್ರತಿನಿಧಿಸುತ್ತದೆ.

Z : ಮಿಕ್ಕಿದ್ದು ?

ನಾನು : ಆಮೇಲೆ ಹೇಳುವೆ. ಈಗ ಇನ್ನೊಂದು ಕಥೆ ಇದೆ. ಅರುಣಗಿರಿನಾಥ ಎಂಬ ಸನ್ಯಾಸಿಯೊಬ್ಬರು ಅರುಣಾಚಲದಲ್ಲಿ ಹಿಂದೆ ಇದ್ದರು. ಮಹಾನ್ ಪವಾಡಪುರುಷರು. ಅಲ್ಲಿಯ ರಾಜ ತನಗೆ ದೇವಲೋಕದ ಪಾರಿಜಾತ ಬೇಕೆಂದು ಇವರನ್ನ ಕೇಳಿದರು. ಆಗ ಸನ್ಯಾಸಿಯು ತಮ್ಮ ಮಾನವ ಶರೀರ ಬಿಟ್ಟು ಗಿಳಿಯ ರೂಪ ಧರಿಸಿ ಸ್ವರ್ಗಕ್ಕೆ ಹಾರಿದರು. ಈ ಸನ್ಯಾಸಿಗೆ ಆಗದವರು ಇದೆ ಸರಿಯಾದ ಸಮಯವೆಂದು ಆ ದೇಹವನ್ನು ಸುಟ್ಟು ಹಾಕುತ್ತಾರೆ. ಮರಳಿ ಬಂದ ಅರುಣಗಿರಿನಾಥರಿಗೆ ಏನು ಮಾಡಬೇಕೆಂದು ತೋಚದೆ ಅವರು ಗಿಣಿಯಾಗಿಯೇ ಅರುಣಾಚಲೇಶ್ವರ ದೇವಸ್ಥಾನದ ಗೋಪುರದ ಮೇಲೆ ಕೂರುತ್ತಾರೆ. ಇದೇ ಗಿಳಿಗೋಪುರ. ನಾನು ಸಿಕ್ಕ ಸಿಕ್ಕವರನ್ನ " which is giligopuram ? " ಅಂತ ಕೇಳಿ ಕೇಳಿ ಕಡೆಗೂ ಅದರ ಫೋಟೋ ತೆಗೆಯುವಲ್ಲಿ ಯಶಸ್ವಿಯಾದೆ.



Z : good.

ನಾನು : Thanks.

ಈ ದೇವಸ್ಥಾನಕ್ಕೆ ಒಟ್ಟು ೯ ಗೋಪುರಗಳಿವೆ. ವಿಸ್ತೀರ್ಣ ೨೪ ಎಕರೆ. ರಾಜಗೋಪುರ ೨೧೪ ಅಡಿಗಳು. ದೇವಸ್ಥಾನ ಚೋಳರು ಕಟ್ಟಿಸಿದ್ದು. ಈ ಗೋಪುರಗಳನ್ನ ಕಟ್ಟಿಸಿದವರು ವಿಜಯನಗರದ ಅರಸರು. ಅಲ್ಲದೇ ತೇರುಗಳನ್ನು ಕೊಟ್ಟವರೂ ಅವರೇ. ಗೋಡೆಗಳ ಮೇಲೆ ಜಲೇಬಿ (ಮಲಯಾಳಮ್ ಮತ್ತು ತಮಿಳು) ಮತ್ತು ತೆಲುಗು ಶಾಸನಗಳನ್ನು ಕಾಣಬಹುದು.ಕೆಳಗಿರುವ ಫೋಟೋ ರಾಜಗೋಪುರದ್ದು...infra red ನಲ್ಲಿ.



Z : ಅಬ್ಬಾ....

ನಾನು :Its a magnificent temple. ನನಗಂತೂ ಸಖತ್ ಸಂತೋಷ ಆಯ್ತು. ಹಾಗೆ ಬರ್ತಾ ಶಾಪಿಂಗ್ ಮಾಡಣ ಅಂದುಕೊಂಡು ಅಣ್ಣ ಮತ್ತು ಅಂಕಲ್ ನ ಹುಡುಕಿದರೆ ಇಬ್ಬರೂ ನಾಪತ್ತೆ !!

Z : ಹೆಹೆಹೆಹೆ...ಸರೀಗ್ ಮಾಡಿದಾರೆ.

ನಾನು : ಆಮೇಲೆ ಅವರು ನಮ್ಮನ್ನು ಲಾಡ್ಜ್ ಹತ್ತಿರ ಕಾಯುತ್ತಿದ್ದರು. ನಾವು ಬಂದು ಆ ಭೂತ ಬಂಗಲೆಯಲ್ಲಿ ಕಷ್ಟಪಟ್ಟು ನಿದ್ದೆ ಮಾಡಿದೆವು. ತಿರುವಣ್ಣಾಮಲೈ ಚಿತ್ರಗಳ ಸ್ಲೈಡ್ ಶೋ ಕೆಳಗಿದೆ. ಅಕಸ್ಮಾತ್ play ಆಗ್ಲಿಲ್ಲ ಅಂದರೆ ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ.



Thursday, January 1, 2009

Happy Birthday Z !

ನಾನು : Happy birthday to you.......

Z : :-) :-)

ನಾನು : Happy Birthday to you ....

Z : :-) :-) :-)

ನಾನು : Happy Birthday to you dear Z.................

Z : :-) :-) :-):-) :-) :-)

ನಾನು : Happy birthday to you !!!!!!!!!!!!!!!!!!!!

Z : :-) :-) :-):-) :-) :-):-) :-) :-):-) :-) :-):-) :-) :-)

ನಾನು : ತಾವು ಕಿಸ್ದಿದ್ದು ಮುಗ್ದಿದ್ದ್ರೆ thank you ಅಂತ ಅಂದು ಪುಣ್ಯ ಕಟ್ಟಿಕೊಳ್ಳಿ.

Z : Thank you Thank you Thank you !!!!!!!!!!!!!!!!

ನಾನು : Welcome.

Z : ನನಗಂತೂ ಸಖತ್ ಖುಶಿಯಾಗಿದೆ....

ನಾನು : ಏನು ಪುರುಷಾರ್ಥಕ್ಕೆ ಅಂತ ವಿವರಿಸುವಂಥವರಾಗಿ.

Z : ನಿನ್ನ ನಾವೇಕೆ ಹೀಗೆ ಗಿಂತ ನನ್ನ ಬ್ಲಾಗೇ ಜಾಸ್ತಿ ಫೇಮಸ್ಸಾಗಿರೋದು.

ನಾನು : ಏನಿಲ್ಲ...ನನ್ನ ಬ್ಲಾಗೇ ಜಾಸ್ತಿ ಫೇಮಸ್ಸು.

Z : ಆಹ...Stat counter statistics sample ನ ತೋರಿಸಲಾ ? ನಿನ್ನ ಬ್ಲಾಗ್ ಗಿಂತ ನನ್ನ ಬ್ಲಾಗ್ ಗೆ 1500 hits ಜಾಸ್ತಿ ಇದೆ.

ನಾನು : ಅದಕ್ಕೆ ?

Z : ನಾನ್ ಜಾಸ್ತಿ ಫೇಮಸ್ಸು.

ನಾನು : ಸರಿ. ಬ್ಲಾಗ್ ಪ್ರಪಂಚಕ್ಕೆ ಬಂದು ಒಂದು ವರ್ಷವಾದ ಸಂತೋಷನ ಆಚರಿಸ್ಕೋತಿದ್ಯಾ...ಸಂತೋಷ ಪಡು. I am very happy for you. ಇವತ್ತ್ ನಿನ್ನ ಕಾಲು ಎಳಿಯಲ್ಲ.

Z : ಈ ತರಹ ಸಡನ್ನಾಗಿ ನೀನು ಭಾವನೆ ಗೀವನೆ ಎಲ್ಲಾ ತೋರ್ಸ್ಬೇಡ. ನನಗೆ ಶಾಕ್ ಆಗತ್ತೆ.

ನಾನು : ಅಲ್ಲಾ...ನಾನು ನನ್ನ ಥರ ಇದ್ದರೆ "ಭಾವನೆ ನೇ ಇಲ್ದೆ ಇರೋ hopeless fellow " ಅಂತ ಬೈತ್ಯಾ...ಭಾವನೆ ತೋರ್ಸಿದರೂನೂ ಬೈತಿಯಾ...It is so difficult to please you !

Z : ಮತ್ತೆ ? ಒಂದು ವರ್ಷದಿಂದ ನನ್ನನ್ನ ಎಷ್ಟು ಗೋಳಿಕೊಂಡಿದ್ಯಾ. Today is my day.

ನಾನು : ನನ್ನ ಮೇಲೆ ನ್ಯೂಟನ್ನಿನ ಮೂರನೆಯ ನಿಯಮದ ಪ್ರಯೋಗ ನಾ?

Z : ನೀನು ಎಷ್ಟ್ ಜನರ ಮೇಲೆ ಈಥರ ರಿಸರ್ಚ್ ಮಾಡಿಲ್ಲ ? ಈಗ ನಿನ್ನ ಬಾರಿ.

ನಾನು : correction. ನಾನು ಜನಗಳ ಮೇಲೆ ರಿಸರ್ಚ್ ಮಾಡಿಲ್ಲ...ವಸ್ತುಗಳ ಮೇಲೆ ರಿಸರ್ಚ್ ಮಾಡಿದಿನಿ.

Z : ಮೌನದಲ್ಲಿದ್ದಾಗ ಮನುಷ್ಯರನ್ನು ಬಿಡ್ಲಿಲ್ಲವಲ್ಲಾ....

ನಾನು : oh yes...ಆದ್ರೂ...

Z : ಅವೆಲ್ಲಾ ಇಲ್ಲಾ...ಇವತ್ತ್ ನಾನ್ ಮಾತಾಡ್ತಿನಿ. ನೀನು ಕೇಳಿಸಿಕೋ. ಅಷ್ಟೆ.

ನಾನು : ಅಪ್ಪಣೆ.

Z : ಹೋದ ವರ್ಷ ಡಿಸಂಬರ್ 31ನೇ ತಾರೀಖು head ruled ಅವರು ನಾವೇಕೆ ಹೀಗೆ ಬ್ಲಾಗ್ ನಲ್ಲಿ ಒಂದು ಪೋಸ್ಟನ್ನು ಹಾಕುವುದರಲ್ಲಿ ಬ್ಯುಸಿ ಆಗಿದ್ದರು. Simultaneously ಯಾಹೂ ಲಿ ಒಂದು conference ಮತ್ತು ಇನ್ನು ಕೆಲವು ಬ್ಲಾಗ್ ಗಳ ಓದೂ ಸಾಗಿತ್ತು. ನಾನು ಸುಮ್ನೆ, ಹಾಗೆ...with no specific intentions ಒಂದು ಫೋನ್ ಮಾಡಿದೆ. ಯಥಾ ಪ್ರಕಾರ ಇವರು ತಮ್ಮ ಕಥೆಯನ್ನು ಹೇಳಿಕೊಳ್ಳಲು ಶುರು ಮಾಡಿದರು. ಆವಾಗ ಅಪ್ಪಿ ತಪ್ಪಿ loudspeaker on ಆಗಿದ್ದರ ಫಲವೇ ಈ ಬ್ಲಾಗು.

ನಾನು : ಸತ್ಯ ಹರಿಶ್ಚಂದ್ರಿ ! Let me tell the rest of the story. ಪಾಪ, ಓದುಗ (actually ಕೇಳುಗ) ಮಹಾಶಯರಿಗೆ ಅನುಮಾನ ಇರತ್ತೆ...ಇಂಥಾ ಐಡಿಯಾಗಳೆಲ್ಲ ಹೇಗೆ ಹೊಳಿಯತ್ವೇ ಅಂತ...ನಿಜ ಹೇಳ್ತಿದಿನಿ ಕೇಳಿಸಿಕೊಂಡುಬಿಡಿ ಎಲ್ಲಾರು...ಇದು ಇವಳಿಗೆ ಅನಿಸಿದ್ದಲ್ಲ...ನನಗೆ ತೋಚಿದ್ದು.

Z : ಮಾತಾಡ್ಬೇಡ ಅಂತ ಹೇಳಿರ್ಲಿಲ್ಲ!

ನಾನು : ಇನ್ನು ತಾವು ಮುಂದುವರ್ಸಿ. ನಮ್ಮ ಮಾತು ಆಯ್ತು.

Z : good. ಆಮೇಲೆ, ಇದನ್ನ ಜನಕ್ಕೆ ಹೇಳೋದೋ ಬೇಡ್ವೋ ಅಂತೆಲ್ಲ ಮೇಡಮ್ ಅವರು ಒಂದು ಹತ್ತು ಲಕ್ಷ ಸರ್ತಿ ಯೋಚ್ನೆ ಮಾಡಿ, ಅರ್ಧ ರಾತ್ರಿ ಲಿ conference ನಲ್ಲಿ ಈ ಬ್ಲಾಗಿನ ಬಗ್ಗೆ ಎಲ್ಲರಿಗೂ ತಿಳಿಯಪಡಿಸಿ,ಒಂದೆರಡ್ಮೂರು ಚಪ್ಪಾಳೆಗಳ ಸ್ಮೈಲಿಯನ್ನು ಗಿಟ್ಟಿಸಿಕೊಂಡರು. ಆಮೇಲೆ ಇವರಿಗೆ ಸಡನ್ನಾಗಿ ಬ್ಲಾಗನ್ನು ಡಿಲೀಟ್ ಮಾಡುವ ಮನಸ್ಸಾಗಿ " ಡಿಲೀಟ್ ಮಾಡಲಾ ? " ಅಂತ ಗುರುಸ್ವರೂಪ ಅರುಣ್ ಅವರಿಗೆ ಕೇಳಲು ಅವರು " ಡಿಲೀಟ್ ಮಾಡಿದ್ರೆ ನನ್ನ ಜೊತೆ ಮಾತಾಡ್ಬೇಡಾ ನೀನು " ಅಂತ ಬೈಸಿಕೊಂಡ ಮೇಲೆ ಸಂತೃಪ್ತರಾಗಿ ಆ ಯೋಚನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟರು. ಆಮೇಲೆ ಪ್ರತಿ ಸಲ ಬ್ಲಾಗ್ ಡಿಲೀಟ್ ಮಾಡಲು ಹೋದಾಗಲೂ ಕಮೆಂಟ್ ಗಳ ಸಂಖ್ಯೆ ಮತ್ತು hits ಏರು ಮುಖ ಮಾಡುತ್ತಿದ್ದುದನ್ನ ಕಂಡು ತೆಪ್ಪಗಾಗುತ್ತಿದ್ದರು.

ನಾನು : ನಾ...

Z : ಶ್!!!!!!!!!! ನನ್ನ ಮಾತು ಮುಗಿದಿಲ್ಲ ಇನ್ನು.

ಇದಾದ ಆರು ತಿಂಗಳಿಗೆ ಮೇಡಮ್ ಅವರಿಗೆ ನನ್ನ ಜೊತೆಯಲ್ಲಿ ಮಾತನ್ನು loudspeaker mode ನಲ್ಲಿ ನಡೆಸುತ್ತಿದ್ದುದರ ದೆಸೆಯಿಂದ ಸ್ನೇಹಿತರು exponential rate ನಲ್ಲಿ ಹೆಚ್ಚಾದರು. ನಮ್ಮ ಮಾತು ಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದುದರ ಪರಿಣಾಮ, ಒಂಭತ್ತು ತಿಂಗಳಿಗೆ ಐವತ್ತು ಪೋಸ್ಟ್ ಗಳನ್ನ ಈ ಬ್ಲಾಗು ಕಂಡಿತು. [ನಾವೇಕೆ ಹೀಗೆ ಬರಿ ಇಪ್ಪತ್ನಾಲ್ಕು after one year !!!! yahoooooo!!!!!!!!!!!!!!!!!!!!!]

ನಾನು : ಅ..

Z : ಚುಪ್ ! ಬಟ್ಟೆ ಕಟ್ಟುಬಿಡ್ತಿನಿ ನೀನು ಒಂದಕ್ಷರ ಮಾತಾಡಿದರೆ !

ನಾನ್ ಎಲ್ಲಿದ್ದೆ ಕಥೆ ಲಿ ? ಹಾಂ...ಐವತ್ತು ಪೋಸ್ಟು. ಸಿಕ್ಕಾಪಟ್ಟೆ ಮಾತಾಗೋಯ್ತು ಅಂತ ಮೇಡಮ್ ಅವರಿಗೆ ಅನ್ನಿಸಿ ಅವರು ಮೌನದ ರಿಸರ್ಚು ಶುರು ಮಾಡಿದರು. ಆಗಲೂ ಸಹ ಕಮೆಂಟುಗಳು, hitsಗಳನ್ನು ಕಂಡು ಇವರಿಗೇ ಅಯ್ಯೋ ಪಾಪ ಅನ್ನಿಸಿ, ಒಂದು ಫೇಸ್ ಮುಗಿದ ಮೇಲೆ ಮಾತಾಡಲು ನಿರ್ಧರಿಸಿದರು. ಇಲ್ಲಾಂದಿದ್ದ್ರೆ...ಇದು ವರ್ಗು silent mode ನಲ್ಲಿ ಇರ್ತಿತ್ತು ಬ್ಲಾಗು. ನಿಮ್ಮ ಪ್ರೋತ್ಸಾಹಕ್ಕೆ ಸಿಕ್ಕ್ ಸಿಕ್ಕಾಪಟ್ಟೆ ಧನ್ಯವಾದ.

ಸರಿ...ಹೋಗ್ಲಿ...ಈಗ ನೀನು ಮಾತಾಡು.

ನಾನು : ಅಬ್ಬಾ ಸದ್ಯ ! ಓದುಗ ಬಂಧುಗಳೇ...Z ಬಹಳ ನೀಟಾಗಿ ಸತ್ಯಾನೆಲ್ಲ ಚಾ ಚು ತಪ್ಪದೇ ನಿಮಗೆ ತಿಳಿಸಿದ್ದಾಳೆ.ನನ್ನದು ಡಿಟ್ಟೋ ನೇ. ನಾನು ಕೂಡಾ ನಿಮಗೆ ಸಿಕ್ಕ್ ಸಿಕ್ಕಾಪಟ್ಟೆ ಧನ್ಯವಾದ ಹೇಳ್ತಿನಿ. ಈ ನಮ್ಮ ಬ್ಲಾಗ್ ಯಶಸ್ವಿಯಾಗುವುದರಲ್ಲಿ ನಮ್ಮ ಮಾತುಕತೆಗಿಂತಾ ನಿಮ್ಮ ಭಾಗವಹಿಸುವಿಕೆ ಹೆಚ್ಚು ಪಾತ್ರ ವಹಿಸಿದೆ. [ಸಿಕ್ಕಾಪಟ್ಟೇ ದೊಡ್ಡ್ dialogue ಅಲ್ವಾ ? ಇರ್ಲಿ...] ನೀವು ಇನ್ನು ಮುಂದೇನೂ ಇದೇ ರೀತಿ ನಮಗೆ ಪ್ರೋತ್ಸಾಹ ಕೊಡ್ತೀರಾ ಅಂತ ಪಾಪ Z ಸ್ವಲ್ಪ ಜಾಸ್ತಿ ನೇ ನಂಬಿಕೊಂಡಿದ್ದಾಳೆ. ನಾನೂ ನಂಬಿದಿನಿ. ಹೊಸ ವರ್ಷದ ಆಚರಣೆ ಮಾಡದ ನಾನು ಇನ್ನು ಮುಂದೆ ಪ್ರತಿ so called ಹೊಸ ವರ್ಷ ಇವಳಿಗೆ wish ಮಾಡುವ ಹಾಗಾಗಿದೆ ! ಈ ಬ್ಲಾಗು ಖಂಡಿತಾ ಹೊಸ ವರ್ಷದ ಸಂಕಲ್ಪದ ಆಗಿರ್ಲಿಲ್ಲ ...It just happened. ಅಷ್ಟೆ.

Thanks for all the support, guidance and everything.

[ನನ್ನ ಆಪ್ತ ಗೆಳೆಯರ ಬಳಗಕ್ಕೆ ಈಗ ನಾನು ಬೆಂಗಳೂರಿನಲ್ಲಿಲ್ಲ ಅನ್ನುವುದು ಗೊತ್ತು. ಈಗ ನಾನು ಹತ್ತು ದಿನದ ದಕ್ಷಿಣ ಭಾರತ ಪ್ರವಾಸದಲ್ಲಿದ್ದೇನೆ. ಆದರೂ ಈ ಪೋಸ್ಟ್ ಹೇಗೆ ಹಾಕಿದೆ ಅಂತ ತಲೆ ಕೆಡಿಸಿಕೊಳ್ಳಬೇಡಿ. This is called scheduled posting. ಬ್ಲಾಗರ್ ನಲ್ಲಿ ಪೋಸ್ಟ್ ರಚಿಸಿ, ಡೇಟ್ ಸೆಟ್ ಮಾಡಿ ಆ ದಿನ ಪೊಸ್ಟ್ ಪ್ರಕಟವಾಗುವಂತೆ ಮಾಡಬಹುದು. ನಾನು ಮಾಡಿರುವುದು ಅದನ್ನೇ. :-)

ನಾನು ಬರುವುದು ಇನ್ನು ಎರಡು ಮೂರು ದಿನ ಆಗತ್ತೆ. ಆಮೇಲೆ ದೊಓಓಓಓಓಓಓಡ್ಡ ಪ್ರವಾಸ ಕಥನ ನಿಮ್ ಮುಂದೆ ಬರತ್ತೆ. ಅಲ್ಲಿ ವರೆಗೂ ನಿಮಗೆ ಬೇಜಾರ್ ಆಗತ್ತೆ ಅನ್ನೋದಾದ್ರೆ ನನ್ನ ಹಳೆಯ ಪೋಸ್ಟುಗಳ ಕಡೆ ಸ್ವಲ್ಪ ದೃಷ್ಟಿ ಬೀರಿ :) ಕಮೆಂಟ್ ಮಾಡೋದನ್ನ ಮರಿಬೇಡಿ. :-) :-)


Will see you all very soon. Before I forget, I wish you all a very happy, prosperous and peaceful new year.]

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...