Sunday, November 30, 2008

Are we Republic anymore ????????

ನಾನು : ಒಬ್ಬಳೇ ಹೋಗ್ತಿಯಾ ಅಂತ ಕೇಳಿದರು ಅಮ್ಮ. ಜೀವನದಲ್ಲಿ ಮೊದಲನೇ ಸರ್ತಿ ಮನೆ ಬಿಟ್ಟು ಹೊರಗೆ ಹೋಗ್ತಿರೋ ಹಾಗೆ.

Z : ಇನ್ನೇನ್ ಮತ್ತೆ. ವಿದ್ಯಮಾನಗಳು, ವಾರ್ತೆಗಳಿಂದ ಏನು ಕಡಿಮೆ ಗಾಬ್ರಿ ಆಗಿರತ್ತ ? ನೀನೇನಂದೆ ?

ನಾನು : ಆಗಿದ್ದು ಇಷ್ಟು. ನಾನು ಕಂಪನಿಯಿಂದ ಕಳಿಸಬೇಕಿದ್ದ ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಸೆಲೆಕ್ಟ್ ಮಾಡಲು ಜಯನಗರಕ್ಕೆ ಹೋಗಬೇಕಿತ್ತು. ಹೊರಗೆ ಭಯಂಕರ (ನನಗೆ ಮಾತ್ರ) ಚಳಿ. ಆದ್ರೆ I had to go.

ಅಮ್ಮ : ಅಣ್ಣನಿಗೆ ಫೋನ್ ಮಾಡು. ಕಾರ್ ನಲ್ಲಿ ಹೋಗು. ಒಬ್ಬೊಬ್ಬ್ಳೇ ಅಲಿಬೇಡಾ. ಪ್ಲೀಸ್.

ನಾನು : ಯಾಕೆ ?

ಅಮ್ಮ: ನೆಕ್ಸ್ಟ್ ಟಾರ್ಗೆಟ್ಟ್ ಬೆಂಗಳೂರು...

ನಾನು : ಶುಭ ನುಡಿ.

ಅಮ್ಮ: ಹೇಗ್ ನುಡ್ಯಕ್ಕಾಗತ್ತೆ ? ನಿಂಗೇನ್ ಗೊತ್ತು ನಮ್ ಯೋಚ್ನೆ ?

ನಾನು : ಯೋಚ್ನೆ ಮಾಡ್ಬೇಡ. ನಿನಗೆ ತೃಪ್ತಿ ಆಗತ್ತೆ ಅಂದ್ರೆ ಹತ್ತ್ ಹತ್ತ್ ನಿಮಿಷಕ್ಕೂ ಫೋನ್ ಮಾಡ್ಲಾ ?

ಅಮ್ಮ: ಅವೆಲ್ಲಾ ಬೇಡ. ನನಗೆ ಧೈರ್ಯ ಇದೆ. ಆದ್ರೂ ಈ ಚಳಿ ಲಿ ಹೋಗ್ಬೇಕಾ ?

ನಾನು : ಸಿಯಾಚಿನ್ ಗ್ಲೇಸಿಯರ್ ನಲ್ಲಿ ಟೆಂಪೆರೇಚರ್ರು ಮೈನಸ್ ೩೦ ಇರತ್ತೆ. ಅಲ್ಲಿ ನಮ್ಮ ವೀರ ಯೋಧರು ಬದುಕ್ಕೊಂಡು ದೇಶ ಕಾಯ್ತಿಲ್ವಾ ಇಲ್ಲೇನ್ ಚಳಿ ಮಹಾ..ನಾನ್ ಹೋಗ್ಬರ್ತಿನಿ.

ಅಮ್ಮ : ಹಿಂಗೆಲ್ಲಾ ಹೇಳಿದ್ರೆ ನಾನ್ ನಿನ್ನ ಕಳ್ಸ್ತಿನಿ ಅಂತ ಅಂದುಕೊಂಡಿದ್ಯ ?ಪ್ಲೀಸ್ ಸ್ವಲ್ಪ ದಿನ ಮನೇಲಿ ಇರ್ಬಾರ್ದ ?

ನಾನು : ಏನಾಗಲ್ಲಮ್ಮ...ಹೆದ್ರುಕೋಬೇಡ, ಪ್ಲೀಸ್ !

ಅಮ್ಮ: ಸರಿ ಏನಾದ್ರೂ ಮಾಡ್ಕೋ.

Z : ರಾಮ !

ನಾನು : ಆವಾಗ ಹಾಗ್ ಹೇಳಿ ಮನೆಯಿಂದ ಹೊರಗ್ ಬರೋದೇನೋ ಬಂದುಬಿಟ್ಟೆ. ಆದ್ರೆ ಬಂದ್ ಮೇಲೆ ಒಳಗೆ ಒಂಥರಾ ಭಯ ಶುರುವಾಯ್ತು. ಜಯನಗರದಲ್ಲಿ ನಾನು ಬಸ್ ಸ್ಟಾಪ್ ನಲ್ಲಿರೋವಾಗ ಸಡನ್ನಾಗಿ ಯಾರಾದ್ರು ಗುಂಡು ಹಾರಿಸಿಬಿಟ್ಟರೆ ? ಬಸ್ ನಲ್ಲೇ ಯಾರಾದ್ರೂ ಏನಾದ್ರು ಮಾಡಿಬಿಟ್ಟರೆ ? ಕಾಂಪ್ಲೆಕ್ಸ್ ಬ್ಲಾಸ್ಟ್ ಆದರೆ ? ಏನಿದು ಕ್ಷಣ ಕ್ಷಣಕ್ಕೂ ಇಷ್ಟೋಂದು uncertainty ? ಎಲೆಕ್ಟ್ರಾನ್ ( electron) ಜೀವನ ವಾಸಿ ಅನ್ನಿಸ್ತು ನನಗೆ ನನ್ನ ಜೀವನ compare ಮಾಡಿದ್ರೆ.

Z : ನಿಜ.

ನಾನು : ಮುಂಬೈ ನಲ್ಲಿ ನಡೆದ ಆ ಮಾರಣ ಹೋಮದ ಶಾಕ್ ಇಂದ ನಾನಂತೂ ಇನ್ನೂ ಹೊರಬಂದಿಲ್ಲ. ಅಲ್ಲಾ...ನಮ್ಮ ದೇಶಕ್ಕೆ ಹೀಗೂ ಒಂದು ದಾಳಿ ನಡೆಯಲಿದೆ ಅಂತ ಕನಸಿನಲ್ಲೂ ಎಣಿಸಿರಲಿಲ್ಲ. ಭಾರತದ ಪ್ರತಿಷ್ಟೆ, ಗೌರವ ಹಾಗೂ ಪ್ರೀತಿಪಾತ್ರವಾದ ಮುಂಬೈಯ ಮೇಲೆ ಇಂತಹಾ ಧಾಳಿಯೇ ? ಗೇಟ್ ವೇ ಆಫ್ ಇಂಡಿಯಾ ಭಯೋತ್ಪಾದಕರಿಗೆ ಹೆಬ್ಬಾಗಿಲಾಯ್ತೆ ?

Z : ಅನ್ಯಾಯ ಇದು. ಅಲ್ಲಾ...ಈ ಘಟನೆಯ ಉದ್ದೇಶ ಏನೂ ಅಂತ ?

ನಾನು : ಉದ್ದೇಷ ಅಸ್ಪಷ್ಟ . ರಾಜಕೀಯವೋ, ಮ(ದಾ)ತಾಂಧತೆಯೋ, ಜೆಹಾದ್ ಓ, ಭಯೋತ್ಪಾದನೆಯೋ, ಏನೋ ಎಂತೋ....

Z : ಆದ್ರೂ...massive attack .

ನಾನು : ಹೂ ಮತ್ತೆ. If they so much wanted to grab the world's attention, was there no way other than mass destruction ?


Z : ಹಾಗಲ್ಲ head ruled, ಇಂತಹ ಜನಕ್ಕೆ ಒಳ್ಳೇದು ಕೆಟ್ಟದ್ದು ಅನ್ನೋ ಪರಿಲಕ್ಪನೆ ಸರಿ ಇಲ್ಲ ಅನ್ನಿಸತ್ತೆ. fundamental error ಇದು.

ನಾನು : ಇರ್ಬಹುದು. ಆದ್ರೆ ಇಲ್ಲಿ ನಮ್ಮ ತಪ್ಪು ಹೆಚ್ಚಿದೆ .

Z : how can you make a statement like this ?

ನಾನು : That is because it is the truth. ನೋಡು...ಪ್ರಾಬ್ಲೆಮ್ ಶುರುವಾಗಿದ್ದು ಮುಂಬೈ ನಲ್ಲಿ ಅಲ್ಲ. ಪೂರ್ತಿ ಪಶ್ಚಿಮ ಕರಾವಳಿ ಲಿ. ದಿನಕ್ಕೆ ಕರಾವಳಿಯಿಂದ ಹೋಗುವ/ ಬರುವ ದೋಣಿಗಳ ಲೆಕ್ಕ ಸರಿಯಿರುವುದಿಲ್ಲ. ಕಸ್ಟಂ ಇಲಾಖೆಯ ಬಗ್ಗೆ ನಾನು ಮಾತಾಡದಿರುವುದು ಒಳಿತು. ಕಳೆದು ಹೋದ ದೋಣಿಗಳ ಬಗ್ಗೆ ತನಿಖೆ....ಬೇಡ ಅಲ್ಲ ಇವೆಲ್ಲ ಮಾತು ? ಕ್ಲೀಷೆ ಅನ್ಸತ್ತೆ.

Z : ಹು. ಆದ್ರೂ ನೆನ್ನೆ ಅಣ್ಣ ಹೇಳ್ತಿದ್ರಲ್ಲ...ನಮಗೆ " owningness " ಇಲ್ಲಾ ಅಂತ. ಅದು ನಿಜ ಅನ್ನಿಸತ್ತೆ. We don’t own over country at all. We own our property, we own our caste, creed. ನಮ್ಮ ಜಾತಿ, ಮತ, ಧರ್ಮಕ್ಕಿಂತಾ ಮೇಲೆ ನಾವಿರುವ ಈ ದೇಶ ನಮ್ಮದು ಅಂತ ನಮಗೆ ಅನ್ನಿಸಲ್ಲ. ಅದೇ ತೊಂದರೆ. ಲಂಚ ತಗೊಳ್ಳೋವಾಗ ನಮಗೆ ನಾವು ದೇಶಕ್ಕೆಮಾಡ್ತಿರೋ ದ್ರೋಹ ನೆನ್ಪಾಗಲ್ಲ. ಒಬ್ಬ ಸಮಾಜ ಘಾತುಕನನ್ನು ಹಾಗೇ ಬಿಟ್ಟರೆ ಅದರಿಂದ ಪ್ರಜೆಗಳ ಭದ್ರತೆಗೆ ಆಗುವ ಅಪಾಯದ ಅರಿವಿಲ್ಲ. ಪಾಸ್ಪೋರ್ಟೀಗೆ ನಮ್ಮ ದೇಶದ ಗುರುತು ಬೇಕು, ತಿಂದು ಕುಡಿದು ಸ್ವೇಚ್ಛೆಯಿಂಡ ತಿರುಗಾಡಲು ಭಾರತವೇ ಬೇಕು . This is seriously disgusting.

The most disappointing thing is- Our county declares itself " Sovereign Socialist Secular Democratic Republic" . ಯಾವ್ದಾದ್ರು ಒಂದು ಶಬ್ದನ ಅರ್ಥ ಮಾಡ್ಕೊಂಡಿದಾರಾ ಜನ ? ಹಾ ? ಅಥ್ವಾ ಆ ಶಬ್ದಗಳ ಥರ ನಡ್ಕೊಂಡಿದಾರ ರಾಜಕಾರಿಣಿಗಳು ? This attack is a blow to our Sovereignty. It is a black mark on socialism and the act is dead opposite to secularism. With democracy being a business...are we a Republic anymore ???????????????????????

ನಾನು : ಇನ್ನೊಂದು ಅತೀ ಸೀರಿಯಸ್ ವಿಷಯ ಇದೆ. ದೇಶದಲ್ಲಿ ಇರುವ ಅನ್ಯ ದೇಶೀಯರನನ್ನು ನಾವು ಸರಿಯಾಗಿ ಮಾನಿಟರ್ ಮಾಡ್ತಿಲ್ಲ. Cricket match ನೊಡಲು ಬರುವ ಅನ್ಯ ದೇಶೀಯಯರು ಭಾರತ ಬಿಟ್ಟು ಹೋದ್ರಾ ? ಗೊತ್ತಿಲ್ಲ. ಸರಿಯಾದ ಸಮಯದಲ್ಲಿ ವೀಸಾ ರೆನ್ಯೂ ಮಾಡದವರ ಮೇಲೆ ಕ್ರಮ ಜರುಗಿಸಲಾಗತ್ತಾ ? ಗೊತ್ತಿಲ್ಲ. ಎಲ್ಲದಕ್ಕು ನಮ್ಮ ದೇಶದಲ್ಲಿ ಒಂದು ದರಿದ್ರ ಉಡಾಫೆ. ಅಷ್ಟೆ. ಆಮೇಲೆ ಇಂತಹಾ ದಾಳಿಗಳಿಂದ ನಾವು ನಿದ್ದೆಯಿಂದ ಎದ್ದು, ನಮ್ಮ ಕಮಾಂಡೋಸ್ ಗಳನ್ನ ಬಿಟ್ಟು ಕಾರ್ಯಾಚರಣೆಯಲ್ಲಿ ಕೆಲ ಸಾವು ನೋವು ವೀರಮರಣಗಳಾದ ಮೇಲೆ, ನಮ್ಮ ವ್ಯವಸ್ಥೆಯ ಧಣಿಗಳ ತಲೆಯಲ್ಲಿ tube light on ಆಗತ್ತೆ. ಓಹ್...ತಪ್ಪಾಗಿದ್ದು ಇಲ್ಲಿ ಅಂತ. ಛೆ...ಧಿಕ್ಕಾರ ನಮ್ಮ ವ್ಯವಸ್ಥೆಗೆ.ನಮ್ಮ ವೀರ ಯೋಧರಿಗೆ ಭಾವಪೂರ್ಣ ಅಶ್ರುತರ್ಪಣ.

ನಮ್ಮ ದೇಶದವರು ಸಣ್ಣ ಸಣ್ಣ ಕ್ಲೂ ನೂ ಸೀರಿಯಸ್ಸಾಗಿ ತಗೊಳ್ಳೋ ವರ್ಗು ಉದ್ಧಾರ ಆಗಲ್ಲ Z.

Z : ಕರೆಕ್ಟು. ಆದ್ರೆ ನೀನು ಇನ್ನೊಂದು ವಿಷಯ ನ observe ಮಾಡಿದ್ಯಾ ? ಅಣ್ಣ point out ಮಾಡಿದ್ರಲ್ಲಾ ?

ನಾನು : ಏನು ?

Z : ಭಾರತದ ಪಾಪ್ಯುಲೇಷನ್ ಈಗ ಎಷ್ಟು ?

ನಾನು : 1132 million ಅನ್ನತ್ತೆ ವೆಬ್ ಸೈಟು.

Z :ಈ ಪಾಪ್ಯುಲೇಷನ್ ಗೆ ತಕ್ಕ ratio ನಲ್ಲಿ police and armed forces ಇದೆಯಾ ?

ನಾನು : ????????????????????

Z : ಇಲ್ಲ. ಸತ್ಯ ಒಪ್ಕೋ.

ನಾನು : ಹ್ಮ್ಮ್ಮ್

Z : ನೋಡು, ನಾವಿಲ್ಲಿ ಕೋಟ್ಯಂತರ ಜನ ಇದ್ದೀವಿ. ಅದರೆ ಸೈನ್ಯ ಇರೋದು ಕೆಲವು ಸಾವಿರ ಮಾತ್ರ. Its a dangerous difference in the order of magnitude. ಪಂಜಾಬ್ ನವರು ಹೋರಾಡ್ತಾರೆ...ಕೊಡವರು ಇದ್ದಾರೆ ಹೋರಾಡೋಕೆ ಅಂತ ದೇಶದ ಬಹಳ ಜನ ಸುಮ್ನೆ ಕೂತಿರ್ತಾರೆ. ಈಗ್ಲೂ ಸುಮ್ನೆ ಕೂತಿದಾರೆ. ನೀವೆಲ್ಲ ದಯವಿಟ್ಟು ಈ ಆರ್ಟಿಕಲ್ ನ ಓದಿ.


ಬೇರೆ ಏನು ಕೆಲ್ಸ ಸಿಕ್ಕಲಿಲ್ಲ ಅಂತ army ಸೇರೋ ಅಂಥಾ hopeless ಸ್ಥಿತಿ ಗೆ ತರಬಾರದು ನಾವು ನಮ್ಮ ದೇಶ ನ. ನಮ್ಮ ದೇಶ ಅಂತ ಒಂದಿದ್ದ್ರೆ ನೆ ನಾವು ಅಲ್ವಾ ? ತಂದೆ ತಾಯಂದ್ರು ಈಗ ಜಾಣರಾಗದೇ ಇದ್ರೆ ಮುಂದೆ inevitable ಆಗಿ " ಮನೆಯಿಂದ ಒಬ್ಬ ಸೈನಿಕ " ಅಂತ ಹೋಗ್ಲೇ ಬೇಕಾಗತ್ತೆ. ಬೇರೆ ದಾರಿ ಇರಲ್ಲ. ಅದರ ಬದ್ಲು ಮಕ್ಕಳಲ್ಲಿ ಮೊದಲು ದೇಶಭಕ್ತಿ ಭಾವನೆ ತುಂಬಿಸಿ ಅವ್ರನ್ನ ದೇಶಕ್ಕೆ ಹೋರಾಡೋ ಹಾಗೆ ಪ್ರೇರೇಪಿಸಬೇಕು. Atleast ನಾವೆ ನಮ್ಮನ್ನು defend ಮಾಡಿಕೊಳ್ಳುವ ಮಟ್ಟಿಗಾದರೂ ಬೆಳೆಸಬೇಕು. moreover, ಸೈನಿಕ ಅಂದ ತಕ್ಷಣ ಎಲ್ಲರು ಬಾರ್ಡರ್ ನಲ್ಲೇ ಇರ್ಬೇಕು ಅಂತ ಇಲ್ಲ. ಅದರಲ್ಲಿ ತುಂಬಾ ವಿಭಾಗಗಳಿರತ್ವೆ. ಅದಕ್ಕೆ distribute ಮಾಡ್ಬೇಕು ನಮ್ಮ ಜನಗಳನ್ನ. We have to fill in the gap. ಸಮಯ ಬಂದ್ರೆ ಪ್ರಾಣದ ಹಂಗು ತೊರೆದು ಹೋರಾಡೋ ಅಂಥಾ ಒಂದು ಮನೋಭಾವ ನ ಬೆಳೆಸಿಕೊಳ್ಳಬೇಕು. ಆ ಸಮಯ ಬರದೇ ಇರೋ ಹಾಗೆ vigilant ಆಗಿದ್ದು ಕಂಟ್ರೋಲ್ ಗೆ ತರ್ಬೇಕು ಪರಿಸ್ಥಿತಿ ನ. ತುರ್ತು ಪರಿಸ್ಥಿತಿನಲ್ಲಿ ಹೋರಾಡೋದು ಇದ್ದೇ ಇದೆ.

ನಾನು : I concur.

Z : ನಾನು ನೀನು ಅದ್ಯಾರಿಗೆ ಏನ್ ಅನ್ಯಾಯ ಮಾಡಿದ್ವೋ..ಆ ಪಾಪಕ್ಕೆ ಶಿಕ್ಷೆಯಾಗಿ ದೇವರು ನಮಗೆ ಬುದ್ಧಿ ಮಾತ್ರ ಕೊಟ್ಟ. ಶಕ್ತಿ ಕೊಡಲಿಲ್ಲ. ಮೋಸ ಆಗಿದೆ ನಮ್ಮಿಬ್ಬರಿಗೆ. ದೇವರಿಂದಲೇ !! ನಮ್ಮ ಕೈಲಿ ನಿಜ್ವಾಗ್ಲು ಆ ಶಕ್ತಿ ಇದ್ದಿದ್ದರೆ ನಾವು ಖಂಡಿತಾ ಆರ್ಮಿ ಸೇರ್ತಿದ್ವಿ. ನಮ್ಮ ತಂದೆ ಗೆ ಆರ್ಮಿ ಸೇರೋ ಆಸೆ ಇತ್ತು. ಆದ್ರೆ ನಮ್ಮ ತಾತ ಬಿಡಲಿಲ್ಲ. ನಮಗೆ ಸೇರ್ಬೇಕು ಅಂತ ಆಸೆ ಇದ್ರು, ಮನೇಲಿ ಒಪ್ಪಿದ್ರೂ ಇಲ್ಲಿ ದೇವರು ಒಪ್ಪಲಿಲ್ಲ ! Man proposes God disposes ಅನ್ನೋ ಗಾದೆಯ ಅತಿ ವಿಡಂಬನಾತ್ಮಕ ಉದಾಹರಣೆ ಬೇಕು ಪ್ರಪಂಚದಲ್ಲಿ ಅಂದ್ರೆ ಅದು ನಾವೆ.

ನಾನು : ನೆನಪಿಸಬೇಡ...ರಕ್ತ ಕುದಿಯತ್ತೆ.

Z :ನಮ್ಮ helplessness ಮೇಲೆ ನನಗೆ ಜಿಗುಪ್ಸೆ ಬರ್ತಿದೆ. ಕೆಲವರಿಗೆ ಶಕ್ತಿ ಇರತ್ತೆ, ಆಸೆ ನೆ ಇರಲ್ಲ. ಇನ್ನು ನಮ್ಮಂಥವರಿಗೆ ಆಸೆ ಇರತ್ತೆ, ಶಕ್ತಿ ಇರಲ್ಲ.

ನಾನು : ಬೇಡಾ......

Z : ಓಕೆ. coming back to the discussion, ಈಗ ನಮ್ಮ ದೇಶದ ಈ ಅತಂತ್ರ ಸ್ಥಿತಿ ಗೆ ನಾವೇ ಜವಾಬ್ದಾರರು. Where does the buck stop ? ಅಂತ ಕೂತ್ಕೊಂಡು ತಮಾಷೆ ನೋಡೊದನ್ನ ಬಿಟ್ಟು for once, ನಾವು ಎದ್ದು ಹೋರಾಡ್ಬೇಕು. ನಮ್ಮ ಕೈಯಲ್ಲಿ ಎಷ್ಟಾಗತ್ತೆ ಅಷ್ಟು, ಹೇಗಾಗತ್ತೆ ಹಾಗೆ, ಈ ದರಿದ್ರ ವ್ಯವಸ್ಥೆ ಮತ್ತು ಈ ಅಮಾನುಷ ಭಯೋತ್ಪಾದನೆ ವಿರುದ್ಧ ಹೋರಾಡ್ಬೇಕು. ನಾನಂತೂ ಹೀಗೆ ಅಂದುಕೊಂಡೀದಿನಿ. ನಮಗೆ ಮೋಸ ಆಗಿದೆ ನಿಜ. ಹಾಗಂತ ನಾನಂತೂ ಸುಮ್ಮನಿರಲ್ಲ. ನನ್ನ ಇರೋ ಶಕ್ತಿ ಬಳಸಿಯೇ ಈ ವ್ಯವಸ್ಥೆಯ , ಭಯೋತ್ಪಾದನೆ ವಿರುದ್ಧ ಹೋರಾಡ್ತಿನಿ.

I seriously think this event marks the beginning of a revolution, a revolution against a stinking system, revolution against terrorism. ಅಲ್ವಾ ?

Wednesday, November 26, 2008

ಪುಸ್ತಕೋತ್ಸವ ಮತ್ತು ವಸ್ತು ಪ್ರದರ್ಶನ

ನಾನು : ಸಿಕ್ಕಾಪಟ್ಟೆ ಮಾತಾಡೋದಿದೆ ನಿನ್ ಹತ್ರ.

Z :ಮಾತಾಡು

ನಾನು : ಟೈಮ್ ಇಲ್ಲ.

Z :ರೈಟ್ ಹೇಳು. ಮಾತಾಡ್ಬೇಕು ಅಂತಿಯಾ , ಟೈಂ ಇಲ್ಲಾ ಅಂತಿಯಾ...ಏನ್ ಅರ್ಥ ?

ನಾನು : ಗೊತ್ತಿಲ್ಲ.

Z :ಛೆ !

ನಾನು : ಈಗ ನಿನ್ನ ಹತ್ರ ಜಗಳ ಆಡೋದಕ್ಕೂ ಟೈಂ ಇಲ್ಲ. ನಿಂಗೆ ನಾನು ನಾಲ್ಕು ಪ್ರವಾಸ ಕಥನ ಹೇಳ್ಬೇಕು.

Z :ಯಪ್ಪಾ !

ನಾನು : ಯಾ...

Z :ಯಾವ್ಯಾವ್ದು ?

ನಾನು :

೧.ಮೈಸೂರು ಮತ್ತು ಜಾನಪದ ಲೋಕ.
೨. ಬೆಂಗಳೂರು ಪುಸ್ತಕೋತ್ಸವಕ್ಕೆ ಮತ್ತು ಚಿತ್ರಕಲಾ ಪರಿಷತ್ತಿನ ಪ್ರದರ್ಶನಕ್ಕೆ ಹೋಗಿದ್ದು
೩. ಗೊರವನಹಳ್ಳಿ ಮತ್ತು ದೇವರಾಯನದುರ್ಗಕ್ಕೆ ಹೋಗಿದ್ದು.
೪. ಕಡಲೆಕಾಯಿ ಪರಿಷೆ.

Z :ಹೋಪ್ಲೆಸ್ಸ್ ಫೆಲ್ಲೋ...ಓದೋದ್ ಬಿಟ್ಟು ಊರೂರು ತಿರುಗುತ್ತಿದ್ದೀಯಾ ?

ನಾನು :ಇಲ್ಲಾ...ತಿರುಗಾಡ್ಕೊಂಡ್ ಓದ್ತಿದ್ದೆ.

Z :ಇರ್ಲಿ...ಯಾವಾಗ್ ಹೇಳೋದು ನೀನು ಇವೆಲ್ಲಾ ?

ನಾನು :ಟೈಮ್ ಸಿಕ್ಕಾಗ.

Z :ನನಗೆ ಕೋಪ ಬರತ್ತೆ...

ನಾನು : ಪ್ಲೀಸ್ ಕೋಪ ಮಾಡ್ಕೋಬೇಡಾ...

Z :ಯಾವ್ದಾದ್ರು ಒಂದು ಪ್ರವಾಸ ಕಥನ ಹೇಳು.

ನಾನು : ಹ್ಮ್ಮ್....ಪುಸ್ತಕೋತ್ಸವದ ಬಗ್ಗೆ ಹೇಳುವೆ.

Z :ಹೇಳು.

ನಾನು : ಕುಮಾರಣ್ಣನ ಭವ್ಯದಿವ್ಯ ಸಮಾವೇಶ ನಡೆದ ಮಾರನೇ ದಿನ ನಾನು ಪುಸ್ತಕೋತ್ಸವಕ್ಕೆ ಹೋಗಲು ನಿರ್ಧರಿಸಿದೆ.

Z :ಗುಡ್. ಆಮೇಲೆ?

ನಾನು : ನನ್ನ ಸ್ನೇಹಿತೆ ರೋಹಿಣಿ ಬರ್ತಿನಿ ಅಂದಿದ್ಲು. ನಾವಿಬ್ಬರು ಕಾರ್ಪೋರೇಷನ್ ನಲ್ಲಿ ಮೀಟ್ ಮಾಡಿ ಒಟ್ಟಿಗೆ ಹೋಗೋದಿತ್ತು. ಆದ್ರೆ ಅವಳಿಗೆ ಅರ್ಜೆಂಟ್ ಮೀಟಿಂಗ್ ಬಂದು ಆಗಲ್ಲ ಅಂತ ನಾನ್ ಹೊರ್ಡೋ ಟೈಂ ಗೆ ಕರೆಕ್ಟಾಗಿ ಫೋನ್ ಮಾಡಿದಳು.

Z :ಪಾಪ...ಆಮೇಲೆ ?

ನಾನು :ಓಕೆ ಅಂದಿದ್ದೇ ನಾನು ಬಸ್ ಸ್ಟಾಪ್ ಗೆ ಬಂದು ನಿಂತೆ. ನನ್ನ ಅದೃಷ್ಟಕ್ಕೆ ಮೇಕ್ರಿ ಸರ್ಕಲ್ ಗೆ ಡೈರೆಕ್ಟ್ ಬಸ್ ಸಿಕ್ತು. ಆದ್ರೆ ಇವ ಎಲ್ಲಿ ನಿಲ್ಸ್ತಾನೆ ಅನ್ನೋ ಐಡಿಯಾ ಇರ್ಲಿಲ್ಲ. ನನಗೆ ಗೊತ್ತಿದ್ದಿದ್ದು ಆರ್ಮಿ ಕಮಾಂಡ್ ಹಾಸ್ಪಿಟಲ್ಲು ಮತ್ತು ರಾಮನ್ ಇನ್ಸ್ಟಿಟ್ಯೂಟ್ ಎರಡೇ..ಎಲ್ಲಾದ್ರೂ ಬಿಸಾಕಲಿ, ನಡೆಯೋದಿದ್ದೇ ಇದೆ ಅಂದುಕೊಂಡು ಹತ್ತಿದೆ ಬಸ್ಸು. ಸ್ಟಾಪ್ ಬಂದಾಗ ಹೇಳಿ ಅಂದಿದ್ದೇ ನಾನು ಕೆ. ವಿ. ಐಯ್ಯರ್ ಅವರ ಶಾಂತಲಾ ಕಾದಂಬರಿ ಲಿ ಮುಳುಗಿ ಹೋದೆ. ಮೂವತ್ತು ಪೇಜ್ ದಾಟಿದಾಗ ಚಾಮರಾಜಪೇಟೆ ಲಿ ಇದ್ದೆ. ಅರವತ್ತನೇ ಪೇಜಿಗೆ ಕೋತಿಬಂಡೆ. ಎಂಭತ್ತನೇ ಪೇಜ್ ಗೆ ಇಸ್ಕಾನು. ಆಮೇಲೆ ನಾನು ಕತ್ತೆತ್ತಲೇ ಇಲ್ಲ. ಬಸ್ಸು ತನ್ನ ಪಾಡಿಗೆ ತಾನು ಚಲಿಸುತ್ತಿತ್ತು. ಆಮೇಲೆ ಒಂದು ಪಾಯಿಂಟಲ್ಲಿ ಎಲ್ಲೊ ಬಿಸಿ ಗಾಳಿ ಶುರುವಾಯ್ತು. ನಾನು ಬೇಲೂರು ಹಳೇಬೀಡು ಗುಂಗಿನಲ್ಲಿದ್ದವಳು ಕತ್ತೆತ್ತಿದೆ. ಬಸ್ ನಿಂತಿದೆ ! ನೋಡಿದರೆ ಬಸ್ಸಲ್ಲಿ ಮೂರೇ ಜನ ! ಡ್ರೈವರ್ರು ಕಂಡಕ್ಟರ್ರು ಇಬ್ಬರೂ ಇಲ್ಲ! ಬಸ್ ನಿಂತಿರೋ ಜಾಗ ನೂ ನನಗೆ ಗೊತ್ತಾಗಲಿಲ್ಲ..ಮುಂದಿರೋರ್ ನ ಕೇಳಿದೆ. ಅವರು...ಮೇಡಮ್..ಇದು ಯಶ್ವಂತಪುರ...ಅವ್ರು ಊಟಕ್ಕೋ ಕಾಫಿಗೋ ಹೋಗಿದಾರೆ...ಬರ್ತಾರೆ ಅರ್ಧ ಘಂಟೆ ಲಿ ಅಂದರು. ಗಂಟೆ ಹನ್ನೊಂದು ಮುಕ್ಕಾಲು...ಊಟವೇ ಅಂದುಕೊಂಡೆ. ಪಕ್ಕದಲ್ಲಿ ಇನ್ನೊಂದು ಮೇಕ್ರಿ ಸರ್ಕಲ್ಗೆ ಹೋಗೋ ಬಸ್ಸು ಬಂದಿತು. ಪಾಸು ತಗೊಂಡಿದ್ದೆಯಾದ್ದರಿಂದ ಪುಳಕ್ ಅಂತ ಅಲ್ಲಿಗೆ ಹಾರಿದೆ.

Z :ಭೇಷ್ ! ಆಮೇಲೆ ?

ನಾನು : ಮೇಕ್ರಿ ಸರ್ಕಲ್ಲ್ ನಲ್ಲಿ ಬಸ್ಸು ನಿಂತಿತು. ದರಿದ್ರ ಟ್ರಾಫಿಕ್ಕು. ಕಷ್ಟ ಪಟ್ಟು ಇಳಿದೆ. ಅರಮನೆ ಮೈದಾನಕ್ಕೆ ಅಲ್ಲಿಂದ ಸ್ವಲ್ಪ ದೂರಾನೆ...ನಡೆದೆ.ಸಿಕ್ಕಾಪಟ್ಟೇ ಗೇಟ್ಗಳಿದಾವೆ..ಒಂದ್ ಕಡೆನಾದ್ರೂ ಡೈರೆಕ್ಷನ್ ಹಾಕ್ಬೇಡ್ವಾ? ನಾನು ದಾರಿ ಕೇಳಿದವರೆಲ್ಲ ಕನ್ನಡ ಬರ್ದೆ ಇರೋರು...ಕಡೆಗೆ ಒಬ್ಬ ಪುಣ್ಯಾತ್ಮ ನಾನು ಬುಕ್ ಫೆಸ್ಟಿವಲ್ ಅಂದಿದ್ದಕ್ಕೆ...ಗೋ ಸ್ತ್ರೈಟ್ ಅಂದ. ಸುಮಾರು ಒಂದು ಕಿಲೋಮೀಟರ್ ನಡೆದ ಮೇಲೆ ಇದು ಕಾಣಿಸ್ತು.


ಒಳಗೆ ಬಲಗಾಲಿಟ್ಟೆ. ಕೌಂಟರ್ ನಲ್ಲಿ ಟಿಕೆಟ್ ಪಡೆದು ಒಳಗೆ ಹೋದೆ.

Z :ಹೇಗಿತ್ತು ಫೀಲಿಂಗು ?

ನಾನು : Exhilarating as ever. ಪುಸ್ತಕ ಅಂದ್ರೆ ಪ್ರಾಣ ನನಗೆ...ಒಂದು ಸ್ಟಾಲನ್ನೂ ಬಿಡದೆ ಆಮೂಲಾಗ್ರವಾಗಿ ಎಲ್ಲಾ ಪುಸ್ತಕಗಳನ್ನೂ ನೋಡುತ್ತಾ ಬಂದೆ. ಆಂಗ್ಲ ನಾವೆಲ್ಲುಗಳನ್ನೆಲ್ಲಾ ಯಾಕೋ ಲೈಬ್ರರಿಯಲ್ಲೇ ಓದೋದು ಉತ್ತಮ ಅನ್ನಿಸಿತು.ಕನ್ನಡ ಪುಸ್ತಕಗಳಲ್ಲಿ ಒಂದೆರಡು ತಗೊಳ್ಳಲು ಆಸೆ ಆಯ್ತು. ಅಣ್ಣ " ನಿನ್ನನ್ನ ಪುಸ್ತಕ ಕೊಳ್ಳಲು ಬಿಟ್ಟರೆ ಟೆಂಪೋ ಅರೇಂಜ್ ಮಾಡ್ಬೇಕಾಗತ್ತೆ " ಅಂತ ಹೇಳಿ, ನೂರೈವತ್ತ್ ರುಪಾಯಿ ಕೈಲಿಟ್ಟು "ಎಷ್ಟ್ ತಗೋತ್ಯೋ ತಗೊ ಪುಸ್ತಕ ! " ಅಂದ್ರು !

Z :ಹೆ ಹೆ...ಸರೀಗ್ ಮಾಡಿದಾರೆ !

ನಾನು : ಅಯ್ಯೋ ಪಾಪಿ ! ನಗ್ತ್ಯಾ ? ಹೋದ್ ಸಲ ಒಂದು ಸಾವಿರ ರೂಪಾಯಿಯಷ್ಟು ಪುಸ್ತಕ ತಗೊಂಡಿದ್ವಿ...Strand book festival ನಲ್ಲಿ ನಾಲ್ಕು ಸಾವಿರದಷ್ಟು! ಏನು ಮಾಡಕ್ಕಾಗ್ಲಿಲ್ಲಾ ಈ ಸರ್ತಿ !!

Z :ಬೇಜಾರ್ ಮಾಡ್ಕೋಬೇಡಾ...ಸಿಕ್ಕಷ್ಟು ಸೀರುಂಡೆ ಅಲ್ವಾ ?

ನಾನು : ಹು...ನಾನು ತಗೊಂಡ್ರೆ ಕನ್ನಡ ಪುಸ್ತಕ ನೇ ತಗೊಳ್ಳೋದು ಅಂತ ನಿರ್ಧಾರ ಮಾಡಿದೆ.

Z :ಭೇಷ್. ಆಮೇಲೆ ?

ನಾನು : ತೇಜಸ್ವಿಯವರ ಮಿಸ್ಸಿಂಗ್ ಲಿಂಕ್ ಪುಸ್ತಕ ನ ಓದ್ಲೇ ಬೇಕು ಅಂತ ಗುರುಗಳು ಆದೇಶ ಹೊರಡಿಸಿದ್ರು. ಕೈಗೆ ಸಿಕ್ತು..ತಗೊಂಡೆ. ಆಮೇಲೆ ನಾನು ಕ್ಷಣ ಹೊತ್ತು ಆಣಿ ಮುತ್ತು ಕಾಲಂ ನ ವಿಜಯ ಕರ್ನಾಟಕದಲ್ಲಿ ಫಾಲೋ ಮಾಡ್ತಿದ್ದೆ...ಆ ಪುಸ್ತಕ ತಗೊಂಡೆ. ಗಾಂಧಿಜೀಯವರ ಆತ್ಮಕಥೆ ಪುಸ್ತಕ ನ ಆವತ್ತ್ ಸ್ಪೆಷಲ್ಲಾಗಿ ಮೂವತ್ತು ರುಪಾಯಿಗೆ ಮಾರುತ್ತಿದ್ದರು. ಬಿಟ್ಟರೆ ಈ ಚಾನ್ಸು ಸಿಕ್ಕೋದಿಲ್ಲ ಅಂತ ಇದೊಂದು ಆಂಗ್ಲ ಪುಸ್ತಕ ಕೊಂಡುಕೊಂಡೆ. ಫುಲ್ಲ್ ದುಡ್ದು ಖರ್ಚಾಗೋಯ್ತು. ಬಸ್ ಪಾಸ್ ಬಿಟ್ಟರೆ ಪರ್ಸಿನಲ್ಲಿ ಹುಡುಕಿದರೂ ಒಂದು ರುಪಾಯಿ ಇರಲಿಲ್ಲ.

Z :ಹೆ ಹೆ...ಆಮೇಲೆ ?

ನಾನು : ಒಂದು ವಿಷಯ ಮಾತ್ರ ಸಖತ್ ಬೇಜಾರ್ ಆಯ್ತು.

ನಮ್ಮ ರಿಸರ್ಚ್ ಲೆವೆಲ್ ಪುಸ್ತಕಗಳ ಹೊಸ ಟೈಟಲ್ಲುಗಳು ಒಂದೂ ಬಂದೇ ಇರಲಿಲ್ಲ. ನಮ್ಮ ಟಾಟಾ ಇನ್ಸ್ಟಿಟ್ಯೂಟ್ ನಲ್ಲೇ ಹೆಚ್ಚು ಟೈಟಲ್ ಗಳು ಲಭ್ಯವಿದ್ದವೂ ಅನ್ನಿಸಿತು. ರಿಯಾಯಿತಿಯು ಟಾಟಾ ಇನ್ಸ್ಟಿಟೂಟ್ ನಲ್ಲೇ ಜಾಸ್ತಿ. ವಿಜ್ಞಾನಕ್ಕೆ ಮತ್ತು ರಿಸರ್ಚಿಗೆ ಸಂಬಂಧಿಸಿದ ಪುಸ್ತಕಗಳೆಲ್ಲಾ ನನ್ನ ಹತ್ತಿರ ಈಗಾಗಲೇ ಇತ್ತು. ಇಲ್ಲಾ ಬುಕ್ ರಾಕ್ ನಲ್ಲಿ...ಇಲ್ಲಾ ಡಿವಿಡಿ ನಲ್ಲಿ...ಹೊಸದೇನೂ ಕಾಣದೇ ಸಂಕಟ ಆಯ್ತು.

Z : :( :(


ಎರಡು ಕಾಲು ಘಂಟೆಗಳ ಕಾಲ ಇನ್ನೂರ ಎಂಭತ್ತೇಳು ಸ್ಟಾಲ್ ಗಳನ್ನು ಸುತ್ತಿದ ನಂತರ ಅಮ್ಮ ಪ್ಯಾಕ್ ಮಾಡಿ ಕಳಿಸಿದ ಉಪ್ಪಿಟ್ಟನ್ನು ಹೊರಗೆ ಬಂದು ಕ್ಯಾಂಟೀನಲ್ಲಿ ಕುಳಿತು ತಿಂದೆ. ಆಮೇಲೆ ಚಿತ್ರಕಲಾ ಪರಿಷತ್ ಕಡೆ ಹೊರಟೆ.

Z : ಏನ್ ವಿಶೇಷ ಅಲ್ಲಿ ?

ನಾನು : ಕ್ರೇಜಿ ಕ್ರಾಫ್ಟ್ ಅನ್ನುವ ಒಂದು ತಂಡ ಕಾರು, ಮೋಟಾರ್ ಸೈಕಲ್ಲು ಮುಂತಾದ ವಾಹನಗಳ ಬಿಡಿ ಭಾಗಗಳನ್ನು ಉಪಯೋಗಿಸಿ ಸಕತ್ ದೊಡ್ಡ ಆಕೃತಿಗಳನ್ನು ಮಾಡಿದ್ದರು. ಎಲ್ಲಾ dismantleable. ಅಂದ್ರೆ ಕೆಲವನ್ನ ವೆಲ್ಡ್ ಮಾಡೀರ್ತಾರೆ, ಆದ್ರೆ ಎಲ್ಲಾ ವ್ಸೆಲ್ಡೆಡ್ ಅಲ್ಲ. ಸ್ಪಾನರ್ರು, ಸ್ಪಾರ್ಕ್ ಪ್ಲಗ್ಗು, ಗೇರು, ಲೆವೆರ್ರು , ಚೈನು ಎಲ್ಲಾ ಉಪ್ಯೋಗ್ಸಿ ಸಖತ್ತಾಗಿ ಮಾಡಿದ್ದಾರೆ. ಫೋಟೋ ತೆಗೆಯಬಾರದು ಅಂತ ಗೊತ್ತಿಲ್ದೇ ನಾನು ಎಲ್ಲಾ ಕ್ಲಿಕ್ಕಿಸಿಬಟ್ಟಿದ್ದೆ. ಆಮೇಲೆ ಅವ್ರು ಬೇಡ ಅಂದ್ರು...ಅಷ್ಟೊತ್ತಿಗೆ ನನ್ನ ಕೆಲ್ಸ ಮುಗ್ದಿತ್ತು. ಅದರ ಲಿಂಕ್ ಹಾಕ್ತಿದಿನಿ. ನೋಡ್ಬಿಡು. ಮಿಸ್ಸ್ ಮಾಡಿಕೊಂಡವರು ನಿಜ್ವಾಗ್ಲು ಇನ್ನೊಂದ್ ಸರ್ತಿ ಹಾಕಿದ್ರೆ ಹೋಗಿ ನೋಡಿ ಮಾತ್ರ...ಬಿಡ್ಬೇಡಿ. ಇದನ್ನ ಹಾಕ್ಬಾರ್ದು ಅಂತ ಇದ್ದೆ..ಆದ್ರೂ ನಿಂಗೆ ಬೇಜಾರ್ ಆಗ್ದೇ ಇರ್ಲಿ ಅಂತ ಹಾಕ್ತಿದಿನಿ.

Z : :) thanks.

ಇದನ್ನ ಮುಗಿಸಿಕೊಂಡು ಮನೆಗೆ ಬಂದಾಗ ಸಾಯಂಕಾಲ ಆರ್ ಘಂಟೆ. ಮತ್ತೆ ನನ್ನ ಓದು ಪ್ರಾರಂಭ !

Z : ಹ್ಮ್ಮ್ಮ್....


ನಾನು : ಸ್ಲೈಡ್ ಶೋ ಲಿಂಕು ಇಲ್ಲಿದೆ :

Saturday, November 22, 2008

ತಾಯಮ್ಮ- epilogue

ಓದುಗರು ಈ ಮೊದಲ ಮೂರು ಭಾಗಗಳನ್ನು ಓದಿದ ನಂತರ ಈ ಪೋಸ್ಟನ್ನು ಓದಬೇಕಾಗಿ ಪ್ರಾರ್ಥಿಸುತ್ತೇನೆ.

ತಾಯಮ್ಮ - ೧

ತಾಯಮ್ಮ - ೨

ತಾಯಮ್ಮ- ೩
*************
Z : ಈಗ ಏನಾಯ್ತು ?

ನಾನು : ಜಯಂತಿ ಒಂದು ವಾರ ಹೇಳದೇ ಕೇಳದೇ ಚಕ್ಕರ್ ಕೊಟ್ಟಳು. ಅಮ್ಮ ಇನ್ನೊಬ್ಬ ಕೆಲಸದವಳು ರಾಧ ಅನ್ನುವವಳನ್ನು ಕೆಲಸಕ್ಕೆ ಸೇರಿಸಿಕೊಂಡರು. ಅವಳಿಗೆ ಮನೆ ಕೆಲಸ ಮಾಡಿ ಅನುಭವವೇ ಇಲ್ಲ. ನಾವೇ ಎಲ್ಲಾ ಹೇಳಿಕೊಡಬೇಕಾಯ್ತು.

Z : ದೇವಾ !

ನಾನು : ಇನ್ನೇನ್ ಮಾಡೋದು ಹೇಳು. ಅವಳು ಬಾಲ್ಯ ವಿವಾಹದ ಮತ್ತೊಂದು ಎಕ್ಸಾಂಪಲ್ಲು. ಗಂಡ ಅಪ್ರತಿಮ ಕುಡುಕ. ಇಪ್ಪತ್ತೊಂದನೇ ಶತಮಾನದ ಮಾದರಿ ಹೆಣ್ಣಾಗಿ ಬದುಕಲಿಚ್ಛಿಸಿದ ಇವಳು ಗಂಡನನ್ನು ಬಿಟ್ಟು ಬೇರೆ ಮನೆ ಮಾಡಿದ್ದಳು. ಅವ ಅಲ್ಲಿಗೆ ದಿನಾ ರಾತ್ರಿ ಕುಡಿದು ಬಂದು ರಂಪ ಮಾಡುತ್ತಿದ್ದ. ಕಷ್ಟ ಎಂದು ಹೇಳಿಕೊಂಡಳಲ್ಲ ಎಂದು ನಾವು ಸ್ವಲ್ಪ ಜಾಸ್ತಿ ಸಂಬಳ ಕೊಡಲು ರೆಡಿಯಾದೆವು.

Z :ಹ್ಮ್ಮ್ಮ್....


ನಾನು : ಒಂದು ವಾರ ಎಲ್ಲಾ ನೆಟ್ಟಗಿತ್ತು. ಆಮೇಲೆ ನನಗೆ ಡಾಮೆಕ್ಸ್ ಫೆನಾಯಿಲೇ ಬೇಕು...ಗುಂಜೆಲ್ಲಾ ಆಗಲ್ಲ, ಸ್ಕಾಚ್ ಬ್ರೈಟೇ ಆಗ್ಬೇಕು, ಬಟ್ಟೆಗೆ ಸರ್ಫೇ ಆಗ್ಬೇಕು ಅಂತೆಲ್ಲಾ ಕ್ಯಾತೆ ತೆಗೆದಳು. ಅಮ್ಮನ ಕಣ್ಣು ಕೆಂಪಾಯ್ತಾದರೂ, ಅವರಿಗೆ ಹುಶಾರು ತಪ್ಪಿದರೆ ಮನೆ ದಿಕ್ಕು ತಪ್ಪುತ್ತದೆ ಎಂಬ ಒಂದೇ ಕಾರಣದಿಂದ ಎಲ್ಲವನ್ನು ತಂದದ್ದಾಯ್ತು. ಸ್ವತಃ ಸ್ವಯಂ ಸಾಕ್ಷಾತ್ ನಾನೇ ಸೂಪರ್ ಮಾರ್ಕೆಟ್ಟಿಗೆ ಹೋಗಿ ಎಲ್ಲಾ ತಂದೆ.

Z : ಆಮೇಲೆ ?

ನಾನು : ಕೆಲಸದಲ್ಲಿ ಒಂದು ಚೂರು ಅಚ್ಚುಕಟ್ಟಿರಲಿಲ್ಲವಾದ್ದರಿಂದ ಅಮ್ಮನ ಕೋಪ ನೆತ್ತಿಗೇರಿತು. ಒಂದೇ ವಾರದಲ್ಲಿ ಅರ್ಧ ಕೆ. ಜಿ ಸರ್ಫು ಖಾಲಿಯಾಗಿದ್ದಕ್ಕೆ ನಾನು ಸಿಡಿಮಿಡಿ ಅಂದೆ. ದಿನಕ್ಕೊಂದು ಸಬೀನಾ ಪ್ಯಾಕೆಟ್ಟು ಖರ್ಚಾಗುತ್ತಿತ್ತು. ಪಾತ್ರೆಯ ಫಳ ಫಳ ಅಷ್ಟಕ್ಕಷ್ಟೇ. ಡಾಮೆಕ್ಸ್ ಫೆನಾಯಿಲಿನ ಅಲರ್ಜಿಯಿಂದ ಅಮ್ಮನ ಗಂಟಲು ಕಟ್ಟಿ ಎರಡು ಸಂಗೀತ ಕಾರ್ಯಕ್ರಮ ಕ್ಯಾನ್ಸೆಲ್ ಮಾಡುವ ಮಟ್ತಿಗೆ ಹೋಗಿತ್ತು. ಕೊನೆಗೆ ಹೇಗೋ ಮ್ಯಾನೇಜ್ ಮಾಡಿದರು. ಅಷ್ಟೇ ಅಲ್ಲದೇ ಇವಳು ಪಾತ್ರೆಗಳೆಲ್ಲವನ್ನು ಜಜ್ಜಿ ಹಾಕಿದ್ದಳು. ತವರು ಮನೆಯ ಪಾತ್ರೆ, ಇಪ್ಪತ್ನಾಲ್ಕು ವರ್ಷದಿಂದ ನೆಟ್ಟಗಿದ್ದವು ಸೊಟ್ಟಗಾದವಲ್ಲ ಎಂದು ಅಮ್ಮ ಅಜ್ಜಿಗೆ ದಾವಣಗೆರೆಗೆ ಫೋನ್ ಮಾಡಿ ಗೋಳು ಹೇಳಿಕೊಂಡರು. ಅಜ್ಜಿ ಕೊಟ್ಟಿದ್ದ ಆರು ದೊಡ್ಡ ಲೋಟದ ಸೆಟ್ಟಿನಲ್ಲಿ ಐದು ನಾಪತ್ತೆ. ಮತ್ತೂ, ಅಣ್ಣ ತಂದಿದ್ದ ಜರ್ಮನ್ ಕಂಪನಿಯ ಚಾಕು ಕೂಡಾ ಅವಳು ಕದ್ದಿದ್ದಳು. ಬೇರೆ ಹೊಸ ಚಾಕು ತರಲು ಅಣ್ಣನಿಗೆ ಟೈಂ ಇರಲಿಲ್ಲ. ನಾನೇ ಹೋಗಿ ತಂದಿದ್ದಾಯ್ತು. ಅದನ್ನು ಪಳಗಿಸಲು ನಮಗೆ ಕಷ್ಟ ಆಯ್ತು. ಇತ್ತ ಇವಳು ನಾವು ಇವಳ ಕಳ್ಳತನವನ್ನು ಹಿಡಿಯುತ್ತೇವೆ ಎಂದು ಭಯ ಪಟ್ಟು ಒಂದು ವಾರ ಚಕ್ಕರ್ ಹಾಕಿದಳು. Princess of the ocean ಆದ ನಾನು ಮತ್ತೆ ಎಂದಿನಂತೆ Queen of kitchen ಆಗಿ, ಪಾತ್ರೆ ಮತ್ತು ಕಸ ಗುಡಿಸಿ ಸಾರಿಸಿ ಎಲ್ಲ ನೋಡಿಕೊಂಡಿದ್ದಾಯ್ತು. ಇದು ಸಾಲದು ಅಂತ ಹದಿನೈದು ವರ್ಷಗಳ ನಮ್ಮ ಐ ಎಫ್ ಬಿ ವಾಶಿಂಗ್ ಮಷೀನು ಕೆಟ್ಟು ಹಾಳಾಗಿ ಹೋಯ್ತು.

Z : ರಾಮಾ !

ನಾನು : ಅಮ್ಮನಿಗೆ ನಾನು ಕೆಲಸ ಮಾಡಿದರೆ ಪಿಎಚ್.ಡಿ ಗೆ ಓದಲಿಕ್ಕಾಗುವುದಿಲ್ಲ ಅಂತ ಬೇಜಾರು. ಕೆಲಸ ಮಾಡಲು ಹೋಗಿ ಅವರಿಗೆ ಹುಶಾರು ತಪ್ಪುತ್ತಿತ್ತು. ಅವರಿಗೆ ಹುಶಾರು ತಪ್ಪುವುದನ್ನು ತಪ್ಪಿಸಲು ನಾನು ಕೆಲಸ ಮಾಡುತ್ತಿದ್ದೆನಾದ್ದರಿಂದ ಓದು, ಬ್ಲಾಗಿಂಗ್ ಹಾಗೂ ಆರ್ಕುಟ್ಟಿಂಗ್ ಮೂರಕ್ಕು ಕತ್ತರಿ ಬಿತ್ತು. ನಮ್ಮ ಪೀಕಲಾಟ ನೋಡಲಾಗದೇ ಈ ಸರ್ತಿ ಅಣ್ಣನ ತಾಳ್ಮೆ ಮಿತಿ ಮೀರಿತು.ಅದಕ್ಕೆ ಅವರು ನಮ್ಮಿಬ್ಬರನ್ನು ಕರೆದು "ಅಡಿಗೆ ನೀನು ಮಾಡು, ಮಿಕ್ಕಿದ್ದೆಲ್ಲಾ ಲಕ್ಷ್ಮೀ ನೋಡ್ಕೊಳ್ಳಲಿ. ವೀಕೆಂಡ್ ನಲ್ಲಿ ಎಲ್ಲ ಕೆಲ್ಸ ಅಪರ್ಣ ನೋಡಿಕೊಳ್ಳತಕ್ಕದ್ದು. ನನ್ನ ಮತ್ತು ನಿನ್ನ ಬಟ್ಟೆ ಡ್ರೈ ಕ್ಲೀನ್ ಗೆ ಕಳಿಸೋಣ. ಮಕ್ಕಳು ಅವರ ಬಟ್ಟೆಯನ್ನು ಅವರವರೇ ಒಗೆದುಕೊಳ್ಳತಕ್ಕದ್ದು" ಎಂದು ಅಪ್ಪಣೆ ಮಾಡಿದರು.

Z : ಉಫ್ !!!!!!!

ನಾನು : ಬಟ್ಟೆ ಒಗೆಯುವುದನ್ನು ನಾನು ಎಂಜಾಯ್ ಮಾಡುತ್ತಿದ್ದೆ. ಸ್ಕೂಲಿನಲ್ಲಿದ್ದಾಗ ನಮ್ಮ ಬಟ್ಟೆ ನಾನೇ ಒಗೆಯುತ್ತಿದ್ದೆ. ಬಟ್ಟೆ, ಶೂಸು, ಲಂಚ್ ಬಾಸ್ಕೆಟ್ಟು ಎಲ್ಲಾ...ನನಗೇನು ತೊಂದರೆ ಆಗಲಿಲ್ಲ. ಕಷ್ಟಕ್ಕೆ ಸಿಕ್ಕಿದ್ದು ಅಪರ್ಣ. ಅವಳಿಗೆ ಬಟ್ಟೆ ಒಗೆದು ಗೊತ್ತಿಲ್ಲ. "ಈಗಲಾದರೂ ಕಲ್ತ್ಕೋ " ಅಂತ ನಿರ್ದಾಕ್ಷಿಣ್ಯವಾಗಿ ನಾನು ಅಪ್ಪಣೆ ಮಾಡಿದೆ.

Z : ಹೆ ಹೆ...

ನಾನು : ರಾಧಾ ಒಂದು ವಾರದ ನಂತರ ಮನೆಯ ಮುಂದೆ ಪ್ರತ್ಯಕ್ಷವಾಗಿ " ಅಮ್ಮ...ಕ್ಷಮಿಸಿ, ಮನೆಯಲ್ಲಿ ಕಷ್ಟ..." ಎಂದು ಪ್ರವರ ಊದತೊಡಗಿದಳು. ಅಮ್ಮ ಮೊದಲೇ ಪಾತ್ರೆಗಳ ಶೋಚನೀಯ ಸ್ಥಿತಿ ಕಂಡು, ತಮ್ಮ ಅತಿಪ್ರೀತಿಯ ಚಾಕು ಮತ್ತು ಲೋಟ ಕಳೆದುಕೊಂಡು ಹೈರಾಣಾಗಿದ್ದರು. ಅಣ್ಣ ಕೂಡಾ ಅವಳ ದುಡ್ಡು ಚುಕ್ತಾ ಮಾಡಿ ಅವಳನ್ನು ಕಳಿಸಿಬಿಡಬೇಕೆಂದು ಆಜ್ಞೆ ಮಾಡಿದ್ದರು. ಅವಳು ಯಥಾಪ್ರಕಾರ ಗೋಳಾಡಿದಳು. ಆದರೆ ಅಮ್ಮ ನಂಬಲಿಲ್ಲ. ನಮ್ಮ ಮನೆಯಲ್ಲಿ ಮಾತ್ರವಲ್ಲದೇ ಎದುರು ಮನೆ, ಪಕ್ಕದ ಮನೆಯವರೂ ಇವಳ ಕೆಲಸದ ಬಗ್ಗೆ ಅಪಸ್ವರ ಎತ್ತಿದ್ದರು. ಅವಳ ಕಲ್ಯಾಣ ಗುಣಗಳ ಪರಿಚಯ ಎಲ್ಲರಿಗೂ ಆಗಿತ್ತು. ಜಾಸ್ತಿ ಸಂಬಳ ಕೊಟ್ಟು ಚೆನ್ನಾಗಿ ಕೆಲಸ ಮಾಡದ ಕೆಲಸದವರಿಗಿಂತಾ ನಾವೇ ಹೇಗೋ ಮಾಡಿಕೊಳ್ಳುವುದು ಸರಿಯೆಂದು ಗೇಟ್ ಮೀಟಿಂಗ್ ನಲ್ಲಿ ಇವರೆಲ್ಲ ನಿರ್ಧರಿಸಿದ್ದರು.

Z : ಗೇಟ್ ಮೀಟಿಂಗ್ ನಡೆಯುತ್ತಿದ್ದಾಗ ತಾವೇನು ಮಾಡುತ್ತಿದ್ದಿರಿ ?

ನಾನು : ಪಾತ್ರೆ ತೊಳೆಯುತ್ತಿದ್ದೆ.

Z : ಮುಂದೆ ?

ನಾನು : ಅವಳನ್ನು ಓಡಿಸಿದ್ದಾಯ್ತು. ಮಾರನೇ ದಿನ ಬೆಳಿಗ್ಗೆ ನಮ್ಮ ಕಾರ್ ಡ್ರೈವರ್ ಒಂದು ಆಶ್ಚರ್ಯಕರ ಸುದ್ದಿ ತಂದ. ತಾಯಮ್ಮ ಡಾಕ್ಟರ್ ಆಂಟಿ ಮನೆಗೆ ಬಂದಿದ್ದಾರೆ ಅಂತ !

ನಾನು ಆಂಟಿ ಮನೆಗೆ ಶರವೇಗದಲ್ಲಿ ಓಡಿದೆ. ಆದರೆ ತಾಯಮ್ಮ ಅಷ್ಟೊತ್ತಿಗಾಗಲೇ ಹೊರಟು ಹೋಗಿದ್ದರು. ಅವರು ನಾಳೆ ಬಂದರೆ ನಮ್ಮ ಮನೆಗೆ ದಯವಿಟ್ಟು ಕಳಿಸಿಕೊಡಿ ಎಂದು ಬೇಡಿಕೊಂಡೆ. ಅವರು ಖಂಡಿತಾ ಕಳಿಸುವೆವು ಅಂದರು.

Z : ವಾಹ್ !

ನಾನು : ಮಾರನೆಯ ದಿನ ತಾಯಮ್ಮ ಪ್ರತ್ಯಕ್ಷ ! ನಾವು " ಏನ್ ತಾಯಮ್ಮ, ನೀನು ಕೆಲಸಕ್ಕೆ ಮತ್ತೆ ಬರುತ್ತಿದ್ದೀಯ ಅಂತ ಹೇಳೋದಲ್ವಾ? " ಅಂತ ಕೇಳಿದೆವು. ಅದಕ್ಕೆ ಅವರು " ಬೇರೆ ಕೆಲ್ಸದವರ ಹೊಟ್ಟೆ ಹೊಡೆಯಕ್ಕೆ ನಂಗೆ ಇಷ್ಟಾ ಇರ್ಲಿಲ್ಲ " ಅಂತ ಅಂದರು. ನಾವು " ಅಯ್ಯೋ ತಾಯಮ್ಮ ! ಒಂದು ಮಾತು ಹೇಳೋದಲ್ವ ? ನಾವು ನಿಮ್ಮನ್ನೇ ಇಟ್ಕೋತಿದ್ವಿ" ಎಂಡು ಹಳೆಯ ಕೆಲಸಗಾರರ ಮಹತ್ಸಾಧನೆಗಳನ್ನ ವರ್ಣಿಸಿದೆವು. ಅವರು ಸಿಕ್ಕಾಪಟ್ಟೆ ಬೇಜಾರ್ ಮಾಡಿಕೊಂಡರು.

Z : ಅವರು ಹೇಗಿದ್ದಾರೆ ಈಗ ?

ನಾನು : ಕೇಳ್ಬೇಡ. ಕೆಲ್ಸ ಮಾಡದೇ ಇದ್ದ್ರೆ ಕೂಳಿಲ್ಲ ಅನ್ನೋ ಅಸಹಾಯಕತೆಗೆ ಪಾಪ ಹೇಗೋ ಸುಧಾರ್ಸ್ಕೊಂಡೀದಾರೆ... ಗಂಡ ಫ್ಯಾಕ್ಟರಿಲಿ ಬಿದ್ದು ಮಂದಿಯ ಚಿಪ್ಪು ಮುರಿದಿದೆ. ಆಪರೇಷನ್ ಗೆ ದುಡ್ಡಿಲ್ಲ. ಚೀಟಿಯ ದುಡ್ಡನ್ನ ಮಗನ ಕಾಲೇಜಿಗೆ, ಒಡವೆಗೆ ಇಟ್ಟಿದ್ದ ದುಡ್ಡನ್ನ ಮಗಳ ಹೈ ಸ್ಕೂಲಿಗೆ ಮತ್ತು ಹಳ್ಳಿಯ ಗೇಯ್ಮೆಯ ಪಾಲಲ್ಲಿ ಬಂದ ದುಡ್ಡಲ್ಲಿ ಅವರು ಆಪರೇಶನ್ ಮಾಡಿಸಿಸೊಂಡು ಔಷಧಿ ಖರ್ಚಿಗೆ ನಾವು ಕೊಟ್ಟ ದುಡ್ಡು ಬಳಸಿದ್ದಾರೆ. ಗಂಡನ ಆಪರೇಶನ್ ಗೆ ದುಡ್ಡಿಲ್ಲ ಅಂದಾಗ ನಾವೆಲ್ಲಾ ಮತ್ತೆ ಒಂದೊಂದು ಸಾವಿರ ರುಪಾಯಿ ದುಡ್ಡು ಕೊಟ್ಟು ಆಪರೇಷನ್ ಗೆ ಕಳಿಸಿದೆವು. ಡಾಕ್ಟರ್ ಆಂಟಿ ಬೌರಿಂಗ್ ಆಸ್ಪತ್ರೆಯ ವೈದ್ಯರ ಪರಿಚಯ ಮಾಡಿಸಿದರು. ಆಪರೇಶನ್ ಗೆ ಪೈಸ ತೆಗೆದುಕೊಳ್ಳಲಿಲ್ಲ ವೈದ್ಯರು. ಆದರೆ ಕ್ಲೀನರ್, ವಾರ್ಡ್ ಬಾಯ್ ಗಳ ಲಂಚಕ್ಕೆ ಹಣ ಹೊಂದಿಸಲು ಇವರು ಸುಸ್ತಾಗಿ ಹೋದರಂತೆ. ಬಡವರ ರಕ್ತ ಹೀರುವ ಇಂಥಾ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ತಾಯಮ್ಮ ಧಿಕ್ಕಾರ ಕೂಗಿ ಬಂದಿದ್ದಾರೆ. ದೇವರಂಥಾ ವೈದ್ಯರಿದ್ದರೂ ಇಂತಹ ಅಮಾನವೀಯ ವರ್ತನೆಯುಳ್ಳ ಸಿಬ್ಬಂದಿವರ್ಗದ ಮೇಲೆ ತಾಯಮ್ಮ ಕೆಂಡಕಾರಿ ಬಂದಿದ್ದಾರೆ.

Z : what a pity !

ನಾನು : Exactly ! ನೋಡು, ಎಂಥೆಂಥಾ ಆಶ್ವಾಸನೆಗಳನ್ನ ಕೊಡ್ತಾರೆ ರಾಜಕಾರಿಣಿಗಳು...ಸಚಿವರು, ಅಧಿಕಾರಿಗಳು ಎಲ್ಲ...ಗವರ್ನಮೆಂತ್ ಆಸ್ಪತ್ರೆಗಲಲ್ಲಿ ಕನಿಷ್ಟಮಟ್ಟದ ಶುಚಿತ್ವವನ್ನು ಕಾಪಾಡಲು ಅಧಿಕಾರಿಗಳಿಗೆ ಸಾಧ್ಯವಿಲ್ಲವೇ ? ತಾಯಮ್ಮ ಹೀಗೆ ಕೇಳಿದರು ನನ್ನನ್ನ- "ಅಲ್ಲವ್ವಾ...ಅವ್ರುಗಳ್ ಮನೇನ ಪಳಪಳ ಅಂತ ಹೊಳೆಯೋ ಹಾಗೆ ಇಟ್ಕೋತಾರಲ್ಲ...ಅವ್ರು ದುಡ್ಯೋ ಜಾಗನೂ ಅಂಗೇ ಇರ್ಬೆಕಲ್ವ್ರಾ ? ಏನ್ ಓದಿ ಏನ್ ಪ್ರಯೋಜ್ನ ಏನ್ ಔಶ್ದ ಹಾಕ್ ಏನ್ ಉಪ್ಯೋಗ ಜಾಗನೇ ಕಿಲೀನಾಗಿಲ್ಲಾ ಅಂದ್ರ?" ನಾನು ಏನೂ ಉತ್ತರಿಸಲಾಗದೇ ಸುಮ್ಮನಿದ್ದೆ.

Z : ಛೆ!

ನಾನು : ಈಗ ತಾಯಮ್ಮನ ಗಂಡ ಮನೆಗೆ ಬಂದಿದ್ದಾರೆ. ನಮಗೆ ನಾಳೆ ಬರಕ್ಕೆ ಆಗತ್ತೆ ಅಥ್ವಾ ಆಗಲ್ಲ ಅನ್ನೋದನ್ನ ಮೊದಲೇ ತಿಳಿಸುತ್ತಾರೆ. ಮೊದಲಿನಂತೆ ಅವರಿಗೆ ಹೆಚ್ಚು ಕೆಲಸ ಮಾಡಕ್ಕೆ ಆಗಲ್ಲ ಆದ್ದರಿಂದ ನಮ್ಮ ಬಟ್ಟೆಗಳನ್ನು ನಾವೇ ಒಗೆಯುತ್ತಿದ್ದೇವೆ. ಅವರಿಗೆ ಸ್ವಲ್ಪವೇ ಬಟ್ಟೆ ಹಾಕಲಾಗತ್ತೆ. ಅವರು ಮೂರೇ ಮೂರು ಮನೆಗಳನ್ನು ಒಪ್ಪಿಕೊಂಡು, ಕಾಯಿಯ ಅಂಗಡಿ ಕೂಡಾ ನಡೆಸುವ ಯೋಜನೆ ಹಾಕಿದ್ದಾರೆ. ಗಂಡನಿಗೆ ಇನ್ನು ಮುಂದೆ ನಡೆಯುವುದು ಕಷ್ಟ ಆಗುತ್ತದೆಯಾದ್ದರಿಂದ ಕುಳಿತು ಮಾಡಲು ಈ ವ್ಯಾಪಾರ ಸರಿ ಎಂದು ನಮ್ಮೊಡನೆ ಹೇಳಿಕೊಂಡರು. ಅವರು ಮನೆಯ ಕೆಲಸಕ್ಕೆ ವಾಪಸ್ ಬಂದರಲ್ಲಾ...ನಮಗೆ ಅದೇ ಸಂತೋಷ.

Z :True.

ನಾನು : ಇದು ತಾಯಮ್ಮನ ಕಥೆ. ಲಕ್ಷಕ್ಕೊಬ್ಬರು ಇಂಥಾ ಕೆಲ್ಸದವರು ಸಿಕ್ಕೋದು ಅನ್ನಿಸತ್ತೆ. ನಾವು ಅದೃಷ್ತವಂತರು. ಅಲ್ವಾ ?

Z :ಹು.

Tuesday, November 18, 2008

Task accomplished

ನಾನು : :-)

Z : ಸಾಕು ಕಿಸಿಬೇಡ.

ನಾನು : :-) :-) :-)


Z : ಸಾಕುಉಉಉಉಉಉಉಉಉಉಉಉ !!!!!!!!!!!!!!!!!!!!!!!!!!!!!!

ನಾನು : :-) :-) :-) :-) :-) :-) :-) :-) :-) :-) :-) :-)

Z : ಸಾಕೆಲೆ !

ನಾನು : ನನಗೆ ಎಷ್ಟು ಸಂತೋಷವಾಗಿದೆ ಅಂತ ನಿನಗೇನ್ ಗೊತ್ತು ?

Z : ನೀನು ಬಾಯ್ಬಿಟ್ಟಿದ್ದೇ ಮೊಟ್ಟ ಮೊದಲ ಸಂತೋಷ. ಇದಕ್ಕಿಂತಾ ಸಂತೋಷ ಬೇರೆ ಬೇಕೆ ?

ನಾನು : ಬೇಕು.

Z : ಬೇರೆ ಏನಕ್ಕೆ ಸಂತೋಷವಾಯ್ತು ನಿಂಗೆ ?

ನಾನು : ಜನ ಎಲ್ಲ " ಬಾಯ್ಬಿಟ್ಟು ಮಾತಾಡಮ್ಮ ತಾಯಿ..." ಅಂತ ಬೇಡ್ಕೊಂಡ್ರಲ್ಲ....ಸಿಕ್ಕ್ ಸಿಕ್ಕಾಪಟ್ಟೆ ಖುಶಿಯಾಯ್ತು ನಂಗೆ.

Z : :-)

ನಾನು : ಏನ್ ಗೊತ್ತಾ...ಅಮ್ಮ ಅಂತು..." ಈ ಥರ ನೀನ್ ಸೈಲೆಂಟಾಗಿದ್ರೆ ಮನೆ ಮನೆ ಥರ ನೇ ಇರಲ್ಲ...ಮಾತಾಡಿ ಪುಣ್ಯ ಕಟ್ಕೋ..." ಅಂದ್ರು. ನಾನು ಆಗ್ಲೂ ಸುಮ್ನಿದ್ದೆ.

Z : ಆಮೇಲೆ ?

ನಾನು : ಅಣ್ಣ ಅದನ್ನೇ ಲುಕ್ಕಲ್ಲಿ ಹೇಳಿದ್ರು. ಆವಾಗ ಯೋಚ್ನೆ ಮಾಡಕ್ಕೆ ಶುರು ಮಾಡ್ದೆ. ಮಾತಾಡ್ಲಾ ಬೇಡ್ವಾ ಅಂತ.

Z : ಆಮೇಲೆ ?

ನಾನು : ಇನ್ನೊಂದ್ 20 percent ಅಷ್ಟು ಸಂಶೋಧನೆ ಬಾಕಿ ಇತ್ತು ಆಗ...ಅದಕ್ಕೆ ಆವಾಗ್ಲೂ ಸುಮ್ನಿದ್ದೆ.

Z : ಇವತ್ತೇನ್ ಮಾತಾಡಿದ್ದು ಮತ್ತೆ ?

ನಾನು : ರಿಸರ್ಚಿನ ಒಂದು ಹಂತ ಮುಗಿತು.

Z : ಏನ್ ಘನಂದಾರಿ ರಿಸರ್ಚು ಮಾಡಿದ್ರಿ ತಾವು ?

ನಾನು : ನೋಡು...ಈ ಥರ ಅವಹೇಳನಕಾರಿಯಾಗಿ ಮಾತಾಡ್ಬೇಡ....

Z : ಆಯ್ತಮ್ಮ. ರಿಸರ್ಚು ಹೈಲೈಟ್ಸ್ ಒದರು...sorry sorry... ಹೇಳು.

ನಾನು : Z ನೋಡು..ನಾನು ಕೊಲ್ಲುವ ಮೌನದ ಮೇಲೆ ರಿಸರ್ಚು ಮಾಡಲು ಪ್ರಾರಂಭಿಸಿದ್ದೆಯಾದರೂ ತೀರ ಅವಶ್ಯಕ ಎನಿಸಿದಾಗ, ಮನೆಯವರಿಗೆ ನನ್ನ ರಿಸರ್ಚಿನ ಬಗ್ಗೆ ಗೊತ್ತಾಗದಿರುವಂತೆ ಆಗಾಗ ಒಂದೆರಡು ನುಡಿಮುತ್ತುಗಳನ್ನು ಉದುರಿಸುತ್ತಿದ್ದೆ. ಕಾಫಿ, ತಿಂಡಿ, ಊಟ, ಹಸಿವು, ಮಲ್ಕೋತಿನಿ, ಓದ್ತಿದಿನಿ, ಬ್ಯುಸಿ, ಆಗಲ್ಲ, ಹೌದು ಮತ್ತು ಇಲ್ಲ.

Z : ಓಕೆ.

ನಾನು : ಆದರೆ, ಬೇರೆ ಯಾರಾದರೂ ಕೇಳಿದರೆ ಏನ್ ಮಾಡಿದ್ರು ಬಾಯ್ ಬಿಡ್ತಿರ್ಲಿಲ್ಲ.

Z : ಒಹೋ !

ನಾನು : ಹೂ... ಆಗ ಅವ್ರು ನನ್ನ ಮೌನವನ್ನ ಏನೂ ಅಂತಲೇ ಅರ್ಥ ಮಾಡ್ಕೊಳ್ಳಕ್ಕಾಗ್ದೆ ಒದ್ದಾಡುತ್ತಿದ್ದಿದ್ದು ನೋಡಿ...ನಾನ್ ಆಮೇಲೆ ಎಷ್ಟ್ ನಕ್ಕಿದಿನಿ ಅಂದ್ರೆ............

Z : ಆಹಾ....

ನಾನು : ಕೇಳು ಕಥೆ ಪೂರ್ತಿ...ಒಬ್ಬೊಬ್ಬರದ್ದು ಒಂದೊಂದು ಥರ interpretation-ನ್ನು...ನಾನು topic of discussion-ನ್ನು !

Z : ಕರ್ಮಕಾಂಡ !

ನಾನು : ಒಬ್ಬರು ಅಮ್ಮನ ಬಳಿ ..." ಏನ್ ರೀ? ಎನಾಯ್ತು ನಿಮ್ಮ ಮಗಳಿಗೆ ? mood ಸರಿಗಿಲ್ವ ?

ಅಮ್ಮ speechless. ನಾನೂ.

ಇನ್ನೊಬ್ಬರು " ಪಾಪ ಓದಿ ಓದಿ ಸುಸ್ತಾಗಿರ್ಬೇಕು ರಿ...ಮಾತೇ ಹೊರಡ್ತಿಲ್ಲ, ತಲೆ ತುಂಬಾ ಕಾಲ್ಕ್ಯುಲೇಷನ್ ಅನ್ಸತ್ತೆ..."

ನನ್ನ ತಲೆಯಲ್ಲಿ ಆಗ electrodynamics + "ನಟಸಾರ್ವಭೌಮ " ಕಾದಂಬರಿ hangover.

ಮಗದೊಬ್ಬರು " ಪ್ರಾಯಶಃ ಅವ್ರ ಮನೆಲಿ ಯಾರಾದ್ರು ಬೈದಿರ್ಬೇಕು...ಇಲ್ಲಾಂದ್ರೆ ಇವ್ಳು ಹೀಗಲ್ಲ..."

ನಮ್ಮಮ್ಮನಿಂದ ನನಗೊಂದು ದಟ್ಟ ದರಿದ್ರ ಲುಕ್ಕು ಪ್ರದಾನ . ನಾನು ಅತಿವಿನಮ್ರಳಾಗಿ " returned with thanks" look ಕೊಟ್ಟೆ.

ಇದು ಮೇಲ್ನೋಟ.

Z : ಒಳನೋಟವನ್ನು ಪೇಳುವಂತಹವರಾಗಿ.

ನಾನು : ನಾನು ಈ ರಿಸರ್ಚು ಮಾಡಿದ ಮುಖ್ಯ ಉದ್ದೇಶ ಏನಪ್ಪಾ ಅಂದರೆ, ಮಾತೇ ಬರದವರನ್ನು ಸಮಾಜ ಹೇಗೆ ಅರ್ಥೈಸಿಕೊಳ್ಳುತ್ತದೆ ? ಅವರ ಸಂವೇದನೆ ಹೇಗಿರತ್ತೆ ? ನಾನು ಹಾಗೆ ಕೆಲವು ಕೈ ಸನ್ನೆಗಳನ್ನು ಅಭ್ಯಾಸ ಮಾಡಿಕೊಳ್ಳಲೂ ಶುರು ಮಾಡಿದ್ದೆ. ಆದರೆ ಅದರ ಪ್ರದರ್ಶನಕ್ಕೆ ಅವಕಾಶ ಸಿಗಲಿಲ್ಲ.

Z : ಯಾಕೆ ?

ನಾನು : ಅಣ್ಣ ಮಾತಾಡ್ತ್ಯೋ ಇಲ್ವೋ ಅಂತ ಗದರಿಸೋ ಚಾನ್ಸಸ್ ಜಾಸ್ತಿ ಇತ್ತು. ರಿಸ್ಕ್ ರನ್ ಮಾಡಾಕ್ಕಾಗ್ಲಿಲ್ಲ.

Z : :( pity.

ನಾನು : But still, I accomplished what all tasks I had set. ನಾನು ಐದು ಮುಖ್ಯ ಅಂಶಗಳನ್ನು ಗಮನಿಸಿದೆ.

೧. ನಾವು ಮಾತು ನಿಲ್ಲಿಸಿದಾಗ ಕಣ್ಣುಗಳು ಹೆಚ್ಚು expressive ಆಗುತ್ತವೆ. ನಮ್ಮ ಇತರ sense organs ಆಶ್ಚರ್ಯಕರ ರೀತಿಯಲ್ಲಿ ಚುರುಕಾಗುತ್ತವೆ.

೨. ಜನರು ತಮಗೆ ಗೊತ್ತಿಲ್ಲದೆಯೇ ನಮ್ಮನ್ನು sign language ನಲ್ಲಿ ಮಾತನಾಡಿಸಲು ಶುರು ಮಾಡುತ್ತಾರೆ.

೩. ನಾವೂ ನಮಗರಿವಿಲ್ಲದಂತೆಯೇ ತಲೆ ಅಲ್ಲಾಡಿಸುತ್ತಾ ಹುಂ ಉಹುಂ ಗುಟ್ಟುತ್ತಿರುತ್ತೇವೆ.

೪. ಮೌನವನ್ನು ಶೇಕಡಾ ಅರವತ್ತರಷ್ಟು ಜನ ಅಸಮಾಧಾನ ಅಂತಲೇ ಅರ್ಥಮಾಡಿಕೊಳ್ಳುತ್ತಾರೆ.

೫. ಜನರು ನಮ್ಮನ್ನು ಮಾತಾಡಿಸುವಾಗ ಯಾಕೋ ಒಂದು ಭಯದ ಛಾಯೆ ಕಾಣಿಸುತ್ತದೆ. ಅವರು ನಮನ್ನು ಹಿಂದೆ ಆಡಿಕೊಂಡಿದ್ದೋ, ಮೋಸ ಮಾಡಿದ್ದೋ, ಬೆನ್ನಿಗೆ ಚೂರಿ ಹಾಕಿದ್ದೋ ಇವರಿಗೆ ತಿಳಿದು ಹೋಯ್ತಾ ಅಂತೆಲ್ಲಾ ಯೋಚ್ನೆ ಮಾಡ್ತಾರೆ ಅನ್ಸತ್ತೆ. moreover, ಅವರು ಮಾತಾಡಿ ಮಾತಾಡಿ ಅಭ್ಯಾಸ ಆಗಿರೋವಾಗ ತಲೆಗೆ ಹೆಚ್ಚು ಕೆಲ್ಸ ಇರಲ್ಲ. ಇನ್ನೊಬ್ಬರ ಪ್ರತಿಕ್ರಿಯೆಯ ಮೇಲೆ ಅವರ ಮುಂದಿನ ಹೆಜ್ಜೆ ನಿಂತಿರುತ್ತದೆ. According to them, everything must be easily comprehensible. ಆದರೆ ನಮ್ಮಿಂದ ಪ್ರತಿಕ್ರಿಯೆಯೇ ಬರದಿದ್ದಾಗ ಇವರ ತಲೆ ಕೆಡುತ್ತದೆ. ಹೆಚ್ಚು ಯೋಚನೆ ಮಾಡಬೇಕಾಗುತ್ತದೆ. ಹೇಗಾದರೂ ಮಾಡಿ ಇವರನ್ನ ಮಾತಾಡಿಸಲೇಬೇಕೆಂದು ಕೆಲವರು ಮಾತ್ರ ಯೋಚಿಸುತ್ತಾರೆ. Trial and error methods ಇಂದ very few of themನಮ್ಮಿಂದ either by voice or by signs, reply ತಗೊಳ್ಳೋದ್ರಲ್ಲಿ successful ಆಗ್ತಾರೆ . most of them just don't even try ! Suppose, ನಾವು ಅವರ ಯೋಚನೆಯಂತೆ ನಡೆದುಕೊಳ್ಳದೇ ಇದ್ದರೆ ಬಹುಬೇಗ ಕೋಪವೂ ಬರುತ್ತದೆ. ಸಂಯಮ ಕಳೆದುಕೊಳ್ಳುತ್ತಾರೆ. ಮತ್ತು, ಅವರಿಗೆ ಆ ಕೂಡಲೆ ನಮ್ಮ ಪ್ರತಿಕ್ರಿಯೆಯನ್ನು ಅರ್ಥ ಮಾಡಿಕೊಳ್ಳೂವ ಶಕ್ತಿ ಕೂಡಾ ಇರುವುದಿಲ್ಲ. ಯಾಕಂದರೆ ಅವರು ವಿವೇಚನಾಶಕ್ತಿ ಹಾಗೂ ಸಂಯಮವನ್ನು ಕೋಪಕ್ಕೆ ಆಹುತಿ ನೀಡಿರುತ್ತಾರೆ. ಮತ್ತು, ಯೋಚನಾ ಲಹರಿಯನ್ನು ಯಾವ ಕಡೆ ಹರಿಯಬಿಡಬೇಕು ಅಂತ ತಿಳಿಯದೇ confuse ಆದವರು ಸುಮಾರು ಜನ ಇದ್ದಾರೆ. ಕಡೆಗೆ ಅವರು ನಮ್ಮ ಮೇಲೆ ಏನೇನು ಕತ್ತಿ ಮಸೆದಿದ್ದಾರೆ ಎಂದು ನಿಜ ಒಪ್ಪಿಕೊಂಡುಬಿಡುತ್ತಾರೆ. ನನಗೆ ಈ ಅನುಭವ ಆಗಿದೆ.

Z : ಆಹಾ ?

ನಾನು : ಯೆಸ್.

Z : ಆಮೇಲೆ ?

ನಾನು : ಇಷ್ಟು ದಿನ ಮೌನ ಯಾರನ್ನು "ಕೊಲ್ಲುತ್ತೆ" ಅಂತ ನೋಡ್ತಿದ್ದೆ. ಅದು ಸಾಮಾನ್ಯ ಮನುಷ್ಯರ ಸಂಯಮವನ್ನು ಕೊಂದಿರುವುದನ್ನು ನೋಡಿದ್ದೇನೆ. ಮೌನದಿಂದ ಸಂಯಮ ಬರತ್ತೆ ಅಂತ ಕೇಳಿದ್ದೆ....ಇದ್ಯಾಕೋ ಉಲ್ಟಾ ಹೊಡಿತು. ಯಾಕೆ ಅಂತ ಗೊತ್ತಾಗ್ಲಿಲ್ಲ. Moreover, ಜನ ಮನಸ್ಸಿಗೆ ಕಸರತ್ತು ಮಾಡಿಸಿರಲ್ಲ. ಈ ಮೌನವನ್ನ ಅರ್ಥ ಮಾಡಿಕೊಳ್ಳುವ ಕಸರತ್ತನ್ನು ಖಂಡಿತಾ ಜನ ಮಾಡಿರಲ್ಲ. ನನಗನ್ನಿಸತ್ತೆ, ಅದಕ್ಕೆ ಅವರಿಗೆ ಮೂಕರೊಂದಿಗೆ ಮಾತನಾಡಲು ಜಿಗುಪ್ಸೆ, ಅವರ ಕಂಡರೆ ಅಸಡ್ಡೆ. ಅರ್ಥ ಮಾಡಿಕೊಳ್ಳಲು ಕಷ್ಟ ಅನ್ನೋ ಒಂದೇ ಕಾರಣದಿಂದ ತಮ್ಮ patience ಕಳೆದುಕೊಳ್ಳುವ ಜನರಿಂದ ಮಾತುಬರದವರಿಗೆ ಅನಾಥ ಪ್ರಜ್ಞೆ ಕಾಡುತ್ತದೆ. ಅವರಿಗೆ ಅನುಕಂಪದ ಅವಶ್ಯಕತೆ ಖಂಡತಾ ಇಲ್ಲ, ಅವರನ್ನು ಅರ್ಥಮಾಡಿಕೊಳ್ಳುವವರ ಅವಶ್ಯಕತೆ ಇರತ್ತೆ. ನಾವು ಅವರ frequency match ಮಾಡಿಕೊಂಡರೆ ಅವರೂ ಸಿಕ್ಕಾಪಟ್ಟೆ ಮಾತಾಡ್ತಾರೆ :-)

Z : :-)


ನಾನು : ಈ ರಿಸರ್ಚನ್ನು ಪುಷ್ಟೀಕರಿಸಲು ನಾನು ಲೈಬ್ರರಿಯಲ್ಲಿ ಪುಸ್ತಕಗಳನ್ನು, ನೆಟ್ಟಲ್ಲಿ ರಿಸ್ಸರ್ಚು ಪೇಪರ್ಗಳನ್ನು ಹುಡುಕೋಣಾ ಅಂದರೆ, ನನ್ನ ಪಿಎಚ್.ಡಿ ಪರೀಕ್ಷೆ ಎಚ್ಚರದ ಘಂಟೆ ಬಾರಿಸುತ್ತಿದೆ. ಅದಾದ ಮೇಲೆ ಮೇಲ್ಕಂಡ ನನ್ನ observation ಗಳಲ್ಲಿ ಎಷ್ಟು ಸರಿ, ಎಷ್ಟು ತಪ್ಪು ಎಂಬುದನ್ನು ಕಂಡುಹಿಡಿಯಬೇಕಿದೆ. ಇದೊಂದು ಟೈಂ ಪಾಸ್ ಪ್ರಾಜೆಕ್ಟ್ ಆಗತ್ತೆ, ನಾನು ಯಾವ್ದಾದ್ರು ರಿಸರ್ಚ್ ಇನ್~ಸ್ಟಿಟೂಟ್ ನ ಲ್ಯಾಬ್ ಸೇರುವವರೆಗೂ. ಒಟ್ಟಿನಲ್ಲಿ phase 1 ಅಂತೂ ನನಗೆ ತೃಪ್ತಿಕೊಡುವ ರೀತಿಯಲ್ಲಿ ಮುಕ್ತಾಯ ಕಂಡಿದೆ. ಮುಂದಿನ ಫೇಸ್ ಅನ್ನು ಅತಿಶೀಘ್ರದಲ್ಲೇ ಆರಂಭಿಸುತ್ತೇನೆ.

Z : ಆಗ ಮತ್ತೆ ಮಾತಿಗೆ ಫುಲ್ ಸ್ಟಾಪಾ ?

ನಾನು : mostly. ಮುಂದಿನ ಬಾರಿ ನನ್ನ ಮೌನ ಜನರಿಗೆ ಅರ್ಥವಾಗತ್ತೆ ಅಂತ ನಂಬಿದ್ದೀನಿ. ಅರ್ಥವಾಗದಿದ್ದರೆ ಅದು ಅವರ ಯೋಚನಾಶಕ್ತಿಗೆ ಬಿಟ್ಟಿದ್ದು ಅಂತ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಫೇಸ್ ೨ ಮುಗಿದ ಮೇಲೆ ಮತ್ತೆ ಮಾತಾಡುವೆ. ಆದರೆ ಫೇಸ್ ೨ ಈಗಲೇ ಶುರು ಅಂತು ಮಾಡುವುದಿಲ್ಲ.

Z : ಸದ್ಯ.

ನಾನು : ಹೆ ಹೆಹೆಹೆ...

Z : ಆದ್ರೂ, ನೀನು at least ನನ್ನ ಜತೆಯಾದರೂ ಮಾತಾಡಬೇಕು. ಅದೊಂದು ಮಾತು ನಡೆಸಿಕೊಡು.

Well, lets ask everybody what they think about this.

ಓದುಗ ಬಂಧುಗಳೇ, ಮೌನದ ರಿಸರ್ಚಿನ ಎರಡನೆ ಹಂತ ಜಾರಿಯಲ್ಲಿರುವಾಗ head ruled (ನಾನು ) Z ರೊಂದಿಗೆ ಮಾತಾಡುವುದು ಸೂಕ್ತವೇ ? ನಿಮ್ಮ ಅತ್ಯಮೂಲ್ಯ ಮತವನ್ನು ಕಾಮೆಂಟ್ ಮೂಲಕ ಚಲಾಯಿಸಿ ಮತದಾನದ ಹಕ್ಕನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.

ಎಲ್ಲರಿಗೂ ಒಂದೇ ಬಾರಿ ಮಾತ್ರ ಮತ ಚಲಾಯಿಸಲು ಅವಕಾಶ. ಮತವನ್ನು ಬದಲಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ.

ಮತ ಚಲಾಯಿಸಲು ಕಡೆಯ ದಿನಾಂಕ ಮೂವತ್ತು ನವೆಂಬರ್, ೨೦೦೮.

Z : ಬೇಗ ವೋಟ್ ಮಾಡಿ ...

(Line on hold)

Saturday, November 1, 2008

ರಾಜ್ಯೋತ್ಸವದ ಶುಭಾಶಯಗಳು

ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಮ್ಮ ನಾಡು ಆವಿರ್ಭವಿಸಿ ಇಂದಿಗೆ ಐವತ್ಮೂರು ಶರದೃತುಗಳು. ಶರತ್ಕಾಲದ ಹುಣ್ಣಿಮೆಯಂತೆಯೇ ನಮ್ಮ ಭಾಷೆಯೂ ಮನೋಹರ, ಆಹ್ಲಾದಕರ. ಚಂದ್ರನ ಬೆಳುದಿಂಗಳಿಗೆ ಮೋಡದ ಅಡಚಣೆ ಇಲ್ಲದಿರೆ ಎಷ್ಟು ಚೆನ್ನವೋ, ಹಾಗೆಯೇ, ಶಾಸ್ತ್ರೀಯ ಸ್ಥಾನಮಾನ ದೊರಕುವುದೋ ಇಲ್ಲವೋ ಎಂಬ ಅನುಮಾನದ ಮೋಡವನ್ನು ಕೇಂದ್ರ ಸರಕಾರ ಸರಿಸಿ ಕನ್ನಡ ಚಂದ್ರಮನ ಧವಳಕಾಂತಿಯನ್ನು ಜಗತ್ತೆಲ್ಲ ಆಸ್ವಾದಿಸುವಂತೆ ಮಾಡಿದೆ. ಕನ್ನಡಿಗರ ಒಕ್ಕೊರಲ ಕೂಗಿಗೆ, ಸತತ ಪರಿಶ್ರಮಕ್ಕೆ, ಎಡೆಬಿಡದ ಹೋರಾಟಕ್ಕೆ ಇಂದು ನ್ಯಾಯ ಸಂದಿದೆ. ಕನ್ನಡಿಗರಿಗೆ ಈ ರಾಜ್ಯೋತ್ಸವ ನಿಜಕ್ಕೂ ಮಹೋತ್ಸವವಾಗಿದೆ.

ಶಾಸ್ತ್ರೀಯ ಸ್ಥಾನಮಾನ ಮೃತಭಾಷೆಗಳಿಗೆ ದೊರಕುತ್ತದೆ ಎಂಬ ಪ್ರತೀತಿ ಇದೆಯಾದರೂ ಯಾವ ಭಾಷೆಯೂ ಮೃತವಾಗಿಲ್ಲ, ತನ್ನ ರೂಪ ಬದಲಿಸಿದೆ ಎಂಬುದನ್ನು ಗಮನಿಸಬೇಕು. ನಮ್ಮ ಭಾಷೆ ಮೃತವಾಗದೇ ಮತ್ತಷ್ಟು ಸೊಗಡಿನಿಂದ ಕೂಡಿ ಅಮೃತವಾಹಿನಿಯಾಗಬೇಕೆಂಬುದು ಕನ್ನಡಿಗರ ಅಭಿಲಾಷೆಯಾಗಬೇಕು, ಅದಕ್ಕೆ ಪ್ರಾಮಾಣಿಕತೆಯಿಂದ ಶ್ರಮಿಸಬೇಕು.

ಜೈ ಕರ್ನಾಟಕ

ಸಿರಿಗನ್ನಡಂ ಗೆಲ್ಗೆ.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...