Monday, September 27, 2010

ಕ್ಷಮಯಾ ಧರಿತ್ರಿಗೊಂದು ಭಾವಪೂರ್ಣ ವಿದಾಯ

ಸೀರಿಯಲ್ಲುಗಳು ದೂರದರ್ಶನದಲ್ಲಿ ಆಗಷ್ಟೇ ತಮ್ಮ ನಿಲುವನ್ನು ಸ್ಥಾಪಿಸಿಕೊಳ್ಳುತ್ತಿದ್ದ ಕಾಲ ಅದು. ಮಾನವ ಸಮಾಜವನ್ನು ಕಾಡುತ್ತಿದ್ದ ಸಮಸ್ಯೆಗಳ ಹಲವು ಮಜಲುಗಳನ್ನು ಪರಿಚಯಿಸಲು ಕಲಾವಿದರು ಪ್ರಯತ್ನಿಸುತ್ತಿದ್ದ ಕಾಲವದು. ಅಂತಹ ಸಮಯದಲ್ಲಿ ಸದ್ದಿಲ್ಲದೇ ಸುದ್ದಿ ಮಾಡಿದ, ಸೂಕ್ಷ್ಮ ವಿಷಯಗಳ ಸಮರ್ಥ ಅಭಿವ್ಯಕ್ತಿಯಿಂದ ಎಲ್ಲರ ಗಮನ ಸೆಳೆದ ಸೀರಿಯಲ್ಲುಗಳು ಐದು.

೧- ಪ್ರಕಾಶ್ ಬೆಳವಾಡಿಯವರ ಕವಲೊಡೆದ ದಾರಿ-ವಿವಾಹ ವಿಚ್ಛೇದನ ಇದರ ವಸ್ತು. ೧೯೯೪ ನಲ್ಲಿ ಡಿವೋರ್ಸ್ ಈಗಿನಷ್ಟು ಕಾಮನ್ ಆಗಿರಲಿಲ್ಲ.

೨. ಕ್ಷಮಯಾ ಧರಿತ್ರಿ ಎಂಬ ವೈದ್ಯೆಯೊಬ್ಬಳ ಕಥೆ. ನಿರ್ದೇಶನ ಪ್ರಾಯಶಃ ವೈಶಾಲಿ ಯವರದ್ದೇ ಇರಬೇಕು, ಇದರ ಕಥಾನಾಯಕಿಯೂ ಇವರೆ. ಈಕೆ ಒಬ್ಬರು ಗೈನಾಕಾಲಜಿಸ್ಟ್. ಮನೆಯಲ್ಲಿ ಒಬ್ಬ ಗೃಹಿಣಿ,ಆದರೆ ಮನೆಯಲ್ಲಿ ಯಾರಿಗೂ ಇವಳ ಬೆಲೆ ಗೊತ್ತಿಲ್ಲ. ಯಾರು ಏನೇ ವ್ಯಂಗ್ಯವಾಡಿದರೂ, ಎಲ್ಲರೂ ಏನೇ ಮಾಡಿದರೂ, ಮಾಡಿದ ತಪ್ಪನ್ನು ನಗುನಗುತ್ತಲೇ ಕ್ಷಮಿಸುತ್ತಿದ್ದ ಕ್ಷಮಯಾ ಧರಿತ್ರಿ. ಈ ಕಥೆ ನನಗೆ ಅಷ್ಟು ಚಿಕ್ಕವಯಸ್ಸಿನಲ್ಲೇ ನನ್ನ ಮನಸ್ಸನ್ನು ಆಕರ್ಷಿಸಿದ್ದ ಸೀರಿಯಲ್ಲು. ಇದರಲ್ಲಿ ವೈಶಾಲಿಯವರ ಅಭಿನಯ ಇನ್ನೂ ನನ್ನ ಕಣ್ಣ ಮುಂದೆ ಹಾಗೇ ನಿಲ್ಲುತ್ತದೆ. ತನ್ನ ಆಸ್ಪತ್ರೆಯಲ್ಲಿ ಯಾವುದೇ ಕಾರಣಕ್ಕೂ ಗರ್ಭಪಾತ ನಡೆಯಕೂಡದೆಂದು ಹೋರಾಡುತ್ತಿದ್ದ, ತಾನು ಎಂದಿಗೂ ಗರ್ಭಪಾತದ ಕೇಸುಗಳನ್ನು ಒಪ್ಪಿಕೊಳ್ಳದ, ಗುಟ್ಟಾಗಿ ಸಿಸೇರಿಯನ್ ಮತ್ತು ಅಬಾರ್ಷನ್ ಮಾಡುತ್ತಿದ್ದ ವೈದ್ಯರನ್ನೆಲ್ಲಾ ಎದುರುಹಾಕಿಕೊಂಡರೂ ಅಂಜದೇ ಅಳುಕದೇ ದಿಟ್ಟ ಮಹಿಳೆಯಾಗಿ ಬಾಳುತ್ತಿದ್ದ ಈ ವೈದ್ಯೆಯ ಮಗಳೇ ಕಡೆಗೆ ತನ್ನದೇ ಆಸ್ಪತ್ರೆಯಲ್ಲಿ ಗುಟ್ಟಾಗಿ ಗರ್ಭಪಾತ ಮಾಡಿಸಿಕೊಂಡು ಸಿಕ್ಕಿಬೀಳುವ ಪ್ರಸಂಗ ಇನ್ನೂ ನೆನಪಿದೆ ನನಗೆ. ಆ ಸಮಯದಲ್ಲಿ ಆ ವೈದ್ಯೆಯ ತಾಕಲಾಟದ ಆ ಅಭಿನಯಕ್ಕೆ ನಿಜವಾಗಲೂ ಹ್ಯಾಟ್ಸ್ ಆಫ್, ವೈಶಾಲಿಯವರು ಆ ತುಮುಲವನ್ನು ಕಣ್ಣಿನ ಒಂದು ನೋಟದಲ್ಲಿ ತೋರಿಸುತ್ತಾರೆ, ಆ ನೋಟ ಇನ್ನೂ ಕಾಡತ್ತೆ ನನ್ನ. ಚಿತ್ರಗಳಲ್ಲಿನ ಅವರ ಅಭಿನಯದ ಶ್ಲಾಘನೆ ಮಾಡಿದಷ್ಟೂ ಮುಗಿಯದು, ಅವರ ಪ್ರತಿಭೆ ಎಷ್ಟೇ ಹಾಡಿ ಹೊಗಳಿದರೂ ಸಾಲದು. ಲೋಕಕ್ಕೆ ಅವ್ರು ಹಾಗೆ, ಆದರೆ ವೈಶಾಲಿ ಎಂದರೆ ನನ್ನ ಪಾಲಿಗೆ ಕ್ಷಮಯಾ ಧರಿತ್ರಿಯೇ. ಆನಂತರ ಗಣೇಶನ ಮದುವೆಯ ಕ್ರಿಕೆಟ್ ಪ್ರಿಯೆ.

ಇಂದು ವೈಶಾಲಿಯವರು ನಮ್ಮೊಂದಿಗೆ ಇಲ್ಲ. ನನ್ನ ಹೃದಯಕ್ಕೆ ಅತ್ಯಂತ ಆಪ್ತರಾದ ಒಬ್ಬರನ್ನು ಕಳೆದುಕೊಂಡಂತೆ ಆಗಿದೆ ನನಗೆ. ಅವರು ಪಾತ್ರವನ್ನು ಅಭಿನಯಿಸದಂತೆ ಕಾಣುತ್ತಿರಲಿಲ್ಲ, ಪಾತ್ರವೇ ಅವರಾಗಿಬಿಡುತ್ತಿದ್ದರು. ಹಾಗಾಗಿ ಅವರು ಮತ್ತಷ್ಟು ಆಪ್ತರಾಗುತ್ತಿದ್ದರು. ಕಳ್ಳ ಕುಳ್ಳ ಚಿತ್ರದ ಕತ್ರಿ ಕಮಲಿಯಾಗಲಿ, ಹೊಂಬಿಸಿಲಿನ ವೈದ್ಯೆಯಾಗಲೀ, ಇನ್ಯಾವುದೇ ಪಾತ್ರವಾಗಲಿ, ಅದು ಜನ ಮರೆಯುವಂಥದ್ದಲ್ಲ, ಆಚಂದ್ರಾರ್ಕಸ್ಥಾಯಿಯಾದಂಥದ್ದು.

೩. ಟಿ.ಎನ್.ಸೀತಾರಾಂ ಅವರ ಕಾಮನ ಬಿಲ್ಲು ಧಾರಾವಾಹಿ. ಬಿಸಿನೆಸ್ ಜನರ ಮನೆತನದ ಒಳಗು ಹೊರಗುಗಳನ್ನು ಸಾಮಾನ್ಯರಿಗೆ ಅತ್ಯಂತ ಮನೋಜ್ಞವಾಗಿ ತೋರಿಸಿಕೊಟ್ಟ ಸೀತಾರಾಂ ಅವರ ಮಾಸ್ಟರ್ ಪೀಸ್ ಗಳಲ್ಲಿ ಒಂದು. ಇದರಲ್ಲಿ ವೈಶಾಲಿಯವರದ್ದು ಬಿಸಿನೆಸ್ ಮೆನ್ ಒಬ್ಬನ ಹೆಂಡತಿಯ ಪಾತ್ರ. ಆ ಪಾತ್ರ ನೋಡಿದಾಗಲೆಲ್ಲಾ ನನಗೆ ನಮ್ಮ ಅಜ್ಜಿಯ ನೆನಪಾಗುತ್ತಿತ್ತು. ನಮ್ಮ ಅಜ್ಜಿ ಹೋಗಿಬಿಟ್ಟರು. ಈಗ ಇವರೂ....

೪. ಬ ಲ ಸುರೇಶ್ ಅವರ ಅಸ್ತಂಗತ ಧಾರಾವಾಹಿ. ವಾರ್ಧಕ್ಯದ ಕುರಿತಾದ ಧಾರಾವಾಹಿ ಇದು. ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಅವರ ಅಣ್ಣ ರವಿಕುಮಾರ್ ಅವರು ಮುಖ್ಯಪಾತ್ರದಲ್ಲಿದ್ದ ಧಾರಾವಾಹಿ. ಇಂದು ವೈಶಾಲಿಯವರು ಅಸ್ತಂಗತರಾಗಿದ್ದು ಇದನ್ನೆಲ್ಲಾ ಬರೆಯುವಂತೆ ಮಾಡಿದೆ.

೫. ಐ.ಓ.ಬಿ ಚಂದ್ರು ಅವರ ಚಂದಮಾಮ ಚಕ್ಕುಲಿಮಾಮ ಧಾರಾವಾಹಿ. ಐ.ಓ.ಬಿ ಚಂದ್ರು ಒಬ್ಬ ಕ್ರಿಯೇಟಿವ್ ನಿರ್ದೇಶಕ. ಪ್ರತಿಯೊಂದು ಸೀರಿಯಲ್ ನಲ್ಲೂ ಏನಾದರೊಂದು ಹೊಸದೊಂದು ಇದ್ದೇ ಇತ್ತು. ಕ್ಲೈಮ್ಯಾಕ್ಸ್ ನ ಇಡೀ ಟೀಮ್ ನೊಟ್ಟಿಗೆ ಚರ್ಚಿಸಿ ಅದೊಂದು ಸಂವಾದದಂತೆ ಮಾಡಿದ ಪ್ರಪ್ರಥಮ ನಿರ್ದೇಶಕರು. ಇವರೂ ಕೂಡಾ ರಸ್ತೆ ಅಪಘಾತದಲ್ಲಿ ವಿಧಿವಶರಾದರು. ಇವರು ಸತ್ತಾಗ ಅವರ ವಯಸ್ಸು ಮೂವತ್ತೆರಡರ ಸುಮಾರು.

ಹೀಗೆ, ನನ್ನ ಆಪ್ತೇಷ್ಟರೆಲ್ಲಾ ಒಬ್ಬೊಬ್ಬರೇ ಮಾಯವಾಗುತ್ತಿದ್ದಾರೆ. ನನಗೆ ಇವತ್ತು ಎಷ್ಟು ಬೇಜಾರಾಗಿದೆ ಅಂತ ಪ್ರಾಯಶಃ ಪದಗಳಲ್ಲಿ ವರ್ಣಿಸುವುದು ಸಾಧ್ಯವಿಲ್ಲ. ಜ್ವರದಲ್ಲಿ ಮಲಗಿರುವ ನನಗೆ ಕಂಪ್ಯೂಟರ್ ಕಡೆ ದಿಂಬು ಕೂಡಾ ಹಾಕಿ ಮಲಗಬಾರದೆಂದು ಕಟ್ಟಪ್ಪಣೆ ಮಾಡಿದ್ದರು. ಆದರೆ ಔಷಧಿ ತೆಗೆದುಕೊಳ್ಳಲು ಕಣ್ಬಿಟ್ಟ ನನ್ನ ನಿದ್ದೆ ಕೆಡಿಸಿದ್ದು ಈ ಸುದ್ದಿ. ದುಃಖ ಉಮ್ಮಳಿಸಿಬಂದು, ಅಪ್ಪಣೆಗಳನ್ನು ಅಟ್ಟಕ್ಕೆ ಎಸೆದು ಬ್ಲಾಗ್ ಅಪ್ಡೇಟ್ ಮಾಡಲು ಕೂತಿದ್ದೇನೆ. ಸುದ್ದಿಕೇಳಿದಾಗಿನಿಂದ ನನ್ನ ಕಿವಿಯಲ್ಲಿ ಗುಯ್ ಗುಡುತ್ತಿರುವುದು ಕ್ಷಮಯಾ ಧರಿತ್ರಿಯ ಟೈಟಲ್ ಸಾಂಗು...

"ಭೂಮಿ ನೀನು ಸಹನೆಯಲಿ, ಬೆಂಕಿ ನಿನ್ನ ಒಡಲಿನಲಿ, ಯಾರಿಗೆ ಹೋಲಿಸಲಿ, ಕ್ಷಮಯಾ ಧರಿತ್ರಿಯ ಕಲೆ..."

ಕ್ಷಮಯಾ ಧರಿತ್ರಿಗೆ ಒಂದು ಭಾವಪೂರ್ಣ ಶ್ರದ್ಧಾಂಜಲಿ.

Saturday, June 12, 2010

ಉತ್ತರಾಯಣ - ೧

ನಾನು : ಟ್ರೈನ್ ತನ್ನಷ್ಟಕ್ಕೆ ತಾನು ಚಲಿಸುತ್ತಿತ್ತು,ಆಗ್ರಾ ಕಡೆಗೆ.ಕೋಟಿ ಭಾವನೆಗಳನ್ನು ಹೊತ್ತ ಜನರನ್ನ ಹೊತ್ತುಕೊಂಡು ತಾನು ನಿರ್ಭಾವುಕವಾಗಿ ಚಲಿಸುತ್ತಿತ್ತು.

Z : ನಿನ್ನ styleನಲ್ಲಿ ಒಂದು ಮಾತು ಹೇಳಲಾ ?

ನಾನು : ಹು.

Z :It is the characteristic feature of the train to move at its speed to the destination.As it is a non-living thing, we cannot attribute emotions to it.So,what is so big about it ?

ನಾನು : :) ಕಳ್ಳಿ ! ನನ್ನ ಥರ ಯೋಚ್ನೆ ಮಾಡ್ತ್ಯಾ ?

Z : ನೀನು ನನ್ನ ಥರ ಯೋಚ್ನೆ ಮಾಡಿದ್ರೆ ನಾನು ನಿನ್ನ ತರಹ ಮಾಡ್ಬೇಕಾಗತ್ತೆ, balance ಮಾಡಕ್ಕೆ :P ಮುಂದುವರೆಸು.

ನಾನು : ಎಂಟು ಗಂಟೆಯ ಸುಮಾರಿಗೆ ಕಾಫಿ ಟೀ ಸಮಾರಾಧನೆ ಪ್ರಾರಂಭವಾಯ್ತು. ಕಾಫಿಯ ಹಿಂದೆಯೇ ಟೀ ಬಂತು. ನಮ್ಮಮ್ಮ, " ಲಕ್ಷ್ಮೀ ಕಾಫಿ ?" ಅಂದ್ರು. ನಾನು " ಬೇಡ" ಅಂದೆ. ಇಡೀ ಬೋಗಿ ಸ್ಥಬ್ದ.

Z : ಅಲ್ವಾ ಮತ್ತೆ? ಕಾಫಿಯ ಆರಾಧಕಿಯಾದ ನೀನು, ಸ್ವತಃ ಸ್ವಯಂ ಸಾಕ್ಷಾತ್ ನೀನು ಕಾಫಿ ಬೇಡಾ ಅಂದ್ರೆ, ಇರೋರ್ಗೆಲ್ಲಾ ಶಾಕ್ ಆಗಲ್ವ ? ಹೈ ಟೆನ್ಷನ್ ವೈರ್ ಮುಟ್ಟಿದ ಹಾಗಾಗಿರತ್ತೆ ಪಾಪ.

ನಾನು : ನೋಡು, ಕಾಫಿ ಅನ್ನೋ ಪೇಯ ಹೇಗಿರ್ಬೇಕು ಗೊತ್ತ ?

Z : ಹೇಗಿರ್ಬೇಕು ?

ನಾನು : ಚಿಕ್ಕಮಗಳೂರಿಂದ ಕಾಫಿ ಬೀಜ ತಂದು, ಪುಡಿ ಮಾಡಿಸಿ, ಚಿಕೋರಿ ೨೦ ಪೆರ್ಸೆಂಟ್ ಹಾಕಿ, ಸೇಲಂ ಸ್ಟೀಲಿನ ಕಾಫಿ ಫಿಲ್ಟರ್ ನಲ್ಲಿ ಡಿಕಾಕ್ಷನ್ ಹಾಕಿ, ನಂದಿನಿ ಹಾಲು ಬೆರೆಸಿ, ಪ್ಯಾರಿಸ್ ಶುಗರ್ ಹಾಕಿ ಕರಗಿಸಿ,ಪೋರ್ಸಿಲೇನ್ ಕಪ್ ನಲ್ಲಿ ಕುಡಿದರೇನೆ ಅದು ಕಾಫಿ ಅನ್ಸ್ಕೊಳ್ಳೋದು.

Z : ಮತ್ತೆ ಟ್ರೈನ್ ನಲ್ಲಿ ಕೊಡೋದು ?

ನಾನು : ಕಾಫಿ ಪ್ಲೇವರ್ ಇರೋ ಬಿಸಿಯಾದ ಸಕ್ಕರೆ ಪಾನಕ.

Z : ಅದಕ್ಕೆ ಬೇಡಾ ಅಂದ್ಯಾ ?

ನಾನು : ಯೆಸ್. ನಾನು ಬೇಗ ಮುನ್ನೆಡೆಯುತ್ತಿದ್ದ ಟೀಯವನನ್ನ ನಿಲ್ಲಿಸಿ ಟೀ ತೆಗೆದುಕೊಂಡೆ. ಪಾಪ ನಮ್ಮ gang ಗೆ ಗಾಬರಿ ನೆ ಆಗೋಯ್ತು.

Z : ಯಾಕೆ ಹಿಂಗೆಲ್ಲಾ ಶಾಕ್ ಕೊಡ್ತ್ಯಾ ?

ನಾನು : ಚೆನ್ನಾಗಿರೋ ಕಾಫಿ ಕುಡಿದು ಅಭ್ಯಾಸ ಆಗಿರೋ ನಾಲಗೆಗೆ ಈ ಪಾನಕ ಕುಡಿಸಿ ಕಾಫಿಯ ರುಚಿಯನ್ನ ಮರೆಯಿಸುವುದಕಿಂತ ರುಚಿ ಎಂತಹುದೇ ಆದರೂ,ಹೇಗೆಯೇ ಇದ್ದರೂ ಸೈಲೆಂಟಾಗಿ ಹೊಟ್ಟೆ ಸೇರುವ ಟೀ ಉತ್ತಮ ಅನ್ನಿಸಿತು ನನಗೆ.

Z : ಎಂಥಾ ಲಾಜಿಕ್ಕು !

ನಾನು : ಹೆಂಗೆ ? ನಾನು ಅಣ್ಣ ಹೀಗೇ ಮಾಡೋದು. ನಮ್ಮ ಮನೆ, ಕಲ್ಮನೆ, ಎಸ್.ಎಲ್.ವಿ, ಎಮ್.ಟೀ.ಆರ್, ಮೈಯ್ಯಾಸ್ ಇವೇ ಮುಂತಾದ ಹೋಟೆಲುಗಳಲ್ಲಿ ಕಾಫಿ ಕುಡಿಯುತ್ತೇವೆ ಬಿಟ್ಟರೆ, ಮಿಕ್ಕೆಲ್ಲಾ ಕಡೆ ಟೀ ನೆ.

Z : ಐ ಸೀ. ಆಮೇಲೆ ?

ನಾನು : ಕರ್ನಾಟಕ ಬಿಡುವ ಮುನ್ನವೇ ನಾನು ಕಾಫಿ ಬಿಟ್ಟದ್ದು ನಮ್ಮ ಕುಟುಂಬಕ್ಕೆ ಶಾಕ್ ತಂದಿತಾದರೂ, ಅದನ್ನು ಸಹಿಸಿಕೊಂಡು ಲಗೇಜ್ ಸರಿ ಇಟ್ಟುಕೊಳ್ಳುವ ಕೆಲಸಕ್ಕೆ ಮುಂದಾಯ್ತು. ನಾನು ಶ್ರಾವ್ಯ ದಲ್ಲಿ ಹಾಡು ಕೇಳಲು ಪ್ರಾರಂಭಿಸಿದೆ, ಎಲ್ಲ ಚೈನ್ ಗಳಿಗೆ ಬೀಗ ಜಡಿಯೋಣ ಅಂತಿದ್ದೆ, ಅಣ್ಣ-" ನಾವ್ ಮಾಡ್ಕೊತಿವಿ, ನೀನು ಸುಮ್ನಿರು" ಅಂದ್ರು. ನಾನು ಓಕೆ ಅಂದೆ. ಅಣ್ಣ ಮತ್ತೆ ದೀಪು ಪಾಪ ಎಲ್ಲರ ಲಗೇಜ್ ಸರಿ ಮಾಡಿಟ್ಟರು. ಅಮ್ಮ ಚಪಾತಿ ತಂದಿದ್ದರು, ಎದುರು ಮನೆಯವರು ಚಿತ್ರಾನ್ನ, ಮೊಸ್ರನ್ನ ತಂದಿದ್ರು. ಎಲ್ಲವನ್ನು ಸಕತ್ತಾಗಿ ಲಗಾಯ್ಸಿದೆವು.ಅಲ್ಲಿಗೆ ಊಟ ಅನ್ನೋ ದೊಡ್ಡ ಕಾರ್ಯಕ್ರಮ ಸದ್ದು ಗದ್ದಲದೊಂದಿಗೆ ಶುರುವಾಗಿ, ಶಾಂತವಾಗಿ ಸಾಂಗವಾಗಿ ನೆರವೇರಿತು.

Z : ಗುಡ್.

ನಾನು : ಆದರೆ ನನಗೆ ನಿದ್ದೆ ಮಾಡೋದು ಕಷ್ಟ ಆಗೋಯ್ತು.

Z : ಎ.ಸಿ. ಇತ್ತಲ್ಲ, ಇನ್ನೆಂತ ತೊಂದರೆ ?

ನಾನು : ಅದೇ ತೊಂದರೆ. ಪುಣ್ಯಾತ್ಮ ಟ್ರೈನಿನವ, ರೆಗ್ಯುಲೇಟ್ ಮಾಡ್ಬೇಡ್ವಾ temperature ನ ? cool mode ನಲ್ಲಿ ಎ.ಸಿ. ಹಾಕಿಟ್ಟು ತಾನು ಕೂಲಾಗಿ ಎಸ್ಕೇಪ್ ಆಗಿದಾನೆ. ನಾನು ನಾಲ್ಕು ಬೋಗಿಯಲ್ಲಿ ಹುಡುಕಾಡಿದೆ ಅವನಿಗೆ, ಅವ ನಾಪತ್ತೆ.ಕಡೆಗೆ ಸ್ವೆಟರ್ರು, ಶಾಲು, ಸ್ಕಾರ್ಫು, ಎಲ್ಲ ಹಾಕೊಳ್ಳೋ ಹಾಗೆ ಆಯ್ತು !

Z : ಛೆ !

ನಾನು : ಹು. ಎಲ್ಲಕ್ಕಿಂತಾ ತೊಂದರೆ ಆಗಿದ್ದು ಏನಪ್ಪ ಅಂದ್ರೆ, ನನ್ನ ಅಪರ್ಣನ್ನ ಅಪ್ಪರ್ ಬೆರ್ತ್ ನಲ್ಲಿ ಮಲ್ಗಕ್ಕೆ ಹೇಳಿದ್ದು.

Z : ಹೋ...ಹತ್ತೋದು ಕಷ್ಟ ಆಗಿರತ್ತೆ.

ನಾನು : ಹು. ಬೆರ್ತ್ ಹತ್ತಲು ಇರುವ ಸಪ್ಪೋರ್ಟ್ ಎಲ್ಲ ಮುರ್ದಿರೊ "ಸುವ್ಯವಸ್ಥಿತ" ಬೋಗಿ ಅದು. ನಾವು ದಿಕ್ಕೆಟ್ಟು ಕಂಗಾಲಾಗಿ, ಕಡೆಗೆ ಆಂಜನೇಯನ್ನ ನೆನೆಸಿಕೊಂಡು, ಅವನ ಕೃಪೆಯಿಂದ, ಕೋತಿ ಮರ ಹತ್ತಿದ ಹಾಗೆ ಅಪ್ಪರ್ ಬೆರ್ತ್ ಹತ್ತಿದೆವು.

Z : ಎಹೆಹೆ.retrogressive evolution :)

ನಾನು : ಹೂಂ. ಡಾರ್ವಿನ್ ನ ನೆನೆಸಿಕೊಂಡೆ ನಾನು.

Z : :) ಆಮೇಲೆ ?

ನಾನು : ಒಂದೊಂದು ಘಂಟೆಗೂ ಎಚ್ಚರ ಆಗ್ತಿತ್ತು ನನಗೆ.

Z : ಯಾಕೆ ?

ನಾನು : ನನ್ನ ಫೋನ್ ಹಿರಣ್ಮಯಿ ನ ಯಾರೋ ಕದಿತಾರೆ ಅನ್ನೋ ಭಯ ಹತ್ತಿಕೊಂಡಿತು ನನಗೆ.

Z : ಮೇಲಿನ ಬೆರ್ತ್ ತನಕ ಬಂದು ಫೋನ್ ಕದಿಯೋ ಅಷ್ಟೆಲ್ಲಾ ಕಳ್ಳರು ಶ್ರದ್ಧಾವಂತರಾಗಿರ್ತಾರಾ ?

ನಾನು : ಯಾರಿಗೆ ಗೊತ್ತು ? ಪ್ರತಿಯೊಂದು ಘಂಟೆಗೂ ಏಳು, ಫೋನ್ ಇದೆಯಾ ನೋಡು, ಮಲ್ಕೊ. ಇಷ್ಟೇ ಆಗೋಯ್ತು.

Z : ಪಾಪ.

ನಾನು : ಇದು ಮೊದಲ ದಿನದ ಕಥೆ.

Z : ಮುಂದೆ ?

ನಾನು : ಸೂರ್ಯ ಯಥಾ ಪ್ರಕಾರ ಪೂರ್ವದಲ್ಲಿ ಎದ್ದ ಮಾರನೆಯ ದಿನ.ಆದರೆ, ನಾನು ಸೂರ್ಯನಿಗಿಂತ ಮುಂಚೆನೆ ಎದ್ದಿದ್ದೆ.

Z : ವೆರಿ ಗುಡ್. ಆಮೇಲೆ ?

ನಾನು : Hi Surya! Good morning! Whats up ? ಅಂದೆ.

Z : ಅದಕ್ಕೆ ಅವನೇನಂದ ?

ನಾನು : Hi!Good morning !Well, all is well here, but you be careful when you get down ಅಂದ.

Z : ಆಹ !

ನಾನು :ಹತ್ತೋದು ಹತ್ತಿದ್ದೆ, ಈಗ ಇಳೀಯೋಕೆ ಒದ್ದಾಡಿದೆ.

Z : :)

ನಾನು : ಮತ್ತೆ ಹನುಮಂತನನ್ನ ಪ್ರಾರ್ಥಿಸಿ, ಇಳಿದೆ.ಅಮ್ಮ ಅಣ್ಣ ಎಲ್ಲ ಎದ್ದಿದ್ದರು. ಅಮ್ಮಂಗೆ ವಿಪರೀತ ಗಂಟಲು ನೋವು ಬಂದಿತ್ತು. ಹಾಗಾಗಿ ಅವರು ಮೌನ ವ್ರತ ಮಾಡುತ್ತಿದ್ದರು.

Z :ನೀನು sign language ನಲ್ಲಿ ಮಾತಾಡಿದ್ಯಾ ?

ನಾನು : ಹು. ಅವರೂ ಅದರಲ್ಲೇ ಉತ್ತರಿಸಿದರು.

Z :ಗುಡ್.

ನಾನು : ಹಲ್ಲುಜ್ಜಿ, ಟೀ ಕುಡಿದು, ಪುಸ್ತಕ ತೆಗೆದೆ, ಓದೋಣ ಅಂತ.

Z : ಒಹೊಹೊಹೊಹೊಹೊ.

ನಾನು : ಹೂಂ ! ಒಂದುವರೆ ಚಾಪ್ಟರ್ ಓದಿದ್ದೆ. ಅಮ್ಮ ತಿಂಡಿ ತಿನ್ನೋಣ ಅಂದರು. ಚಪಾತಿ ಸೇವನೆ ನಡೆಯಿತು. ಮತ್ತೆ ಟೀ ಸಮಾರಾಧನೆ. ನಂತರ, ನಿದ್ದೆ.

Z : ಮತ್ತೆ ಓದಲಿಲ್ಲವಾ ?

ನಾನು : ಟ್ರೈನ್ ಸಿಕ್ಕಾಪಟ್ಟೆ shaky ಆಯ್ತು.ನನ್ನ text book font size ಚಿಕ್ಕದು. ಕನ್ನಡಕದ ಪವರ್ರು ಹೆಚ್ಚಾದ್ರೆ ಚೆನ್ನಾಗಿರಲ್ಲ ಅನ್ನಿಸಿತು ನನಗೆ.road humps ಜಾಸ್ತಿ track ನಲ್ಲಿ ಅಂತ ದೀಪು, ನಂದಿನಿ ಮತ್ತು ನಾನು ಆಡಿಕೊಂಡು ನಕ್ಕೆವು. ಮತ್ತೊಂದಿಷ್ಟು ಜೋಕುಗಳು ಮೊಬೈಲಲ್ಲಿ ವಿನಿಮಯಗೊಂಡವು. ಪುಸ್ತಕ ಮುಚ್ಚಿಟ್ಟು ಮಲಗಿದೆ. ಮೂರು ಘಂಟೆಗಳ ಕಾಲ ಸೊಂಪಾದ ನಿದ್ದೆ.

Z : ವೆರಿ ಗುಡ್ !

ನಾನು : ಹಾಂ, ಮಲಗೋ ಮುಂಚೆ, ಇಂಡಿಯಾ ಅಟ್ಲಾಸ್ ತೆಗೆದು, ಸಿಗುತ್ತಿದ್ದ ಸ್ಟೇಷನ್ ಹೆಸರುಗಳನ್ನ ಹುಡುಕುತ್ತಾ, ನಾವೆಲ್ಲಿದ್ದೇವೆ ಅಂತ ಹುಡುಕಿದೆ. ನಾವು ಮಹಾರಾಷ್ಟ್ರದಲ್ಲಿದ್ದೆವು. ಒಂದು ದೊಡ್ಡ ನದಿ ಸಿಕ್ಕಿತು ದಾರಿಯಲ್ಲಿ. ಬಹಳಾ ಚೆನ್ನಾಗಿದೆ ಅಂತೆಲ್ಲಾ ಮಾತಾಡಿಕೊಂಡು ನೋಡಿ ನಮಸ್ಕಾರ ಎಲ್ಲಾ ಮಾಡಿದೆವು. ಆದರೆ ಅದು ಯಾವ ನದಿ ಅಂತ ಗೊತ್ತಾಗಲಿಲ್ಲ. ನಾನು ಅಟ್ಲಾಸ್ ತೆಗೆದು, ನಮ್ಮ ಟ್ರೈನ್ ಅನುಸರಿಸುವ ದಾರಿಯ ರೇಲ್ವೇ ಮ್ಯಾಪ್ ತೆಗೆದು ನೋಡಿದಾಗ ಗೊತ್ತಾಯ್ತು...

Z : ತು...

ನಾನು : ಅದು ಭೀಮಾ ನದಿ ಅಂತ.

Z :ಹೌದಾ ? ಹೆಸರಿಗೆ ತಕ್ಕನಾಗಿದೆಯಾ ?

ನಾನು : ಓಹೋ...ಸಿಕ್ಕಾಪಟ್ಟೆ ಚೆನ್ನಾಗಿ ಸೂಪರ್ರಾಗಿ ಸಕ್ಕತ್ತಾಗಿದೆ.ಏನು ದೊಡ್ಡ ಪಾತ್ರ, ಎಂಥಾ ರಭಸದ ಹರಿವು...

Z : ಹೌದಾ ?

ನಾನು : ಹು. ಆದರೂ ಮಹಾರಾಷ್ಟ್ರದಲ್ಲಿ ಬೆಳೆಗಳು ಕಡಿಮೆ. ಬಿಸಿಲಿನ ಬೇಗೆಯೋ ಏನೋ, ನೆಲದಲ್ಲಿ ಬೆಳೆಗಳಿಗಿಂತ ಬಿರುಕುಗಳು ಹೆಚ್ಚಾಗಿ ಕಂಡವು. ಇದೆಲ್ಲಾ ನೋಡಿ, ತೃಪ್ತಳಾಗಿ, ನಿದ್ದೆ ಮಾಡಿ, ಎದ್ದೆ. ಅಣ್ಣನ blackberryಯಲ್ಲಿ ಈಮೈಲ್ ನೋಡಿದೆ. ಅಂಥಾದ್ದೇನು ಮುಖ್ಯವಾಗಿರಲಿಲ್ಲ ಅಂತ ಸಂತೋಷ ಪಟ್ಟೆ. ಆಮೇಲೆ, ಕರಿಸಿರಿಯಾನ ಕಾದಂಬರಿ ತೆಗೆದೆ, ಓದಿ ಮುಗಿಸಿಯೇ ಬಿಡೋಣ ಅಂತ.

Z : ಒಹ್ಹೊ...text book ಓದಕ್ಕೆ ಆಗ್ಲಿಲ್ಲ, ಇದು ಹೇಗೆ ಆಯ್ತು ?

ನಾನು : ಇದರ ಫಾಂಟ್ ಸೈಜ್ ದಪ್ಪ ಇತ್ತು.

Z : ಕಳ್ಳಿ !

ನಾನು : :)ಕಾದಂಬರಿಯಲ್ಲಿ ಅಹಮದಾನಗರ್ ನ ಉಲ್ಲೇಖ ಬರುತ್ತದೆ. ಕಾದಂಬರಿಯ ಮುಖ್ಯ ಪಾತ್ರಕ್ಕೂ, ಆ ನಗರಕ್ಕೂ ನಿಕಟವಾದ ಸಂಬಂಧ ಇದೆ. ನಾನು ಅಹಮದಾನಗರ್ ದಾಟಿದ ಮೇಲೆ ಆ ಅಧ್ಯಾಯಕ್ಕೆ ಬಂದೆ, ಕೈ ಕೈ ಹಿಸುಕಿಕೊಂಡೆ.

Z : ಒಳ್ಳೇದಾಯ್ತು ಆ ಅಧ್ಯಾಯ ಆಮೇಲೆ ಬಂದದ್ದು. ಇಲ್ಲಾಂದ್ರೆ ನೀನು ಟ್ರೈನ್ ಇಂದ ಇಳಿದು, ಆಟೋ ಹತ್ತಿ, Archeological Survey of India Museum ಗೆ ಹೋಗಿ, ಅವರನ್ನ ನೀನು ಓದಿದ ಕಥೆಯ ಸತ್ಯಾಸತ್ಯತೆಗಳ ಬಗ್ಗೆ interview ಮಾಡಕ್ಕೆ ಹೊರಡ್ತಿನಿ ಅಂತ ಹಠ ಹಿಡಿತಿದ್ದೆ, ಅಮ್ಮ ಅಣ್ಣ ಬೈದಿರೋರು. ಒಂದು ಸೀನ್ ಕ್ರಿಯೇಟ್ ಆಗೋದು ತಪ್ಪಿತು.

ನಾನು : ಎಂಥೋಳೇ ನೀನು ? ಒಂದು ಚೂರು ಕ್ರಿಯೇಟಿವ್ ಮೈಂಡ್ ಇಲ್ಲ ! ಎಂಥಾ ಚಾನ್ಸ್ ಸಿಕ್ಕಿತ್ತು facts confirm ಮಾಡ್ಕೊಳ್ಳೋಕೆ. ಬಿಟ್ಟುಬಿಡಕ್ಕೆ ಆಗತ್ತಾ ? ಮತ್ತೆ ಹೋಗಕ್ಕಾಗತ್ತಾ ಹಂಗೆಲ್ಲಾ ?

Z : ಆಗತ್ತೆ.

ನಾನು : ಹೆಂಗೆ ?

Z : ನೀನು ಈ ಥರ ಕಾದಂಬರಿಗಳನ್ನೆಲ್ಲಾ ಓದಿ ಗುಡ್ಡೆ ಹಾಕು. ಆಮೇಲೆ ಒಂದು ಎತ್ತಿನ ಗಾಡಿಲಿ All India Tour ಮಾಡು. In fact world tour ಮಾಡು.

ನಾನು : ಎತ್ತಿನ ಗಾಡಿ ಯಾಕೆ ?

Z : ದಾರಿ ಮಧ್ಯ ಸಿಗೊ ಕಾಗೆ, ಕುರಿ, ಬೆಕ್ಕು ನಾಯಿದೆಲ್ಲಾ ಫೋಟೋ ಬೇರೆ ತೆಗಿಬೇಕಲ್ಲಾ ನೀನು. ಸಾಲದು ಅಂತ ಪ್ರತಿಯೊಂದು ಹಳ್ಳಿಯ ಇತಿಹಾಸನೆಲ್ಲಾ ದಾಖಲೆ ಮಾಡ್ಬೇಕಲ್ಲಾ.ಜಾನಪದ ಕಲೆಗಳ ಅಧ್ಯಯನ, ಅಂಥಿಂಥವೆಲ್ಲಾ ಮಾಡ್ಬೇಕಲ್ಲ. ಎತ್ತಿನ ಗಾಡೀನೇ ಸರಿಯಾದ ವಾಹನ ನಿನಗೆ.

ನಾನು :ಎಷ್ಟ್ ಆಡ್ಕೊತಿಯೋ ಆಡ್ಕೊ. ನನಗೂ ಒಂದು ಕಾಲ ಬರತ್ತೆ.

Z : ಬರಲಿ.

ನಾನು : ಟೀ ಕುಡಿಯುತ್ತಾ ಕಾದಂಬರಿ ಓದಲು ಪ್ರಾರಂಭಿಸಿದೆನಾ...ರಾತ್ರಿ ಆಗಿದ್ದೇ ಗೊತ್ತಾಗಲಿಲ್ಲ. ಊಟ ಆರ್ಡರ್ ಮಾಡಿ, ಅದು ಚೆನ್ನಾಗಿರದೆ, ಉದರ ನಿಮಿತ್ತಂ ಎಂದು ಸೇರಿದಷ್ಟು ತಿಂದು, ಮತ್ತೆ ಕಾದಂಬರಿ ಒಳಗೆ ಧುಮುಕಿದೆ. ಆಮೇಲೆ, ತಿರುಪತಿ ವೆಂಕಟರಮಣನ ವಿಗ್ರಹದ ಸುತ್ತ ಇರುವ ವಿವಾದದ ಬಗ್ಗೆ ಆ ಕಾದಂಬರಿಯಲ್ಲಿ ಬರೆದಿರೋದನ್ನ ಜೋರಾಗಿ ಓದುತ್ತಾ ನಾನು ಆಶ್ಚರ್ಯ ವ್ಯಕ್ತಪಡಿಸಿದೆ. ಅಮ್ಮ-"ನಂಗೆ ಗೊತ್ತಿತ್ತು ಇದು" ಅಂತ ಹೇಳಿ ಸಿಂಗಲ್ ಲೈನಲ್ಲಿ ಶಾಕ್ ಕೊಟ್ಟರು.

Z : :D

ನಾನು : ಆ ಕಾದಂಬರಿಯನ್ನು ಮುಗಿಸಲು ಆಗಲಿಲ್ಲ. ಇಪ್ಪತ್ತು ಪೇಜುಗಳಿದ್ದವು. ಮಾರನೆಯ ದಿನ ಬೆಳಿಗ್ಗೆ ಆರು ಮುಕ್ಕಾಲಿಗೆ ನಾವು ಆಗ್ರ ತಲುಪಲಿದ್ದೆವು.ಅದಕ್ಕೆ ಐದಕ್ಕೆ ಅಲಾರಂ ಇಟ್ಟು ಮತ್ತೆ ಕಷ್ಟಪಟ್ಟು ಮೇಲಕ್ಕೆ ಹತ್ತಿ, ಮಲಗಿದೆ. ಈ ರಾತ್ರಿಯೂ ನಿದ್ದೆ ಇಲ್ಲ.

Z : ಅದೇ ಭಯಾನಾ ?

ನಾನು : ಹು. ಜೊತೆಗೆ ಇನ್ನೊಂದು. ಅಲಾರಂ ಯಾಕೆ ಹೊಡಿತಿಲ್ಲಾ ಅಂತ.ಫೋನ್ ಕಳೆದು ಹೋಯ್ತಾ ? ಕೆಟ್ಟು ಹೋಯ್ತಾ ಅಂತೆಲ್ಲಾ ಭಯ.

Z : ಯಪ್ಪಾ !

ನಾನು : ನಾಲ್ಕು ಮುಕ್ಕಾಲಿಗೆ ಎಚ್ಚರ ಆಯ್ತು. ಕಾಲು ಘಂಟೆ ಕಣ್ಣು ಪಿಳಿ ಪಿಳಿ ಮಿಟುಕಿಸಿ,ಅಲಾರಂ ನ ಆಲಿಸಿ, ಆರಿಸಿ, ಮೇಲಿಂದ ಕೆಳಗೆ ಬೇಗನೆ ಇಳಿದು, fresh ಆಗಿ, ಲಗೇಜ್ ಎಲ್ಲಾ ಎತ್ತಿಟ್ಟು, ರೆಡಿಯಾಗುವ ಅಷ್ಟೊತ್ತಿಗೆ ಆರುವರೆ. ಇನ್ನೊಂದು ಸರ್ತಿ ಟೀ ಕುಡಿಯುವ ಅಷ್ಟೊತ್ತಿಗೆ ಆಗ್ರಾ ಬಂದೇ ಬಿಟ್ಟಿತು. ನೂಕುನುಗ್ಗಲುಗಳನ್ನೆಲ್ಲಾ ನಿಭಾಯಿಸಿ,ನಾನು ಅಪರ್ಣ ದೀಪು ನಂದಿನಿ ಇಳಿದು,ಮಿಕ್ಕವರನ್ನೆಲ್ಲಾ ಇಳಿಸಿಕೊಂಡು ಲಗೇಜ್ ಇಳಿಸಿದೆವು.

Z : ಅಬ್ಬಾ !

ನಾನು : ನಿನಗೆ ಕೇಳಿ ಇಷ್ಟು ಸುಸ್ತು. ನನ್ನ ಕಥೆ ಇನ್ನೇನಾಗಿರಬೇಡ ?

Z : ಅದು ಕರೆಕ್ಟು. ಮುಂದೆ ?

ನಾನು :ಸಧ್ಯಕ್ಕೆ ಇಷ್ಟು ಸಾಕು. ಮುಂದಿನ ಕಥೆ ಆಮೇಲೆ.

Thursday, June 3, 2010

ಉತ್ತರಾಯಣ - ಪ್ರಸ್ತಾವನೆ.

Z : ಇದು ಗ್ಯಾರಂಟೀ ಒಂದು ಗ್ರಂಥ ಆಗತ್ತೆ ಅಂತ ಗೊತ್ತಾಗಿ, ಪ್ರಸ್ತಾವನೆ, ವಂದನಾರ್ಪಣೆ ಎಲ್ಲಾ ಹಾಕ್ತಿದಿಯಾ ?

ನಾನು : ಇನ್ನು ಶುರುವೇ ಮಾಡಿಲ್ಲ ನಾನು, ಆಗ್ಲೆ ವಂದನಾರ್ಪಣೆಗೆ ಹೋಗ್ಬಿಟ್ಳು...

Z :ಇಲ್ಲಾ....ಸುಮ್ಮನೆ ಹೇಳಿದೆ ಅಷ್ಟೆ.ಸರಿ ಈಗ ಮೊದಲು ಪ್ರಾರ್ಥನೆ ಮಾಡು.

ನಾನು : ನಂ ನ್ಯಾಷನಲ್ ಕಾಲೇಜ್ ಪ್ರಾರ್ಥನೆ ಹಾಡ್ತಿನಿ.

Z : ಜೈ.

ನಾನು :ಯಂಬ್ರಹ್ಮಾವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಸ್ತವೈಃ
ವೇದೈಃಸಾಂಗಪದಕ್ರಮೋಪನಿಷದೈಃ ಗಾಯಂತಿ ಯಂ ಸಾಮಗಾ:|
ಧ್ಯಾನಾವಸ್ಥಿತತದ್ಗತೇನಮನಸಾ ಪಶ್ಯಂತಿ ಯಮ್ ಯೋಗಿನಃ
ಯಸ್ಯಾಂತಂ ನಮಿದಃ ಸುರಾಸುರಗಣಾಃ ದೇವಾಯ ತಸ್ಮೈ ನಮಃ||

ಇಷ್ಟು ಸಾಕು.

Z : ಸರಿ. ಈಗ ಕಥೆ ಶುರು ಮಾಡಮ್ಮ.

ನಾನು :ಕಥೆ ೨೦೧೦ ಫೆಬ್ರುವರಿಯಲ್ಲಿ ಪ್ರಾರಂಭ ಆಗತ್ತೆ. ನಮ್ಮ ಎದುರು ಮನೆಯವರಿಗೆ ಯಾರೋ ನಾರ್ತ್ ಇಂಡಿಯಾ ಟ್ರಿಪ್ಪಿನ ಬ್ರೋಷರ್ ತಂದೊಪ್ಪಿಸುತ್ತಾರೆ. ಅರೆಕ್ಷಣದಲ್ಲಿ ಅದು ನಮ್ಮ ಮನೆ ತಲುಪುತ್ತದೆ. ಹೋಂ ಮಿನಿಸ್ಟರ್ ಗಳು ಒಪ್ಪಿ ಹೈ ಕಮಾಂಡಿಗೆ ಮನವಿ ಸಲ್ಲಿಸಿಯೇ ಬಿಡುತ್ತಾರೆ. ಎದುರು ಮನೆಯ ಹೈ ಕಮಾಂಡ್ ಸಮ್ಮತಿಸುತ್ತದೆ, ನಮ್ಮನೆ ಹೈ ಕಮಾಂಡ್ ಸಾರಾಸಗಟಾಗಿ ನಿರಾಕರಿಸದೇ "request under process"ಎಂದು ಹೇಳಿ ಯೋಚನಾಮಗ್ನವಾಗುತ್ತದೆ.

Z :Quite natural. 22 ದಿನ ಅಣ್ಣ ಆಫೀಸು ಬಿಟ್ಟು ಬರೋದು ಸಾಧ್ಯವೇ ಇರ್ಲಿಲ್ಲ.

ನಾನು :ಹೂಂ. ಹತ್ತು ದಿನಗಳ ಸೌತ್ ಇಂಡಿಯಾ ಟೂರಿಗೆ ಅಣ್ಣನ ಬ್ರೈನ್ "ಯೆಸ್" ಅನ್ನಲು ಒಂದು ಕೋಟಿ ಸರ್ತಿ ಯೋಚನೆ ಮಾಡಿತ್ತು. ಅಣ್ಣ ಒಪ್ಪಿದ ಮೇಲೆ ನನ್ನ ಹತ್ತಿರ ಮಾತಾಡಲು ಯೋಜನೆ ಹಾಕಿದ್ದ ಮಿನಿಸ್ಟ್ರಿ ನನಗೆ ವಿಷಯವನ್ನೇ ತಿಳಿಸಿರಲಿಲ್ಲ. ನಾನು ಜೂನ್ ವರೆಗೂ ಎಲ್ಲಾ ದಿನಗಳನ್ನು ನನ್ನ ಕೆಲಸಕ್ಕೆ ತಕ್ಕನಾಗಿ ಫಿಕ್ಸ್ ಮಾಡಿಟ್ಟುಕೊಳ್ಳುತ್ತಿದ್ದೆ, ಇದ್ಯಾವುದರ ಪರಿವೆಯೇ ಇಲ್ಲದೇ.

Z : ಪಾಪ.

ನಾನು :ಹೈ ಕಮಾಂಡು ಈ ಸರ್ತಿ ಇಪ್ಪತ್ತು ಕೋಟಿ ಸರ್ತಿ ಯೋಚನೆ ಮಾಡಿರಬಹುದು ಅಂತ ನನ್ನ ಅಂದಾಜು. ಕಡೆಗೂ ಹೈ ಕಮಾಂಡ್ ಓಕೆ ಅಂದಿದ್ದು ಎರಡು ಮನೆಗೂ ಸಂತೋಷವಾಯ್ತು. ನನಗೆ ವಿಷಯ ಕೇಳಿ ಆಶ್ಚರ್ಯವಾಯ್ತು.

Z : ಅದು ಹೇಗೆ ಅಣ್ಣ ಹೂ ಅಂದರು ಅಂತನಾ ?

ನಾನು :ಅದೊಂದು. ಎರಡನೆಯ ಮುಖ್ಯ ವಿಷಯ ಏನಂದರೆ,ನನಗೆ ಇವರು ಅಣ್ಣ ಹೂ ಅಂದ ಮೇಲೆ ಯಾಕೆ ತಿಳಿಸಿದರು ಅನ್ನೋದು.

Z : ನೀನ್ ಏನ್ ಮಹಾ, ಕೇಳಿದ ತಕ್ಷಣ ಹು ಅಂತಿಯಾ ಅಂತ ಸುಮ್ಮನಾದ್ರೂ ಅನ್ಸತ್ತೆ. ನಿನಗೆ ವಿಷಯ ಹೇಳಿದಾಗ ನಿನ್ನ ಪ್ರತಿಕ್ರಿಯೆ ಹೇಗಿತ್ತು ?

ನಾನು :ಸಿಂಗಲ್ ಲೈನ್ ನಲ್ಲಿ ಉತ್ತರ ಕೊಟ್ಟೆ. ನಾನು ಬರೋದಕ್ಕೆ ಆಗಲ್ಲ, ನೀವುಗಳು ಹೋಗಿ ಬನ್ನಿ ಅಂತ.

Z : ನಿನ್ನನ್ನ ಏನು ಅಂದುಕೊಂಡುಬಿಟ್ಟಿದ್ದೀಯಾ ನೀನು ?

ನಾನು :ಯಾಕಮ್ಮ ?

Z :ಈ ವಯಸ್ಸಲ್ಲಿ ಬದ್ರಿ ಕೇದಾರಕ್ಕೆ ಹೋದರೆ ಎಷ್ಟು ಪುಣ್ಯ ಏನು ಕಥೆ. ಕೆಲಸವನ್ನೆಲ್ಲಾ ಬದಿಗಿಟ್ಟು ಶ್ರದ್ಧೆಯಿಂದ ಹೋಗಿ ಮಜಾ ಮಾಡಿಕೊಂಡು ಭಗವಂತನನ್ನು ನೋಡಿಕೊಂಡು ಬರೋದನ್ನ ಬಿಟ್ಟು ದೊಡ್ಡ ಹೀರೋಯಿನ್ ಥರ ಜಂಭ ತೋರ್ಸಿದಾಳೆ. ಬ್ಯುಸಿ, ಟೈಮಿಲ್ಲ ಅಂತೆಲ್ಲಾ. ಅಣ್ಣನಿಗಿಂತಲೂ ಬ್ಯುಸಿ ನಾ ನೀನು ?

ನಾನು : I dont know if I may say that, but I was definitely not free.ಜೂನ್ ಮೊದಲನೆಯ ತಾರೀಖು ಎಮ್.ಫಿಲ್ ಎಕ್ಸಾಮು. ನನ್ನ ಎಮ್.ಫಿಲ್ ಪ್ರಾಜೆಕ್ಟು ಕಳೆದ ಆರು ತಿಂಗಳಿನಿಂದ ಸಿಕ್ಕಲ್ಲೆಲ್ಲಾ ಅಲೆದಾಡಿ ಆಗಷ್ಟೆ ನೆಲೆ ಅಂತ ಒಂದು ಕಂಡುಕೊಳ್ಳತೊಡಗಿತ್ತು.ಮೇ ತಿಂಗಳಿನಲ್ಲಿ ಅದು ತನ್ನ ಪ್ರೌಢಾವಸ್ಥೆಗೆ ತಲುಪಲಿತ್ತು. ಸಾಲದ್ದಕ್ಕೆ ಡಿಗ್ರಿ ಮಕ್ಕಳ ಎಕ್ಸಾಮು, ನಮ್ಮ invigilation. ನನಗೆ ಗೊತ್ತಿತ್ತು ಮಿನಿಮಮ್ ಎಂಟು ಮ್ಯಾಕ್ಸಿಮಮ್ ಹತ್ತು ಡ್ಯೂಟಿಗಳು ಬರತ್ವೆ ಅಂತ,ಯುನಿವರ್ಸಿಟಿಯ ರೂಲ್ಸ್ ಪ್ರಕಾರ ನಾವು ಅದಕ್ಕೆ ಗೈರುಹಾಜರಿ ಆಗುವಂತಿಲ್ಲ.ಇವೆಲ್ಲ ಮೇ ತಿಂಗಳಲ್ಲೇ ಇದ್ದವು. ಇಷ್ಟನ್ನು ಇಟ್ಟುಕೊಂಡು ನಾನು ಹೆಂಗೆ ಊರಿಗೆ ಹೋಗೋದು ?

Z : ಇದು ಸ್ವಲ್ಪ ಕಷ್ಟನೆ.

ನಾನು :ಈಗ ಗೊತ್ತಾಯ್ತ ? ನಾನು ಏನು ಜಂಭ ಕೊಚ್ಚುತ್ತಿರಲಿಲ್ಲ, ವಾಸ್ತವವನ್ನೇ ಹೇಳುತ್ತಿದ್ದೆ.

ಅಣ್ಣ: " ನಿಮ್ಮ ಪ್ರಿನ್ಸಿಪಲ್ ಹತ್ರ ನಾನು ಅಮ್ಮ ಬಂದು ಮಾತಾಡುತ್ತೇವೆ" ಅಂದರು. ನಾನು "ಅಣ್ಣ, ನಾನೀಗ ಸ್ಟೂಡೆಂಟ್ ಅಲ್ಲ, ಲೆಕ್ಚರರ್ರು.Students can bunk, lecturers can't."ಅಂದೆ. ಅಣ್ಣನಿಗೆ ಆಗಲೇ ಪರಿಸ್ಥಿತಿಯ ಅರಿವಾಗಿದ್ದು.

ಅಮ್ಮ: "ನಿನ್ನನ್ನೊಬ್ಬಳೇ ಎಲ್ಲಿ ಬಿಟ್ಟು ಹೋಗೋದು ? ಬೇರೆ ಯಾರು ಬೆಂಗಳೂರಿನಲ್ಲಿರೊಲ್ಲ" ಅಂದರು.

"ನಾನು ಮಗುವಲ್ಲ. ಒಬ್ಬಳೇ ಇರಬಲ್ಲೆ".

ಅಮ್ಮ:"ನೀನು ಮಗುವಲ್ಲ ಅನ್ನೋದಕ್ಕೇ ಭಯ ಆಗಿರೋದು ನಮಗೆ."

ನಾನು: "ಕರ್ಮಕಾಂಡ.ನೀವು ಹೋಗಿಬನ್ನಿ, ನಾನು ಬರೊಲ್ಲ."

ನಾನು :ಇವರು ಬೇರೆ ದಾರಿಯಿಲ್ಲದೇ ಒಪ್ಪಿದರು. ಅಣ್ಣ, ಅಪರ್ಣ, ಅಮ್ಮ, ಎದಿರು ಮನೆಯ ಎಂಟು ಜನ ಹನ್ಸಾ ಟ್ರಾವೆಲ್ಸಿನಲ್ಲಿ ಇಪ್ಪತ್ತೆರಡು ದಿನದ ತೀರ್ಥ ಯಾತ್ರೆ ಪ್ಯಾಕೇಜಿಗೆ ಬುಕ್ ಮಾಡಿಸಿದರು.

Z :ಮತ್ತೆ ನೀನು ಹೆಂಗೆ ಸೇರ್ಕೊಂಡೆ ?ಯಾರಾದ್ರು ಬರ್ಲಿಲ್ವಾ ?

ನಾನು :ಎಲ್ಲರೂ ಬಂದ್ರು. ಫೆಬ್ರವರಿಯಲ್ಲಿ ಭೀಕರವಾಗಿದ್ದ ನನ್ನ ದಿನಚರಿ ಮಾರ್ಚಲ್ಲಿ ಬ್ಯುಸಿಯ ತುತ್ತ ತುದಿಯನ್ನು ತಲುಪಿತು. ನಮ್ಮ ಗೈಡು ಅಮೇರಿಕಕ್ಕೆ ಹೊರಡಲನುವಾದರು, ಕೋಗೈಡು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು.ಮಾರ್ಚಿಯ ಕಡೆಯಲ್ಲಿ ಆಸ್ಪತ್ರೆಗೆ ದಾಖಲಾದ ನನ್ನ ಕೋಗೈಡು ಮೇ ಕಡೆಯವರೆಗೂ ಬೆಡ್ ರೆಸ್ಟ್ ನಲ್ಲಿರಬೇಕಾಗಿಬಂತು. ನನ್ನ ಗೈಡ್ ಏಪ್ರಿಲ್ ನಲ್ಲಿ ಹೊರಟು ಜೂನ್ ನಲ್ಲಿ ಬರುವವರಿದ್ದರು. ಅವರು ಬರುವವರೆಗೂ ಪರೀಕ್ಷೆಯಿಲ್ಲ ಅಂತ ಖಾತ್ರಿಯಾಯ್ತು. ನಾನು ನಮ್ಮಮ್ಮನಿಗೆ ಸಾಂಗವಾಗಿ ಇವೆಲ್ಲ ವಿಷಯ ತಿಳಿಸಿದೆ.ಅಮ್ಮ ಟ್ರಾವೆಲ್ಸಿನವರಿಗೆ ಫೋನ್ ಮಾಡಿ ಇನ್ನೊಂದು ಸೀಟ್ ಸಿಗಬಲ್ಲುದೇ ಎಂದು ಕೇಳಲು, ನೀವು ನಾಳೆ ಸಾಯಂಕಾಲದೊಳಗೆ ನಮಗೆ ಹೇಳಿದರೆ ನಾವು ಯೋಚಿಸಬಹುದು ಎಂದರು. ನಮ್ಮಮ್ಮ ನನಗೆ ಬಲವಂತ ಮಾಡಲು ಸಜ್ಜಾದರು. "ನೀನಿಲ್ಲದೇ ಇದ್ದರೆ ನಮ್ಮ ಗತಿಯೇನು? ಹಿಂದಿ ನಿನಗೊಬ್ಬಳಿಗೇನೆ ಬರೋದು ನಮ್ಮನೇಲಿ. ನನಗಂತೂ ನಿನ್ನ ಬಿಟ್ಟು ಹೋದರೆ ಖಂಡಿತಾ ಮನಶ್ಶಾಂತಿ ಇರಲ್ಲ.ಬಂದು ಬಿಡು"ಅಂತೆಲ್ಲಾ ಟಿಪಿಕಲ್ ಅಮ್ಮಂದಿರ ತರಹ ಎಮೋಷನಲ್ ಆದರು. ನಾನು ನಮ್ಮ ಎಚ್. ಓ.ಡಿ ಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಅವರು ಮಾರನೆಯ ದಿನ ಪ್ರಿನ್ಸಿಪಾಲರ ಬಳಿ ಮಾತನಾಡೆಂದು ಹೇಳಿದರು.

Z : ಇಷ್ಟೆಲ್ಲಾ ಆಯ್ತಾ ?

ನಾನು :ಇದಿನ್ನೂ ಪ್ರಾರಂಭ. ಮುಂದೆ ಕಥೆ ಕೇಳು. ಪ್ರಿನ್ಸಿಪಾಲ್ ಸರ್ invigilation slot exchange ಗೆ ಎಸ್ ಅಂದರು. ತಕ್ಷಣ ಒಂದಿಷ್ಟು ಪತ್ರಗಳ ಮೂಲಕ ಎಕ್ಸಾಂ ಕೆಲಸದ ತಲೆನೋವು ತೀರಿತು. ನಮ್ಮ ಗೈಡ್ ಮತ್ತು ಕೋಗೈಡ್ ಗೆ ವಿಷಯ ತಿಳಿಸಲು ಅವರು ಒಂದೇ ಏಟಿಗೆ ಎಸ್ ಅಂದುಬಿಟ್ಟರು.ಅಮ್ಮ ನನಗೆ ಹೋಗುವಾಗ ಅವರೊಟ್ಟಿಗೆ ಟ್ರೈನು, ವಾಪಸ್ ಬರ್ತಾ ಎಮ್.ಫಿಲ್ ಎಕ್ಸಾಮಿಗೆ ಪ್ರೆಪೇರ್ ಆಗಬೇಕು ಅಂತ ಫ್ಲೈಟಿಗೆ ಬುಕ್ ಮಾಡಿಸಿಯೇ ಬಿಟ್ಟರು. ನಾನು ಜೈ ಕೇದಾರ್ ನಾಥ್ ಕೀ ಅಂತ ಹೊರಡಲನುವಾದೆ.

Z : :)

ನಾನು :ಆದರೆ ಹೊರಡೋ ದಿನ ಸಿಕ್ಕಾಪಟ್ಟೆ ಟೆನ್ಷನ್ನು.ಇನ್ವಿಜಿಲೇಷನ್ ಮುಗಿಸಿದ ತಕ್ಷಣ ನಾನು ಟಾಟಾ ಇನ್ಸ್ಟಿಟ್ಯೂಟ್ ಗೆ ಭೇಟಿ ನೀಡಬೇಕಿತ್ತು. ಸಾಲದ್ದಕ್ಕೆ ಲಾಸ್ಟ್ ಮಿನಿಟ್ ಶಾಪಿಂಗು.ಟ್ರೈನ್ ಇದ್ದದ್ದು ಏಳು ಇಪ್ಪತ್ತಕ್ಕೆ. ನಾವು ಸ್ಟೇಷನ್ ನಲ್ಲಿ ಇರಬೇಕಿದ್ದಿದ್ದು ಆರುವರೆಗೆ. ಮನೆ ಬಿಡಬೇಕಿದ್ದಿದ್ದು ಐದಕ್ಕೆ. ನಾನು ಬಂದಿದ್ದು ನಾಕುವರೆಗೆ.

Z : ಇದು ವಿಪರೀತ ಅತಿಯಾಯ್ತು.

ನಾನು :I couldn't help it. I just couldn't help it.

Z : ಸರಿ. ಹೇಳಿದ್ದನ್ನೇ ಮತ್ತೆ ಹೇಳದೆ ಕಥೆ ಮುಂದುವರೆಸು.

ನಾನು :ಮನೆಗೆ ಬಂದ ಮೇಲೆ ನನಗೆ ಜ್ಞಾನೋದಯವಾದ ಮುಖ್ಯ ವಿಷಯ ಏನಪ್ಪ ಅಂದರೆ, ಬಟ್ಟೆಗಳೆಲ್ಲ ಅರ್ಧ ಪ್ಯಾಕ್ ಆಗಿದ್ದವು, ಪುಸ್ತಕಗಳು ಪ್ಯಾಕೇ ಆಗಿರಲಿಲ್ಲ.

Z :ಶಭಾಶ್. ಆಮೇಲೆ ?

ನಾನು :ಎಮ್.ಫಿಲ್ ನೋಟ್ಸ್ ಇದ್ದ ಫೈಲನ್ನ ಬ್ಯಾಗ್ ಪ್ಯಾಕ್ ಗೆ ಸೇರಿಸಿ ಗ್ರಂಥಗಳನೆಲ್ಲಾ ಸೂಟ್ ಕೇಸಿಗೆ ಹಾಕಿದೆ. ಅಣ್ಣ-" ಟ್ರೈನ್ ಸ್ವಲ್ಪ ದೊಡ್ಡದಾಗಿದ್ದಿದ್ದರೆ ಕಪಾಟನ್ನೇ ತರ್ತಿದ್ಲು ಇವ್ಳು" ಅಂದ್ರು.

Z : ತಮ್ಮ ಪ್ರತಿಕ್ರಿಯೆ ?

ನಾನು :ಮೌನ.

Z : ನಂಗೊತ್ತಿಲ್ವಾ.ಮುಂದೆ ?

ನಾನು :ಬಟ್ಟೆಗಳನ್ನೆಲ್ಲಾ ಸರೀಗೆ ಇಟ್ಟುಕೊಳ್ಳೋ ಅಷ್ಟೊತ್ತರಲ್ಲಿ ಐದು ಹತ್ತು.ಎಲ್ಲ ದೇವರಿಗೂ ಒಂದೊಂದು ನಮಸ್ಕಾರ ಹಾಕಿದೆ.ಐದು ಹನ್ನೊಂದು. ಅಣ್ಣ ಲ್ಯಾಪ್ ಟಾಪ್ ತರಲೇಕೂಡದೆಂದು ಹೇಳಿಬಿಟ್ಟರು.ಐದು ಹನ್ನೆರಡು.

Z : ನಿನ್ನ ಕೈಯೇ ಮುರಿದುಹೋದ ಹಾಗಾಗಿರತ್ತೆ.

ನಾನು : ಅಲ್ವಾ ಮತ್ತೆ ! ಅಣ್ಣ- black berry ಇದೆ, adjust ಮಾಡ್ಕೊ ಅಂದ್ರು.ನಾನು ಒಪ್ಕೊಂಡೆ.ಐದು ಹನಿನಾಲ್ಕು.

ಅಮ್ಮ ಐದು ಹದಿನೈದಕ್ಕೆ ಮನೆಯ ಬೀಗ ಹಾಕಿದರು. ಐದು ಹದಿನೈದು ನಲವತ್ತೈದನೆಯ ಸೆಕೆಂಡಿಗೆ ನಮ್ಮ ಗಾಡಿ ಸ್ಟೇಷನ್ಗೆ ಹೊರಟಿತು,ಅಣ್ಣನ ಸಾರಥ್ಯದಲ್ಲಿ.

ನಾವು ಸ್ಟೇಷನ್ ತಲುಪಿದಾಗ ಆರು ಇಪ್ಪತ್ತಿನ ಆಸುಪಾಸು. ಅಣ್ಣ ಗಾಡಿ ನಿಲ್ಲಿಸಿ ಡ್ರೈವರ್ ಅಂಕಲ್ ಗೆ ಗಾಡಿ ತೆಗೆದುಕೊಂಡು ಹೋಗಲು ಹೇಳಿದ ಮೇಲೆ ಟ್ರೈನ್ ಹುಡುಕುವ ಕೆಲಸಕ್ಕೆ ಇಳಿದೆವು.ಮೊದಲನೆಯ ಪ್ಲಾಟ್ ಫಾರ್ಮ್ ನಲ್ಲಿ ಟ್ರೈನ್ ನಿಂತಿತ್ತು. ಬೋಗಿ ಹುಡುಕುವ ಹೊತ್ತಿಗೆ ಅರ್ಧ ಶಕ್ತಿ ಹೋಗಿತ್ತು, ಕಾರಣ ನಮ್ಮಗಳ ಲಗೇಜು !

Z : ಎಹೆಹೆಹ್ಹೆ...ಅರ್ಧ ಮನೆ ಪ್ಯಾಕ್ ಮಾಡಿದ್ರೆ ಇನ್ನೇನಾಗತ್ತೆ.

ನಾನು : ಏನಿಲ್ಲ. ನಮ್ಮ ಲಗೇಜು ಎಲ್ಲರಿಗಿಂತ ಕಡಿಮೆ. ಎಲ್ಲರು ಕಿಟ್ ಬ್ಯಾಗ್ ಗಳನ್ನು ತಂದಿದ್ದರು, ತಲೆಗೆ ಎರಡರ ಲೆಖ್ಖದಲ್ಲಿ.ನಾವು ಎರಡು ಕಿಟ್ ಬ್ಯಾಗ್ = ಒಂದು ಸೂಟ್ಕೇಸ್ ಎಂಬ ಸಮೀಕಣ ಉಪಯೋಗಿಸಿ ತಲೆಗೆ ಒಂದು ಸೂಟ್ಕೇಸ್ ತಂದಿದ್ವಿ. ನನ್ನದು ಅಮ್ಮನದ್ದು ಒಂದು ಬ್ಯಾಗ್ ಪ್ಯಾಕ್ ಮತ್ತು ವ್ಯಾನಿಟಿ ಬ್ಯಾಗ್ respectively.ಅಷ್ಟೇ.

Z : ಸಾಲ್ದಾ ?

ನಾನು :ಸಾಕು.ಜೈ ಗಣೇಶ ಅಂತ ಎಲ್ಲರೂ ಟ್ರೈನ್ ಹತ್ತಿದೆವು. ಅವರೆಲ್ಲಾ ಒಂದು ಕಡೆ, ನಾನೊಬ್ಬಳೇ ಒಂದುಕಡೆ.

Z :ಅದು ಯಾಕೆ ?

ನಾನು :ಲಾಸ್ಟ್ ನಲ್ಲಿ ಅಲ್ವಾ ನನ್ನ ರೆಸರ್ವೇಷನ್ ಆಗಿದ್ದು. ಟಿಕೆಟ್ ವೈಟಿಂಗ್ ಲಿಸ್ಟ್ ನಲ್ಲಿತ್ತು. ನಾನು ಸ್ಟೇಷನ್ ತಲುಪುವ ಹೊತ್ತಿಗೆ ಪುಣ್ಯಕ್ಕೆ ಕನ್ಫರ್ಮ್ ಆಗಿತ್ತು. ಅಮ್ಮ -"ಅಣ್ಣನ ಅಲ್ಲಿಗೆ ಕಳಿಸಿ ನೀನು ನಮ್ಮ ಜೊತೆಗೆ ಬಾ. ಒಬ್ಬೊಬ್ಬಳೇ ಎಲ್ಲೆಲ್ಲೋ ಇರ್ಬೇಡ."ಅಂದರು.

Z : ನೀನು ದುರುಗುಟ್ಟಿಕೊಂಡು ನೋಡಿರ್ತ್ಯ.

ನಾನು :ಹು.ಒಂದು ಚಾನ್ಸ್ ಸಿಕ್ಕಿತ್ತು.

Z : ಏನಕ್ಕೆ ?

ನಾನು : ದೀರ್ಘಾಲೋಚನೆ ಮತ್ತು ಆತ್ಮಾವಲೋಕನಕ್ಕೆ.

Z :cough cough cough....ಈ ಥರ ಎಲ್ಲ ಶಾಕ್ ಕೊಡ್ಬೇಡ. ಎಮ್.ಫಿಲ್ ಗೆ ಓದಕ್ಕೆ ಅನ್ನು, ನಂಬ್ತಿನಿ.

ನಾನು : actually ಅದಕ್ಕೇನೆ. ನಾನು ನನ್ನ ಸೀಟಿನಲ್ಲಿ ಕುಳಿತ ತಕ್ಷಣ "ಅಲ್ಲಾಹ್" ಅಂತ ಉದ್ಗರಿಸಿದೆ. ಯಾಕೆ ಅಂತ ಗೊತ್ತಿಲ್ಲ.

Z : ಹೋಗ್ತಿರೋದು ಆಗ್ರಾ ಗೆ ಅಂತ ಇಲ್ಲಿಂದಲೇ ಪ್ರಾಕ್ಟೀಸಾ ?ಕಳ್ಳಿ !

ನಾನು : ಹೇ ನನಗೆ ನಿಜವಾಗಲೂ ಗೊತ್ತಿಲ್ಲ ಹಾಗ್ ಯಾಕೆ ಅಂದೆ ಅಂತ. ಅದಾದ ಎರಡು ನಿಮಿಷಕ್ಕೆ, "ಮೇಡಮ್, ನೀವು ಸೀಟ್ ನಂಬರ್ ೪೩ ಗೆ ಹೋಗಿ ನಮಗೆ ಈ ಸೀಟ್ ಕೊಡ್ತಿರಾ? ನನ್ನ ಹೆಂಡತಿ ಇಲ್ಲಿ ಬರ್ತಾಳೆ, ನಾನು ಅವಳು ಬೇರೆ ಆಗೋಗಿದಿವಿ" ಅಂತ ಒಬ್ಬರು ವೃದ್ಧರು ಬಂದು ಕೇಳಿಕೊಂಡರು. ನಾನು ಓಕೆ ಅಂದು ಲಗೇಜ್ ತಗೊಂಡು ಸೀಟ್ ನಂಬರ್ ೪೩ ಹತ್ರ ಬಂದು ನೋಡ್ತಿನಿ, ನಮ್ಮನೆ gang !

Z : :) :) :) :)

ನಾನು : ಲಕ್ಷ್ಮೀ ಬಂದ್ಲು ಅಂತ ಖಷಿ ಪಟ್ಕೊಂಡು ಲಗೇಜ್ ಇಡುವಷ್ಟರಲ್ಲಿ ಏಳು ಇಪ್ಪತ್ತು. ಜೋರಾಗಿ ಸೀಟಿಯನ್ನು ಊದುತ್ತಾ ಆಗ ತಾನೆ ಬೆಂಗಳೂರನ್ನು ಆವರಿಸುತ್ತಿದ್ದ ಕತ್ತಲನ್ನು ಭೇದಿಸುತ್ತಾ ಕರ್ನಾಟಕ ಎಕ್ಸ್ ಪ್ರೆಸ್ ಟ್ರೈನ್ ಹೊರಟಿತು ಆಗ್ರಾದ ಕಡೆಗೆ, ನಮ್ಮ ಇಪ್ಪತ್ತೆರಡು ದಿನದ ಉತ್ತರ ಭಾರತದ ಪ್ರವಾಸದ ಆರಂಭವನ್ನು ಸೂಚಿಸುತ್ತಾ ...

Z :ಮುಂದೆ ?

ನಾನು : ಮುಂದಿನ ಕಥೆ ಆಮೇಲೆ. :)

Thursday, May 6, 2010

Just ಮಾತ್ ಮಾತಲ್ಲಿ.....

Z : No one stole me away........

ನಾನು : ಅದು ಗೊತ್ತಿದೆ.

Z :ಮತ್ತಿನ್ನೇನು ಹಾಡೆಲ್ಲಾ ಹೇಳ್ತಿದಿಯಾ ?

ನಾನು : ಎರಡು ವಾರಗಳ ಹಿಂದೆ ಬಸ್ ನಲ್ಲಿ ಒಂದು ವಿಚಿತ್ರ ನಡಿತು.

Z :ಒಂದು ತಿಂಗಳು ಕಳೆಯುವ ಮುಂಚೆ ಇದನ್ನ ನನಗೆ ಹೇಳ್ಬೇಕು ಅಂತ ಅನಿಸಿತಲ್ಲ, ಪವಾಡ ಇದು. ಏನಾಯ್ತು ?

ನಾನು : ನಾನು ಬಸ್ಸಿನಲ್ಲಿ ಸಹಪ್ರಯಾಣಿಕರೊಂದಿಗೆ ಸ್ವಲ್ಪ ಹೊತ್ತು ಮಾತಾಡಿದೆ.

Z :................!!!!!!!!!!!!!!!!!!!!!!!!!!?????????????????????????????

ನಾನು : ಸಿಕ್ಕಾಪಟ್ಟೆ ಶಾಕ್ ಆಗಿದಿಯ. ಸುಧಾರಿಸಿಕೊ.

Z :ಇನ್ನೇನ್ ಮತ್ತೆ ? ಬೆಂಗಳೂರು ಜನ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಮಾಡುವ ನಾಲ್ಕು ಪ್ರಮುಖ ಕೆಲಸಗಳನ್ನು ಮಾಡದೆ ನೀನು ಸಹಪ್ರಯಾಣಿಕರೊಂದಿಗೆ ಮಾತಿಗೆಲ್ಲಾ ಇಳಿದುಬಿಟ್ಟಿದಿಯಲ್ಲಾ...ನ್ಯಾಯ ನಾ ಇದು ? ನೀನು ಹೀಗೆ ಮಾಡಬಹುದಾ? ನೀನು ಮಾಡಿದ್ದು ಸರಿನಾ ?

ನಾನು : ಸಾಕು ಸಾಕು ಡೈಲಾಗು. ನಾನು ಏನು ಮಾಡಬಾರದ್ದನ್ನು ಮಾಡಿದೆ ಅಂತ ?

Z : ೧. ಜನ ಸಾಮಾನ್ಯವಾಗಿ ಬಸ್ಸು ಹತ್ತಿದಾಗ ನ್ಯೂಸ್ ಪೇಪರ್ರೋ, ವಿಷ್ಣು ಸಹಸ್ರನಾಮ ನೋ ಓದ್ತಾರೆ. ನೀನು ವಿಚಿತ್ರ ಪ್ರಾಣಿ,ಫಿಸಿಕ್ಸ್ ಪುಸ್ತಕ ನೋ, ಥ್ರಿಲ್ಲರ್ ಕಾದಂಬರಿ ನೋ ಓದ್ತಿಯ.ಅದನ್ನ ಮಾಡಿಲ್ಲ ನೀನು.

೨. ಬಸ್ಸಿನ ಟಾಪ್ ಎಗರಿಹೋಗುವ ಹಾಗೆ ಜನ ಫೋನ್ ನಲ್ಲಿ ಮಾತಾಡ್ತಿರ್ತಾರೆ, ಇಲ್ಲಾಂದ್ರೆ ಆ ಕಡೆ ಫೋನ್ ನಲ್ಲಿ ಇರೋರು ಕೇಳಿಸಿಕೊಳ್ಳಕ್ಕೆ ಆಗದಿರುವ ಹಾಗೆ ಮೆಲ್ಲ ದನಿಯಲ್ಲಿ ಹ್ಯಾಂಡ್ಸ್ ಫ್ರೀ ಲಿ ಪಿಸುಗುಟ್ಟಿತ್ತಿರುತ್ತಾರೆ.ಕರೆನ್ಸಿ ಇಲ್ಲಾ ಅಂದ್ರೆ ಬಿಟ್ಟಿ ಎಸ್ ಎಮ್ ಎಸ್ಸು ಕಳಿಸುತ್ತಿರುತ್ತಾರೆ. ನೀನು ಯಾರಿಗೂ ಫೋನ್ ಮಾಡಿಲ್ಲ, [ಇದು ಪ್ರಪಂಚದ 7.001 ನೇ ಅದ್ಭುತ]ಹಾಗೂ ಪುಣ್ಯವಶಾತ್ ನಿನಗೂ ಯಾರು ಫೋನ್ ಮಾಡಿಲ್ಲ[ಸಧ್ಯ].ನಿನಗೆ ಮೆಸೇಜ್ ಮಾಡೋ ಅಷ್ಟು ತಾಳ್ಮೆ ಇಲ್ಲ, ಅದು ಲೋಕಕ್ಕೆಲ್ಲಾ ಗೊತ್ತಿದೆ.

೩.ಐಪಾಡು, ಎಮ್.ಪಿ ಥ್ರೀ ಪ್ಲೇಯರ್ರು, ಫೋನ್ ನಲ್ಲಿರೋ ಪ್ಲೇಯರ್ರು, ಎಫ್.ಎಮ್ಗಳನ್ನು ಹಾಕೊಂಡು, ಕಿವಿಗೆ ಇಯರ್ಫೋನ್ ನೇತಾಕೊಂಡು ಜನ ಕೇಳಿದ್ದೇ ಹಾಡುಗಳನ್ನ, ಮತ್ತದೇ ದರಿದ್ರ ಪಿಜೆಗಳನ್ನ ಕೇಳಿಕೊಂಡು ಜಮಾಯಿಸುತ್ತಿರುತಾರೆ. ಸೀಟ್ ಸಿಗದಿದ್ದರೆ ನೀನು ಸಾಮಾನ್ಯವಾಗಿ ಇದನ್ನೇ ಮಾಡ್ತಿರ್ತ್ಯಾ. ನೀನು ಇದನ್ನೂ ಮಾಡಿಲ್ಲ.

೪.ಕೆಲವರು ನಿಂತಲ್ಲೇ ತೂಕಡಿಸುತ್ತಿರುತ್ತಾರೆ, ಕೆಲವರು ಸೀಟಲ್ಲಿ ಕುಳಿತೇ ನಿದ್ರಾಲೋಕಕ್ಕೆ ಹಾರಿರುತ್ತಾರೆ. ನೀನು ಅದೂ ಮಾಡಿಲ್ಲ.

ಇಂಥಾ ಒಳ್ಳೆ ಕೆಲಸಗಳನ್ನ ಮಾಡೋದ್ ಬಿಟ್ಟು ಅಕ್ಕ ಪಕ್ಕದವರ ಜೊತೆಗೆ ಮಾತಾಡಿ,ಬೆಂಗಳೂರು ಜನರ ಟಿಪಿಕಲ್"we don't trust anyone","why waste time talking to others ?", "Whatever happens to anybody, we don't care" attitude ಬಿಟ್ಟು ಜನರ ಜೊತೆಲೆಲ್ಲಾ ಮಾತಿಗೆಲ್ಲಾ ಇಳಿದುಬಿಟ್ಟಿದ್ದಿಯಾ. ಪಕ್ಕಾ ಬೆಂಗಳೂರಿಗರು ಹೀಗೆ ಮಾಡಾಬಹುದಾ ?

ನಾನು : ಎಷ್ಟ್ ದಿನದಿಂದ ಕಾಯ್ತಿದ್ದೆ ನೀನು ನನ್ನ ಬೈಯ್ಯೋ ಚಾನ್ಸಿಗೆ ?

Z : ಲೆಖ್ಖ ಇಟ್ಟಿಲ್ಲ.

ನಾನು : ಹಾಳಾಗೋಗು. ನೀನು ಮೊದಲು ಕಥೆ ಕೇಳು. ಆಮೇಲೆ ಇದೇ ಡೈಲಾಗ್ ನ ನೀನು ವಾಪಸ್ ತಗೊಳ್ಳಿಲ್ಲಾ ಅಂದ್ರೆ, ನಾನು ನಾನಲ್ಲ.

Z : ಓಹೋ. ಹಾಗೋ ? ಕಥೆ ಹೇಳಿಬಿಡು.

ನಾನು : ನನ್ನ ವಿದ್ಯಾರ್ಥಿವರ್ಗ ನನಗೆ ಟ್ರೀಟ್ ಕೊಡಿಸಲು ಮನಸ್ಸು ಮಾಡಿತ್ತು.

Z : ಏನು ಟ್ರೀಟು ?

ನಾನು : ಈರುಳ್ಳಿ ಇಲ್ಲದಿರುವ ಭೇಲ್ ಪುರಿ.

Z : ಹಾಂ ?!ಯಾಕೆ ?

ನಾನು : ಹಾಗೆ ಸುಮ್ಮನೆ. ನನಗೆ ಭೇಲ್ ಪುರಿಯಲ್ಲಿ ಈರುಳ್ಳಿ ಇರಬಾರದು.ಮತ್ತು, ನನಗೆ ಈರುಳ್ಳಿ ಅಂದ್ರೆ ಇಷ್ಟ ಬೇರೆ ಇಲ್ಲ. ನನ್ನ ಶಿಷ್ಯಕೋಟಿ " ನೀವು ಕೇಳಿದ್ದನ್ನು ಕೊಡಿಸದಿದ್ದರೆ ನಾವು ನಿಮ್ಮ students ಆಗಿ ಏನು ಪ್ರಯೋಜನ ಮೇಡಮ್ ? ಈರುಳ್ಳಿ ಇಲ್ಲದ ಭೇಲ್ ಪುರಿ ತಾನೆ ? ಕೊಡಿಸೋಣ ನಡಿರಿ" ಅಂದ್ರು.ನಾನು ಈ ವಾನರ ಸೇನೆಯ ಬಲ ಪರೀಕ್ಷೆ ಮಾಡಲು ಹೊರಟೆ.

ಟೌನ್ ಹಾಲಿನ ಬಸ್ ಸ್ಟ್ಯಾಂಡ್ ನಲ್ಲಿ ನಾಲ್ಕು ಘಂಟೆ ಸಾಯಂಕಾಲದ ಸುಡುಬಿಸಿಲಿನಲ್ಲಿ ಲೈಟ್ ಆಗಿ ರೋಸ್ಟ್ ಆದ ನಂತರ ಬಸ್ ಬಂತು. ಅದು ನಾವು ಹೋಗಬೇಕಿದ್ದ ಜಾಗಕ್ಕೆ ನೇರವಾಗಿ ಹೋಗುತ್ತಿದ್ದ ಬಸ್ ಆಗಿರಲಿಲ್ಲ. ನನ್ನ ಶಿಷ್ಯವರ್ಗಕ್ಕೆ ನಾನಂದೆ, "ದಾರಿ ಮಧ್ಯದಲ್ಲಿ ಬಸ್ ಬದಲಿಸೋಣ.ಈ ಬಸ್ಸಿನಲ್ಲಿ ರಶ್ ಕಡಿಮೆ ಇದೆ.ಹತ್ತಿಬಿಡೋಣ". ಅವರು ನನ್ನ ಸುಗ್ರೀವಾಜ್ಞೆಯನ್ನು ಸಾಂಗವಾಗಿ ಪಾಲಿಸಿದರು.

Z : ಪರ್ವಾಗಿಲ್ಲ. ಮುಂದೆ ?

ನಾನು : ಬಸ್ ಹತ್ತಿದೊಡನೆಯೇ ಪುಣ್ಯವಶಾತ್ ನನಗೆ ಸೀಟು ಸಿಕ್ಕಿತು. ಕಂಡಕ್ಟರ್ ಬಸ್ ಪಾಸನ್ನು ತೋರಿಸಲು ಕೇಳಿದರು. ನಾನು ಪಾಸನ್ನು ತೋರಿಸಿದೆ. ಇನ್ನೇನು ಅದನ್ನು ಮತ್ತೆ ಬ್ಯಾಗಿಗೆ ಹಾಕಿಕೊಳ್ಳಬೇಕು, ಆಗ ಎದುರಿಗಿದ್ದ ವಯಸ್ಸಾದ ಸಹಪ್ರಯಾಣಿಕ ದಂಪತಿಗಳು " ಏನಮ್ಮಾ ಅದು ಚೀಟಿ ?" ಅಂದರು. ಅವರನ್ನು ನೋಡಿದೊಡನೆಯೇ ನನಗೆ ಇವರು ಈ ಊರಿನವರಲ್ಲ ಎಂದು ಗೊತ್ತಾಯಿತು.

ನಾನು: " ಇದು ಬಸ್ ಪಾಸು."

ಅವರು: "ಇಲ್ಲಿ ಕೊಡಮ್ಮ, ನೋಡುತ್ತೇನೆ."

ನಾನು ಕೊಟ್ಟೆ.ಅವರು ಅದನ್ನೊಮ್ಮೆ ವೀಕ್ಷಿಸಿ ವಾಪಸ್ಸು ಕೊಟ್ಟರು.

ಅವರು: ಕೆಲಸದಲ್ಲಿದಿಯಾ ಮಾ ?

ನಾನು:ಹು.

ಅವರು: ಏನು ಕೆಲಸ?

ನಾನು:ಟೀಚರ್.

ಅವರು: ಎಲ್ಲಿ ?

ನಾನು: ಕಾಲೇಜು.

ಅವರು: ಈ ಪಾಸಿಗೆ ದುಡ್ಡು ಸ್ವಲ್ಪ ಜಾಸ್ತಿಯಾಯ್ತಲ್ವಾ ?

ನಾನು: ಇಲ್ಲ, ದಿನಾಗಲೂ ಓಡಾಟ ಇರತ್ತೆ ನಮಗೆ, ಬೇಕಾಗತ್ತೆ.

ಅವರು: ಅದು ಸರಿನೇ.ಎಷ್ಟಮ್ಮಾ ಸಂಬಳ? ಒಂದು ಇಪ್ಪತ್ತೈದು ಸಾವಿರ ?

ನಾನು:ಇಲ್ಲ, ಅಷ್ಟಿಲ್ಲ.

ಅವರು: ಹೌದಾ ? ಕಡಿಮೆಯನ್ನಿಸಲಿಲ್ಲವೇ ?

ನಾನು: ಇಲ್ಲ, ಎಲ್ಲಾ ಕಡೆ ಇಷ್ಟೇನೆ.ಇರಲಿ, ನೀವು ಯಾವ ಊರಿನವರು ?

ಅವರು: ಹೊಸಪೇಟೆ.

ನಾನು: ಇಲ್ಲಿ ನೆಂಟರನ್ನು ನೋಡಲು ಬಂದಿರಾ ?

ಅವರು: ನಮ್ಮ ಮಗಳನ್ನು ಇಲ್ಲಿಯವರಿಗೆ ಮದುವೆ ಮಾಡಿಕೊಟ್ಟಿದ್ದೇವೆ.ಹೋದ ತಿಂಗಳು ಇಪ್ಪತ್ತನೆಯ ತಾರೀಖಿನಂದು ಮದುವೆಯಾಯಿತು. ಅವಳನ್ನು ಗಂಡನ ಮನೆಗೆ ನೆನ್ನೆ ಬಿಟ್ಟು ಬಂದೆವು.ಆಮೇಲೆ ನಮ್ಮ ಅಣ್ಣನ ಮನೆಗೆ ಹೋದೆವು. ಇವತ್ತು ಬೀಗರು ಕರೆದಿದ್ದಾರೆ. ಅದಕ್ಕೆ ಅಲ್ಲಿಗೆ ಹೊರಟಿದ್ದೀವಿ.

Z : ಪೂರ್ತಿ ಪುರಾಣ ಹೇಳಿಬಿಟ್ಟರು ಅನ್ನು.

ನಾನು : :)ನನಗೆ ಅವರ ಮುಗ್ಧತೆಯನ್ನು ನೋಡಿ ಖುಷಿಯಾಯ್ತು.ಹೊರ ಊರಿನವರಿಗೂ ನಮಗೂ ಎಷ್ಟು ವ್ಯತ್ಯಾಸ ನೋಡು!ಬಸ್ಸಿನಲ್ಲಿ ಗೊತ್ತಿದ್ದವರು ಎದುರಾದರೇನೇ ಮಾತನಾಡಿಸದ ಬೆಂಗಳೂರಿಗರು ನಾವು. ಆದರೆ ಇವರನ್ನು ನೋಡು,ಅವರು ನನ್ನನ್ನ ನೋಡುತ್ತಿರುವುದೇ ಮೊದಲನೆಯ ಬಾರಿ. ಇವರು ನನ್ನೊಟ್ಟಿಗೆ ಇಷ್ಟೋಂದು ಹೇಗೆ ಮಾತಾಡಿದರು ಅನ್ನೋದೆ ದೊಡ್ಡ ಆಶ್ಚರ್ಯ ನನಗೆ.

Z : ನಿಜ. ಅವರೂ ಸುಮ್ಮನಿರಬಹುದಿತ್ತು. ನೀನು ಸುಮ್ಮನಿರೋದನ್ನ practice ಬೇರೆ ಮಾಡ್ತಿದ್ಯಾ ಇತ್ತೀಚೆಗೆ.

ನಾನು : ಹು. ಇನ್ನೂ ಕಥೆ ಮುಗಿದಿಲ್ಲ, ಕೇಳು.

Z : ಮುಂದುವರೆಸು.

ಅವರು:ಏನ್ ಪಾಠ ಮಾಡ್ತ್ಯಾ ಮಾ ನೀನು ಕಾಲೇಜಲ್ಲಿ ?

ನಾನು : ಭೌತಶಾಸ್ತ್ರ.

ಅವರು: ಕಷ್ಟ ಅಲ್ವಾ ವಿಜ್ಞಾನ ?

ನಾನು: ನನಗನಿಸಲಿಲ್ಲ.

ಅವರು: ಬುದ್ಧಿವಂತೆ!

Z : ಅವರೊಬ್ಬರೇ ಹೇಳ್ಬೇಕು ಇದನ್ನ.

ನಾನು : ಸುಮ್ನೆ ಕಥೆ ಕೇಳಿದ್ರೆ ಸರಿ ನೀನು.

Z : ಸಾರಿ...continue.

ಅವರು: ನನ್ನ ಮಗಳು ಬಿ.ಎ. ಮಾಡಿದಾಳೆ.

ನಾನು: ಸಂತೋಷ.

ಅವರು: ಪಾಠ ಎಲ್ಲಾ ಎಂಥಾದ್ದೂ ಮಾಡಲ್ಲ ಅವಳು, ಆದರೆ ಕಂಪ್ಯೂಟರ್ ನಲ್ಲಿ ಅದೆಂಥದ್ದೋ ಒಂದಿಷ್ಟು ಮಾಡ್ಕೊಂಡಿದಾಳೆ.ಕೆಲ್ಸಕ್ಕೆ ಸೇರೋ ಅಷ್ಟ್ರಲ್ಲಿ ಮದ್ವೆ ಆಗೋಯ್ತು. ಇಲ್ಲಿಗೆ ಬಂದುಬಿಟ್ಟಳು.

ನಾನು: ಓಹ್.

ನಾನು : ನಾನು ಪುಸ್ತಕ ತೆಗೆಯಲು ಅನುವಾದೆ.

Z : ಮುಗಿದೇ ಹೋಯ್ತಾ ಮಾತುಕಥೆ ?

ನಾನು : ಇನ್ನೇನ್ ಇರತ್ತೆ ಮಾತಾಡಕ್ಕೆ ಅಂತ ? ನಾನು ಪುಸ್ತಕ ತೆಗೆಯೋ ಅಷ್ಟ್ರಲ್ಲಿ ಯಾವ್ದೋ ಸ್ಟಾಪ್ ಬಂತು. ಮಕ್ಕಳ ಕೂಟ ಅನ್ಸತ್ತೆ. ಅಲ್ಲಿ ಒಬ್ಬ ಹೆಂಗಸು ಒಂದು ದೊಡ್ಡ ಬ್ಯಾಗನ್ನು ಹೊತ್ತು ತಂದರು. ನನ್ನ ಎದಿರಿಗೆ ಈ ದಂಪತಿಗಳು ಆಸೀನರಾಗಿದ್ದರು.ಈ ಹೆಂಗಸು ಬಂದದ್ದೇ "ಜಾಗ ಬಿಡಿ" ಅಂದ್ರು.ಆತನಿಗೆ ಬೆಂಗಳೂರಿನಲ್ಲಿ ಲೇಡಿಸ್ ಸೀಟ್ ನಲ್ಲಿ ಕೂತರೆ ದಂಡ ತೆರಬೇಕಾದೀತು ಅನ್ನೋದು ಗೊತ್ತಿರಲಿಲ್ಲ. ಆತ ಸ್ವಲ್ಪ ಗಟ್ಟಿಯಾಗಿಯೇ " ನಾವು ಈ ಜಾಗ ನ ಖರೀದಿ ಮಾಡಿದಿವಿ, ನಿಮಗೆ ಬಿಟ್ಟು ಕೊಡಲ್ಲ" ಅಂದರು. ಈಕೆ " ಸಾರ್ ಇದು ಲೇಡಿಸ್ ಸೀಟು. ಬಿಟ್ಟುಕೊಡಿ" ಅಂದರು. ಈತನ ಹೆಂಡತಿಗೆ ಸ್ವಲ್ಪ ಭಯ ಆಯ್ತು. ಗೊತ್ತಿಲ್ಲದ ಊರು. ಗೊತ್ತಿಲ್ಲದ ರೂಲ್ಸು.ಗಂಡ ಹಿಂದೆಲ್ಲೋ ಹೋಗಿಬಿಟ್ಟರೆ ಈಕೆಯ ಗತಿಯೇನೆಂದು ಮುಖದಲ್ಲಾಗಲೇ ಚಿಂತೆ ಕಾಣತೊಡಗಿತ್ತು. ಆದರೆ ಈತ ಜಗಳಕ್ಕೆ ಇಳಿದುಬಿಟ್ಟಿದ್ದರು. "ಇಲ್ಲಮ್ಮ, ನಮ್ಮ ಸ್ಟಾಪ್ ಬರುವ ವರೆಗೂ ನಾವು ಜಾಗ ಖಾಲಿ ಮಾಡೊಲ್ಲ."

Z : ರಾಮಾ...ಆ ಬೆಂಗಳೂರಿನ ಹೆಂಗಸಿಗೆ ಸುಮ್ಮನಿರಕ್ಕೆ ಏನಾಗಿತ್ತೂ ಅಂತ. ಯಾರಾದರೂ ಒಬ್ಬರು ಇಳಿಯುತ್ತಿದ್ದರಪ್ಪಾ ಚಾಮರಾಜಪೇಟೆ ಲಿ.ಕುಳಿತಿದ್ದರೆ ಆಗ್ತಿತ್ತು. ಏನ್ ಆಕಾಶ ತಲೆ ಮೇಲೆ ಕಳಚಿ ಹೋದ ಹಾಗೆ ಆಡಿದ್ದು ಅಂತ ?

ನಾನು : ನೋಡು, ಅಲ್ಲೇ ವ್ಯತ್ಯಾಸ ಇರೋದು. ಈಕೆ ಇಳಿಯಬೇಕಿದ್ದಿದ್ದು ನಿರ್ಮಲ ಸ್ಟೋರ್ಸ್ ನಲ್ಲಿ. ಹತ್ತಿದ್ದು ಮಕ್ಕಳ ಕೂಟದಲ್ಲಿ. ಆಶ್ರಮದಲ್ಲಿ ಜಾಗ ಸಿಕ್ಕೇ ಸಿಕ್ಕಿರೋದು. ಕಾಯಲು ತಾಳ್ಮೆ ಇಲ್ಲ, ಮತ್ತೆ, ನಾವು ಯಾರೊಟ್ಟಿಗೆ ಮಾತಾಡುತ್ತಿದ್ದೇವೆ ಅನ್ನೋ ಪರಿವೆ ಕೂಡಾ ಇಲ್ಲ,ಸುಮ್ಮನೆ ಹಕ್ಕು ಬಾಧ್ಯತೆ ಅಂತ ಜಗಳಕ್ಕೆ ಇಳಿದುಬಿಟ್ಟರು. ಇದೇ ಈಕೆ ಬೇರೆ ಊರಲ್ಲಿ ತನ್ನ ಪತಿಯೊಡನೆ ಹೋದಾಗ ಅಲ್ಲಿಯವರು ಹಾಗೇ ಮಾಡಿದ್ದಿದ್ದರೆ ಆಗಿನ ಪರಿಸ್ಥಿತಿ ಹೇಗಿರೋದು ಅಂತ ಒಂದು ಕ್ಷಣ ಕೂಡ ಯೋಚನೆ ಮಾಡ್ಲಿಲ್ಲ.ಹೋಗಲಿ, ಆಕೆಯ ಪತ್ನಿಯ ದುಗುಡವನ್ನೂ ಸಹ ಅರ್ಥ ಮಾಡಿಕೊಳ್ಳಲಿಲ್ಲ.ಬೇರೆಯೂರಿನವರಿಗೆ ಬಸ್ಸಲ್ಲಿ ಸ್ವಲ್ಪ ಸ್ನೇಹಮಯ ವಾತವರಣ ಇದ್ದರೆ ಅವರ ಅರ್ಧ ದುಗುಡ ಕಡಿಮೆಯಾಗತ್ತೆ. ಅದು ಬಿಟ್ಟು ಇವರು ಬಾವುಟ ಇಟ್ಕೊಂಡು ಹೋರಾಟಕ್ಕಿಳಿದರೆ ? ಪ್ರಜ್ಞೆ, ತಾಳ್ಮೆ ನೇ ಇಲ್ಲದೇ ಕಂಡಕ್ಟರ್ ಆಂಟಿ ನ ಕರೆದುಬಿಟ್ಟರು ಆ ಹೆಂಗಸು.Just ಮಾತ್ ಮಾತಲ್ಲಿ ಜಗಳ ಆರಂಭವಾಗೋಗಿತ್ತು.

Z : ಆಮೇಲೆ ?

ನಾನು : ಕಂಡಕ್ಟರ್ ಆಂಟಿ ಬಂದು " ಸಾರ್, ಎದ್ದೇಳಿ.ಇಲ್ಲಾಂದ್ರೆ ದಂಡ ಕಟ್ಟಬೇಕಾಗತ್ತೆ. "

ಅವರು:"ನೋಡಮ್ಮ, ನೀನೆ ನಾವು ಬಸ್ ಹತ್ತಿದಾಗ ಇಲ್ಲಿ ಕರ್ಕೊಂಡ್ ಬಂದು ಕೂರಿಸಿದೆ. ಈಗ ನೀನೆ ಎದ್ದೇಳಿ ಅಂತಿದ್ಯಲ್ಲಾ, ಇದನ್ನ ಮುಂಚೆನೆ ಹೇಳಕ್ಕಿಲ್ವಾ ?"

ಕಂಡಕ್ಟರ್ ಆಂಟಿ: " ಅಣ್ಣ, ನೋಡಿ, ಆಗ ಬಸ್ ನಲ್ಲಿ ಜನ ಇರ್ಲಿಲ್ಲ. ಕೂತ್ಕೊಳಿ ಅಂತ ಬಿಟ್ಟೆ. ಈಗ ಜನ ಜಾಸ್ತಿಯಾಗವ್ರೆ. ಎದ್ದೇಳಿ."
ಅವರು ಏಳಲೇಬೇಕಾಯ್ತು. ಎದ್ದು ಪಾಪ ಹಿಂದೆಗಡೆ ಸೀಟಿಲ್ಲದೇ ಜನರ ಮಧ್ಯೆ ನುಸುಳಿ ನಿಲ್ಲಬೇಕಾಯ್ತು. ಸಾಲದಕ್ಕೆ ಹಿಂದಿದ್ದ ಗಂಡಸರೆಲ್ಲಾ ಮುಖ ಒಂಥರಾ ಮಾಡಿದರು. ನನಗೆ ಬೇಜಾರಾಯ್ತು.

Z : ಯಾಕೆ ?

ನಾನು : ಇಲ್ಲಿ ತಪ್ಪು ಮೂರೂ ಜನರದ್ದಿದೆ. ಕಂಡಕ್ಟರ್ ಆಂಟಿ ಮೊದಲೇ ಅವರನ್ನ ಹಿಂದೆ ಕೂರಿಸಬೇಕಿತ್ತು.ಈ ಬೆಂಗಳೂರಿನವರು ಆತನ ವಯಸ್ಸಿಗಾದರೂ ಬೆಲೆಕೊಟ್ಟು ಸುಮ್ಮನಿರಬೇಕಿತ್ತು.ಮತ್ತೆ ಆತ ತಾನು ಪರವೂರಿನಲ್ಲಿರುವುದರಿಂದ ತೀರ ವ್ಯಂಗ್ಯ ಭರಿತ ಮಾತನ್ನು ಆಡದಿದ್ದರೆ ಚೆನ್ನಾಗಿರ್ತಿತ್ತು. ಇವೆಲ್ಲಾ ಜಸ್ಟ್ ಮಾತ್ ಮಾತಲ್ಲಿ ಆಗೋ ತಪ್ಪುಗಳು.ಮಾತಲ್ಲಿ ಸ್ವಲ್ಪ ಹಿಡಿತ ಇದ್ದಿದ್ದ್ರೆ, ಮತ್ತು ಆಡಬೇಕಾಗಿರೋ ಮಾತನ್ನ ಸಮಯಕ್ಕೆ ಸರಿಯಾಗಿ ಆಡಿದ್ದಿದ್ದರೆ ಈ scene create ಆಗ್ತಿರ್ಲಿಲ್ಲ.ಅಲ್ವಾ ? ನಾವು ಬೇರೆಯವರೊಟ್ಟಿಗೆ ಹೇಗೆ ಮಾತಾಡೂತ್ತೀವಿ ಅನ್ನೋದರ ಮೇಲೆ ನಮ್ಮ ಸಂಬಂಧಗಳು ಏರ್ಪಾಡಾಗುತ್ತವೆ, ಮಾರ್ಪಾಡಾಗುತ್ತವೆ, ಉಳಿಯುತ್ತವೆ ಇಲ್ಲಾ ಕಡಿದುಹೋಗುತ್ತದೆ.ಎಲ್ಲಾ ಬರೀ ಮಾತಲ್ಲೇ ಆಗೋಗತ್ತೆ.

Z : ಹ್ಮ್ಮ್ಮ್....ನಿಜ.

ನಾನು : ಆತ ಹಿಂದೆ ಹೋಗಿ ನಿಂತೊಡನೆ ಈ ಬೆಂಗಳೂರಿನ ಹೆಂಗಸು ವಿಜಯದ ನಗೆ ಬೀರಿದರು.ನನಗಂತೂ ತೀರಾ ಸಿಟ್ಟು ಬಂತು. ನಾನು ಎದ್ದು ಜಾಗ ಕೊಡೋಣ ಅನಿಸಿತು. ಆದರೆ ಅಷ್ಟರಲ್ಲಾಗಲೇ ನಾನು ಇಳಿಯಬೇಕಿದ್ದ ಸ್ಟಾಪ್ ಬಂದಿತು, ಹಾಗೂ ಮತ್ತೊಬ್ಬ ಹಣ್ಣು ಹಣ್ಣು ಮುದುಕಿ ಬಸ್ ಹತ್ತಿದರು. ನನಗೆ ಯಾಕೋ ನಾವು ತೀರ commercial and opportunist ಆಗೋಗಿದಿವಿ ಅನಿಸಿತು. ನಮ್ಮ ಸುಖಕ್ಕೆ ಇಡೀ ಜಗತ್ತನ್ನೇ ಆಪೋಶನ ತಗೊಳ್ಳಕ್ಕೆ ಹೊರಟ್ಬಿಟ್ಟಿದ್ದೀವಿ,ಇದೇ ಜಗತ್ತಲ್ಲಿ ನಾವೂ ಇದಿವಿ ಅನ್ನೋದನ್ನ ಮರೆತು.ಸುಮ್ನೆ ಜಾಸ್ತಿ ಮಾತಾಡೋದ್ರಿಂದ ಏನೂ ಪ್ರಯೋಜ್ನ ಇಲ್ಲ. ಮಾತಲ್ಲಿ ಮಿತ, ಹಿತ, ಘಾತ ಮೂರು ಇರ್ಬೇಕು. ಇವೆಲ್ಲ ಸಮಯಕ್ಕೆ ಸರಿಯಾಗಿ ಮಾತಲ್ಲಿ ಮಿಳಿತವಾಗುತ್ತಿರಬೇಕು. ಜಸ್ಟ್ ಮಾತ್ ಮಾತಲ್ಲಿ ಈ ಸತ್ಯ ಜ್ಞಾನೋದಯವಾಯ್ತು ನನಗೆ.ಬಸ್ ನಿಂದ ಇಳಿದು, ಬೇರೇ ಬಸ್ ಹತ್ತಿ,ತಲುಪಬೇಕಿದ್ದ ಜಾಗ ತಲುಪಿ, ಈರುಳಿ ರಹಿತ ಭೇಲ್ ಪುರಿಯನ್ನು ತಿನ್ನುತ್ತಿರುವಾಗಲೂ ನನಗೆ ಪಾಪ ಆ ವಯಸ್ಸಾದ ದಂಪತಿಗಳ ಮುಖವೇ ನೆನಪಾಗ್ತಿತ್ತು.

Z : ತಲೆ ಮೇಲೆ ಬಲ್ಬ್ ಉರ್ದಿರ್ಬೇಕು.

ನಾನು : ನೋಡ್ಲಿಲ್ಲ.

Z : ಇರ್ಲಿ ಬಿಡು,ಪರ್ವಾಗಿಲ್ಲ. ಸೋ ಈ ಜ್ಞಾನೋದಯ ಆದ್ಮೇಲೆ ನೀನು ಏನ್ ಡಿಸೈಡ್ ಮಾಡಿದೆ ?

ನಾನು : ಮೊದಲು, ಸುಮ್ನೆ ಇರೋದು, ಲೋಕನ constant ಆಗಿ observe ಮಾಡೋದು.Situations Analyse ಮಾಡೋದು. ನಮ್ಮ ಮಾತಿನ ಅವಶ್ಯಕತೆ ಇದ್ದರೆ ಮಾತ್ರ ಮಾತಾಡೋದು. ಸುಮ್ ಸುಮ್ನೆ ನಾವು ಫ್ರೀ ಇರ್ತಿವಿ ಅಂತ ಜನಕ್ಕೆ ಫೋನ್ ಮಾಡದೇ ಮೊದಲು ಮೆಸೇಜ್ ಮಾಡಿ, ಫ್ರೀ ಇದ್ರೆ ಮಾತ್ರ ಫೋನ್ ಮಾಡೋದು.

Z : ನಿನಗೆ ಮೆಸೇಜ್ ಮಾಡಕ್ಕೆ ತಾಳ್ಮೆ ನೆ ಇಲ್ವಲ್ಲೇ ?

ನಾನು : ಕಲಿಯೋದಪ್ಪಾ...ಅದೇನ್ ಬ್ರಹ್ಮ ವಿದ್ಯೆ ಏನಲ್ಲ. ಆವತ್ತಿಂದ ನಾನು ಬಹಳ ಹುಷಾರಾಗಿದಿನಿ ಮಾತಿನ ವಿಷಯದಲ್ಲಿ.

Z : ಎಹೆಹೆಹೆ...

ನಾನು : By the way, ನಿನಗೆ ಇನ್ನೊಂದೆರಡು ವಿಷಯ ತಿಳಿಸಬೇಕು.

Z :ಗೊ ಅಹೆಡ್.

ನಾನು : ೧. ನಾನು ಮೇ ಎಂಟನೆಯ ತಾರೀಖಿನಿಂದ ಒಂದು ತಿಂಗಳು ಉತ್ತರ ಭಾರತದ ಪ್ರವಾಸಕ್ಕೆ ಹೋಗ್ತಿದಿನಿ.

Z : ಪ್ರವಾಸ ಕಥನ ನ ಚಾಚೂ ತಪ್ಪದೇ ಹೇಳ್ಬೇಕು. ಇಲ್ಲಾಂದ್ರೆ ಕಪ್ಪು ಬಾವುಟ ಪ್ರದರ್ಶನ ಸಮೇತ ಉಗ್ರವಾದ ಹೋರಾಟ ನಡೆಯತ್ತೆ.

ನಾನು : ನೋಡೋಣ.ಬಂದ ತಕ್ಷಣ ಎಮ್.ಫಿಲ್ ಎಕ್ಸಾಮ್ ಇದೆ. ಟ್ರೈನ್ ನಲ್ಲಿ ಎಮ್.ಫಿಲ್ ಎಕ್ಸಾಮ್ ಗೆ ಓದೋ ಹಣೆ ಬರಹ ನ ಬರ್ಸ್ಕೊಂಡ್ ಬಂದಿದಿನಿ ನಾನು. ಟೈಂ ಸಿಕ್ರೆ ಖಂಡಿತಾ ಹೇಳ್ತಿನಿ.

Z :ಎರಡನೆಯ ವಿಷಯ ?

ನಾನು : ೨. ನಾನು mp3 ಪ್ಲೇಯರ್ ತಗೊಂಡೆ. ಅಮ್ಮಂಗೆ ಒಂದು ಕೊಡಿಸಿದ್ನಲ್ಲಾ...ಅಂಥದ್ದೇ.

Z : ನಾಮಕರಣ ಮಹೋತ್ಸವ ಆಗಿರ್ಬೇಕಲ್ಲ.

ನಾನು : ಯೆಸ್.ಶ್ರಾವ್ಯ ಅಂತ ಹೆಸರು.

Z : ಏನು technical details?

ನಾನು : 8 GB ಅಷ್ಟು ಸ್ಟೋರೇಜು. ವಾಯಿಸ್ ರೆಕಾರ್ಡಿಂಗ್ ಮಾಡತ್ತೆ, ರೇಡಿಯೋ ಇದೆ. ಹಾಡುಗಳು ಚೆನ್ನಾಗಿ ಕೇಳತ್ವೆ. ಅಷ್ಟೆ.

Z : ಓಕೆ. ಜಸ್ಟ್ ಮಾತ್ ಮಾತಲ್ಲೇ ಎಲ್ಲಾ ಹೇಳಿ ಮುಗಿಸಿಬಿಟ್ಟಳು.

ನಾನು : ;)

Sunday, March 14, 2010

Back to ಜಲೇಬಿ within 365 days ! - 1

Z : ಏನಿದು....ಈ ಲೆವೆಲ್ ನಲ್ಲಿ ಊರೂರು ತಿರುಗುತ್ತಿದ್ದೀಯ ?

ನಾನು : ಊರೂರಲ್ಲ....ಊರು ಮಾತ್ರ. ಜಲೇಬಿನಾಡಿನ ರಾಜಧಾನಿ ಜಲೇಬಿ-ಚೆನ್ನೈ ಗೆ.

Z : ಯಾತಕ್ಕೆ ?

ನಾನು : Department of Science and Technology, Govt. of India, National Science and Technology Communication and Tamilnadu Centre for Science and Technology ಇವರೆಲ್ಲಾ ಸೇರಿ Master Resource Training Programme on Annular Solar Eclipse-2010 ಅನ್ನೋ ಮೂರುದಿನದ ಕಾರ್ಯಕ್ರಮವೊಂದನ್ನ ಆಯೋಜಿಸಿದ್ದರು. ನನ್ನನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿತು.

Z : ಹ್ಮ್ಮ್....ಯಾವತ್ತಿಂದ ಯಾವತ್ತಿನವರೆಗೆ ?

ನಾನು : ೨೨, ೨೩ ಮತ್ತು ೨೪ ಡಿಸಂಬರ್2009.

Z : ಹೇಗಾಯ್ತು ಕಾರ್ಯಕ್ರಮ ?

ನಾನು : ಸಕತ್ತಾಗಿತ್ತು. ಸಾಮಾನ್ಯ ಜನರಿಗೆ ಗ್ರಹಣದ ಮೇಲಿರುವ ಭಯ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸುವುದು ಹೇಗೆ ಎಂಬುದರ ಬಗ್ಗೆ ಈ ಕಾರ್ಯಾಗಾರದಲ್ಲಿ ಹೆಚ್ಚು ಒತ್ತು ನೀಡಲಾಯ್ತು. ಗ್ರಹಣದ ಸುರಕ್ಷಿತ ವೀಕ್ಷಣೆಯ ರೀತಿಗಳನ್ನು ನಮಗೆ ವಿವರವಾಗಿ ತಿಳಿಸಲಾಯ್ತು.ನಾನಂತು ಇದುವರೆಗೂ ಯಾವುದೇ ಕಾರ್ಯಗಾರಗಳನ್ನು ಅಟೆಂಡ್ ಮಾಡಿರಲಿಲ್ಲ. ಒಳ್ಳೆ ಅನುಭವ.
ಜನವರಿ ಹದಿನೈದು ೨೦೧೦ ಕನ್ಯಾಕುಮಾರಿಗೆ ಹೋಗಬೇಕಾಗಿತ್ತು. ನಾನು ಹೋಗೋಣ ಅಂದುಕೊಂಡಿದ್ದೆ.ಆದರೆ ಟಿಕೆಟ್ ಸಿಗಲಿಲ್ಲ. ಟ್ರೈನು, ಬಸ್ಸು ಮತ್ತು flight ನಲ್ಲೂ ಸಹ !

Z : ಪಾಪ. ಮತ್ತೆ ಗ್ರಹಣಕ್ಕೆ ಏನು ಮಾಡಿದೆ ?

ನಾನು : ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಗ್ರಹಣದ ಬಗ್ಗೆ ಗ್ರಹಣದ ದಿನವೇ ಒಂದು ಕಾರ್ಯಾಗಾರ ಇತ್ತು. ಅಲ್ಲಿ ಹೋಗಿ, ಗ್ರಹಣ ವೀಕ್ಷಿಸಿದೆ.

Z : ಹ್ಮ್ಮ್...

ನಾನು : ನೋಡು....ವರ್ಷಕ್ಕೊಂದು ಸರ್ತಿ ಜಲೇಬಿನಾಡಿನ ದರ್ಶನ ಖಾಯಂ ಆಗೋಹಾಗೆ ಕಾಣತ್ತೆ ಕಣೆ...

Z : ಹೂ...ಹೋದಲ್ಲ ಹೋದ ವರ್ಷ(೨೦೦೮) ಆಯ್ತು, ಕಳೆದ ವರ್ಷ ನು ಆಯ್ತು...

ನಾನು : ಈ ವರ್ಷನೂ ಆಗತ್ತೆ...

Z : ಯೆಸ್. ಏನ್ ಏನ್ ಮಾಡಿದೆ ಚೆನ್ನೈ ನಲ್ಲಿ ?

ನಾನು : ಲೋಕಲ್ ಟ್ರೈನುಗಳಲ್ಲಿ ಪ್ರಯಾಣ ಮತ್ತು ಟಿ.ನಗರದಲ್ಲಿ ಸಿಕ್ಕಾಪಟ್ಟೆ ಶಾಪಿಂಗ್, ಶರವಣ ಭವನದಲ್ಲಿ ದೋಸೆ ಮತ್ತು ಮರಿನಾ ಬೀಚಿನಲ್ಲಿ ಒಂದು ಸುತ್ತು.

Z : ಸಾರ್ಥಕ ಆಯ್ತು.

ನಾನು : ಅಲ್ವಾ ? ಆದ್ರೆ ಲೋಕಲ್ ಟ್ರೈನಲ್ಲಿ ನಾವು ಹೋಗಿದ್ದು ಬರಿ ಎರಡೇ ಸ್ಟಾಪು.ಟಿ.ನಗರದಲ್ಲಿ ಶಾಪಿಂಗ್ ಮಾಡಿದ್ದು ನನಗಂತೂ ತೃಪ್ತಿ ಆಗಲಿಲ್ಲ, ಶರವಣ ಭವನದ ಎಲ್ಲಾ ದೋಸೆಗಳನ್ನು ಟ್ರೈ ಮಾಡಲಾಗಲಿಲ್ಲ ಮತ್ತು ಮರೀನ ಬೀಚಿನಲ್ಲಿ ನೀರಿಗೆ ಇಳಿಯಲಿಲ್ಲ.

Z : !!!!!!!!!!!!!!!!! ಸಾಲ್ದೆನೆ ಇಷ್ಟು ?

ನಾನು : ಉಹು ! ಚೆನ್ನೈ ಇಂದ ಅಣ್ಣನಿಗೆ ಏನೂ ತರಲಾಗಲಿಲ್ಲ :( ಅಮ್ಮ, ಅಪರ್ಣ ಮತ್ತು ನನಗಾಗಿ ಮಾತ್ರ ಶಾಪಿಂಗ್ ಮಾಡಕ್ಕೆ ಟೈಂ ಸಿಕ್ಕಿದ್ದು. ಮೈಲಾಪುರದ ಶರವಣ ಭವನ ತಲುಪಿದಾಗ ರಾತ್ರಿ ಎಂಟು. ಇನ್ನೊಂದು ಘಂಟೆ ಮುಂಚೆ ತಲುಪಿದ್ದಿದ್ದರೆ ಇನ್ನೊಂದು ದೋಸೆಯನ್ನಾದ್ರೂ ಗಡದ್ದಾಗಿ ಲಗಾಯ್ಸಬಹುದಿತ್ತು. ಒಂದು ದೋಸೆ ತಿಂದಿದ್ದು ಸಾಕಾಗಲಿಲ್ಲ. ಮರೀನ ಬೀಚು ತಲುಪಿದಾಗ ಸಾಯಂಕಾಲ ಏಳು. ಮೊದಲೇ ಕತ್ತಲಾಗಿಹೋಗಿತ್ತು. ಮತ್ತೂ, ನಾನು ಉಟ್ಟ ಸೀರೆ ಹಾಳಾಗಬಾರದು ಅನ್ನೋ ಉದ್ದೇಶದಿಂದ ನಾನು ನೀರಿಗೆ ಇಳಿಯಲಿಲ್ಲ.ಅಷ್ಟೇ.

Z : ಹಾಗೆ.

ನಾನು : ಹೂ. ನನ್ನ ಜೀವನದ ಹೆಬ್ಬಯಕೆಗಳಲ್ಲಿ ಒಂದಾದ ಐಐಟಿ ಮಡ್ರಾಸ್ ನ ವೀಕ್ಷಣೆ ಸಂಪನ್ನಗೊಂಡಿದ್ದು ವಿಶೇಷ.

Z : ಗುಡ್.

ನಾನು : ಮಿಕ್ಕಿದ್ದೇನೂ ನೋಡಕ್ಕೆ ಆಗ್ಲಿಲ್ಲ. ಹಾಗಾಗಿ ಇನ್ನೊಂದು ಲಾಂಗ್ ವೀಕೆಂಡ್ ಸಿಕ್ಕರೆ ಯಾರದೇ ಮುಲಾಜು ನೋಡದೇ ಬಸ್ ಹತ್ತಿಕೊಂಡು ನಾನೊಬ್ಬಳೇ ಚೆನ್ನೈಗೆ ಸವಾರಿ ಹೋಗಲು ನಿರ್ಧರಿಸಿದ್ದೇನೆ.

Z : ಏನೇನು ನೋಡೋ ಆಸೆ ಇತ್ತು ತಮಗೆ ?

ನಾನು : ಕಂಚಿ, ಮಹಾಬಲಿಪುರಂ, ಗಿಂಡಿ ನ್ಯಾಷನಲ್ ಪಾರ್ಕು, ಗಾಂಧಿ ಮಂಟಪ, ವಡಪಳನಿ...ಸಿಕ್ಕಾಪಟ್ಟೆ ದೊಡ್ಡ ಲಿಸ್ಟಿದೆ.

Z : ಸದ್ಯೋಜಾತ ! ಹಾಗಿದ್ದರೆ ಶಾಪಿಂಗಿನ ಲಿಸ್ಟು ಇನ್ನೂ ದೊಡ್ಡದಿರತ್ತೆ.

ನಾನು : Of course.

ಈ ಟ್ರಿಪ್ಪಿನ ಡಿಟೈಲ್ಡ್ ಪ್ರವಾಸ ಕಥನ ಬೇಕಲ್ಲಾ...

ನಾನು : ಸಧ್ಯಕ್ಕೆ ಅದು ಸಾಧ್ಯವಿಲ್ಲ.

ಯಾಕೆ ?

ನಾನು : ಸಮಯದ ಸಿಕ್ಕಾಪಟ್ಟೆ ಅಭಾವದಿಂದ .

Z : ಆದದ್ದಾಗೋಗಲೀ ಅಂತ ಇದನ್ನೂ ಹೇಳಿಬಿಡು. ಪರ್ವಾಗಿಲ್ಲ.

ನಾನು : ಹಂಗಂತ್ಯಾ ?

Z : ಹು.

ನಾನು : ಸರಿ. ಕೇಳ್ಸ್ಕೊ.

ಇಪ್ಪತ್ತೊಂದನೆಯ ತಾರೀಖು ಮಧ್ಯಾಹ್ನ ಒಂದು ಘಂಟೆಗೆ ಚೆನ್ನೈಗೆ ಹೊರಡುವ ಐರಾವತ ವೋಲ್ವೋ ಬಸ್ಸನ್ನು ಹತ್ತಿದೆವು. ಮಂಡ್ಯದಿಂದ ಒಬ್ಬರು ಅಧ್ಯಾಪಕರು, ನಮ್ಮ ಲೆಕ್ಚರರ್ರು ಮತ್ತು ನಾನು. ನಮ್ಮಮ್ಮ ಮೂವತ್ಮೂರು ಕೋಟಿ ದೇವತೆಗಳ ಬಳಿ "ಚೆನ್ನೈಗೆ ಹೋಗ್ತಿದಾಳೆ-ನಾವ್ ಬೇರೆ ಇಲ್ಲ...ಸಿಕ್ಕಾಪಟ್ಟೆ ಬಿಸಿಲಿದ್ರೆ ಗತಿಯೇನು? ನೀವೇ ಕಾಪಾಡಿ ! "ಅಂತೆಲ್ಲಾ ಸಿಕ್ಕಾಪಟ್ಟೆ ಪ್ರಾರ್ಥನೆ ಮಾಡಿದ್ದರು ಅಂತ ಕಾಣತ್ತೆ-ಚೆನ್ನೈ ನಲ್ಲಿ ಸುಡುಬಿಸಿಲಿರದೇ ಧಾರಾಕಾರವಾದ ಮಳೆ ಬರುತ್ತಿತ್ತು.

Z : ಅಮ್ಮ....You are great.

ನಾನು : ಹು. ನಮ್ಮಮ್ಮ ಏನು ಸಾಮಾನ್ಯಾ ನಾ ?ಎಷ್ಟೇ ಆಗಲಿ ನಮ್ಮಮ್ಮ ! ಸರ್ಯಾಗಿ ಹೆದರ್ಸಿದಾರೆ ದೇವರುಗಳನ್ನ. ಅವರು ಹೆದರ್ಕೊಂಡು ಸೂರ್ಯಂಗೆ instructions ಕೊಟ್ಟಿದ್ದಾರೆ, "ನೋಡು ಸೂರ್ಯ...ನಿನ್ನ ಗ್ರಹಚಾರ ಕೆಡೋದು ಜನವರಿ ಹದಿನೈದರಂದು. ಸುಮ್ನೆ ಎಡವಟ್ಟು ಮಾಡ್ಕೊಂಡು ಈಗ್ಲೆ ಗ್ರಹಚಾರ ಕೆಡಸ್ಕೋಬೇಡ. ಸುಮ್ನೆ ಮೋಡದ ಮರೆಯಲ್ಲಿ ಮುಸುಕು ಹೊದ್ದು ಮಲಗು "ಅಂತ . ಅವನು ಪಾಪ ಯೆಸ್ ಅಂದಿರ್ಬೇಕು, ಆ ಸಂತೋಷಕ್ಕೆ ವರುಣ ಫುಲ್ ಜೋಷಲ್ಲಿ ಮಳೆ ಸುರಿಸ ತೊಡಗಿದ್ದ. ಶೆಖೆ ಅಂತ ಕೂಗಾಡೋದನ್ನ practice ಮಾಡಿಕೊಂಡು ಹೋಗಿದ್ದ ನಾನು ಜಲೇಬಿನಾಡಲ್ಲಿ ಇಳಿಯುತ್ತಲೇ ನೆನೆದು ತೊಪ್ಪೆಯಾಗಿ ಹೋಗಿದ್ದೆ.

Z : ಎಹೆಹೆಹೆಹೆ.....

ನಾನು : ನಮ್ಮ ವಸತಿ ವ್ಯವಸ್ಥೆ ಉಸ್ತುವಾರಿ ವಹಿಸಿದ್ದ ಗೋಪಿನಾಥ್ ಅವರು ಬಂದು ನಮ್ಮನ್ನು ಟಾಟಾ ಸೂಮೋದಲ್ಲಿ ನಾವು ಇಳಿದುಕೊಳ್ಳಬೇಕಿದ್ದ ಹಾಸ್ಟೆಲ್ ಬಳಿ ಕರೆದುಕೊಂಡು ಹೋದರು. ಬೆಂಗಳೂರು ಬಸ್ ನಿಲ್ದಾಣದಿಂದ ನೆಲಮಂಗಲಕ್ಕೆ ಹೋದಷ್ಟು ದೂರ, ಆ ಯೂನಿವರ್ಸಿಟಿ ಕ್ಯಾಂಪಸ್ಸು.

Z : ಹಾ ?!!

ನಾನು : ಹು. ನಾವು ಬಸ್ಸಿಂದ ಇಳಿದಿದ್ದು ಎಂಟುವರೆಗೆ. ನಾವು ಇಳಿದುಕೊಳ್ಳಬೇಕಿದ್ದ ಜಾಗದ ಹೆಸರು ವೇಲ್ಸ್ ಯೂನಿವರ್ಸಿಟಿ,ಪಲ್ಲಾವರಂ ಅಂತ. ಅಲ್ಲಿಗೆ ಹೋದಾಗ ಹತ್ತುವರೆ.

Z : ಊಟ ?

ನಾನು : ಊಟ ಮಾತ್ರ ಸಕತ್ತಾಗಿತ್ತು ನೋಡು. ರಸಗುಲ್ಲ ಬೇರೆ ಇತ್ತು. ಚೆನ್ನಾಗಿ ಲಗಾಯ್ಸಿದೆ.

Z : ಎಹೆಹೆಹೆ. ಆಮೇಲೆ ?

ನಾನು : ರೂಮು ಅಂತ ನಮ್ಮನ್ನ ಲೇಡೀಸ್ ಹಾಸ್ಟೆಲ್ಲಿಗೆ ತಂದುಬಿಟ್ಟರು. ಮಲಗಕ್ಕೆ ಜಾಗ ಇತ್ತು ಬಿಟ್ಟರೆ ಇನ್ನೇನೂ ವ್ಯವಸ್ಥೆ ಇಲ್ಲದ ಜಾಗ. ನಾವು ಸಾಂಗವಾಗಿ ಪಕ್ಕದ ರೂಮಿನವರಿಂದ ಪೊರಕೆ ಇಸ್ಕೊಂಡು, ಗುಡಿಸಿ, ಧೂಳು ಕೊಡವಿ, ಮಲಗುವ ಅಷ್ಟೊತ್ತಿಗೆ ಹನ್ನೊಂದು ಮುಕ್ಕಾಲು.

Z : ರಾಮಾ...

ನಾನು : ಹು. ಮಾರನೆಯ ದಿನಬೆಳಿಗ್ಗೆ ಎದ್ದರೆ ಥಣ್ಣೀರು ಸ್ನಾನ ಮಾಡಬೇಕೆಂದು ಜ್ಞಾನೋದಯವಾಯ್ತು. ನನಗೋ, ಥಣ್ಣೀರು ನೋಡಿದರೇನೇ ಶೀತವಾಗತ್ತೆ. ಮತ್ತೆ ಪಕ್ಕದ ಮನೆಯವರ ಬಳಿ ಹೀಟಿಂಗ್ ಕಾಯಿಲ್ಲನ್ನ ಸಾಲ ಕೇಳಿ, ಬಿಸಿನೀರು ಕಾಯಿಸಿಕೊಂಡು, ಸ್ನಾನದ ಶಾಸ್ತ್ರ ಮುಗಿಸಿದೆವು. ರೆಡಿಯಾಗಿ ವ್ಯವಸ್ಥಾಪಕರು ಕಳಿಸಿದ್ದ ಬಸ್ ಹತ್ತಿ ಹೊರಡಲನುವಾದೆವು. ನಾವು ಭಾಗವಹಿಸಬೇಕಿದ್ದ ಕಾರ್ಯಾಗಾರ ನಡಿಯುತ್ತಿದ್ದುದು ತಾರಾಲಯದಲ್ಲಿ. ಅದು ಅಣ್ಣಾ ವಿಶ್ವವಿದ್ಯಾನಿಲಯದ ಪಕ್ಕದಲ್ಲಿದೆ. ಅಂದರೆ, ನಗರದ ಹೃದಯಭಾಗದಲ್ಲಿ. ಹತ್ತುವರೆಗೆ ಉದ್ಘಾಟನಾ ಸಮಾರಂಭವಿತ್ತು. ನಾವು ತಲುಪಿದ್ದು ಹತ್ತುಮುಕ್ಕಾಲಿಗೆ. ಪುಣ್ಯಕ್ಕೆ, ಅತಿಥಿಗಳ ಆಗಮನವೂ ತಡವಾಗಿತ್ತು. ಹಾಗಾಗಿ, ನಾವೇನೂ ಭಯಪಡುವಂತಿರಲಿಲ್ಲ. ಸಾಂಗವಾಗಿ ಉದ್ಘಾಟನಾ ಭಾಷಣಗಳು ನಡೆದವು. ನಾನು ಅದನ್ನು ರೆಕಾರ್ಡ್ ಕೂಡಾ ಮಾಡಿಕೊಂಡೆ. ಅದಾದಮೇಲೆ ಚಹಾವಿರಾಮವಿತ್ತು. ಮತ್ತೆ ಭಾಷಣಗಳು. ನಂತರ ಊಟ. ಪೊಗದಸ್ತಾಗಿತ್ತು. ಚೆನ್ನೈ ನ ಸಾಂಬಾರ್ ಮಾತ್ರ ಅದ್ಭುತವಾಗಿತ್ತು. ಅವತ್ತೊಂದು ದಿನ ಪುಣ್ಯಾತ್ಮ ಬೆಳ್ಳುಳ್ಳಿ ಹಾಕಿರಲಿಲ್ಲ. ಹಾಗಾಗಿ ಸಾಂಗವಾಗಿ ಸಾರನ್ನ ಮೊಸರನ್ನ ತಿಂದೆ. ಮಿಕ್ಕಿದ ದಿನವೆಲ್ಲ ಬರೀ ಮೊಸರನ್ನ ನೇ !!


Z : ಎಹೆಹೆಹ್ಹೆ...

ನಾನು : ಸೂರ್ಯ ಮೋಡದ ಮರೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಆದ್ದರಿಂದ ನಮಗೆ ಕೆಲವು observations ಮಾಡಲಾಗಲಿಲ್ಲ. ಈಗ ನಾನು ವಿಚಾರಿಸಿಕೊಂಡೆ ಸೂರ್ಯನ್ನ. " What is this Surya? ಬರದೇ ಬರದೇ ಕರ್ನಾಟಕದಿಂದ ಹೊರಗೆ ನಾನು ಕಾಲಿಟ್ಟಿರೋ ಈ ಶುಭ ಸಂದರ್ಭದಲ್ಲಿ ನೀನು ಹಿಂಗೆ escape ಆದ್ರೆ ಹೆಂಗೆ ? ನೀಟಾಗಿ ಮೋಡದಿಂದ ಹೊರಗೆ ಬಂದ್ರೆ ಸರಿ" ಅಂದೆ. ಪಾಪ ಸೂರ್ಯ ತಾಯಿ ಮಗಳ ಪ್ರಾರ್ಥನೆಗಳ ಮಧ್ಯ sandwich ಆಗಿಹೋದ.

Z : :) ಹೊರಗೆ ಬಂದನಾ ?

ನಾನು : ಬಂದ. ಆದರೆ ಹೆಚ್ಚು ಹೊತ್ತು ಇರಲಿಲ್ಲ :(

ಆವತ್ತು ಸಾಯಂಕಾಲ ನಾವು ರೂಮಿಗೆ ಮರಳಿದ ಮೇಲೆ ನಾನು ನಮ್ಮ ಲೆಕ್ಚರರ್ರು ಹೀಗೆ ಊರಾಚೆ ಇದ್ದರೆ ಊರು ಸುತ್ತಕ್ಕೆ ಆಗಲ್ಲ, ಹಾಗಾಗಿ ನಾವು ಬೇರೆಯ ಕಡೆಗೆ ಹೋಗುವುದು ಉಚಿತವೆಂದು ನಿರ್ಧರಿಸಿದೆವು. ನಾವು ಹಾಗೆ ಯೋಚಿಸಲು ಇದ್ದ ಮತ್ತೊಂದು ಮುಖ್ಯ ಕಾರಣ ಅಲ್ಲಿನ ವಾತಾವರಣ ನಮಗೆ ಸರಿಬರದಿದ್ದುದು. ವ್ಯವಸ್ಥಾಪಕರೊಡನೆ ಮಾತಾಡಿದಾಗ ನಮಗೆ ಬೇರೆ ಕಡೆ ಇಳಿದುಕೊಳ್ಳುವ ವ್ಯವಸ್ಥೆ ಮಾಡುವುದಾಗಿ ಅವರು ಹೇಳಿದರು. ನಾವು ಮಾರನೆಯ ದಿನ ಲಗೇಜನ್ನು ಪ್ಯಾಕ್ ಮಾಡಿ ಅಲ್ಲಿಂದ ಹೊರಟೆವು.

Z : ಹ್ಮ್ಮ್ಮ್......

ನಾನು : ಆವತ್ತಿನ ದಿನ ನಮ್ಮ ಕಾರ್ಯಾಗಾರದಲ್ಲಿ ಒಂದು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿ, ನಾನು ಇದ್ದ ತಂಡ ಮೊದಲ ಬಹುಮಾನ ಗೆದ್ದಿತು. ಸಂತೋಷದಿಂದ ಆವತ್ತಿನ ಸಾಯಂಕಾಲ ನಾವು ನಗರ ಪರ್ಯಟನೆ ಮಾಡಲು ಯೋಚಿಸಿದ್ದೆವು. ಕಾರಣಾಂತರಗಳಿಂದ ನಮ್ಮ ಅಂದಿನ ದಿನದ ಕಾರ್ಯಕಲಾಪಗಳು ಮುಗಿಯುವುದು ತಡವಾಗಿ, ನಮ್ಮ ವಸತಿ ವ್ಯವಸ್ಥೆ ಡೋಲಾಯಮಾನವಾಗಿ ಹೋಯಿತು. ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರು ತುರ್ತಾಗಿ ದಿಲ್ಲಿಗೆ ಹೋಗಬೇಕಾಯ್ತು. ಅವರು ಎಮ್.ಎಸ್ ಸ್ವಾಮಿನಾಥನ್ ಗೆಸ್ಟ್ ಹೌಸಿನಲ್ಲಿ ಇಳಿದುಕೊಂಡಿದ್ದರು. ಅದು ಐಐಟಿ ಮದ್ರಾಸಿನ ಹಿಂಭಾಗದಲ್ಲಿತ್ತು. ತಾರಲಯ ಐಐಟಿಯಿಂದ ಹತ್ತು ನಿಮಿಷ ದೂರ ಆಟೋದಲ್ಲಿ. ಅಲ್ಲಿ ನಿಮ್ಮನ್ನು ಕಳಿಸಬಹುದೇ ಅಂದರು. ನಾವು ಕಣ್ಣು ಮುಚ್ಚಿಕೊಂಡು ಒಪ್ಪಿ ಅಲ್ಲಿ ಹೋಗಿ ತಂಗಿದೆವು. ಅದು ಜೆ.ಆರ್.ಡಿ. ಟಾಟಾರವರು ಅನುದಾನಕೊಟ್ಟು, ಎಮ್.ಎಸ್ ಸ್ವಾಮಿನಾಥನ್ ಅವರ ಗೌರವಾರ್ಥ ಕಟ್ಟಿಸಿದ ಗೆಸ್ಟ್ ಹೌಸ್. ಐ ಐ ಎಸ್ ಸಿ ಲಿ ದಿನಾಗಲು ಜೆ. ಎನ್ ಟಾಟಾ ಗೆ ನಮಸ್ಕಾರ ಹೊಡಿಯುತ್ತಿದ್ದುದರ ಪರಿಣಾಮ, ಟಾಟಾರವರ ವಂಶಸ್ಥರು ಅವರು ನನ್ನ ಕೈಬಿಟ್ಟಿರಲಿಲ್ಲ.

Z : ಆಹಾ....

ನಾನು : ಹು. ಐ ಐ ಎಸ್ ಸಿ ಲೆವೆಲ್ಲಲ್ಲಿ ಇತ್ತು ಗೆಸ್ಟ್ ಹೌಸು. ಅಲ್ಲಿ ಲಗೇಜಿಟ್ಟು ಲೋಕಲ್ ಟ್ರೈನ್ ಹತ್ತಿ ಟಿ. ನಗರದಲ್ಲಿ ಇಳಿದು ಒಂದು ರೌಂಡ್ ಸುತ್ತಿದ್ದಾಯ್ತು.

Z : ಏನ್ ಏನ್ ತಗೊಂಡೆ ?

ನಾನು : ಇದು flying visit. ವೀಕ್ಷಣೆ ಮಾತ್ರ. ಅಲ್ಲಿಂದ ಮತ್ತೆ ಗಿಂಡಿ ಗೆ ವಾಪಸ್. ಸುಸ್ತಾಗಿತ್ತು. ಸಕತ್ತಾಗಿ ನಿದ್ದೆ ಬಂತು. ಬೆಳಿಗ್ಗೆ ಎದ್ದು ವಾಕಿಂಗ್ ಮಾಡಿದೆವು. ನಾನೊಂದಿಷ್ಟು ಫೋಟೋ ತೆಗೆದೆ.

Z : ಹ್ಮ್ಮ್...ಆಮೇಲೆ ?

ನಾನು : ಮೂರನೆಯ ದಿನವಾದ ಅಂದು ಸಮಾರೋಪ ಸಮಾರಂಭ ಇತ್ತು. ನಾವೆಲ್ಲ ಒಂದು ನಾಟಕ ಆಡಿದೆವು. ಗ್ರಹಣ, ವಿಜ್ಞಾನ ಮತ್ತು ಮೂಢನಂಬಿಕೆ ಮೇಲೆ.

Z : ನೀನು ಯಾವ ಪಾತ್ರ ಮಾಡಿದೆ ?

ನಾನು : ಚಂದ್ರನ ಪಾತ್ರ :)

Z : :D :D ಆಮೇಲೆ ?

ನಾನು : ಸರ್ಟಿಫಿಕೇಟು, ಟಿ.ಎ ಡಿ. ಯೆಗಳನ್ನು ಪಡೆದಾದ ಮೇಲೆ ನಾವೆಲ್ಲರೂ ಒಬ್ಬರನ್ನೊಬ್ಬರು ಬೀಳ್ಕೊಂಡು ಗಿಂಡಿ ಸ್ಟೇಷನ್ನಲ್ಲಿ ಮತ್ತೆ ಲೋಕಲ್ ಹತ್ತಿ ಟಿ. ನಗರದಲ್ಲಿ ಇಳಿದು ಜೋರಾಗಿ ಶಾಪಿಂಗ್ ಮಾಡಿದೆವು.

Z : ಲಗೇಜುಗಳು ಮರಿಹಾಕಿದವು ಹಾಗಾದ್ರೆ.

ನಾನು : ಹು. ನಾನಂತು "ನಲ್ಲಿ" ಸೀರೆ ಅಂಗಡಿಯಲ್ಲಿ ಸೀರೆಗಳನ್ನು ನೋಡುತ್ತಾ ಕಳೆದೇ ಹೋಗಿದ್ದೆ. ನಮ್ಮ ಟೀಚರ್ರು, "ಲಕ್ಷ್ಮೀ, ಹೊರಡೋಣವಾ ? ಮರೀನಾ ಬೀಚಿಗೆ ಹೋಗ್ಬೇಕು" ಅಂದಾಗ್ಲೆ ನಾನು ಈ ಲೋಕಕ್ಕೆ ವಾಪಸ್ ಬಂದಿದ್ದು.

Z : ಸೀರೆಪ್ರಿಯೆ !

ನಾನು : ಎಹೆಹೆಹ್ಹೆ :)

Z : ನಗೋದ್ ನೋಡು ! ಎಷ್ಟ್ ಸೀರೆ ತಗೊಂಡೆ ?

ನಾನು : ಎರಡೇ ಎರಡು. ಒಂದು ಅಮ್ಮಂಗೆ, ಒಂದು ನಂಗೆ.

Z : ಸಧ್ಯ. ನಾನು ಮಿನಿಮಮ್ ಐದು ಸೀರೆ ತಗೊಂಡಿರ್ತೀಯಾ ಅಂದುಕೊಂಡಿದ್ದೆ...

ನಾನು : ಮೂರು ಸೀರೆಳನ್ನ ಬೆಂಗಳೂರಿಗೆ ಬಂದ ಮೇಲೆ, "ಕಾಂಪನ್ಸೇಷನ್" ಅಂತ ತಗೊಂಡೆ.

Z : ಯಪ್ಪಾ !!!

ನಾನು : ಹು. coming back to ಕಥೆ, ಮರೀನಾ ಬೀಚು ಗಿಜಿಗಿಜಿಗುಡುತ್ತಿತ್ತು. ನನಗೆ ನೀರಿಗಿಳಿಯಲು ಮನಸ್ಸಾಗಲಿಲ್ಲ.

Z : ಸೀರೆ ಹಾಳಾಗೋಗತ್ತಲ್ಲಾ ಅಂತ ಇಳಿಲಿಲ್ಲ ಅಂತ ನಿಜ ಹೇಳು ಪರ್ವಾಗಿಲ್ಲ.

ನಾನು : ಹು. ಅದೇ ನಿಜ.

Z : ಪೆದ್ದಿ ! ಮದ್ರಾಸಿಗೆ ಹೋಗಿ ಬೀಚಿಗೆ ಇಳಿಯದಿರೆ ಎಂತಯ್ಯ ?

ನಾನು : ನನಗೆ ಮಂಗಳೂರೇ ಇಷ್ಟ.

Z : ಸರಿ.

ನಾನು : ಅದಕ್ಕೆ ಬೇರೆ ಬೀಚುಗಳಿಗೆಲ್ಲಾ ಹೋಗಲ್ಲ.

Z : ಆಯ್ತು. ಆಮೇಲೆ ?

ನಾನು : ಅಲ್ಲಿ ನನ್ನ ಸಕಲ ಆಪ್ತಮಿತ್ರವರ್ಗಕ್ಕೂ, ಕಲೀಗ್ ಗಳಿಗೂ ಕೀಚೈನುಗಳ ಶಾಪಿಂಗ್ ಆಯ್ತು. ಅಲ್ಲಿಂದ ಮೈಲಾಪುರಕ್ಕೆ ಬಂದು, ಕಾಪಾಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿಂದ ಶರವಣ ಭವನಕ್ಕೆ ದಯಮಾಡಿಸಿ, Dry fruit dosa ಲಗಾಯ್ಸಿ, ಮತ್ತೆ ಬಸ್ಸು ಹತ್ತಿ, ಗಿಂಡಿ ತಲುಪಿ, ಅಲ್ಲಿಂದ ಗೆಸ್ಟ್ ಹೌಸಿಗೆ ಆಟೋದಲ್ಲಿ ಬಂದಿಳಿದು, ಸಾಂಗವಾಗಿ ನಿದ್ದೆ ಮಾಡಿದೆವು.

Z : ಯಪ್ಪಾ...ಎಷ್ಟ್ಟು ಸುತ್ತಿದಿರಾ .....

ನಾನು : ಇನ್ನೇನ್ ಮತ್ತೆ ?ಸಿಕ್ಕಿರೋ ಚಾನ್ಸನ್ನ ಬಿಡಕ್ಕಾಗತ್ತಾ ?

Z : ಅಲ್ವಾ....ಆಮೇಲೆ ?

ನಾನು : ಮಾರನೆಯ ದಿನ ಬೆಂಗಳೂರಿಗೆ ಹೊರಡಲನುವಾದೆವು. ಕೊಯಂಬೀಡಿನ ಬಸ್ ಸ್ಟೇಷನ್ನಿಗೆ ಬಂದು ಐರಾವತವನ್ನು ಹತ್ತುಗ್ ಘಂಟೆಗೆ ಹತ್ತಿದ್ದಕ್ಕೆ ಬೆಂಗಳೂರು ತಲುಪಿದ್ದು ನಾಲ್ಕಕ್ಕೆ. ಅಲ್ಲಿ ಅಮ್ಮ, ಅಣ್ಣ ನನ್ನ ರಿಸೀವ್ ಮಾಡಲು ಬಂದಿದ್ದರು. ಲಗೇಜು ಹೆಚ್ಚು ಮರಿಹಾಕಿರಲಿಲ್ಲ ಆದ್ದರಿಂದ ಅಪ್ಪ ಅಮ್ಮನ ಕೆಂಗಣ್ಣಿನಿಂದ ಬಚಾವಾದೆ.

Z : ಜಾಣೆ.

ನಾನು : ಹು. ಒಟ್ಟಿನಲ್ಲಿ ಚೆನ್ನಾಗಿತ್ತು ರಾಜಧಾನಿ ಜಲೇಬಿ.

Z : :) ಅಲ್ಲಿ ನಿನಗೆ ಮರಿಯಕ್ಕೆ ಆಗದ ಪ್ರಸಂಗ ಯಾವುದು ?

ನಾನು : ತಮಿಳು ಮಾತಾಡುತ್ತಿದ್ದ ಆಟೋ ಡ್ರೈವರ್ ನ ಜೊತೆಗೆ ಹಿಂದಿಯಲ್ಲಿ ಜಗಳ ಆಡಿದ್ದು !

Z : ಶಿವನೇ ಸದ್ಯೋಜಾತ !!!!

ನಾನು : :) :) :) :)

ಫೋಟೋಸ್ ಇಲ್ಲಿ...




Wednesday, February 17, 2010

ಬ್ಲಾಗ್ ಲೋಕದಲ್ಲೂ invigilation duty !

Z : ಅಯ್ಯೋ ಪಾಪ. ಹೀಗ್ ಆಗ್ಬಾರ್ದಿತ್ತು ನೋಡು.

ನಾನು : ವಿಷಯ ಪೂರ್ತಿ ಗೊತ್ತಾದ್ರೆ ನೀನು ಹಾವಿನ ಥರ ಬುಸುಗುಡ್ತಿಯಾ.

Z : ಇಲ್ಲಪ್ಪ....I have decided not to lose my cool. ಪ್ರಾಣಾಯಾಮ ಮಾಡ್ತಿನಿ ಕೋಪ ಬಂದ್ರೆ.

ನಾನು : ಹ್ಮ್ಮ್.....ಒಳ್ಳೆದು.

Z : ವಿಷಯವನ್ನು ಪೇಳುವಂಥವಳಾಗು ಬಾಲೆ !

ನಾನು : ವಿಕಾಸ್ ಹೆಗ್ಡೆ...

Z : ಅದೇ ಮ್ಯುಸಿಯಮ್ ಕಥೆಯಲ್ಲಿ ಬರ್ತಾರಲ್ಲ...

ನಾನು : ಅದೇ...ಅದೇ ವಿಕಾಸ ಹೆಗಡೆ. ಎಂಥಾ ಲೆವೆಲ್ಲಲ್ಲಿ ಕಾಪಿ ಹೊಡೆದಿದ್ದಾರೆ ಅಂದ್ರೆ ನಮ್ಮಿಬ್ಬರ ಮಾತಿನ ಶೈಲಿ ನ....

Z : ಪ್ರಾಣಾಯಾಮ ಮಾಡ್ತಿನಿ ಇರು.

[ಐದು ನಿಮಿಷಗಳ ನಂತರ]

ಏನ್ ಮಾಡಿದಾರೆ ?

ನಾನು : ನೋಡು, ಅವರು ವಿಶ್ವೇಶ್ವರಯ್ಯ ಮ್ಯೂಸಿಯಮ್ ಗೆ ಹೋಗಿದ್ರು ಅಂತ ನಾನು ಹೋಗಿದ್ನಾ...ನಾನು ಎಚ್. ಎ. ಎಲ್ ಮ್ಯೂಸಿಯಮ್ ಗೆ ಹೋಗಿದ್ದೆ ಅಂತ ಅವ್ರೂ ಹೋಗಿದಾರೆ.

Z : ಈ ಲೆವೆಲ್ಲಲ್ಲಿ ಕಾಪಿ ! ಸದ್ಯೋಜಾತ !

ನಾನು : ಹೂಂ !!! ಆದ್ರೆ ಒಂದು ವಿಷಯ ನ ಕಾಪಿ ಮಾಡಿಲ್ಲ ಅವರು.

Z : ಏನು ?

ನಾನು : ನಾನು ಒಬ್ಬಳೇ ಹೋಗಿದ್ದೆ ಮ್ಯೂಸಿಯಮ್ ಗೆ, ಅವರು ಯಾರನ್ನೋ ಜೊತೆಗೆ ಕರ್ಕೊಂಡ್ ಹೋಗಿದಾರೆ.

Z : ನಿನ್ನ ಥರ ಒಬ್ಬಳೇ ಊರು ಸುತ್ತೋ talent ನ ಜಾಸ್ತಿ ಜನ maintain ಮಾಡಿಕೊಂಡಿರಲ್ಲ ತಿಳ್ಕೋ ಪ್ರಪಂಚದಲ್ಲಿ. ಹಾಗಾಗಿ ಯಾರು ಎಷ್ಟೇ ತಿಪ್ಪರ್ಲಾಗ ಹೊಡೆದರೂ, ನಿನ್ನ ಥರ ಒಬ್ಬಳೇ ಊರು ಸುತ್ತೋ ರೀತಿನ ಜಪ್ಪಯ್ಯ ಅಂದ್ರೂ ಕಾಪಿ ಹೊಡಿಯಕ್ಕೆ ಆಗಲ್ಲ.

ನಾನು : ನೋಡು, ಕಾಲೇಜಲ್ಲಿ students ಕಾಪಿ ಹೊಡಿಯದಿರಲಿ ಅಂತ invigilators ಆಗಿರ್ತಿವಿ ನಾವು...ಈಗ ಬ್ಲಾಗ್ ಲೋಕಕ್ಕೂ invigilators ಬೇಕಾಗಿದ್ದಾರೆ !

Z : ಕಾಲಾಯ ತಸ್ಮೈ ನಮಃ. ನಾವು ನಮ್ಮ ಶೈಲಿಯನ್ನು copyright ಮಾಡಿಕೊಳ್ಳೋದು ಉತ್ತಮ.

ನಾನು : ಯೆಸ್.ನಮ್ಮ ಶೈಲಿಯನ್ನ ಬಳಸಿಕೊಳ್ಳುವವರು ಮೊದಲು ನಮ್ಮ ಅನುಮತಿ ಕೇಳಲಿ. ವಿಕಾಸ್ ಹೆಗಡೆಯವರು, ಬರ್ಯೋದೆಲ್ಲ ಬರ್ದು, ಕೃಪೆ ಅಂತೆಲ್ಲ ಮೇಲೆ ಹತ್ತಿಸೋ ಮೊದಲೇ, ನನಗೆ ತಿಳಿಸಿದ್ದರು. " ನೀವು ಆದರ್ಶ " ಅಂತ ಬೇರೆ ಅಂದ್ರು. ನಾನು ಅದಕ್ಕೆ "wrong number ರಿ Vikas hegde, ನನ್ನ ಹೆಸರು ಲಕ್ಷ್ಮೀ ಅಂತ. ಆದರ್ಶ ಅಂತೆಲ್ಲ ಹೆಸರು ಚೇಂಜ್ ಮಾಡಬೇಡಿ. ಇರೋ ಒಂದು ಹೆಸರನ್ನ ನೆನಪಿಟ್ಟುಕೊಳ್ಳೋದಕ್ಕೆ ತಿಪ್ಪರ್ಲಾಗ ಹೊಡಿತಿದಿನಿ, ಸಿಕ್ಕಾಪಟ್ಟೆ ಹೆಸರುಗಳೆಲ್ಲಾ ಕೊಟ್ಟು confuse ಮಾಡಬೇಡಿ. ಅದಿರ್ಲಿ, ನಾವೇನು ನಿಮ್ಮ ಥರ mainstream writers ಅಲ್ಲ, ಸುಮ್ನೆ ಮಾತಾಡೋರು, ಹುಲುಮಾನವರು. ನಮಗೆಲ್ಲಾ ಮಹಾಬ್ರಾಹ್ಮಣ್ಯ ಇಲ್ಲ, ಮಹಾ ದರ್ಶನ ಇನ್ನೂ ಆಗಿಲ್ಲ, ಹಾಗಾಗಿ ಸುಮ್ಮನೆ ನಮ್ಮನ್ನ ಅಷ್ಟೆಲ್ಲಾ ಮೇಲೆ ಏರಿಸಬೇಡಿ "ಅಂದೆ.

Z : ಸರಿಯಾಗಿ ಹೇಳಿದಿ. ಅದಕ್ಕೆ ಅವರೇನಂದ್ರು ?

ನಾನು : ಸಿಕ್ಕಾಪಟ್ಟೆ ದೊಡ್ಡ್ ಮಾತು ಅಂದ್ರು.

Z : ಮಾತಿನ length measure ಮಾಡಿರ್ತಾರೆ. ಎಷ್ಟೇ ಆಗಲಿ ಎಂಜಿನಿಯರ್ರು...

ನಾನು : weight ಕೂಡಾ ಇದೆ ಮಾತಿಗೆ.

Z : ತಕ್ಕಡಿ ಇರ್ಲಿಲ್ಲ ಆಗ ಅಂತ ಕಾಣತ್ತೆ. ಈಗ ತೂಕ ಮಾಡ್ತರೆ ಬಿಡು. next time ಕಾಪಿ ಎಲ್ಲ ಹೊಡಿಯಲ್ಲ. By the way, ನೀನು ಎಚ್. ಎ. ಎಲ್ ಮ್ಯೂಸಿಯಮ್ ಗೆ ಹೋಗಿದ್ದ ಕಥೆ ಲೋಕಕ್ಕೆಲ್ಲಾ ಗೊತ್ತಿದೆ. ನನಗೇ ಗೊತ್ತಿಲ್ಲ !

ನಾನು : ಏನು ಮಾಡಕಾಗಲ್ಲ. ಹೀಗೆಲ್ಲ ಆಗತ್ತೆ ಒಮ್ಮೊಮ್ಮೆ life-ನಲ್ಲಿ.

Z : ಇವೆಲ್ಲ ಫಿಲಾಸಫಿ ಬೇಡ. ಯಾಕ್ ಹೋಗಿದ್ದೆ ಅಲ್ಲಿ ಅಂತ ನೀಟಾಗಿ ಹೇಳ್ಬಿಡು.

ನಾನು : ನಾನು Fever 104 Fm ನಡೆಸಿದ ಒಂದು ಕಾಂಟೆಸ್ಟ್ ನಲ್ಲಿ ಅಪ್ಪಿ ತಪ್ಪಿ ಗೆದ್ಬಿಟ್ಟೆ.

Z : ಅಹಾ?!

ನಾನು : ಹು.ನನಗೇ ಗೊತ್ತಿರ್ಲಿಲ್ಲ.ಅವರು ಫೋನ್ ಮಾಡಿದ್ ಮೇಲೆ ನೆ ಗೊತ್ತಾಗಿದ್ದು.

Z : ಇರ್ಲಿ, ಹೀಗಾಗತ್ತೆ ಒಮ್ಮೊಮ್ಮೆ ಲೈಫಲ್ಲಿ. ಮುಂದೆ ?

ನಾನು : ಅವರ ಆಫೀಸ್ ಇರೋದು ಈ ಎಚ್.ಎ.ಎಲ್ ಮ್ಯೂಸಿಯಮ್ ಪಕ್ಕ. ನಾನು ಒಂದು ದಿನ ಪೂರ್ತಿ ರಿಂಗ್ ರೋಡಲ್ಲೇ ಇದ್ದೆ ಈ ಪ್ರೈಜ್ ತರಕ್ಕೆ ಹೋಗಿ.

Z : ಹಾ ?

ನಾನು : ಹು. ನಮ್ಮನೆಯಿಂದ ಮಾರತ್ ಹಳ್ಳಿ ಗೆ ಎರಡು ಘಂಟೆಗಳ ಕಾಲ ಪ್ರಯಾಣ. ಅಲ್ಲಿಂದ ಎಚ್. ಎ. ಎಲ್ ಕಾಲು ಘಂಟೆ. ಅಲ್ಲಿಂದ fever 104 office ಹತ್ತು ನಿಮಿಷ, ರೇಡಿಯೋ ಆಫೀಸಲ್ಲಿ ಒಂದು ನಿಮಿಷ, ಅಲ್ಲಿಂದ ಹೊರಗೆ ಬಂದ ಮೇಲೆ ಇದು ಕಣ್ಣಿಗೆ ಬಿತ್ತು.

Z : ನೀನು ಗೂಳಿ ಥರ ನುಗ್ಗಿದೆ.

ನಾನು : ಇಲ್ಲಪ್ಪಾ...ನನ್ನ ಕಾಲು involuntary ಆಗಿ ಟಿಕೆಟ್ ಕೌಂಟರ್ ಬಳಿ ನಿಂತುಕೊಂಡಿತು. ನನ್ನ ಫೋನಿನ ಕ್ಯಾಮೆರಾ ತೋರಿಸಿ ಅದಕ್ಕೂ ಸೇರಿಸಿ ದುಡ್ಡುಕೊಟ್ಟು ಒಳನಡೆದೆ.

Z : ಸುಮ್ಮನಿದ್ದಿದ್ರೆ ದುಡ್ಡು ಉಳಿತಿತ್ತು. ಹನಿ ಹನಿಗೂಡಿದರೆ ಹಳ್ಳ.

ನಾನು : ನಿನ್ನ ತಲೆ. ನಾನು ಗಾಂಧಿ ಬಜಾರಿನಲ್ಲಿ ಸುಮ್ಮನೆ ವಾಕಿಂಗ್ ಅಂತ ಹೋದರೆ ಪಾನಿ ಪುರಿಗೇ ನೂರು ರುಪಾಯಿ ಮುಖ ಮುಲಾಜಿಲ್ಲದೇ ಖರ್ಚಾಗತ್ತೆ. ಅಂಥಾದ್ರಲ್ಲಿ ನಾನು ಇಲ್ಲಿ ಹತ್ತು ರುಪಾಯಿ ಉಳಿಸಿ ಯಾವ ಸಾಮ್ರಾಜ್ಯ ಕಟ್ಟಬೇಕು ಹೇಳು ? ಅದೂ ಅಲ್ಲದೇ, ನನಗೆ ಫೋಟೋ ತೆಗೆಯಬೇಕು ಅನ್ನೋ ಆಸೆ ನ ರೆಸಿಸ್ಟ್ ಮಾಡ್ಕೊಳ್ಳೋ ಅಷ್ಟು ನಿಗ್ರಹ ಬಂದಿಲ್ಲ :) ಸುಮ್ಮನೆ Penny wise pound foolish ಆಗಿರ್ಬಾರ್ದು ಅಂತ, ನೀಟಾಗಿ ದುಡ್ಡು ಕೊಟ್ಟು ನಡೆದೆ.

Z : ಹಾಗೆ. ಮುಂದೆ ?

ನಾನು : ಕಳೆದೋದೆ.

Z : ಹಾಂ?!

ನಾನು : ಅಂದ್ರೆ...ಮ್ಯೂಸಿಯಮ್ ನೋಡ್ತಾ ಕಳೆದು ಹೋದೆ ಅಂತ. ಅಣ್ಣಂಗೆ ಪೈಲಟ್ ಆಗ್ಬೇಕು ಅಂತ ಆಸೆ ಇತ್ತು. ತಾತ ಬಿಲ್ಕುಲ್ ಉಹು ಅಂದ್ಬಿಟ್ರು.ನನಗೂ ಅದೇ ಆಸೆ ಇತ್ತು, ಆದ್ರೆ ಕಣ್ಣಿಗೆ spectacles ಬಂದು....

Z : ಹೋಗ್ಲಿ ಬಿಡು....ಕಥೆ ಮುಂದ್ವರ್ಸು.

ನಾನು : ಎಚ್. ಎ. ಎಲ್ ಉಗಮದಿಂದ ಹಿಡಿದು ಈಗಿನ ವರೆಗೂ ಅದು ಸಾಗಿ ಬಂದ ಹಾದಿ ನೋಡಿ ಹೆಮ್ಮೆ ಅನಿಸಿತು ನಂಗೆ ನಮ್ಮ ದೇಶದ ಬಗ್ಗೆ.

Z : :) ಆಮೇಲೆ ?

ನಾನು : ಅವೆಲ್ಲಾ ಹೇಳಕ್ಕಾಗಲ್ಲ, ಪ್ರತಿಯೊಂದು ವಿಮಾನದ ಮಾದರಿ ಮುಂದೆ ನಿಂತುಕೋಬೇಕು, ಅದರ ಒಳಗೆ ಕೂರಬೇಕು, ಆನಂದ ನ ಅನುಭವಿಸಬೇಕು.

Z : ಹಂಗಂತಿಯಾ ?

ನಾನು : ಇನ್ನೇನ್ ಮತ್ತೆ. That museum is indeed a glorious heritage. ಅಲ್ಲೇ ಮೂರು ಘಂಟೆ ಕಾಲ ಆಯ್ತು. ಅಲ್ಲಿನ ಕ್ಯಾಂಟೀನಿನಲ್ಲಿ ಹೋಪ್ಲೆಸ್ಸಾತೀತವಾದ ಕಾಫಿಯನ್ನ ಗಟಗಟನೆ ಕುಡಿದು, ಹೊರಗೆ ಬಂದೆ.

Z : ನೀನು...ನೀನು ಕಾಫಿನ ಗಟ ಗಟ ಅಂತ ಕುಡಿದೆ ಅಂದರೆ ಅದು ಹೇಗಿದೆ ಅನ್ನೋದನ್ನ ಊಹಿಸಬಹುದು.

ನಾನು : ಯು ಆರ್ ರೈಟ್. ಅಲ್ಲಿಂದ ಬಸ್ ಹತ್ತಿ, ಊರೆಲ್ಲಾ ಸುತ್ತಿ ಮೆಜೆಸ್ಟಿಕ್ ಗೆ ಬಂದೆ.

Z : ಯಾಕೆ ?

ನಾನು : ಪ್ಲಾನೆಟೇರಿಯಂ ನಲ್ಲಿ ಕೆಲಸ ಇತ್ತಮ್ಮಾ....ಇದು ನಾನು ಪ್ಲಾನೆಟೇರಿಯಮ್ ನಲ್ಲಿ ಕೆಲಸ ಮಾಡುತ್ತಿದ್ದ ಕಾಲದ ಕಥೆ.

Z : ಓಹ್ಹೊ....

ನಾನು : ಆಹಾ.....ಟೈಂ ನೋಡಿದರೆ ಐದು ಘಂಟೆ ಆಗೋಗಿತ್ತು. ಪ್ಲಾನಿಟೇರಿಯಂ ಕ್ಲೋಸ್ ಆಗೋಗಿರತ್ತೆ. ನಾನು ಅಲ್ಲಿ ಆವತ್ತು ಹೋಗದಿದ್ದರೂ ನಡಿತಿತ್ತು ಅಂತ ಗೊತ್ತಿತ್ತು.ಆದರೂ ಹೋಗಿ, ಸಾಂಗವಾಗಿ ಲೈಬ್ರರಿಯಲ್ಲಿ ಕೂತು ಓದೋಣ ಅಂದುಕೊಂಡಿದ್ದೆ. ಆಗ್ಲಿಲ್ಲ. ಮನೆಗೆ ಬರಲು ಬಸ್ಸು ಹತ್ತಿದೆ. ಬೆಳಿಗ್ಗೆ ಹತ್ತಕ್ಕೆ ಮನೆ ಬಿಟ್ಟವಳು ಮನೆಗೆ ಬಂದಾಗ ಆರುವರೆ. ಅಮ್ಮ "ಊಟ ?" ಅಂದ್ರು. ನಾನು, " thanks ಮಾ ನೆನಪಿಸಿದಕ್ಕೆ, ನನಗೆ ಮರ್ತೇ ಹೋಗಿತ್ತು ! "ಅಂದೆ.

Z : ತಲೆ ಮೇಲೆ ಕುಟ್ಟಿರ್ತಾರೆ ಅಮ್ಮ.

ನಾನು : ಇಲ್ಲ, ಪ್ರಯೋಜನ ಇಲ್ಲ ಅಂತ ಗೊತ್ತಿದೆ ಅವರಿಗೆ. ಹಾಗಾಗಿ, ಅವರೇ ಊಟ ಕಲಿಸಿಕೊಂಡು ಬಂದು ತಟ್ಟೆ ಕೈಯಲ್ಲಿಟ್ಟರು. ನಾನು ತಿಂದು, ಏಳು ಕಾಲಿಗೆಲ್ಲ ಪವಡಿಸಿಬಿಟ್ಟೆ.

Z : ಆಹಾ...ಅದಿರ್ಲಿ, ಪ್ರೈಜ್ ಏನ್ ಬಂತು ?

ನಾನು : ಯಾವ್ದೋ ಬ್ಯೂಟಿ ಸಲೂನ್ ನಲ್ಲಿ ಹರ್ಬಲ್ ಬ್ಯೂಟಿ ಟ್ರೀಟ್ಮೆಂಟ್ ಗೆ ಎರಡು ಸಾವಿರ ರುಪಾಯಿಗೆ ವೋಚರ್ರು ! ಅಮ್ಮ ಖಡಾ ಖಂಡಿತವಾಗಿ ಹೇಳಿಬಿಟ್ಟರು-"ನೋಡು, ಇದೆಲ್ಲಾ ಮಾಡಿಸ್ಕೊಂಡ್ರೆ ಹಾಳಾಗ್ ಹೋಗತ್ತೆ ಸ್ಕಿನ್ನು. ಸುಮ್ನೆ ಇದ್ಬಿಡು. " ನಾನು ಆಸೆ ತಾಳಲಾಗದೆ ಆ ಬ್ಯೂಟಿ ಸಲೂನ್ ಗೆ ಹೋದೆ ಇನ್ನೊಂದು ದಿನ. ಸುಮ್ನೆ ಎಲ್ಲಾ ಟ್ರೀಟ್ಮೆಂಟ್ ನ ರೇಟ್ಸ್ ಕೇಳ್ದೆ. ಐದು ಸಾವಿರಕ್ಕಿಂತ ಕಡಿಮೆ ಒಂದೂ ಇರಲಿಲ್ಲ. ಒಂದು ಟ್ರೀಟ್ಮೆಂಟ್ ಇತ್ತು ಎರಡು ಸಾವಿರಕ್ಕೆ, ಆದರೆ ನನಗೆ ಮಾಡಿಸಿಕೊಳ್ಳೋ ಆಸೆ ಆಗ್ಲಿಲ್ಲ. ಸರಿ ಅಲ್ಲಿಂದ ನನ್ನ ಸ್ನೇಹಿತೆ ಆಫೀಸ್ ಗೆ ಹೋಗಿ, ಅವಳಿಗೆ ಈ ಪ್ರೈಜ್ ಕಥೆ ಹೇಳಿದೆ. ಅವಳಂದ್ಲು-" ಕೊಡು, ನಾನೆ ಯಾರಿಗಾದರೂ ದಾಟಿಸ್ತಿನಿ ಇದನ್ನ" ಅಂತ. ನಾನು ವೋಚರ್ ನ ಅವಳಿಗೆ ಕೊಟ್ಟು ವಾಪಸ್ ಬಂದೆ. ಇಷ್ಟು ಕಥೆ.

Z : ಆಹಾ....ಇವತ್ತು ಮುಹೂರ್ತ ಇದನ್ನ ನನಗೆ ಹೇಳಕ್ಕೆ. ಅಲ್ವಾ ?

ನಾನು : ಹು. ಇನ್ನೂ ಸಿಕ್ಕಾಪಟ್ಟೆ ಕಥೆಗಳಿವೆ ಹೇಳೋಕೆ. ಸಧ್ಯಕ್ಕೆ ಟೈಂ ಸಿಕ್ತಿಲ್ಲ. ನಿಧಾನಕ್ಕೆ ಹೇಳ್ತಿನಿ ಒಂದು ದಿನ. ಅಲ್ಲವರ್ಗು...

Line on hold.

ಫೋಟೋಸ್ ನೋಡ್ಬಿಡು. ಆಮೇಲೆ ಮತ್ತೆ ಗೋಳಾಡ್ಬೇಡ ನಾನು ಸ್ಲೈಡ್ ಶೋ ಹಾಕಿಲ್ಲ ಅಂತ.

Friday, January 1, 2010

ಎರಡು ವರ್ಷ ಆಗೋಯ್ತು !

ಡಿಸೆಂಬರ್ ಮೂವತ್ತೊಂದು ೨೦೦೭ ರಾತ್ರಿ ಸುಮಾರು ಇದೇ ಹೊತ್ತು. ನಾವೇಕೆ ಹೀಗೆ ಬ್ಲಾಗ್ ನಲ್ಲಿ ನಾನು ಹೊಸವರ್ಷದ ಆಗಮನ ಎಂಬ ಲೇಖನವನ್ನು ಬರೆಯುತ್ತಿದ್ದೆ. ಜೊತೆಜೊತೆಗೇ ಬ್ಲಾಗಿಗರೊಡನೆ ಯಾಹೂನಲ್ಲಿ ಕಾನ್ಫರೆನ್ಸು. ನಾನು ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟು ಕೇವಲ ಎರಡು ವರೆ ತಿಂಗಳಾಗಿದ್ದವು ಅಷ್ಟೇ. ಎಲ್ಲರ ಬ್ಲಾಗುಗಳನ್ನುಸ್ಥೂಲವಾಗಿ ಅವಲೋಕಿಸುತ್ತಿದ್ದೆ. ಆಗ ಅದೇನೋಪಾ, ನನಗೆ ಒಂದು ವಿಚಿತ್ರ ಭಾವನೆ ಕಾಡತೊಡಗಿತು. ಎಲ್ಲರೂ ಬ್ಲಾಗನ್ನು ಭಾವನೆಗಳ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಬಿಂಬಿಸಿದ್ದರು. ನಾನು ಅದುವರೆಗೂ ತಲೆಗೆ ಮಾತ್ರ ಕೆಲಸ ಕೊಟ್ಟಿದ್ದೆ. ಭಾವನೆಗಳ ಬಗ್ಗೆ ಯೋಚನೆ ಮಾಡಿರಲಿಲ್ಲ. ನಾವೇಕೆ ಹೀಗೆಯಲ್ಲಿ ಭಾವನೆಗಳ ಬಗ್ಗೆ ಬರೆಯಲು ಅದ್ಯಾಕೋ ಸರಿಬರಲಿಲ್ಲ. ಭಾವನೆಗಳನ್ನು ಹೇಗೆಲ್ಲಾ ವ್ಯಕ್ತಪಡಿಸಬಹುದು ಎಂದು ಯೋಚನೆ ಮಾಡಿದೆ. ಆಗಲೇ ನನ್ನ ಮೊಬೈಲ್ ಫೋನು ರಿಂಗಣಿಸಿ - ಹ್ಯಾಪಿ ನ್ಯೂ ಇಯರ್ ಮೆಸೇಜ್ ಒಂದನ್ನು ತಂದಿಟ್ಟಿತು. ಆಗಲೇ ನನಗನ್ನಿಸಿದ್ದು, ಭಾವನೆಯನ್ನ ಒಬ್ಬ ವ್ಯಕ್ತಿಯಂತೆ ಪರಿಗಣಿಸಿ, ಭಾವನೆಗಳೊಟ್ಟಿಗೆ ಫೋನ್ ನಲ್ಲಿ ಮಾತಾಡಿದರೆ ಹೇಗೆ ? ರೂಪ ತದ್ರೂಪು ನನ್ನದೇ, ಆದರೆ ಗುಣದಲ್ಲಿ ನನಗಿಂತಾ ಸಂಪೂರ್ಣ ಭಿನ್ನ.ನನಗೆ ನಿಜವಾಗಿಯೂ ಏನನ್ನಿಸತ್ತೆ, ನಾನು ಭಾವಜೀವಿಯಾಗಿರಬಲ್ಲೆನೆ ? ಅಂತ ಫೋನ್ ನಲ್ಲಿ ನನಗೇ ಗೊತ್ತಾದರೆ ಹೇಗಿರತ್ತೆ?! ಒಂದೇ situation ಗೆ ನಾನು ಯಾವ್ಯಾವ ರೀತಿಯಲ್ಲಿ ಪ್ರತಿಕ್ರಯಿಸಬಲ್ಲೆ ? ನನ್ನ ವಿಸ್ತೃತ ರೂಪಕ್ಕೆ ಬ್ಲಾಗಿನಲ್ಲಿ ಏಕೆ ಅವಕಾಶ ಕಲ್ಪಿಸಬಾರದು ಅನಿಸಿತು.ಇದ್ದಿದ್ದರಲ್ಲಿ ಇದು ಒಂದು ಬ್ಲಾಗಿರಲಿ, ಯಾರಿಗೂ ಹೇಳೋಣು ಬ್ಯಾಡ ಅಂತ ಬ್ಲಾಗ್ ಒಂದನ್ನು ರೆಜಿಸ್ಟರ್ ಮಾಡಲು ಹೊರಟೆ. ತಾಪತ್ರಯ ಶುರುವಾಗಿದ್ದು ಅಲ್ಲಿಯೇ. ಹೆಸರೇನಿಡೋದು ?! ಮೂರು ಚುಕ್ಕಿ...ಉಹು. ಮನಸ್ಸು...not available. ಮಾನಸ-Already registered.ಹುಚ್ಚು ಮನಸ್ಸು...ಉಹು ! ಕನ್ನಡದಲ್ಲಿ ಬ್ಲಾಗ್ ಮಾಡಲು ಕನ್ನಡದಲ್ಲೇ ಪದಗಳು ಸಿಗಲಿಲ್ಲ :(

ನೀವ್ಯಾರು ನನ್ನ ಬೈಯಲ್ಲ ಅಂತ ಭಾಷೆ ಕೊಟ್ಟರೆ ಮಾತ್ರ ನಾನು ನಿಜ ಹೇಳ್ತಿನಿ. ನನ್ನ ಅತ್ಯಂತ ಪ್ರಿಯವಾದ ಭಾಷೆಗಳಲ್ಲಿ ಪ್ರಥಮ ಸ್ಥಾನ ಕನ್ನಡಕ್ಕೆ ಲಭಿಸಿದರೆ, ಎರಡನೆಯದು ಹಿಂದಿಗೆ ! ನಾನು ಹಿಂದಿಯನ್ನು ಎಷ್ಟು ಇಷ್ಟ ಪಡುತ್ತೇನೆಂದರೆ ನಾನು ಖಾಸಗಿ ಡೈರಿಯನ್ನು ಕೂಡಾ ಹಿಂದಿಯಲ್ಲೇ ಬರೆಯುತ್ತಿದ್ದೆ !ಹಾಗಾಗಿ ನಾನು ನನ್ನ ಈ ಹೊಸ ಬ್ಲಾಗಿನ ಹೆಸರಿಗೆ ಮೊದಲನೆಯ ಪದವನ್ನು ಹಿಂದಿಯಲ್ಲಿ ಇಟ್ಟೆ. ಮೊಬೈಲ್ ಫೋನಿನ concept ಇತ್ತು ಆದ್ದರಿಂದ ಎರಡನೆಯ ಪದ ಆಂಗ್ಲದಲ್ಲೇ ಇರಬೇಕಾಗಿತ್ತು. ನಾನು ಫೋನ್ ಮಾಡುವಂತಿದ್ದಿದ್ದರೆ ಚೆನ್ನಾಗಿರ್ತಿತ್ತೇನೊ, ಆದರೆ ನಾವಿವುರುದೇ ಜೀವನದ ಮರ್ಜಿಯಲ್ಲಲ್ಲವೇ ? ಇಷ್ಟೆಲ್ಲಾ ಆಧ್ಯಾತ್ಮ ಯಾಕೆ ಹೊಳೆಯಿತೋ ಗೊತ್ತಿಲ್ಲ, ಇದು ಜೀವನವೇ ಫೋನ್ ಮಾಡಿ ಅದೇ ಕಟ್ ಮಾಡಬೇಕಾದ call ಅನ್ನಿಸಿ ಇದಕ್ಕೆ ज़िंदगी Calling ಅಂತ ಹೆಸರಿಟ್ಟೆ. ಮಾತಿಲ್ಲದೇ ಬ್ಲಾಗರ್ ಈ ಬ್ಲಾಗನ್ನು ರಿಜಿಸ್ಟರ್ ಮಾಡಿಕೊಂಡಿತು.

ನಾನು ಮಾತನ್ನು ಆರಂಭಿಸಬೇಕಿತ್ತು. ನನಗೆ ಮಾತಾಡಲು ಸಾಮಾನ್ಯವಾಗಿ ಕಷ್ಟ ಆಗಲ್ಲ, ಆದ್ರೆ ನನ್ನೊಟ್ಟಿಗೇ ನಾನೆಂದೂ ಮಾತಾಡಿರಲಿಲ್ಲ ! ಹಾಗೂ ಹೀಗೂ ಒಂದು ಪೋಸ್ಟ್ ಬರೆದೆ. ಪೋಸ್ಟನ್ನು ಪಬ್ಲಿಷ್ ಕೂಡಾ ಮಾಡಿಬಿಟ್ಟೆ.

ಕಾನ್ಫರೆನ್ಸಲ್ಲಿ ಬರಿ "ಹು, ಸರಿ, ಆಯ್ತು" ಮತ್ತು ಸ್ಮೈಲಿಗಳನ್ನು ಮಾತ್ರ ಹಾಕುತ್ತಿದ್ದೆ. ಗುರುಸ್ವರೂಪ ಅರುಣರಿಗೆ ಮೊದಲು ಪಿಂಗಿ " ಗುರುಗಳೇ-ಇದು ನನ್ನ ಹೊಸಾ ಬ್ಲಾಗು. ನೋಡಿ. ಚೆನ್ನಾಗಿಲ್ಲ ಅಂದ್ರೆ ಡಿಲೀಟ್ ಮಾಡಿಬಿಡುತ್ತೇನೆ ಈಗಲೇ !" ಅಂದೆ. ಬ್ಲಾಗ್ ಓದಿ ಗುರುಗಳು-"ಈ ಬ್ಲಾಗ್ ನ ಡಿಲೀಟ್ ಮಾಡಿದ್ರೆ, ನನ್ನ ಹತ್ತಿರ ಮಾತಾಡ್ಬೇಡ ನೀನು !" ಎಂದುಬಿಟ್ಟರು. ನನಗಿದು ಹೊಗಳಿಕೆಯೋ ಬೈಗುಳವೋ, ಆಜ್ಞೆಯೋ ಆಗ ಗೊತ್ತಾಗಲಿಲ್ಲ.ಪಟಾಕಿ ಶಬ್ದದ ನಡುವೆ ಹೊಸವರ್ಷ ಬಂದಾಗಿತ್ತು, ಜೊತೆಗೆ ನನ್ನ ಹೊಸ ಬ್ಲಾಗೂ !

ಸಿಕ್ಕಾಪಟ್ಟೆ ಭಯದಿಂದ ಮಿಕ್ಕೆಲ್ಲಾ ಯಾಹೂ ಮಿತ್ರರಿಗೆ ಲಿಂಕಿಸಿದೆ. ಕಾನ್ಫರೆನ್ಸಲ್ಲಿ ಚಪ್ಪಾಳೆಗಳ ಸುರಿಮಳೆಯಾದವು. ಆಗ ಗುರುಗಳ ಮಾತು ಅರ್ಥ ಆಯ್ತು ನಂಗೆ ! ಸಧ್ಯ ಇದು ಡಿಲೀಟನೀಯ ಬ್ಲಾಗಲ್ಲಪ್ಪಾ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟು ಅಂದಿನಿಂದ ಮಾತಡಲು ಶುರು ಮಾಡಿದ Z ಇಂದಿಗೂ ಮಾತಾಡುತ್ತಿದ್ದಾಳೆ. ಎರಡು ವರ್ಷ ಇದನ್ನ ಕೇಳಿಸಿಕೊಂಡು ನಿಮ್ಮ ಕಿವಿಗಳು ತೂತಾಗಿಲ್ಲದಿರುವುದನ್ನು ಕಂಡು head ruled ಆಶ್ಚರ್ಯ ಪಟ್ಟಿದ್ದಾಳೆ.ಯಾಕಂದರೆ listeners ಸಂಖ್ಯೆ ಇತ್ತೀಚೆಗೆ ದಿನಕ್ಕೆ ನೂರು ತಲುಪುತ್ತಿದೆ !ನಿಮ್ಮ ಪ್ರೋತ್ಸಾಹ ಕಂಡು ನಾವಿಬ್ಬರೂ ಮೂಕರಾಗಿದ್ದೇವೆ. ಹಾಗಂತ ಮಾತು ನಿಲ್ಲಿಸಿದರೆ ಎಲ್ಲರೂ ನಮ್ಮನ್ನು ಬೈಯ್ಯುತ್ತಾರೆಂಬ ಭಯದಲ್ಲಿ ನಾವು ಮೂಕರಾಗಿದ್ದೇವೆ ಎಂದು ಬಾಯ್ಬಿಟ್ಟು ಹೇಳುತ್ತಿದ್ದೇವೆ !

ಈ ನಮ್ಮ ಗುಸುಗುಸುವಿನಲ್ಲಿ ನಿಮಗೇನು ಹಿಡಿಸಿತೋ ನಮಗೆ ಖಂಡಿತಾ ಅರ್ಥವಾಗುತ್ತಿಲ್ಲ ! ದಯವಿಟ್ಟು ಅದನ್ನ ನಮ್ಮೊಟ್ಟಿಗೆ ಹಂಚಿಕೊಳ್ಳಿ . ಅದೇನೇನು ಘನಕಾರ್ಯ ಗಳನ್ನು ಸಾಧಿಸಿದ್ದೇವೆ ನಾವು ಎರಡು ವರ್ಷದಲ್ಲಿ ಅಂತ ತಾವೇ ದಯಮಾಡಿ ನಮಗೆ ತಿಳಿಸಿಕೊಡಿ.

೨೦೦೯ ನನ್ನ ನೆಚ್ಚಿನ ಗಾಯಕ ಅಶ್ವಥ್ ಮತ್ತು ನೆಚ್ಚಿನ ನಟ ವಿಷ್ಣುವರ್ಧನ್ ಅವರ ಸಾವಿನಿಂದ ಬಹಳ ದುಃಖಕರ ಅಂತ್ಯವನ್ನು ಕಂಡಿದೆ. ಹಾಲು ಬೆಳಕನೀವ ಹುಣ್ಣಿಮೆ ಚಂದ್ರನಿಗೆ ಇನ್ನೇನು ಹತ್ತು ನಿಮಿಷಕ್ಕೆ ಗ್ರಹಣ ಹಿಡಿಯಲಿದೆ. ಆದರೆ ದುಃಖ, ಗ್ರಹಣ ಎಲ್ಲವೂ ಕ್ಷಣಿಕವಷ್ಟೇ. ಮುಂಬರುವ ಬೆಳಕು ಎಲ್ಲರಿಗೂ ಶಾಂತಿ, ಸುಖ, ಸಮೃದ್ಧಿ, ನೆಮ್ಮದಿಗಳನ್ನು ತರಲಿ ಎಂದು ಆಶಿಸುತ್ತೇನೆ.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...