Tuesday, July 1, 2008

ವಿಜ್ಞಾನೋತ್ಸವ

ನಾನು : Z...ಇವತ್ತು ನಾನು ವಿಜ್ಞಾನೋತ್ಸವಕ್ಕೆ ಹೋಗಿದ್ದೆ.

Z : what ? ರಾಮೋತ್ಸವ, ಸಂಗೀತೋತ್ಸವ, ಚಲನಚಿತ್ರೋತ್ಸವ ಗೊತ್ತು...ಇದೆಂಥದ್ದು ವಿಜ್ಞಾನೋತ್ಸವ ?

ನಾನು : ಇದನ್ನೇ ಇವತ್ತು ಬೆಂಗಳೂರು ವಿಜ್ಞಾನ ವೇದಿಕೆಯ ಅಧ್ಯಕ್ಷ ಡಾ ||||ಏ. ಎಚ್. ರಾಮರಾವ್ ಹೇಳಿದ್ದು. ಬೆಂಗಳೂರು ವಿಜ್ಞಾನ ವೇದಿಕೆಯನ್ನು ಹುಟ್ಟು ಹಾಕಿದವರು ಡಾ || ಎಚ್. ನರಸಿಂಹಯ್ಯ.ಎಚ್. ಎನ್ ಅವರು ಪ್ರತಿವರ್ಷ ಸಿಟಿ ಇನ್ಸ್ಟಿಟೂಟ್ ನಡೆಸುವ ರಾಮೋತ್ಸವ attend ಮಾಡುತ್ತಿದ್ದರಂತೆ. ರಾಮೋತ್ಸವದಂತೆಯೇ ವಿಜ್ಞಾನಕ್ಕೂ ಒಂದು ಉತ್ಸವ ಮಾಡಬಾರದೇಕೆ ಅನ್ನಿಸಿ, ಮೂವತ್ತು ವರ್ಷಗಳ ಹಿಂದೆ ಜುಲೈ ಒಂದರಿಂದ ಮೂವತ್ತೊಂದರ ವರೆಗೆ, ಎಚ್. ಎನ್ . ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿಯಲ್ಲಿ ಈ ಉತ್ಸವವನ್ನ ಪ್ರಾರಂಭಿಸಿದರು. ಅದರ ಅದ್ಭುತ ಯಶಸ್ಸನ್ನು ಕಂಡು ಅದನ್ನು ಮುಂದುವರೆಸಿಕೊಂಡು ಬಂದರು. ಇದು ಒಂದು ತಿಂಗಳ ವಿಜ್ಞಾನೋತ್ಸವ. ಪ್ರತಿ ದಿನವೂ ಭಾರತದ ಹಲವಾರು ಕಡೆಗಳಿಂದ, ಕೆಲವೊಮ್ಮೆ ಅಮೇರಿಕೆಯಿಂದಲೂ ವಿಜ್ಞಾನಿಗಳು ಬಂದು ಇಲ್ಲಿ ಉಪನ್ಯಾಸ ನೀಡಿ ಹೋಗಿದ್ದಾರೆ. ಬಾಹ್ಯಾಕಾಶಯಾತ್ರೆ ಮಾಡಿದ ಮೊದಲ ಭಾರತೀಯ ರಾಕೇಶ್ ಶರ್ಮ ಕೂಡಾ ಇಲ್ಲಿ ಬಂದು ಮಾತಾಡಿದ್ದಾರೆ. ಇಂದು ಪ್ರಾರಂಭವಾಗಿದ್ದು ಮೂವತ್ತೊಂದನೇ ವಾರ್ಷಿಕ ವಿಜ್ಞಾನೋತ್ಸವ. ನಾನು ಕಳೆದ ಐದು ವರ್ಷದಿಂದ attend ಮಾಡುತ್ತಿದ್ದೇನೆ.

Z : ವಾ !! nice. but isn’t it too technical ?

ನಾನು : absolutely not. ಈ ಉಪನ್ಯಾಸ ಮಾಲಿಕೆ ಇರುವುದೇ ವಿಜ್ಞಾನವನ್ನು ಜನಪ್ರಿಯಗೊಳಿಸುವುದಕ್ಕಾಗಿ. these are popular science lectures. ಇಲ್ಲಿ ಗಲಿಬಿಲಿಗೊಳಿಸುವ equations ಇರೋದಿಲ್ಲ, long derivations ಇರೋದಿಲ್ಲ...ಎಂಥದ್ದೂ ಇಲ್ಲ. ಕೆಲವು ಮಾತ್ರ technical ಅನ್ನಿಸಿದರೂ ಅದನ್ನ detail ಮಾಡೊಲ್ಲ. ಈಗ,for example ನಮಗೆ haemoglobin ಗೊತ್ತು. ಅದು ಹೇಗೆ ಕೆಲ್ಸ ಮಾಡತ್ತೆ ಅಂತ ಗೊತ್ತ ?

Z : ಇಲ್ಲ.

ನಾನು : ಅದು ಕೈಕೊಟ್ಟರೆ ನಮಗೆ ಎಂಥೆಂಥಾ ರೋಗಗಳು ಬರತ್ತೆ ಅಂತ ಗೊತ್ತಾ ?

Z : ಉಹು !

ನಾನು : ಇದನ್ನ ಮತ್ತು ಇಂಥದ್ದೇ ಹತ್ತು ಹಲವಾರು ವಿಷಯಗಳನ್ನ ತಿಳಿಸ್ತಾರೆ ಅಲ್ಲಿ. ಇವತ್ತಿನ ಉಪನ್ಯಾಸವನ್ನು ಭಾರತೀಯ ವಿಜ್ಞಾನ ಸಂಸ್ಥೆ ಯ[Indian Institute of Science] ನಿರ್ದೇಶಕರಾದ ಡಾ||ಪಿ. ಬಲರಾಮ್ ಅವರು ಬಂದು ಈ ಹಿಮೋಗ್ಲೋಬಿನ್ ಎಂಬ ಅತ್ಯದ್ಭುತ ಪ್ರೋಟೀನ್ ಮಾಡುವ ಉಪಕಾರ, ಅದರ ಅಭಾವದಿಂದ ಆಗುವ ಅಪಾಯಗಳು, ಇತರೆ ಪ್ರೋಟೀನುಗಳು [ಇನ್ಸುಲಿನ್ ಮುಂತಾದವು] ಅವುಗಳ ಸ್ವರೂಪ, ಗುಣಲಕ್ಷಣ...ಎಲ್ಲಾ ನಮಗೆ ಗೊತ್ತಾಗುವಂತೆ ಹೇಳಿದರು. ಸಖತ್ತಾಗಿತ್ತು. ನಾನು ಬಯಾಲಜಿ ಓದಿದ್ದು ಪಿ. ಯೂ. ಸಿ. ವರೆಗೆ ಅಷ್ಟೇ ! ಆದರೂ ನನಗೆ ಇಂಥದ್ದು ಗೊತ್ತಾಗಲಿಲ್ಲಪ್ಪ ಅಂತ ಅನ್ನಿಸಲಿಲ್ಲ...

Z : wow !

ನಾನು : ಅಷ್ಟೇ ಅಲ್ಲ...ಪ್ರತಿ ಭಾನುವಾರ ವಿಜ್ಞಾನದ ಕುರಿತ film shows ಕೂಡಾ ಇರತ್ತೆ !

Z .nice !!

ನಾನು : ನಿಜ್ವಾಗ್ಲು !! ಈಗಿನ ಯುಗ ತಂತ್ರಜ್ಞಾನದ್ದು. ಅದಕ್ಕೆ ಮೂಲ ವಿಜ್ಞಾನ. ಇದರ ಅರಿವು ತಿಳಿವು ಮೂಡಿಸಲು ಈ ವಿಜ್ಞಾನೋತ್ಸವ ಒಂದು ಅದ್ಭುತ ಸಾಧನ. ನಾನಂತೂ ಈ ಸರ್ತಿ ಒಂದು ಉಪನ್ಯಾಸವನ್ನೂ ಬಿಡದೇ attend ಮಾಡುವೆ ! ಮುಂಚೆ ಎಲ್ಲ ಕಾಲೇಜ್ ಇರ್ತಿತ್ತು...record, assignment ಅಂತೆಲ್ಲ ಕರ್ಮಕಾಂಡಗಳ ಕಾರಣದಿಂದ 31 lectures ನಲ್ಲಿ 20 ನೇ attend ಮಾಡಕ್ಕೆ ಆಗ್ತಿದ್ದಿದ್ದು maximum. ಈಸಲ ಅದೆಲ್ಲ ಇಲ್ಲ...ಸದ್ಯ...ನೆಮ್ಮದಿಯಾಗಿ ಹೋಗಿ ಕೇಳಬಹುದು.

Z : wow !!

ನಾನು : ಸಾಕು ಕಣ್ಣ್ ಕಣ್ಣ್ ಬಿಟ್ಟ್ಕೊಂಡ್ ವಾವ್ ವಾವ್ ಅಂದಿದ್ದು. ಈ ಥರ lectures u....ಅಂಥ eminent scientists ನ ನೋಡೋಕೆ ಪುಣ್ಯ ಮಾಡಿರ್ಬೇಕು. ನಾನಂತೂ...ಪ್ರೊಫೆಸ್ಸರ್ ಸಿ. . ಎನ್.ಆರ್. ರಾವ್, ಡಾ || ಕಸ್ತೂರಿ ರಂಗನ್, ಡಾ||ಮಾಧವನ್ ನಾಯರ್,ಡಾ|| ರಾಕೇಶ್ ಶರ್ಮ ಇವರನ್ನೆಲ್ಲ ಹತ್ತಿರದಿಂದ ನೋಡಿ ಧನ್ಯಳಾಗಿದ್ದೇನೆ. so, moral of the story is, never miss opportunities like this !

Z : very true !! attend ಮಾಡು ಹೋಗಮ್ಮ....ಅಲ್ಪ ಸಲ್ಪ ತಿಳೀವಳಿಕೆ ಪಡ್ಕೋ.

ನಾನು :ಏನ್ "ಹೋಗಮ್ಮ" ಅಂದ್ರೆ....ನಾಳೇ ಇಂದ ನೀನು ಬರ್ಬೇಕು ನನ್ನ ಜೊತೆ.

Z : ಮಳೆ ! ಚಳಿ !

ನಾನು : ಹೊಡಿತಿನಿ ಸೋಂಬೇರಿ ! ಇವತ್ತು ನಾನು ಮನೆಯಿಂದ ಹೊರಗೆ ಕಾಲಿಟ್ಟ ತಕ್ಷಣ ಮಳೆ ಜೋರಾಗಿ ಬರಲು ಶುರುವಾಯ್ತು. ನೆನೆದುಕೊಂಡೇ ಹೋಗ್ಲಿಲ್ವಾ ನಾನು? [ಚತ್ರಿ ಇತ್ತು ಸದ್ಯ. ಆದ್ರೂ dress ಎಲ್ಲಾ ಕೊಚ್ಚೆಲಿ ಹಾಳಾಗೋಯ್ತು ! ] interest ಇರ್ಬೇಕು. ತಿಳ್ಕೋ. ನಾಳೆ ಚಕಾರ ಎತ್ತದೇ ಬಾ. Advances in neurosciences ಅಂತ topic. CT scans, MRI tests , stem cell research ಮೇಲೆ ಮಾತಾಡ್ತಾರೆ ಅನ್ನಿಸತ್ತೆ. lets see !

Z : ಬರ್ತಿನಿ ! ಬಂದೇ ಬರ್ತಿನಿ....

ನಾನು : good girl !!! ಸರಿ...ನಾಳೆ ಮಾತಾಡುವ.

line on hold.

7 comments:

ಅಂತರ್ವಾಣಿ said...

ಎಲ್ಲಾ ಪ್ರವಚನ ಕೇಳುವಂತವಳಾಗು...

ಒಂದು ದಿನ ನಿನ್ನ ಅವರ ಜಾಗದಲ್ಲಿ ನೋಡುತ್ತೇನೆ.

Sridhar Raju said...

gooodh ವಿಜ್ಞಾನೋತ್ಸವ ...

Lakshmi Shashidhar Chaitanya said...

@jayashankar :

ayyayyo! naanashtOnd famous aagtini anta nangansalla....but thanks for your whole-hearted haaraike !


@sridhar

karmakaandaprabhugaLe ! "goodh"bitra vijyaanakku ? :P

Unknown said...

Lakshmi,

Liked it, my favourite subject was Biology, I missed it.

Padma

Srikanth - ಶ್ರೀಕಾಂತ said...

en comment maaDbeku gottaagtilla

Lakshmi Shashidhar Chaitanya said...

@srikanth:

parvaagilla.

Rohini Joshi said...

Wowo iSTu dinada mele konegu odide ninna ee posting~na[:o]...aadre nangu gottilla yenu comnt mADbeku anta...Hu ondina attnd mADiddidre yenAdru tiLititteno:-D...aadre eegantu mundina varshada~varegu aa chance illa:-| noDoNa nxt time:-)

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...