Saturday, November 1, 2008

ರಾಜ್ಯೋತ್ಸವದ ಶುಭಾಶಯಗಳು

ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಮ್ಮ ನಾಡು ಆವಿರ್ಭವಿಸಿ ಇಂದಿಗೆ ಐವತ್ಮೂರು ಶರದೃತುಗಳು. ಶರತ್ಕಾಲದ ಹುಣ್ಣಿಮೆಯಂತೆಯೇ ನಮ್ಮ ಭಾಷೆಯೂ ಮನೋಹರ, ಆಹ್ಲಾದಕರ. ಚಂದ್ರನ ಬೆಳುದಿಂಗಳಿಗೆ ಮೋಡದ ಅಡಚಣೆ ಇಲ್ಲದಿರೆ ಎಷ್ಟು ಚೆನ್ನವೋ, ಹಾಗೆಯೇ, ಶಾಸ್ತ್ರೀಯ ಸ್ಥಾನಮಾನ ದೊರಕುವುದೋ ಇಲ್ಲವೋ ಎಂಬ ಅನುಮಾನದ ಮೋಡವನ್ನು ಕೇಂದ್ರ ಸರಕಾರ ಸರಿಸಿ ಕನ್ನಡ ಚಂದ್ರಮನ ಧವಳಕಾಂತಿಯನ್ನು ಜಗತ್ತೆಲ್ಲ ಆಸ್ವಾದಿಸುವಂತೆ ಮಾಡಿದೆ. ಕನ್ನಡಿಗರ ಒಕ್ಕೊರಲ ಕೂಗಿಗೆ, ಸತತ ಪರಿಶ್ರಮಕ್ಕೆ, ಎಡೆಬಿಡದ ಹೋರಾಟಕ್ಕೆ ಇಂದು ನ್ಯಾಯ ಸಂದಿದೆ. ಕನ್ನಡಿಗರಿಗೆ ಈ ರಾಜ್ಯೋತ್ಸವ ನಿಜಕ್ಕೂ ಮಹೋತ್ಸವವಾಗಿದೆ.

ಶಾಸ್ತ್ರೀಯ ಸ್ಥಾನಮಾನ ಮೃತಭಾಷೆಗಳಿಗೆ ದೊರಕುತ್ತದೆ ಎಂಬ ಪ್ರತೀತಿ ಇದೆಯಾದರೂ ಯಾವ ಭಾಷೆಯೂ ಮೃತವಾಗಿಲ್ಲ, ತನ್ನ ರೂಪ ಬದಲಿಸಿದೆ ಎಂಬುದನ್ನು ಗಮನಿಸಬೇಕು. ನಮ್ಮ ಭಾಷೆ ಮೃತವಾಗದೇ ಮತ್ತಷ್ಟು ಸೊಗಡಿನಿಂದ ಕೂಡಿ ಅಮೃತವಾಹಿನಿಯಾಗಬೇಕೆಂಬುದು ಕನ್ನಡಿಗರ ಅಭಿಲಾಷೆಯಾಗಬೇಕು, ಅದಕ್ಕೆ ಪ್ರಾಮಾಣಿಕತೆಯಿಂದ ಶ್ರಮಿಸಬೇಕು.

ಜೈ ಕರ್ನಾಟಕ

ಸಿರಿಗನ್ನಡಂ ಗೆಲ್ಗೆ.

2 comments:

sachidananda K.N said...

jai kannada,

Sridhar Raju said...

nimagoo kooda raajyotsavada shubhaashayagaLu :-)

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...