Monday, September 15, 2008

ಪಾನಿ ಪಾನಿ ರೆ !

Z : ಏನ್ ಹಾಡ್ ಹೇಳ್ತಿದ್ಯ ?

ನಾನು : ಅಯ್ಯೋ ಒಂದು ಸಣ್ಣ ತಪ್ಪು ಒಂದು ದೊಡ್ಡ ಹಗರಣಕ್ಕೆ ಕಾರಣ ಆಗಿದೆ .ಅದಕ್ಕೆ ನಂಗೆ ಈ ಹಾಡು ನೆನ್ಪಾಯ್ತು.

Z : ಏನ್ ತಪ್ಪು ಮತ್ತು ಎಂಥಾ ಹಗರಣ ?

ನಾನು : ಶನಿವಾರ ಬೆಳಿಗ್ಗೆ ನಾನು ಗಾಂಧಿ ಬಜಾರ್ ಗೆ ವಾಕಿಂಗ್ ಹೋಗಿ ಬರುವ ಹೊತ್ತಿಗೆ ಮನೆಯಲ್ಲಿ ಸಿಕ್ಕಾಪಟ್ಟೆ ದೊಡ್ಡ ಹಗರಣ ಆಗಿತ್ತು. ಒಂಭತ್ತನೇ ತಾರೀಖು ಬೆಳಿಗ್ಗೆ ವಾಟರ್ ಬಿಲ್ಲಿನವ ಬಂದು ರೀಡಿಂಗ್ ತಗೊಂಡು ಹೋಗಿದಾನೆ. ಹದಿಮೂರನೆಯ ತಾರೀಖು ಶನಿವಾರ ಬಿಲ್ಲು ಹಾಕಿ ಹೋಗಿದ್ದಾನೆ. ಬಿಲ್ಲಿನ ಮೊತ್ತವನ್ನು ನೋಡಿ ಅಮ್ಮನ ಎದೆ ಒಡೆದು ಹೋಗಿದೆ.

Z : ಎಷ್ಟು ಬಂದಿತ್ತು ?

ಎರಡು ಸಾವಿರ ರುಪಾಯಿ .

Z : ಹಾ ? ! ಫೋನ್ ಬಿಲ್ಲೇ ಸಾವಿರ ದಾಟೊಲ್ಲ !!

ನಾನು : exactly.ನೀರಿನ ಬಿಲ್ಲು ಇಷ್ಟು ಬರಲು ಸಾಧ್ಯವೇ ಇಲ್ಲ ಎಂದು ನಮ್ಮಮ್ಮನಿಗೆ ಯೋಚನೆ ಬಂತಾದರೂ, ಹೊಸ ಕೆಲಸದವಳು ಎರ್ರಾಬಿರ್ರಿ ನೀರು ಉಪಯೋಗಿಸುತ್ತಿದ್ದಾಳಾ ? ನೀರಿನ ಟ್ಯಾಂಕ್ ನಲ್ಲಿ ಸೋರಿಕೆ ಉಂಟಾಗಿದಿಯಾ,ಪಂಪಿನ ಆಟೋ ಲೆವೆಲ್ ಕಂಟ್ರೋಲರ್ ಕೈಕೊಟ್ಟಿದ್ಯಾ ಇವೇ ಮುಂತಾದ ಯೋಚನೆಗಳು ಅಮ್ಮನ ತಲೆಯಲ್ಲಿ ಏಕಕಾಲಕ್ಕೆ ಬಂದಿವೆ. ಆದರೂ, ಏನೇ ಆಗಲಿ ಎರಡು ಸಾವಿರ ಬರಲು ಸಾಧ್ಯವೇ ಇಲ್ಲ, ಆ ಬಿಲ್ಲು ಹಾಕುವವರನ್ನು ಹಿಡಿಯಲೇ ಬೇಕೆಂದು ರಸ್ತೆಯಲ್ಲಿರುವ ಎಲ್ಲರ ಮನೆಗೂ ಹೋಗಿ "ವಾಟರ್ ಬಿಲ್ಲಿನವರು ಬಂದರಾ ? " ಅಂತ ಕೇಳಿ ಕೇಳಿ ರಸ್ತೆಯ ಕಡೆಯ ಮನೆಯಲ್ಲಿ ಅವರನ್ನ ಹಿಡಿದು ವಿಚಾರಿಸಿದ್ದಾರೆ.

ಅಮ್ಮ : ಅಲ್ಲಪ್ಪಾ...ಏನ್ ರೀಡಿಂಗೂ ಅಂತ ತಗೊಂಡಿದ್ಯಾ ? ನಾವು ನೀರು ಪೋಲಾಗದಿರಲಿ ಅಂತ ಎಲ್ಲ ಆಟೋಮ್ಯಾಟಿಕ್ ಮಾಡ್ಸ್ಕೊಂಡಿದಿವಿ ಅಣ್ಣಯ್ಯ...ನಮಗೆ ಮಿನಿಮುಮ್ ವಾಟರ್ ಬಿಲ್ಲಷ್ಟೇ ಬರದು...ಕರೆಂಟ್ ಬಿಲ್ಲು ಫೋನ್ ಬಿಲ್ಲುಗಳೇ ಸಾವಿರ ದಾಟೊಲ್ಲ ನಮ್ಮ ಮನೆಯಲ್ಲಿ, ನೀನು ನೀರಿನ ಬಿಲ್ಲನ್ನ ಏನ್ ಸಾವಿರಾರುಗಟ್ಟಲೆ ಹಾಕಿಬಿಟ್ಟರೆ,ನನಗೆ ಗಾಬರಿ ಆಗ್ತಿದೆ. ದಯವಿಟ್ಟು ಕಣ್ಣು ಬಿಟ್ಟು ನೋಡಯ್ಯ...

ಅವರು : ಮೇಡಮ್, ನನಗೂ ಗೊತ್ತು ನಿಮ್ಮ ಮನೆಗೆ ಹೀಗೆ ಬರಲ್ಲ ಅಂತ...ನೀವು ಸಿಕ್ಕಾಪಟ್ಟೆ ಉಪಯೋಗಿಸುತ್ತಿದ್ದೀರಿ ಅಂತ ಅನ್ನಿಸಲ್ಲ...ಮೋಸ್ಟ್ಲಿ ರೀಡಿಂಗ್ ತಪ್ಪಾಗಿರಬೇಕು. ಯಾವ್ದಕ್ಕೂ ಸೋಮವಾರ ಸಂಜೆ ನಾಲ್ಕಕ್ಕೆ ಬನಗಿರಿ ಗೆ ಬಂದುಬಿಡಿ. ಸರಿ ಮಾಡ್ಕೊಡ್ತಾರೆ.

ಅಮ್ಮ : ಅಲ್ಲಯ್ಯಾ...ಬನಗಿರಿಯ ದೇವಸ್ಥಾನ ಗೊತ್ತು, ಅಲ್ಲೆಲ್ಲಿದೆ ನಿಮ್ ಆಫೀಸು ?
ಅವರು : ಮೇಡಮ್ ದೇವಸ್ಥಾನದ ಪಕ್ಕದಲ್ಲೆ...ಯಾರನ್ನ ಕೇಳಿದರೂ ಹೇಳುತ್ತಾರೆ.
ಅಮ್ಮ :ಎಷ್ಟ್ ದಿನ ಅಲೆಸುತ್ತಾರಯ್ಯ ಆ ಆಫೀಸಿಂದ ಈ ಆಫೀಸಿಗೆ ?
ಅವರು : ಮೇಡಮ್ ಈಗ ಎಲ್ಲ ಕಂಪ್ಯೂಟರೈಸ್ಡ್ ! ಅರ್ಧ ಘಂಟೆ ನೂ ಆಗಲ್ಲ. ಗಾಬ್ರಿ ಆಗ್ಬೇಡಿ ಮೇಡಮ್...ಅಲೆಸಲ್ಲ ನಿಮ್ಮನ್ನ.
ಅಮ್ಮ : ನಾನ್ ಬರಲ್ಲ ಕಣಯ್ಯ...ಕೆಲ್ಸಕ್ಕೆ ಹೋಗ್ತಿನಿ. ನನ್ನ ಮಗಳನ್ನ ಕಳಿಸ್ತಿನಿ.
ಅವರು : ಸರಿ ಮೇಡಂ.

ನಾನು : ಇವನು ಹೋದ ಮುನ್ನೂರು ಸೆಕೆಂಡ್ ನಂತರ ನನ್ನ ಆಗಮನವಾಯ್ತು ಗಾಂಧಿ ಬಜಾರ್ ಇಂದ. ಬಂದದ್ದೇ ನಮ್ಮಮ್ಮ ಆದ ಹಗರಣದ ಪ್ರವರ ಊದಿದರು. ಈ ಸಮಸ್ಯೆಯ ಪರಿಹಾರಕ್ಕೆ ಸೋಮವಾರದ ಮಧ್ಯಾಹ್ನದ ನಿದ್ದೆ ತ್ಯಾಗ ಮಾಡಲೇಬೇಕಾಯ್ತು ನಾನು.

Z : ಹ್ಮ್ಮ್ಮ್ಮ್...........

ನಾನು : ಸರಿ ಇವತ್ತು ಮಧ್ಯಾಹ್ನ ನನ್ನ ಪಯಣ ಬನಗಿರಿಯ ಕಡೆ ಹೋಯ್ತು. ನನಗೆ BWSSB ಆಫೀಸಿಗೆ ರಸ್ತೆ ಗೊತ್ತಿರಲಿಲ್ಲ. ಪೆಟ್ಟಿಗೆ ಅಂಗಡಿಯವನ ಬಳಿ ವಿಚಾರಿಸಲು,ಅವರು- "ಮೇಡಮ್, ಈ ಅಪ್ಪನ್ನು ಹತ್ತಿಬಿಡೀ...ಅಲ್ಲೇ ಬಲಕ್ಕೆ ಕಾಣ್ಸತ್ತೆ." ಅಂತ horizontal ಗೆ ಸುಮಾರು 70 degrees ಅಷ್ಟು incline ಆಗಿರುವ ರಸ್ತೆಯನ್ನು ತೋರಿಸಿದ. ನನಗೆ ರಸ್ತೆ ನೋಡಿಯೇ ಗಾಬರಿ ಆಯ್ತು. ಚಾಮುಂಡಿ ಬೆಟ್ಟವನ್ನು ಕಾರಿನ ಬದಲು ಕಾಲಲ್ಲಿ ಹತ್ತಿ ಪ್ರಾಕ್ಟೀಸ್ ಮಾಡ್ಬೇಕಿತ್ತು ಅನ್ನಿಸಿತು. ಇರಲಿ ಏನಾದ್ರು ಆಗಿ ಹೋಗಲಿ, ಹತ್ತೇ ಬಿಡುವ ಅಂತ ಅಪ್ಪ್ ಹತ್ತಿ ಬಲಕ್ಕೆ ನೋಡಿದರೆ....

Z : ರೆ.....

ನಾನು : ಖಾಲಿ ಸೈಟು !

Z : ಹೆ ಹೆ....

ನಾನು : ಆಮೇಲೆ ಒಂದು ಮನೆ ಮುಂದಿರುವ ಸೆಕ್ಯೂರಿಟಿಯವರನ್ನ ಕೇಳಿದೆ. ಅವರು ಬಲಗಡೆ ತಿರುಗಿ ಇನ್ನೊಂದು ಅಪ್ಪ್ ಹತ್ತಿ ಮೇಡಮ್, ಬಲಕ್ಕೆ ಕಾಣಿಸುತ್ತದೆ ಅಂದರು. ಆ ಅಪ್ಪು 60 degrees ! ಶಿವನಾಮ ಜಪವನ್ನು ಎಡೆಬಿಡದೆ ಮಾಡುತ್ತಾ ಅಪ್ಪನ್ನು ಹತ್ತಿ ಕಡೆಗೂ bwssb ಆಫೀಸು ತಲುಪಿದೆ.ಅದು ಬನಗಿರಿಯ ದೇವಸ್ಥಾನದ ಪಕ್ಕದಲ್ಲಿರಲಿಲ್ಲ, ಪಕ್ಕದ ರಸ್ತೆಯಲ್ಲಿತ್ತು. ಸಾವಿವ ಅಂಚಿನಲ್ಲಿರುವ ಶ್ವಾನವೊಂದು ಬಾಲ ಅಲ್ಲಾಡಿಸುತ್ತಾ ನನಗೆ ಸ್ವಾಗತ ಬೇರೆ ಕೋರಿತು.

Z : ಆಮೇಲೆ ?

ನಾನು : ಒಳಗೆ ಹೋದ ತಕ್ಷಣ ಪ್ಯೂನೊಬ್ಬರು, "ಬನ್ನಿ ಮೇಡಮ್, ಕೂತ್ಕೋಳೀ...ಏನ್ ಆಯ್ತು ? " ಅಂತ ಡಾಕ್ತರ್ ಪೇಷೆಂಟ್ ನ ಕೇಳುವ ಹಾಗೆ ಕೇಳಿದರು.

ನಾನು :"ಸರ್, ಅದು ರೀಡಿಂಗ್ ತಪ್ಪಾಗಿ ತಗೊಂಡು ಬಿಲ್ಲು ಸಿಕ್ಕಾಪಟ್ಟೆ ಬಂದಿದೆ. ಕರೆಕ್ಷನ್ ಆಗ್ಬೇಕಿತ್ತು " ಅಂದೆ.
ಅವರು ಬಿಲ್ಲನ್ನು ನೋಡಿ..."ಏನ್ ಮೇಡಮ್ ಇದು, ಆಮೇಲೆ ತಗೊಂಡಿರೋ ರೀಡಿಂಗ್ ಗೂ ಮೊದ್ಲೆ ತಗೊಂಡಿರೋ ರೀಡಿಂಗ್ ಗೂ ಸಂಬಂಧನೇ ಇಲ್ವಲ್ಲ ? "

ನಾನು : "ಸಂಬಂಧ ಹುಡ್ಕಕ್ಕೇ ಬಂದಿರೋದು ಸರ್ ನಾನಿಲ್ಲಿ."

ಅಷ್ಟರಲ್ಲಿ ಮತ್ತೊಬ್ಬರು ಬಂದರು, ಅವರು ಬಿಲ್ಲನ್ನು ಪರೀಕ್ಷಿಸಿ ಹೀಗೇ ಅಂದರು. ಆಮೇಲೆ ಅದು ಮಗದೊಬ್ಬರ ಕೈ ಸೇರಿತು. ಹೀಗೆ ಒಂದೈದು ನಿಮಿಷ ಎಲ್ಲರು ಪಾಸಿಂಗ್ ದ ಪಾರ್ಸಲ್ ಆಟದ ವಿಸ್ತೃತ ಭಾಗವಾದ ಪಾಸಿಂಗ್ ದ ವಾಟರ್ ಬಿಲ್ಲ್ ಆಟ ಆಡಿದರು. ಕಡೆಗೆ ಅದು ಮುಖ್ಯ ಇನ್ಸ್ಪೆಕ್ಟರ್ ಕೈ ಸೇರಿತು. ಅವರು " ಮೇಲೆ ಹೋಗಿ ಮಾ...ನಿಮ್ ಏರಿಯಾ ಇನ್ಸ್ಪೆಕ್ಟರ್ ಮೇಲಿದಾರೆ " ಅಂದರು.

ನಾನು ಮೆಟ್ಟಿಲು ಹುಡುಕುತ್ತಿದ್ದೆ. ಆ ಪ್ಯೂನು, "ಮೇಡಂ, ಮೆಟ್ಟಿಲು ಹೊರಗಿದೆ " ಅಂತ ಹೇಳಿಕಳಿಸಿದರು.

ಮೆಟ್ಟಿಲು ಹತ್ತಿ ಆಫೀಸಿನ ಒಳಗೆ ಹೋಗಿ ನಮ್ಮ ಏರಿಯಾ ಇನ್ಸ್ಪೆಕ್ಟರ್ ಇದಾರ ಅಂತ ಕೇಳಿದರೆ ಅವರು " ಈಗ್ ತಾನೆ ನಿಮ್ ಕಣ್ಣ್ ಮುಂದೆ ನೇ ಹೊರಗೆ ಹೋದ್ರಲ್ಲಮ್ಮ...ಕೆಳ್ಗಡೆ ಇರ್ತಾರೆ ನೊಡಿ ! " ಅಂದರು.

ನಾನು : "ಮೇಡಮ್, ಅಲ್ಲಿಲ್ಲ ಅವ್ರು ಅಂತಾನೇ ನನ್ನನ್ನ ಮೇಲೆ ಕಳಿಸಿದರು "

ಅವರು : "ಸರಿ, ಹೊರಗೆ ಹೋಗಿ ನೋಡಿ, ಅಲ್ಲಿ ಇನ್ನೊಂದು ಆಫೀಸಿದೆ. ಅಲ್ಲಿರ್ಬಹುದು"

ನಾನು ಇನ್ನೊಂದು ಆಫೀಸಿನಲ್ಲಿ ವಿಚಾರಿಸಲು " ಇಲ್ಲಿಲ್ಲ " ಅನ್ನುವ ಉತ್ತರ ಬಂತು. ನಾನಿನ್ನು ಹೊರಗೆ ಬಲಗಾಲನ್ನು ಇಟ್ಟಿದ್ದೆ ಅಷ್ಟೆ , "ನಾನಿಲ್ಲೇ ಇದಿನಿ, ಇಲ್ಲ ಅಂತೀರಲ್ರಿ ? " ಎಂಬ ದನಿಯು ಕೇಳಿಸಿತು. ಪ್ರಿಂಟರ್ ಹಿಂದೆ ಮಹಾಶಯರು ಬ್ಯುಸಿಯಾಗಿದ್ದರು. ಎನೋ ಕಾರಣಕ್ಕೆ ಟೇಬಲ್ ಕೆಳಗಿದ್ದವರು ಆಗ ಮೇಲಕ್ಕೆ ತಲೆ ಎತ್ತಿದರು.

ನಾನು : ಸರ್ ಅದು ರಿಡಿಂಗ್ ತಪ್ಪಾಗಿ....

ನೀವು ಗಾಬರಿಯಾಗಿ ನನ್ನನ್ನು ಹುಡುಕಿಕೊಂಡು ಬಂದು ಸಿಕ್ಕಾಪಟ್ಟೆ ವಿಚಾರಿಸಿದರಲ್ಲ, ಅವರ ಮಗಳಾ ?

ನಾನು ನಮ್ಮಮ್ಮನ ಸಾಹಸವನ್ನು ಒಳಗೇ ಮುಕ್ತಕಂಠದಿಂದ ಶ್ಲಾಘಿಸಿ, ಹೌದು ಸಾರ್ ಅಂದೆ.

ಬನ್ನಿ ಬನ್ನಿ ಅಂತ ನನಗೆ ಹೇಳಿ ಆಫೀಸಿನ ಒಳಗೆ ಮಿಂಚಿನಂತೆ ಮಾಯವಾದರು !

Z : ಹೆಹೆಹೆಹೆ....

ನಾನು : ನಗ್ಬೇಡಾ ! ಅವರು ಇನ್ನರ್ಧ ಘಂಟೆ ಬರಲ್ಲ ಅಂದುಕೊಂಡು ನಾನು ಬೆಂಚಿನ ಮೇಲೆ ಕುಳಿತು ನಿದ್ದೆ ಮಾಡುವ ಪ್ಲಾನ್ ಹಾಕಿದ್ದೆ.

Z : ವರ್ಕ್ ಔಟ್ ಆಯ್ತ ?

ನಾನು : ಇಲ್ಲ...ಮೂರೇ ನಿಮಿಷಕ್ಕೆ ಮಹಾಶಯರು ಪುಸ್ತಕ ಸಮೇತ ಪ್ರತ್ಯಕ್ಷ ! ನಾನು ಕಣ್ಣು ಮುಚ್ಹಕ್ಕೇ ಆಗ್ಲಿಲ್ಲ !

Z : ಅಯ್ಯೋ ಪಾಪ ! ಆಮೇಲೆ ?

ನಾನು : ಅವರು ಬಂದದ್ದೇ, " ನೋಡಿ ಮೇಡಂ ಡಬ್ ಡಬಲ್ ಕೆಲ್ಸ ಮಾಡ್ಸ್ತಾರೆ, ನಾನು 1018000 ಅಂತ ಬರ್ದಿದ್ರೆ ಇವ್ರು 1081000 ಅಂತ ಟೈಪ್ ಮಾಡೋದೆ ? ನೋಡ್ಬಿಡಿ ನೀವೂ ಒಮ್ಮೆ" ಅಂತ ಲೆಡ್ಜರ್ ತೋರಿಸಿದರು.

Z : ನೀನು " ನೋಡಿ ನಮ್ಗೂ ಸಿಮ್ ಸಿಂಪ್ಲಿ ಬರೋ ಹಾಗಾಯ್ತು. ಸೀರ್ ಸೀರಿಯಸ್ಸಾಗಿ ಖಂಡಿಸ್ತಿನಿ ಇದನ್ನ " ಅಂತ ಅಂದೆಯ ?

ನಾನು : ಇಲ್ಲ, ಸುಮ್ಮನೆ ನೋಡಿದೆ.

Z : ಛೆ ! ಅನ್ಯಾಯ...ಈ ಡೈಲಾಗ್ ಹೇಳ್ಬೇಕಿತ್ತು ನೀನು !

ನಾನು : ತೋಚಲಿಲ್ಲ.

Z : ಸರಿ ಬಿಡು. ಆಮೇಲೆ ?

ಅವರು " ಒಳಗೆ ಬನ್ನಿ ಮೇಡಮ್, ಬೇರೆ ಬಿಲ್ಲನ್ನು ಹಾಕ್ಸಿ ಕೊಡ್ತಿನಿ " ಅಂತ ಇನ್ನೊಂದು ಆಫೀಸಿಗೆ ಕರೆದುಕೊಂಡು ಹೋದರು. ಅಲ್ಲಿ ಒಬ್ಬರು ಆಂಟಿ, " ಏನಪ್ಪಾ ? " ಅಂತ ವಿಚಾರಿಸಲು ಇವರು ನನ್ನ ಸಮಸ್ಯೆ ಮತ್ತು ನಮ್ಮಮ್ಮನೊಂದಿಗೆ ಆಡಿದ ಮಾತುಕಥೆಯನ್ನೆಲ್ಲ ಚಾಚೂ ತಪ್ಪದೆ ವಿವರಿಸಿದರು. ಅದಕ್ಕೆ ಆ ಆಂಟಿ, " ನನಗೂ ಅನುಮಾನ ಬಂತು ಬಿಲ್ಲನ್ನು ಸ್ಕ್ರೂಟಿನಿ ಮಾಡ್ಬೇಕಾದ್ರೆ, ಖರ್ಚು ಆಗಿದ್ರೂ ಇರ್ಬಹುದೇನೋ ಅಂತ ಹಾಗೇ ಬಿಟ್ಟೆ. ನೋಡಪ್ಪ, ಈ ತಿಂಗಳಲ್ಲಿ ಇದು ಮೂರನೆಯ ಕೇಸು. ಶುಕ್ರವಾರ ಇಬ್ಬರು ಬಂದು ಗಲಾಟೆ ಮಾಡಿದರು. ಇವತ್ತು ಇವರು ಬಂದಿದ್ದಾರೆ. ಡಾಟಾ ಎಂಟ್ರಿ ಮಾಡುವವರಿಗೆ ಹೇಳ್ಬೇಕಪ್ಪ ! ನನಗೆ ಡಬ್ ಡಬಲ್ ಕೆಲ್ಸ ! ಛೆ !" ಅನ್ನುತ್ತಲೇ ಬೇರೆ ಬಿಲ್ಲನ್ನು ಪ್ರಿಂಟ್ ಮಾಡಿ ಕೊಟ್ಟರು. ನಮಗೆ ತಿಂಗಳು ತಿಂಗಳು ಬಿಲ್ಲು ಬರುವಷ್ಟೆ ಈ ತಿಂಗಳೂ ಬಂದಿತ್ತು !

Z : ಸದ್ಯ !

ನಾನು : ಹು. ಆಮೇಲೆ ನಾನು ಅಲ್ಲಿಂದ ಹೊರಬಿದ್ದೆ.

Z : ಹೆ ಹೆಹೆಹೆಹ್ !

ನಾನು : ನನಗೆ ಮಾಚಿಸ್ ಚಿತ್ರದ ಹಾಡು ನೆನ್ಪಾಯ್ತು... " ಪಾನೀ ಪಾನಿ ರೆ, ಖಾರೆ ಪಾನಿ ರೆ, ...."

I think these mistakes are of immense value on marks cards :-) 81 instead of 18 can do wonders !!!

11 comments:

Rohini Joshi said...

hogli biDu ninna parvatArohaNa sAhasa ondu biTre mikkid kelsa bega aaitalla..:-)

Parisarapremi said...

uppu tinda mele neeru kudeele beku.

Sridhar Raju said...

marks adlu badlu aadre wonder alla blunder aagutte....

Srikanth - ಶ್ರೀಕಾಂತ said...

to err is human... ivella aagode...

yaavdu adu 60 degree 70 degree incline iro rastegaLu bengLooralli? naanu noDbekalla!!

sachidananda K.N said...

nijavaglu nim punya re ondhe dinadalli kelsa agidhe..

Parisarapremi said...

[ಶ್ರೀಕಾಂತ್] ಅಂಥಾ ರಸ್ತೆ ಬೆಂಗ್ಳೂರ್ ಅಲ್ಲಿ ಇಲ್ವೇ ಇಲ್ಲ. ಇದು ಇವಳ ಭ್ರಮೆ. ಅಥವಾ ಇವಳು ಡ್ರಗ್ಸ್ ತೊಗೊಂಡ್ ಇರ್ತಾಳೆ.

Lakshmi Shashidhar Chaitanya said...

@ rohini :

parvataarohana...good word ! kelsa aaytu, but sakhath usstaaytu :(

@ parisarapremi :

avru uppu tindiddakke naan yaak neer kudibeku gurugaLE ?

@ sridhar :

adu wonderful blunder karmakaanda prabhugaLe !

@ srikanth :

ide ri...60 and 70 degrees ge incline aagiro raste ide bengloornalli. padmanabhnagarada banagiri road ge omme hogbanni. praana hotoytu nangantu.

@ sacchidananda :

irbahudu...nan punya ne ! :-)

@ parisarapremi again :

naan oppalla. intha rastegaLu ide bengloornalli. mattu, idu nanna bharame alla. coffee na neevu drugs aDi classify maaDodaadre, naanu drugs tagotini ;-)

Srikanth - ಶ್ರೀಕಾಂತ said...

60 - 70 degree angle iro rastegaLu bengLur alli alla... malenaaDallu illa...

neevu nimma buddhiyannu omme chenanagi toLedu hosadaagi suNNa-baNNa hoDsi ondu sarti protractor noDodu oLLedu ansatte...

ಅಂತರ್ವಾಣಿ said...

ellar samasye aagoytha idu?

aruN,
naagarbhaavi, nandhini layout , "mahalakshmi" layout gaLalli intha rasthe kaaNabahudu... naanu hatti 25Gm kaDime aagidde.. ivaru mostly invisible aagirthaare ansutte.

Anonymous said...

ಡೌನ್ ಇಳಿವಾಗ ಸಕತಾಗಿತು ಅನ್ಸುತೆ ಅಲ್ವ?? :-)

Lakshmi Shashidhar Chaitanya said...

@srikanth :

ನೋಡಿ...ಇದಾವೆ ಈ ಥರ ರಸ್ತೆಗಳು ಬೆಂಗ್ಳೂರ್ ನಲ್ಲಿ...ಬನ್ನಿ ಒಂದ್ ಸರ್ತಿ ನಮ್ಮ area ಗೆ....ರಸ್ತೆಗಳನ್ನ ತೋರ್ಸ್ತಿನಿ !

ಅಂತರ್ವಾಣಿ :
ನಾನು invisible ಆಗಿಲ್ಲ ! weight ಕಮ್ಮಿ ನೂ ಆಗಿಲ್ಲ !

ರಾಧೆ :

ಡೌನ್ ಇಳಿಯೋ ಅಷ್ಟೊತ್ತಿಗೆ ಸಾಕಾಗೋಯ್ತು ಕಣೆ !! ಏನೂ ಸಕತ್ತಾಗಿರ್ಲಿಲ್ಲ :(

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...