Saturday, June 12, 2010

ಉತ್ತರಾಯಣ - ೧

ನಾನು : ಟ್ರೈನ್ ತನ್ನಷ್ಟಕ್ಕೆ ತಾನು ಚಲಿಸುತ್ತಿತ್ತು,ಆಗ್ರಾ ಕಡೆಗೆ.ಕೋಟಿ ಭಾವನೆಗಳನ್ನು ಹೊತ್ತ ಜನರನ್ನ ಹೊತ್ತುಕೊಂಡು ತಾನು ನಿರ್ಭಾವುಕವಾಗಿ ಚಲಿಸುತ್ತಿತ್ತು.

Z : ನಿನ್ನ styleನಲ್ಲಿ ಒಂದು ಮಾತು ಹೇಳಲಾ ?

ನಾನು : ಹು.

Z :It is the characteristic feature of the train to move at its speed to the destination.As it is a non-living thing, we cannot attribute emotions to it.So,what is so big about it ?

ನಾನು : :) ಕಳ್ಳಿ ! ನನ್ನ ಥರ ಯೋಚ್ನೆ ಮಾಡ್ತ್ಯಾ ?

Z : ನೀನು ನನ್ನ ಥರ ಯೋಚ್ನೆ ಮಾಡಿದ್ರೆ ನಾನು ನಿನ್ನ ತರಹ ಮಾಡ್ಬೇಕಾಗತ್ತೆ, balance ಮಾಡಕ್ಕೆ :P ಮುಂದುವರೆಸು.

ನಾನು : ಎಂಟು ಗಂಟೆಯ ಸುಮಾರಿಗೆ ಕಾಫಿ ಟೀ ಸಮಾರಾಧನೆ ಪ್ರಾರಂಭವಾಯ್ತು. ಕಾಫಿಯ ಹಿಂದೆಯೇ ಟೀ ಬಂತು. ನಮ್ಮಮ್ಮ, " ಲಕ್ಷ್ಮೀ ಕಾಫಿ ?" ಅಂದ್ರು. ನಾನು " ಬೇಡ" ಅಂದೆ. ಇಡೀ ಬೋಗಿ ಸ್ಥಬ್ದ.

Z : ಅಲ್ವಾ ಮತ್ತೆ? ಕಾಫಿಯ ಆರಾಧಕಿಯಾದ ನೀನು, ಸ್ವತಃ ಸ್ವಯಂ ಸಾಕ್ಷಾತ್ ನೀನು ಕಾಫಿ ಬೇಡಾ ಅಂದ್ರೆ, ಇರೋರ್ಗೆಲ್ಲಾ ಶಾಕ್ ಆಗಲ್ವ ? ಹೈ ಟೆನ್ಷನ್ ವೈರ್ ಮುಟ್ಟಿದ ಹಾಗಾಗಿರತ್ತೆ ಪಾಪ.

ನಾನು : ನೋಡು, ಕಾಫಿ ಅನ್ನೋ ಪೇಯ ಹೇಗಿರ್ಬೇಕು ಗೊತ್ತ ?

Z : ಹೇಗಿರ್ಬೇಕು ?

ನಾನು : ಚಿಕ್ಕಮಗಳೂರಿಂದ ಕಾಫಿ ಬೀಜ ತಂದು, ಪುಡಿ ಮಾಡಿಸಿ, ಚಿಕೋರಿ ೨೦ ಪೆರ್ಸೆಂಟ್ ಹಾಕಿ, ಸೇಲಂ ಸ್ಟೀಲಿನ ಕಾಫಿ ಫಿಲ್ಟರ್ ನಲ್ಲಿ ಡಿಕಾಕ್ಷನ್ ಹಾಕಿ, ನಂದಿನಿ ಹಾಲು ಬೆರೆಸಿ, ಪ್ಯಾರಿಸ್ ಶುಗರ್ ಹಾಕಿ ಕರಗಿಸಿ,ಪೋರ್ಸಿಲೇನ್ ಕಪ್ ನಲ್ಲಿ ಕುಡಿದರೇನೆ ಅದು ಕಾಫಿ ಅನ್ಸ್ಕೊಳ್ಳೋದು.

Z : ಮತ್ತೆ ಟ್ರೈನ್ ನಲ್ಲಿ ಕೊಡೋದು ?

ನಾನು : ಕಾಫಿ ಪ್ಲೇವರ್ ಇರೋ ಬಿಸಿಯಾದ ಸಕ್ಕರೆ ಪಾನಕ.

Z : ಅದಕ್ಕೆ ಬೇಡಾ ಅಂದ್ಯಾ ?

ನಾನು : ಯೆಸ್. ನಾನು ಬೇಗ ಮುನ್ನೆಡೆಯುತ್ತಿದ್ದ ಟೀಯವನನ್ನ ನಿಲ್ಲಿಸಿ ಟೀ ತೆಗೆದುಕೊಂಡೆ. ಪಾಪ ನಮ್ಮ gang ಗೆ ಗಾಬರಿ ನೆ ಆಗೋಯ್ತು.

Z : ಯಾಕೆ ಹಿಂಗೆಲ್ಲಾ ಶಾಕ್ ಕೊಡ್ತ್ಯಾ ?

ನಾನು : ಚೆನ್ನಾಗಿರೋ ಕಾಫಿ ಕುಡಿದು ಅಭ್ಯಾಸ ಆಗಿರೋ ನಾಲಗೆಗೆ ಈ ಪಾನಕ ಕುಡಿಸಿ ಕಾಫಿಯ ರುಚಿಯನ್ನ ಮರೆಯಿಸುವುದಕಿಂತ ರುಚಿ ಎಂತಹುದೇ ಆದರೂ,ಹೇಗೆಯೇ ಇದ್ದರೂ ಸೈಲೆಂಟಾಗಿ ಹೊಟ್ಟೆ ಸೇರುವ ಟೀ ಉತ್ತಮ ಅನ್ನಿಸಿತು ನನಗೆ.

Z : ಎಂಥಾ ಲಾಜಿಕ್ಕು !

ನಾನು : ಹೆಂಗೆ ? ನಾನು ಅಣ್ಣ ಹೀಗೇ ಮಾಡೋದು. ನಮ್ಮ ಮನೆ, ಕಲ್ಮನೆ, ಎಸ್.ಎಲ್.ವಿ, ಎಮ್.ಟೀ.ಆರ್, ಮೈಯ್ಯಾಸ್ ಇವೇ ಮುಂತಾದ ಹೋಟೆಲುಗಳಲ್ಲಿ ಕಾಫಿ ಕುಡಿಯುತ್ತೇವೆ ಬಿಟ್ಟರೆ, ಮಿಕ್ಕೆಲ್ಲಾ ಕಡೆ ಟೀ ನೆ.

Z : ಐ ಸೀ. ಆಮೇಲೆ ?

ನಾನು : ಕರ್ನಾಟಕ ಬಿಡುವ ಮುನ್ನವೇ ನಾನು ಕಾಫಿ ಬಿಟ್ಟದ್ದು ನಮ್ಮ ಕುಟುಂಬಕ್ಕೆ ಶಾಕ್ ತಂದಿತಾದರೂ, ಅದನ್ನು ಸಹಿಸಿಕೊಂಡು ಲಗೇಜ್ ಸರಿ ಇಟ್ಟುಕೊಳ್ಳುವ ಕೆಲಸಕ್ಕೆ ಮುಂದಾಯ್ತು. ನಾನು ಶ್ರಾವ್ಯ ದಲ್ಲಿ ಹಾಡು ಕೇಳಲು ಪ್ರಾರಂಭಿಸಿದೆ, ಎಲ್ಲ ಚೈನ್ ಗಳಿಗೆ ಬೀಗ ಜಡಿಯೋಣ ಅಂತಿದ್ದೆ, ಅಣ್ಣ-" ನಾವ್ ಮಾಡ್ಕೊತಿವಿ, ನೀನು ಸುಮ್ನಿರು" ಅಂದ್ರು. ನಾನು ಓಕೆ ಅಂದೆ. ಅಣ್ಣ ಮತ್ತೆ ದೀಪು ಪಾಪ ಎಲ್ಲರ ಲಗೇಜ್ ಸರಿ ಮಾಡಿಟ್ಟರು. ಅಮ್ಮ ಚಪಾತಿ ತಂದಿದ್ದರು, ಎದುರು ಮನೆಯವರು ಚಿತ್ರಾನ್ನ, ಮೊಸ್ರನ್ನ ತಂದಿದ್ರು. ಎಲ್ಲವನ್ನು ಸಕತ್ತಾಗಿ ಲಗಾಯ್ಸಿದೆವು.ಅಲ್ಲಿಗೆ ಊಟ ಅನ್ನೋ ದೊಡ್ಡ ಕಾರ್ಯಕ್ರಮ ಸದ್ದು ಗದ್ದಲದೊಂದಿಗೆ ಶುರುವಾಗಿ, ಶಾಂತವಾಗಿ ಸಾಂಗವಾಗಿ ನೆರವೇರಿತು.

Z : ಗುಡ್.

ನಾನು : ಆದರೆ ನನಗೆ ನಿದ್ದೆ ಮಾಡೋದು ಕಷ್ಟ ಆಗೋಯ್ತು.

Z : ಎ.ಸಿ. ಇತ್ತಲ್ಲ, ಇನ್ನೆಂತ ತೊಂದರೆ ?

ನಾನು : ಅದೇ ತೊಂದರೆ. ಪುಣ್ಯಾತ್ಮ ಟ್ರೈನಿನವ, ರೆಗ್ಯುಲೇಟ್ ಮಾಡ್ಬೇಡ್ವಾ temperature ನ ? cool mode ನಲ್ಲಿ ಎ.ಸಿ. ಹಾಕಿಟ್ಟು ತಾನು ಕೂಲಾಗಿ ಎಸ್ಕೇಪ್ ಆಗಿದಾನೆ. ನಾನು ನಾಲ್ಕು ಬೋಗಿಯಲ್ಲಿ ಹುಡುಕಾಡಿದೆ ಅವನಿಗೆ, ಅವ ನಾಪತ್ತೆ.ಕಡೆಗೆ ಸ್ವೆಟರ್ರು, ಶಾಲು, ಸ್ಕಾರ್ಫು, ಎಲ್ಲ ಹಾಕೊಳ್ಳೋ ಹಾಗೆ ಆಯ್ತು !

Z : ಛೆ !

ನಾನು : ಹು. ಎಲ್ಲಕ್ಕಿಂತಾ ತೊಂದರೆ ಆಗಿದ್ದು ಏನಪ್ಪ ಅಂದ್ರೆ, ನನ್ನ ಅಪರ್ಣನ್ನ ಅಪ್ಪರ್ ಬೆರ್ತ್ ನಲ್ಲಿ ಮಲ್ಗಕ್ಕೆ ಹೇಳಿದ್ದು.

Z : ಹೋ...ಹತ್ತೋದು ಕಷ್ಟ ಆಗಿರತ್ತೆ.

ನಾನು : ಹು. ಬೆರ್ತ್ ಹತ್ತಲು ಇರುವ ಸಪ್ಪೋರ್ಟ್ ಎಲ್ಲ ಮುರ್ದಿರೊ "ಸುವ್ಯವಸ್ಥಿತ" ಬೋಗಿ ಅದು. ನಾವು ದಿಕ್ಕೆಟ್ಟು ಕಂಗಾಲಾಗಿ, ಕಡೆಗೆ ಆಂಜನೇಯನ್ನ ನೆನೆಸಿಕೊಂಡು, ಅವನ ಕೃಪೆಯಿಂದ, ಕೋತಿ ಮರ ಹತ್ತಿದ ಹಾಗೆ ಅಪ್ಪರ್ ಬೆರ್ತ್ ಹತ್ತಿದೆವು.

Z : ಎಹೆಹೆ.retrogressive evolution :)

ನಾನು : ಹೂಂ. ಡಾರ್ವಿನ್ ನ ನೆನೆಸಿಕೊಂಡೆ ನಾನು.

Z : :) ಆಮೇಲೆ ?

ನಾನು : ಒಂದೊಂದು ಘಂಟೆಗೂ ಎಚ್ಚರ ಆಗ್ತಿತ್ತು ನನಗೆ.

Z : ಯಾಕೆ ?

ನಾನು : ನನ್ನ ಫೋನ್ ಹಿರಣ್ಮಯಿ ನ ಯಾರೋ ಕದಿತಾರೆ ಅನ್ನೋ ಭಯ ಹತ್ತಿಕೊಂಡಿತು ನನಗೆ.

Z : ಮೇಲಿನ ಬೆರ್ತ್ ತನಕ ಬಂದು ಫೋನ್ ಕದಿಯೋ ಅಷ್ಟೆಲ್ಲಾ ಕಳ್ಳರು ಶ್ರದ್ಧಾವಂತರಾಗಿರ್ತಾರಾ ?

ನಾನು : ಯಾರಿಗೆ ಗೊತ್ತು ? ಪ್ರತಿಯೊಂದು ಘಂಟೆಗೂ ಏಳು, ಫೋನ್ ಇದೆಯಾ ನೋಡು, ಮಲ್ಕೊ. ಇಷ್ಟೇ ಆಗೋಯ್ತು.

Z : ಪಾಪ.

ನಾನು : ಇದು ಮೊದಲ ದಿನದ ಕಥೆ.

Z : ಮುಂದೆ ?

ನಾನು : ಸೂರ್ಯ ಯಥಾ ಪ್ರಕಾರ ಪೂರ್ವದಲ್ಲಿ ಎದ್ದ ಮಾರನೆಯ ದಿನ.ಆದರೆ, ನಾನು ಸೂರ್ಯನಿಗಿಂತ ಮುಂಚೆನೆ ಎದ್ದಿದ್ದೆ.

Z : ವೆರಿ ಗುಡ್. ಆಮೇಲೆ ?

ನಾನು : Hi Surya! Good morning! Whats up ? ಅಂದೆ.

Z : ಅದಕ್ಕೆ ಅವನೇನಂದ ?

ನಾನು : Hi!Good morning !Well, all is well here, but you be careful when you get down ಅಂದ.

Z : ಆಹ !

ನಾನು :ಹತ್ತೋದು ಹತ್ತಿದ್ದೆ, ಈಗ ಇಳೀಯೋಕೆ ಒದ್ದಾಡಿದೆ.

Z : :)

ನಾನು : ಮತ್ತೆ ಹನುಮಂತನನ್ನ ಪ್ರಾರ್ಥಿಸಿ, ಇಳಿದೆ.ಅಮ್ಮ ಅಣ್ಣ ಎಲ್ಲ ಎದ್ದಿದ್ದರು. ಅಮ್ಮಂಗೆ ವಿಪರೀತ ಗಂಟಲು ನೋವು ಬಂದಿತ್ತು. ಹಾಗಾಗಿ ಅವರು ಮೌನ ವ್ರತ ಮಾಡುತ್ತಿದ್ದರು.

Z :ನೀನು sign language ನಲ್ಲಿ ಮಾತಾಡಿದ್ಯಾ ?

ನಾನು : ಹು. ಅವರೂ ಅದರಲ್ಲೇ ಉತ್ತರಿಸಿದರು.

Z :ಗುಡ್.

ನಾನು : ಹಲ್ಲುಜ್ಜಿ, ಟೀ ಕುಡಿದು, ಪುಸ್ತಕ ತೆಗೆದೆ, ಓದೋಣ ಅಂತ.

Z : ಒಹೊಹೊಹೊಹೊಹೊ.

ನಾನು : ಹೂಂ ! ಒಂದುವರೆ ಚಾಪ್ಟರ್ ಓದಿದ್ದೆ. ಅಮ್ಮ ತಿಂಡಿ ತಿನ್ನೋಣ ಅಂದರು. ಚಪಾತಿ ಸೇವನೆ ನಡೆಯಿತು. ಮತ್ತೆ ಟೀ ಸಮಾರಾಧನೆ. ನಂತರ, ನಿದ್ದೆ.

Z : ಮತ್ತೆ ಓದಲಿಲ್ಲವಾ ?

ನಾನು : ಟ್ರೈನ್ ಸಿಕ್ಕಾಪಟ್ಟೆ shaky ಆಯ್ತು.ನನ್ನ text book font size ಚಿಕ್ಕದು. ಕನ್ನಡಕದ ಪವರ್ರು ಹೆಚ್ಚಾದ್ರೆ ಚೆನ್ನಾಗಿರಲ್ಲ ಅನ್ನಿಸಿತು ನನಗೆ.road humps ಜಾಸ್ತಿ track ನಲ್ಲಿ ಅಂತ ದೀಪು, ನಂದಿನಿ ಮತ್ತು ನಾನು ಆಡಿಕೊಂಡು ನಕ್ಕೆವು. ಮತ್ತೊಂದಿಷ್ಟು ಜೋಕುಗಳು ಮೊಬೈಲಲ್ಲಿ ವಿನಿಮಯಗೊಂಡವು. ಪುಸ್ತಕ ಮುಚ್ಚಿಟ್ಟು ಮಲಗಿದೆ. ಮೂರು ಘಂಟೆಗಳ ಕಾಲ ಸೊಂಪಾದ ನಿದ್ದೆ.

Z : ವೆರಿ ಗುಡ್ !

ನಾನು : ಹಾಂ, ಮಲಗೋ ಮುಂಚೆ, ಇಂಡಿಯಾ ಅಟ್ಲಾಸ್ ತೆಗೆದು, ಸಿಗುತ್ತಿದ್ದ ಸ್ಟೇಷನ್ ಹೆಸರುಗಳನ್ನ ಹುಡುಕುತ್ತಾ, ನಾವೆಲ್ಲಿದ್ದೇವೆ ಅಂತ ಹುಡುಕಿದೆ. ನಾವು ಮಹಾರಾಷ್ಟ್ರದಲ್ಲಿದ್ದೆವು. ಒಂದು ದೊಡ್ಡ ನದಿ ಸಿಕ್ಕಿತು ದಾರಿಯಲ್ಲಿ. ಬಹಳಾ ಚೆನ್ನಾಗಿದೆ ಅಂತೆಲ್ಲಾ ಮಾತಾಡಿಕೊಂಡು ನೋಡಿ ನಮಸ್ಕಾರ ಎಲ್ಲಾ ಮಾಡಿದೆವು. ಆದರೆ ಅದು ಯಾವ ನದಿ ಅಂತ ಗೊತ್ತಾಗಲಿಲ್ಲ. ನಾನು ಅಟ್ಲಾಸ್ ತೆಗೆದು, ನಮ್ಮ ಟ್ರೈನ್ ಅನುಸರಿಸುವ ದಾರಿಯ ರೇಲ್ವೇ ಮ್ಯಾಪ್ ತೆಗೆದು ನೋಡಿದಾಗ ಗೊತ್ತಾಯ್ತು...

Z : ತು...

ನಾನು : ಅದು ಭೀಮಾ ನದಿ ಅಂತ.

Z :ಹೌದಾ ? ಹೆಸರಿಗೆ ತಕ್ಕನಾಗಿದೆಯಾ ?

ನಾನು : ಓಹೋ...ಸಿಕ್ಕಾಪಟ್ಟೆ ಚೆನ್ನಾಗಿ ಸೂಪರ್ರಾಗಿ ಸಕ್ಕತ್ತಾಗಿದೆ.ಏನು ದೊಡ್ಡ ಪಾತ್ರ, ಎಂಥಾ ರಭಸದ ಹರಿವು...

Z : ಹೌದಾ ?

ನಾನು : ಹು. ಆದರೂ ಮಹಾರಾಷ್ಟ್ರದಲ್ಲಿ ಬೆಳೆಗಳು ಕಡಿಮೆ. ಬಿಸಿಲಿನ ಬೇಗೆಯೋ ಏನೋ, ನೆಲದಲ್ಲಿ ಬೆಳೆಗಳಿಗಿಂತ ಬಿರುಕುಗಳು ಹೆಚ್ಚಾಗಿ ಕಂಡವು. ಇದೆಲ್ಲಾ ನೋಡಿ, ತೃಪ್ತಳಾಗಿ, ನಿದ್ದೆ ಮಾಡಿ, ಎದ್ದೆ. ಅಣ್ಣನ blackberryಯಲ್ಲಿ ಈಮೈಲ್ ನೋಡಿದೆ. ಅಂಥಾದ್ದೇನು ಮುಖ್ಯವಾಗಿರಲಿಲ್ಲ ಅಂತ ಸಂತೋಷ ಪಟ್ಟೆ. ಆಮೇಲೆ, ಕರಿಸಿರಿಯಾನ ಕಾದಂಬರಿ ತೆಗೆದೆ, ಓದಿ ಮುಗಿಸಿಯೇ ಬಿಡೋಣ ಅಂತ.

Z : ಒಹ್ಹೊ...text book ಓದಕ್ಕೆ ಆಗ್ಲಿಲ್ಲ, ಇದು ಹೇಗೆ ಆಯ್ತು ?

ನಾನು : ಇದರ ಫಾಂಟ್ ಸೈಜ್ ದಪ್ಪ ಇತ್ತು.

Z : ಕಳ್ಳಿ !

ನಾನು : :)ಕಾದಂಬರಿಯಲ್ಲಿ ಅಹಮದಾನಗರ್ ನ ಉಲ್ಲೇಖ ಬರುತ್ತದೆ. ಕಾದಂಬರಿಯ ಮುಖ್ಯ ಪಾತ್ರಕ್ಕೂ, ಆ ನಗರಕ್ಕೂ ನಿಕಟವಾದ ಸಂಬಂಧ ಇದೆ. ನಾನು ಅಹಮದಾನಗರ್ ದಾಟಿದ ಮೇಲೆ ಆ ಅಧ್ಯಾಯಕ್ಕೆ ಬಂದೆ, ಕೈ ಕೈ ಹಿಸುಕಿಕೊಂಡೆ.

Z : ಒಳ್ಳೇದಾಯ್ತು ಆ ಅಧ್ಯಾಯ ಆಮೇಲೆ ಬಂದದ್ದು. ಇಲ್ಲಾಂದ್ರೆ ನೀನು ಟ್ರೈನ್ ಇಂದ ಇಳಿದು, ಆಟೋ ಹತ್ತಿ, Archeological Survey of India Museum ಗೆ ಹೋಗಿ, ಅವರನ್ನ ನೀನು ಓದಿದ ಕಥೆಯ ಸತ್ಯಾಸತ್ಯತೆಗಳ ಬಗ್ಗೆ interview ಮಾಡಕ್ಕೆ ಹೊರಡ್ತಿನಿ ಅಂತ ಹಠ ಹಿಡಿತಿದ್ದೆ, ಅಮ್ಮ ಅಣ್ಣ ಬೈದಿರೋರು. ಒಂದು ಸೀನ್ ಕ್ರಿಯೇಟ್ ಆಗೋದು ತಪ್ಪಿತು.

ನಾನು : ಎಂಥೋಳೇ ನೀನು ? ಒಂದು ಚೂರು ಕ್ರಿಯೇಟಿವ್ ಮೈಂಡ್ ಇಲ್ಲ ! ಎಂಥಾ ಚಾನ್ಸ್ ಸಿಕ್ಕಿತ್ತು facts confirm ಮಾಡ್ಕೊಳ್ಳೋಕೆ. ಬಿಟ್ಟುಬಿಡಕ್ಕೆ ಆಗತ್ತಾ ? ಮತ್ತೆ ಹೋಗಕ್ಕಾಗತ್ತಾ ಹಂಗೆಲ್ಲಾ ?

Z : ಆಗತ್ತೆ.

ನಾನು : ಹೆಂಗೆ ?

Z : ನೀನು ಈ ಥರ ಕಾದಂಬರಿಗಳನ್ನೆಲ್ಲಾ ಓದಿ ಗುಡ್ಡೆ ಹಾಕು. ಆಮೇಲೆ ಒಂದು ಎತ್ತಿನ ಗಾಡಿಲಿ All India Tour ಮಾಡು. In fact world tour ಮಾಡು.

ನಾನು : ಎತ್ತಿನ ಗಾಡಿ ಯಾಕೆ ?

Z : ದಾರಿ ಮಧ್ಯ ಸಿಗೊ ಕಾಗೆ, ಕುರಿ, ಬೆಕ್ಕು ನಾಯಿದೆಲ್ಲಾ ಫೋಟೋ ಬೇರೆ ತೆಗಿಬೇಕಲ್ಲಾ ನೀನು. ಸಾಲದು ಅಂತ ಪ್ರತಿಯೊಂದು ಹಳ್ಳಿಯ ಇತಿಹಾಸನೆಲ್ಲಾ ದಾಖಲೆ ಮಾಡ್ಬೇಕಲ್ಲಾ.ಜಾನಪದ ಕಲೆಗಳ ಅಧ್ಯಯನ, ಅಂಥಿಂಥವೆಲ್ಲಾ ಮಾಡ್ಬೇಕಲ್ಲ. ಎತ್ತಿನ ಗಾಡೀನೇ ಸರಿಯಾದ ವಾಹನ ನಿನಗೆ.

ನಾನು :ಎಷ್ಟ್ ಆಡ್ಕೊತಿಯೋ ಆಡ್ಕೊ. ನನಗೂ ಒಂದು ಕಾಲ ಬರತ್ತೆ.

Z : ಬರಲಿ.

ನಾನು : ಟೀ ಕುಡಿಯುತ್ತಾ ಕಾದಂಬರಿ ಓದಲು ಪ್ರಾರಂಭಿಸಿದೆನಾ...ರಾತ್ರಿ ಆಗಿದ್ದೇ ಗೊತ್ತಾಗಲಿಲ್ಲ. ಊಟ ಆರ್ಡರ್ ಮಾಡಿ, ಅದು ಚೆನ್ನಾಗಿರದೆ, ಉದರ ನಿಮಿತ್ತಂ ಎಂದು ಸೇರಿದಷ್ಟು ತಿಂದು, ಮತ್ತೆ ಕಾದಂಬರಿ ಒಳಗೆ ಧುಮುಕಿದೆ. ಆಮೇಲೆ, ತಿರುಪತಿ ವೆಂಕಟರಮಣನ ವಿಗ್ರಹದ ಸುತ್ತ ಇರುವ ವಿವಾದದ ಬಗ್ಗೆ ಆ ಕಾದಂಬರಿಯಲ್ಲಿ ಬರೆದಿರೋದನ್ನ ಜೋರಾಗಿ ಓದುತ್ತಾ ನಾನು ಆಶ್ಚರ್ಯ ವ್ಯಕ್ತಪಡಿಸಿದೆ. ಅಮ್ಮ-"ನಂಗೆ ಗೊತ್ತಿತ್ತು ಇದು" ಅಂತ ಹೇಳಿ ಸಿಂಗಲ್ ಲೈನಲ್ಲಿ ಶಾಕ್ ಕೊಟ್ಟರು.

Z : :D

ನಾನು : ಆ ಕಾದಂಬರಿಯನ್ನು ಮುಗಿಸಲು ಆಗಲಿಲ್ಲ. ಇಪ್ಪತ್ತು ಪೇಜುಗಳಿದ್ದವು. ಮಾರನೆಯ ದಿನ ಬೆಳಿಗ್ಗೆ ಆರು ಮುಕ್ಕಾಲಿಗೆ ನಾವು ಆಗ್ರ ತಲುಪಲಿದ್ದೆವು.ಅದಕ್ಕೆ ಐದಕ್ಕೆ ಅಲಾರಂ ಇಟ್ಟು ಮತ್ತೆ ಕಷ್ಟಪಟ್ಟು ಮೇಲಕ್ಕೆ ಹತ್ತಿ, ಮಲಗಿದೆ. ಈ ರಾತ್ರಿಯೂ ನಿದ್ದೆ ಇಲ್ಲ.

Z : ಅದೇ ಭಯಾನಾ ?

ನಾನು : ಹು. ಜೊತೆಗೆ ಇನ್ನೊಂದು. ಅಲಾರಂ ಯಾಕೆ ಹೊಡಿತಿಲ್ಲಾ ಅಂತ.ಫೋನ್ ಕಳೆದು ಹೋಯ್ತಾ ? ಕೆಟ್ಟು ಹೋಯ್ತಾ ಅಂತೆಲ್ಲಾ ಭಯ.

Z : ಯಪ್ಪಾ !

ನಾನು : ನಾಲ್ಕು ಮುಕ್ಕಾಲಿಗೆ ಎಚ್ಚರ ಆಯ್ತು. ಕಾಲು ಘಂಟೆ ಕಣ್ಣು ಪಿಳಿ ಪಿಳಿ ಮಿಟುಕಿಸಿ,ಅಲಾರಂ ನ ಆಲಿಸಿ, ಆರಿಸಿ, ಮೇಲಿಂದ ಕೆಳಗೆ ಬೇಗನೆ ಇಳಿದು, fresh ಆಗಿ, ಲಗೇಜ್ ಎಲ್ಲಾ ಎತ್ತಿಟ್ಟು, ರೆಡಿಯಾಗುವ ಅಷ್ಟೊತ್ತಿಗೆ ಆರುವರೆ. ಇನ್ನೊಂದು ಸರ್ತಿ ಟೀ ಕುಡಿಯುವ ಅಷ್ಟೊತ್ತಿಗೆ ಆಗ್ರಾ ಬಂದೇ ಬಿಟ್ಟಿತು. ನೂಕುನುಗ್ಗಲುಗಳನ್ನೆಲ್ಲಾ ನಿಭಾಯಿಸಿ,ನಾನು ಅಪರ್ಣ ದೀಪು ನಂದಿನಿ ಇಳಿದು,ಮಿಕ್ಕವರನ್ನೆಲ್ಲಾ ಇಳಿಸಿಕೊಂಡು ಲಗೇಜ್ ಇಳಿಸಿದೆವು.

Z : ಅಬ್ಬಾ !

ನಾನು : ನಿನಗೆ ಕೇಳಿ ಇಷ್ಟು ಸುಸ್ತು. ನನ್ನ ಕಥೆ ಇನ್ನೇನಾಗಿರಬೇಡ ?

Z : ಅದು ಕರೆಕ್ಟು. ಮುಂದೆ ?

ನಾನು :ಸಧ್ಯಕ್ಕೆ ಇಷ್ಟು ಸಾಕು. ಮುಂದಿನ ಕಥೆ ಆಮೇಲೆ.

3 comments:

ವಿ.ರಾ.ಹೆ. said...

ಎಹೆಹೆ!

ಪಾಪ, ಈ ಸಿಟಿಯವ್ಕೆ ಹಾಲು ಅಂದ್ರೆ ಪ್ಯಾಕೆಟ್ ಹಾಲೊಂದೇ ಗೊತ್ತಿರೋದು.;)

Rohini Joshi said...

neenu adenenu Tea bagge bardidiyo adanna naanu coffee bagge heLtini...nange Tea sariyaagi nange bekaadange irbeku..so naanu yelle horag hodru coffee~ne kuDiyodu hegidru sumne oLaghogatte:D

kate munduvareyali bega...

PaLa said...

ಚೆನ್ನಾಗಿದೆ :)

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...