Thursday, June 3, 2010

ಉತ್ತರಾಯಣ - ಪ್ರಸ್ತಾವನೆ.

Z : ಇದು ಗ್ಯಾರಂಟೀ ಒಂದು ಗ್ರಂಥ ಆಗತ್ತೆ ಅಂತ ಗೊತ್ತಾಗಿ, ಪ್ರಸ್ತಾವನೆ, ವಂದನಾರ್ಪಣೆ ಎಲ್ಲಾ ಹಾಕ್ತಿದಿಯಾ ?

ನಾನು : ಇನ್ನು ಶುರುವೇ ಮಾಡಿಲ್ಲ ನಾನು, ಆಗ್ಲೆ ವಂದನಾರ್ಪಣೆಗೆ ಹೋಗ್ಬಿಟ್ಳು...

Z :ಇಲ್ಲಾ....ಸುಮ್ಮನೆ ಹೇಳಿದೆ ಅಷ್ಟೆ.ಸರಿ ಈಗ ಮೊದಲು ಪ್ರಾರ್ಥನೆ ಮಾಡು.

ನಾನು : ನಂ ನ್ಯಾಷನಲ್ ಕಾಲೇಜ್ ಪ್ರಾರ್ಥನೆ ಹಾಡ್ತಿನಿ.

Z : ಜೈ.

ನಾನು :ಯಂಬ್ರಹ್ಮಾವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಸ್ತವೈಃ
ವೇದೈಃಸಾಂಗಪದಕ್ರಮೋಪನಿಷದೈಃ ಗಾಯಂತಿ ಯಂ ಸಾಮಗಾ:|
ಧ್ಯಾನಾವಸ್ಥಿತತದ್ಗತೇನಮನಸಾ ಪಶ್ಯಂತಿ ಯಮ್ ಯೋಗಿನಃ
ಯಸ್ಯಾಂತಂ ನಮಿದಃ ಸುರಾಸುರಗಣಾಃ ದೇವಾಯ ತಸ್ಮೈ ನಮಃ||

ಇಷ್ಟು ಸಾಕು.

Z : ಸರಿ. ಈಗ ಕಥೆ ಶುರು ಮಾಡಮ್ಮ.

ನಾನು :ಕಥೆ ೨೦೧೦ ಫೆಬ್ರುವರಿಯಲ್ಲಿ ಪ್ರಾರಂಭ ಆಗತ್ತೆ. ನಮ್ಮ ಎದುರು ಮನೆಯವರಿಗೆ ಯಾರೋ ನಾರ್ತ್ ಇಂಡಿಯಾ ಟ್ರಿಪ್ಪಿನ ಬ್ರೋಷರ್ ತಂದೊಪ್ಪಿಸುತ್ತಾರೆ. ಅರೆಕ್ಷಣದಲ್ಲಿ ಅದು ನಮ್ಮ ಮನೆ ತಲುಪುತ್ತದೆ. ಹೋಂ ಮಿನಿಸ್ಟರ್ ಗಳು ಒಪ್ಪಿ ಹೈ ಕಮಾಂಡಿಗೆ ಮನವಿ ಸಲ್ಲಿಸಿಯೇ ಬಿಡುತ್ತಾರೆ. ಎದುರು ಮನೆಯ ಹೈ ಕಮಾಂಡ್ ಸಮ್ಮತಿಸುತ್ತದೆ, ನಮ್ಮನೆ ಹೈ ಕಮಾಂಡ್ ಸಾರಾಸಗಟಾಗಿ ನಿರಾಕರಿಸದೇ "request under process"ಎಂದು ಹೇಳಿ ಯೋಚನಾಮಗ್ನವಾಗುತ್ತದೆ.

Z :Quite natural. 22 ದಿನ ಅಣ್ಣ ಆಫೀಸು ಬಿಟ್ಟು ಬರೋದು ಸಾಧ್ಯವೇ ಇರ್ಲಿಲ್ಲ.

ನಾನು :ಹೂಂ. ಹತ್ತು ದಿನಗಳ ಸೌತ್ ಇಂಡಿಯಾ ಟೂರಿಗೆ ಅಣ್ಣನ ಬ್ರೈನ್ "ಯೆಸ್" ಅನ್ನಲು ಒಂದು ಕೋಟಿ ಸರ್ತಿ ಯೋಚನೆ ಮಾಡಿತ್ತು. ಅಣ್ಣ ಒಪ್ಪಿದ ಮೇಲೆ ನನ್ನ ಹತ್ತಿರ ಮಾತಾಡಲು ಯೋಜನೆ ಹಾಕಿದ್ದ ಮಿನಿಸ್ಟ್ರಿ ನನಗೆ ವಿಷಯವನ್ನೇ ತಿಳಿಸಿರಲಿಲ್ಲ. ನಾನು ಜೂನ್ ವರೆಗೂ ಎಲ್ಲಾ ದಿನಗಳನ್ನು ನನ್ನ ಕೆಲಸಕ್ಕೆ ತಕ್ಕನಾಗಿ ಫಿಕ್ಸ್ ಮಾಡಿಟ್ಟುಕೊಳ್ಳುತ್ತಿದ್ದೆ, ಇದ್ಯಾವುದರ ಪರಿವೆಯೇ ಇಲ್ಲದೇ.

Z : ಪಾಪ.

ನಾನು :ಹೈ ಕಮಾಂಡು ಈ ಸರ್ತಿ ಇಪ್ಪತ್ತು ಕೋಟಿ ಸರ್ತಿ ಯೋಚನೆ ಮಾಡಿರಬಹುದು ಅಂತ ನನ್ನ ಅಂದಾಜು. ಕಡೆಗೂ ಹೈ ಕಮಾಂಡ್ ಓಕೆ ಅಂದಿದ್ದು ಎರಡು ಮನೆಗೂ ಸಂತೋಷವಾಯ್ತು. ನನಗೆ ವಿಷಯ ಕೇಳಿ ಆಶ್ಚರ್ಯವಾಯ್ತು.

Z : ಅದು ಹೇಗೆ ಅಣ್ಣ ಹೂ ಅಂದರು ಅಂತನಾ ?

ನಾನು :ಅದೊಂದು. ಎರಡನೆಯ ಮುಖ್ಯ ವಿಷಯ ಏನಂದರೆ,ನನಗೆ ಇವರು ಅಣ್ಣ ಹೂ ಅಂದ ಮೇಲೆ ಯಾಕೆ ತಿಳಿಸಿದರು ಅನ್ನೋದು.

Z : ನೀನ್ ಏನ್ ಮಹಾ, ಕೇಳಿದ ತಕ್ಷಣ ಹು ಅಂತಿಯಾ ಅಂತ ಸುಮ್ಮನಾದ್ರೂ ಅನ್ಸತ್ತೆ. ನಿನಗೆ ವಿಷಯ ಹೇಳಿದಾಗ ನಿನ್ನ ಪ್ರತಿಕ್ರಿಯೆ ಹೇಗಿತ್ತು ?

ನಾನು :ಸಿಂಗಲ್ ಲೈನ್ ನಲ್ಲಿ ಉತ್ತರ ಕೊಟ್ಟೆ. ನಾನು ಬರೋದಕ್ಕೆ ಆಗಲ್ಲ, ನೀವುಗಳು ಹೋಗಿ ಬನ್ನಿ ಅಂತ.

Z : ನಿನ್ನನ್ನ ಏನು ಅಂದುಕೊಂಡುಬಿಟ್ಟಿದ್ದೀಯಾ ನೀನು ?

ನಾನು :ಯಾಕಮ್ಮ ?

Z :ಈ ವಯಸ್ಸಲ್ಲಿ ಬದ್ರಿ ಕೇದಾರಕ್ಕೆ ಹೋದರೆ ಎಷ್ಟು ಪುಣ್ಯ ಏನು ಕಥೆ. ಕೆಲಸವನ್ನೆಲ್ಲಾ ಬದಿಗಿಟ್ಟು ಶ್ರದ್ಧೆಯಿಂದ ಹೋಗಿ ಮಜಾ ಮಾಡಿಕೊಂಡು ಭಗವಂತನನ್ನು ನೋಡಿಕೊಂಡು ಬರೋದನ್ನ ಬಿಟ್ಟು ದೊಡ್ಡ ಹೀರೋಯಿನ್ ಥರ ಜಂಭ ತೋರ್ಸಿದಾಳೆ. ಬ್ಯುಸಿ, ಟೈಮಿಲ್ಲ ಅಂತೆಲ್ಲಾ. ಅಣ್ಣನಿಗಿಂತಲೂ ಬ್ಯುಸಿ ನಾ ನೀನು ?

ನಾನು : I dont know if I may say that, but I was definitely not free.ಜೂನ್ ಮೊದಲನೆಯ ತಾರೀಖು ಎಮ್.ಫಿಲ್ ಎಕ್ಸಾಮು. ನನ್ನ ಎಮ್.ಫಿಲ್ ಪ್ರಾಜೆಕ್ಟು ಕಳೆದ ಆರು ತಿಂಗಳಿನಿಂದ ಸಿಕ್ಕಲ್ಲೆಲ್ಲಾ ಅಲೆದಾಡಿ ಆಗಷ್ಟೆ ನೆಲೆ ಅಂತ ಒಂದು ಕಂಡುಕೊಳ್ಳತೊಡಗಿತ್ತು.ಮೇ ತಿಂಗಳಿನಲ್ಲಿ ಅದು ತನ್ನ ಪ್ರೌಢಾವಸ್ಥೆಗೆ ತಲುಪಲಿತ್ತು. ಸಾಲದ್ದಕ್ಕೆ ಡಿಗ್ರಿ ಮಕ್ಕಳ ಎಕ್ಸಾಮು, ನಮ್ಮ invigilation. ನನಗೆ ಗೊತ್ತಿತ್ತು ಮಿನಿಮಮ್ ಎಂಟು ಮ್ಯಾಕ್ಸಿಮಮ್ ಹತ್ತು ಡ್ಯೂಟಿಗಳು ಬರತ್ವೆ ಅಂತ,ಯುನಿವರ್ಸಿಟಿಯ ರೂಲ್ಸ್ ಪ್ರಕಾರ ನಾವು ಅದಕ್ಕೆ ಗೈರುಹಾಜರಿ ಆಗುವಂತಿಲ್ಲ.ಇವೆಲ್ಲ ಮೇ ತಿಂಗಳಲ್ಲೇ ಇದ್ದವು. ಇಷ್ಟನ್ನು ಇಟ್ಟುಕೊಂಡು ನಾನು ಹೆಂಗೆ ಊರಿಗೆ ಹೋಗೋದು ?

Z : ಇದು ಸ್ವಲ್ಪ ಕಷ್ಟನೆ.

ನಾನು :ಈಗ ಗೊತ್ತಾಯ್ತ ? ನಾನು ಏನು ಜಂಭ ಕೊಚ್ಚುತ್ತಿರಲಿಲ್ಲ, ವಾಸ್ತವವನ್ನೇ ಹೇಳುತ್ತಿದ್ದೆ.

ಅಣ್ಣ: " ನಿಮ್ಮ ಪ್ರಿನ್ಸಿಪಲ್ ಹತ್ರ ನಾನು ಅಮ್ಮ ಬಂದು ಮಾತಾಡುತ್ತೇವೆ" ಅಂದರು. ನಾನು "ಅಣ್ಣ, ನಾನೀಗ ಸ್ಟೂಡೆಂಟ್ ಅಲ್ಲ, ಲೆಕ್ಚರರ್ರು.Students can bunk, lecturers can't."ಅಂದೆ. ಅಣ್ಣನಿಗೆ ಆಗಲೇ ಪರಿಸ್ಥಿತಿಯ ಅರಿವಾಗಿದ್ದು.

ಅಮ್ಮ: "ನಿನ್ನನ್ನೊಬ್ಬಳೇ ಎಲ್ಲಿ ಬಿಟ್ಟು ಹೋಗೋದು ? ಬೇರೆ ಯಾರು ಬೆಂಗಳೂರಿನಲ್ಲಿರೊಲ್ಲ" ಅಂದರು.

"ನಾನು ಮಗುವಲ್ಲ. ಒಬ್ಬಳೇ ಇರಬಲ್ಲೆ".

ಅಮ್ಮ:"ನೀನು ಮಗುವಲ್ಲ ಅನ್ನೋದಕ್ಕೇ ಭಯ ಆಗಿರೋದು ನಮಗೆ."

ನಾನು: "ಕರ್ಮಕಾಂಡ.ನೀವು ಹೋಗಿಬನ್ನಿ, ನಾನು ಬರೊಲ್ಲ."

ನಾನು :ಇವರು ಬೇರೆ ದಾರಿಯಿಲ್ಲದೇ ಒಪ್ಪಿದರು. ಅಣ್ಣ, ಅಪರ್ಣ, ಅಮ್ಮ, ಎದಿರು ಮನೆಯ ಎಂಟು ಜನ ಹನ್ಸಾ ಟ್ರಾವೆಲ್ಸಿನಲ್ಲಿ ಇಪ್ಪತ್ತೆರಡು ದಿನದ ತೀರ್ಥ ಯಾತ್ರೆ ಪ್ಯಾಕೇಜಿಗೆ ಬುಕ್ ಮಾಡಿಸಿದರು.

Z :ಮತ್ತೆ ನೀನು ಹೆಂಗೆ ಸೇರ್ಕೊಂಡೆ ?ಯಾರಾದ್ರು ಬರ್ಲಿಲ್ವಾ ?

ನಾನು :ಎಲ್ಲರೂ ಬಂದ್ರು. ಫೆಬ್ರವರಿಯಲ್ಲಿ ಭೀಕರವಾಗಿದ್ದ ನನ್ನ ದಿನಚರಿ ಮಾರ್ಚಲ್ಲಿ ಬ್ಯುಸಿಯ ತುತ್ತ ತುದಿಯನ್ನು ತಲುಪಿತು. ನಮ್ಮ ಗೈಡು ಅಮೇರಿಕಕ್ಕೆ ಹೊರಡಲನುವಾದರು, ಕೋಗೈಡು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು.ಮಾರ್ಚಿಯ ಕಡೆಯಲ್ಲಿ ಆಸ್ಪತ್ರೆಗೆ ದಾಖಲಾದ ನನ್ನ ಕೋಗೈಡು ಮೇ ಕಡೆಯವರೆಗೂ ಬೆಡ್ ರೆಸ್ಟ್ ನಲ್ಲಿರಬೇಕಾಗಿಬಂತು. ನನ್ನ ಗೈಡ್ ಏಪ್ರಿಲ್ ನಲ್ಲಿ ಹೊರಟು ಜೂನ್ ನಲ್ಲಿ ಬರುವವರಿದ್ದರು. ಅವರು ಬರುವವರೆಗೂ ಪರೀಕ್ಷೆಯಿಲ್ಲ ಅಂತ ಖಾತ್ರಿಯಾಯ್ತು. ನಾನು ನಮ್ಮಮ್ಮನಿಗೆ ಸಾಂಗವಾಗಿ ಇವೆಲ್ಲ ವಿಷಯ ತಿಳಿಸಿದೆ.ಅಮ್ಮ ಟ್ರಾವೆಲ್ಸಿನವರಿಗೆ ಫೋನ್ ಮಾಡಿ ಇನ್ನೊಂದು ಸೀಟ್ ಸಿಗಬಲ್ಲುದೇ ಎಂದು ಕೇಳಲು, ನೀವು ನಾಳೆ ಸಾಯಂಕಾಲದೊಳಗೆ ನಮಗೆ ಹೇಳಿದರೆ ನಾವು ಯೋಚಿಸಬಹುದು ಎಂದರು. ನಮ್ಮಮ್ಮ ನನಗೆ ಬಲವಂತ ಮಾಡಲು ಸಜ್ಜಾದರು. "ನೀನಿಲ್ಲದೇ ಇದ್ದರೆ ನಮ್ಮ ಗತಿಯೇನು? ಹಿಂದಿ ನಿನಗೊಬ್ಬಳಿಗೇನೆ ಬರೋದು ನಮ್ಮನೇಲಿ. ನನಗಂತೂ ನಿನ್ನ ಬಿಟ್ಟು ಹೋದರೆ ಖಂಡಿತಾ ಮನಶ್ಶಾಂತಿ ಇರಲ್ಲ.ಬಂದು ಬಿಡು"ಅಂತೆಲ್ಲಾ ಟಿಪಿಕಲ್ ಅಮ್ಮಂದಿರ ತರಹ ಎಮೋಷನಲ್ ಆದರು. ನಾನು ನಮ್ಮ ಎಚ್. ಓ.ಡಿ ಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಅವರು ಮಾರನೆಯ ದಿನ ಪ್ರಿನ್ಸಿಪಾಲರ ಬಳಿ ಮಾತನಾಡೆಂದು ಹೇಳಿದರು.

Z : ಇಷ್ಟೆಲ್ಲಾ ಆಯ್ತಾ ?

ನಾನು :ಇದಿನ್ನೂ ಪ್ರಾರಂಭ. ಮುಂದೆ ಕಥೆ ಕೇಳು. ಪ್ರಿನ್ಸಿಪಾಲ್ ಸರ್ invigilation slot exchange ಗೆ ಎಸ್ ಅಂದರು. ತಕ್ಷಣ ಒಂದಿಷ್ಟು ಪತ್ರಗಳ ಮೂಲಕ ಎಕ್ಸಾಂ ಕೆಲಸದ ತಲೆನೋವು ತೀರಿತು. ನಮ್ಮ ಗೈಡ್ ಮತ್ತು ಕೋಗೈಡ್ ಗೆ ವಿಷಯ ತಿಳಿಸಲು ಅವರು ಒಂದೇ ಏಟಿಗೆ ಎಸ್ ಅಂದುಬಿಟ್ಟರು.ಅಮ್ಮ ನನಗೆ ಹೋಗುವಾಗ ಅವರೊಟ್ಟಿಗೆ ಟ್ರೈನು, ವಾಪಸ್ ಬರ್ತಾ ಎಮ್.ಫಿಲ್ ಎಕ್ಸಾಮಿಗೆ ಪ್ರೆಪೇರ್ ಆಗಬೇಕು ಅಂತ ಫ್ಲೈಟಿಗೆ ಬುಕ್ ಮಾಡಿಸಿಯೇ ಬಿಟ್ಟರು. ನಾನು ಜೈ ಕೇದಾರ್ ನಾಥ್ ಕೀ ಅಂತ ಹೊರಡಲನುವಾದೆ.

Z : :)

ನಾನು :ಆದರೆ ಹೊರಡೋ ದಿನ ಸಿಕ್ಕಾಪಟ್ಟೆ ಟೆನ್ಷನ್ನು.ಇನ್ವಿಜಿಲೇಷನ್ ಮುಗಿಸಿದ ತಕ್ಷಣ ನಾನು ಟಾಟಾ ಇನ್ಸ್ಟಿಟ್ಯೂಟ್ ಗೆ ಭೇಟಿ ನೀಡಬೇಕಿತ್ತು. ಸಾಲದ್ದಕ್ಕೆ ಲಾಸ್ಟ್ ಮಿನಿಟ್ ಶಾಪಿಂಗು.ಟ್ರೈನ್ ಇದ್ದದ್ದು ಏಳು ಇಪ್ಪತ್ತಕ್ಕೆ. ನಾವು ಸ್ಟೇಷನ್ ನಲ್ಲಿ ಇರಬೇಕಿದ್ದಿದ್ದು ಆರುವರೆಗೆ. ಮನೆ ಬಿಡಬೇಕಿದ್ದಿದ್ದು ಐದಕ್ಕೆ. ನಾನು ಬಂದಿದ್ದು ನಾಕುವರೆಗೆ.

Z : ಇದು ವಿಪರೀತ ಅತಿಯಾಯ್ತು.

ನಾನು :I couldn't help it. I just couldn't help it.

Z : ಸರಿ. ಹೇಳಿದ್ದನ್ನೇ ಮತ್ತೆ ಹೇಳದೆ ಕಥೆ ಮುಂದುವರೆಸು.

ನಾನು :ಮನೆಗೆ ಬಂದ ಮೇಲೆ ನನಗೆ ಜ್ಞಾನೋದಯವಾದ ಮುಖ್ಯ ವಿಷಯ ಏನಪ್ಪ ಅಂದರೆ, ಬಟ್ಟೆಗಳೆಲ್ಲ ಅರ್ಧ ಪ್ಯಾಕ್ ಆಗಿದ್ದವು, ಪುಸ್ತಕಗಳು ಪ್ಯಾಕೇ ಆಗಿರಲಿಲ್ಲ.

Z :ಶಭಾಶ್. ಆಮೇಲೆ ?

ನಾನು :ಎಮ್.ಫಿಲ್ ನೋಟ್ಸ್ ಇದ್ದ ಫೈಲನ್ನ ಬ್ಯಾಗ್ ಪ್ಯಾಕ್ ಗೆ ಸೇರಿಸಿ ಗ್ರಂಥಗಳನೆಲ್ಲಾ ಸೂಟ್ ಕೇಸಿಗೆ ಹಾಕಿದೆ. ಅಣ್ಣ-" ಟ್ರೈನ್ ಸ್ವಲ್ಪ ದೊಡ್ಡದಾಗಿದ್ದಿದ್ದರೆ ಕಪಾಟನ್ನೇ ತರ್ತಿದ್ಲು ಇವ್ಳು" ಅಂದ್ರು.

Z : ತಮ್ಮ ಪ್ರತಿಕ್ರಿಯೆ ?

ನಾನು :ಮೌನ.

Z : ನಂಗೊತ್ತಿಲ್ವಾ.ಮುಂದೆ ?

ನಾನು :ಬಟ್ಟೆಗಳನ್ನೆಲ್ಲಾ ಸರೀಗೆ ಇಟ್ಟುಕೊಳ್ಳೋ ಅಷ್ಟೊತ್ತರಲ್ಲಿ ಐದು ಹತ್ತು.ಎಲ್ಲ ದೇವರಿಗೂ ಒಂದೊಂದು ನಮಸ್ಕಾರ ಹಾಕಿದೆ.ಐದು ಹನ್ನೊಂದು. ಅಣ್ಣ ಲ್ಯಾಪ್ ಟಾಪ್ ತರಲೇಕೂಡದೆಂದು ಹೇಳಿಬಿಟ್ಟರು.ಐದು ಹನ್ನೆರಡು.

Z : ನಿನ್ನ ಕೈಯೇ ಮುರಿದುಹೋದ ಹಾಗಾಗಿರತ್ತೆ.

ನಾನು : ಅಲ್ವಾ ಮತ್ತೆ ! ಅಣ್ಣ- black berry ಇದೆ, adjust ಮಾಡ್ಕೊ ಅಂದ್ರು.ನಾನು ಒಪ್ಕೊಂಡೆ.ಐದು ಹನಿನಾಲ್ಕು.

ಅಮ್ಮ ಐದು ಹದಿನೈದಕ್ಕೆ ಮನೆಯ ಬೀಗ ಹಾಕಿದರು. ಐದು ಹದಿನೈದು ನಲವತ್ತೈದನೆಯ ಸೆಕೆಂಡಿಗೆ ನಮ್ಮ ಗಾಡಿ ಸ್ಟೇಷನ್ಗೆ ಹೊರಟಿತು,ಅಣ್ಣನ ಸಾರಥ್ಯದಲ್ಲಿ.

ನಾವು ಸ್ಟೇಷನ್ ತಲುಪಿದಾಗ ಆರು ಇಪ್ಪತ್ತಿನ ಆಸುಪಾಸು. ಅಣ್ಣ ಗಾಡಿ ನಿಲ್ಲಿಸಿ ಡ್ರೈವರ್ ಅಂಕಲ್ ಗೆ ಗಾಡಿ ತೆಗೆದುಕೊಂಡು ಹೋಗಲು ಹೇಳಿದ ಮೇಲೆ ಟ್ರೈನ್ ಹುಡುಕುವ ಕೆಲಸಕ್ಕೆ ಇಳಿದೆವು.ಮೊದಲನೆಯ ಪ್ಲಾಟ್ ಫಾರ್ಮ್ ನಲ್ಲಿ ಟ್ರೈನ್ ನಿಂತಿತ್ತು. ಬೋಗಿ ಹುಡುಕುವ ಹೊತ್ತಿಗೆ ಅರ್ಧ ಶಕ್ತಿ ಹೋಗಿತ್ತು, ಕಾರಣ ನಮ್ಮಗಳ ಲಗೇಜು !

Z : ಎಹೆಹೆಹ್ಹೆ...ಅರ್ಧ ಮನೆ ಪ್ಯಾಕ್ ಮಾಡಿದ್ರೆ ಇನ್ನೇನಾಗತ್ತೆ.

ನಾನು : ಏನಿಲ್ಲ. ನಮ್ಮ ಲಗೇಜು ಎಲ್ಲರಿಗಿಂತ ಕಡಿಮೆ. ಎಲ್ಲರು ಕಿಟ್ ಬ್ಯಾಗ್ ಗಳನ್ನು ತಂದಿದ್ದರು, ತಲೆಗೆ ಎರಡರ ಲೆಖ್ಖದಲ್ಲಿ.ನಾವು ಎರಡು ಕಿಟ್ ಬ್ಯಾಗ್ = ಒಂದು ಸೂಟ್ಕೇಸ್ ಎಂಬ ಸಮೀಕಣ ಉಪಯೋಗಿಸಿ ತಲೆಗೆ ಒಂದು ಸೂಟ್ಕೇಸ್ ತಂದಿದ್ವಿ. ನನ್ನದು ಅಮ್ಮನದ್ದು ಒಂದು ಬ್ಯಾಗ್ ಪ್ಯಾಕ್ ಮತ್ತು ವ್ಯಾನಿಟಿ ಬ್ಯಾಗ್ respectively.ಅಷ್ಟೇ.

Z : ಸಾಲ್ದಾ ?

ನಾನು :ಸಾಕು.ಜೈ ಗಣೇಶ ಅಂತ ಎಲ್ಲರೂ ಟ್ರೈನ್ ಹತ್ತಿದೆವು. ಅವರೆಲ್ಲಾ ಒಂದು ಕಡೆ, ನಾನೊಬ್ಬಳೇ ಒಂದುಕಡೆ.

Z :ಅದು ಯಾಕೆ ?

ನಾನು :ಲಾಸ್ಟ್ ನಲ್ಲಿ ಅಲ್ವಾ ನನ್ನ ರೆಸರ್ವೇಷನ್ ಆಗಿದ್ದು. ಟಿಕೆಟ್ ವೈಟಿಂಗ್ ಲಿಸ್ಟ್ ನಲ್ಲಿತ್ತು. ನಾನು ಸ್ಟೇಷನ್ ತಲುಪುವ ಹೊತ್ತಿಗೆ ಪುಣ್ಯಕ್ಕೆ ಕನ್ಫರ್ಮ್ ಆಗಿತ್ತು. ಅಮ್ಮ -"ಅಣ್ಣನ ಅಲ್ಲಿಗೆ ಕಳಿಸಿ ನೀನು ನಮ್ಮ ಜೊತೆಗೆ ಬಾ. ಒಬ್ಬೊಬ್ಬಳೇ ಎಲ್ಲೆಲ್ಲೋ ಇರ್ಬೇಡ."ಅಂದರು.

Z : ನೀನು ದುರುಗುಟ್ಟಿಕೊಂಡು ನೋಡಿರ್ತ್ಯ.

ನಾನು :ಹು.ಒಂದು ಚಾನ್ಸ್ ಸಿಕ್ಕಿತ್ತು.

Z : ಏನಕ್ಕೆ ?

ನಾನು : ದೀರ್ಘಾಲೋಚನೆ ಮತ್ತು ಆತ್ಮಾವಲೋಕನಕ್ಕೆ.

Z :cough cough cough....ಈ ಥರ ಎಲ್ಲ ಶಾಕ್ ಕೊಡ್ಬೇಡ. ಎಮ್.ಫಿಲ್ ಗೆ ಓದಕ್ಕೆ ಅನ್ನು, ನಂಬ್ತಿನಿ.

ನಾನು : actually ಅದಕ್ಕೇನೆ. ನಾನು ನನ್ನ ಸೀಟಿನಲ್ಲಿ ಕುಳಿತ ತಕ್ಷಣ "ಅಲ್ಲಾಹ್" ಅಂತ ಉದ್ಗರಿಸಿದೆ. ಯಾಕೆ ಅಂತ ಗೊತ್ತಿಲ್ಲ.

Z : ಹೋಗ್ತಿರೋದು ಆಗ್ರಾ ಗೆ ಅಂತ ಇಲ್ಲಿಂದಲೇ ಪ್ರಾಕ್ಟೀಸಾ ?ಕಳ್ಳಿ !

ನಾನು : ಹೇ ನನಗೆ ನಿಜವಾಗಲೂ ಗೊತ್ತಿಲ್ಲ ಹಾಗ್ ಯಾಕೆ ಅಂದೆ ಅಂತ. ಅದಾದ ಎರಡು ನಿಮಿಷಕ್ಕೆ, "ಮೇಡಮ್, ನೀವು ಸೀಟ್ ನಂಬರ್ ೪೩ ಗೆ ಹೋಗಿ ನಮಗೆ ಈ ಸೀಟ್ ಕೊಡ್ತಿರಾ? ನನ್ನ ಹೆಂಡತಿ ಇಲ್ಲಿ ಬರ್ತಾಳೆ, ನಾನು ಅವಳು ಬೇರೆ ಆಗೋಗಿದಿವಿ" ಅಂತ ಒಬ್ಬರು ವೃದ್ಧರು ಬಂದು ಕೇಳಿಕೊಂಡರು. ನಾನು ಓಕೆ ಅಂದು ಲಗೇಜ್ ತಗೊಂಡು ಸೀಟ್ ನಂಬರ್ ೪೩ ಹತ್ರ ಬಂದು ನೋಡ್ತಿನಿ, ನಮ್ಮನೆ gang !

Z : :) :) :) :)

ನಾನು : ಲಕ್ಷ್ಮೀ ಬಂದ್ಲು ಅಂತ ಖಷಿ ಪಟ್ಕೊಂಡು ಲಗೇಜ್ ಇಡುವಷ್ಟರಲ್ಲಿ ಏಳು ಇಪ್ಪತ್ತು. ಜೋರಾಗಿ ಸೀಟಿಯನ್ನು ಊದುತ್ತಾ ಆಗ ತಾನೆ ಬೆಂಗಳೂರನ್ನು ಆವರಿಸುತ್ತಿದ್ದ ಕತ್ತಲನ್ನು ಭೇದಿಸುತ್ತಾ ಕರ್ನಾಟಕ ಎಕ್ಸ್ ಪ್ರೆಸ್ ಟ್ರೈನ್ ಹೊರಟಿತು ಆಗ್ರಾದ ಕಡೆಗೆ, ನಮ್ಮ ಇಪ್ಪತ್ತೆರಡು ದಿನದ ಉತ್ತರ ಭಾರತದ ಪ್ರವಾಸದ ಆರಂಭವನ್ನು ಸೂಚಿಸುತ್ತಾ ...

Z :ಮುಂದೆ ?

ನಾನು : ಮುಂದಿನ ಕಥೆ ಆಮೇಲೆ. :)

5 comments:

Unknown said...

Lakshmeeeeeee......format chendaa-gaitey. Swalpa taalu, special kaafee maadkyondu review maad-T-nee.

Aagley gottaytu = non-Tamilian _yyer appeared in the form of a Sun-Ya-C and gave you a Ring (Taalee) !!

LoL

Unknown said...

Saree, special kaafi aytu.

Ara-rey, blog nalli romance-aey illa, yaakey? Chapter baredu, mettagey page kitt-bittidya Lakshmi ?
Taalu, nam agent galanna research maadakkey biduteeni.

Unknown said...

Ayyo.....Aarati maadilla, Lakshmi gey, Kaashi Yaatrey maadi banda may ley....so, here it is:-

BLOG-yaaada LAKSHMI baaramma !!
LoL

Harisha - ಹರೀಶ said...

೧) ಶ್ಲೋಕಕ್ಕೆ ಮಧ್ಯ space ಬಿಟ್ಟಿದ್ರೆ ಚೆನ್ನಾಗಿತ್ತು.
೨) ಉತ್ತರ ಭಾರತಕ್ಕೆ ಹೋಗಿ ಬಂದ ಮೇಲೆ Z ಯಾಕೋ ತಣ್ಣಗಾಗಿಬಿಟ್ಟಿದೆ.. ಚಳಿಗೆ ಅಂದ್ಕೋತೀನಿ.
೩) ನಿಮ್ಮ ಮೇಲೆ ಅಲ್ಲಾಹುವಿನ ಕೃಪೆ ಆಗಿರ್ಬೇಕು. ಅದಕ್ಕೇ ನಿಮಗೆ ಬೇಕಾಗಿರೋ ಸೀಟ್ ಸಿಕ್ಕಿದೆ :-)
೪) ಮುಂದಿನ ಭಾಗ ಬೇಗ ಬರ್ಲಿ

ವಿ.ರಾ.ಹೆ. said...

ಬೆಂಗಳೂರು
ರಾತ್ರಿ ೮ ಗಂಟೆ
ಆಗ್ರಾ ಎಕ್ಸ್ ಪ್ರೆಸ್ ಟ್ರೈನಿನಲ್ಲಿ.

ಲಕ್ಷ್ಮಿಯವರ ಕೈಲಿದ್ದ ಸ್ಯಾಟಲೈಟ್ ಫೋನ್ ಒಂದೇ ಸಮನೆ ರಿಂಗಾಗತೊಡಗಿತು.. ಯಾವುದೋ ಅಪರಿಚಿತ ನಂಬರಿನಿಂದ ಕರೆ ಬಂದಿದ್ದನ್ನು ನೋಡಿ ರಿಸೀವ್ ಮಾಡಲೋ ಬೇಡವೋ ಎಂಬ ಗೊಂದಲಕ್ಕೆ ಬಿದ್ದರು. ಅಷ್ಟರಲ್ಲಿ ಅವರ ಪರ್ಸನಲ್ ಫೋನ್ ಗೆ ಮತ್ತೊಂದು ಪರಿಚಿತ ನಂಬರಿನಿಂದಲೇ ಕಾಲ್ ಬರತೊಡಗಿತು..
ಹೊರಡುವ ಅವಸರದಲ್ಲಿ ತಮ್ಮ ಪೆನ್ ಡ್ರೈವ್ ಮರೆತು ಬಂದಿದ್ದು, ಅದರಲ್ಲಿ ಮಹತ್ವದ ದಾಖಲೆಗಳನ್ನು ಅಳಿಸದೇ ಹಾಗೇ ಇಟ್ಟಿದ್ದು ನೆನಪಾಗಿಹೋಯಿತು.... ಆ ಪೆನ್ ಡ್ರೈವಿಗೂ ಈ ಕರೆಗಳಿಗೂ ಏನಾದರೂ ಸಂಬಂಧ ಇರಬಹುದಾ ಎಂದು ಯೋಚಿಸತೊಡಗಿದರು. ಫೋನುಗಳೂ ರಿಂಗಾಗುತ್ತಲೇ ಇದ್ದವು. ಆಕಡೆಯಿಂದ ಅಮ್ಮ ಗುರಾಯಿಸತೊಡಗಿದರು.

ಮುಂದೆ....... ?

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...