Sunday, September 13, 2009

ಒಂದು ಹೊಸ ಬ್ಲಾಗಿನ ಲೋಕಾರ್ಪಣೆ

Z :ಎಲ್ಲರೂ ಬ್ಲಾಗ್ ಮುಚ್ಚುತ್ತಿರುವ ಕಾಲದಲ್ಲಿ ನೀನು ಇನ್ನೊಂದು ಹೊಸ ಬ್ಲಾಗ್ ತೆರೆದಿದ್ದೀಯಲ್ಲಾ...ನೀನೇಕೆ ಹೀಗೆ ?

ನಾನು : ನಾನು ಏಕೆ ಹೀಗಪ್ಪಾ ಅಂದ್ರೆ...

Z :ಅಂದ್ರೆ...

ನಾನು : ತೋಚಿದ್ದನ್ನ ಗೀಚುವುದಕ್ಕಷ್ಟೇ ಸೀಮಿತವಾಗಿದ್ದ ಬ್ಲಾಗಿಂಗ್ ಈಗ ತನ್ನ ಸೀಮೆಯನ್ನು ವಿಸ್ತೃತಗೊಳಿಸಿದೆ. ಇಲ್ಲಿ ಈಗ ನೋಡಿದ್ದನ್ನು ಮತ್ತು ಕೇಳಿದ್ದನ್ನೂ ಸಹ ಗೀಚಬಹುದು. ನನಗೆ ಈ ಮಧ್ಯಾಹ್ನ ತೋಚಿದ ಒಂದು ಐಡಿಯಾ ನನ್ನ ಯಾವುದೇ ಬ್ಲಾಗುಗಳಲ್ಲೂ ಫಿಟ್ ಆಗದ ಕಾರಣ ನಾನೊಂದು ಹೊಸ ಬ್ಲಾಗ್ ತೆರೆಯಬೇಕಾಯ್ತು. ಜನ ಯಾವುದೇ ಕಾರಣಕ್ಕೆ ಬ್ಲಾಗ್ ಮುಚ್ಚಿದರೂ ಅದಕ್ಕೂ ನನಗೂ ಸಂಬಂಧ ಇಲ್ಲ.

Z :ಅದು ಏನ್ ಐಡಿಯಾ ಜ್ಞಾನೋದಯ ಆಯ್ತು ನಿನಗೆ ಮನೆಯ ತಾರಸಿ ಕೆಳಗಡೆ ?

ನಾನು : ನನಗಿಷ್ಟವಾದ ಹಾಡುಗಳನ್ನ ಆಡಿಯೋ ವಿಡಿಯೋಗಳನ್ನ ಹಂಚಿಕೊಳ್ಳಲು ಏಕೆ ಒಂದು ಬ್ಲಾಗನ್ನು ತೆರೆಯಬಾರದು ಅಂತ ತೋಚಿತು.

Z :ಅದನ್ನ ಇಲ್ಲೇ ಹಂಚಿಕೊಳ್ಳಬಹುದಿತ್ತು.

ನಾನು : ಉಹು.ಆಗಲ್ಲ.

Z :ಯಾಕೆ ?

ನಾನು : ಇಲ್ಲಿ ಮಾತು ಕತೆ ಇರಬೇಕು ಅಷ್ಟೇ. ಹಾಡಿಗಿಲ್ಲಿ ಅವಕಾಶವಿಲ್ಲ.

Z :ಎಲ್ಲರೂ ಮೊಬೈಲ್ ನಲ್ಲಿ ಸಿಂಗ್ ಟೋನು ರಿಂಗ್ ಟೋನು ಅಂಥಿಂಥದೆಲ್ಲಾ ಸೇರಿಸಿಕೊಂಡಿರುತ್ತಾರೆ. ಅದೇ ಕೆಲಸವನ್ನ ಇಲ್ಲೂ ಮಾಡಬಹುದಿತ್ತು.

ನಾನು : ಆದರೆ ಇದು ಸಾಮಾನ್ಯ ಮೊಬೈಲಲ್ಲವಾದ್ದರಿಂದ, ಇಲ್ಲಿ ಈ ಸೇವೆ ಉಪಲಬ್ಧವಿಲ್ಲ.

Z : X(

ನಾನು : ನೋಡು,ಕೋಪ ಮಾಡಿಕೊಂಡು ಪ್ರಯೋಜನ ಇಲ್ಲ. ಆ ಬ್ಲಾಗನ್ನ ನಾನು ಶುರುಮಾಡದೇ ಇಲ್ಲೇ ಹಂಚಿಕೊಳ್ಳುತ್ತೇನೆ ಅಂತ ಇಟ್ಟುಕೋ. ನಿನಗೆ ಬರೀ ಹೂಂ ಗುಟ್ಟುವ ಕೆಲಸ ಇರತ್ತೆ ಬಿಟ್ಟರೆ ಇನ್ನೇನು ತಾನೇ ಮಾಡೀಯಾ ? ಅಲ್ವಾ ?

Z :ಹುಂ.

ನಾನು : ಜಾಣೆ. ಆದ್ದರಿಂದ,ಬೇರೆ ಬ್ಲಾಗಿನಲ್ಲಿ ಹಾಡನ್ನು ಇನ್ನೂ ಚೆನ್ನಾಗಿ ಎಂಜಾಯ್ ಮಾಡಬಹುದು ಅನ್ನೋ ಏಕಮೇವಾದ್ವಿತೀಯ ಏಕಮಾತ್ರ ಸದುದ್ದೇಶದಿಂದ ಹೊಸ ಬ್ಲಾಗನ್ನು ತೆರೆದೆ ಅಷ್ಟೇ.

Z : ಲಿಂಕ್ ಏನು ?

ನಾನು : ತಗೋ - http://pallavi-anupallavi.blogspot.com

Z : ಜೈ.

ನಾನು : :)

4 comments:

Karthik CS said...

Ohhh super.. olle prayatna..

VENU VINOD said...

ನಾನು: ಹೊಸ ಬ್ಲಾಗ್ ನೋಡಿದೆ, ಒಳ್ಳೆಯ ಪ್ರಯತ್ನ... :)

ವಿ.ರಾ.ಹೆ. said...

ayyo sadyojaata !

PaLa said...

paapa google.. innu kelave varshadalli divaaLiyaagalide :(

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...