Wednesday, February 11, 2009

ಗುಲಾಬಿ ಟಾಕೀಸ್...ಕಡೆಗೂ ನೋಡಿಯೇಬಿಟ್ಟೆ !

Z : Standing ovation ಕೊಡಿ ಪಾ ಎಲ್ಲಾರು ಈ ಸಾಧನೆ ಗೆ !

ನಾನು :yes ! ಇದು ಸಾಧನೆ ನೆ.

Z : In which dimension and from what angle is this a ಸಾಧನೆ ?

ನಾನು :In 3 dimensions and from all angles (from 0-360 degrees).

Z : ಆಹ...ನೀನೋ....ನಿನ್ನ ತಲೆಯೋ....

ನಾನು :ನೋಡು...ಬೈಬೇಡ. ಇದು ಯಾಕೆ ಇಷ್ಟು ದೊಡ್ಡ ಸಾಧನೆ ಅಂತ ನಾನು ನಿನಗೆ ವಿವರಿಸಿ ಹೇಳಬೇಕಿದೆ.

Z : ಪೇಳ್.

ನಾನು :ಗುಲಾಬಿ ಟಾಕೀಸ್ PVR ನಲ್ಲಿ ಇದ್ದಾಗ ನನಗೆ entrance exam ನ tension ಇತ್ತು. ಅದಕ್ಕೆ ಹೋಗಲಾಗಲಿಲ್ಲ. ನಾನು ಪರೀಕ್ಷೆ ಮುಗಿಸುವ ಹೊತ್ತಿಗೆ ಏನಾಯ್ತಪ್ಪಾ ಅಂದ್ರೆ...

Z : ಅಂದ್ರೆ....

ನಾನು :ಅದು PVR ಇಂದ ಹೊರಬಂತು.

Z : :(

ನಾನು : ನಾನು ಫಿಲಂ ಫೆಸ್ಟಿವಲ್ ಗೆ ಕಾಯುತ್ತಿದ್ದೆ. ಅದು ಫಿಲಂ ಫೆಸ್ಟಿವಲ್ ನಲ್ಲೂ ಬರತ್ತೆ ಅಂತ ಗೊತ್ತಾಯ್ತು.ನಾನು, ರೋಹಿಣಿ ಮತ್ತು ಚಂದ್ರಕಾಂತ ಮೇಡಮ್ ಹೊರಡಲು ತಯಾರಾದೆವು.

Z : :)

ನಾನು :just 3 days before, ಸುಶ್ರುತ ಅವರ ಜೊತೆ ಚಾಟ್ ಮಾಡುವಾಗ ಫಿಲಂ ಫೆಸ್ಟಿವಲ್ ಗೆ ಪಾಸ್ ಬೇಕು ಅಂತ ಗೊತ್ತಯ್ತು.ನಮ್ಮ ಹತ್ತಿರ ಪಾಸ್ ಇರಲಿಲ್ಲ ಮತ್ತು ಅದನ್ನು ಪಡೆಯುವ ಬಗೆಯೂ ನಮಗೆ ಗೊತ್ತಿರಲಿಲ್ಲ ಆದ್ದರಿಂದ ಆ programme drop ಆಯ್ತು.

Z : :(

ನಾನು :ನನ್ನ ಗೋಳಾಟ ಮುಗಿಲು ಮುಟ್ಟಿತು. ಎಲ್ಲಾರು ಚಿತ್ರ ನೋಡುವವರೇ, page ಗಳ ಗಟ್ಟಲೆ review ಬರೆಯೋರೆ. ನಾನು review ಬರೆಯೋ ಅಷ್ಟು ದೊಡ್ಡವಳಲ್ಲ ಆದರೂ..."ನೋಡಿದೆ" ಅಂತ ನಾದ್ರೂ ಒಂದು ರೆಕಾರ್ಡ್ ಬೇಡ್ವಾ ?

Z : ಬೇಕಾ ?

ನಾನು :ಬೇಕು.

Z : ಸರಿ. ಅದಕ್ಕೆ ?

ನಾನು :ಏನಾದ್ರೂ ಮಾಡಿ ಚಿತ್ರ ನೋಡಲೇಬೇಕಲ್ಲಾ ಅಂತ ಹಪಹಪಿಸುತ್ತಿದ್ದೆ ನಾನು...ಆಗ ಗೆಳೆಯರೊಬ್ಬರು ಈಮೈಲ್ ಮಾಡಿದರು.feb 8th ರಂದು ಕೆ. ವಿ.ಸುಬ್ಬಣ್ಣ ಆಪ್ತ ರಂಗ ಮಂದಿರದಲ್ಲಿ ಗುಲಾಬಿ ಟಾಕೀಸಿನ ಎರಡು ಶೋಗಳಿವೆ ಅಂತ ಅವಧಿಯಲ್ಲಿ ಹಾಕಿದ ಜಾಹೀರಾತಿನ ಲಿಂಕನ್ನು ಲಿಂಕಿಸಿದ್ದರು.

Z : ಅರ್ರೆ ವಾಹ್ !!!

ನಾನು :ನಾನು ಎಲ್ಲರಿಗೂ ಫೋನ್ ಮಾಡುವ ಕರ್ತವ್ಯವನ್ನು ಬಹಳ ಕಾಳಜಿ ಇಟ್ಟು ಮಾಡಿದೆ. ರೋಹಿಣಿ ಆಗಲ್ಲ ಅಂದಳು. ಚಂದ್ರಕಾಂತ ಮೇಡಂ ಮತ್ತು ನನ್ನ ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕರೂ ಹಾಗೂ ಚಂದರಕಾಂತ ಮೇಡಮ್ ಅವರ ಪತಿಯೂ ಆಗಿರುವ ಕೆ.ಎಮ್.ಕೆ ಸರ್ ಬರಲು ಒಪ್ಪಿದರು.ಮಧ್ಯಾಹ್ನ ಮೂರುವರೆಯ ಶೋ ಗೆ ಟಿಕೆಟ್ಟು ಸಿಗಲಿಲ್ಲ. ಐದುವರೆಗೆ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಮತ್ತು ಎಸ್ ರಾಮಚಂದ್ರ ಅವರೊಂದಿಗೆ ಸಂವಾದ ಇತ್ತು. ಅದಾದ ಮೇಲೆ ಆರು ಮುಕ್ಕಾಲಿಗೆ ಇನ್ನೊಂದು ಶೋ ಇತ್ತು. ನಾವು ಅದಕ್ಕೆ ಹೊರಡಲು ನಿರ್ಧರಿಸಿಇದೆವು. ನಾನಂತು ಕಾಸರವಳ್ಳಿಯವರನ್ನು ಮುಖತಃ ನೋಡುವೆನೆಂಬ ಖುಷಿಯಲ್ಲಿ ಆಗಲೇ ಮೇಲ್ಗಡೆ ಹೋಟೋಗಿದ್ದೆ.

Z :ಹೆಹೆಹೆಹ್ಹೆ...


ನಾನು :ಹೂಂ !!! I was sooooooo happy ! ಸಂವಾದ ಚೆನ್ನಾಗಿ ನಡೆಯಿತು. ನಾನೇನೂ ಪ್ರಶ್ನೆ ಕೇಳಲು ಆಗಲಿಲ್ಲ...ಯಾಕಂದ್ರೆ ನಾನಿನ್ನೂ ಸಿನೆಮಾ ನೋಡಿರಲಿಲ್ಲ. ಅವರು ಹೇಳಿದ ಅಂಶಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನೋಟ್ ಕೂಡಾ ಮಾಡಿಕೊಂಡೆ. ರಾಮಚಂದ್ರ ಅವರ ಫೋಟೋಗ್ರಫಿ ಬಗ್ಗೆ ನನಗೆ ಕುತೂಹಲ ಇನ್ನೂ ಸ್ವಲ್ಪ ಜಾಸ್ತಿ ಆಯ್ತು. ಆರುಮುಕ್ಕಾಲಿಗೆ ಕರೆಕ್ಟಾಗಿ ಚಿತ್ರ ಪ್ರಾರಂಭವಾಯ್ತು.

Z :ನಿನಗೆ ಇಷ್ಟವಾದ ಅಂಶ ಏನು ?

ನಾನು :ಮೌನ, ಬೆಳಕು, ಕತ್ತಲು, ವಸ್ತುಗಳ ಮತ್ತು propsಗಳ ಉಪಯೋಗ ಮತ್ತು ಬೆಕ್ಕು.

Z : ಈ ಬೆಕ್ಕು ಎಲ್ಲಿಂದ ಬಂತು ?

ನಾನು :ಅದು ಚಿತ್ರದಲ್ಲಿ ಇದೆ. ಒಂದೊಂದು ಸ್ಟೇಜ್ ನಲ್ಲೂ ಬೆಕ್ಕು ತನ್ನದೇ ಆದ ರೀತಿಯಲ್ಲಿ ತನ್ನ ಆಗಮನದಿಂದ ಗಮನ ಸೆಳೆಯುತ್ತದೆ....

Z : ....depicting what ?

ನಾನು :impact of globalization.

Z : ಹೇಗೆ ಹೇಳ್ತಿಯಾ ನೀನು ?

ನಾನು :ನೋಡು...ನನಗನ್ನಿಸಿದ್ದು ಇಷ್ಟು. ಪ್ರಾರಂಭದಲ್ಲಿ ಗುಲಾಬಿ ತಾನು ಮಾಡಿದ್ದ ಅಡುಗೆಯನ್ನು ಅವಳ ಸವತಿ ತಿರಸ್ಕರಿಸಿದಾಗ, ಅದನ್ನು ಹೊರಗೆ ಬಿಸಾಕುತ್ತಾಳೆ. ಆಗ ಬೆಕ್ಕು ಬಂದು ತಿನ್ನುತ್ತದೆ. ಇದರ ಅರ್ಥ, ಉದ್ಯಮಗಳು ಮುಕ್ತವಾಗಲು ಪ್ರಾರಂಭವಾಗುತ್ತದೆ.

Z : ಆಮೇಲೆ ?

ನಾನು :ಟೀವಿ ನೋಡುತ್ತಾ ಗುಲಾಬಿ ಆ ಬೆಕ್ಕಿಗೆ ಕೂಡ ಊಟವನ್ನು ನಿತ್ಯ ಹಾಕಲು ಪ್ರಾರಂಭಿಸುತ್ತಾಳೆ. ಇದರ ಅರ್ಥ, ನಾವು ಗ್ಲೋಬಲೈಸೇಷನ್ ನ ಸಾಕಲು ತೊಡಗಿದ್ದೇವೆ.

ನಾನು :ಕ್ಲೈಮಾಕ್ಸ್ ನಲ್ಲಿ ಆ ಬೆಕ್ಕು ರಾಜಾರೋಷವಾಗಿ ಟಿವಿ ಮೇಲೆ ಕೂರತ್ತೆ. ಅಂದರೆ, it starts to rule.ಅನ್ನ ಹಾಕಿದ ದಣಿಯೇ ಇಲ್ಲದ ಮನೆಯಲ್ಲಿ ಹಾಯಾಗಿ ಬದುಕತೊಡಗುತ್ತದೆ. globalization ಕೂಡಾ ಹಾಗೇ ಬೆಕ್ಕು ಥರಾ ನೇ ಮೆಲ್ಲಗೆ ಬಂದು...ನಿಧಾನಕ್ಕೆ ಬೆರೆತು, ಕಡೆಗೆ ನಮ್ಮನ್ನೇ ಆಳತೊಡಗಿತು. ಅಲ್ವಾ ?

Z : ಹೌದಾ ?

ನಾನು :ನನಗೆ ಹಾಗೇ ಅನ್ನಿಸತ್ತೆ.

Z : ಸರಿ. ಅನಿಸಲಿ.ಆಮೇಲೆ ಇನ್ನೇನು ಅನಿಸಿತು?

ನಾನು :ಪ್ರತಿಯೊಂದು ವಸ್ತುವೂ ಮಾತಾಡ್ತಿದೆ ಅನಿಸಿತು.

Z :ಅದು ನಿನ್ನ regular feeling ಅಲ್ವಾ ? lab apparatus ಜೊತೆ ಎಲ್ಲಾ ಮಾತಾಡ್ತಿದ್ದೆ ?

ನಾನು :ಹಂಗಲ್ಲ ಕಣೇ..ಅವು ತಮ್ಮದೇ ರೀತಿಯಲ್ಲಿ ಕಥೆಲ್ಲಿ ಮೌನ ಸಂಭಾಷಣೆ ನಡೆಸಿದೆ. ಸಾಂಬ್ರಾಣಿ, ತೆಂಗಿನ ಮರ, ಪೋಸ್ಟರ್ರು, ಲಾಟೀನು, ಡಿಷ್ ಅಂಟೆನಾ...ಎಲ್ಲಾ...

Z :ಹಾಂ....

ನಾನು :ನನಗಂತೂ ಈ ಮೂವೀ ನೋಡಬೇಕೆಂಬ ಆಸೆ ನೆರವೇರಿದ್ದಲ್ಲದೇ ಗಿರೀಶ್ ಕಾಸರವಳ್ಳಿಯವರ ಹಸ್ತಾಕ್ಷರ ದೊರೆತಿದ್ದೇ ನನ್ನ ಜೀವನದ most memorable moment ಅನ್ನಿಸಿತು.

Z : !!!!!!!!!!!!!!!!!!!!!!!!!!!!!!!!!!!

ನಾನು :ಏನಿದು ? ಗಾಬರಿ ನ, ಸಂತೋಷ ನ, ಅಥವಾ ಹೊಟ್ಟೆ ಉರಿ ನಾ ?

Z : ಎಲ್ಲದರ average ತಗೊ.

ನಾನು : :) :) :) ಏನೇ ಇರ್ಲಿ...It was a lovely Sunday evening. Really memorable one.

Z : :)..good !ಸಾಧನೆ ಮಾಡಿದ್ದಕ್ಕೆ congratulations.

Thursday, February 5, 2009

Journey to ಜಲೇಬಿನಾಡು-ಭಾಗ ೩

ನಾನು : ಕುಂಭಕೋಣಂ ನಲ್ಲಿ ಇಬ್ಬಿಬ್ಬರಿಗೆ ಒಂದು ರೂಮ್ ಅಂತ ನಿಗದಿಯಾಗಿತ್ತು. ನಾನು ಅಪರ್ಣ ಒಂದು ರೂಮ್, ಅಮ್ಮ ಅಣ್ಣ ಇನ್ನೊಂದು ರೂಮ್. ಇದ್ದ ಎರಡು ಪ್ಲಗ್ ಪಾಯಿಂಟುಗಳಲ್ಲಿ ಒಂದನ್ನು ಕ್ಯಾಮೆರಾದ ಬ್ಯಾಟರಿ ಚಾರ್ಜ್ ಮಾಡಲು, ಮತ್ತೊಂದನ್ನು mosquito repellent ಗೆ ಹಾಕಿದ್ದೆವಾದ್ದರಿಂದ, ನಮ್ಮ ಫೋನುಗಳ ಬ್ಯಾಟರಿ ಚಾರ್ಜ್ ಆಗಲಿಲ್ಲ. ನಾವು ಅಲಾರಂ ಕೂಡಾ ಇಡದೇ, ಅಮ್ಮ ಅಣ್ಣ ಬಂದು ಬಾಗಿಲು ಬಡಿದು ಎಬ್ಬಿಸುವವರೆಗೂ ಏಳೋದು ಬೇಡಾ ಅಂದ ಡಿಸೈಡ್ ಮಾಡಿ ಮಲಗಿದೆವು.

Z : ಆಹಾ ! ನೀವ್ ಮೊದಲು ಏಳೋದ್ ಬಿಟ್ಟು.....

ನಾನು : ಸೈಲೆನ್ಸ್ ! ಹಿಂದಿನ ದಿನ ಮೂರುವರಗೆ ಎದ್ದಿರ್ಲಿಲ್ವಾ ? ಆವತ್ತು ಐದ್ ಘಂಟೆಯ ವರೆಗೂ ಕಣ್ಣು ಬಿಡಲ್ಲ ಅಂತ ಪ್ರತಿಜ್ಞೆ ಮಾಡಿದ್ದೆ ನಾನಂತೂ !

Z :ಆಹಾ !

ನಾನು : ಹೂಂ ! ಮೊದ್ಲೇ ಚಿದಂಬರಂ ನಲ್ಲಿ disappoint ಆದೆ. ಅದು ತಿರುನಲ್ಲಾರ್ ನಲ್ಲೂ ಮುಂದುವರೆಯಿತು. ನಳ ತೀರ್ಥ, ಬ್ರಹ್ಮದಂಡ ತೀರ್ಥ ಇವೆಲ್ಲಾ ನೋಡ್ಬೇಕಿತ್ತು ನಾನು. ಯಾವ್ದೂ ನೋಡಕ್ಕಾಗ್ಲಿಲ್ಲ. ಆರಾಮದ ನಿದ್ದೆನಾದ್ರೂ ಬೇಡ್ವಾ ?

Z :ಬೇಕ್ ಬೇಕು.

ನಾನು : ಅದಕ್ಕೆ ಪ್ರತಿಜ್ಞೆ ಮಾಡಿದ್ದು. ಯಥಾ ಪ್ರಕಾರ ಅಮ್ಮ ನಾಲ್ಕುವರೆಗೆ ಎಬ್ಬಿಸಿದರು. ನಾನು ಐದು ಘಂಟೆಗೆ ಎದ್ದೆ. ತಿರುವಣ್ಣಾಮಲೈ ನಲ್ಲಿ ಬಿಸಿನೀರು syringe ಥರ ಬರ್ತಿದ್ರೆ, ಇಲ್ಲಿ ಕುಂಭಕೋಣಮ್ ನಲ್ಲಿ ತಣ್ಣೀರು waterfall ಥರ ಧೋ ಅಂತ ಸುರಿತಿತ್ತು ನಲ್ಲಿಲಿ.

Z :ತ್ಚು ತ್ಚು ಥ್ಚು ಥ್ಚು....


ನಾನು : ಲೊಚ್ಗುಟ್ಟಿ ಹೊಟ್ಟೆ ಉರ್ಸ್ಬೇಡಾ ಹೋಪ್ಲೆಸ್ಸ್ ಫೆಲ್ಲೋ... ಗಡಗಡ ನಡುಗುತ್ತಿದ್ದೆ ನಾನು ! ನಾವೆಲ್ಲಾ ರೆಡಿಯಾಗಿ ಲಗೇಜು ಪ್ಯಾಕ್ ಮಾಡೋ ಅಷ್ಟೊತ್ತಿಗೆ ಆರುವರೆ. ಆಮೇಲೆ ನಾವು ಮ್ಯಾನೇಜರ್ ಅಂಕಲ್ ಹೇಳಿದ ಛತ್ರಕ್ಕೆ ತಿಂಡಿ ತಿನ್ನಲು ಹೋದೆವು. ಅದರ ಎದುರುಗಡೆಯೇ ಇದ್ದಿದ್ದು ಮಹಾ ಮಾಘ ಕೊಳ.

Z : ಏನು ವಿಶೇಷ ಆ ಕೊಳದ್ದು ?

ನಾನು : ಆ ಕೊಳ ಕುಂಭಕೋಣಂ ನ ಅತಿ ಪುರಾತನ ಮತ್ತು ಪುರಾಣ ಪ್ರಸಿದ್ಧ ಕೊಳ. ಆ ಕೊಳಕ್ಕೆ ಭಾರತದ ಎಲ್ಲ ಪ್ರಸಿದ್ಧ ನದಿಗಳಿಂದ [ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ, ಕೃಷ್ಣಾ] ನೀರು ಪ್ರತಿ ವರ್ಷ ಮಾಘಮಾಸದಲ್ಲಿ ಬಂದು ಸೇರತ್ತಂತೆ. ಎಲ್ಲಿಂದ ಬರತ್ತೆ ನೀರು ಅಂತ ಗೊತತಿಲ್ವಂತೆ. ಆದ್ರೂ, ನೀರು ಬರತ್ತೆ. ಆ ಕೊಳದಲ್ಲಿ ಎಲ್ಲಾ ದೇವತೆಗಳೂ ಮಿಂದು ಪುನೀತರಾಗಿದ್ದಾರಂತೆ ! ದೇವತೆಗಳೇನು , ರಾಮಾಯಣ ಮಹಾಕಾವ್ಯದ ಕಥಾನಾಯಕ Mr.Shrirama Chandra ಕೂಡಾ ಲಂಕೆಗೆ ಹೋಗುವ ಮುನ್ನ ಇಲ್ಲಿಗೆ ಬಂದು, ಕೊಳಕ್ಕೆ "ಧೊಪ್" ಅಂತ ಬಿದ್ದು, zuyk ಅಂತ ಎದ್ದು, ಪಕ್ಕದಲ್ಲೇ ಕಾಶಿ ಇಂದ ಸಾಕ್ಷಾತ್ ವಿಶ್ವನಾಥರು ಅವರು ಬಂದಿದ್ದರಾದ್ದರಿಂದ ಅಲ್ಲೇ ಅವರ ಪೂಜೆ ನೂ ಮಾಡಿ, ನಂತರ ರಾಮೇಶ್ವರದ ಕಡೆಗೆ ಪಾದ ಬೆಳೆಸಿದರಂತೆ.

Z :I see. ನೀನು ಹೋದೆಯಾ ಈ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ?

ನಾನು : ಎಸ್. ಅಲ್ಲೇ ಎಂಟು ನದಿಗಳ ಮೂರ್ತಿ ಇರುವ ಒಂದು ದೇವಸ್ಥಾನ ಇದೆ. Ms. ಕಾವೇರಿ ಅವರು center ನಲ್ಲಿ ನಿಂತಿದಾರೆ.unfortunately, we couldn’t get into ಮಹಾ ಮಾಘ ಕೊಳ.

Z :Its ok. ಆಮೇಲೆ ?

ನಾನು : ಆಮೇಲೆ ನಾವು Mr. ಸಾರಂಗಪಾಣಿ [Mr. S ಪಾಣಿ for short] ಅವರ ದೇವಸ್ಥಾನಕ್ಕೆ ಹೋದ್ವಿ.

Z :ಯಾರವರು ?

ನಾನು : ವಿಷ್ಣು ಕಣೆ ! ಶ್ರೀಮನ್ನಾರಾಯಣ. ಮಲಗಿದ್ದಾರೆ Mr. S ಪಾಣಿ. ಇವರ ಕಥೆ ಮಾತ್ರಾ....ultimate ಆಗಿದೆ.

Z :ಏನ್ ಕಥೆ ? ಹೇಳು ಬೇಗ !

ನಾನು : ಕೇಳಿಸ್ಕೋ. ನಿನಗೆ ಭೃಗು ಮಹರ್ಷಿಗಳ ಕಥೆ ಗೊತ್ತಲ್ಲಾ....ಅದೇ ಕಾಲಲ್ಲಿ ಒಂದು ಕಣ್ಣಿತ್ತು, ವಿಷ್ಣುವಿನ ವಕ್ಷಸ್ಥಳಕ್ಕೆ ಒದ್ದರು...ವಿಷ್ಣು ಕಾಲೊತ್ತುವ ನೆಪದಲ್ಲಿ ಕಣ್ಣು ಕಿತ್ತರು...ಲಕ್ಷ್ಮೀ ಕೋಪಿಸಿಕೊಂಡು ಹೊರಟೇಬಿಟ್ಟರು....ಅಮೇಲೆ ಪದ್ಮಾವತಿ ನ ಮದುವೆ ಆದ್ರಲ್ಲ...

Z :ಹಾಂ ಹಾಂ....ನೆನಪಿದೆ. ಅವರಿಗೂ Mr. S . ಪಾಣಿ ಗೂ ಏನ್ ಸಂಬಂಧ ?


ನಾನು : ಇದೆ ಇದೆ. ಭೃಗು ಮಹರ್ಷಿಗಳಿಗೆ ಲಕ್ಷ್ಮೀ ಕೋಪಿಸಿಕೊಂಡು ಹೋದಮೇಲೆ ಜ್ಞಾನೋದಯ ಆಯ್ತಂತೆ. ಅದಕ್ಕೆ ಅವರು ವಿಷ್ಣು ನ ಮೂರು ವರ ಕೇಳ್ಕೊತಾರೆ.

೧. ಅವರಿಗೆ ವಿಷ್ಣುವನ್ನು ಸೇವೆ ಮಾಡುವ ಭಾಗ್ಯ ಸಿಗಬೇಕು.

೨. ಲಕ್ಷ್ಮೀ ಅವರ ಮಗಳಾಗಿ ಹುಟ್ಟಬೇಕು. ಅವರೇ ವಿಷ್ಣುವಿಗೆ ಲಕ್ಷ್ಮೀಯನ್ನು ಧಾರೆ ಎರೆದು ಕೊಡಬೇಕು.

೩. ಅವರಿಗೆ ದೇಹದೊಂದಿಗೇ ಮೋಕ್ಷ ಸಿಗಬೇಕು.

ವಿಷ್ಣು ಒಪ್ಪಿದರು. ಆಮೇಲೆ ಲಕ್ಷ್ಮೀಯನ್ನು ಹುಡುಕಿಕೊಂಡು ಹೊರಟರು. ವಿಷ್ಣು ಶ್ರೀನಿವಾಸನಾಗಿ ಪದ್ಮಾವತಿಯನ್ನು ಮದುವೆಯಾಗಿ ತಿರುಪತಿಯಲ್ಲಿ ನೆಲೆಸಿದರು. ಲಕ್ಷ್ಮೀ ಕೊಲ್ಲಾಪುರದಲ್ಲಿ ಇದ್ದರು. ವಿಷ್ಣು ಶ್ರೀನಿವಾಸನಾಗಿ ಪದ್ಮಾವತಿಯ ವಿವಾಹವಾಗಿದ್ದನ್ನು Mr.ನಾರದರು ಲಕ್ಷ್ಮೀ ಗೆ ತಿಳಿಸಿದರು. ಮೇಡಂ ಗೆ ಸಿಕ್ಕಾಪಟ್ಟೆ ಕೋಪ ಬಂತು. ಅವರು ತಿರುಪತಿಗೆ ಬರುವ ಮುನ್ನವೇ ನಾರದರು ವೆಂಕಟೇಶ್ವರನಿಗೆ ಲಕ್ಷ್ಮೀ ಸಖತ್ ಕೋಪದಿಂದ ಈ ಕಡೆ ಧಾವಿಸುತ್ತಿದ್ದಾರೆ ಅಂದರು. ಶ್ರೀನಿವಾಸರು ಅಲ್ಲಿ ಪದ್ಮಾವತಿಯ ಹತ್ತಿರ ತಮ್ಮದೊಂದು ರೂಪವನ್ನು ಬಿಟ್ಟು ಕುಂಭಕೋಣಕ್ಕೆ ಓಡಿ ಬಂದು ಪಾತಾಳ ಶ್ರೀನಿವಾಸ ಆದರು.

ಈಕಡೆ ಲಕ್ಷ್ಮೀ ತಿರುಪತಿಗೆ ಬಂದು " ಶ್ರೀಕೃಷ್ಣ ನೀ, ನನ್ನ ಶ್ರೀ ರಾಮ ನೀ, ನನ್ನ ಪತಿರಾಯ ನೀನೇನಪ್ಪಾ " ಅಂತ ವೆಂಕಟೇಶ್ವರರಿಗೆ ಹೇಳಿದಾಗ ವೆಂಕಟೇಶ್ವರ ಅವರು "ನಾ ನಾ ನಾ...ಇಲ್ಲ ಇಲ್ಲ ಇಲ್ಲ ಇಲ್ಲ ನಾನವನಲ್ಲ" ಅಂದುಬಿಟ್ಟರು.

Z : ಬುದ್ಧಿವಂತರು !

ನಾನು : ಹೂಂ...ನಮ್ಮ ಮೇಡಮ್ಮೂ ಏನ್ ಕಮ್ಮಿ ಇಲ್ಲ. ಅವರಿಗೆ ಇವರ ರೂಪಾಂತರದ ರಹಸ್ಯ ತಿಳಿಯಿತು.ತಕ್ಷಣವೇ ಅಲ್ಲಿ ಅಲಮೇಲು ಮಂಗಾಪುರದಲ್ಲಿ ಅವರದೊಂದು ರೂಪವನ್ನು ಬಿಟ್ಟು ಇವರೂ ಕುಂಭಕೋಣಕ್ಕೆ ಶ್ರೀನಿವಾಸನನ್ನು ಹುಡುಕುತ್ತಾ ಓಡಿಬಂದರು. ಕುಂಭಕೋಣಕ್ಕೆ ಕಾಲಿಟ್ಟ ತಕ್ಷಣ ಅವರು ಮಗುವಾಗಿ ಹೋದರು. ಹೇಮ ಪುಷ್ಕರಿಣಿ ಎನ್ನುವ ಜಾಗದಲ್ಲಿ ಸಹಸ್ರದಳದ ಕಮಲದಲ್ಲಿ ಮೇಡಂ ಲಕ್ಷ್ಮಿ ಮಗುವಾಗಿ ಮಲಗಿದ್ದರು. ಅಲ್ಲಿಗೆ ಹೇಮ ಮಹರ್ಷಿ ಅನ್ನುವವರು ಬಂದರು. ಅವರು ಬೇರೆ ಯಾರೂ ಅಲ್ಲ, Mr. ಭೃಗು ಮಹರ್ಷಿ ಆಗಿದ್ದರಲ್ಲ....ಅವರೇ!

Z : ವಾಹ್ ವಾಹ್ !

ನಾನು : ಸರಿ ಇವರು ಆ ಮಗುವಿಗೆ ಕಮಲವಲ್ಲಿ ಅಂತ ನಾಮಕರಣ ಮಾಡಿ ಆ ಮಗುವನ್ನು ಸಾಕತೊಡಗಿದರು. ಆ ಮಗುವೂ ಬೆಳೆದು ಪ್ರಾಪ್ತವಯಸ್ಕವಾಯ್ತು.

ಬಹಳಾ ಹಿಂದೆ...

Z : ಎಷ್ಟ್ ಹಿಂದೆ ?

ನಾನು : ಸಿಕ್ಕ್ ಸಿಕ್ಕಾಪಟ್ಟೆ ಹಿಂದೆ...ವಿಷ್ಣು ಮೂರು ವಿಮಾನಗಳನ್ನು ರಚಿಸಿ, ಒಂದನ್ನು ಬ್ರಹ್ಮನಿಗೆ, ಇನ್ನೊಂದನ್ನು ವೈವಸ್ವತ ಮನುವಿಗೆ ಕೊಟ್ಟು,ಇನ್ನೊಂದನ್ನು ವೈಕುಂಠದಲ್ಲಿಯೇ ಬಿಟ್ಟರು. ವೈವಸ್ವತ ಮನುವಿನಿಂದ ಇಕ್ಷ್ವಾಕುವಿಗೆ ವಂಶಪಾರಂಪರ್ಯವಾಗಿ ಈ ವಿಮಾನ ಬಂತು. ಈ ಇಕ್ಷ್ವಾಕುವಿಗೆ ಬ್ರಹ್ಮನ ಬಳಿ ಇರುವ ವಿಮಾನವೂ ಬೇಕೆಂದು ಆಸೆ ಆಯ್ತು. ಬ್ರಹ್ಮ "take it" ಅಂತ ಧಾರಾಳವಾಗಿ ಕೊಟ್ಟುಬಿಟ್ಟರು. ಆಶ್ಚರ್ಯ ಏನಪ್ಪಾ ಅಂದ್ರೆ ಆ ಎರಡು ವಿಮಾನಗಳು ಫೆವಿಕಾಲ್ ಇಲ್ಲದೆಯೇ ಅಂಟಿಕೊಂಡುಬಿಟ್ಟು ಒಂದೇ ವಿಮಾನ ಆಗೋಯ್ತು !

Z : ಅಯ್ಯಯ್ಯೋ ! ಆಮೇಲೆ ?

ನಾನು : ಕಮಲವಲ್ಲಿ ಹೆಸರಿನಲ್ಲಿರುವ ಲಕ್ಷ್ಮೀಯನ್ನು ಮದುವೆಯಾಗಲು ವಿಷ್ಣು ಅವರು ಸಾರಂಗಪಾಣಿಯಾಗಿ ಈ ಅಂಟಿಕೊಂಡಿರೋ ವಿಮಾನದಲ್ಲಿ ಕುಂಭಕೋಣದಲ್ಲಿ ಒಂದು ದಿನ ಹೇಮಪುಷ್ಕರಿಣಿ ಎದುರು ಕಾಣಿಸಿಕೊಂಡರು. ಇದೊಂಥರಾ arranged love marriage. ಹೇಮ ಮಹರ್ಷಿಗಳು full speed ನಲ್ಲಿ ಕನ್ಯಾದಾನ ಮಾಡೇಬಿಟ್ಟರು. ಕಮಲವಲ್ಲಿ ಮತ್ತು ಸಾರಂಗಪಾಣಿಯ ಮದುವೆ ನೂ fast ಆಗಿ ಆಗೇಹೋಯ್ತು !

Z : ವಾಹ್ ವಾಹ್ ! ಏನ್ ಸ್ಪೀಡು...ಏನ್ ಕಥೆ !

ನಾನು : ಹೂಂ ಮತ್ತೆ ! ಹಿಂಗಿರ್ಬೇಕು ನೋಡು ಸ್ಪೀಡ್ ಅಂದರೆ ! ಅಷ್ಟು ದೂರ ಪಾಪ ವಿಮಾನ ಹಾರಿಸಿಕೊಂಡು ಬೇಗ ಬೇಗ ಮದುವೆ ಮಾಡ್ಕೊಂಡು ಸುಸ್ತಾಗಿರೋದ್ರಿಂದ ಅವರು ವಿಮಾನದಲ್ಲಿಯೇ ಆದಿಶೇಷನನ್ನು summon ಮಾಡಿ rest ತಗೋತಿದ್ದಾರೆ ಅಂತ ಅನ್ಸತ್ತೆ. ಮೇಡಮ್ ಕಾಲನ್ನು ಒತ್ತುತ್ತಿದ್ದಾರೆ. The whole temple is in the form of a chariot, pulled by elephants. It has brilliant architecture and is quite a big temple. ಇಲ್ಲೊಂದು ವಿಶೇಷ ಇದೆ. usually, ನಾವು ಮೊದಲು ಪುರುಷ ದೇವರನ್ನ ನೋಡಿಕೊಂಡು ಆನಂತರ ಸ್ತ್ರೀ ದೇವರನ್ನು ನೋಡಲು ಹೋಗುತ್ತೇವೆ [except in shakti kshetras like Chamundi hills] ಆದರೆ ಇಲ್ಲಿ ಮೊದಲು ಕಮಲವಲ್ಲಿಯವರ ದೇವಸ್ಥಾನಕ್ಕೆ [chariot ನ ಹೊರಗೆ] ಹೋಗಿ ದರ್ಶನ ಪಡೆದ ನಂತರವೇ ಸಾರಂಗಪಾಣಿಯ ದರ್ಶನ ಮಾಡುತ್ತೇವೆ. ಸಿಕ್ಕಾಪಟ್ಟೆ ಚೆನ್ನಾಗಿದೆ ದೇವಸ್ಥಾನ.

Z : I see !

ನಾನು : ಸಾರಂಗಪಾಣಿ ದೇವಸ್ಥಾನವನ್ನು ನೋಡಿದ ನಂತರ ನಾವು ಆದಿ ಕುಂಭೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದೆವು.

Z : ಕುಂಭಕೋಣಕ್ಕೂ ಕುಂಭೇಶ್ವರಕ್ಕೂ ಏನಾದ್ರೂ ಸಂಬಂಧ ಇದ್ಯಾ ?

ನಾನು : ಇದೆ. ಕುಂಭಕೋಣಕ್ಕೆ ಈ ಹೆಸರು ಏಕೆ ಬಂತು ಅನ್ನೋದಕ್ಕೆ ಒಂದು ದೊಡ್ಡ ಕಥೆ ಇದೆ. ಆದಿಯಲ್ಲಿ ಬ್ರಹ್ಮದೇವನು ಸಕಲ ಜೀವಗಳನ್ನು ಸೃಷ್ಟಿಸಲು ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಒಂದು ಕಲಶದಲ್ಲಿ ಇಟ್ಟುಕೊಂಡು ಆಕಾಶದಲ್ಲಿ walking ಹೊರಟರಂತೆ.

Z : ವಾಕಿಂಗ್ ಮುಗಿಸಿ ಸೃಷ್ಟಿ ಮಾಡೋಣ...ಸಿಕ್ಕಾಪಟ್ಟೆ creativity ಇರತ್ತೆ ಆಗ ಅಂತ ಪ್ಲಾನ್ ಏನಾದ್ರೂ ಇತ್ತಾ ?

ನಾನು : ಇರ್ಬಹುದು. ನಾನು ಬ್ರಹ್ಮನ interview ಮಾಡಿಲ್ಲ. ಕೈಗೆ ಸಿಕ್ಕಲಿ ಅವರು ಒಂದು ದಿನ...ಕೇಳೇ ಕೇಳ್ತಿನಿ. ಇರ್ಲಿ...coming back to ಕಥೆ, ಬ್ರಹ್ಮ ಅವರು ವಾಕಿಂಗ್ ಹೊರಟಾಗ ಕಲಶ slip ಆಗೋಯ್ತಂತೆ ಕೈಯಿಂದ. ಅದು ಮೇಲಿಂದ ಕೆಳಗೆ slow motion ನಲ್ಲಿ ಬೀಳ್ತಿರೋವಾಗ ಈಶ್ವರ ಅವರು ಬಾಣದಿಂದ ಅದನ್ನು ಹೊಡೆದರಂತೆ. ಆಗ ಆ ಸಾಮಾಗ್ರಿಗಳಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಭೂಮಿಯಲ್ಲೆಲ್ಲಾ distribute ಆಯ್ತಂತೆ. ಆ ಕಲಶ ಒಡೆದುಹಗಿ ಕುಂಭಕೋಣದಲ್ಲಿ ಬಿತ್ತಂತೆ ಕಡೆಗೆ. ಈಶ್ವರ ಆ ಬಿದ್ದು ಒಡೆದು ಹೋದ ಕಲಶದ ಚೂರುಗಳೆಲ್ಲಾ ಸೇರಿಸಿ ಲಿಂಗ ರೂಪ ತಾಳಿ ಕುಂಭೇಶ್ವರ ಅಂತ ಹೆಸರಾಗಿ ಅಲ್ಲಿ ನೆಲೆಸಿದ್ದಾರೆ. ಆದಿಯಲ್ಲಿ ಕುಂಭಕೋಣಕ್ಕೆ ಇವರೇ ಮೊದಲು ಬಂದಿದ್ದರಿಂದ ಇವರನ್ನು ಆದಿ ಕುಂಭೇಶ್ವರ ಅಂತ ಕರೆಯುತ್ತಾರೆ.

Z : ಲಿಂಗ ಮೂರ್ತಿಯ shape ಹೇಗಿದೆ ?

ನಾನು : ಲಾಲ್ ಬಾಗ್ ನಲ್ಲಿ ಪಾಟುಗಳು ಸಿಗತ್ವಲ್ಲ...ಕಪ್ಪಗೆ ಪ್ಲಾಸ್ಟಿಕ್ ನಲ್ಲಿ ಇರತ್ತಲ್ಲಾ...ಆ ಪಾಟನ್ನ ಶಿಲೆಯಲ್ಲಿ imagine ಮಾಡ್ಕೊ.

Z : ಮಾಡ್ಕೊಂಡೆ. ಆಮೇಲೆ ?

ನಾನು : ಅದನ್ನ ಉಲ್ಟಾ ಮಾಡು.

Z : ಮಾಡಿದೆ.

ನಾನು : ಅದೇ ಕುಂಭೇಶ್ವರ ಲಿಂಗ ಮೂರ್ತಿ.

Z : ಹೈ ! ಚೆನ್ನಾಗಿರತ್ತೆ ಅಲ್ವಾ ಒಂಥರಾ ?

ನಾನು : ಹೂಂ...ಸಕತ್ತಾಗಿದೆ ನೋಡಕ್ಕೆ ಮಾತ್ರ !

Z : ಹೌದು...

ನಾನು : Mrs. ಕುಂಭೇಶ್ವರ ಅವರ ಹೆಸರು ಮಂಗಳ ನಾಯಕಿ ಅಂತ. ಅವ್ರೂ ಚೆನ್ನಾಗಿದ್ದಾರೆ. cute, beautiful and adorable. ಅವರನ್ನೂ ನೋಡಿಕೊಂಡು, ದೇವಸ್ಥಾನದ architecture ನೋಡಿಕೊಂಡು ಅಲ್ಲಿಂದ ಸ್ವಾಮಿ ಮಲೈ ಗೆ ಹೊರಟೆವು.

Z : ಸ್ವಾಮಿ ಮಲೈ ಕಥೆ ?

ನಾನು : ಇನ್ನೊಂದು ದಿನ ಹೇಳ್ತಿನಿ !

ಅಲ್ಲಿಯವರೆಗೂ line on hold.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...