Thursday, April 24, 2008

a macroscopic uncertainty called life !!!!!!!

Z : ಎಂಥಾ realisation ಉ !!!!!!!!!!!!!!!!!!!!!!!!!!!!!!!!

ನಾನು : ಹು.....ಯಾಕೋ life ಇಷ್ಟೋಂದು uncertain ಆಗತ್ತೆ ಅಂತ ಗೊತ್ತೇ ಇರ್ಲಿಲ್ಲ. And ಅದನ್ನ accept ಊ ಮಾಡ್ಕೊಳ್ಳೊಕಾಗ್ತಿಲ್ಲ !!!!!!!!!!!!!!!!!!!!

Z : ಅಂಥದ್ದೇನ್ ಆಗೋಯ್ತು ಅಂತ ?
ನಾನು : campus recruitments ಶುರು ಮುಂದಿನ ವಾರದಿಂದ .

Z : ಅಷ್ಟೇ ತಾನೆ ?

ನಾನು : what do you mean ? ಯಾವ್ ಕೆಲ್ಸಾ ಅಂತ ಮಾಡೋದು ? ಏನೂ ಅಂತ ಮಾಡೊದು ? how many entrances to write ? how many places to travel ???????????????????????????

Z : question mark ಹಾಕಿರೋ rate ನೋಡಿದ್ರೆ ನಂಗೆ ಭಯ ಆಗತ್ತೆ !!!!!!!!!!!!!!

ನಾನು : ನಂಗೆ ಭಯ ಇಲ್ಲ......... but uncertainty ತುಂಬಾ ಜಾಸ್ತಿ ಆಯ್ತು ಅನ್ಸ್ತಿದೆ. focus ಮಾಡ್ಬೇಕು ಸಲ್ಪ. research oriented jobs ಬರ್ದೇ ಇದ್ರೆ ಏನ್ ಮಾಡೊದು ?

Z : ಹುಡುಕಿಕೊಂಡು ಹೋಗೋದು.

ನಾನು : hmmmmmmmm....................ನೋಡೋಣ. but z.....ಆರಾಮ್ student life ಇಂದ suddenly professional life ಗೆ enter ಆಗು ಅಂದ್ರೆ ?

Z : Its another phase of life..........lets hope for a good beginning.

ನಾನು : yeah ..............but...........I want to do research !!!!!!!!!!!

Z : ok ok ok !!!!!!!!!!!!!! ಕಿರುಚಬೇಡಾ !!!!!!!!!!!!!

ನಾನು : ಹು.... I hope i do it .

Z : you will...

ನಾನು : together we can !!!!!!!!!!!!! ಇದ್ರಲ್ಲಿ uncertainty ಇಲ್ಲ ನೋಡು !!! but ಗೂಬೆ.... last moment ನಲ್ಲ್ಲಿ pessimistic ಆದ್ರೆ ನೀನು.......... ಅಷ್ಟೇ !!!!!!!!!!!

Z : ಇಲ್ಲ ಇಲ್ಲ.... I promise. full confidence ಇಂದ ಮುನ್ನುಗ್ಗಣ....together !!!

ನಾನು : ವೊವ್ !!! ಇಷ್ಟ್ ಬೇಗ ದಾರಿಗೆ ಬಂದೆ !!! I like it !!

Z : ಹೆ ಹೆ ಹೆ !!!!!!!!!

ನಾನು : ಸರಿ....ಹೊರ್ಟೆ....

Z : ಅಹ !! ಹೊರ್ಟ್ವಿ !! to prepare for the best !!!

(line on hold )

Sunday, April 20, 2008

ಅಥ ಏಕೋನವಿಂಶತಿತಮ ಪುರಾಣಮ್ - ಆಟೋ ಪುರಾಣಮ್ - passport interview ಕಾಂಡಃ

Z : ಅರ್ರೆ ಹೌದು......ನಿನ್ ಕೈಗೆ ಪಾಸ್ ಪೋರ್ಟ್ ಬಂತಾ ? ನಿನ್ನ ಯಾವ್ದೋ application ಗೆ passport required ಅಂತಿತ್ತಲ್ವಾ ?

ನಾನು :ಹೌದು. For some purpose . ಕಡೆಗೂ ಬಂತು !! with great difficulty . interview ಆಯ್ತಲ್ಲ last sem exam time nalli. ಅಲ್ಲಿ ನಡೆದ ಕಥೆ ಉಪಪುರಾಣ ಆಗತ್ತೆ Z . ಈಗ ಈ ಆಟೋ ಕಥೆ continue ಮಾಡ್ತಿನಿ.

Z : ಹ ಹ....ಮುಂದುವರೆಸು !

ನಾನು : ಕೀರ್ತನಾರಂಭಕಾಲದಲ್ಲಿ....

Z : ಅದೆಲ್ಲ ನಾನೆ ಮನಸ್ಸಿನಲ್ಲಿ ಹೇಳ್ಕೊತಿನಿ....come to the point.

ನಾನು : ಲೇ !!! ಇದು ಪುರಾಣ !! ಇದಕ್ಕೆ ಸಿಕ್ಕ್ ಸಿಕ್ಕಾಪಟ್ಟೆ description, length ಇರ್ಬೇಕು ಅನ್ನೋದು ಪುರಾಣದ definition u . ಒಬ್ಬ physicist ಆಗಿ definition follow ಮಾಡ್ದೇ ಇದ್ರೆ ಗತಿ ಯೇನು ?????

Z : ನೀನು definition ನ follow ಮಾಡದೇ science ನ revolutionise ಮಾಡು head ruled !!! break the rules !!!


ನಾನು : ಆಗಲ್ಲ....chance ಎ ಇಲ್ಲ. ನಾನು ನಿನ್ ಥರ ಹೇಗ್ ಹೇಗೋ ಯೋಚನೆ ಮಾಡೋಕೆಲ್ಲ ಆಗಲ್ಲ. i am basically very organised in thought u see....


Z : ಜನ್ಮದಲ್ಲಿ ಹಠ ಬಿಡಲ್ಲ...ಸರಿ ಮಾ.....ಶುರು....


ನಾನು : ಕಲಿಯುಗದ ಪ್ರಥಮ ಪಾದದಲ್ಲಿ, ಶಾಲೀವಾಹನ ಶಕೆಯಲ್ಲಿ, 2007 ನೇ ವರ್ಷದಲ್ಲಿ, ಮಾರ್ಗಶಿರ ಮಾಸದಲ್ಲಿ(december 20th ) ರಂದು ಕಾಲೇಜಿನಲ್ಲಿ ಪರೀಕ್ಷೆ ಮುಗಿದ ಮಾರನೇ ದಿನದ [ಅ]ಶುಭ ಮುಹೂರ್ತದಲ್ಲಿ, ಭಾಗ್ಯದಾಯಕವಾದ ಬಲಗಾಲನ್ನು ತ್ರಿಚಕ್ರವಾಹನದಲ್ಲಿ ಮೊದಲು ಇಟ್ಟು ಕುಳಿತಿದ್ದೆಯಾದರೂ ಸಂಭವಿಸಿದ [ದುರ್]ಘಟನೆ ಇದು !


exam ಮುಗಿದು ಹೋಯ್ತು ಅಂತ ಸಖತ್ ಖುಷಿ ಆಯ್ತು !! ಮಧ್ಯಾಹ್ನ ಕೋರಮಂಗಲ ಪಾಸ್ಪೋರ್ಟ್ ಆಫೀಸಿಗೆ ಹೋಗಿ interview attend ಮಾಡೋದಿತ್ತು. ಅದಕ್ಕೆ ಕೆಲವು documents ಬೇಕಿತ್ತು. documents ತಗೊಂಡು, ಕತ್ರಿಗುಪ್ಪೆ ಇಂದ gandhi bazaar ಗೆ ಹೋಗಿ ಅಲ್ಲಿಂದ ಇನ್ನಷ್ಟು documents collect ಮಾಡಿಕೊಂಡು ಕೋರಮಂಗಲಕ್ಕೆ ಹೋಗಬೇಕಿತ್ತು. ಸರಿ, ಕತ್ರಿಗುಪ್ಪೆ ಇಂದ ಬಸ್ ನಲ್ಲಿ ಹೋಗಲು ಕಾದೂ ಕಾದೂ ಸಾಕಾಗಿ,ಕಡೆಗೆ ಆಟೋ ಹತ್ತಿದೆ.

Z : so far so good. continue.

ನಾನು : ಅವನು ಗಾಡಿ ಸರಿಯಾಗೇ ಓಡಿಸಿದ.....ಗಾಂಧಿ ಬಜಾರ್ನಲ್ಲಿ ನಿಲ್ಲಿಸಿದ. ಮೀಟರ್ ನಲವತ್ತು ತೋರ್ಸ್ತಿತ್ತು. ಕತ್ರಿಗುಪ್ಪೆ ಇಂದ exactly 3.5 kms ಇದೆ . 21 ಆಗ್ಬೇಕಿತ್ತು ಅಂತ ಕೇಳಿದೆ.


ಅವನು : ಮೇಡಮ್.....ಮೀಟರ್ ಸರೀಗಿದೆ. ನಿಮಗೆ ಮೀಟರ್ ಹೇಗೆ ಓಡತ್ತೆ ಅಂತ ಗೊತ್ತಿಲ್ಲ...ಸುಮ್ಮನೆ ಮಾತಾಡದೇ ನಲವತ್ತು ರೂಪಾಯಿ ಕೊಡಿ.

ನಾನು : ಮೀಟರ್ ಹೇಗೆ ಓಡತ್ತೆ ಅಂತ ನಮಗೆ ಗೊತ್ತಿಲ್ಲಾ ಅಂದುಕೊಂಡಿದೀರಾ ? ೨ ಕಿಲೊಮೇಟರ್ ಗೆ ಹನ್ನೆರಡು ರೂಪಾಯಿ,( last december nalli rates revise aagirlilla ) . ನಂತರ ಪ್ರತಿ ನೂರು ಮೀಟರ್ ಗೆ ಐವತ್ತು ಪೈಸೆ ತಾನೆ ?

ಅವನು :ನೂರು ಮೀಟರ್ ನ ಹೇಗೆ ಅಳಿತೀವಿ ಅಂತ ನಿಮ್ಗೆ ಗೊತ್ತಿಲ್ಲ ಮೇಡಮ್....ಗಲಾಟೆ ಮಾಡ್ಬೇಡಿ...ಈಗಿನ ಕಾಲದ ಮಕ್ಕಳು...ಬರೀ ಪುಸ್ತಕದ ಬದನೇಕಾಯಿ...ಒಂದು ಚೂರು common sense ಇಲ್ಲ.

ನಾನು : ಓಹ್ !! ನನ್ನ common sense and general knowledge ವರೆಗೂ ಬಂತಾ ಈ ವಿಷಯ ? ಸರಿ, ತಾವು ಸರ್ವಜ್ಞರಲ್ಲವೇ ? ಎರಡು light ಕಂಬಗಳ ನಡುವಿನ ಅಂದಾಜು ಅಂತರ ಯೆಷ್ಟು ?

ಅವನು : ಮೌನ.

ನಾನು : ಸರ್ವಜ್ಞರೇ...ಮರೆತುಹೋಗಿದ್ದೀರಿ ಅನ್ಸತ್ತೆ...ಹೋಗ್ಲಿ ಬಿಡಿ, ಎರಡು ಬಸ್ ಸ್ಟಾಪ್ ನಡುವಿನ ಅಂತರ ಯೆಷ್ಟು ?

ಅವನು : ಮೌನ continued.

ನಾನು : common sense ಇಲ್ಲ ಅಲ್ವಾ ನಮ್ಗೆ ? ಅದಕ್ಕೆ ನೋಡಿ ನಮ್ಗೆ ಗೊತಾಗಿರೋದು, ಎರಡು light ಕಂಬಗಳ ಅಂದಾಜು ಅಂತರ ಐವತ್ತು ಮೀಟರ್‍ ಮತ್ತು ಎರಡು ಬಸ್ ಸ್ಟಾಪ್ ನ ಅಂತರ ಅರ್ಧ ಕಿಲೋಮೀಟರ್ (ಕೆಲವೊಮ್ಮೆ ಒಂದು ಕಿಲೋಮೀಟರ್)ಅಂತ....ನಿಮ್ಗೆ common sense ಇದೆ...ಅದಕ್ಕೆ ಗೊತಾಗ್ಲಿಲ್ಲ.

ಅವನು : ಇರ್ಬಹುದು...ಅದಕ್ಕೂ ಇದಕ್ಕೂ ಏನ್ ಸಂಬಂಧ ? ಕೊಡಿ ದುಡ್ಡು.

ನಾನು : ನಾನು ಮೊದಲಿಂದಲೇ ಗಮನಿಸ್ತಾಯಿದೀನಿ...ನಿಮ್ಮ ಮೀಟರ್ರು ಒಂದೇ ಕಿಲೋಮೇಟರ್ ಗೆ ಓಡಕ್ಕೆ ಶುರು ಮಾಡಿದೆ...ಸೀತಾ ಸರ್ಕಲ್ಲಿಗೆ ಬರೋವಾಗ್ಲೇ ಮೀತರ್ ಓಡ್ತಿತ್ತು..(ಕತ್ರಿಗುಪ್ಪೆ ಇಂದ ಸೀತಾ ಸರ್ಕಲ್ಲು ಒಂದು ಕಾಲು ಕಿಲೋಮೀಟರ್ರು )...ಸೀತಾ ಸರ್ಕಲ್ ಎಲ್ಲಿ...ಗಾಂಧಿ ಬಜಾರ್ ಸರ್ಕಲ್ ಎಲ್ಲಿ ? ಹೇಗೂ ಪೋಲೀಸ್ ಸ್ಟೇಷನ್ ಮುಂದೆ ನೆ ಅನಾಯಾಸವಾಗಿ ಗಾಡಿ ನಿಲ್ಲಿಸಿದ್ದೀರಿ. ನಡಿರಿ ಒಳಗೆ...ಅಲ್ಲೇ ದುಡ್ದ್ settle ಮಾಡ್ತಿನಿ.

ಹತ್ತಿದೆ ಮೆಟ್ಟಿಲು ಪೊಲೀಸ್ ಸ್ಟೇಷನ್ ದು.


ಅವ ಹಿಂದಿನಿಂದ... ಮೇಡಮ್ !!!!!!!!!!!!!!!!!!

ನಾನು : ಏನು ? ಬರ್ತಿರಾ ಇಲ್ವಾ ಒಳಗೆ ?

ಅವನು : ಕ್ಷಮಿಸಿಬಿಡಿ ಮೇಡಮ್ ...ನಿಜ್ವಾಗ್ಲು ತಪ್ಪಾಯ್ತು. ನಿಮ್ಮಂಥವರಿಗೆ ಇದೆಲ್ಲ ಗೊತ್ತಿರಲ್ಲ ಅಂದುಕೊಂಡೆ....ಸಾರಿ. ಕೊಡಿ ಯೆಷ್ಟ್ ಕೊಡ್ತೀರೊ....

ನಾನು : ತಗೊಳ್ಳಿ ಇಪ್ಪತ್ತೊಂದು ರೂಪಾಯಿ. 3. 5 kms ಗೆ.

ಮರು ಮಾತಾಡದೇ ದುಡ್ಡು ತಗೊಂಡು ಹೊರಟ. document collect ಮಾಡಿ, ಬಸ್ ನಲ್ಲಿ ಕೋರಮಂಗಲಕ್ಕೆ ಹೋದೆ !!

Z : auto meter analogy ಮೇಲೆ sewing machineಗೆ bobbin thread level indicator fabricate ಮಾಡಿ, ದಾರ ಖಾಲಿ ಆದಾಗ ಗೊತ್ತಾಗೋ ಹಾಗೆ indicator ನ fabricate ಮಾಡಿ IIsc ಗೆ select ಆಗಿದ್ದೀ ನೀನು out of some 14 thousand people in the entire country...the lucky 42 under KVPY programme ...while graduation isn't it ? ನಿನ್ ಕೈಲಿ ಸಿಕ್ಕಾಕೊಂಡ !!!

ನಾನು : yeah ! its not that I know these things because I have fabricated meters which measure distances and length, but it is common sense which everybody ought to have Z . see, ನಮಗಿಂಥದ್ದು ಗೊತ್ತಿಲ್ಲಾ ಅಂತಾನೇ ಇವರು ನಮ್ಮನ್ನ ಆಟ ಆಡ್ಸೋದು. analogue meters ದು ಒಂದು ಥರಾ ಕಾಟ ಆದ್ರೆ digital ದು ಇನ್ನೊಂದು ಥರ. ಕೆಲವು ಮೀಟರ್ಗಳಲ್ಲಿ the money increases even before the meter records 100 meters. ಇಲ್ಲಿ calibration ಎ ಸರಿಗಿಲ್ಲ . As I had designed the meters in both versions, i know the drawbacks of them. analogue meters do not show the waiting time but keep running when the engine is on in a signal...(thats why most drivers do not switch off engines) . digital ones show the waiting time, but no calibration ( that is one does not know for how many seconds/minutes the meter runs to the next value ). ಹೀಗೆ ಒಂದನ್ನೂ ಸರೀಗೆ ಮಾಡ್ದೆ, ನಮ್ಮ ದುಡ್ದನ್ನ ಅನವಶ್ಯಕವಾಗಿ ಪೋಲು ಮಾಡಿಸ್ತಾರೆ really.

We need to educate ourselves !! Its all for us....and for our protection.

Z : ನಿಜ. ಒಪ್ಪುತೀನಿ . ನಾವು ಹುಷಾರಾಗಿರ್ಬೇಕು. ಹೋಗೋವಾಗ meter ಸರಿಗಿದಿಯಾ ಅಂತ ನಿನ್ನ ಥರ ಎರಡು light poles ಮಧ್ಯದ distance ಗೆ calibrate ಮಾಡ್ಬೇಕು ಮೀಟರ್ ನ. ಇವರು ಬೇಕೂ ಅಂತ ಹಳ್ಳ ದಿಣ್ಣೆಗಳಲ್ಲಿ ಓಡಿಸ್ತಾರೆ...ನಮಗೆ ಅದನ್ನ total distance ಇಂದ subtract ಮಾಡ್ಬೇಕು ಅಂತ ಗೊತ್ತಿರತ್ತೆ....ಅದ್ರೆ meter ಗೆ ? its a measurement too !! meter keeps running !! ಆದ್ದರಿಂದ...ಕಳಪೆ ರೋಡ್ ಗಳಲ್ಲಿ ಹುಷಾರಾಗಿರ್ಬೇಕು .

ನಾನು : good ಕಣೆ !! ನೀನು ತಕ್ಕಮಟ್ಟಿಗೆ ಕಲ್ತೆ physics and maths ನ !! i am happy !! ನಿನ್ನ ಥರ ಎಲ್ಲರ್ಗೂ ಇದು ಗೊತ್ತಾದ್ರೆ ಸಾಕು. ಪುರಾಣ ರಚನೆಯ ಉದ್ದೇಶ ಸಾರ್ಥಕವಾಗತ್ತೆ.

ಇತಿ ಆಟೋ ಪುರಾಣೇ ಪಾಸ್ಪೋರ್ಟ್ interview ಕಾಂಡಃ ಸಂಪೂಣಃ

(line on hold)

(ಸಶೇಷ)

Saturday, April 12, 2008

ಅಥ ಎಕೋನವಿಂಶತಿತಮ ಪುರಾಣಮ್- ಆಟೋ ಪುರಾಣಮ್- ಸೌತ್ ಎಂಡ್ ಸರ್ಕಲ್ ಕಾಂಡ

Z : ಇರೋ ಹದಿನೆಂಟು ಪುರಾಣಗಳನ್ನೇ ಜನರಿಗೆ ಓದಕ್ಕೆ time ಇಲ್ಲ...ಇನ್ನು ನೀನು ಹತ್ತೊಂಭತ್ತನೇ ಪುರಾಣ ನ ರಚನೆ ಮಾಡಿದ್ರೆ ಗತಿ ಎನು ?

ನಾನು : ಇದು ಹಾಗಲ್ಲ ವಿಷಯ Z .ಜನರು ಆ ಹದಿನೆಂಟು ಪುರಾಣಗಳನ್ನ ನಿಧಾನವಾಗಿ ಓದಲಿ. ಆದರೆ ಇದು current issue ಬಗ್ಗೆ ಇರೋದು. ಇದನ್ನ ಓದಲು ಜನ time ಮಾಡಿಕೊಂಡರೆ ಒಳ್ಳೆಯದು. ಪುರಾಣಗಳಂತೆ ಇದನ್ನು ಓದುವುದರಿಂದ ಉಪಯೋಗವಂತೂ ಖಂಡಿತಾ ಇದೆ. But let me make myself clear. ನನಗೆ ಯಾಜ್ಞವಲ್ಕ್ಯರಂತಾಗಲಿ, ನಾರದರಂತಾಗಲೀ ಆಗಲು ಖಂಡಿತಾ ಆಸೆ ಏನು ಇಲ್ಲ. but it so happens that, It just happens !!!!

Z : ಕರ್ಮಕಾಂಡ !! continue.

ನಾನು : correction. ಇದು ಸೌತ್ ಎಂಡ್ ಸರ್ಕಲ್ ಕಾಂಡ. Well, to start with....

Z : ಲೇ..................ಕನ್ನಡದಲ್ಲಿ ಶುರು ಮಾಡು !!


ನಾನು : ಹ ! ನೆನಪಿಸಿದ್ದಕ್ಕೆ ಧನ್ಯವಾದಗಳು ( ಥ್ಯಾಂಕ್ಸ್ ಅಂದ್ರೆ ಒದಿತಾಳೇ ಅನ್ಸತ್ತೆ ! )

ಕಲಿಯುಗದ ಪ್ರಥಮ ಪಾದದಲ್ಲಿ, ಶಾಲೀವಾಹನ ಶಕೆಯಲ್ಲಿ, ೨೦೦೮ ನೇ ವರ್ಷದಲ್ಲಿ, ಚೈತ್ರ ಶುದ್ಧ ದ್ವಿತೀಯಾ (ಏಪ್ರಿಲ್ ೯ )ರಂದು ಕಾಲೇಜಿನಲ್ಲಿ ಪರೀಕ್ಷೆ ಪ್ರಾರಂಭವಾದ ದಿನದ [ಅ]ಶುಭ ಮುಹೂರ್ತದಲ್ಲಿ, ಭಾಗ್ಯದಾಯಕವಾದ ಬಲಗಾಲನ್ನು ತ್ರಿಚಕ್ರವಾಹನದಲ್ಲಿ ಮೊದಲು ಇಟ್ಟು ಕುಳಿತಿದ್ದೆಯಾದರೂ ಸಂಭವಿಸಿದ [ದುರ್]ಘಟನೆ ಇದು !

Z : hmm...ಆಮೇಲೆ....

ಕೈಯಲ್ಲಿ ನನ್ನ ಅತಿ ಭಾರವಾದ ನೀಲಿ folder-ಉ....ಅದರೊಳಗೆ ಕಷ್ಟ ಪಟ್ಟು ಕುಳಿತಿರುವ ನನ್ನ astrophysics notes...[i seriously think astrophysics notes must be in "space" ....they can be better accessed and understood there and very well written ......ಇರ್ಲಿ ಇದು ಉಪಕಥೆ ಆಗೋಗತ್ತೆ....ಪುರಾಣದ ಬಗ್ಗೆ ಮಾತಾಡೋಣ]

ಇಟ್ಕೊಂಡು ಅಕ್ರಮ - ಸಕ್ರಮ ಗಲಾಟೆಯಲ್ಲಿ ತ್ರಿಶಂಕು ಸ್ಥಿತಿಯಲ್ಲಿರುವ, ಅರ್ಧ ನಿರ್ಮಿತವಾಗಿರುವ ರಶ್ಮಿ ಕಲ್ಯಾಣ ಮಂಟಪದ ಬಳಿ ಬಂದು ನಿಂತೆ. ಎಂದಿನಂತೆ ಹತ್ತು ನಿಮಿಷ ಕಾದಮೇಲೆ ಆಟೋ ಒಂದರ ದಿವ್ಯದರ್ಶನವಾಯಿತು. "South end circle ?" ಅಂದೆ. "ಹತ್ತಿ ಮೇಡಂ" ಅಂದ. ವಿದ್ಯಾಪೀಠದಿಂದ ಬನಶಂಕರಿ ೨ನೆ ಹಂತಕ್ಕೆ ಹೋಗುವ ರಸ್ತೆಯಲ್ಲಿ ಆಟೋ ತಿರುಗಿಸುತ್ತಿದ್ದ. ನಾನು last minute revision ಮಾಡುತ್ತಿದ್ದುದರಿಂದ ಅವನು ನನ್ನ ದಾರಿ ತಪ್ಪಿಸಲು ಕಾಯುತ್ತಿದ್ದ.....But ಸಿಕ್ಕಾಕೊಂಡ.

" ಹೇಗ್ರಿ ಹೋಗ್ತಿದ್ದೀರಿ ?" ಎನ್. ಆರ್. ಕಾಲೋನಿ ಮೇಲೆ ಹೋಗಿ...ಏನು ಜಯನಗರ full ಸುತ್ತಿಸಿ south end circle ಗೆ ಕರ್ಕೋಂಡ್ ಹೋಗ್ತೀರಾ ? ಅಂತ ಸಲ್ಪ light ಆಗಿ ಗದರಿದೆ. first shock ಅವನಿಗೆ. ಅವನಿಗೆ ನಂಗೆ ಕನ್ನಡ ಬರತ್ತೆ ಅಂತಾನೇ ಗೊತ್ತಿರ್ಲಿಲ್ಲ.ಕೈಯಲ್ಲಿ folder, ನೇತು ಹಾಕಿಕೊಂಡಿರುವ ಪರ್ಸ್ ಮತ್ತು handsfree mode ನಲ್ಲಿದ್ದ ಮೊಬೈಲ್ ನೋಡಿ ನನ್ನನ್ನು ಕಾಲ್ ಸೆಂಟರ್ employee ಎಂದು ಭಾವಿಸಿದ್ದನೇನೋ !! ಬ್ರಿಟೀಷರ ಬಳುವಳಿ " ಸಾರಿ" ಪದವನ್ನು ಬಿಟ್ಟಿ ಬಿಸಾಕಿ ಗಾಡಿ ನೇರ ನಡೆಸಿ ಎನ್. ಆರ್ ಕಾಲೋನಿಗೆ ಬಂದ.ಅಲ್ಲಿಂದ ನಾಗಸಂದ್ರ ವೃತ್ತದಲ್ಲಿ ತಿರುಗಿಸಿ ಮತ್ತಷ್ಟು ಸುತ್ತಿಸಲು ನೋಡಿದ. ನಾನು ಹೀಗೆ ಬೇಡ...ಸೀಧಾ ಹೋಗಿ ಅಂದೆ. ಅವನು ಕಣ್ಣು ಕೆಕ್ಕರಿಸಿ " ಏನ್ ಮೇಡಂ ನಮಗೆ ರೂಟ್ ಗೊತ್ತಿಲ್ಲ ಅಂತ ಅಂದುಕೊಂಡಿದ್ದೀರಾ ? ನಾವೂ ಬೆಂಗಳೂರಿಗರೇ !!! " ಆಂದ. ನಾನು " ಗೊತ್ತಾಯ್ತು ಬಿಡಿ ! ನೀವು ಬನಶಂಕರಿ ಸೆಕೆಂಡ್ ಸ್ಟೇಜ್ ಗೆ ಗಾಡಿ ತಿರುಗಿಸಿದಾಗ್ಲೇ ಗೊತಾಯ್ತು ನೀವು ಬೆಂಗಳೂರಿಗರೇ ಅಂತ. ನಾವು ಹೇಳಿದ ಹಾಗೆ ಓಡಿಸೋಕೆ ನೀವು ಇರದೋ ಅಥವಾ ನಿಮ್ಮ ಆಜ್ಞೆ ಆಣತಿ ಅಪ್ಪಣೆಗಳನ್ನ ಪಾಲಿಸೋಕೆ ನಾವೋ ? " ಅಂದೆ. ಕನ್ನಡ ಕೇಳಿ ಭಯ ಆಯ್ತು ಅನಿಸುತ್ತೆ....ಸುಮ್ನೆ ಮಾತಾಡದೇ ಸೌತ್ ಎಂಡ್ ಸರ್ಕಲ್ ಗೆ ಬಂದ. ಸಿಗ್ನಲ್ ಇತ್ತು. ಪೂರ್ತಿ ಮೂರು ನಿಮಿಷ. ನಾನು " ರಾಮಕೃಷ್ಣ ಆಸ್ಪತ್ರೆ ರಸ್ತೆಯಲ್ಲಿ ಹೋಗಿ ಅಂದೆ. ಬೆಂಗಳೂರಿಗ...ಗೊತ್ತಿದೆ ಅಂತ ಕೊಚ್ಚಿಕೊಳ್ಳುತ್ತಿದ್ದ ಭೂಪನಿಗೆ. ಅವನು ನೀಟ್ ಆಗಿ ಆರ್.ವೀ ರಸ್ತೆಯಲ್ಲಿ ಗಾಡಿ ತಿರುಗಿಸಿದ. ನನಗೆ ರೇಗೇ ಹೋಯ್ತು.


Z : ಹ್ಮ್ಮ್ಮ್.....ಕಾಳಿಯ ಅವತಾರವಾಯ್ತು....ಅದೂ ಬೆಳಗ್ಗೆ ಬೆಳಗ್ಗೆ !!
ನಾನು : I couldn't help it Z . internals tension ಬೇರೆ. ಸಮಯ ಎಂಟು ಇಪ್ಪತ್ತಾಗಿತ್ತು. ೮.೪೫ ಗೆ ಪರೀಕ್ಷೆ. "ನಿಲ್ಲಿಸಿ ಗಾಡಿ" ಎಂದೆ. "ಓಹ್ ...ಸಾರಿ ಮೇಡಂ....ನೀವು ರಾಮಕೃಷ್ಣ ನರ್ಸಿಂಗ್ ಹೋಮ್ ರಸ್ತೆ ಅಂದಿರಿ....ಇಲ್ಲೇ ವೆಸ್ಟ್ ಗೇಟ್ ಬಳಿ ಯು ಟರ್ನ್ ತಗೋಂಡು ವಾಪಸ್ ಬರ್ತಿನಿ" ಅಂದ. "ಗಾಡಿ ನ ಇಲ್ಲೇ ಲೆಫ್ಟ್ ನಲ್ಲಿ ನಿಲ್ಲಿಸ್ತೀರೋ ಇಲ್ಲವೋ...." ಗುಡುಗಿದೆ. ಮೊಬೈಲ್ ಇಂದ ಚೈತ್ರಳ ತಂದೆ ಲಾಯೆರ್ ಅಂಕಲ್ ಗೆ ಡಯಲ್ ಮಾಡಲು ನಂಬರ್ ರೆಡಿಯಾಗಿಟ್ಟಿದ್ದೆ. ಆದರೆ ಪರಿಸ್ಥಿತಿ ಅಲ್ಲಿಗೆ ಹೋಗಲಿಲ್ಲ. ಅವನು ಮರುಮಾತಾಡದೇ ನಿಲ್ಲಿಸಿದ. ಮಿನಿಮಮ್ ಈಗ ಹದಿನಾಲ್ಕಾದರೂ ಅವನು ಮೀಟರ್ ಅಪ್ಡೇಟ್ ಮಾಡಿಸಿರಲಿಲ್ಲ. ಮೂವತ್ತು ರೂಪಾಯಿ ಆಗಿತ್ತು. "ನಲವತ್ತು ಕೊಡಿ...ಫಾರ್ಟಿ ರುಪೀಸ್ " ಎಂದ.

ನಾನು : " ಮೀಟರ್ conversion table ಎಲ್ಲಿ ?"

ಅವನು : "ಮನೇಲಿದೆ "

ನಾನು : ತಿಜೋರಿಯಲ್ಲಿಟ್ಟು ಬೀಗ ಹಾಕಿ. ಕಳೆದು ಹೋಗದಂತೆ ಕಾಪಾಡಿಕೊಳ್ಳಿ. ಅದಿರಲಿ, ಮೀಟರ್ ಮೂವತ್ತು ತೋರಿಸುತ್ತಿದ್ದರೆ ನಾನು ಕೊಡಬೇಕಿರುವುದು ಮೂವತ್ತೈದಲ್ವಾ...ಹೇಗೆ ನಲವತ್ತಾಯಿತು ?

ಅವನು : ಮೇಡಮ್ ನಿಮಗೆ ಈ ಲೆಕ್ಕಚಾರಗಳೆಲ್ಲಾ ಅರ್ಥ ಆಗಲ್ಲ.... ಎಂಥೆಂಥದೋ ಲೆಕ್ಕ ಮಾಡ್ಬೇಡಿ. ಕೈಯ್ಯಲ್ಲಿ ಪುಸ್ತಕ ಇದ್ದರೆ ಸಾಲದು. ಬುದ್ಧಿ ಇರಬೇಕು.

ನಾನು : ನಾನು ಓದೋಕೆ ಬರೆಯೋಕೆ ಬರದವಳೇನಲ್ಲ. ನೋಡಿ ನೀವು ಮಿನಿಮಮ್ ನ ಎರಡು ರೂಪಾಯಿ ಏರಿಸಿದ್ದೀರಿ ಎರಡು ಕಿಲೋಮೀಟರ್ ಗೆ . ಅಂದರೆ ಹಳೇ ೧೨ ರೂಪಾಯಿ ಮಿನಿಮಮ್ ನ ಆರನೇ ಒಂದರಷ್ಟು. ಆದ್ದರಿಂದ ಈಗ ಮೀಟರ್ ರೀಡಿಂಗ್ ನ ಆರನೇ ಒಂದಷ್ಟು ಭಾಗವನ್ನು ನಾವು ಕಂಡುಹಿಡಿದು, ಈ ಮೊತ್ತಕ್ಕೆ ಸೇರಿಸಿ ಒಟ್ಟು ದುಡ್ಡು ಕೊಡಬೇಕು ತಾನೆ ? ಮೂವತ್ತರ ಆರನೇ ಒಂದು ಭಾಗ ಐದು ರೂಪಾಯಿ. ಆದ್ದರಿಂದ ನಿಮಗೆ ನಾನು ಮೂವತ್ತೈದು ಕೊಡಬೇಕು ತಾನೆ ?

ಅವನು : ನಾನು ಒಪ್ಪಲ್ಲ. ನಿಮಗೆ ಹೇಗೆ ಗೊತ್ತಾಯ್ತು ಇದು ?

ನಾನು : ಎಲ್ಲರನ್ನೂ ಕುರಿಗಳು ಅಂದುಕೊಂಡಿದ್ದೀರಾ ನೀವು ? ನಮಗೆ ದೇವರ ಕೃಪೆಯಿಂದ ಸ್ವಲ್ಪ ಬುದ್ಧಿ ಇದೆ.ನಿಮ್ಮ conversion table ನ line by line ಬರೆದು ತೋರಿಸಲಾ ? 12.50 ರಿಂದ ಹಿಡಿದು 15 ರೂಪಾಯಿ ವರೆಗೆ ನನ್ನ ಲೆಕ್ಕಾಚಾರದ ಪ್ರಕಾರ ಮೊಬೈಲ್ ನಲ್ಲಿ ಮಾಡಿ ತೋರಿಸಿದೆ. ಅವನಿಗೆ ಬೆವರಿಳಿಯಿತು. ಮೂವತ್ತೈದು ತಗೊಂಡು ಜಾಗ ಖಾಲಿ ಮಾಡಿ. ಏನಾದರೂ ಹೆಚ್ಚಿಗೆ ದುಡ್ಡು ಬೇಕಿದ್ದರೆ ಬಸವನಗುಡಿ ಪೋಲೀಸ್ ಸ್ಟೇಷನ್ ಗೆ ಬನ್ನಿ...ಮಾತಾಡೋಣ.
ಅವನು : " ಪೋಲಿಸ್ ಸ್ಟೇಷನ್ ವಿಷಯ ಎತ್ತಬೇಡಿ . ಸರಿ...ಐದು ರೂಪಾಯಿ ದಿಸ್ಕೌಂಟ್ ಕೊಡ್ತೀನಿ...ಕೊಡಿ ಮೂವತ್ತೈದೇ "
ನಾನು : ದಿಸ್ಕೌಂಟ್ ಪದದ ಅರ್ಥ ಗೊತ್ತಿದಿಯೇನ್ರಿ ನಿಮಗೆ ? ನಾನು ಕೊಡಲೇನು ದಿಸ್ಕೌಂಟ್ ? ಪೂರ್ತಿ 35 ರೂಪಾಯಿ ದಿಸ್ಕೌಂಟ್ . ಬಿಡಿಗಾಸು ಕೊಡಲ್ಲ...ಹೊರಡಿ.
ಅವನು : ಮೇಡಂ...ತಪ್ಪಾಯ್ತು. ಮೊದಲ ಬೋಣಿ ನೀವೇ ಮಾಡಬೇಕು. ಕೊಡಿ ಮೂವತ್ತೈದೆ.
ಮೂವತ್ತೈದು ರೂಪಾಯಿ ಕೊಟ್ಟು ಅಲ್ಲಿಂದ ನಮ್ಮ ಕಾಲೇಜಿಗೆ ಬರುವ ಹೊತ್ತಿಗೆ ಪರೀಕ್ಷೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಬಂದದ್ದೇ ನನ್ನ ಸ್ನೇಹಿತೆಯೊಬ್ಬಳು-
" what happened lakshmi ? Anything wrong ? you look upset . " ಅಂದಳು.

ನಾನು : No yaar..nothing. I had a fight with an auto driver and was stuck there for almost 10 minutes. That took my time. "
ಅವಳು : Is he there even now ? You want me to come down and talk to him ?
ನಾನು : No, he is gone. I thought I would be late. But thankfully... I am just in time.

Z : ರಾಮಾ....internals start ಆಗೋಗಿದ್ದಿದ್ರೆ ಗತಿ ಏನು ? ಪೋಲೀಸ್ ಸ್ಟೇಷನ್ ಅಂತೆಲ್ಲ ನೀನು ಒಬ್ಬೊಬ್ಬ್ಳೆ ಹೋಗೋದು ಸರಿ ಇಲ್ಲ head ruled !

ನಾನು : ಸುಮ್ಮನೆ ಇರು.ನಿನ್ನಂಥವರು ಹೀಗೆ ಹೆದರೋದರಿಂದಲೇ ಇಷ್ಟೆಲ್ಲ ಆಗಿ, ಇಂಥವರೆಲ್ಲ ಕೊಬ್ಬಿ ಹೋಗಿರೋದು. ನಾವು ಹೆದರಿದರೆ ನಮ್ಮನ್ನು ಹೆದರಿಸಲು ಲೋಕ ಕಾಯ್ತಾಯಿರತ್ತೆ. ಧೈರ್ಯಂ ಸರ್ವತ್ರ ಸಾಧನಮ್. ನೆನಪಿಟ್ಟುಕೋ. ಅಷ್ಟಕ್ಕು...ಬಸವನಗುಡಿಯಲ್ಲಿ ಮಹಿಳಾ ಪೋಲೀಸ್ ಠಾಣೆ ಇದೆ. ಸರ್ಕಲ್ ಇನ್ಸ್ಪೆಕ್ಟರ್ ಅಪ್ಪನಿಗೆ ಗೊತ್ತಿದ್ದಾರೆ. ನನಗೆ ಭಯ ಇಲ್ಲ. ಗೊತ್ತಲ್ಲ ನಿಂಗೆ ? ಜನ್ಮ ಜಾಲಾಡ್ಬಿಡ್ತೀನಿ ಯಾರಾದ್ರು ತಕರಾರು ಮಾಡಿದ್ರೆ. ಅದಕ್ಕೂ ಬಗ್ಗದಿದ್ದರೆ ಇವರೆಲ್ಲ ಇದ್ದಾರಲ್ಲ !!


Z : ನೀನು ಹೇಳೋದು ಸರಿನೇ. ನಾವು ಹೆದರಿ ಏನೂ ಪ್ರಯೋಜನ ಇಲ್ಲ. We have to learn to defend and protect ourselves. World is not a safe place anymore !!

ನಾನು : Very true ! ನಾವೂ ಸ್ವಲ್ಪ ಹುಶಾರಾಗಿರ್ಬೇಕು. ನಾವು ಏನೆ tension ನಲ್ಲಿ ಇರಲಿ, ಫೋನ್ ನಲ್ಲಿ ಮಾತು ಕಥೆಯಲ್ಲಿರಲಿ, ಓದುತ್ತಿರಲಿ, ಹೋಗುತ್ತಿರುವ ರಸ್ತೆಯ ಬಗ್ಗೆ ಎಚ್ಚರ ವಹಿಸಬೇಕು. ಗಮನ ವಹಿಸದೇ ಅವರು ನಮಗೆ ಮೋಸ ಮಾಡಲು ಪ್ರಚೋದನೆ ನೀಡಬಾರದು .

ಇತಿ ಅಟೋ ಪುರಾಣೇ ಸೌತ್ ಎಂಡ್ ಸರ್ಕಲ್ ಕಾಂಡಃ ಸಂಪೂರ್ಣಃ

ಇನ್ನೊಂದು ಕಾಂಡದ ಕಥೆಯನ್ನು ಅತಿ ಶೀಘ್ರದಲ್ಲಿ ಹೇಳುವೆ.
ಅಲ್ಲಿಯವರೆಗೂ ...Line on hold.

(ಸಶೇಷ)

Tuesday, April 8, 2008

there is always a next time

ನಾನು : There is always a next time.

Z : ಹೌದಾ ?

ನಾನು : ಹೌದು.

Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ?

ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯೋದು ನಾನು. ನೀರಿಗೆ ಬಿದ್ದಮೇಲೆ ಈಜು ಕಲಿಯಲೇ ಬೇಕು. ಮೊದಲನೇ ಸಲ ಆಗಲಿಲ್ಲ ಅಂತ ಕೊರಗಿ ಪ್ರಯೋಜನವಿಲ್ಲ. learn to be positive Z ! stop being childish and grow up. ಸಣ್ಣ ಸಣ್ಣ ವಿಷಯಗಳಿಗೆ ಬೇಜಾರು ಮಾಡಿಕೊಂಡು ಅಳುವುದರಲ್ಲಿ ಏನೂ ಪ್ರಯೋಜನವಿಲ್ಲ. Lets take a count. how many times have you cried and how many times have I cried ?

Z : definitely ನಾನೇ ಜಾಸ್ತಿ ಅತ್ತಿರೋದು.

ನಾನು : ಇನ್ನು ಸಾಕು. ನಿಲ್ಲಿಸು ನಿನ್ನ ಅರಣ್ಯರೋದನ. learn to face the world. ಅಷ್ಟಕ್ಕೂ, you are not at fault. Then why worry ? Newton's laws ನಿಜವಾಗಿದ್ದರೆ ನಿನಗೆ ಸುಖವೂ ಇಷ್ಟರಲ್ಲೇ ದೊರಕಲಿದೆ. [According to head ruled prolonged contemplation and analysis]. lets wait. As I said, There is always a next time.

Z: There is always a next time.

(line on hold)

Sunday, April 6, 2008

ಬರಲಿದ್ದಾನೆ ಸರ್ವಧಾರಿ

Z : ನಾಳೆ ಚಾಂದ್ರಮಾನ ಯುಗಾದಿ. ಸರ್ವಧಾರಿ ಬರಲಿದ್ದಾನೆ. ನಾನಂತೂ ಬೇವು ಬೆಲ್ಲಕ್ಕೆ ಕಾಯುತ್ತಿದ್ದೇನೆ.

ನಾನು : ಅದು ಅರ್ಧ ಸತ್ಯ. ಪೂರ್ತಿ ಸತ್ಯ ಏನೂ ಅಂತ ನಂಗೊತ್ತು. ರುದ್ರಾಭಿಷೇಕದ ತೀರ್ಥ, ಒಬ್ಬಟ್ಟು, ಪಾಯಸ, ಮಾವಿನ ಕಾಯಿ ಚಿತ್ರಾನ್ನ, ಮೊಸರನ್ನ...ಇವೆಲ್ಲ ಸಿಕ್ಕ್ ಸಿಕ್ಕಾಪಟ್ಟೆ ಮೇಯೋದು ನಿನ್ನ agenda !!!ತಾಯಿ.....ಮಂಗಳವಾರದಿಂದ internals ಇದೆ !! ಓದ್ಬೇಕು !!

Z : ಓದು, ಬರಹ, ಸಾಧನೆ, ಎಲ್ಲಾ ನಿನ್ನ department ಉ. ನಾನು Zindagi. ಭಾವನೆ ಇರೋಳು. ಹಬ್ಬ ಹರಿದಿನ ಎಲ್ಲ ಎಂಜಾಯ್ ಮಾಡೋಳು. ನಿನ್ ಥರ emotionless ಅಲ್ಲ. ಎಲ್ಲದಕ್ಕೂ ಕಾರಣ ಹುಡುಕ್ತಾ ಪ್ರಶ್ನೆ , ತರ್ಕ ಎಲ್ಲ ಮಾಡೋದಿಲ್ಲ !!

ನಾನು : ನಿನ್ emotion ನ ನೀನೆ ಇಟ್ಕೊಂಡು ಉಪ್ಪಿನ್ಕಾಯಿ ಹಾಕೊ. ನನ್ನ practicality ಬಗ್ಗೆ ಚಕಾರ ಎತ್ತ್ಬೇಡ.

Z : ಸರಿ. ನಂಗೂ ಈಗ ಮತ್ತೆ ಜಗಳ ಆಡೋಕೆ mood ಇಲ್ಲ. ಆಗ್ಲೆ ಒಂದು ಸಲ ಇದರ ಬಗ್ಗೆ ನೇ ಸಿಕ್ಕ್ ಸಿಕ್ಕಾಪಟ್ಟೆ ಜಗಳ ಆಡಿ, ನೀನು ಮಾತು ಬಿಟ್ಟು, ಕಡೆಗೆ ನಾನೇ ಸೋಲೊಪ್ಪಿಕೊಳ್ಳುವ ಹಾಗೆ ಮಾಡಿದ್ದೀಯ. ನಿನ್ನನ್ನ ಸೋಲಿಸುವವುದು ಕಷ್ಟ...ನನಗಿಂತ ಹೆಚ್ಚು ಹಠವಾದಿ ನೀನು.

ನಾನು : ಗೊತ್ತಾಯ್ತಲ್ಲ...ಶಾಂತವಾಗಿ silent ಆಗಿ ಹಾಗೆ ಸುಮ್ನೆ ತೆಪ್ಪಗೆ ಇದ್ಬಿಡು. ನಾಳೆ ಗೆ ಏನ್ plan- ಉ ?

Z : ನೀನೆ almost ಎಲ್ಲಾ ತಿಳೀಸಿದಿಯ....ಎರಡು ವಿಷಯ ಮರ್ತೆ. ಪಂಚಾಂಗ ಶ್ರವಣ ಮತ್ತು ರಾಶಿ ಫಲ ಪಠಣ. ಏನ್ ಬರ್ದಿದೆ ನನ್ನ ಭವಿಷ್ಯದಲ್ಲಿ ಅಂತ ತಿಳ್ಕೋಬೇಕು.

ನಾನು : ಲೇ hopeless ! ಕಣ್ಮುಂದೆ ಕಾಣಿಸು ನೀನು ಒಂದ್ ಸರ್ತಿ ! ಕುಟ್ಟುತ್ತೀನಿ ತಲೆ ಮೇಲೆ ! ಭವಿಷ್ಯ ಅಂತೆ ಭವಿಷ್ಯ !ಗ್ರಹಗಳಿಂದ ನಮಗೆ at the most ಆಗೋ effect ಅಂದ್ರೆ gravitational attraction ಒಂದೆ. ಅವ್ರನ್ನೆಲ್ಲಾ ಕರ್ದು ಒಂದೊಂದು ಮನೇಲಿ ಕೂರಿಸಿ ಇವನು ಒಳ್ಳೆಯವನು, ಅವನು ಕೆಟ್ಟವನು, ಇವನಿಂದ ಹೀಗ್ ಆಗತ್ತೆ ,ಹಾಗ್ ಆಗತ್ತೆ ಅಂತೆಲ್ಲ ತರಹೇವಾರಿ ಭವಿಷ್ಯಗಳನ್ನ ಓದಿ mood out ಮಾಡ್ಕೋತೀಯ ...ಅದಕ್ಕೆ ನಿನ್ನ ನಿಷ್ಪ್ರಯೋಜಕಿ ಅನ್ನೋದು !! ನಾಳೆ ನಾನು internals ge ಓದ್ತಿರ್ತಿನಿ. ಮಧ್ಯ ಏನಾದ್ರು ಫೋನ್ ಮಾಡಿ ಭವಿಷ್ಯ ದ್ದು "ಭ" ನು ಎತ್ಬೇಕಲ್ಲ... ಅಷ್ಟೆ !!!!

Z : noooooooooo !!!!!!!!!!! ಇಲ್ಲಾ....ಹಾಗ್ ಮಾಡ್ಬೇಡ...ಪ್ಲೀಈಈಈಈಈಈಈಈಈಸ್ !!!

ನಾನು : good ! ಇದು ದಾರಿಗೆ ಬರೋ ಲಕ್ಷಣ ಅಂದ್ರೆ. ನಾವು ನಮ್ಮ ಪ್ರಯತ್ನ ನ ಶ್ರದ್ಧೆ ಇಂದ ಮಾಡಿದ್ರೆ, sooner or later ನಮಗೆ ಎಲ್ಲಾ ಒಳ್ಳೇದೇ ಆಗತ್ತೆ. Newton's laws are always valid and that's why they are universal. ಗೊತ್ತಾಯ್ತ ? ನಾಳೆ ನನ್ನ ಪ್ರಕಾರ another new day ಅಷ್ಟೆ. lets all pray for a good life. ಜನಕ್ಕೆ ಸದ್ಬುದ್ಧಿ ಬರ್ಲಿ. pollution ಇಂದ warming ಆಗಿ ಯಾವಾಗ್ ಯಾವಗ್ಲೋ ಮಳೆ, ಯಾವಾಗ್ ಯಾವಾಗ್ಲೋ ಚಂಡಮಾರುತಗಳು ಬೀಸುತ್ತಿವೆ. ಇದನ್ನ ಬಗೆಹರಿಸೋ ವಿವೇಕವನ್ನ ಸರ್ವಧಾರಿ ಕರುಣಿಸಲಿ. ಸದ್ಯೋಜಾತನ ದಯೆಯಿಂದ ಅಪಘಾತಗಳು ಆದಷ್ಟು ಕಡಿಮೆ ಆಗಲಿ. ರಾಜಕೀಯ ಮತ್ತು ವ್ಯಾಪಾರಗಳಲ್ಲಿನ ವೈಮನಸ್ಯ ಮತ್ತು unhealthy competition ಕಡಿಮೆ ಆಗಿ, greater good ಗೆ ಪ್ರಪಂಚ aim ಮಾಡಲಿ. ಎಲ್ಲರಿಗೂ ಮನಶ್ಶಾಂತಿ ಲಭಿಸಲಿ. ನೀನು ಹೀಗೆ ಕೇಳಿಕೋ.

Z : ditto !!!

ನಾನು : ಸೋಂಬೇರಿ !! anyways, ಎಲ್ಲರಿಗೂ ಸರ್ವಧಾರಿ ಸಂವತ್ಸರದ ಹಾರ್ದಿಕ ಶುಭಾಶಯಗಳು.

Z : ditto !
ಇವಳು ಮತ್ತೆ ಸೋಂಬೇರಿ ಅಂತ ಬಯ್ಯೋ ಮುಂಚೆ....line on hold !!!

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...