Friday, March 28, 2008

There's a knock.

Z + Head ruled : There's a knock on the door. A knock which is feeble, but steady. A knock which sounds like reassurance, but we are afraid. All through, we had never thought of opening the door as we were complacent with a small window. But this knock has aroused in us a curiosity as to what would be waiting for us at the other end. good ? or bad ?

Present status:

Headruled is analysing....zindagi is arguing. And I, Lakshmi Shashidhar, torn between the two, am silently watching !


I hope head ruled analyses the situation and convinces Zindagi and Zindagi understands . For once, I think they must stop fighting amongst each other and think- TOGETHER.

WISH THEM LUCK, their minds need it.

Lakshmi Shashidhar

Wednesday, March 26, 2008

Nice Advertisement !


ನಾನು : Z ......... look at this picture !!


Z : nice alva ???


ನಾನು : ಹು !!! education loan ಗೆ IDBI Bank ನವರು Advertise ಮಾಡಿರೋದು !! ಸಕತ್ concept -ಉ !! ನಂಗೆ appeal ಆಯ್ತು !


At the same time ನನಗೆ ಎರಡು ಸುಭಾಷಿತಗಳು ನೆನಪಾದವು.


ಕ್ಷಣಶಃ ಕಣಶಶ್ಚೈವ ವಿದ್ಯಾಂ ಅರ್ಥಂ ಚ ಸಾಧಯೇತ್
ಕ್ಷಣತ್ಯಾಗೇ ಕುತೋ ವಿದ್ಯಾ ಕಣತ್ಯಾಗೇ ಕುತೋ ಧನಮ್


ಅರ್ಥ : ಪ್ರತಿಯೊಂದು ಕ್ಷಣವನ್ನು ಬಿಡದೇ ವಿದ್ಯೆಯನ್ನೂ, ಪ್ರತಿಯೊಂದು ಕಣವನ್ನು ಬಿಡದೇ ಧನವನ್ನೂ ಸಾಧಿಸಬೇಕು ( ಶ್ರಮ ಪಡಬೇಕು ). ಒಂದು ಕ್ಷಣ ತ್ಯಾಗ ಮಾಡಿದರೆ ವಿದ್ಯಾರ್ಜನೆ ಎಂಥದ್ದು ? ಒಂದು ಕಣವು ಅಪೂರ್ಣವಾದರೆ ಧನವೆಂಥದ್ದು ?


ಪುಸ್ತಕಸ್ಥಾ ತು ಯಾ ವಿದ್ಯಾ ಪರಹಸ್ತಗತಮ್ ಧನಮ್
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಮ್


ಪುಸ್ತಕದಲ್ಲಿರುವ ವಿದ್ಯೆಯೂ, ಬೇರೆಯವರ ಕೈಯಲ್ಲಿ ಕೊಟ್ಟ ಹಣವೂ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬರದಿದ್ದರೆ ಆ ವಿದ್ಯೆ ವಿದ್ಯೆಯೂ ಅಲ್ಲ, ಆ ದುಡ್ದು ದುಡ್ದೂ ಅಲ್ಲ !


ನಮ್ಮ ಪುಸ್ತಕಗಳಲ್ಲಿ ಇರುವ ವಿದ್ಯೆಯನ್ನು ಸಮಯಕ್ಕೆ ಸರಿಯಾಗಿ ಉಪಯೋಗಿಸಿಕೊಳ್ಳಲಿ ಅಂತಲೇ ಬ್ಯಾಂಕ್ ನವರು ನಮಗೆ ದುಡ್ಡು ಕೊಡ್ತಾರೆನೋ ಓದಿ ಅಂತ !! ಬೇರೆಯವರ ಕೈಗೆ ದುಡ್ದು ಕೊಡುವ ಬದಲು ನಮ್ಮ ಬ್ಯಾಂಕ್ ನಲ್ಲೇ ಇಡಿ ಅಥ್ವಾ ನಮ್ಮಿಂದ್ಲೇ ದುಡ್ಡನ್ನು ತಗೊಳ್ಳಿ ಸಮಯಕ್ಕೆ ಬೇಕಾಗತ್ತೆ ಅಂತ ಇರಬಹುದು ಈ Advertisement ಅರ್ಥ !


Z : fulllllllllll ಅರ್ಥ ಆಗೋಯ್ತು ನಂಗೆ !! [ಸ್ವಗತ : over head projection aaytu !! ಪಾಪ ಬೀಜಾರ್ ಮಾಡ್ಕೊಳ್ತಾಳೆ ...ನ ಬ್ರೂಯಾತ್ ಸತ್ಯಮಪ್ರಿಯಮ್ ! ]


ನಾನು : [ಸ್ವಗತ : ಒಂದು ಚೂರು ಅರ್ಥ ಆಗಿರೊಲ್ಲ....ನನ್ನ ಸಂತೈಸಕ್ಕೆ ಹೇಳ್ತಿರೋದು ಅಂತ ನಂಗೆ ಗೊತ್ತು !] . good... ಅರ್ಥ ಆಯ್ತಲ್ಲ !!

ಸರಿ ....ಹೊರಟೆ... internals ide ನಂಗೆ....ಮಧ್ಯ ಯಾವಾಗ್ಲಾದ್ರೂ time ಸಿಕ್ಕಿದ್ರೆ phone ಮಾಡ್ತಿನಿ ಆಯ್ತ ?


Z : done !


ನಾನು : (Line on hold ! )

Thursday, March 20, 2008

A wrath called "orchestra "

ನಾನು : NOOOOOOOOOOOOOOOO !!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!
Z : ಶಾಅಆಆಆಆಅಆಅಆಆಂ೦೦೦೦೦೦೦೦೦೦ತಿ !!!!!!!!!!!!!!!!!!!!!!!!!!!!!!!!!!!!!!!!
ನಾನು : ಇಲ್ಲ, ಆಗೊಲ್ಲ, ಆಗೊದಿಲ್ಲ, ಆಗೊದೇ ಇಲ್ಲ !!!!!!
Z : ಏನಾಯ್ತು ಅಂತ ಹೇಳು ದಯವಿಟ್ಟು, ನಿನ್ನ ಕೋಪ ತಾಪ ಪ್ರಲಾಪಗಳನ್ನ ಆಮೇಲೆ ಚಿತ್ತೈಸ್ತಿನಿ !
ನಾನು : orchestra zindagi, orchestra !!! That is the cause of my sorrow !!!
Z : hmm....... ಏನು ? ಅಣ್ಣಮನ ಉತ್ಸವ ನ ?
ನಾನು : ಹು ! ಪಾಪ ಅಣ್ಣಮ್ಮ herself was quite troubled, disturbed and irritated. First of all excited state ನಲ್ಲಿರೋ ದೇವತೆ ಅವಳು. She looked agitated and ready to strike ! ಅವಳು ಕಾಪಾಡುವ ದೇವತೆಯಾಗಿ ಯಾವ dimension ನಲ್ಲೂ ನನಗೆ ಕಾಣಿಸಲಿಲ್ಲ !! infact, she needed to get ಕಾಪಾಡುfied - Thanks to the orchestra !!! ಅವಳ ಜೊತೆ ಮಾತಾಡ್ಬೇಕು ನಾನು urgent ಆಗಿ. ನಾವು passive audience -ಏ ಈ ರೀತಿ agitated ಆಗಿರುವಾಗ ಅವಳಿಗಾಗಿ "ಭಕ್ತಿ ಪೂರ್ವಕ" orchestra ಮಾಡಿದಾಗ ಅವಳಿಗೆ ಆದ ಅನುಭವ ಏನು ಅಂತ ಕೇಳಿ, ಅವಳ energy level ನಲ್ಲಿ ಆಗಿರೋ ಬದಲಾವಣೆಯನ್ನ ನಾನು research ಮಾಡ್ಬೇಕು.
Z : ಸರಿ....ಮಾಡ್ತೀಯಂತೆ.... but why this ಕಿರುಚಾಟ ?
ನಾನು : I have lost my peace of mind !!! ನನ್ನ seminar preparation ಎಲ್ಲಾ ನೆಗೆದು ಬಿದ್ದು ನಲ್ಲಿಕಾಯಿ ಆಗಿ ಹೋಯ್ತು !! ಮೊದಲೇ stimulated Raman scattering ಅಂಥಾ tough topic ಬಗ್ಗೆ ಮಾತಾಡ್ಬೇಕು...ಇಲ್ಲಿ ನೋಡಿದ್ರೆ ನನ್ನ brain cell ಗಳನ್ನೇ stimulated scattering ಮಾಡುವ sketch ಹಾಕಿದ್ದಾರೆ hopeless fellows !!! ನನಗೆ ಎಂಥಾ ಕೋಪ ಬಂತು ಅಂದ್ರೆ....ಅಂಜಲಿ vegetable cutter ಮೇಲೆ ಆಣೆ zindagi, ಕ್ಯಾರಟ್ ಜಾಗದಲ್ಲಿ ಅವರನ್ನ ಇಟ್ಟು ...!!!
Z : ಶ್!!!!!!!!!!! ಅಣ್ಣಮ್ಮನ ಪೂಜೆ ಮಾಡ್ಬೇಕು does not imply ಅವಳನ್ನ ನಮ್ಮ ಮೇಲೆ ಆವಾಹನೆ ಮಾಡ್ಕೋಬೇಕು !!! even though all forms of energy is essentially the same throughout the universe, the form of energy to be considered for the moment need not include all of them ! ! ನಿನ್ನ favourite line ನ ನೀನು ಹೀಗೆ ಮರೆಯಬಾರದು you see ?
ನಾನು : Look at what it has done to me !!! I have started to forget my own statements !!! Zindagi.... ಏನ್ ಗೊತ್ತಾ.... ಕಷ್ಟ ಪಟ್ಟು ಭಕ್ತಿಯಿಂದ "ಗಜಮುಖನೇ ಗಣಪತಿಯೇ" ಹಾಡಿದರು. ತಕ್ಷಣವೇ " ನಿನ್ನಿಂದಲೇ... ನಿನ್ನಿಂದಲೇ..." ಅನ್ನೋದೆ ???
Z : ಹ ಹ ಹ ಹಹಹಹಹ !!!!!!!!!!!!!!!!!!!!
ನಾನು : ನನಗೆ ಒಂದು ಕ್ಷಣ ಜಯಂತ್ ಕಾಯ್ಕಿಣಿ ಅವರು ಆ ಕ್ಷಣ ನಮ್ಮ ಮನೆಯಲ್ಲಿ ಇದ್ದಿದ್ದರೆ ಹೇಗಿರಬಹುದು ಅಂತ ಅನ್ನಿಸಿತು ! ನಿಜವಾಗಲೂ ಅವರು ಹೇಗೆ ಪ್ರತಿಕ್ರಿಯಿಸುತ್ತಿದ್ದರೋ ಏನೋ ! ಶೃತಿಯನ್ನು ಒದ್ದು ಓಡಿಸಿ, ಲಯವನ್ನು ಲಯವಾಗಿಸಿದ ಗಾಯಕರ ಅಬ್ಬರದ ಅರಚಾಟಗಳ ನಡುವೆ ಒಂದು ಸುಂದರ ಕವಿತೆಯ ಕಗ್ಗೊಲೆಯಾಯಿತು ! ಇದೊಂದೇ ಅಲ್ಲ...ಎಲ್ಲಾ ಹಾಡುಗಳ ಪಾಡೂ ಇದೇ ಆಯಿತು. ನಾನು ಕಾಯ್ಕಿಣಿಗೆ ಕ್ಷಮೆ ಕೋರಿ ನಿನ್ನಿಂದಲೇ ಹಾಡನ್ನು ನನಗನಿಸಿದ ರೀತಿಯಲ್ಲಿ ಬರೆದಿದ್ದೇನೆ.... After facing the wrath of orchestra !

ನಿಮ್ಮಿಂದಲೇ, ನಿಮ್ಮಿಂದಲೇ ತಲೆ ನೋವು ಶುರುವಾಗಿದೆ
ನಿಮ್ಮಿಂದಲೇ ನಿಮ್ಮಿಂದಲೇ ಮನಸ್ಸಿಂದು ಒದ್ದಾಡಿದೆ !!
ನಮ್ಮ ಎದೆಯಲ್ಲಿ ಕಹಿಯಾದ ಕೋಲಾಹಲ
ಮನೆ ಎದುರಲ್ಲೆ loudspeaker ಇಟ್ಟಾಗಲೇ
ನಿಮ್ಮ ಬಾಯಿ ಹೊಲಿದು ಸುಮ್ಮನಾಗಿಸೋ ಹಂಬಲ
ನನ್ನ ಸೆಮಿನಾರು ಹಾಳಾಯ್ತು ನಿಮ್ಮಿಂದಲೇ !!!
ಇರುಳಲ್ಲಿ ಗರದಂತೆ ಕಾಡಿ ಈಗ ಹಗಲಲ್ಲೂ ಹಾಡುವುದು ಸರಿಯೇನು
ಬೇಕಂತಲೇ ಹಾಡಿ ಮತ್ತದೇ ಹಾಡು ನಮ್ಮನ್ನು ಹಿಂಸಿಸುವ ಪರಿಯೇನು ?
ಅಣ್ಣಮ್ಮನಾ ಈ ಉತ್ಸವ ನಿಮ್ಮಿಂದ ಕಳೆಗುಂದಿದೆ.....
ಹೋದಲ್ಲಿ ಬಂದಲ್ಲಿ ಎಲ್ಲ ನಿಮ್ಮ ಕೋತಿ ಕುಣಿತದ "ಗುಣ"ಗಾನ
ಭಗವಂತ ಗಂಟಲಲ್ಲಿ ಏನನ್ನ ಇಟ್ಟನೋ
ಅನ್ನೋದೆ ನಂಗೀಗ ಅನುಮಾನ
ಫೋನಿಂದಲೇ ಈ ಕ್ಷಣದಲೆ police ಗೆ ಕರೆ ಹೋಗಿದೆ.....
I am extremely sorry kaaykini ji !! ಕ್ಷಮೆ ಇರಲಿ. ನನಗೆ ಖಂಡಿತಾ ಈ orchestra ದ wrath ನ ತಡೆಯೋಕೆ ಆಗ್ತಿಲ್ಲ. ನನ್ನ favourite ಹಾಡಾದ ನಿನ್ನಿಂದಲೇ ನ ಅವರು ಕೊಲೆ ಮಾಡಿದ್ದು ಅಸಹನೀಯವಾಗಿ ನಾನು ಈ ರೀತಿ ನನ್ನ ನೋವನ್ನು ತೋಡಿಕೊಂಡಿದ್ದೇನೆ ! what say Z ?
Z : Absolutely. ಅವರಿಗೆ ಅರ್ಥ ಆಗತ್ತೆ ಬಿಡು . ಸೆಮಿನಾರ್ ಕಥೆ ಏನು ?
ನಾನು : ಸದ್ಯೋಜಾತನೇ ಕಾಪಾಡ್ಬೇಕು ನಮ್ಮನ್ನ.....
Z : ಛೆ ಕಣೆ !!! third saturday university holiday. ಅವತ್ತೇ seminar ಇಟ್ಟಿರೋದು ನಂಗೆ ಯಾಕೋ doubt ತರ್ಸ್ತಿದೆ. post pone ಆಗುವ chances ?
ನಾನು : quite possible. If it happens, my quantum mechanical analysis of sadyojata's handling of applications will be proved right ! ನೋಡೋಣ. ಈಗ ಶುಂಠಿ ಪಟ್ಟು ಹಾಕಿಕೊಳ್ಳಲು ಹೊರಟೆ... for the nth and final time !!! :( ನಾನು normal state ಗೆ ಬರುವವರೆಗೂ
line on hold !

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...